ಹಗರಣದಲ್ಲೇ ಅಂತ್ಯ: ದಯಾನಂದ ರಂಗಧಾಮಪ್ಪ

ಸುಮಾರು ಅರವತ್ತು ವರ್ಷದ ವೃದ್ಧ ಟೇಬಲ್ ಮೇಲಿದ್ದ ಖಾಲಿ ಕಾಗದದ ಮೇಲೆ “ದೇವರು ಇದಾನೆ , ಇಲ್ಲ …. ದೇವರು ಇದಾನೆ , ಇಲ್ಲ ” ಎಂದು ಬರೆಯುತ್ತಿದ್ದ ತನ್ನ ಗಂಡನನ್ನು ನೋಡಿ ‘ರೀ ಏನ್ರಿ ಇದು? ರಾಮ ರಾಮ ಬರೆಯೋ ವಯಸ್ಸಲ್ಲಿ ನೀವ್ಯಾಕೆ ಈ ರೀತಿ ಬರೆತ್ತಿದ್ದೀರಾ? ಎಂದು ಗದರಿದಳು. ನಿನ್ನ ಪ್ರಕಾರ ಇದಾನೆ ಅಂತೀಯಾ? ಅವಳು ಮೌನಿಯಾದಳು. ಬರೆಯೋದು ನಿಲ್ಲಿಸಿ ಮೆಲ್ಲಗೆ ನಿಟ್ಟುಸಿರು ಬಿಡುತ್ತಾ ಕುರ್ಚಿಗೆ ಹೊರಗಿ ” ಮಗ ನಮ್ಮ ಜೊತೆ ಮಾತು … Read more

ಲೇಖನ ಕಳುಹಿಸಿ

ಸಹೃದಯಿಗಳೇ, “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು … Read more

ಪರಿಸರದ ಮೇಲೆ ಮಾನವ ಹಲ್ಲೆ ನಿಲ್ಲುವುದು ಯಾವಾಗ?: ನರಸಿಂಹ ಮೂರ್ತಿ ಎಂ. ಎಲ್.

ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುವಾಗ ದೇಶ ರಾಜಧಾನಿಯು ವಾಯುಮಾಲಿನ್ಯದ ಹೊಡೆತಕ್ಕೆ ತತ್ತರಿಸುತ್ತಿರುವ ಬಗೆಯನ್ನು ಗಮನಿಸುತ್ತಿರಬಹುದು. ಶುದ್ಧಗಾಳಿಯನ್ನು ಖರೀದಿಸಿ ಉಸಿರಾಡುವ ಪರಿಸ್ಥಿತಿಗೆ ಈ ದೇಶವು ಬಂದು ತಲುಪಿದೆ ಎಂದರೆ ಮುಂದಿನ ದಿನಗಳಲ್ಲಿ ಜೀವ ಜಗತ್ತಿನ ಉಳಿವಿನ ಬಗ್ಗೆಯೇ ಸಂಶಯ ಮೂಡುತ್ತದೆ. ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಪ್ಪಲ್ಲಿ, ಹೊನ್ನಂಪಲ್ಲಿ, ಮದಕವಾರಪಲ್ಲಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಆಶ್ರಯ ತಾಣವಾಗಿದ್ದ ಕೊರ್ಲಗುಡ್ಡಂ ಬೆಟ್ಟವನ್ನು ಅಕ್ರಮ ಕಲ್ಲು ಗಣಿಗಾರುಕೆಯವರು ನಾಶ ಮಾಡುತ್ತಿದ್ದಾರೆ. ಇದರ ಪರಿಣಾಮ ಬೃಹತ್ ಕಲ್ಲುಬಂಡೆಗಳು ರೈತರ ಜಮೀನುಗಳಿಗೆ ಉರುಳುತ್ತಿವೆ. … Read more

ಸಾವಿನ ಆಟ: ಜೆ.ವಿ.ಕಾರ್ಲೊ.

ಮೂಲ: ಇವಾನ್ ಹಂಟರ್ ಅನುವಾದ: ಜೆ.ವಿ.ಕಾರ್ಲೊ.   ಅವನ ಎದುರಿಗೆ ಕುಳಿತ್ತಿದ್ದ ಹುಡುಗ ಶತ್ರು ಪಾಳೆಯದವನಾಗಿದ್ದ. ಹೆಸರು ಟೀಗೊ. ಅವನು ಧರಿಸಿದ್ದ ಹಸಿರು ಬಣ್ಣದ ಜಾಕೆಟಿನ ಬಾಹುಗಳಿಗೆ ಕಿತ್ತಳೆ ಬಣ್ಣದ ಪಟ್ಟಿಯನ್ನು ಅಂಟಿಸಲಾಗಿತ್ತು. ಆ ಜಾಕೆಟ್ಟೇ ಅವನು ಶತ್ರು ಪಾಳೆಯದವನೆಂದು ಚೀರಿ ಚೀರಿ ಸಾರುತ್ತಿತ್ತು. “ಇದು ಚೆನ್ನಾಗಿದೆ!” ಮೇಜಿನ ಮಧ್ಯದಲ್ಲಿದ್ದ ರಿವಾಲ್ವರಿಗೆ ಬೊಟ್ಟು ಮಾಡಿ ಡೇವ್ ಹೇಳಿದ. “ಅಂಗಡಿಯಲ್ಲಿ ಕೊಳ್ಳುವುದಾದರೆ 45 ಡಾಲರುಗಳಿಗೆ ಕಡಿಮೆ ಇಲ್ಲ ಅಂತ ನನ್ನ ಅನಿಸಿಕೆ.” ಅದು ಸ್ಮಿತ್ ಅಂಡ್ ವೆಸ್ಸನ್ .38 … Read more

ಕಲೆಗೆ ರಾಜಕೀಯ ರಂಗು, ರಾಜಕೀಯಕ್ಕೆ ಕಲಾವಿದರ ಪ್ರವೇಶ ಸರಿಯೇ. . .?: ಕೆ.ಪಿ.ಎಮ್. ಗಣೇಶಯ್ಯ

ಚುನಾವಣಾ ಸಂದರ್ಭ ಕಲಾವಿದರ ಕಲೆಯ ಮಾನ ಮಾರಣ ಹೋಮ. ಇದು ಇತ್ತೀಚೆಗೆ ಚಿಂತನೆಗೀಡು ಮಾಡಿದ ವಿಷಯ. ಕಲಾವಿದ ಎಂದು ಗುರುತಿಸಿಕೊಂಡ ಮೇಲೆ ರಾಜಕೀಯಕ್ಕೆ ಬರಬಾರದು. ಇದು ನನ್ನ ಅಪೇಕ್ಷೆ. ಕಾರಣ ಇಷ್ಟೆ, ಹಲವಾರು ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನವಾದ ಆಶೋತ್ತರಗಳನ್ನು ಇಟ್ಟುಕೊಂಡು ಗುಂಪುಗಾರಿಕೆಯ ಚಟುವಟಿಕೆ, ಹೀಯ್ಯಾಳಿಕೆ, ಕಾಲೆಳೆಯುವುದು, ತಮ್ಮತನವನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ತೆಗಳುವುದು. ಒಳಗಿಂದೊಳಗೆ ಆಮಿಷಕ್ಕೊಳಗಾಗುವುದು ಹೀಗೆ ರಾಜಕೀಯದಲ್ಲಿ ಎಲ್ಲವೂ ಸರಿ. ರಾಜಕೀಯ ಅಂದ್ರೆ ಹೀಗೇನೆ, ಒಪ್ಪೋಣ ಆದರೆ ರಾಜಕೀಯಕ್ಕೆ ಕಲಾವಿದರ ಪ್ರವೇಶ ಎಷ್ಟರ ಮಟ್ಟಿಗೆ … Read more

ಜೀವನಾಸ್ವಾದ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಜೀವನದಲ್ಲಿ ಮಾನವ ಅನೇಕ ಮುಖ್ಯ ಘಟ್ಟಗಳನ್ನು ದಾಟುತ್ತಾನೆ. ಆ ಸಂದರ್ಭದಲ್ಲಿ ಕೆಲವು ಸಂಪ್ರದಾಯ, ಪದ್ದತಿ, ಪರಂಪರೆ, ಆಚರಣೆಗಳನ್ನು ಭಾರತೀಯರು ಆಚರಿಸುತ್ತಾರೆ. ಅವು ಜೀವನದಲ್ಲಿನ ಏಕತಾನತೆಯನ್ನು ಹೋಗಲಾಡಿಸಿ ಬದುಕಿಗೆ ನವಚೈತನ್ಯವನ್ನು ತುಂಬುತ್ತವೆ! ಬದುಕಿನ ಮುಖ್ಯಘಟ್ಟದ ಕೆಲವು ಸಂದರ್ಭಗಳಲ್ಲಿ ಹುಡುಗಾಟಿಕೆ ಖುಷಿ ತಮಾಷೆಗಳಿರುವಂತೆ ಬದುಕ ರೂಪಿಸಿದ್ದರಿಂದ ಅವು ಆನಂದ ಉಂಟುಮಾಡುತ್ತಿದ್ದವು! ಹಿಂದೆ ಬದುಕು ಅಮೂಲ್ಯ ಎಂದು ಭಾವಿಸಿದ ಪ್ರಯುಕ್ತ ಜೀವಕ್ಕೆ ಬೆಲೆ ಇತ್ತು. ಬಹುದಿನ ಬೆಲೆಯುತವಾಗಿ ಬದುಕಲು ಪ್ರಯತ್ನಿಸುತ್ತಿದ್ದರು. ಜೀವನದ ಪ್ರತಿ ಹಂತವನ್ನೂ ಆಸ್ವಾದಿಸಿ ಸಂತೋಷವಾಗಿರುತ್ತಿದ್ದರು. ಬದುಕಿನ ಉದ್ದಕ್ಕೂ ಸಂತಸ … Read more

“ಕುವೆಂಪು ರಾಷ್ಟ್ರೀಯ ಪುರಸ್ಕಾರ-2019” ಘೋಷಣೆ

2019 ನೇ ಸಾಲಿನ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಪಂಜಾಬಿ ಭಾಷೆಯ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಯ್ಕೆ ಆಗಿರುತ್ತಾರೆ. ಇದೇ ನವೆಂಬರ್ 16ನೆ ತಾರೀಕು‌ (16-11-2019) ಶನಿವಾರ ಬೆಂಗಳೂರಿನಲ್ಲಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ‌ ಹಾಗೂ ಸಾಹಿತಿಗಳಾದ ಶ್ರೀ ಚಿರಂಜೀವಿ ಸಿಂಗ್, ಜೆ.ಎನ್.ಯು. (ನವದೆಹಲಿ) ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರೂ ಪಂಜಾಬಿ ಲೇಖಕರೂ ಆದ ಪಟಿಯಾಲದ ಪ್ರೊ. … Read more

ಕನ್ನಡ ಉಳಿಯಲಿ, ಕನ್ನಡ ಸಾಹಿತ್ಯ ಬೆಳಗಲಿ, ಬೆಳೆಯಲಿ: ಚಂದ್ರಿಕಾ ಆರ್ ಬಾಯಿರಿ

“ಹಾಯ್! ಸುಶೀಲಾ ‘ಹವ್ ಆರ್ ಯೂ’?. ಎಲ್ಲಿಗೆ ಹೋಗ್ತಾ ಇದೀಯಾ?” “ಹಾಯ್! ಸಹನಾ ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀನಿ.” “ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀಯಾ. ಯಾಕೆ? ಯಾರಿಗೆ ಟ್ಯೂಷನ್?” “ಅಯ್ಯೋ! ನನ್ನ ಮಗನಿಗೆ ಇನ್ನೂ ಕನ್ನಡ ಓದೋದಕ್ಕೆ ಬರೆಯೋದಕ್ಕೆ  ಸರಿಯಾಗಿ ಬರಲ್ಲ ಕಣೇ. ಅದಕ್ಕೆ ಟ್ಯೂಷನ್ ಗೆ ಹಾಕೋಣ ಅಂತ.” “ಏನು? ಟ್ಯೂಷನ್ ಗೆ ಹಾಕ್ತೀಯಾ. ನಿನ್ನ ಮದರ್ ಟಂಗ್ ಯಾವುದು ಸುಶೀಲಾ?” “ಕನ್ನಡ” “ಮತ್ತೆ ನೀನೇ ಹೇಳಿ ಕೊಡಬಹುದಿತ್ತಲ್ವ.” “ಇಲ್ಲ ಕಣೇ. ನಾನು … Read more

ಒಳಿತು, ಕೆಡುಕು ಹಾಗು ಮನಸ್ಥಿತಿ: ಸಹನಾ ಪ್ರಸಾದ್

ಎಲ್ಲರಂತೆ ನನ್ನ ಬೆಳಗ್ಗಿನ ಕಾಫಿಗೆ ಜತೆಗೂಡುವುದು ಅಂದಿನ ಪತ್ರಿಕೆ. ಎದ್ದ ತಕ್ಷಣ ಅದರ ಮೇಲೆ ಕಣ್ಣಾಡಿಸಿಯೇ ಬ್ರಶ್ ಮಾಡಲು ಹೋಗುವುದು. ಅದರಲ್ಲಿಯ ಸುದ್ದಿಗಳಿಗೆ ಮನ ಬಹಳ ಬೇಗ ಅಂಟಿಕೊಂಡು ಅದರ ಬಗ್ಗೆಯೇ ಯೊಚಿಸಿ, ಚಿಂತನೆಗೆ ಶುರು ಆಗುತ್ತದೆ. ಅಚ್ಚಾಗಿರುವ ವಿವರಗಳ ಮೇಲೆ ಅಂದಿನ ಮನಸ್ಥಿತಿ ರೂಪಗೊಳ್ಳುವುದು. ಅದೇ ರೀತಿ ಒಳ್ಳೆ ಹಾಡು ಕೇಳಿದರೆ, ಏನಾದರು ಖುಶಿಯಾಗಿರುವುದನ್ನು ನೋಡಿದರೆ/ ಓದಿದರೆ ಮನಸ್ಸು ಪ್ರಫ಼ುಲ್ಲವಾಗುವುದು. ಆದುದರಿಂದ ನನ್ನ ಬೆಳಗ್ಗಿನ ” ಆಹಾರ” ನನಗೆ ಬಹಳ ಮುಖ್ಯ. ಅದೊಂದೇ ಅಲ್ಲ, ದಿನವಿಡೀ … Read more

ನ್ಯಾನೋ ಕತೆಗಳು: ವೆಂಕಟೇಶ ಚಾಗಿ

  ೧) ಸ್ವಚ್ಛ ಭಾರತ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಇಬ್ಬರು ಸ್ನೇಹಿತರು ಸರಕಾರದ ಮಹತ್ತರ ಯೋಜನೆಯ ಸಾಧಕ-ಬಾಧಕಗಳ ಕುರಿತು ಮಾತನಾಡುತ್ತಾ ಕುಳಿತಿದ್ದರು. ಸಮಯ ಕಳೆಯಲು ಬಾಯಿ ಚಟಕ್ಕಾಗಿ ಶೇಂಗಾ, ಪ್ಯಾಕೆಟ್ ತಿಂಡಿ, ಬಾಳೆಹಣ್ಣು ಇನ್ನಿತರೆ ವಸ್ತುಗಳನ್ನು ತಿನ್ನುತ್ತಾ ಮಾತನಾಡುತ್ತಿದ್ದರು. “ಛೇ, ಈ  ಜನರಿಗೆ ಸರಕಾರದ ಈ ಮಹಾ ಯೋಜನೆ ಅರ್ಥವಾಗುವುದೇ ಇಲ್ಲ.  ಇವರಿಗೆ ಯಾವಾಗ ಬುದ್ಧಿ ಬರುತ್ತೋ ” ಎನ್ನುತ್ತಾ ಹೊರಟುಹೋದರು. ಅವರಿದ್ದ ಜಾಗದ ಸುತ್ತಮುತ್ತ ಶೇಂಗಾ ಸಿಪ್ಪೆ,  ಪ್ಲಾಸ್ಟಿಕ್ ಹಾಳೆಗಳು, ಬಾಳೆ ಸಿಪ್ಪೆ ಹರಡಿದ್ದವು. … Read more

ಅಂತರಾಗ್ನಿ (ಭಾಗ ೬): ಕಿರಣ್. ವ್ಹಿ

ಇಲ್ಲಿಯವರೆಗೆ ರೂಮಿಗೆ ಬಂದ ಹರಿ, ಹೊಸ ಅನುಭವದಲ್ಲಿ ತೇಲಾಡುತ್ತಿದ್ದ. ಒಂದು ಬಗೆಯ ಎಲ್ಲದರಿಂದ ವಿಮುಕ್ತನಾದಂತಹ ಭಾವನೆ ಅವನಲ್ಲಿ ಮೂಡಿತ್ತು. ಅದೇ ವೇಳೆಗೆ, ಗೋಪಾಲ ವರ್ಮಾರನ್ನು ಎಷ್ಟೊಂದು ಬೈಕೊಂಡು ಬಿಟ್ಟೆ ಅಂತ ಬೇಜಾರಾದ. ನಿಜವಾಗಿಯೂ, ವರ್ಮಾರವರು ಅವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದರು. ಅದು ಹೇಳಲಾಗದಷ್ಟು ಗಾಢವಾದ ಪರಿಣಾಮ. ಆದರೂ, ಒಂದು ಮೂಲೆಯಲ್ಲಿ ಹಳೆಯ ನೆನಪು ಅವನನ್ನು ಕಾಡುತ್ತಿತ್ತು. ಒಂದೇ ದಿನಕ್ಕೆ ಹೋಗುವುದಿಲ್ಲ ನೋಡಿ, ಮತ್ತೆ ಅದೇ ಮೂಡ್ ಗೆ ಹೋಗಿಬಿಟ್ಟರೆ ಕಷ್ಟ ಎಂದು, ಬಿಯರ್ ಬಾಟಲ್ ಕೈಗೆತ್ತಿಕೊಂಡು … Read more

ಮತ್ತೊಮ್ಮೆ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ: ಹಿಪ್ಪರಗಿ ಸಿದ್ಧರಾಮ

ಸಮೃದ್ಧ ಪರಂಪರೆಯುಳ್ಳ ಇಂಡಿಯಾ ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೇಡೆಯಾದರೆ ಜಾಗೃತ ಯುವಮನಸ್ಸುಗಳು, ಶೋಷಿತರ ಮತ್ತು ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ನಾಡ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರಾಣಾರ್ಪಣೆಗೈದಿದ್ದು ಇನ್ನೊಂದೆಡೆ. ಸುರಪುರ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಹೀಗೆ ಇನ್ನೂ ಅನೇಕ ಅನಾಮಿಕರ … Read more

ಹನುಮನ ವಿರಾಟ ರೂಪ ತೋರಿದ ಆ ಒಂದು ಹೂವು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಗದಾಯುದ್ದ ಎಂದರೆ ಭೀಮ! ಭೀಮಾ ಎಂದರೆ ಮಹಾಕಾಯ, ಬಲವಂತ! ಪರ್ವದಂತಹ ದೇಹದಾರಿ! ವಜ್ರಕಾಯ! ಇವನನ್ನು ವಾಯುವಿನ ಮಂತ್ರದಿಂದ ಕುಂತಿ ಮಗನಾಗಿ ಪಡೆಯುವಳು. ಬಾಲಕನಿದ್ದಾಗ ಪಾಂಡವರು ಕೌರವರ ನೂರು ಮಂದಿ ರಾಜಕುಮಾರರು ಸೇರಿ ಮರಕೋತಿ ಆಡುವಾಗ ಮರವನ್ನೇ ಅಲುಗಾಡಿಸಿ ಮರದಲ್ಲಿನ ಹಣ್ಣುಗಳನ್ನು ಉದುರಿಸಿದಂತೆ ಅವರನ್ನು ನೆಲಕುರುಳಿಸುತ್ತಿದ್ದ ಭೂಪ, ಅರಗಿನ ಮನೆಗೆ ಬೆಂಕಿಬಿದ್ದಾಗ ಎಲ್ಲರನ್ನೂ ಗುಪ್ತ ಸುರಂಗ ಮಾರ್ಗದಲ್ಲಿ ಒಬ್ಬನೇ ಹೊತ್ತೊಯ್ದ ಬಲಶಾಲಿ, ಬಂಡಿ ಭೋಜ್ಯ ಸವಿದು ಏಕಚಕ್ರ ನಗರಿಗೆ ಕಂಟಕನಾಗಿದ್ದ ಬಕಾಸುರನನ್ನು ಸಿಗಿದು ಬಾಗಿಲಿಗೆ ತೋರಣ ಕಟ್ಟಿ ಏಕಚಕ್ರ … Read more

ಪಂಜು ಕಾವ್ಯಧಾರೆ

ಎನಿತು ಇನಿದು… ಎನಿತು ಇನಿದು ಅಕ್ಷಿನೋಟ; ಇಕ್ಷು ಮಧು! ಸ್ಪರ್ಶಿಸಿದ ರೇಶಿಮೆ ಮೈ ಎಷ್ಟು ಮೆದು!! ಮಧುರ ದನಿ ಅಧರ ಗಿಣಿ ಬರುವವೀ ಜಾತಿ ಧರ್ಮ; ಘನಪದರು ಎದುರ ದಾಟಬೇಕು ಸೀಳಿ; ಕೊಡದೆ ಸದರ ಏಕೆ? ಅಂಜುವೆ; ಎದೆಗುಂದುವೆ ಬಂದಿಹ ನಾ ವ್ಯಾಧನೆ? ನಾ; ಕಾಯುವ ಯೋಧ! ನಾವು ಆವು ಜೊತೆಗಿಹರು ಹಾವು ನಿತ್ಯ ಕಾಣುವುದು ಸಾವು-ನೋವು ಈ ಬಾಳೇ; ಸಿಹಿ-ಕಹಿ-ಬೇವು! -ಅಯ್ಯಪ್ಪಕಂಬಾರ         ಕೇಳು ನನ್ನೊಲವೇ …! ಒಲವೇ – ! … Read more

ಶಕ್ತಿದೇವತೆ: ಗಿರಿಜಾ ಜ್ಞಾನಸುಂದರ್

ಕಮಲಾ ತನ್ನ ಯೋಚನೆಯಲ್ಲಿ ಮುಳುಗಿದ್ದಳು. ತನ್ನ ಬಾಲ್ಯ, ತನ್ನನ್ನು ಮುದ್ದುಮಾಡಿ ಬೆಳೆಸಿದ ತವರು, ಅವಳಪ್ಪ ಅಮ್ಮನ ಮುದ್ದು ಸಾಲದೆಂದು ಅವಳ ಅಣ್ಣ ಕೂಡ ಅವಳನ್ನು ಅತಿಯಾಗಿ ಮುದ್ದು ಮಾಡುತ್ತಿದ್ದ. ಅವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದ ಅವಳನ್ನು ಸಿರಿವಂತನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಅವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದ. ಆದರೆ ಅವನು ಮತ್ತು ಅವನ ಅಪ್ಪ ಅಮ್ಮ ಮನೆಯಲ್ಲಿ ಬೇರೆ ರೀತಿಯಲ್ಲಿಯೇ ಇರುತ್ತಿದ್ದರು. ಹೊರಗಿನ ಸಮಾಜದಲ್ಲಿ ಸಭ್ಯಸ್ಥರೆನಿಸಿಕೊಂಡ ಅವರು, ತಮ್ಮ ನಿಜವಾದ ಬಣ್ಣವನ್ನು ಮನೆಯಲ್ಲಿ ತೋರಿಸುತ್ತಿದ್ದರು. ಅವರನ್ನು … Read more

ಒಂಟಿ ಹೆಣ್ಣಿನ ಕಥೆ: ವರದೇಂದ್ರ ಕೆ

ಕಡು ಬಡತನದ ಬೇಗೆ. ಮನೆಯಲ್ಲಿ ತಾಯಿ ಮಗಳು ಮಾತ್ರ. ಗಾಯತ್ರಿ ಬದುಕಿಗೆ ಆದ ಹಲವು ಗಾಯಗಳಿಗೆ ನಗು ಸಹನೆಗಳನ್ನೇ ಔಷಧಿ ಆಗಿಸಿಕೊಂಡಾಕೆ. ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗುತ್ತಾಳೆ. ಹೆರಿಗೆ ಆದ ದಿನವೇ ಗಂಡ ಆ್ಯಕ್ಸಿಡೆಂಟ್ ನಲ್ಲಿ ಸತ್ತು ಹೋಗುತ್ತಾನೆ. ಹೆರಿಗೆಗೆ ಬಂದಾಕಿ ತವರು ಮನೆಯಲ್ಲೇ ಉಳಿಯುತ್ತಾಳೆ. ಹುಟ್ಟಿ ತಂದೆಯನ್ನು ತಿಂದುಕೊಂಡ ಕೆಟ್ಟ ನಕ್ಷತ್ರದವಳೆಂಬ ಹಣೆ ಪಟ್ಟಿ ಹೊತ್ತ ಮಗಳನ್ನು ಗಂಡನ ಅಪ್ಪ ಅಮ್ಮ, ಮುಖ ನೋಡಲೂ ಬರುವುದಿಲ್ಲ. ಗಾಯತ್ರಿಗೆ ತವರು ಮನೆಯೇ ಗತಿಯಾಗುತ್ತದೆ ತವರನ್ನು … Read more

ಮಾಲಿಂಗ. . .: ಸಿದ್ದರಾಮ ತಳವಾರ

ರಾಮೇನಹಳ್ಳಿಯ ಇಡೀ ಊರಿಗೆ ಊರೇ ಪತರಗುಟ್ಟಿ ಹೋಗಿದೆ. ಊರ ರಾಮೇಗೌಡರ ಮನೆಯೆಂಬುದೊಂದು ಸಂತೆಯಾಗಿ ಹೋಗಿತ್ತು. ಇಡೀ ಊರಿಗೆ ಊರೇ ಅವರ ಮನೆ ಮುಂದೆ ನೆರೆದು ನೆರೆದವರೆಲ್ಲ ಕೌತುಕದಿಂದ ಪರಿಶೀಲನೆಗೆ ಬಂದ ಪೋಲೀಸರ ಮುಖಗಳನ್ನ ದಿಟ್ಟಿಸುತ್ತಿದ್ದಾರೆ. ಊರಿನ ಯಾವೊಬ್ಬ ಹೆಂಗಸು ಮುಖ ತೊಳೆದಿಲ್ಲ ಅಂಗಲದ ಕಸ ಗುಡಿಸಿಲ್ಲ ರಂಗೋಲಿ ಹಾಕಿಲ್ಲ ಬಾಯಲ್ಲಿ ಸೆರಗಿಟ್ಟುಕೊಂಡು “ಯವ್ವಾ ಹೆಂಗಾಗ್ಯದೋ ಏನೋ, ಪಾಪ ದೇವ್ರಂಥ ಗೌಡ್ರಿಗೆ ಹಿಂತಾ ಸ್ಥಿತಿ ಯಾಕ ಬಂತುಅಂತೇನಿ, ಮನೀ ಮಗನಂಗಿದ್ದ ಮಾಲಿಂಗ ಅದ್ಹೆಂಗ್ ಸತ್ನೋ ಏನೋ ಪಾಪ ಗೌಡರ … Read more

ಅಂತರಾಗ್ನಿ (ಭಾಗ 5): ಕಿರಣ್. ವ್ಹಿ

ಇಲ್ಲಿಯವರೆಗೆ.. ” ಆಮೇಲೆ ಇಲ್ಲಿಗೆ ಹೊರಟದ್ದು ಮಧ್ಯದಲ್ಲಿ ನೀವು ಸಿಕ್ಕಿದ್ದು. ನಿಮ್ಮ ಪರಿಚಯ. ಇದೆಲ್ಲ ನಡೆದದ್ದು. ಇಲ್ಲಿ ಕೂತುಕೊಂಡು ಗುಂಡು ಹಾಕುತ್ತಿರೋದು. ಅಷ್ಟೇ ಅಂಕಲ್. ಹೆಂಗಿತ್ತು ನನ್ನ ಪ್ಲಾಪ್ ಲವ್ ಸ್ಟೋರಿ?” ಎನ್ನುತ್ತಾ ನಕ್ಕ ಹರಿ. ಅಷ್ಟರಲ್ಲಿ ನಶೆಯಲ್ಲಿ ತೇಲುತ್ತಿದ್ದ. ” ಇಷ್ಟೆಲ್ಲಾ ಆಗಿದೆ ನಿನ್ನ ಲೈಫ್ನಲ್ಲಿ ಅಂತಾಯ್ತು..” ” ಹಂ ಅಂಕಲ್. ಎಲ್ಲರೂ ಮೋಸಗಾರು……. ಮೋಸಗಾರರು.” ಎನ್ನುತ್ತ ಧೊಪ್ಪನೆ ಬಿದ್ದುಬಿಟ್ಟ. ಹುಡುಗ ಫುಲ್ ಟೈಟ್ ಆಗಿದ್ದಾನೆ ಎಂದುಕೊಂಡು, ಎಲ್ಲವನ್ನೂ ನೀಟಾಗಿ ತೆಗೆದಿಟ್ಟು, ತಮ್ಮ ರೂಮಿಗೆ ನಡೆದರು … Read more

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ ನಮ್ಮ ಮೈತ್ರಿ ಪ್ರಕಾಶನದ ವತಿಯಿಂದ ಈಗಾಗಲೇ ಅಪ್ಪನ ಕುರಿತಾಗಿ ಎರಡು ಪುಸ್ತಕಗಳು ಬಂದು ಜನಜನಿತವಾಗಿವೆ ಈಗ ನಿಮ್ಮ ತಾಯಿಯ ಕುರಿತಾಗಿ ಭಾವನೆಗಳ ಅನಾವರಣಗೊಳಿಸಲು ಸದಾವಕಾಶ. ಅವ್ವ, ಆಯಿ, ಮಾಯಿ, ಅಬ್ಬೆ ಹೀಗೆ ಅವಳ ನಾಮ ಹಲವು ದೈವಿರೂಪ ಒಂದೇ..! ನಿಮ್ಮ ತಾಯಿಯ ಬಗ್ಗೆ ನಿಮಗಿರುವ ಆದರ,ಪ್ರೀತಿ, ಅಂತಃಕರಣ ಲೇಖನದ ರೂಪದಲ್ಲಿ ಪ್ರಕಟಿಸುವ ವಿಚಾರವಿದೆ..ಲೇಖನ ಬರೆದು ಕೊಡಲು ನಿಮಗೆ ಖುಶಿ ಅನಿಸಿದರೆ ಪ್ರಕಟಿಸಲು ಮೈತ್ರಿಗೆ ಡಬಲ್ ಖುಷಿ….!! … Read more

ಕನ್ನಡ ಕಲಿಸಿದ ಮಕ್ಕಳು: ವೆಂಕಟೇಶ ಚಾಗಿ

ಆಸಂಗಿಪುರದ ಮಕ್ಕಳು ಎಂದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬಾ ಪ್ರಸಿದ್ಧಿ. ಯಾವುದೇ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಓದಿನಲ್ಲಿ ಆಸಂಗಿಪುರದ ಮಕ್ಕಳು ಸದಾ ಮುಂದು. ಪ್ರತಿ ಸಾರಿಯೂ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡೇ ಊರಿಗೆ ಬರುತ್ತಿದ್ದರು. ಆಸಂಗಿಪುರವು ಆ ಊರಿನ ಮಕ್ಕಳಿಂದಲೇ ಪ್ರಸಿದ್ಧಿ ಪಡೆದಿತ್ತು. ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಗಳಿಸಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಆ ಊರಿನ ಶಾಲೆಯ ಗುರುಗಳು. ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಛಲದಿಂದ ಯಾವುದೇ ಕಾರ್ಯವನ್ನಾಗಲೀ ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು. ಬೇಸಿಗೆ ರಜೆ ಹತ್ತಿರ ಬರುತ್ತಿದ್ದ ಕಾಲ … Read more

ವಿಭಿನ್ನ ಕಲೆಯ ಪ್ರವೃತ್ತಿಯನ್ನು ವೃತ್ತಿ ಯನ್ನಾಗಿಸಿ ಯಶಸ್ಸು ಕಂಡ ಭರತ್ ಕುಲಾಲ್: ಹರ್ಷಿತಾ ಹರೀಶ ಕುಲಾಲ್

ಹುಟ್ಟಿದ ಪ್ರತಿಯೊಂದು ವ್ಯಕ್ತಿ ಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಸಿಕ್ಕಾಗ ಪ್ರದರ್ಶನ ಮಾಡುತ್ತಾರೆ. ಇನ್ನೂ ಕೆಲವರು ಎಲ್ಲ ಕಲೆ ಗೊತ್ತಿದ್ದು ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಹಾಗೆಯೇ ಹಲವು ಕನಸುಗಳನ್ನು ಹೊತ್ತ ಯುವಕ ತಾನು ವೇದಿಕೆಯಲ್ಲಿ ಪ್ರದರ್ಶನ ನೀಡಿ ಅದರ ಅನುಭವದ ರುಚಿಯಿಂದ ಮುಂದುವರಿದ ಪ್ರತಿಭೆ ಬಾತು ಕುಲಾಲ್.. ಇವರು ಶ್ರೀ ನಾರಾಯಣ ಹಾಗೂ ಶ್ರೀಮತಿ ಸುಂದರಿ ಯವರ ತೃತೀಯ ಪುತ್ರನಾಗಿ. ನಿರಂಜನ್ ಕುಲಾಲ್ ಹಾಗೂ ಯಶವಂತ್ ಕುಲಾಲ್ ಅವರ ಪ್ರೀತಿಯ ತಮ್ಮನಾಗಿ … Read more

ಮಾಯವಾಗುತ್ತಿರುವ ಬರವಣಿಗೆ ಎಂಬ ಭಾಷಾ ಕೌಶಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ವಿಜ್ಞಾನ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಮಾನವನ ಬದುಕು ಎಷ್ಟು ಸುಖಮಯ ಸುಲಭವಾಗುತ್ತದೋ ಅಷ್ಟೇ ಸಂಕೀರ್ಣವೂ ಅವಲಂಬಿಯೂ ಆಕಸ್ಮಿಕವೂ ಅಘಾತಕಾರಿಯೂ ಆಗುವುದರೊಂದಿಗೆ ಏಷ್ಟೋ ಶ್ರೇಷ್ಠ ಕಲೆಗಳ ಅಳಿವಿಗೂ ಹೊಸ ಕಲೆಗಳ ಸೃಷ್ಟಿಗೂ ನಾಂದಿ ಹಾಡಿದೆ! ಆದರೆ ವಿಜ್ಞಾನದ ಪ್ರಗತಿಯ ಓಟದಲ್ಲಿ ನಾವು ಈ ಸಂಕೀರ್ಣತೆಯನ್ನು, ಕಲೆಯನ್ನೂ ಮುಖ್ಯವೆಂದು ಭಾವಿಸುತ್ತಿಲ್ಲ! ಮುಂದೊಂದು ದಿನ ಅದರ ಪ್ರಾಮುಖ್ಯತೆ ಗೊತ್ತಾಗುತ್ತದೆ. ವಿಜ್ಞಾನ ತಂತ್ರಜ್ಞಾನದ ಅಪರಿಮಿತ ಬೆಳವಣಿಗೆಯಿಂದಾಗಿ ಇಂದು ಕ್ಯಾಶ್ಲೆಸ್ ವ್ಯವಹಾರ ಆರಂಭವಾಗಿದೆ! ಇದು ಅದ್ಭುತ ಸಾಧನೆ! ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು … Read more

ಪಂಜು ಕಾವ್ಯಧಾರೆ

ಗಜಲ್ ಕೊನೆಯುಸಿರವರೆಗೂ ನಿನ್ನದೇ ಹಾಡು ಹಾಡಬೇಕೆಂದಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ನೆನ್ನೆಗೇ ವಿದಾಯ ಹೇಳಿ ನನ್ನೆಲ್ಲ ತಪ್ಪುಗಳ ಚೀಟಿ ಬರೆದಿಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಪ್ರೀತಿಯ ಯುಗಾದಿ ಮೊಹರಂಗಳು ಈ ಜಗತ್ತಿನಲಿ ಎಲ್ಲಿಯವರೆಗೆ ಒಂದಾಗಲಾರವೋ ಸಾವು ಮೆರೆಯುವುದು ಗಲ್ಲಿಯಲಿ ಸದ್ದಿಲ್ಲದಂತೆ ಬೇವು ಬೆಲ್ಲ ಕೊಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಅಪ್ಪ ಕಣ್ಣು ಅಮ್ಮ ಹೃದಯ ರಕ್ತ ಚರಿತ್ರೆಯಲಿ ದಾಖಲಾಗಿ ಕಣ್ಣೀರಿಗೆ ಬದಲು ರಕ್ತ ಸೋರಿಹುದು ಅಟ್ಟಹಾಸದ ಬೆಂಕಿಗೆ ಆಹುತಿಯಾದ ಆತ್ಮಗಳ ಕ್ಷೇಮ ಕೋರಿರುವೆ … Read more

ಬಾಲಕಿ ನೀಡಿದ ಆ ೫೭ ಸೆಂಟ್‌ಗಳು: ಎಂ.ಎನ್.ಸುಂದರ ರಾಜ್

ಅದೊಂದು ಚರ್ಚ್. ಚರ್ಚಿನಲ್ಲೊಬ್ಬ ಉದಾರವಾದಿ ಪಾದ್ರಿ. ಕೇವಲ ಧರ್ಮಪ್ರಚಾರವಷ್ಟೇ ತನ್ನ ಜೀವನದ ಉದ್ದೇಶವೆಂದು ಭಾವಿಸದವನು. ತನ್ನ ಚರ್ಚಿನ ಸುತ್ತ ಮುತ್ತ ಇದ್ದ ಬಡ ಕೂಲಿ ಕಾರ್ಮಿಕರ ಮನೆಮನೆಗೆ ಹೋಗಿ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪ್ರಚಾರ ಮಾಡುತ್ತಿದ್ದ. ಅಂತಹ ಬಡ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆಯನ್ನೂ ಸಹ ಚರ್ಚ್ನ ಕೆಳಭಾಗದ ಒಂದು ಪುಟ್ಟ ಕೊಠಡಿಯಲ್ಲಿ ನಡೆಸುತ್ತಿದ್ದ. ಅಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಸುತ್ತಿದ್ದ. ಅವರಿಗೆ ಲಘು ಉಪಹಾರ, ಪುಸ್ತಕ, ಬಟ್ಟೆ ಎಲ್ಲವನ್ನೂ ನೀಡಿ, … Read more

ಕರಾವಳಿಯ ಸೆಖೆಯೂ ಕುಚ್ಚಲು ಗಂಜಿಯೂಟವೂ: ಕೃಷ್ಣವೇಣಿ ಕಿದೂರ್

ಈ ವರ್ಷ ಕಾಡುಮಾವಿನಮರಗಳ ತುಂಬ ಜೋತಾಡುವ ಗೊಂಚಲು ಗೊಂಚಲು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಮನೆಯಂಗಳದಲ್ಲಿ ನಿಂತು ಸುತ್ತ ತಿರುಗಿದಾಗ ಆಕಾಶ ಮುಟ್ಟುವ ಹಾಗೆ ಬೆಳೆದ ಕಾಡುಮಾವಿನ ಮರದ ತುಂಬ ಗಾಳಿಗೆ ತೊನೆಯುವ ಅರೆಹಣ್ಣು, ಕಾಯಿಗಳು . ಬಲವಾಗಿ ಬೀಸುವ ಗಾಳಿ ಉದುರಿಸುವ ಹಣ್ಣು ಹೆಕ್ಕಲು ಮಕ್ಕಳ ಸ್ಪರ್ಧೆ.ಈ ದುರ್ಮುಖ ಸಂವತ್ಸರವನ್ನೇ ಅಪರಾಧಿ ಮಾಡಬೇಕೋ ಅಲ್ಲ ವರುಷ ವರುಷಕ್ಕೂ ಬರಡಾಗುವ ಪ್ರಕೃತಿಗೆ ವಿಷಾದಿಸಬೇಕೋ ಅರಿಯದು. ಹೇಳಿ ಕೇಳಿ ನಮ್ಮದು ಅರಬ್ಬಿ ಸಮುದ್ರದ ಪಕ್ಕದ ಊರು. ಕೇರ ನಾಡಿನ ತುಂಬ … Read more

ದೈವತ್ವದ ಪರಿಕಲ್ಪನೆ: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಬಸವಣ್ಣನವರ ವಚನವೊಂದರ ಸಾಲುಗಳು ಹೀಗಿವೆ: ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು…… ನೀರೊಳಗೆ ಬೆಂಕಿಯಿದೆ, ಅದರಿಂದಲೇ ವಿದ್ಯುತ್ತು ಹೊರಬರುವುದು. ಆಮೇಲೂ ಆ ನೀರು ನೀರಾಗಿಯೇ ಉಳಿವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು. ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಅಡಗಿರುತ್ತದೆ. ತಾಯಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದಲ್ಲೇ ಅದರೆಲ್ಲ ಬೆಳವಣಿಗೆಗೆ ಬೇಕಾದ ಅವಯವಗಳು ಹುದುಗಿರುವಂತೆ, ನವಿಲಿನ ಮೊಟ್ಟೆಯೊಳಗೆ … Read more

ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ.. ಒಂದು ವಾರದಿಂದ ಅನೂಷಾ ಸರಿಯಾಗಿ ಮಾತನಾಡುತ್ತಿರಲಿಲ್ಲ. ಏನಾಯಿತು ಎಂದು ಕೇಳಿದರೆ ಬಾಯಿ ಸಹ ಬಿಡಲಿಲ್ಲ. ಇಗ್ನೋರ್ ಮಾಡುತ್ತಿದ್ದಾಳೆ ಎಂಬ ಭಾವನೆ ಹರಿಯಲ್ಲಿ ಮೂಡಲಾರಂಭಿಸಿತು. ಮುಂದಿನವಾರ ಊರಿಗೆ ಹೋಗುವ ಯೋಚನೆಯಲ್ಲಿದ್ದ ಹರಿ, ಅದೇ ಶುಕ್ರವಾರದ ರಾತ್ರಿ ಬಸ್ ಹತ್ತಿದ. ಏನಾಗಿದೆಯೋ ಎಂಬ ಚಿಂತೆ ಅವನನ್ನು ಬಹಳವೇ ಕಾಡುತ್ತಿತ್ತು. ರಾತ್ರಿಯಿಡಿ ನಿದ್ರೆ ಮಾಡಲಿಲ್ಲ ಹರಿ. ಏನೇನೋ ಯೋಚನೆಗಳು ಬೆಳಗು ಯಾವಾಗ ಆದೀತು, ಯಾವಾಗ ತಲುಪುತ್ತೇನೊ, ಎನ್ನುವ ಅವಸರ. ಬೆಳಗ್ಗೆ ಏಳರ ಸುಮಾರು ಬೆಂಗಳೂರು ತಲುಪಿದ. ಮನೆಗೆ ಹೋದವನೇ ಫ್ರೆಶ್ … Read more