ಸಾಮಾನ್ಯ ಜ್ಞಾನ (ವಾರ 31): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು?
೨.    ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್‌ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?
೩.    ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು?
೪.    ಭಾರತೀಯ ಶಿಕ್ಷಣದಲ್ಲಿ ’ಮಹಾಸನ್ನದು’ ಎಂದು ಯಾವ ವರದಿಯನ್ನು ಕರೆಯುತ್ತಾರೆ?
೫.    ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ?
೬.    ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು?
೭.    ಮಧುರೈ ಯಾವ ನದಿಯ ದಂಡೆಯ ಮೇಲಿದೆ?
೮.    ಕ್ಯಾಲ್ಕುಲೇಟರ್ ಕಂಡು ಹಿಡಿದವರು ಯಾರು?
೯.    ಡೈಮಂಡ್ ಹಾರ್ಬರ್ ಎಲ್ಲಿದೆ?
೧೦.    ಸಲಾಲ್ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
೧೧.    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೋಫಿಕಲ್ ಮೆಟಲರ್ಜಿ ಎಲ್ಲಿದೆ?
೧೨.    ವಿದ್ಯುತ್ ಇಸ್ತ್ರೀ ಪೆಟ್ಟಿಗೆ ಕಂಡುಹಿಡಿದವರು ಯಾರು?
೧೩.    ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?
೧೪.    ಭಾರತಕ್ಕೆ ಸ್ವತಂತ್ರ ಸಿಕ್ಕ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಆಡಳಿತದಲ್ಲಿದ್ದ ಪಕ್ಷ ಯಾವುದು?
೧೫.    ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?
೧೬.    ಭಕ್ತಿಪಂಥ ಚಳುವಳಿಯ ಕಾಲದಲ್ಲಿ ರಾಮ ರಹೀಮ್ ಒಬ್ಬನೇ ಎಂದು ಹೇಳಿದವರು ಯಾರು?
೧೭.    ಅಂತರರಾಷ್ಟ್ರೀಯ ಪೆಥಾಲಜಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೧೮.    ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?
೧೯.    ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ?
೨೦.    ಅರುಣ್ ಲಾಲ್ ಘೋಷ ಯಾವ  ಕ್ರೀಡೆಗೆ ಸಂಬಂಧಿಸಿದವರು?
೨೧.    ಸೌರವ್ಯೂಹವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
೨೨.    ಭಾರತೀಯ ಸ್ಟೇಟ್ ಬ್ಯಾಂಕಿನ ಮೊದಲ ಅಧ್ಯಕ್ಷರು ಯಾರು?
೨೩.    ಕಣಜ ಕೃತಿಯ ಲೇಖಕರು ಯಾರು?
೨೪.    ಭಾರತವು ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆದ ವರ್ಷ ಯಾವುದು?
೨೫.    ೧೯೭೧ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ರಾಜ್ಯಪಾಲರು ಯಾರು?
೨೬.    ಗುಡ್ ಹೋಪ್ ಭೂಶಿರ ಯಾವ ದೇಶದಲ್ಲಿದೆ?
೨೭.    ತಕ್ಲಮಕಾನ್ ಮರಭೂಮಿ ಯಾವ ದೇಶದಲ್ಲಿದೆ?
೨೮.    ಶಹಜಾನ್ ಯಾರ ನೆನಪಿಗಾಗಿ ತಾಜ್‌ಮಹಲ್ ಕಟ್ಟಿಸಿದನು?
೨೯.    ದೇವ ಎಸ್.ಸುಕುಮಾರ ಇವರುಇವರು ಬರೆದ ’ಟಚ್ ಪ್ಲೇ’ ಪುಸ್ತಕದಲ್ಲಿ ಭಾರತದ ಯಾವ ಕ್ರೀಡಾ ಪಟುವಿನ ಬಗ್ಗೆ ಬರೆಯಲಾಗಿದೆ?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು:

೧.    ಗ್ರಾಮೀಣಾಭಿವೃದ್ಧಿ
೨.    ಪಂಜಾಬಿನ, ಭಟಿಂಡಾ ಕ್ಷೇತ್ರ
೩.    ಪೆನ್ಸಲಿನ್
೪.    ವುಡ್ಸ್ ವರದಿ
೫.    ಆಸ್ಟ್ರೇಲಿಯಾ
೬.    ೧೯೦೮
೭.    ವೈಗೈ
೮.    ಪ್ಯಾಸ್ಕಲ್
೯.    ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ
೧೦.    ಹಿಮಾಚಲ ಪ್ರದೇಶ
೧೧.    ಪುಣೆ
೧೨.    ಎಚ್.ಡಬ್ಲ್ಯೂ ಸೀಲೆ (ಯು.ಎಸ್.ಎ)
೧೩.    ಆತ್ಮಾರಾಮ್ ಪಾಂಡುರಂಗ್
೧೪.    ಲೇಬರ್
೧೫.    ಮಂಡ್ಯ
೧೬.    ಕಬೀರದಾಸರು
೧೭.    ಡಾ||ಎಸ್.ಜಿ.ನಾಗಲೋಟಿಮಠ
೧೮.    ಜಿನಿವಾ 
೧೯.    ಚನ್ನಪಟ್ಟಣ
೨೦.    ಈಜು
೨೧.    ನಿಕೋಲಸ್ ಕೋಪರ್ನಿಕಸ್
೨೨.    ಹೆಚ್.ವಿ.ಆರ್.ಅಯ್ಯಂಗಾರ್
೨೩.    ಡಾ||ಬೆಸಗರಹಳ್ಳಿ ರಾಮಣ್ಣ
೨೪.    ೧೯೪೫ರಲ್ಲಿ 
೨೫.    ಧರ್ಮವೀರ
೨೬.    ದಕ್ಷಿಣ ಆಫ್ರಿಕಾ
೨೭.    ಚೀನಾ
೨೮.    ಮಮ್ತಾಜ್ ಬೇಗಂ
೨೯.    ಪ್ರಕಾಶ ಪಡುಕೊಣೆ
೩೦.    ಮಲ್ಲಿಕಾರ್ಜುನ ಮನ್ಸೂರ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಸೋಮ
ಸೋಮ
4 years ago

Pls give me your phone number

1
0
Would love your thoughts, please comment.x
()
x