ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 72): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨.    ಜಿ.ಎಸ್.ಎಂ (GSM)  ನ ವಿಸ್ತೃತ ರೂಪವೇನು?
೩.    ಅಧಿಕ ಪ್ರೋಟೀನ್ ಹೊಂದಿರುವ ಬೆಳೆ ಯಾವುದು?
೪.    ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ?
೫.    ೧೯೯೭ – ೨೦೦೩ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೬.    ಸೋಡಾ ವಾಟರ್‌ನಲ್ಲಿರುವ ಆಮ್ಲ ಯಾವುದು?
೭.     ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?
೮.    ೧೯೯೪ ರಲ್ಲಿ ರಾಮ್ ಜೇಠ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು?
೯.    ಉಗಾಂಡಾ ರಾಷ್ಟ್ರದ ಅಧೀಕೃತ ಭಾಷೆ ಯಾವುದು?
೧೦.    ೧೮೫೭ ರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದವರು ಯಾರು?
೧೧.    ತಮಿಳು ಭಾಷೆಯಲ್ಲಿರುವ ಬೌದ್ಧಗ್ರಂಥ ಯಾವುದು?
೧೨.    ಮಹಾಜನ್ ಆಯೋಗ ರಚಿಸಲಾದ ವರ್ಷ ಯಾವುದು?
೧೩.    ಸಿ.ಸಿ.ಕಿ ಇದು ಯಾರ ಕಾವ್ಯನಾಮವಾಗಿದೆ?
೧೪.    ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
೧೫.    ಗಂಡಬೇರುಂಡ ಪಕ್ಷಿ ಇದು ಕರ್ನಾಟಕದ ಯಾವ ಅರಸರ ರಾಜಮುದ್ರೆಯಾಗಿತ್ತು?
೧೬.    ಶಾರದಾ ಸಹಾಯಕ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೧೭.    ಮಾಣಿ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮.    ಭಾರತದ ಪ್ರಥಮ ಲೋಕಸಭಾ ಸ್ಪೀಕರ್ ಯಾರು?
೧೯.    ಪುನರ್‌ವನೀಕರಣ ಎಂದರೇನು?
೨೦.    ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?
೨೧.    ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
೨೨.    ರಾಷ್ಟ್ರೀಯ ಸಂಘಟಿತ ದಿನ ಯಾರ ಜನ್ಮ ದಿನವಾಗಿದೆ?
೨೩.    ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು ಯಾರು?
೨೪.    ಹೌರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೨೫.    ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಭಾರತದ ಏಕೈಕ ವ್ಯಕ್ತಿ ಯಾರು?
೨೬.    ಕೆರೆಗಳ ನೀರಾವರಿ ಅತಿಹೆಚ್ಚು ಅನುಕೂಲ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
೨೭.    ವಿದ್ಯುತ್ ದೀಪಗಳಲ್ಲಿ ಬಳಸುವ ಅನಿಲ ಯಾವುದು?
೨೮.    ಚೇತನ ಬಬೂರ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೯.    ೨೦೧೫ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಏಫ್ರಿಲ್ – ೦೭ ವಿಶ್ವ ಆರೋಗ್ಯ ದಿನ
ಏಫ್ರಿಲ್ – ೧೨ ವಿಶ್ವ ಬಾಹ್ಯಾಕಾಶ ದಿನ


ಉತ್ತರಗಳು:
೧.    ಸಿ.ಕೆ.ನಾಗರಾಜರಾವ್
೨.    ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್
೩.    ಸೊಯಾಬಿನ್
೪.    ಮಹಿಪತಿದಾಸರು
೫.    ಡಾ||ಭೀಮಲ್‌ಜಲನ್
೬.    ಕಾರ್ಬಲಿಕ್ ಆಮ್ಲ
೭.    ಮಸಾಲಾ ವಸ್ತುಗಳ ಉತ್ಪಾದನೆ
೮.    ಭಾರತೀಯ ಲೋಕ್ ಪಂಚಾಯತ್
೯.    ಇಂಗ್ಲೀಷ್
೧೦.    ಎಚ್.ವಿ.ಶೇಷಾದ್ರಿ
೧೧.    ಮಣಿಮೇ ಖಲೈ
೧೨.    ೧೯೫೬
೧೩.    ಸಿ.ಸಿ.ಕೃಷ್ಣಕುಮಾರ್
೧೪.    ಮಹಾರಾಷ್ಟ್ರ (ಮುಂಬೈ)
೧೫.    ಕೆಳದಿ ಅರಸರು
೧೬.    ಗಾಗ್ರಾನದಿ
೧೭.    ಶಿವಮೊಗ್ಗ
೧೮.    ಜಿ.ವಿ.ಮಾವಳಂಕರ್
೧೯.    ಕಾಡು ಕಡಿದಲ್ಲಿ ಮತ್ತೆ ಕಾಡು ಬೆಳೆಸುವುದು
೨೦.    ಉತ್ತರ ಪ್ರದೇಶ (ಕಾನ್ಪುರ)
೨೧.    ೧೨೦ ದಿನಗಳು
೨೨.    ಫಕ್ರುದ್ಧೀನ್ ಆಲಿ ಅಹಮ್ಮದ್
೨೩.    ಇ.ಪಿ.ರೈಸ್
೨೪.    ಪ.ಬಂಗಾಳ (ಕೋಲ್ಕತ್ತಾ)
೨೫.    ಎನ್.ಡಿ.ತಿವಾರಿ
೨೬.    ಶಿವಮೊಗ್ಗ
೨೭.    ಆರ್ಗಾನ್ & ಸಾರಜನಕ
೨೮.    ಟೇಬಲ್ ಟೆನ್ನಿಸ್
೨೯.    ಆಸ್ಪ್ರೇಲಿಯಾ
೩೦.    ಸತ್ಯಜಿತ್ ರೇ (ಭಾರತ ರತ್ನ ಗಳಿಸಿದ ಚಲನಚಿತ್ರ ನಿರ್ದೇಶಕ)

****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *