ವಿರಹಕ್ಕೊಂದು ಪತ್ರ: ಪೂಜಾ ಗುಜರನ್. ಮಂಗಳೂರು.

“ಪ್ರೀತಿಸಿದ ತಪ್ಪಿಗೆ ವಿರಹಕ್ಕೊಂದು ಪತ್ರ”. ಇದು ನನ್ನೆದೆಯ ಬೀದಿಯಲ್ಲಿ ದಿನ ಬಂದು ಕಾಡಿಸುವ ನೋವಿಗೆ ಸಮಧಾನಿಸುವ ಸಲುವಾದರೂ ಬಿಡಿಸಿ ಕಣ್ಣಾಡಿಸು‌.ಇದು ನನ್ನ ಅಭಿಪ್ರಾಯವಷ್ಟೆ. ಸುಮ್ಮನ್ನೆ ಇದ್ದವಳ ಬದುಕಿನಲ್ಲಿ ನಿನ್ನ ಆಗಮನ ಒಂದು ವಿಶೇಷವಾದ ಚೈತನ್ಯವನ್ನು ನೀಡಿತ್ತು.ನಿನ್ನ ಮಾತಿನ ಚಾತುರ್ಯಕ್ಕೆ ಸೋತು ನನ್ನ ಹೃದಯವನ್ನೇ ನಿನ್ನ ಅಂಗೈಯಲ್ಲಿ ಇಟ್ಟು ನಿನ್ನ ಬೊಗಸೆಯೊಳಗೆ ಬೆಚ್ಚಗೆ ಶರಣಾಗಿದ್ದೆ.ನಿನ್ನ ಜೊತೆ ಬೆಸೆದುಕೊಂಡು ಬಂಧಕ್ಕೆ ನನಗೆ ಸಿಕ್ಕಿದ್ದು ಒಂದೇ. ಅದು ಕೊನೆವರೆಗೂ ನನ್ನ ಜೀವ ಜೀವನವನ್ನು ಕಿತ್ತು ತಿನ್ನುವ ಸಂಕಟವಷ್ಟೆ.. ನನ್ನ ಅತಿರೇಕದ ಪ್ರೀತಿಗೆ … Read more

ನಾವು ಏನೂ ಅನುಭವಿಸಿದರೂ ಅದು ನಮ್ಮ ಕರ್ಮಫಲವಷ್ಟೆ: ಪೂಜಾ ಗುಜರನ್. ಮಂಗಳೂರು.

ಆವತ್ತು ಅತ್ಮೀಯ ಗೆಳೆಯರೊಬ್ಬರ ಸಂಬಂಧಿಕರ ಸಾವು ನಡೆದಿತ್ತು. ಅವರು ತುಂಬಾ ಬೇಜಾರಿನಲ್ಲಿ ನನ್ನಲ್ಲಿ ಒಂದು ಮಾತು ಹೇಳಿದರು. ಅಲ್ಲ ಏನಾಗುತ್ತಿದೆ ಇಂದು. ಎಲ್ಲಿ ನೋಡಿದರು ಸಾವು, ನೋವು, ಈಗ ಇದ್ದವರು ಮತ್ತೆ ಇಲ್ಲ. ನೋಡ ನೋಡುತ್ತಿದಂತೆ ಎದ್ದು ಹೋಗುತ್ತಿದ್ದಾರಲ್ವ. ಇದೆಂತಹ ಕ್ರೂರ ಸಮಯ,  ಇದನ್ನೆಲ್ಲ ನೋಡುವುದಕ್ಕಾಗಿಯಾ ನಾವಿನ್ನು ಬದುಕಿರೋದು. ಹೀಗೆ ಅವರ ನೋವಿನ ಮಾತುಗಳು ಸಾಗುತ್ತಿದ್ದವು. ಅವರ ಹಣೆಬರಹವೇ ಸರಿ ಇಲ್ಲವೇನೋ ಅದಕ್ಕೆ ವಿಧಿ ಹೀಗೆ ಮಾಡುತ್ತಿದ್ದಾನೆ. ಅಂದಾಗ ನನಗೆ ಏನೂ ಉತ್ತರಿಸಬೇಕೋ ತಿಳಿಯದಾಗಿತ್ತು. ಅಲ್ಲ ನಾವ್ಯಾಕೆ … Read more

“ಪರಿಸ್ಥಿತಿಯ ಕೈಗೊಂಬೆಯಾದಾಗ ಬದುಕು ಅಸಹನೀಯವಾಗುತ್ತದೆ”: ಪೂಜಾ ಗುಜರನ್ ಮಂಗಳೂರು.

ಇದೊಂದು ಸಂಕಷ್ಟದ ಕಾಲ. ಸಾಲು ಸಾಲು ಸೋಲುಗಳು ಕಣ್ಣೆದುರೆ ನಿಂತಿದೆ. ಎದ್ದೇಳಬೇಕು ಅಂದಾಗಲೆಲ್ಲ  ಈ ಕಣ್ಣಿಗೆ ಕಾಣದ ಸೂಕ್ಷ್ಮಾಣು ಕಣ ಮತ್ತೆ ಮತ್ತೆ ಬದುಕನ್ನು ಸೋಲಿಸುತ್ತಿದೆ. ದುಡಿವ ಕೈಗಳಿಗೆ ಯಾರೋ ಬೇಡಿ ತೊಡಿಸಿ ಕುಕ್ಕರುಗಾಲಿನಲ್ಲಿ ಕೂರಿಸಿದಂತೆ. ಏನೀದು ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸನ್ನು ದಾಳಿ ಮಾಡಿ ಬಿಡುತ್ತದೆ. ವಿಪರ್ಯಾಸವೆಂದರೆ ನಾವು ಎಲ್ಲದಕ್ಕೂ ಒಂದೇ ಕಾರಣವನ್ನು ಕೊಟ್ಟು ಅದನ್ನೇ ದೂಷಿಸುತ್ತೇವೆ. ಇವತ್ತು ಹೀಗೆ ಆಗಲು ಆ ಒಂದು ರೋಗವೇ ಕಾರಣ ಅನ್ನುವ ಮಾತು ಎಲ್ಲರಲ್ಲೂ … Read more

ಬದುಕಿನ ಬಂಧಕ್ಕೆ ಹೆಸರಿನ ಹಂಗು ಯಾತಕ್ಕೆ? : ಪೂಜಾ ಗುಜರನ್. ಮಂಗಳೂರು.

ರಕ್ತ ಸಂಬಂಧಗಳೆಂದರೆ ಒಂದೇ ರಕ್ತ ಹಂಚಿಕೊಂಡು ಜೊತೆಯಾಗಿ ಹುಟ್ಟಿದವರು. ಆದರೆ ಜೊತೆಯಾಗಿ ಹುಟ್ಟದೆಯೂ ಜೊತೆಯಿರುವವರಿಗೆ ಏನು ಅನ್ನುತ್ತಾರೆ. ಅವರನ್ನು ಒಡನಾಡಿಗಳು, ಅನ್ನಬಹುದು. ಒಂದು ಬಾಂಧವ್ಯ ಬೆಳೆಯಲು ಜೊತೆಯಾಗಿಯೇ ಹುಟ್ಟಬೇಕಿಲ್ಲ. ಜೊತೆಯಾಗಿಯೇ ಬದುಕಬೇಕಿಲ್ಲ. ಕೊನೆವರೆಗೂ ಜೊತೆ ಜೊತೆಯಾಗಿ ನಡೆಯುವ ಒಂದೊಳ್ಳೆ ಮನಸ್ಸು ಇದ್ದರೆ ಸಾಕು. ಅವರು ಯಾವತ್ತಿಗೂ ನಮ್ಮೊಳಗೆ ಇರುತ್ತಾರೆ. ಅಲ್ಲಿ ಯಾವುದೆ ಕಟ್ಟುಪಾಡುಗಳ ಹಂಗು ಇರುವುದಿಲ್ಲ. ನಂಬಿಕೆ ವಿಶ್ವಾಸ ಅನ್ನುವ ಚೌಕಟ್ಟಿನ ಒಳಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಇಲ್ಲಿ ನಾವು ಜೊತೆಯಾಗಿ ಬದುಕಲು ಸಂಬಂಧಗಳಿಗೆ ಹೆಸರಿಡುತ್ತೇವೆ. ಇದು ಯಾರು … Read more

ಕಾಲಾಯ ತಸ್ಮೈ ನಮಃ: ಪೂಜಾ ಗುಜರನ್ ಮಂಗಳೂರು

“ಸಂಬಂಧಗಳು ಸಮಯವನ್ನು ಬೇಡುತ್ತದೆ.ಸಮಯವಿಲ್ಲದೆ ಸಂಬಂಧಗಳು ಸಾಯುತ್ತದೆ”.. ನಿಜ ಈ ಸುಂದರ ಕ್ಷಣಗಳು ಬದುಕಿಗೆ ಅದೆಷ್ಟು ಮುಖ್ಯವಾಗಿರುತ್ತದೆ. ಈ ಸಮಯ ಅನ್ನುವುದು ಎಂತಹ ಅದ್ಭುತವನ್ನು ಸೃಷ್ಟಿಸಬಲ್ಲದು. ಹಾಗೇ ಎಂದೂ ಅಳಿಯದ ವಿಚಿತ್ರವನ್ನು ಉಳಿಸಬಲ್ಲದು. ಈ ಕ್ಷಣಗಳು ಕಳೆದು ಹೋದರೆ ಮತ್ತೆ ಬರುವುದೇ? ಅದಕ್ಕೆ ಉತ್ತರ ಯಾರಲ್ಲೂ ಇಲ್ಲ. ನಿಜ ಇಲ್ಲಿ ಸಮಯಕ್ಕೆ ತುಂಬಾ ಬೆಲೆ. ಒಂದು ಕ್ಷಣ ಕಳೆದು ಹೋದರು ಅದು ಮತ್ತೆ ಬರಲಾರದು. ಆ ಸಮಯಕ್ಕೆ ಏನು ಆಗಬೇಕು ಅದು ಆಗಿಯೇ ಆಗುತ್ತದೆ. ಕಾಲವನ್ನು ತಡೆಯೋರು ಯಾರು … Read more

ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ: ಪೂಜಾ ಗುಜರನ್

ಮನುಷ್ಯನ ಒಳ್ಳೆತನ ಕೆಟ್ಟತನ ಎಲ್ಲದಕ್ಕೂ ಕಾಲ ಕ್ಷಣ ಕ್ಷಣವೂ ಉತ್ತರಿಸುತ್ತಿದೆ. ನನಗೆ ಎಲ್ಲವೂ ಗೊತ್ತು. ನಾನು ನನ್ನಿಂದಲೇ ಎಲ್ಲ ಅಂದಾಗಲೆಲ್ಲ ನೀನು ಅನ್ನುವುದು ಬರಿ ಒಂದು ಅಣು ಮಾತ್ರ ನಿನ್ನಿಂದ ಏನೇನೂ ಇಲ್ಲ ಅಂತ ಸೃಷ್ಟಿಕರ್ತ ಉತ್ತರಿಸುತ್ತಿದ್ದಾನೆ. ಬ್ರಹ್ಮಾಂಡವೇ ಅವನಗಿರುವಾಗ ಈ ಹುಳು ಮಾನವ ಏನೂ ತಾನೇ ಮಾಡಬಲ್ಲ. ಇಲ್ಲಿ ಏನಿದ್ದರೂ ಅದೂ ಕಾಕತಾಳೀಯ. ನೀನು ನಿನಗಾಗಿ ಮಾಡಿಕೊಂಡಿದ್ದು ಎಲ್ಲವೂ ತಾತ್ಕಾಲಿಕ. ಇವತ್ತು ನೀನು ಏನೇ ಅನುಭವಿಸುತ್ತಿದ್ದರೂ ಅದೆಲ್ಲವೂ ನಿನ್ನ ಉಪಯೋಗಕ್ಕಾಗಿ ಮಾಡಿಕೊಂಡಿದ್ದು. ಅತಿಯಾದ ಬುದ್ಧಿ ಎಲ್ಲವನ್ನೂ … Read more

ಕಾಲದ ಜೊತೆ ನಾವು ಬದಲಾಗುತ್ತಿದ್ದೇವಾ..?: ಪೂಜಾ ಗುಜರನ್ ಮಂಗಳೂರು

“ಬದುಕನ್ನು ಒಮ್ಮೆ ತಿರುಗಿ ನೋಡು”.‌ ಅಂದರೂ ಸಾಕು ಎಲ್ಲವೂ ನೆನಪಾಗಿ ಬಿಡುತ್ತದೆ.ನಾವು ನಡೆದು ಬಂದ ದಾರಿ. ಕಷ್ಟ ಪಟ್ಟ ದಿನಗಳು, ಬದುಕಿನ ಉದ್ದಕ್ಕೂ ಸಹಿಸಿದ ಈ ಸಹನೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು, ಒಪ್ಪುಗಳು. ನೋವು ನಲಿವುಗಳು. ಅತಿಯಾದ ತುಂಟಾಟ, ತಿಂದ ಏಟುಗಳು, ಗೆಳೆಯರ ಜೊತೆ ಮಾಡಿದ ಜಗಳಗಳು. ತಿನ್ನಲು ಏನು ಇಲ್ಲದಾಗ ಸಹಿಸಿಕೊಂಡ ಹಸಿವು. ಮುಗ್ಧತೆಗೆ ಜೋತುಬಿದ್ದ ಮುಗ್ಧ ಮನಸ್ಸುಗಳು. ಯಾರದ್ದೋ ಕುಹಕ ನೋಟ. ಇನ್ಯಾರದ್ದೋ ಮತ್ಸರದ ಮಾತು. ಬಡತನದ ಬವಣೆ. ಎಲ್ಲವೂ ಬಂದು ಮುತ್ತಿಕೊಂಡು … Read more

“ಸಂಗಾತಿ” ದೇಹಕ್ಕೋ ಮನಸ್ಸಿಗೊ…: ಪೂಜಾ ಗುಜರನ್. ಮಂಗಳೂರು

“ಸಂಗಾತಿ” ಬೇಕಾಗಿರುವುದು ಮನಸ್ಸಿಗೊ ದೇಹಕ್ಕೊ.. ಇದನ್ನು ಅರ್ಥ ಮಾಡಿಕೊಂಡರೆ ಈ ಸಂಗಾತಿ ಅನ್ನುವ ಪದಕ್ಕೊಂದು ಅರ್ಥ ಸಿಗುತ್ತದೆ. ಯಾವಾಗ ನಾವು ಈ ಸಂಗಾತಿಯ ಅನ್ವೇಷಣೆಯನ್ನು ಮಾಡುತ್ತೇವೆ.? ನಮ್ಮ ಮನಸ್ಸು ಒಂಟಿತನದ ಬೇಗೆಯಲ್ಲಿ ಬೇಯುವಾಗ ಮನಸ್ಸಿಗೊಂದು ಆಸರೆಬೇಕು ಅನಿಸುತ್ತದೆ. ನಿಜವಾಗಿಯೂ ಮಾಗಿದ ವಯಸ್ಸು ಬಯಸುವ ಸಂಗಾತಿ ಅದು ದೇಹಕ್ಕಲ್ಲ. ತನ್ನ ಮನಸ್ಸಿಗೆ. ಯಾರು ಇಲ್ಲದಾಗ ತನಗಾಗಿ ಮಿಡಿಯುವ ಆತ್ಮೀಯ ಜೀವವೊಂದು ಬೇಕು ಅನಿಸುತ್ತದೆ. ಕೆಲವರು ಇದನ್ನು ಹೇಳಲಾಗದೆ ಮಾನಸಿಕವಾಗಿ ಕುಗ್ಗುತ್ತಾರೆ. ಬೆಳೆದ ಮಕ್ಕಳು ಅವರವರ ವೈಯಕ್ತಿಕ ಜೀವನದಲ್ಲಿ ಬ್ಯುಸಿ … Read more

ನೋವು ಸಾವಾಗದಿರಲಿ..: ಪೂಜಾ ಗುಜರನ್. ಮಂಗಳೂರು

ಬದುಕು ಒಂದೊಂದು ಸಲ ಹೀಗಾಗಿ ಬಿಡುತ್ತದೆ.. ಯಾರು ಬೇಡ ಏನೂ ಬೇಡ ಹಾಗೇ ಎದ್ದು ಹೋಗಿಬಿಡಬೇಕು. ಯಾರ ಜಂಜಾಟವೂ ಬೇಡ ಅನಿಸುವಷ್ಟು ಬದುಕು ರೋಸಿ ಹೋಗಿರುತ್ತದೆ..ಈ ಯೋಚನೆ ಪ್ರತಿಯೊಬ್ಬನ ಬದುಕಿನಲ್ಲಿಯೂ ಒಂದಲ್ಲ ಒಂದು ದಿನ ಬಂದಿರುತ್ತದೆ. ಕೆಲವರು ಎದ್ದು ಹೋದರೆ ಇನ್ನು ಕೆಲವರು ಯೋಚನೆಯ ಆಯಾಮವನ್ನು ಬದಲಿಸಿ ಸುಮ್ಮನಿರುತ್ತಾರೆ. ಆದರೆ ಎಲ್ಲರ ನಿರ್ಧಾರಗಳು ಬದಲಾಗಿರುವುದಿಲ್ಲ. ಬದಲಿಗೆ ಅವರಿಗೆ ಈ ಬದುಕಲ್ಲಿ ಇನ್ನೇನೂ ಇಲ್ಲ ಅನ್ನುವುದೊಂದೆ ಯೋಚನೆಯಾಗಿರುತ್ತದೆ. ಈ ಯೋಚನೆಯ ಯೋಜನೆಗಳೆಲ್ಲ ಮುಕ್ತಾಯವಾಗುವುದು ಸಾವಿನಲ್ಲಿ. ಅತಿಯಾದ ಖಿನ್ನತೆ ಸಾವಿನ … Read more

ಭಾಷೆ ಭಾರವಾಗದಿರಲಿ: ಪೂಜಾ ಗುಜರನ್ ಮಂಗಳೂರು..

ನಾವಾಡುವ ಭಾಷೆ, ನಮ್ಮ ಹೃದಯದ ಸಂವಹನವನ್ನು ಬೆಸೆಯುವ ಒಂದು ಮಾಧ್ಯಮ. ನಮ್ಮೊಳಗಿನ ನೋವು, ವಿಷಾದ, ಖುಷಿ, ಕೋಪ, ಎಲ್ಲವನ್ನೂ ನಾವು ವ್ಯಕ್ತಪಡಿಸಬೇಕಾದರೆ ಹೃದಯಕ್ಕೆ ಹತ್ತಿರವಾಗುವ ಭಾಷೆ ಬೇಕು. ನಮ್ಮ ಮಾತೃಭಾಷೆ ಯಾವುದೇ ಇರಲಿ. ಅದನ್ನು ಮಾತಾನಾಡುವವರು ಜೊತೆಗೆ ದೊರೆತರಂತೂ ಮನಸ್ಸಿನ ಭಾವನೆಗಳು ಸರಾಗವಾಗಿ ಹರಿಯುತ್ತದೆ. ಆದರೆ ಈಗ ಎಲ್ಲರಿಗೂ ಇಂಗ್ಲಿಷ್ ಮೋಹ. ತಮ್ಮೊಳಗೆ ಹರಿಯುವುದು ಇಂಗ್ಲೀಷ್ ರಕ್ತ ಅನಿಸುವಷ್ಟರ ಮಟ್ಟಿಗೆ ಟಸ್ಸು ಪುಸ್ಸು ಇಂಗ್ಲೀಷ್ ಬಳಕೆಯಾಗುತ್ತದೆ. ಇನ್ನು ಹೆಚ್ಚಿನವರ ಮಾತಿನಲ್ಲಿ ಈ ಇಂಗ್ಲೀಷ್ ಭಾಷೆ ಇನ್ನಷ್ಟು ಬೆರೆತು … Read more

ಹೆಣ್ಣೆಂದರೆ ಶಕ್ತಿ..: ಪೂಜಾ ಗುಜರನ್ ಮಂಗಳೂರು

ಪ್ರತಿ ವರ್ಷವೂ ಹೆಣ್ಣಿನ ಬಗ್ಗೆ ಅವಳ ನೋವು ಸಾಧನೆಯ ಬಗ್ಗೆ ಬರೆಯುವಾಗಲೆಲ್ಲ ಏನೋ ಕಸಿವಿಸಿ. ಯಾರು ಎಷ್ಟೆ ಬರೆದರೂ ಏನೇ ಹೇಳಿದರೂ ಅವಳ ಅಂತರಂಗವನ್ನು ಮುಟ್ಟಲು ಯಾರಿಂದಲೂ ಆಗುವುದಿಲ್ಲ. ಅವಳ ಒಳಗಿರುವ ನೋವು ಅಸಹಾಯಕತೆ ಯಾರ ಕಣ್ಣಿಗೂ ಗೋಚರವಾಗುವುದಿಲ್ಲ. ಯಾಕೆಂದರೆ ಅವಳು ಹೆಣ್ಣು. ಕಲ್ಪನೆಗೂ ಮೀರಿದ ವ್ಯಕ್ತಿತ್ವದವಳು. ಬರೆದರೂ ಮುಗಿಯದಷ್ಟಿದೆ ಹೇಳಿದರೂ ಹೇಳದಷ್ಟು ಬಾಕಿ ಉಳಿಯುತ್ತದೆ. ಹೊಗಳಿಕೆ ತೆಗಳಿಕೆಗಳು ಅವಳಿಗೆ ಸರ್ವೇಸಾಮಾನ್ಯ. ಆದರೂ ಅವಳನ್ನು ವರುಷಕ್ಕೊಮ್ಮೆ ಗುಣಗಾನ ಮಾಡಿ ತೋಚಿದನ್ನು ಗೀಚಿದಾಗ ಒಂದು ದಿನದ ಮಟ್ಟಿಗೆ ಅವಳು … Read more

“ಸಾವು” ಯಾರು ನಿರಾಕರಿಸಲಾಗದ ಸತ್ಯ: ಪೂಜಾ ಗುಜರನ್. ಮಂಗಳೂರು

ಸಾವಿನ ನಂತರ ಏನು? ಸ್ವರ್ಗ, ನರಕ, ಇದೆಲ್ಲ ಇದೆಯಾ? ಇದೆ ಅನ್ನುತ್ತದೆ ಪುರಾಣ. ಪುರಾಣ ಹೇಳುತ್ತದೆ ಸತ್ತ ವ್ಯಕ್ತಿ ಒಳ್ಳೆಯವನು ಆಗಿದ್ದರೆ ಸ್ವರ್ಗಕ್ಕೆ ಹೋಗುತ್ತಾನೆ. ಕೆಟ್ಟವನು ನರಕಕ್ಕೆ ಹೋಗುತ್ತಾನೆ? ಈ ಸ್ವರ್ಗ, ನರಕ,ಪಾಪ, ಪುಣ್ಯ, ಸಾವಿನ ನಂತರ ಏನು? ಇದೆಲ್ಲವನ್ನೂ ನೋಡಿದವರು ಯಾರು? ಸಾವು ಎಂದರೇನು? ಹುಟ್ಟಿದವನು ಸಾಯಲೇಬೇಕೆ? ಇದೆಲ್ಲವನ್ನೂ ಮನುಷ್ಯ ಆಳವಾಗಿ ಚಿಂತಿಸಿ ವಿಮರ್ಶೆ ಮಾಡುತ್ತಾನೆ. ವೇದ ಮಹರ್ಷಿಗಳಿಂದ ಹಿಡಿದು ಜಗತ್ತಿನ ಮೇಧಾವಿಗಳೆಲ್ಲ ಸಾವಿನ ಬಗ್ಗೆ ಅದರ ಅನುಭವದ ಬಗ್ಗೆ ಬರೆದಿದ್ದಾರೆ. ಈ ಭೂಮಿ ಮೇಲಿನ … Read more