# # #
"ಬೆಳಿಗ್ಗೆ ತಲೆ ಸುತ್ತಂಗಾಗುತ್ತೆ ಅಂತ ಗೌರ್ನಮೆಂಟ್ ಆಸಪತ್ರೇಗೆ ಓಗಿದ್ದೆ. ಯಾವೋಳೋ ಚಿನಾಲಿ ಹೆತ್ತು ಈ ಮಗೀನ ಬಿಟ್ಟು ಓಗ್ಬಿಟ್ಟಿದಾಳೆ. ಎಣ್ಣು ಮಗಾ, ಕುತ್ಗೆ ಬೇರೆ ಸೊಟ್ಗೆ. ಅದ್ಕೆ ಯಾರೂ ತಗೊಂಡು ಹೋಗಲಿಲ್ಲವಂತೆ. ನಂಗೆ ಅಯ್ಯೋ ಅನಿಸ್ತು, ತಂದುಬಿಟ್ಟೆ".
ಈ ಅಂಗಮ್ಮನಿಗೆ ಮಕ್ಕಳಿರಲಿಲ್ಲವೇನೋ, ಸಿಕ್ಕಿದ ಮಗೂನ ತಂದಳು ಅನ್ಕೋಬೇಡಿ. ಅವಳಿಗೆ ಪೋಲಿಯೋದಿಂದ ಅಂಗವಿಕಲೆಯಾದ ಒಬ್ಬ ಮಗಳೂ ಸೇರಿದಂತೆ ನಾಲ್ವರು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳಿವೆ. ಗಂಡ ಬಿಟ್ಟು ಹೋಗಿದ್ದಾನೆ. ಇವಳು ಮತ್ತು ಇಬ್ಬರು ಹಿರಿಯ ಮಕ್ಕಳು ಅಲ್ಲಲ್ಲಿ ದುಡಿದರೆ ಹೊಟ್ಟೆಗೆ ಅನ್ನ; ಇಲ್ಲವಾದರೆ ಉಪವಾಸವೇ ಗತಿ. ಇದು ಹೆಣ್ಣು ಮಗು- ಅದರಲ್ಲೂ ಕತ್ತು ಸೊಟ್ಟಗಾಗಿದ್ದು.
"ನಿನ್ನ ಬಡತನ, ನಿನ್ನ ದೊಡ್ಡ ಸಂಸಾರಕ್ಕೆ ಇದ್ಯಾಕೆ ಬೇಕಿತ್ತು! ಹೇಗೆ ಸಾಕ್ತಿ?" ಎಂದಾಗ "ಆ ಮುರುಘ ಹೇಗೋ ಕೃಪೆ ಮಾಡದೇ ಇರ್ತಾನಾ? ಅಷ್ಟು ಜನಕ್ಕೆ ಅನ್ನ ಕಾಣಿಸೋ ಅವನು ಇದಕ್ಕೊಂದು ತುತ್ತು ಅನ್ನ ನೀಡಲಾರನಾ? ಬಿಡಿ ಅಮ್ಮಾ, ನಮ್ಮ ತಟ್ಟೇಲಿ ಒಂದೊಂದು ತುತ್ತು ಎತ್ತಿಹಾಕಿ ತಿನ್ನಿಸಿ ಇದನ್ನು ಸಾಕಿಯೇನು" ಎನ್ನುತ್ತಾ ಅದೊಂದು ಹೂವಿನ ದಂಡೆಯೇನೋ ಎಂಬಂತೆ ಮಗುವನ್ನು ಮೃದುವಾಗಿ ಹಗುರವಾಗಿ ಎದೆಗೆ-ಕೆನ್ನೆಗೆ ಒತ್ತಿಕೊಂಡಳು. ನನ್ನ ಮನಸ್ಸು ಅಂಗಮ್ಮಳನ್ನು ಅಂಜಲಿಯೊಡನೆ ತೂಗಿ ನೋಡತೊಡಗಿತು.
ರೇಖಾಚಿತ್ರಗಳು:ಉಪೇಂದ್ರ ಪ್ರಭು
('ಪಂಜು' ಓದುಗರಿಗಾಗಿ ಈ ವಾರದಿಂದ ರೇಷ್ಮಾ ಎ.ಎಸ್.,ಬಾಳೆಹೊನ್ನೂರು ಅವರ 'ಬದುಕಿನ ಬಣ್ಣಗಳು' ಕೃತಿಯಿಂದ ಆಯ್ದ ಬರಹಗಳನ್ನು ಅಂಕಣ ರೂಪದಲ್ಲಿ ನೀಡುತ್ತಿದ್ದೇವೆ. ಪ್ರಸ್ತುತ ಕೊಪ್ಪದ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರು ಹದಿಮೂರು ಪುಸ್ತಕಗಳ ಲೇಖಕಿ. ಶಿಶು ಸಾಹಿತ್ಯ, ಅಂಕಣ ಬರಹ, ನುಡಿಚಿತ್ರ ಇತ್ಯಾದಿ ವೈವಿಧ್ಯಮಯ ಬರಹಗಳಿಂದ ಸಾಹಿತ್ಯಲೋಕಕ್ಕೆ ಪರಿಚಿತರು. ಇವೆಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಅಕ್ಷರ ಪ್ರೀತಿ ತುಂಬಿದವರು. ಹದಿನೈದು ವರ್ಷಗಳ ಹಿಂದೆ ಪ್ರಕಟವಾಗಿದ್ದ, ಪುಟ್ಟ ಪುಟ್ಟ ಆದರೆ ಕಾಡುವ ಬರಹಗಳ ಸಂಕಲನ 'ಬದುಕಿನ ಬಣ್ಣಗಳು' ಈ ವಾರದಿಂದ ನಿಮ್ಮ ಓದಿಗೆ. –ಸಂ.)
nice
mana karaguva hangada nimma lekhana…. bhal ishta aatu.
ತಮಗೆ ಮೂರೊತ್ತು ತಿನ್ನಲು ಗತಿಯಿಲ್ಲದಿದ್ದರೂ ಅಂತಃಕರಣದಲ್ಲಿ
ಶ್ರೀಮಂತರಾದ ಇಂತ ಬಹಳಷ್ಟು ಹೆಂಗಸರನ್ನು ಗಾರೆ ಕಂಟ್ರ್ಯಾಕ್ಟರ್ ಆದ ನಾನು ನೋಡಿದ್ದೇನೆ.
ಅಂಗಮ್ಮಳಲ್ಲಿದ್ದ ಮಾನವೀಯತೆ ಮತ್ತು ತಾಯಿಯ ಮಮತೆ ನಿಜಕ್ಕೂ ಮನಮುಟ್ಟುವಂತಿದೆ.