ಚುಟುಕ

ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ.

 

ದನಿಯಾಗದ ಹನಿಗಳು 

೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ 
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ 
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!  
 
೨.
ದುಃಖ ಸತ್ಯಗಳು 
ನನ್ನ ನೋಡಿ 
ನಗುತಿದೆ;
ದುಃಖ ಮರೆಯಲು 
ನಾನೂ..!  
 
೩.
'ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?' 
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
'ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!'  
ಉತ್ತರಿಸಿತು ಕಣ್ಣು.  
 
೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ 
ಮರದ ಬೇರುಗಳು 
ಭೂಗರ್ಭದಲಿ ಬಿಗಿದಪ್ಪಿದವು..!
 
-ಹುಸೇನ್ ಎನ್ 

 

ತಂಗಾಳಿ..

ಪ್ರಿಯೆ ನೀನಿಲ್ಲದ ಜೀವನ ,
ಭಾವನೆಗಳಿರದ ಬರಿಯ ಪದಗಳ ಕವನ ,
ಬಾ ಬೇಗ ಬಾಡಿರುವ ಬದುಕಿಗೆ  ಮರಳಿ ,
ಬೀಸಿದಂತೆ  ಬರಡು  ಭೂಮಿಯಲ್ಲಿ ತಂಗಾಳಿ…

-ಶೀತಲ್

 

ಗೌರವ

ನಾಲಗೆ ಸಡಿಲಾಗಿ
ಮಾತು ಹಗುರಾದಾಗ
ಗಳಿಸಿದ್ದೆಲ್ಲಾ
ಮಣ್ಣುಪಾಲು!

-ಹರಿಪ್ರಸಾದ್ ಎ.

 

ಜ್ಞಾನಾರ್ಜನೆ

ಕೆಲವಂ ಬಲ್ಲವರಂ ಕಾಡಿ

ಕೆಲವಂ ಬಲ್ಲವರಂ ಬೇಡಿ

ಕೆಲವು ಬಲ್ಲವರಂ ಕಾಡಿ, ಬೇಡಿ

ಮತ್ತೆ ಕೆಲವರಂ ಕಾಡಬೇಡಿ

ಇನ್ನು ಕೆಲವರು ಬೇಡ ಬಿಡಿ…

-ಉಪೇಂದ್ರ ಪ್ರಭು

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ.

  1. ದನಿಯಾಗದ ಹನಿಗಳು -by -ಹುಸೇನ್ ಎನ್
    ತಂಗಾಳಿ.-by -ಶೀತಲ್
    ಗೌರವ-by -ಹರಿಪ್ರಸಾದ್ ಎ.
    ಜ್ಞಾನಾರ್ಜನೆ-by -ಉಪೇಂದ್ರ ಪ್ರಭು
    alla hanigavanagalu uttamavagive.
    attracts the readers. by inner meanings.
    ಗೌರವ-thumba istavaythu

  2. ಹನಿಗಳು ತೊಟ್ಟಿಕ್ಕುತ್ತಿವೆ….
    ರುಚಿಯೊಂದಿಗೆ….ಚೆನಗನಾಗಿವೆ…ಧನ್ಯವಾದಗಳು !

  3. ಮೆಚ್ಚಿದ ಮಹನೀಯರಿಗೆ ಧನ್ಯವಾದಗಳು .. ಪಂಜುವಿನ ಅಖಾಡಕ್ಕೆ ಕರೆ ತಂದ ನಟರಾಜಣ್ಣನಿಗೆ ಹ್ರಿದಯಸ್ಪರ್ಶಿ ಧನ್ಯವಾದ ..  

Leave a Reply

Your email address will not be published. Required fields are marked *