ಚುಟುಕ

ಮೂವರ ಚುಟುಕಗಳು: ಶಂಕರ್ ಕೆಂಚನೂರು, ಪ್ರತಾಪ್ ಬ್ರಹ್ಮವಾರ್, ರಾಜಶೇಖರ (ಬಂಡೆ)

ಪರಿತ್ಯಕ್ತರು
ಆ ಅರಳಿ ಕಟ್ಟೆಮೇಲೆ
ಒಂದಷ್ಟು ಜನ
ಹಿರಿಯರು,
ಇನ್ನೊಂದು ಕಡೆ
ಗಾಜು ಒಡೆದಿದ್ದಕ್ಕೆ
ಚಿತ್ರ ಮಾಸಿದ್ದಕ್ಕೆ
ಪೂಜೆಯ ಅರ್ಹತೆ
ಕಳೆದುಕೊಂಡ
ದೇವರ ಫೋಟೋಗಳು

-ಶಂಕರ್ ಕೆಂಚನೂರು

ಅನಾಥ ನಿರೀಕ್ಷೆ

ತುಕ್ಕು ಹಿಡಿದ ತಕ್ಕಡಿಯಂತ ಹೃದಯವನ್ನಾ 

ಅದ್ಯಾರದೋ ಮನಸ್ಸಿಗೆ ತೂಕಕಿಟ್ಟೆ  

ಅದೂ ಪಕ್ಕಾ ವ್ಯಪಾರಿ 

ತೂಕಿಸಿಕೊಂಡು 

ಮತ್ತೆ ಕೆಲಸಕೆ ಬರದ ತಕ್ಕಡಿಯೆಂದು ನನ್ನತ್ತ ತಳ್ಳಿತು 

ಅನಾಥ ಹೃದಯ ಮತ್ತೆ ಎತ್ತಿಕೊಳುವ 

ಮನಸಿಗೆ ಕಾಯುತಿಹುದು ಶಬರಿ ಕಾದಂತೆ  

-ಪ್ರತಾಪ್ ಬ್ರಹ್ಮವಾರ್

 

ಬಂಡೆಯ ಚುಟುಕಗಳು

ಮುಳುಗಡೆಗೆ ನಿಂತ ದೋಣಿ ನಾನಾಗಾಯಿತು,                       

ಹರೆಯ ಎಂದಿಗೂ ಬರಲೇಬಾರದಿತ್ತು,                  

ಹರಿಷಡ್ವರ್ಗ ಎನ್ನ ಕೊಲೆಯ ಮಾಡಿತ್ತು,      

ಚಿಣ್ಣನಾಗಿ ಇನ್ನೂ ಕನಸು ಕಾಣೋದಿತ್ತು,     

ಬಯಲೆಲ್ಲ ಸುತ್ತಾಡಿ ಕಾಲು ನೊಂದಿತ್ತು,      

ಹರೆಯ ಎಂದಿಗೂ ಬರಲೇಬಾರದಿತ್ತು…….!

*****

ಬಂಗಲೆ ಎದುರಿನ ರಸ್ತೆಯಲ್ಲಿ ಹೊರಟ ಬಡವನೊಬ್ಬನ ಇಡೀ ದೇಹ ಮರುದಿನ ನೇತಾಡುತ್ತಿತ್ತು,           

ಕಾರಣ                 

ನೆನ್ನೆ ಬಂಗಲೆಯೊಳಗಿಂದ ನಾಯಿ ಇವನ ಕಂಡು ಬೊಗಳುತ್ತಿತ್ತು.:-)

*****

-ರಾಜಶೇಖರ (ಬಂಡೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮೂವರ ಚುಟುಕಗಳು: ಶಂಕರ್ ಕೆಂಚನೂರು, ಪ್ರತಾಪ್ ಬ್ರಹ್ಮವಾರ್, ರಾಜಶೇಖರ (ಬಂಡೆ)

Leave a Reply

Your email address will not be published. Required fields are marked *