ವಿಶಾಲವಾದ ತಿಳಿಗೊಳ
ಅದರೊಳಗೆ ಇಣುಕಿ ನೋಡಿದರೆ
ಕಾಣುವುದು ಮಿರಿಮಿರಿ ಮಿಂಚುವ ತಳ
ಪ್ರತಿಬಿಂಬ ಕಾಣಲು ಸಾಕು
ಈ ಕನ್ನಡಿ ಜಲ ..!
ಅಪಾಯವೇನೂ ಇಲ್ಲವಾದರೂ
ಇದರಲ್ಲಿ ಯಾರೂ
ಸ್ನಾನ ಮಾಡಬೇಡಿ ; ಈಸಬೇಡಿ….
ಅತ್ತಿತ್ತ ಚಲಿಸುತ್ತಾ
ಮನಕ್ಕೆ ಮುದ ನೀಡುವ
ಬಣ್ಣ ಬಣ್ಣದ ಮೀನುಗಳ
ಹಿಡಿದು ಕೊಲ್ಲಬೇಡಿ
ಕಸಕಡ್ಡಿ , ಕಲ್ಲೆಸೆಯಬೇಡಿ
ಕಾಲು , ಕೋಲು ಹಾಕಿ ಕಲಕಿ
ತಿಳಿ ನೀರ ಕೆಡಿಸುವುದು ತಪ್ಪು
ಕೊಳಕ ತೊಳೆಯಲು
ಇದು ಜಾಗವೇ ಅಲ್ಲ
ಶುದ್ದ ಜಲ…!
ಬಾಯಾರಿದ್ದರೆ ಕುಡಿದುಬಿಡಿ ಒಂದಿಷ್ಟು
ದಡದಲ್ಲಿ ಕುಳಿತು
ಸವಿದುಬಿಡಿ ಸೌಂದರ್ಯ
ಇದಕ್ಕಿಂತ ಸುಖ ಬೇರೇನಿದೆ..?
ಒಂದು ಕೊಳ ನಿರ್ಮಲವಾಗಿಡುವುದು
ಸುಲಭ ಎಂದುಕೊಂಡಿರಾ…?
ಕಣ್ಣಲ್ಲಿ ಕಣ್ಣಿಟ್ಟು
ಬಹಳ ಕಾಲದಿಂದ ಕಾಯುತ್ತಿದ್ದೇನೆ
ಧಾರಾಳ ಕಷ್ಟ-ನಷ್ಟ ಅನುಭವಿಸಿದ್ದೇನೆ
ಕೊನೇತನಕ ಹೀಗೇ ಇರಿಸಿಕೊಳ್ಳಬೇಕೆಂಬ
ಛಲ ನನಗೆ
ಅದಕ್ಕೇ ಹೇಳುತ್ತಿದ್ದೇನೆ
ಸಹಕರಿಸದೇ ಹೋದರೂ
ಕೊನೆಪಕ್ಷ ಕದಡುವ ಕೆಲಸಕ್ಕೆ ಮಾತ್ರ
ಕೈ ಹಾಕಬೇಡಿ…..
ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ ಕಣ್ಣಂಚಿನ ನೋಟದಲಿ ಸೆರೆ ಹಿಡಿರುವೆ ನನ್ನ ಮನ ಮೋಹಿಸುವ ನಿನ್ನ ಪಿಸು ಮಾತುಗಳೆ ಚೆನ್ನ ನೀ ತಿರುಗೆ ನೋಡುವ ಆ ನೋಟ ಬಹು ರೋಮಾಂಚನ ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಸದಾ ನಿನ್ನ ನೋಡುವ ಆಸೆ ಮುಚ್ಚದೆ ಕಣ್ಣ ರೆಪ್ಪೆಯನ್ನ ಸವಿಯಲು ಕಾತುರ ನಿನ್ನ ತುಟಿ ಅಂಚಿನ ಸಿಹಿ ಜೇನನ್ನ ಸೆರೆ ಹಿಡಿದು ಬಂಧಿಸು ನಿನ್ನ ಮನಸಲಿ ನನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ […]
ಭಿತ್ತಿ ಚಿ(ಪ)ತ್ರ ಹಚ್ಚುವವರು ರಾತ್ರಿಯಿಡಿ ಕೈಯಲ್ಲಿ ಮೈದಾ ಅಂಟು ಎಳೆದೆಳೆದು ಕಿತ್ತೆಸೆವ ಭಿತ್ತಿಯ ನಂಟು ಗಂಟು ಕಟ್ಟುವ ಸಾಮ್ರಾಜ್ಯ ದೊಳಗೆ ತೇಪೆ ಹಚ್ಚಿ ಹಳತಿನ ಎದುರಲಿ ಹೊಸ ತೇಪೆಯ ತೆರೆಯೊಳಗೆ ದ್ವಿಚಕ್ರ ಕಾಲ ಋತುಮಾನ ಕಾಲಿನಲಿ ತುಳಿದು ತರುವ ಹೊಸತನ ಭಿತ್ತಿ ಚಿ(ಪ)ತ್ರ ಹಚ್ಚುವವರು ಮಾಸಿದ ಭಿತ್ತಿಗೆ ಬಣ್ಣದ ಕಾಗದ ಹಚ್ಚುವವರು ಕಿತ್ತೆಸೆಯಲಾಗದು ಕೆಲವರಂಟಿಸಿದ ಕಾಗದ ಕಣ್ಣೀರಿನಲಿ ಅದ್ದರೂ ಬಿಡದ ಅಂಟು ಈ ವರೆಗೆ ತಿಳಿದಿಲ್ಲ ದೂರವಾದರೂ ಉಳಿದಿದೆ ಸ್ಮೃತಿ ಪಟಲದಲಿ ನೆಂಪು ಹಲವಾರು ಕಾಗದಗಳಂಟಿದೆ ಮನದ […]
ಕಾವ್ಯಧಾರೆಯ ಪ್ರವಾಹದಲ್ಲಿ ನನಗಾಸರೆ ಸಿಗದೆ ಕೊಚ್ಚಿ ಹೋದೆನು ! ಮೂರು ಕವನಗಳು ಆತ್ಮೀಯ ಕಲ್ಪನೆಗಳಲ್ಲಿ ಚೆನ್ನಾಗಿ ಮೂಡಿಬಂದಿವೆ…ಎಲ್ಲಾ ಕವಿಮಿತ್ರರಿಗೆ ಶುಭಾಶಯಗಳು !
Olleya Kavanagalu…
Muvar kavitegalu channagive…………
ಸಹಕರಿಸದೇ ಹೋದರೂ
ಕೊನೆಪಕ್ಷ ಕದಡುವ ಕೆಲಸಕ್ಕೆ ಮಾತ್ರ
ಕೈ ಹಾಕಬೇಡಿ…..
ಸಾಲುಗಳು ಅದ್ಭುತ ಪ್ರಭಾವಶಾಲಿ ಸಾಲುಗಳು
prabhakar..
ಶಾರದಾ ಅವರೆ ತುಂಬಾ ಧನ್ಯವಾದಗಳು
ಹಸಿದವರ ಕನಸು ಕದ್ದವರು
* ನಾಗರಾಜ್ ಹರಪನಹಳ್ಳಿ . ಕಾರವಾರ
ಕವನ ಇಷ್ಟವಾಯ್ತು
ಎಲ್ಲಾ ಸಾಲುಗಳು ಮನಮಿಡಿಯುತ್ತವೆ
ತಲ್ಲೀನೆ
good sushma..