ಕಾವ್ಯಧಾರೆ

ಪಂಜು ಕಾವ್ಯಧಾರೆ

ಮುಖವಾಡ! 

ನಮಗೆ, 
ಹುಟ್ಟುತ್ತಲೆ ತೊಡಿಸುತ್ತಾರೆ
ಜಾತಿ ಧರ್ಮದ ಮುಖವಾಡ

ದೊಡ್ಡವರಾಗುತ್ತಲೆ ಮತ್ತೆ ನಾವೆ ತೊಡುತ್ತೇವೆ
ಬಣ್ಣ ಬಣ್ಣದ ಮುಖವಾಡ

ನಂಬಿದ ಹೆಂಡತಿಯ ಎದರು
ನಂಬದ ಗೆಳತಿಯೆದರೂ

ಪ್ರೀತಿಸುವ ಮಿತ್ರನ ಎದರು
ದ್ವೇಷಿಸುವ ಶತ್ರುಗಳೆದರೂ

ನಮ್ಮ ವೃತ್ತಿಗೊಂದರಂತೆ ಇದೆ ಮುಖವಾಡ
ಪ್ರವೃತ್ತಿಯಾಗಿ ಮತ್ತೆ ಬೇರೆ ಮುಖವಾಡ

ಸಾರ್ವಜನಿಕ ಬದುಕಿನಲ್ಲಿ
ಮುಖವಾಡಗಳದೆ ಮೇಲುಗೈ

ಮುಖವಾಡವಿಲ್ಲದೆ ಕ್ಷಣಹೊತ್ತು
ಬದುಕಲಾರೆವು ನಾವು

ನಾವು ಮುಖವಾಡ ಕಳಚುತ್ತಲೆ ಇಲ್ಲ
ಕನ್ನಡಿ ತೋರುವ ಮುಖ ನಮ್ಮದೆಂದು ನಂಬಿರುವೆವು ಎಲ್ಲ

ನಿಜವಾಗಿ ನಾವು ನಾವೇ ಅಲ್ಲ
ಯಾರು ಯಾರಿಗೊ ಏನೇನೊ ಎಲ್ಲ!

ಪ್ರಶಾಂತ ಎಮ್. ಕುನ್ನೂರ, 

prashanth-kunnur

 

 

 

 


ಜೀವಕಳೆ

ಕಣ್ಣಿನ ರೆಪ್ಪೆಯ ಹಿಂದೆ
ಬಿಂಬವು ನಿನ್ನದಿದೆ
ಚೆಲ್ಲಿದ ಬೆಳಕಿನ ಕಿರಣ
ಸೆಳೆದಿದೆ ಎನ್ನಯೆದೆ

ಸಂಜೆಯ ಸುಳಿವನು ಅರಿತು
ಕಾಡುತಿದೆ ಕನಸುಗಳ
ಮಾತದು ಮೌನದಿ ಬೆರೆತು
ಅರಳಿಸಿದೆ ಭಾವಗಳ

ನಾಚಿದ ನಗುವನು ಕಂಡು
ಮೂಡಿತಿದೆ ಅನುರಾಗ
ಕಂಗಳ ಕಾಂತಿಗೆ ಕರಗಿ
ಹಾಡುತಿಹೆ ನವರಾಗ

ಮನಸಿನ ಮಾತನು ಕೇಳಿ
ನೆನಪಿಸಿದೆ ಸೋನೆಮಳೆ
ಒಲವಿನ ನಂಟಿಗೆ ಇನಿಯೆ
ತುಂಬುತಿದೆ ಜೀವಕಳೆ

-ಮಂಜು ಹೆಗಡೆ

manju-hegde

 

 

 

 


ಅತ್ತಿದ್ದು ಸಾಕು ಅಮ್ಮ ನೀನಿನ್ನು
ನಾನಿರುವೆ ಒರೆಸಲು ಕಣ್ಣ ನೀರನ್ನು 

ಹೆಣ್ಣಾಗಿ ಹುಟ್ಟಿ ನೀ ಪಟ್ಟ
ಪಾಡು ಬೇಡ ಬೇರಾರಿಗೂ 
ಅಪ್ಪ ಎನ್ನುವ ಪಟ್ಟ ಹೊತ್ತವ
ದುಷ್ಟ ಬೇಡ ಬೇರಾರಿಗೂ

ನಿನ್ನ ಬಳಸುವಾಗಿದ್ದ ಕಾಳಜಿ 
ನಮ್ಮಿಬ್ಬರ ಬದುಕಿಸುವಾಗ ಅವನಿಗಿಲ್ಲ
ಹೆಣ್ಣಾಗಿ ಬದುಕುವುದೇ ಕಷ್ಟವಿರುವಾಗ
ತಾಯಿ ಪಟ್ಟ ಕಟ್ಟಿ ಬಿಟ್ಟು ಹೋದನಲ್ಲ

ಬೀದಿಯಲ್ಲೇ ನಮ್ಮಿಬ್ಬರ ಬದುಕು 
ನನಗೆ ನೀನು ನಿನಗೆ ನಾನು ಎಲ್ಲದಕ್ಕೂ 
ನೋಯದಿರು ತಾಯಿ ನೀನು 
ಸದಾ ನೆರಳಾಗಿರುವೆ ನಾನು 

ಮೈಗೆ ಬಟ್ಟೆ  ಇರದಿದ್ದರೇನು
ನಿನ್ನೊಲವ ಬಿಸಿಯಪ್ಪುಗೆ ಇರಲು
ಹಸಿದ ಹೊಟ್ಟೆ  ಹಪಹಪಿಸಿದರೂ
ಹಂಚಿ ತಿನ್ನುವ ನಿನ್ನ ಮನವಿರಲು

ನಿನ್ನ ನೋಯಿಸಿದ ಜಗಕ್ಕಿರಲಿ
ನನ್ನದೂ ಒಂದು  ದಿಕ್ಕಾರ
ನೀ ಅನುಭಿಸಿದೆಲ್ಲಾ ಅನುಮಾನವ
ಅಭಿಮಾನವಾಗಿಸಿಕೊಂಡು ಪಡೆವೆ ಸಂಸ್ಕಾರ 

ತಲೆ ತಗ್ಗಿಸಿ ನಿಲ್ಲಬೇಕು ಸಮಾಜ 
ನಮ್ಮದು ಪರಿಸ್ಥಿತಿಯ ಕಂಡು
ತಲೆ ಎತ್ತಿ ಬಾಳಿ ಬಾಳಿಸುವೆ
ಅಮ್ಮ ನಿನ್ನೊಲವಾಮೃತ ಉಂಡು

-ಅಮುಭಾವಜೀವಿ

amu

 

 

 

 


ಆ ಹನಿ

ತಟ್ಟನೆ ಬೀಸಿದ ಗಾಳಿಯಷ್ಟೆ
ರಭಸದಲಿ ತೊಟ್ಟಿಕ್ಕಿತು ಕಣ್ಣೊಳಗೆ
ಬೆರಳ ತುದಿಗೆ ತಂದು
ನೋಡಬೇಕೆನ್ನುವಷ್ಟರಲ್ಲೇ
ಪಟ್ಟನೆ ಮಾಯವಾದ
ಅದರ ಹುಡುಕಾಟದಲ್ಲಿ ನಾನೂ
ಅಯ್ಯೋ

ಅಂದ ಹಾಗೆ ಅದು
ಮಳೆ ಹನಿಯಲ್ಲ ನೀರ ಹನಿಯೂ ಅಲ್ಲ
ನನ್ನ ಪ್ರಿಯ ಸಖಿಯ ಕಣ್ಣೀರ ಹನಿ
ಒಂದು ಕ್ಷಣದಲ್ಲೇ
ನನ್ನ ಕಣ್ಣೊಳಗೆ ಧುಮುಕಿ ವಿಲೀನ 
ಪ್ರತ್ಯೇಕಿಸಿಲಾರದೆ ಗುರುತಿಗೂ ಸಿಗದೆ
ನನ್ನೊಳಗೆ ಎಲ್ಲೋ
ಮನ ತೊಳಲಾಟಕೆ ಸಿಕ್ಕಿ
ಹುಡುಕಾಟ ನಡೆಯುತ್ತಿದೆ ಬಲು ಎಚ್ಚರದಲಿ
ಅಳಲೇಬಾರದು ಅತ್ತು ಬಿಟ್ಟರದು
ಉದುರಿಬಿಡಬಹುದೆಂಬ ಭಯ
ಸದಾ
ನನ್ನ ಅಳುವಿಗೆ ತಡೆಗೋಡೆಯಾಗಿ 
ಕಣ್ಣ ವಹಿಯೊಳಗಿರಲಿ
ಭದ್ರವಾಗಿ
-ಸುನೀತ.ಕುಶಾಲನಗರ

Sunitha K

 

 

 

 


"ಗಜ್ಹಲ್‌"

ಮತ್ತದೆ ಮಾದಕ ಹೆಜ್ಜೆ ಕರೆತಂದಿದಿಂದು ನಿನ್ನ ಮನದಂಗಳಕೆ
ಮತ್ತೆ ಭಯದ ಬಯಲಿನಲಿ ನಡುಗುತಿದೆ ಮನ ಸೊಲುವೆನೆಂದು

ನಿನ್ನ ಮನವನೊಮ್ಮೆ ಕೇಳಿಬೀಡು ಮತ್ತೆ ತೋರೆದೊಗುವದೇನು?
ಮತ್ತೆ ತಲೆ ತಗ್ಗಿಸಭಾರದು ನಾನು ಪ್ರೀತಿಯ ಸೋಲಿನಲಿ

ಬದುಕು ನನ್ನನ್ನಿಲ್ಲಿ ತಂದು ನಿಲ್ಲಿಸಿದೆ, ನೀ ಬರಬೇಡ ಜೊತೆಗಿಂದು
ನೀ ಮಾಯಾವಿ, ಮೊಸದ ಚಂದಗಾತಿ, ಸಾಯಿಸಬೇಡವೆ ನನ್ನ;

ಬದುಕೊಂದು ಕದನ ನಾ ಜಯಿಸಬೇಕಿದೆ ಅದನ
ಮತ್ತೆ ಸೊಲಿನ ಸುಳಿಯಲಿ ಸಿಲುಕಿಸಿ ನಲುಗಿಸದಿರೇನ್ನ

ನೋಯುತಿಹವು ಎಷ್ಟೊ ಮನಸುಗಳು ನಿನ್ನ ನಂಭಿ ಏ ಪ್ರೀತಿಯೇ
ಇನ್ನಾದರು ನಿಲ್ಲಿಸು ನಿನ್ನಾಟವನು ಮನಸು ಮಸಣವಾಗುವ ಮುನ್ನ

ಬದುಕಿನ ಚಿಲುಮೆಯಾಗು, ನೀ ಜೀವದ ಗೆಲುವಾಗು,
ಅದನು ಬಿಟ್ಟು ಸ್ಮಶಣದ ತವರಾಗದಿರು ಪಾಪಿ ಪ್ರೇಮವೇ;…,

-ಸಿದ್ದುಯಾದವ್‌ ಚಿರಿಬಿ

sidduyadav

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *