ನಿಸ್ವಾರ್ಥ..
ಒಕ್ಕಲಿಗ ನೆಟ್ಟ ಗಿಡ
ಇಂದು ದೊಡ್ಡ ಮರವಾಗಿ
ನೆರಳಾಗಿ ನಿಂತಿದೆ ದಣಿದ ದೇಹಕೆ
ಯಾವ ಭೇದವನ್ನು ತೋರದೆ
ಫಲ!
ಭೂ ತಾಯಿ ಕೊಟ್ಟ ನೀರಿಂದ
ರೈತ ಸುರಿಸಿದ ಬೆವರಿಂದ
ಫಲಸಿಕ್ಕಿತು!
ಹೊಟ್ಟೆಗೆ ಅನ್ನ
ಜೊತೆಗೆ
ಮುಚ್ಚಿಕೊಳ್ಳಲು ಮಾನ!!
-ಮಂಜು ವರಗಾ
ಕಣ್ಣೀರು
ಅತ್ತುಬಿಡು ಎಂದಾಗ,
ಬರದ ಹನಿ,
ಅಳಬೇಡ ತಡೆಯೆಂದಾಗ,
ಉಕ್ಕಿ ಹರಿವ ಧಾರೆ!!
ಹೃದಯ
ಇದ್ದಾಗ,
ಕೊಂಚವೂ ಗೋಚರಿಸದ ,
ತನ್ನನ್ನೇ ಕೊಟ್ಟು ಬರಿದಾದ ಮೇಲೆ,
ಭಾರ ತೋರುವ,
ಏಕೈಕ ವೈಚಿತ್ರ್ಯ!!
ಕಣ್ಣು
ತೆರೆದಿದ್ದಾಗ
ಇದ್ದುದನ್ನು
ಮಾತ್ರ ತೋರುವ,
ಮುಚ್ಚಿದಾಗ
ಏನೇನನ್ನೋ
ತೋರುವ
ಪ್ರಚೋದಕ!!
-ಸಂತೋಷ್ ಕುಮಾರ್ ಎಲ್ ಎಮ್
Chenda bandide….Both write ups…:))
Thank u Sunitha:)
ಎಲ್ಲವೂ ಚೆನ್ನಾಗಿವೆ..ಇಬ್ಬರಿಗೂ ಹಾಗು ಪ೦ಜು ಪತ್ರಿಕೆಗೂ ಧನ್ಯವಾದಗಳು
Thank u Ramachandra sir 🙂
ಚೆನ್ನಾಗಿದೆ ಶುಭವಾಗಲಿ ಗೆಳೆಯರೇ
Thank you Divya for your continuous encouragement:)
ಇಲ್ಲಿ ಪ್ರಕಟಿಸಿರುವ ಐದೂ ಚುಟುಕುಗಳು ಚೆನ್ನಾಗಿವೆ.
Thanks Rajendra sir:)
ಚುಟುಕುಗಳು ಇರುವುದು ನಾಲ್ಕೈದು ಸಾಲು, ಆದರೆ ಅದರ ಭಾವಗಳು ಪುಟಗಳಷ್ಟು… ಚೆನ್ನಾಗಿದೆ ….
Thanks Sumathi:)
dhanyavaadagalu geleyare….