ಪ್ರೀತಿ ಮಾಡೋ ಮುಂಚೆ: ಮಲ್ಲಿಕಾರ್ಜುನ ದಾಸನಕೊಪ್ಪ

ಕಾಲೇಜು ಆರಂಭವಾಗಿ ಆರು ತಿಂಗಳುಗಳೇ ಕಳೆದಿವೆ. ಹೇಳದೆ ಪ್ರೀತಿಸುವ  ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಒಂದು ವೇದಿಕೆ ಸಿದ್ಧವಾಗಿದೆ. ಹುಡುಗ ಹುಡುಗಿಯರೆಲ್ಲಾ ಸೂಕ್ತ ಪ್ರಿಯತಮ/ಮೆಯ ಹುಡುಕಾಟದಲ್ಲಿದ್ದಾರೆ. ಆ ಪ್ರಯತ್ನದಲ್ಲಿ ಕೆಲವರು  ಯಶಸ್ವಿಯು ಆಗಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯನ್ನು ಹೇಗೆ ಅವಳಿ/ನಿಗೆ ಅರಿಕೆ ಮಾಡಿಕೊಳ್ಳಬೇಕೆಂಬ  ತೋಳಲಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ “ವ್ಯಾಲೇಂಟೆನ್ಶ ಡೇ” ಸಮೀಪಸಿದೆ. ಹುಡುಗ ಹುಡುಗಿಯರ ಎದೆಯಲ್ಲಿ ಲಬ್-ಡಬ್ ಶುರುವಾಗಿದೆ.  ನಾನು ಪ್ರೀತಿಸಿದ ಹುಡುಗ/ಗಿ ನನ್ನಲ್ಲಿ ಬಂದು ಗುಲಾಬಿ ಹಿಡಿದು ಪ್ರೀತಿ ಯಾಚಿಸುತ್ತಾನಾ/ಳಾ??  ನನ್ನ … Read more

ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ

ತ್ರಿವರ್ಣ ಗಣಪ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ನಂತರ ಸಾಲುಸಾಲು ಹಬ್ಬಗಳು ಆರಂಭವಾಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬವೂ ಬರಲಿದೆ. ಸ್ವಾತಂತ್ರ್ಯವೆನ್ನುವುದು ನಮ್ಮ ಸುತ್ತಲಿನ ಪರಿಸರ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುತ್ತಾರೆ ಕಲಾವಿದ ಹುಸೇನಿ. ‘ಮುಂಬರಲಿರುವ ಗೌರಿ – ಗಣೇಶ ಹಬ್ಬದಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳಿಂದ ಮುಕ್ತವಾದ ಗಣೇಶ ನಮ್ಮ ಮನೆಗಳನ್ನು ಪ್ರವೇಶಿಸಲಿ’ … Read more

ವಿಶ್ವಾಮಿತ್ರ!!: ಎಸ್.ಜಿ.ಶಿವಶಂಕರ್

ಅರಳೀಕಟ್ಟೆಯಲ್ಲಿ ಕೂತಿದ್ದ ಶತಾಯುಶಿ ಹನುಮಜ್ಜ ತನ್ನಷ್ಟೇ ವಯಸ್ಸಾದಂತೆ ಕಾಣುತ್ತಿದ್ದ ಕನ್ನಡಕವನ್ನು ಸರಿಪಡಿಸಿಕೊಂಡು ತನ್ನ ಮುಂದೆ ಧೂಳೆಬ್ಬಿಸುತ್ತಾ ಹೋದ ಕಾರು ನೋಡಿದ. ಇದು ಎಷ್ಟನೆಯ ಕಾರು ಎಂದು ಅಚ್ಚರಿಪಟ್ಟ. ಸುಮಾರು ಅರ್ಧ ಗಂಟೆಯಿಂದ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಕಾರುಗಳು ಅವನು ಕೂತಿದ್ದ ಆರಳೀಕಟ್ಟೆಗೆ ಧೂಳಿನ ಅಭಿಷೇಕ ಮಾಡಿದ್ದವು.  "ಇವತ್ತೇನು ನಡೀತೈತೆ ಆ ಫಾರಮ್ಮಿನಾಗೆ..?" ಹನುಮಜ್ಜ ಗೊಗ್ಗರು ದನಿಯಲ್ಲಿ ತನಗೆ ತಾನೇ ಎಂಬಂತೆ ಹೇಳಿಕೊಂಡ. "ಏನು ನಡದ್ರೆ ನಮಗೇನು..? ನಾವು ಹೊಲಗೈಯಾದು ತಪ್ಪತೈತ..?" ಹನುಮಜ್ಜನಿಗಿಂತ ಹತ್ತು ವರ್ಷ ಕಿರಿಯ ಭರಮಜ್ಜ … Read more

ಪಂಜು ಕಾವ್ಯಧಾರೆ

ನಕ್ಷತ್ರಗಳೆಂದರಿಷ್ಟ  ಹೊಸ್ತಿಲು ದಾಟಿ ಬಂದಂತೆ ಕಂಡದ್ದು ಅರ್ಧಚಂದ್ರ ಚೆಲ್ಲಿದ ಮುದ್ದು ಬೆಳದಿಂಗಳು. ಹೊನಲಿನಲ್ಲಿ ಗೋಚರವಾಗಿ  ಹಗಲಲ್ಲಿ ಕಣ್ಮರೆಯಾಗುವ ದಿಗಂತದ ಪರದೆಯಲ್ಲಿ ಬೆಚ್ಚಿ ಬೀಳಿಸುವ  ಶಶಿಯ ಇಂದ್ರಜಾಲ. ನಭೋಮಂಡಲವೇ ರಾತ್ರೋರಾತ್ರಿ ಬೆತ್ತಲಾದಾಗ ನಕ್ಷತ್ರಗಳು ಜಿನುಗುತ್ತವೆ. ಬರಿಗಣ್ಣಿಗೆ ನಂಬಲಾರದಷ್ಟು ಹೆಸರಿಲ್ಲದ ತಾರಾ ಪುಂಜಗಳು ಮೋಡಿಗಾರನ ಕೈಯ ಅಂಕುಶದ ಮಾಯಾಜಾಲದೊಳಗೆ. ಯಾರೋ ದೇವಕನ್ನೆ ರಾತ್ರಿ ಆಕಾಶದಲ್ಲಿ ಜೋಡಿಸದೇ ಹಾಗೇ ಬಿಟ್ಟ ರಂಗೋಲಿ ಚುಕ್ಕಿಯಂತೆ ನೀವು. ನಗರದಾಚೆ ಗಲ್ಲಿಯಲ್ಲಿ ಮಲಗದೇ ಹಠ ಹಿಡಿದು ಅಳುತ್ತಿರುವ ಕಂದಮ್ಮನ ಕಣ್ಣಿಗೆ ನೀವೆಲ್ಲಾ ಹೊಳೆಯುವ ಆಟಿಕೆಗಳು. ಕಂಡಾಗಲೆಲ್ಲಾ … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ ಇತ್ತ ಕತ್ತಲಿನಲ್ಲಿ ಸುಳಿವಿಗಾಗಿ ತಡಕಾಡುತ್ತಿದ್ದ ಮೊಟ್ರೋಪಾಲಿಟನ್ ಟೊರಾಂಟೋ ಪೋಲೀಸರಿಗೆ ಮಹತ್ವದ್ದೇನೂ ಸಿಕ್ಕಿರಲಿಲ್ಲ. ಬದಲಿಗೆ 1987 ರ ಡಿಸೆಂಬರಿನಲ್ಲಿ ಹದಿನೈದರ ಪ್ರಾಯದ ಇನ್ನೊಬ್ಬ ಬಾಲಕಿ ಆಗಂತುಕನೊಬ್ಬನಿಂದ ಎಂದಿನ ರೀತಿಯಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು. ಸ್ಕಾರ್-ಬೋರೋ ನಗರದ ನಿವಾಸಿಗಳು ಸ್ವಾಭಾವಿಕವಾಗಿಯೇ ಕಂಗಾಲಾಗಿದ್ದರು. ಪೋಲೀಸರೂ ಕೈಚೆಲ್ಲಿ ಕುಳಿತಿರುವಾಗ ಯಾರ ಬಳಿ ಸಹಾಯಕ್ಕೆ ಧಾವಿಸುವುದೆಂಬುದೇ ಅವರಿಗೆ ತಿಳಿಯಲಿಲ್ಲ. ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿದ್ದು ಸ್ಪಷ್ಟವಾಗಿತ್ತು. ಕತ್ತಲಾದ ಬಳಿಕ ಹೆಣ್ಣುಮಕ್ಕಳು ಒಂಟಿಯಾಗಿ ಅಲೆದಾಡುವುದನ್ನು, ಓಡಾಡುವುದನ್ನು ಆದಷ್ಟು ಕಮ್ಮಿ ಮಾಡಬೇಕೆಂದೂ, ಪ್ರಕರಣದ ಬಗ್ಗೆ ಯಾವ ಸುಳಿವು ಸಿಕ್ಕರೂ … Read more

ಬಿಸಿಲನಾಡಿನಲ್ಲೊಂದು ಕಾವ್ಯಮನೆಯ ಉದ್ಘಾಟನೆ: ಕೆ.ಎಂ.ವಿಶ್ವನಾಥ ಮರತೂರ.

ಕರ್ನಾಟಕ ರಾಜ್ಯ ಹಲವು ವಿಶೇಷಗಳನ್ನು ಹುಟ್ಟುಹಾಕಿದೆ. ಇಡಿ ದೇಶ ಹಾಗೂ ಪ್ರಪಂಚದಲ್ಲಿ ಹಲವು ಪ್ರಥಮಗಳನ್ನು ಸೃಷ್ಠಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದಲ್ಲಿ ಎಂಟು ಜ್ಞಾನಪೀಠ ಪಡೆದು, ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಮಾಡಿರುವ ಸಾಧನೆ ನಮ್ಮದು. ಇದೆಲ್ಲವೂ ಕನ್ನಡದ ಹೆಸರಾಂತ ಕವಿಗಳ ಸಾಹಿತ್ಯ ಮತ್ತು ಹೋರಾಟದಿಂದ ಸಾಧ್ಯವಾಗಿದೆ. ಕನ್ನಡ ಇಂದು ಬಹು ಶ್ರೀಮಂತವಾಗಿ ಬೆಳೆಯಲು ಹಲವರ ಕೊಡುಗೆ ಅಪಾರವಾಗಿದೆ.      ಪ್ರಸ್ತುತ ದಿನಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಅರ್ಥ ಕಳೆದುಕೊಂಡು “ಕವಿತೆ ಯಾರು ಕೊಳ್ಳತ್ತಾರೆ” ಎಂಬ … Read more

ಮಲಯಾಳ ಸಿನೆಮಾ ರಂಗವೂ ಮಲಬಾರಿನ ಸಂಸ್ಕೃತಿಯೂ: ಕೃಷ್ಣವೇಣಿ ಕಿದೂರ್

            ಬಹಳಷ್ಟು  ಜನರಿಗೆ  ಮಲಯಾಳ   ಚಿತ್ರಗಳೆಂದರೆ  ಅದು ನೀಲಿ ಚಿತ್ರಗಳಿಗೆ  ಹತ್ತಿರದ್ದು ಎಂಬ  ತಪ್ಪು ಕಲ್ಪನೆಯಿದೆ.    ಜಾಹೀರಾತುಗಳು ತೋರಿಸುವ   ಚಿತ್ರಗಳು   ಹಾಗಿರುತ್ತದೆ ಎನ್ನಬಹುದು.   ಆದರೆ ಒಬ್ಬ ಕೇರಳೀಯಳಾಗಿ  ಮಲಯಾಳಂ  ಚಲನಚಿತ್ರಗಳೆಂದರೆ  ಅಲ್ಲಿ ಮಲಬಾರಿನ ( ಕೇರಳ) ಸಾಂಸ್ಕೃತಿಕ  ಹಿನ್ನಲೆಗೆ  ಹೆಚ್ಚಿನ ಒತ್ತು  ಸಿಗುತ್ತದೆ  ಎಂದು  ಕಂಡ  ಕಾರಣ ಆ ಮಿಥ್ಯೆಯನ್ನು  ಅಲ್ಲಗಳೆಯಬೇಕಾಗಿದೆ. ಅರಬ್ಬಿ ಸಮುದ್ರದ  ಪಕ್ಕದ ಪುಟ್ಟ ರಾಜ್ಯ  ಕೇರಳ.  ಇದಕ್ಕೆ ಕೇರ … Read more

ಕಾಡು(ವ) ಕಟ್ಟುವ ಕತೆ!! ಭಾಗ-8: ಅಖಿಲೇಶ್ ಚಿಪ್ಪಳಿ

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಮಾತೊಂದು ಪ್ರಚಲಿತದಲ್ಲಿದೆ. ವರ್ಷದ ಎಲ್ಲಾ ಋತುಮಾನಗಳು ನಿಸರ್ಗದತ್ತವಾಗಿ ಸಸೂತ್ರವಾಗಿ ನಡೆದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳು ಸುರಕ್ಷಿತವಾಗಿ ಇರಬಲ್ಲವು. ಭೂತಾಯಿಯ ಬುದ್ಧಿವಂತ ಮಕ್ಕಳಾದ ನಾವು ಮಾಡಿದ್ದೇ ಸರಿ ಎಂಬ ಅಹಂಕಾರವನ್ನು ಹೊಂದಿದ್ದೇವೆ. ಇಡೀ ಭೂಮಿ ಇರುವುದೇ ನಮ್ಮ ಲಾಭಕ್ಕಾಗಿ, ನಮ್ಮ ಸುಖಕ್ಕಾಗಿ ಎಂದು ಭಾವಿಸಿಕೊಂಡಿದ್ದೇವೆ. ಪ್ರಕೃತಿಯ ನೈಸರ್ಗಿಕ ಪ್ರಯೋಗಾಲವನ್ನು ಛಿಧ್ರ ಮಾಡಿ, ಇಡೀ ನಿಸರ್ಗವನ್ನು ನಮ್ಮ ಸುಖದ ಹುಡುಕುವಿಕೆಯ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದೇವೆ. ಹವಾಗುಣ ಬದಲಾವಣೆಯಿಂದಾಗಿ ಇಡೀ ಪ್ರಪಂಚದ ಎಲ್ಲಾ ಪ್ರದೇಶಗಳು … Read more

ಶಿಲ್ಪ ಕಲೆಯ ತವರು: ಕೈದಾಳ: ದಂಡಿನಶಿವರ ಮಂಜುನಾಥ್

ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್ ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು. ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ನಮ್ಮಲ್ಲಿತ್ತು. ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದ ನಮ್ಮ ಕಾರು ಕೆಲವೇ ನಿಮಿಷಗಳಲ್ಲಿ ಗೂಳೂರು … Read more

ಅಯ್ಯೋ! ಸಾಲಾ?: ಗುಂಡುರಾವ್ ದೇಸಾಯಿ

    ಪದ್ದು ಮುಂಜಾನೆ ಮಂಜಾನೆ ಹಾಸಿಗೆಲಿ ಇದ್ದಾಗಲೆ ಮನ್ಯಾಗ ಒಕ್ಕರಿಸಿಕೊಂಡ, ‘ಏನಾತೋ ಪದ್ದು ಹಿಂಗ್ಯಾಕ ಗಾಬರಿ ಆಗಿದಿ’ ಅಂದೆ. ‘ಇಲ್ಲ ದೊಸ್ತ್ಯಾ ಸಾಲಗಾರರ ಕಾಟ ಬಾಳ ಆಗ್ಯಾದ. ಮಾರ್ಯದೆಯಿಂದ ಬದುಕೊ ಮನುಷ್ಯ. ಸಾಲ ಸಕಾಲಕ್ಕ ತೀರಿಸುವುದಾಗವಲ್ತು ಮೂರು ತಿಂಗಳ ಟೈಮು ಸಿಕ್ರ ಎಲ್ಲಾನೂ ಅಡ್ಜೆಸ್ಟ ಮಾಡಬಹುದು. ಇವರು ಸಿಕ್ಕ-ಸಿಕ್ಕಲ್ಲಿ ವಾಮಾಗೋಚರವಾಗಿ ಬಯ್ಯತಾರ ಏನು ಮಾಡಲಿ’ ಎಂದು ತನ್ನ ಅಳಲು ತೋಡಿಕೊಂಡ.  ‘ಅದಕ್ಯಾಕ ಚಿಂತಿ ಮಾಡತಿ ಒಂದು ವ್ರತ ಅದ ಮಾಡ್ತಿ ಏನು?’  ‘ವ್ರತಾನ! ವ್ರತದಿಂದ ಸಾಲ … Read more

ವಸುಮತಿ ರಾಮಚಂದ್ರ ‘ಮಕ್ಕಳ ಮನೋಭೂಮಿ’ ಕೃತಿ ಪರಿಚಯ: ಗುಂಡೇನಟ್ಟಿ ಮಧುಕರ

ಮಕ್ಕಳ ಮನಸ್ಸನ್ನು ಅರಳಿಸುವ ಕೃತಿ ಕೃತಿಪರಿಚಯ: ಗುಂಡೇನಟ್ಟಿ ಮಧುಕರ  ಮೊ: 8904632798 ಈಗ ಮಕ್ಕಳ ಸಾಹಿತ್ಯ ರಚಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು. ಪ್ರೌಢ ಸಾಹಿತ್ಯ ರಚಿಸುವುದಕ್ಕಿಂತ ಮಕ್ಕಳ ಸಾಹಿತ್ಯ ರಚನೆ ತುಂಬ ಕಷ್ಟದ ಕೆಲಸ. ನಾವು ಮಕ್ಕಳ ಮನಸ್ಸನ್ನರಿತು ನಾವೂ ಮಕ್ಕಳಾಗಿಯೇ ರಚಿಸಿದಾಗ ಮಾತ್ರ ಒಳ್ಳೆಯ ಮಕ್ಕಳ ಸಾಹಿತ್ಯ  ಹೊರಬರಲು ಸಾಧ್ಯ. ಇದಕ್ಕಾಗಿ ಮಕ್ಕಳ ಮನಸ್ಸನ್ನು ಅಭ್ಯಾಸ ಮಾಡಬೇಕಾದುದು ಅತ್ಯವಶ್ಯವಾಗಿದೆ. ಅದಕ್ಕಾಗಿ ನಾವು ಮಕ್ಕಳೊಂದಿಗೆ ಹೆಚ್ಚಿನ ಒಡನಾಟ ಹೊಂದಿದವರಿಂದ ಮಾತ್ರ ಉತ್ಕøಷ್ಟ ಮಕ್ಕಳ ಕೃತಿಗಳನ್ನು ರಚಿಸಲು ಸಾಧ್ಯ. ಹಿಂದಿನ … Read more

ನೆಗಡಿಯಾದಾಗ ಮೂಗನ್ನೇ ಕೊಯ್ದರೆ,,,!: ಆರ್.ಬಿ.ಗುರುಬಸವರಾಜ. ಹೊಳಗುಂದಿ

ಮೂಗು ಇದ್ದವರಿಗೆಲ್ಲಾ ನೆಗಡಿ ಬರುವುದು ಸರ್ವೇ ಸಾಮಾನ್ಯ. ಪದೇ ಪದೇ ನೆಗಡಿ ಬರುತ್ತದೆ ಅಂತ ಮೂಗನ್ನೇ ಕೊಯ್ದು ಹಾಕುತ್ತೇವೆಯೇ? ಇಲ್ಲವಲ್ಲ. ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಇಂತಹದ್ದೊಂದು ಮೂಗನ್ನು ಕೊಯ್ಯಲು ಮುಂದಾದ ಪ್ರಕ್ರಿಯೆ ಶುರುವಾಗಿದೆ. ಅದೇನೆಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಅದೇ ಲೋಕಾಯುಕ್ತ ಸಂಸ್ಥೆಯನ್ನು ಕೋಲೇ ಬಸವನಂತೆ ಮಾಡ ಹೊರಟಿರುವುದು.      ಭ್ರಷ್ಟಾಚಾರ ನಿಗ್ರಹಕ್ಕಾಗಿ ಭಾರತದ ರಾಜ್ಯಗಳಲ್ಲಿ ನಿಯೋಜಿತಗೊಂಡಿರುವ ‘ಲೋಕಾಯುಕ್ತ’ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸಿ ಅದಕ್ಕೆ ಪರ್ಯಾಯವಾಗಿ ಇನ್ನೊಂದು ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ಎನ್ನುವ ಸಂಸ್ಥೆಯನ್ನು … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ: ಪ್ರಸಾದ್ ಕೆ.

  1987 ರ ದಿನಗಳು ಕೆನಡಾದ ಓಂಟಾರಿಯೋ ಪ್ರೊವಿನ್ಸಿನ ಸ್ಕಾರ್-ಬೋರೋ ಭಾಗದಲ್ಲಿ ಸೂರ್ಯ ಎಂದಿನಂತೆ ಮುಳುಗುತ್ತಾ ಕತ್ತಲೆಯ ಚಾದರವನ್ನು ಮೆಲ್ಲಗೆ ಎಳೆಯುತ್ತಿದ್ದ. ಅತ್ತ ಸಂಜೆಯೂ ಅಲ್ಲದ, ಇತ್ತ ಪೂರ್ಣ ಪ್ರಮಾಣದ ರಾತ್ರಿಯೂ ಇಲ್ಲದ ಈ ಹೊತ್ತಿನಲ್ಲಿ ಕೈ-ಕೈ ಹಿಡಿದು ಪಾರ್ಕುಗಳಿಗೆ ಹೋಗುವ ಜೋಡಿಗಳು, ವಾಕಿಂಗಿಗೆ ತೆರಳುವ ವೃದ್ಧರು, ಬಿಯರ್ ಕುಡಿಯುವ ನೆಪದಲ್ಲಿ ಸಂಗಾತಿಗಳನ್ನು ಅರಸಿಕೊಂಡು ಹೋಗುವ ಹದಿಹರೆಯದ ಯುವಕ-ಯುವತಿಯರು ಹೀಗೆ ಹಲವು ಬಗೆಯ ಜನರು ತಮ್ಮದೇ ಗುಂಗಿನಲ್ಲಿ ಅಡ್ಡಾಡುವುದು ಇತರರಂತೆ ಸ್ಕಾರ್-ಬೋರೋ ನಿವಾಸಿಗಳಿಗೂ ಹೊಸದೇನಲ್ಲ. ಆದರೆ ಕಳೆದ … Read more

ಹೊಸ ಸ್ನೇಹ: ಅನಂತ ರಮೇಶ್

ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ,  ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ.  ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, " ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು" ಅನ್ನುತ್ತಾಳೆ ಅಮ್ಮ. ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ … Read more

ಮರಳಿ ಬಂದನೆ ದೀಪು: ನಾಗರತ್ನಾ ಗೋವಿಂದನ್ನವರ.

ಮುಸ್ಸಂಜೆಯ ಸಮಯ ಕಡಲಿನ ಅಲೆಗಳು ಜೋರಾಗಿ ದಂಡೆಗೆ ಅಪ್ಪಳಿಸುತ್ತಾ ಇದ್ದರೂ ಅವುಗಳ ಕಡೆ ಗಮನ ಕೊಡದೆ ತನ್ನ ಇರುವನ್ನೆ ಮರೆತು ಮರಳಿನಲ್ಲಿ ಏನೆನೊ ಚಿತ್ತಾರಗಳನ್ನು ಬರೆಯುವುದರಲ್ಲಿ ಮಗ್ನಳಾಗಿದ್ದಳು ಸರೋಜಾ. ಅದೆಷ್ಟು ಹೊತ್ತು ಹಾಗೆ ಬರೆಯುತ್ತಿದ್ದಳೊ ತಕ್ಷಣ ಏನೊ ನೆನಪಾದವಳಂತೆ ಮೆಲಕ್ಕೆದ್ದು ವೇಗವಾಗಿ ನಡೆಯುತ್ತಾ ಲಾಡ್ಜ್‍ನ್ನು ತಲುಪಿದಳು. ಎದುರಿಗೆ ಬರುತ್ತಿದ್ದ ಸರೋಜಾಳನ್ನು ನೋಡಿದ ಕಿರಣಗೆ ವಿಪರೀತ ಕೋಪಬಂದು ಎಲ್ಲಿ ಹೋಗಿದ್ದೆ ನಿನಗಾಗಿ ಅದೆಷ್ಟೊತ್ತು ಅಂತ ಕಾಯೋದು. ಎಲ್ಲಿಯೂ ಹೋಗಿಲ್ಲಾ ನಡಿರಿ ಎನ್ನುತ್ತಾ ಅವನೊಡನೆ ಹೆಜ್ಜೆ ಹಾಕಿ ರೂಮಿನೊಳಗೆ ಹೋದಳು. … Read more

ಆಹಾ..ಬೆಂಗಳೂರು!!: ಎಸ್.ಜಿ.ಶಿವಶಂಕರ್,

ಪದೇಪದೇ ನಿಟ್ಟುಸಿರುಬಿಡುತ್ತಿದ್ದ್ದ್ದೆ! ಏನೋ ಒಂದು ರೀತಿಯ ಅಧೀರತೆ! ದುಗುಡ! ಯಾವ ಕೆಲಸವನ್ನೂ ಮಾಡಲಾರದೆ ಟಿವಿಯತ್ತ ನೋಡುತ್ತಿದ್ದೆ. ಜನಪ್ರಿಯ ಸೀರಿಯಲ್ಲಿನ ನಾಲ್ಕುನೂರ ಇಪ್ಪತ್ತನೆಯ ಎಪಿಸೋಡು ಬಿತ್ತರವಗುತ್ತಿತ್ತು! ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮೂಲ ಕತೆ ಹಳ್ಳ ಹಿಡಿದಿದೆ ಎನ್ನುವುದು ಗೊತ್ತಿದ್ದರೂ ರಬ್ಬರಿನಂತೆ ಎಳೆಯುತ್ತಿದ್ದರು! ನನ್ನವಳು ಹುರಿಳಿಕಾಯಯನ್ನು ಚಟಚಟನೆ ಮುರಿಯುತ್ತಾ, ತುಟುಪಿಟಿಕ್ಕನ್ನದೆ ಸೀರಿಯಲ್ಲಿನಲ್ಲಿ ಕಣ್ಣು ನೆಟ್ಟಿದ್ದಳು. ನಾಲ್ಕು ನಿಮಿಷ ಸೀರಿಯಲ್ಲಿನ ನಂತರ ಐದು ನಿಮಿಷದ ಜಾಹೀರಾತು! ಮತ್ತೆ ನಾಲ್ಕು ನಿಮಿಷ ಸೀರಿಯಲ್ಲು ಹೀಗೆ ಸಾಗಿತ್ತು ಸೀ..ರಿ..ಯಲ್ಲು! ದೀರ್ಘ ಜಾಹೀರಾತಿನ ನಡುವೆ ಮನೆಯವಳು … Read more

ಮದರ್ಸ್ ಡೇ: ಪಾರ್ಥಸಾರಥಿ ಎನ್

ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು,  ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ ಪಡೆದು, ನಡುಮನೆಗೆ ಬಂದು ಸೋಪಾ ಮೇಲೆ ಕುಳಿತರು. ಕಾಫಿ ಕುಡಿಯುತ್ತಿದ್ದರೂ, ಅದೆಂತದೋ ಹಿಂಸೆ, ಬಲಗಡೆ ಪಕ್ಕೆಯಲ್ಲಿ ಸಣ್ಣ ನೋವು.  ಅಲ್ಲಿಯೆ ಮತ್ತೊಂದು ಸೋಪದಲ್ಲಿ ಅಂದಿನ ಪತ್ರಿಕೆ ಹಿಡಿದು ಅದರಲ್ಲೆ ಮುಳುಗಿದ್ದ ಮಗ ಗೋಕುಲ್ ಕಡೆ ನೋಡಿದರು. ಅವನ ಮುಖದಲ್ಲಿ ಗಂಭೀರತೆ. ಮಗನ ಕೈಲಿ … Read more

ಪಂಜು ಕಾವ್ಯಧಾರೆ: ಪ್ರವೀಣಕುಮಾರ್. ಗೋಣಿ, ಈರಣ್ಣ ಬೆಂಗಾಲಿ, ಸುನೀತಾ ಕುಶಾಲನಗರ, ಕು.ಸ.ಮಧುಸೂದನ ನಾಯರ್

ನಾ   ಏನನ್ನಲಿ ? ಬಿಕ್ಕಳಿಸಿ  ಹೊರಹಾಕಿದ ದುಃಖದ  ಕುರುಹೇ ಇರದಂತೆ  ಮಂದಹಾಸ ಬೀರುವ ನಿನ್ನ  ಪರಿಗೆ  ನಾ  ಏನನ್ನಲಿ ? ಹೆಡೆಬಿಚ್ಚಿ  ಕುಣಿವ ನರಳಿಕೆಯ  ಬಚ್ಚಿಟ್ಟು ಅರಳಿದಾ  ಸುಮದಂತೆ ಕಂಗೋಲಿಸುವಾ ನಿನ್ನ  ಪರಿಗೆ  ನಾ  ಏನನ್ನಲಿ ? ಅಲೆಯಾಗಿ  ಬರುವ ವೇದನೆಗಳ ಒಳಗವಿತಿಟ್ಟು ಶಾಂತ  ಸಾಗರದಂತೆ ಸಹನೆಯ ಹೆಪ್ಪಾಗಿಸಿಕೊಂಡ ನಿನ್ನ  ಪರಿಗೆ  ನಾ ಏನನ್ನಲಿ ? -ಪ್ರವೀಣಕುಮಾರ್. ಗೋಣಿ           ಜೀವ ಜಲ ನೀರು ನಮಗೆ ಜೀವನಾಧಾರ ನೀರಿಗಿಲ್ಲ ಯಾವುದೇ … Read more

ಲಕ್ಷ್ಮೀ ಹಿಂಡು – ಪಂಚು ತಂಡ!: ಅಖಿಲೇಶ್ ಚಿಪ್ಪಳಿ

ರಹ! ರಹ!! ರಹ!!! ಎನ್ನುವ ಪಿಸುಧ್ವನಿಗಿಂತ ಕೊಂಚ ದೊಡ್ಡದಾದ ಧ್ವನಿ ಕೇಳಿ ನಿಂತದ್ದು ಬರೋಬ್ಬರಿ 8 ಅಡಿ ಎತ್ತರದ ಕಾಡಾನೆ ಲಕ್ಷ್ಮಿ ಮತ್ತು ಅದರ ಜೊತೆಗಿರುವ 25ಕ್ಕೂ ಹೆಚ್ಚು ಆನೆಗಳಿರುವ ಹಿಂಡು. ಧ್ವನಿಸಿದ್ದು, 5 ಅಡಿ ಎತ್ತರದ, ಶಾಶ್ವತವಾದ ನೌಕರಿಯಿಲ್ಲದ ಬರೀ 200 ರೂಪಾಯಿಗಳಿಗೆ ದಿನಗೂಲಿಗೆ ದುಡಿಯುವ ಪಂಚಾನನ್ ನಾಯಕ್ ಎಂಬ ಅರಣ್ಯ ಇಲಾಖೆಯ ವಾಚರ್!! 25ರ ಸಂಖ್ಯೆಯಲ್ಲಿರುವ ಆನೆಯ ಹಿಂಡಿಗೆ ಲಕ್ಷ್ಮೀಯೇ ನಾಯಕಿ. ಪಂಚಾನನ್ ಧ್ವನಿ ಕೇಳುತ್ತಿದ್ದಂತೆ, ಇಡೀ ಹಿಂಡು ಸ್ತಬ್ಧವಾಯಿತು. ಇಡೀ ಗುಂಪಿನ ವಯಸ್ಕ … Read more

ಕತೆಯಾಗದ ಕತೆ: ಪ್ರಶಸ್ತಿ

ಅದೆಷ್ಟೋ ಕಥೆಗಳು ಹುಟ್ಟೋ ಮೊದಲೇ ಸತ್ತಿರುತ್ತವೆ. ಒಂಚೂರು ಕಾಯೋ ತಾಳ್ಮೆಯಿಲ್ಲದ ಕತೃವಿನಿಂದ,ಖ್ಯಾತಿಯ ಹಿಂದೇ ಕಳೆದು ಹೋದ ಸ್ಪೂರ್ತಿಯಿಂದ. ಒಮ್ಮೆ ವಾವೆನಿಸಿದ್ದನ್ನೇ ಮತ್ತೆ ಮರುಸೃಷ್ಠಿಸೋ ಧಾವಂತದಲ್ಲಿ,ಹೊಸ ಪ್ರಯತ್ನ ಮತ್ತೆ ಸೋಲಿನತ್ತ ದೂಕಬಹುದೇನೋ ಎಂಬ ಆತಂಕದಲ್ಲಿ,ಬಾರದ ಬಹುಮಾನಗಳ ಕನವರಿಕೆಯಲ್ಲಿ, ಹಾರ-ತುರಾಯಿಗಳ, ಸನ್ಮಾನದ ಶಾಲುಗಳ ಮತ್ತೆ ಮತ್ತೆ ಹೊಚ್ಚಿಕೊಳ್ಳೋ ಹಪಾಹಪಿಯಲ್ಲಿ ಮುಂಚಿನ ಕತೆಗಾರ ಕಳೆದುಹೋಗಿರುತ್ತಾನೆ. ಬಹುಪರಾಕುಗಳ ಪಟಾಕಿಯ ಸದ್ದು ಕಿವಿಯ ಕಿವುಡಾಗಿಸೋ ಮುನ್ನ ಪ್ರಸಿದ್ದಿಯ ನಗರಿಯಿಂದ ಒಂದಿಷ್ಟು ದೂರ ಬಂದು ಒಂದಿಷ್ಟು ತಣ್ಣಗಿರೋ ಬೆಟ್ಟ ಹತ್ತಿ ಒಂದರೆಗಳಿಗೆ ಕೂತರೆ, ದೂರದೂರದ ದೃಶ್ಯ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಳಿ ಮಾರಾಟಗಾರ ನಜ಼ರುದ್ದೀನ್‌ ಒಂದು ದಿನ ನಜ಼ರುದ್ದೀನ್‌ ಪೇಟೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ವ್ಯಾಪಾರಿಗಳು ಪುಟ್ಟಪುಟ್ಟ ಗಿಳಿಗಳನ್ನು ತಲಾ ಒಂದಕ್ಕೆ ೨೦೦ ದಿನಾರ್‌ಗಳಂತೆ ಮಾರಾಟ ಮಾಡುತ್ತಿದ್ದದ್ದನ್ನು ಗಮನಿಸಿದ. ಅವನು ಆಲೋಚಿಸಿದ: ‘ಇಷ್ಟು ಪುಟ್ಟದಾಗಿರುವ ಒಂದು ಗಿಳಿಗೆ ೨೦೦ ದಿನಾರ್‌ ಬೆಲೆ ಇದ್ದರೆ ನನ್ನ ಮನೆಯಲ್ಲಿ ಇರುವ ದೊಡ್ಡ ಕೋಳಿಯ ಬೆಲೆ ಖಂಡಿತವಾಗಿಯೂ ೨೦೦ ದಿನಾರ್‌ಗಳಿಗಿಂತ ಅನೇಕ ಪಟ್ಟು ಹೆಚ್ಚು ಇರಲೇಬೇಕು.’ ಮಾರನೆಯ ದಿನ ನಜ಼ರುದ್ದೀನ್‌ ಪೇಟೆಬೀದಿಗೆ ತನ್ನ ಕೋಳಿಯಡನೆ ಬಂದ, ದೊಡ್ಡ ಮೊತ್ತದ ಹಣಕ್ಕೆ ಅದನ್ನು … Read more

ಗೋವಿಂದಯ್ಯನವರ ಗೃಹಬಂಧನ:ಕಿರಣ್ ಕುಮಾರ್ ಕೆ. ಆರ್.

'ನಾಳೆ ಅಪ್ಪನಿಗೆ ಟೌನಿಗೆ ಹೋಗ್ಲಿಕ್ಕೆ ಹೇಳ್ಬೇಕು.', ಎಂದುಕೊಂಡ ರಾಜಮೂರ್ತಿ. ಅಪ್ಪ ಗೋವಿಂದಯ್ಯನವರಿಗೆ ಎಂಬತ್ತರ ಆಸುಪಾಸು. ಅವರದು ಮೊದಲಿನಿಂದಲೂ ಸ್ವಲ್ಪ ದುರ್ಬಲ ಶರೀರ. ಶಾರೀರವೂ ಅಷ್ಟೆ, ದುರ್ಬಲ. ಆದರೂ ಅವರದು ಬಿಡುವಿಲ್ಲದ ಓಡಾಟ. ಒಂದೆಡೆ ಸುಮ್ಮನೆ ಕುಳಿತವರಲ್ಲ. ಎಲ್ಲೋ ಒಂದು ಮದುವೆ ಎಂದರೆ ಅಡಿಗೆಗೆ ಸಹಾಯಕ್ಕೆ, ಇನ್ನೆಲ್ಲೋ ಪೂಜೆ ಎಂದರೆ ಅಲ್ಲಿಗೆ 'ಸುಧಾರಿಸಲಿಕ್ಕೆ', ಮತ್ತೆಲ್ಲೋ ಶ್ರಾದ್ಧವೆಂದರೆ ಅಲ್ಲಿಗೂ ಕೆಲಸದಲ್ಲಿ ಕೈ ಜೋಡಿಸಲಿಕ್ಕೆ – ಒಟ್ಟಿನಲ್ಲಿ ಯಾವ ಸಮಾರಂಭವಾದರೂ ಗೋವಿಂದಯ್ಯ ಅಲ್ಲಿರುತ್ತಿದ್ದರು. ಅವರ ಜೀವನವಿಡೀ ಅವರು ಮಾಡಿದ್ದು ಇದನ್ನೇ. 'ಈ … Read more

ಪ್ರಾಯ.. ಪ್ರಾಯ..ಪ್ರಾಯ..: ಪ.ನಾ.ಹಳ್ಳಿ.ಹರೀಶ್ ಕುಮಾರ್

ಹರೆಯದ ಮಾತು ಬಲು ಸೊಗಸು, ಅಂದವಾಗಿರುವುದೆಲ್ಲ ನನ್ನದೆಂಬ ಭಾವನೆ, ಮೀಸೆ ಚಿಗುರುವ ವಯಸು, ನಾವೀನ್ಯತೆಗೆ ಚಡಪಡಿಸುವ ಮನಸು, ಸೊಲನ್ನೊಪ್ಪದೇ ಬರೀ ಗೆಲುವೇ ಬೇಕೆಂಬ ಹಂಬಲ, ಹದಿನೈದು ದಾಟಿ ಬಂದ ಈ ವಯಸ್ಸು ನೋಡಿದ್ದೆಲ್ಲಾ ಸುಂದರವಾಗೇ ಕಾಣಬೇಕು, ಕೇಳಿದ್ದೆಲ್ಲಾ ಸಂಗೀತವೇ ಆಗಿರಬೇಕು, ಕಷ್ಟಕಾರ್ಪಣ್ಯಗಳಿಲ್ಲದೇ ಕೇವಲ ಸುಖದಲ್ಲೇ ಒರಳಾಡಬೇಕೆಂಬ ತುಡಿತ ಈ ಹರೆಯದ್ದು. ಮನ್ಮಥನನ್ನೂ ನಾಚಿಸುವ ರಸಿಕತೆ, ಮದಕರಿಯನ್ನೂ ಮೀರಿಸುವ ಧೈರ್ಯ, ಜಗತ್ತನ್ನೇ ಗೆಲ್ಲಬಲ್ಲ ಆತ್ಮವಿಶ್ವಾಸ ಈ ಹುಚ್ಚುಕೋಡಿ ಮನಸ್ಸಿನದು. ಪರಾವಲಂಬನೆಯಿಂದ ಹೊರಬಂದು ಸ್ವಾವಲಂಬಿ ಜೀವನದತ್ತ ಮುಖಮಾಡುವ ಮಧ್ಯಂತರ ಅವಧಿಯೇ … Read more

ಡಾಬಿಲಿಡೂಬ ಮತ್ತು ಟುಸ್ಕಿಲಿ ಪುಸ್ಕಿಲಿ: ಹರಿಪ್ರಸಾದ್ ಕೆ.ಆರ್.

     ಒಂದಾನೊಂದು ಕಾಡು. ಆ ಕಾಡಿನಲ್ಲಿ ಒಂದು ಸಿಂಹ ವಾಸವಾಗಿತ್ತು. ಆ ಸಿಂಹದ ಹೆಸರು ಡಾಬಿಲಿಡೂಬ. ಒಂದುದಿನ ಡಾಬಿಲಿಡೂಬಾಗೆ ತುಂಬಾ ಹಸಿವೆಯಾಯಿತು. ಅದು ಆಹಾರ ಹುಡುಕಿಕೊಂಡು ಹೊರಟಿತು. ಎಷ್ಟೇ ಅಲೆದರೂ ಅದಕ್ಕೆ ಆಹಾರ ಸಿಗಲಿಲ್ಲ. ಹುಡುಕಿ ಹುಡುಕಿ ಅದಕ್ಕೆ ಸುಸ್ತಾಗತೊಡಗಿತು. ಸುಸ್ತಿನಿಂದ ಅದಕ್ಕೆ ಸಿಟ್ಟು ಬರತೊಡಗಿತು.   ಅದೇ ಸಮಯಕ್ಕೆ ಕಿಚಕಿಚ ಅಂತ ಶಬ್ದ ಕೇಳಿತು. ಶಬ್ದ ಕೇಳಿ ಸಿಂಹ ತಿರುಗಿ ನೋಡಿತು. ನೋಡಿದರೆ ಒಂದು ಪುಟ್ಟ ಇಲಿ. ಸಿಂಹಕ್ಕೆ ಇಲಿ ನೋಡಿ ಸಂತೋಷವಾಯಿತು. ಗಬಕ್ಕನೆ … Read more

ಕೊಲೆ: ಪ್ರಸಾದ್ ಕೆ.

ಅವನು ಮಾತಿಲ್ಲದೆ ಒಳಬಂದ. ನನ್ನಷ್ಟಕ್ಕೆ ನಾನು ರೇಜರ್ ಬ್ಲೇಡನ್ನು ಹಿಂದಕ್ಕೂ ಮುಂದಕ್ಕೂ ಉಜ್ಜುತ್ತಾ ಹರಿತಗೊಳಿಸುತ್ತಿದ್ದೆ. ಅವನ ಗುರುತು ಹಿಡಿದಾಕ್ಷಣ ನಾನು ನನಗರಿವಿಲ್ಲದಂತೆಯೇ ಸಣ್ಣಗೆ ನಡುಗಿದೆ. ನನ್ನ ಪುಣ್ಯಕ್ಕೆ ಅದನ್ನವನು ಗಮನಿಸಲಿಲ್ಲ. ನಾನು ನನ್ನ ಭಯವನ್ನು ತೋರಗೊಡದೆ ಬ್ಲೇಡನ್ನು ಹರಿತಗೊಳಿಸುವುದನ್ನು ಮುಂದುವರಿಸಿದೆ. ರೇಜರ್ ಬ್ಲೇಡನ್ನು ಹೆಬ್ಬೆರಳಿಗೆ ಕೊಂಚ ಒತ್ತಿ ಹಿಡಿದು, ಬೆಳಕಿಗೂ ಹಿಡಿದು ಪರೀಕ್ಷಿಸುತ್ತಾ ಸಾಕಷ್ಟು ಹರಿತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡೆ. ಅತ್ತ ಅವನೂ ಮಾತನಾಡುವ ಗೋಜಿಗೆ ಹೋಗದೆ ತನ್ನ ಸೊಂಟಕ್ಕೆ ಬಿಗಿದುಕೊಂಡಿದ್ದ, ಬಂದೂಕಿನ ಬುಲೆಟ್ಟುಗಳನ್ನು ಉದ್ದಕ್ಕೂ ಜೋಡಿಸಿದ್ದ ಬೆಲ್ಟ್ … Read more

ಶತ್ರುಗಳು ಯಾರೆಂಬುದು ತಿಳಿಯಿತು! ಅದು ನಾವೇ!!!: ಅಖಿಲೇಶ್ ಚಿಪ್ಪಳಿ

ವಿಶ್ವ ಭೂದಿನದಂದು ಇಡೀ ಭೂಮಿಯನ್ನು ಕಾಪಾಡಲು ಕಾಡು ಬೇಕು. ಆದ್ದರಿಂದ ಮಾರ್ಚ್ 22ರಂದು ವಿಶ್ವದ ಎಲ್ಲಾ ದೇಶಗಳಲ್ಲೂ ಆದಷ್ಟು “ಗಿಡ ನೆಡಿ” ಎಂಬ ಘೋಷವಾಕ್ಯಕ್ಕೆ ಒತ್ತು ಕೊಟ್ಟಿದ್ದರು. ದೇಶದ ಪ್ರಧಾನಿಯಿಂದ ಹಿಡಿದು ಹೆಚ್ಚೂ-ಕಡಿಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭೂದಿನದ ಅಂಗವಾಗಿ ಆಕರ್ಷಕವಾದ ಹೇಳಿಕೆಗಳನ್ನು ನೀಡಿದರು. ನಮ್ಮಲ್ಲಿಯ ಮಾಧ್ಯಮಗಳು ಭೂದಿನವನ್ನು ವಿಶೇಷವಾಗಿ ಪರಿಗಣಿಸಲಿಲ್ಲವೆಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ ಭೂಮಿ ಗುಂಡಗಿದೆ ಎನ್ನುತ್ತೇವೆ. ನಿಜವಾಗಲೂ ಭೂಮಿ ಗುಂಡಗಿದೆಯೇ? ದಿನದ 24 ತಾಸುಗಳಲ್ಲಿ ರಾತ್ರಿಯೆಷ್ಟು? ಹಗಲೆಷ್ಟು? ಖಂಡಗಳು ಚಲಿಸುತ್ತವೆಯೇ? ಹೀಗೊಂದಿಷ್ಟು ನಮ್ಮ … Read more

ಪಂಜು ಕಾವ್ಯಧಾರೆ

ಸಾರ್ಥಕತೆ! ನಗರ ವೃತ್ತ ಬದಿಯಲೊಂದು ವೃಕ್ಷ ಒಡಲಲ್ಲಿ ಹೊತ್ತಿತ್ತು ಹೊರಲಾರದ ಹೊರೆ ! ಎಸ್‍ಟಿಡಿ ಬೋರ್ಡು ಪಾರ್ಲರ್ ಕಾರ್ಡು ಜೆರಕ್ಸ್ ಅಂಗಡಿ ಬಾಣ ನೆರಳಲ್ಲೇ ಅಂಗಡಿ ಹೂಡಿದ ಪಾಷಾನ ಪಂಕ್ಚರು ಹತಾರೆ ಟ್ಯೂಬು ಟಯರುಗಳು ಸಿನೀಮಾ ಪೋಸ್ಟರುಗಳು ಮೈತುಂಬಾ ಉಡುಗೆ ಬಣ್ಣಬಣ್ಣದ ತೊಡಿಗೆ! ಮೊಳೆ ಚುಚ್ಚಿದ್ದರು ಹಗ್ಗ ಬಿಗಿದಿದ್ದರು ರೆಂಬೆ ಮುರಿದಿದ್ದರು ನೆತ್ತಿ ತರಿದಿದ್ದರು ಸುಣ್ಣ ಬಳಿದು ಚರ್ಮ ಸುಲಿದು ಕ್ರೌರ್ಯ ಉಣಿಸಿದ್ದರು! ದಟ್ಟ ನೆರಳು ನೀಡಿ ನೂರಾರು ಶುಕಪಿಕಗಳಿಗೆ ನೆಮ್ಮದಿಯ ಗೂಡಾಗಿ ಹಚ್ಚ ಹಸಿರಾಗಿ  ತನ್ನದೆಲ್ಲವ … Read more

ಕುರುಡುಮಲೆ ಪ್ರವಾಸ: ಪ್ರಶಸ್ತಿ

ಸ್ಥಳವೊಂದರ ಹೆಸರು ಕಾಲಕಾಲಕ್ಕೆ ಹೇಗೆ ಬದಲಾಗುತ್ತಾ ಸಾಗುತ್ತೆ ಅನ್ನೋದಕ್ಕೆ ಕೋಲಾರ ಮತ್ತು ಕುರುಡುಮಲೆ ಒಳ್ಳೆಯ ಉದಾಹರಣೆ ಅನಿಸುತ್ತೆ. ಮೂರನೆಯ ಶತಮಾನದಲ್ಲಿ ಗಂಗರ ಅಧೀನದಲ್ಲಿದ್ದ ಒಂದು ನಗರಿ ಕೂವಲಾಲಪುರ. ಅದು ನಂತರ ಚೋಳ,ಹೊಯ್ಸಳ, ವಿಜಯನಗರ ಅರಸರಿಂದ ಆಳಲ್ಪಡುತ್ತಾ ಕೋಲಾರಮ್ಮನ ದೇವಸ್ಥಾನವನ್ನು ಹೊಂದಿ ಕೋಲಾರವಾಯಿತಂತೆ. ಅದೇ ರೀತಿ ಬ್ರಹ್ಮ, ವಿಷ್ಣು, ಮಹೇಶ್ವರರು ಧರೆಗಿಳಿದು ಬಂದು ಕೂಡಿ ಮೂರ್ತಿಯನ್ನು ಪ್ರತಿಷ್ಟಾಪಿಸಿದರೆಂಬ ಪ್ರತೀತಿಯಿದ್ದರಿಂದ ಕೋಲಾರದ ಹತ್ತಿರದ ಸ್ಥಳವೊಂದಕ್ಕೆ ಕೂಟುಮಲೆಯೆಂದು ಹೆಸರಾಯಿತಂತೆ. ಕೂಟುಮಲೆ, ಕೂಡುಮಲೆ ಜನರ ಬಾಯಲ್ಲಿ ಕುರುಡುಮಲೆಯಾಗಿದೆಯೀಗ. ಹೋಗುವುದು ಹೇಗೆ ?  ಕೋಲಾರದಿಂದ … Read more