ಮೂವರ ಚುಟುಕಗಳು: ಶಂಕರ್ ಕೆಂಚನೂರು, ಪ್ರತಾಪ್ ಬ್ರಹ್ಮವಾರ್, ರಾಜಶೇಖರ (ಬಂಡೆ)

ಪರಿತ್ಯಕ್ತರು
ಆ ಅರಳಿ ಕಟ್ಟೆಮೇಲೆ
ಒಂದಷ್ಟು ಜನ
ಹಿರಿಯರು,
ಇನ್ನೊಂದು ಕಡೆ
ಗಾಜು ಒಡೆದಿದ್ದಕ್ಕೆ
ಚಿತ್ರ ಮಾಸಿದ್ದಕ್ಕೆ
ಪೂಜೆಯ ಅರ್ಹತೆ
ಕಳೆದುಕೊಂಡ
ದೇವರ ಫೋಟೋಗಳು

-ಶಂಕರ್ ಕೆಂಚನೂರು

ಅನಾಥ ನಿರೀಕ್ಷೆ

ತುಕ್ಕು ಹಿಡಿದ ತಕ್ಕಡಿಯಂತ ಹೃದಯವನ್ನಾ 

ಅದ್ಯಾರದೋ ಮನಸ್ಸಿಗೆ ತೂಕಕಿಟ್ಟೆ  

ಅದೂ ಪಕ್ಕಾ ವ್ಯಪಾರಿ 

ತೂಕಿಸಿಕೊಂಡು 

ಮತ್ತೆ ಕೆಲಸಕೆ ಬರದ ತಕ್ಕಡಿಯೆಂದು ನನ್ನತ್ತ ತಳ್ಳಿತು 

ಅನಾಥ ಹೃದಯ ಮತ್ತೆ ಎತ್ತಿಕೊಳುವ 

ಮನಸಿಗೆ ಕಾಯುತಿಹುದು ಶಬರಿ ಕಾದಂತೆ  

-ಪ್ರತಾಪ್ ಬ್ರಹ್ಮವಾರ್

 

ಬಂಡೆಯ ಚುಟುಕಗಳು

ಮುಳುಗಡೆಗೆ ನಿಂತ ದೋಣಿ ನಾನಾಗಾಯಿತು,                       

ಹರೆಯ ಎಂದಿಗೂ ಬರಲೇಬಾರದಿತ್ತು,                  

ಹರಿಷಡ್ವರ್ಗ ಎನ್ನ ಕೊಲೆಯ ಮಾಡಿತ್ತು,      

ಚಿಣ್ಣನಾಗಿ ಇನ್ನೂ ಕನಸು ಕಾಣೋದಿತ್ತು,     

ಬಯಲೆಲ್ಲ ಸುತ್ತಾಡಿ ಕಾಲು ನೊಂದಿತ್ತು,      

ಹರೆಯ ಎಂದಿಗೂ ಬರಲೇಬಾರದಿತ್ತು…….!

*****

ಬಂಗಲೆ ಎದುರಿನ ರಸ್ತೆಯಲ್ಲಿ ಹೊರಟ ಬಡವನೊಬ್ಬನ ಇಡೀ ದೇಹ ಮರುದಿನ ನೇತಾಡುತ್ತಿತ್ತು,           

ಕಾರಣ                 

ನೆನ್ನೆ ಬಂಗಲೆಯೊಳಗಿಂದ ನಾಯಿ ಇವನ ಕಂಡು ಬೊಗಳುತ್ತಿತ್ತು.:-)

*****

-ರಾಜಶೇಖರ (ಬಂಡೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Ganesh Khare
11 years ago

ಎಲ್ಲವೂ ಚೆನ್ನಾಗಿದೆ.

ಶ್ರೀವತ್ಸ ಕಂಚೀಮನೆ.

ಇಷ್ಟವಾದವು ಎಲ್ಲವೂ….

Rukmini Nagannavar
11 years ago

ಎಲ್ಲವೂ ಇಷ್ಟವಾದವು

Santhoshkumar LM
11 years ago

All are superb!!

4
0
Would love your thoughts, please comment.x
()
x