ಹಾಸ್ಯ

ಕೊಂಕು….ಕೊಂಚ ಕಚಗುಳಿಗೆ !: ಸಂತೋಷ್ ಕುಮಾರ್ ಎಲ್ ಎಮ್

 

ಕೆಲ ಸುದ್ದಿಗಳು ಟಿವಿಯಲ್ಲಿ ಬಂದಾಗ ಒಮ್ಮೊಮ್ಮೆ ನಾವು ಹೀಗೆ ಮಾತಾಡಿಕೊಳ್ಳುವುದುಂಟು.

ಇದು ಆ ಕ್ಷಣದಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆ. ಕೇವಲ ಹಾಸ್ಯದ ದೃಷ್ಟಿಯಿಂದಷ್ಟೇ ಈ "ಕೊಂಕು" ಬರಹ.

ಯಾವುದೇ ಕೊಂಕನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿಸಿಕೊಳ್ಳುತ್ತಾ…


ಸುದ್ದಿ: ಕೇವಲ ಜನಸೇವೆ ಸಾಕು, ನನಗೆ ಅಧಿಕಾರ ಬೇಡ- ಯೆಡ್ಡಿ

ಕೊಂಕು: ಸುಮ್ನಿರಿ ಸಾರ್, ಜನರಿಗೆ ಆಸೆ ತೋರಿಸಬೇಡಿ!!


ಸುದ್ದಿ: ಲಾರಿ ಮಗುಚಿ, ತುಂಬಿದ್ದ ನ್ಯೂಸ್ ಪೇಪರ್ ಗಳೆಲ್ಲ ಚೆಲ್ಲಾಪಿಲ್ಲಿ

ಕೊಂಕು: ನಾಳೆ ಈ ಸುದ್ದಿ ಜನಗಳಿಗೆ ಹೇಗೆ ತಲುಪುತ್ತೆ ಸರ್ ?!


ಸುದ್ದಿ: ಉಗ್ರ ಕಸಬ್ ನನ್ನು ನೇಣಿಗೆ ಹಾಕಲು ವಿಳಂಬ ಮಾಡಿದ ಸರ್ಕಾರ

ಕೊಂಕು: ಕಸವನ್ನು ವಿಲೇವಾರಿ ಮಾಡೋದೇ ನಮ್ಮಲ್ಲಿ ಬಹಳ ಲೇಟು.

ಇನ್ನು "ಕಸ-ಬ್ ವಿಲೇವಾರಿ" ಏನು ಮಹಾ ಬಿಡಿ!!


ಸುದ್ದಿ: ಮತ್ತೆ ಸಿಎಂ ಆದ್ರೆ, 48 ಗಂಟೆಗಳಲ್ಲಿ ನೇತ್ರಾವತಿ ಹರಿಸುತ್ತೇನೆ: ಮಾಜಿ ಸಿಎಂ 

ಕೊಂಕು: ಖಂಡಿತ ಸ್ವಾಮಿ, 48 ಗಂಟೆ ಯಾಕೆ ? ಬಿಟ್ಟರೆ, ಬರೇ ಒಂದೇ ಗಂಟೆಯಲ್ಲಿ ನೇತ್ರಾವತಿ ಹರಿಸುತ್ತೀರಾ..ಜನಗಳ ಕಣ್ಣಿಂದ!!


ಸುದ್ದಿ: ಯಡ್ಡಿಯವರ ಅರೆಸ್ಟ್ ವಾರಂಟ್ ಸಂತೋಷ ತಂದಿಲ್ಲ: ಕುಮಾರಸ್ವಾಮಿ 

ಕೊಂಕು: ಪಾಪ, ಇನ್ನೇನೇನು ಕೇಳ್ಕೊಂಡಿದ್ರೋ. ನಿರಾಶೆಯಾಗಿದೆ!!


ಸುದ್ದಿ: ಯಡಿಯೂರಪ್ಪ ಋಣ ತೀರಿಸಲು ರಾಜೀನಾಮೆ ನೀಡಿರುವೆ: ಶೋಭಾ ಕರಂದ್ಲಾಜೆ

ಕೊಂಕು: ಮೊನ್ನೆ ಚುನಾವಣೆಯಲ್ಲಿ ಗೆದ್ದಾಗ, ಅದೇನೋ….ಜನಗಳ ಋಣ ಅಂತ ಹೇಳಿದ್ರಲ್ವ ?!


ಸುದ್ದಿ: ಖ್ಯಾತ ಚಿತ್ರನಟಿ ಪೂಜಾಗಾಂಧಿಯ ಮದುವೆ ನಿಶ್ಚಿತಾರ್ಥದಲ್ಲೇ ಅಂತ್ಯ.

ಕೊಂಕು: ಪರವಾಗಿಲ್ಲ ಸ್ವಾಮಿ, ನಿಶ್ಚಿತಾರ್ಥವಾದರೂ ಆಯ್ತಲ್ಲ, ಖುಷಿಪಡಿ.

ಆಕೆಯ ಮೊದಲನೇ ಚಿತ್ರದಲ್ಲಿ ನಾಯಕನಿಗೆ ಆ ಯೋಗವೂ ಇಲ್ಲ!!


-ಸಂತೋಷ್ ಕುಮಾರ್ ಎಲ್ ಎಮ್

ಕನ್ನಡದ ಬರಹಗಳನ್ನು ಹಂಚಿ ಹರಡಿ

20 thoughts on “ಕೊಂಕು….ಕೊಂಚ ಕಚಗುಳಿಗೆ !: ಸಂತೋಷ್ ಕುಮಾರ್ ಎಲ್ ಎಮ್

  1. 🙂 ಚೆನ್ನಾಗಿದೆ ಸರ್. ಧನ್ಯವಾದಗಳು 

  2. ಇದೇನು ಸಂತೋಷ್ ಎಲ್ಲಿಟ್ಟಿದ್ರಿ ಈ ಸರಕು.. ಸಕತ್ತಾಗಿದೆ.. ಶೋಬಕ್ಕ ಮತ್ತು ಪೂಜಾಗಾಂದಿ ಕೊಂಕು ತುಂಬಾ ಹಿಡಿಸಿತು..

    1. ಧನ್ಯವಾದಗಳು ಕೃಷ್ಣಮೂರ್ತಿ ಸರ್, ಕಚಗುಳಿ ಇಡುವುದರಲ್ಲಿ ನೀವು ಪರಿಣಿತರು. ಹೊಸ ಪ್ರಯೋಗವಾದ್ದರಿಂದ ಹೇಗಿದೆಯೋ ಎಂಬ ಕುತೂಹಲವಿತ್ತು. ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು:)

  3. ಉತ್ತಮ ಸಂಗ್ರಹ….ಚೆನ್ನಾಗಿದೆ….ಕಚಗುಳಿ ಗ್ಯಾರಂಟಿ….

  4. ನಿಮ್ಮ ಹಾಸ್ಯ ಪ್ರಜ್ನೆ ತುಂಬಾ ಮೊನಚಾಗಿದೆ;  ಹೀಗೇನೇ ಬರೆಯುತ್ತಿರಿ.
    ಶುಭವಾಗಲಿ.

  5. ;())))
    ನಿಮ್ಮ ಹಾಸ್ಯ ಪ್ರಜ್ನೆ ತುಂಬಾ ಮೊನಚಾಗಿದೆ;
     ಹೀಗೇನೇ ಬರೆಯುತ್ತಿರಿ.
    +1
    ಶುಭವಾಗಲಿ
     
    \|/

Leave a Reply

Your email address will not be published. Required fields are marked *