ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 69 & 70): ಎಂ. ಜವರಾಜ್

-೬೯-ಮೊಕ್ಕತ್ಲು ಕವಿಕಂಡು ಕಣ್ಣು ಕತಿ ಕಾಣ್ದುಏನ್ಮಾಡಗಿದ್ದದುನಾ ತೇಲ್ತನೇ ಇದ್ದಿ.. ಮೋಟ್ರು ಸದ್ದಾಯ್ತನೆ ಇತ್ತುಅದ ಆಪ್ಮಾಡ್ದೆನೀರು ತುಂಬಿ ತುಳುಕ್ತತೆವ್ರಿ ಮ್ಯಾಲ ಏರಿ ಹರಿತಿತ್ತುನಾನು ಆ ಹರಿಯ ನೀರ್ಲಿ ತೆವ್ರಿ ಸುತ್ತದೋಣಿತರ ತೇಲ್ತ ಸುತ್ತ ಬರದೇ ಆಯ್ತು.. ಆಗ ತೆವ್ರಿ ಮ್ಯಾಲಅದೇನ ಬುಸುಗುಟ್ಟ ಸದ್ದಾಯ್ತುನಂಗ ಗಾಬ್ರಿಯಾಗಿ ತಿರುಗ್ದಿಆ ಬುಸಗುಟ್ಟ ಜಾಗದ ಮ್ಯಾಲಪಣುಕ್ನುಳ್ಗಳ ಹಿಂಡೆ ಹಾರಾಡ್ತಆ ಪಣುಕ್ನುಳ್ಗಳ ಬೆಳುಕ್ಲಿದಪ್ದು ಕರಿ ನಾಗ್ರಾವು ಕಾಣ್ತು..ಅದು ಬುಸುಗುಡ್ತ ತೆವ್ರಿ ಮ್ಯಾಲನೀರ ಸರಿಸ್ತಾ ಹರಿತಾ ಹೋಯ್ತಿತ್ತು ಅದೆ ಗಳುಗ್ಗ ಅತ್ತಿಂದ ಯಾರೊಓಡ್ಬತ್ತಿರ ಸದ್ದಾಯ್ತುನಂಗ ಅತ್ತಗ ದಿಗಿಲಾಗಿ … Read more

ಪಂಜು ಪ್ರೇಮ ಪತ್ರ ಸ್ಪರ್ಧೆ 2021 ರ ಫಲಿತಾಂಶ

2021 ರ ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ. 1 ಪ್ರಥಮ ಬಹುಮಾನ: ಕೃತಿಕಾರಾಣಿ, ಯಲ್ಲಾಪುರ 2 ದ್ವಿತೀಯ ಬಹುಮಾನ: ಸುಕೃತಿ ಕೆ ಪೂಜಾರಿ 3 ತೃತೀಯ ಬಹುಮಾನ: ಶರಣಬಸವ ಕೆ.ಗುಡದಿನ್ನಿ ಐದು ಸಮಾಧಾನಕರ ಬಹುಮಾನಗಳು: 1. ದಿನೇಶ್‌ ಉಡಪಿ 2. ನರೇಂದ್ರ ಎಸ್‌. ಗಂಗೊಳ್ಳಿ 3. ಕಪಿಲ ಪಿ ಹುಮನಾಬಾದೆ 4. ಪರಮೇಶ್ವರಿ ಭಟ್ 5. ಸುಜಾತಾ ಲಕ್ಮನೆ, ಬೆಂಗಳೂರು ತೀರ್ಪುಗಾರರು: ಕನ್ನಡದ ಖ್ಯಾತ ಬರಹಗಾರರಾದ ಎ ಆರ್‌ ಮಣಿಕಾಂತ್‌ ರವರು ಈ … Read more

ಅವ ಇನ್ನೆಂದೂ ಮರಳಿ ಬರಲಾರ: ಶೀಲಾ ಅರಕಲಗೂಡು

ರವಿ ಬೆಳಗೆರೆ ಎಂಬ ದೈತ್ಯ ಶಕ್ತಿ, ಪ್ರಖರ ಬೆಳಕು, ಬತ್ತದ ಪ್ರೀತಿಯ ಒರತೆ, ಅಕ್ಷರ ಮಾಂತ್ರಿಕ, ಇತ್ಯಾದಿ, ಇತ್ಯಾದಿ …… ಇದೇ ಮಾರ್ಚ್ 15ಕ್ಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಮ್ಮ ನಡುವೆ ಇಲ್ಲವೇ ಇಲ್ಲ! ಏನೋ ಆತುರವಿರುವಂತೆ ಅರವತ್ತೆರಡು ವರ್ಷಗಳಲ್ಲೇ ನೂರು ವರ್ಷಗಳಲ್ಲಿ ಮಾಡಬಹುದಾದುದನ್ನು ಮಾಡಿ, ನೋಡ ನೋಡುತ್ತಿದ್ದಂತೆ ಮರೆಯಾಗಿ ಹೋಗಿರುವುದು ಇಂದಿಗೂ ನಂಬಲಾಗುತ್ತಿಲ್ಲ. ಇಷ್ಟು ಬೇಗ ಅಲ್ಲೆಲ್ಲೋ ಹೋಗಿ ಮಾಡುವುದಿತ್ತಾದರೂ ಏನನ್ನು? ಏನು ಮಾಡುತ್ತಿರಬಹುದು ಈಗಲ್ಲಿ? ಇಷ್ಟೆಲ್ಲ ಜನ ಆತನಿಗಾಗಿ ಹಂಬಲಿಸಿ ನೆನೆಯುತ್ತಿರುವಾಗ ಅಲ್ಲಿ … Read more

ಅಗಲಿದ ಗೆಳೆಯನ ನೆನೆಯುತ್ತ…: ಅಶೋಕ ಶೆಟ್ಟರ್

ನನ್ನ ತುಂಬ ಹಳೆಯ ಗೆಳೆಯ, ನನಗಿರುವ ಕೆಲವೇ ಕೆಲವು ಏಕವಚನದ ಮಿತ್ರರಲ್ಲೊಬ್ಬ, ಲೇಖಕ, ಪತ್ರಕರ್ತ ರವಿ ಬೆಳಗೆರೆ ಅನಿರೀಕ್ಷಿತವಾಗಿ ಮತ್ತು ಅಕಾಲಿಕವಾಗಿ ಅಗಲಿದ್ದಾನೆ. ತನ್ನ ಆಪ್ತರು, ಸ್ನೇಹಿತರು, ಸಿಬ್ಬಂದಿ, ಕುಟುಂಬದ ಸದಸ್ಯರು ಬಂಧು-ಬಳಗದಲ್ಲಿ ಒಂದು ಶೂನ್ಯ ಭಾವವನ್ನುಳಿಸಿ ಹೊರಟುಹೋಗಿದ್ದಾನೆ. ಧಾರವಾಡದ ಕರ್ನಾಟಕ ಕಾಲೇಜಿನ ಪದವಿ ವಿದ್ಯಾಭ್ಯಾಸದ ಅವಧಿಯ ಮೂರು ವರ್ಷಗಳನ್ನು ಗೆಳೆಯ ಗೆಳತಿಯರ ಬೆಚ್ಚಗಿನ ಸ್ನೇಹದ ನಡುವೆ ಕಳೆದಿದ್ದ ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರವೇಶ ದ್ವಾರದಲ್ಲಿ ಮೆಟ್ಟಿಲ ಮೇಲೆ … Read more

ಭಾವಕ ಮನಸ್ಸಿನ ಬುದ್ಧಿವಂತ ರವಿ: ಭುವನೇಶ್ವರಿ ಹೆಗಡೆ

ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು. ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ನಾವು ಸೇರಿ ಕಟ್ಟಿದ ಸಾಹಿತ್ಯ ಬಳಗ ನನ್ನಲ್ಲಿ ಒಬ್ಬ ಭಾಷಣಕಾರಳನ್ನು ಹುಟ್ಟುಹಾಕಿತ್ತು. ಧಾರವಾಡದಲ್ಲಿಯೂ ಅದರ ವರಸೆ ಬಿಡದೆ ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆ ಗಳಿಗೆ ಹೆಸರು ಕೊಡುತ್ತಿದ್ದೆ. ಒಂದಲ್ಲ ಹಲವು ಚರ್ಚಾಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದೆ. ಆಗೆಲ್ಲ … Read more

ಒಂದು ಸ್ನೇಹದ ಸುತ್ತ…: ವಿದ್ಯಾ ಭರತನಹಳ್ಳಿ

” ವಿದ್ಯಾ ಊಟ ಕೊಡೆ” ದೊಡ್ಡದಾದ ಧ್ವನಿ ಕೇಳಿಸಿತು. ಇದು ರವಿಯವರ ಧ್ವನಿಯೆಂದು ಗೊತ್ತಾಗಿ ಕೈ ತೊಳೆಯುತ್ತಿದ್ದವಳು ಓಡಿ ಬಂದೆ. ದೊಡ್ಡಪ್ಪ ಅನ್ನುತ್ತಾ ಮಗಳು ಪೂರ್ವಿಯೂ ಹೊರಬಂದಳು. ಉಮೇಶ್ ಮತ್ತು ವಾದಿರಾಜ ಅವರನ್ನು ವ್ಹೀಲ್ ಚೇರಲ್ಲಿ ಕುಳಿಸಿಕೊಂಡು ಒಳಗೆ ಕರೆದುಕೊಂಡು ಬರುತ್ತಿದ್ದರು. “ನಿಮ್ಮನ್ನ ನೋಡ್ಬೇಕು ಅನಸ್ತು ಬಂದ್ಬಿಟ್ನೆ. ” ಅಂದರು. ಒಂದು ಕಾಲದಲ್ಲಿ ಸಿಂಹದಂತಿದ್ದವರು ಅದೇ ಧ್ವನಿ ಇದ್ದರೂ ಮಗುವಿನಂತೆ ಕುಳಿತಿದ್ದು ನೋಡಿ ಸಂಕಟವಾಗುತ್ತಿದ್ದಾಗ, ಪೂರ್ವಿಯ ಹತ್ತಿರ ಅವಳ ಉದ್ಯೋಗ, ಮುಂದಿನ ಓದು ಎಲ್ಲ ವಿಚಾರಿಸಿದರು. ನನ್ನ … Read more

ಮುಳುಗದ ರವಿ…..: ಶೋಭಾ ಶಂಕರಾನಂದ

“ಪ್ರಿಯ ವೀಕ್ಷಕರೇ”…ಎಂದ ಕೂಡಲೇ…!!!! ಕೇಳುಗರು ಮತ್ತು ನೋಡುಗರೆಲ್ಲರೂ ಒಂದು ಕ್ಷಣ ತಮ್ಮನ್ನೇ ಮರೆತು ಮಂತ್ರ ಮುಗ್ಧರಂತೆ ಅತ್ತ ಗಮನವಿಟ್ಟು ಕೇಳಬೇಕು, ನೋಡಬೇಕು, ಹಾಗಿತ್ತು ಆ ಧ್ವನಿಯ ಆತ್ಮೀಯತೆ ಮತ್ತು ಗತ್ತು. ಆ ಧ್ವನಿ ಇನ್ನಿಲ್ಲ ಎಂದಾಗ ಏನೋ ಒಂಥರಾ ಸಂಕಟ ಮತ್ತು ತಳಮಳ. ಕಾರಣ… ಬಹುಶಃ ನಂಗೂ ಗೊತ್ತಿಲ್ಲ…..!!!??? ತಮ್ಮ ಬದುಕಿನುದ್ದಕ್ಕೂ ಬರವಣಿಗೆಯ ಮೂಲಕ ಹೋರಾಟವನ್ನೇ ಮಾಡುತ್ತಾ , ಹೇಳುವ ವಿಷಯವನ್ನು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿ, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಅವರ … Read more

ಬೆಳಗಿದ ರವಿಗೊಂದು ಅಕ್ಷರ ಮಾಲೆ: ಸಾವಿತ್ರಿ ಹಟ್ಟಿ

ರವಿ ಬೆಳಗೆರೆ ಅವರ ಬಗ್ಗೆ ಎಲ್ಲವನ್ನೂ ಬರೆಯುವುದೆಂದರೆ ಸಾಗರದ ನೀರನ್ನು ಕೊಡದಲ್ಲಿ ಹಿಡಿದಿಡುವೆನೆಂಬ ಹುಂಬತನ. ಅವರ ಪತ್ರಿಕೆಗಳು ಮತ್ತು ಲೇಖನಗಳನ್ನು ಓದಿ ಅವರನ್ನು ಪೂರಾ ಅರ್ಥ ಮಾಡಿಕೊಂಡಿದ್ದೇವೆ ಎನ್ನುವವರಿಗೆ ಅವರ ಬಗ್ಗೆ ತಿಳಿಯದ ಸಂಗತಿಗಳೂ ಹಲವು ಇವೆ ಅಂತ ಹೇಳಬಹುದು. ಅವರ ಲೇಖನಗಳೆಂದರೆ ಸ್ಫೂರ್ತಿಯ ಚಿಲುಮೆಗಳು. ಖಾಸ್ ಬಾತ್ ಮತ್ತು ಬಾಟಮ್ ಐಟಮ್ ಅಂಕಣಗಳನ್ನು ಓದಲೆಂದೇ ಮುಂದಿನ ಸಂಚಿಕೆಗಾಗಿ ಕಾಯ್ದು ನಿಲ್ಲುತ್ತಿದ್ದ ಅಗಾಧ ಸಂಖ್ಯೆಯ ಓದುಗ ಅಭಿಮಾನಿಗಳು ಅವರಿಗಿದ್ದರು. ಆ ಬಳಗದಲ್ಲಿ ನಾನೂ ಒಬ್ಬಳು. ಬದುಕಿನಲ್ಲಿ ನೊಂದ … Read more

ದಿಲ್ ನೆ ಫಿರ್ ಯಾದ್ ಕಿಯಾ….: ಪಿ.ಎಸ್. ಅಮರದೀಪ್.

ಫೆಬ್ರವರಿ-21, 1998. ಆ ದಿನ ಎಂತದೋ ಬೇಸರ. ಅನಾಹುತ ಮಾಡಿಕೊಳ್ಳುವಂಥ ಯಾವ ಸೀರಿಯಸ್ಸೂ ಇಲ್ಲ. ಆದರೂ ಜಗತ್ತು ತಲೆ ಮೇಲೆ ಬಿದ್ದೋರ ಥರಾ ಶನಿವಾರ ಆಫೀಸ್ ಮುಗಿಸಿಕೊಂಡವನೇ ಬಳ್ಳಾರಿಯ ರಾಯಲ್ ಸರ್ಕಲ್ ದಾಟಿದರೆ ಈಗಿನ ಹಳೇ ಬಸ್ ನಿಲ್ದಾಣದ ತನಕ ಕಾಲೆಳೆದುಕೊಂಡು ಹೊರಟೆ. ನಿಲ್ದಾಣದಿಂದ ಹೊರಬಂದ ಬಸ್ಸಿನ ಬೋರ್ಡ್ ನೋಡಿದೆ. ಮಂತ್ರಾಲಯ ಅಂತಿತ್ತು. ಯಾಕೆ ಹೋಗಬೇಕೆನ್ನಿಸಿತೋ ಏನೋ. ಸೀದಾ ಬಸ್ ಹತ್ತಿ ಕುಳಿತೆ. Actually, ನಾನು ಆ ದಿನ ಹಗರಿಬೊಮ್ಮನಹಳ್ಳಿಗೆ ಹೊರಡಬೇಕಿತ್ತು. ಹತ್ತಿ ಕುಳಿತದ್ದು ಮಾತ್ರ ಮಂತ್ರಾಲಯದ … Read more

ಆಪ್ತ ಬೆಳಗೆರೆ: ರವಿ ಶಿವರಾಯಗೊಳ

ರವಿ ಬೆಳಗೆರೆ ದೈತ್ಯ ಬರಹಗಾರ. ಅಕ್ಷರ ಮಾಂತ್ರಿಕ. ಸಹಸ್ರಾರು ಓದುಗರ ಹುಟ್ಟು ಹಾಕಿದ ಪ್ರತಿಭಾವಂತ ಲೇಖಕ. ಮುಂದೆಂದೂ ಮತ್ತೊಬ್ಬ ರವಿ ಬೆಳಗೆರೆಯನ್ನ ಕಾಣಲಾರೆವು. ಪತ್ರಿಕೋದ್ಯಮದಲ್ಲಿ ಬರವಣಿಗೆಯಲ್ಲಿ ಸ್ವಂತ ಪ್ರತಿಭೆ ಮುಂಖಾಂತರವೆ ಹೆಮ್ಮರವಾಗಿ ಬೆಳೆದು ನಿಂತ ಗಟ್ಟಿಗ ರವಿ ಬಾಸ್. ಕೂತು ಬರೆಯುವ; ಗಂಟೆ ಗಂಟೆಗಟ್ಟಲೆ ಓದುವ ಓದಿದ್ದನ್ನು ಇಷ್ಟವಾದದ್ದನ್ನು ತನ್ನದೇ ಓದುಗರೊಂದಿಗೆ ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವದ ವ್ಯಕ್ತಿ. ಮಿತ್ರರನ್ನ ಓದುಗರನ್ನ ಹಿಂಬಾಲಕರ ಸಮ ಸಮಸಂಖ್ಯೆಯಲ್ಲಿ ಶತ್ರುಗಳನ್ನೂ ಹೊಂದಿದ್ದ ರವಿ ಬೆಳಗೆರೆ ಕಡೆಗೂ ಯಾರಿಗೂ ಜಗ್ಗದೆ ಬಗ್ಗದೆ ತನ್ನಿಷ್ಟದಂತೆ … Read more

”ಬೆಳಗೆರೆಯೂ, ಅಜ್ಞಾತ ಓದುಗದೊರೆಯೂ: ಒಂದು ಖಾಸ್ ಬಾತ್!”: ಪ್ರಸಾದ್‌ ಕೆ.

ರವಿಯವರ ಅಕ್ಷರಜಗತ್ತಿನ ಬಗ್ಗೆ ನನಗಾದ ಮೊದಲ ಪರಿಚಯವೆಂದರೆ ‘ಬಾಟಮ್ ಐಟಮ್’ ಸರಣಿ. ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ರವಿ ಬೆಳಗೆರೆ ಆಗಲೇ ಖ್ಯಾತ ಲೇಖಕರಾಗಿದ್ದರು. ಅವರ ಕೃತಿಗಳು ಆವತ್ತಿಗೇನೇ ಬೆಸ್ಟ್ ಸೆಲ್ಲರ್ಸ್. ಅಂದಿನ ನನ್ನ ಸೀಮಿತ ಅರಿವಿನ ಪ್ರಕಾರ ರವಿ ಸಾರಥ್ಯದ ಪತ್ರಿಕೆ ‘ಹಾಯ್ ಬೆಂಗಳೂರು’ ಚೆನ್ನಾಗಿ ಓಡುತ್ತಿತ್ತು. ಇನ್ನು ‘ಕ್ರೈಂ ಡೈರಿ’ ಮತ್ತು ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮಗಳಿಂದ ರವಿಯವರು ರಾಜ್ಯದಾದ್ಯಂತ ಮನೆಮಾತೂ ಆಗಿದ್ದರು. ಹೀಗಿದ್ದರೂ ಇಂಗ್ಲಿಷ್ ನಲ್ಲಿ living under the … Read more

ಮರೆಯಲಾಗದ ಮಾತಿನ ಮಲ್ಲ: ಪರಮೇಶ್ವರಪ್ಪ ಕುದರಿ

“ ರವಿ ಬೆಳಗೆರೆ “ ಹೆಸರೇ ಒಂದು ರೋಮಾಂಚನ ! ಕನ್ನಡ ಪತ್ರಿಕಾರಂಗ ಕಂಡ ಅದ್ಭುತ ಪ್ರತಿಭಾವಂತ ಬರಹಗಾರ ರವಿ ಬೆಳಗೆರೆ. ಅವರ “ ಹಾಯ್ ಬೆಂಗಳೂರು “ ಪತ್ರಿಕೆಯ ಹೆಸರೂ ವಿಶಿಷ್ಟ , ಆ ಪತ್ರಿಕೆಯ ಕಪ್ಪು – ಬಿಳುಪು ರೂಪ ವಿನ್ಯಾಸವೂ ವಿಭಿನ್ನ ! ಪ್ರಾರಂಭದ ದಿನಗಳಲ್ಲಿ ಪತ್ರಿಕೆಯ ರೂಪು – ರೇಷೆಗಳನ್ನು ನೋಡಿದವರು ಆಡಿಕೊಂಡದ್ದೇ ಹೆಚ್ಚು. ಆದರೆ ರವಿ ಸರ್ ತಮ್ಮ ಬರವಣಿಗೆಯ ವಿಶಿಷ್ಟ ಶೈಲಿಯಿಂದ ನಾಡಿನ ಮನೆ ಮಾತಾದರು. ಮೊದ ಮೊದಲು … Read more

ರವಿ ಕಾಣದ್ದನ್ನ “ರವಿ” ಕಂಡ’: ನಂದಾದೀಪ, ಮಂಡ್ಯ

ಓದೊ ಹಸಿವು, ಬರೆಯೊ ದರ್ದು, ತಲೆಗೆ ಬಂದಿರೋದನ್ನ ಬರ್ದು ಗೀಚಿಬಿಡಬೇಕು ಅನ್ನೊ ಉನ್ಮಾದ ಬರೋದು ರವಿಬೆಳೆಗೆರೆಯವರ ಪುಸ್ತಕ ಓದಿದಾಗಲೆ..! ಅದೇನ್ ಬರಿತಾನ್ರಿ..! ಮೆದುಳಿಗೆ ಕೈ ಹಾಕಿ ಮನಸಿನೊಂದಿಗೆ ಮಾತನಾಡಿ ಹೃದಯಗೂಡಲ್ಲಿ ಬೆಚ್ಚಗೆ ಕಥೆಗಳ ಇಳಿಸಿಬಿಡ್ತಾನೆ..! ಹೀಗೆ ಅವರ ಪುಸ್ತಕ ಓದಿದವರು ಮಾತಾಡೋದು..! ಯಾವುದಕ್ಕೂ ಮಿತಿ ಇಲ್ಲ.. ಪ್ರೀತಿ, ಪ್ರೇಮ, ಕಾಮ, ಚರಿತ್ರೆ, ರಕ್ತ, ಕ್ರೈಂ, ಮಾಟಮಂತ್ರ, ಇತಿಹಾಸ, ಬದುಕಿನ ಚಿತ್ರಣ, ರಾಜಕೀಯ ಯಾವುದಕ್ಕೂ ಯಾವುದೇ ಮುಲಾಜಿಲ್ಲದೆ ಬರೆದು ಓದುವ ಗೀಳಿಗೆ ಸಲೀಸಾಗಿ ಹಚ್ಚಿಬಿಡುವ ಅಕ್ಷರ ಲೋಕದ ಮಾಂತ್ರಿಕ … Read more

ರವಿಯನ್ನು ಎಲ್ಲರು ಇಷ್ಟಪಡುತ್ತಾರೆ ಅನ್ನುವ ಸಂಭ್ರಮ: ಗಿರಿಜಾ ಜ್ಞಾನಸುಂದರ್

ರವಿ ಬೆಳಗೆರೆ – ಈ ಹೆಸರಿನಲ್ಲಿ ಒಂದು ಶಕ್ತಿ, ಒಂದು ಆತ್ಮೀಯತೆ, ಒಂದು ಹೆಸರಿಸಲಾಗದ ಭಾವನೆ, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸಂಬಂಧ. ಸುಮಾರು ೨೮-೩೦ ವರ್ಷಗಳ ಹಿಂದೆ ಕರ್ಮವೀರ ಪತ್ರಿಕೆಯನ್ನು ಓದುತ್ತಿದ್ದ ನನಗೆ ರವಿ ಅವರ ಪರಿಚಯ ಅವರ ಲೇಖನಗಳ ಮೂಲಕ ಆಯಿತು. ಹದಿವಯಸ್ಸಿನಲ್ಲಿ ಮನಸ್ಸಿನ ತೊಳಲಾಟ, ಭಾವನೆಗಳ ಏರು ಪೆರು, ಸಮಾಜದಲ್ಲಿ ವ್ಯಕ್ತಿತ್ವದ ಮೌಲ್ಯ, ಹೀಗೆ ಅನೇಕ ವಿಷಯಗಳಲ್ಲಿನ ಗೊಂದಲಗಳನ್ನು ನನಗೆ ಗೊತ್ತಿಲ್ಲದಂತೆ ತಿಳಿಹೇಳುತ್ತಿದ್ದ ಲೇಖನಗಳನ್ನು ರವಿ ಬರೆಯುತ್ತಿದ್ದರು. ತೃತೀಯ ಲಿಂಗಿಗಳ ಬಗ್ಗೆ ಅವರು ಬರೆದ … Read more

ನಮ್ಮ ಮನೆಯಲ್ಲಿ ರವೀ ಮೂಡಿದ್ದಾನೆ!: ದೀಕ್ಷಿತ್ ಕುಮಾರ್ ಕೆ. ಎಂ

ಯಾಕೋ ಗೊತ್ತಿಲ್ಲ ಇಂದಿಗೂ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ನಮ್ಮ ಮನೆಯ ಸದಸ್ಯರಲ್ಲಿ ಯಾರೋ ಒಬ್ಬರು ನನ್ನನ್ನು ಅಗಲಿ ಹೋಗಿದ್ದರೂ ಇಷ್ಟು ಹೊತ್ತಿಗೆ ಚೇತರಿಸಿಕೊಂಡು ಸದೃಢನಾಗುತ್ತಿದ್ದೆನೇನೊ? ಆದರೆ ನಾನು ಕಳೆದುಕೊಂಡದ್ದು ಒಬ್ಬ ದೈತ್ಯ ಪ್ರತಿಭೆಯನ್ನು, ನಾ ಲೇಖನಿ ಹಿಡಿದು ಬರೆಯಲು ಕಾರಣರಾದವರನ್ನು, ನನ್ನ ಪ್ರಬುದ್ಧ ಮಾತುಗಳ ಹಿಂದಿನ ಗುರುವನ್ನು ಹಾಗೂ ನನ್ನ ಕಿಂಚಿತ್ತು ಸಾಧನೆಯ ಹಿಂದಿನ ಸ್ಫೂರ್ತಿದಾಯಕರನ್ನು! ಅವರು ಕಾಲವಾದ ನಂತರ ಅವರನ್ನು ಕುರಿತು ಪುಂಕಾನುಪುಂಕ ಬರೆಯಲು ನಿರ್ಧರಿಸಿ ಹಠಕ್ಕೆ ಬಿದ್ದು ಟೇಬಲ್ ನ ಮೇಲೆ ಹಾಳೆ ಹರವಿಕೊಂಡು ಕುಳಿತರೂ … Read more

ಹೇಳಿ ಹೋಗು ಕಾರಣ: ಭಾರ್ಗವಿ ಜೋಶಿ

ನಾ ಓದಿದ್ದ ಕೆಲವೇ ಕೆಲವು ಕಾದಂಬರಿಗಳಲ್ಲಿ ತೀರಾ ಕಾಡಿ, ಅಳಿಸಿದ ಕಾದಂಬರಿ ಇದು. ಹಿಂದೆ ಒಮ್ಮೆ ಆವರಣ ಓದಿದಾಗ ವಿಚಿತ್ರ ಆವೇಶ, ಉದ್ವೇಗ. ಆದರೆ ಇದರ ಭಾವವೇ ಬೇರೆ. ಪ್ರೀತಿ ಪ್ರೀತಿ. ಹಿಮೂನ ಪ್ರೀತಿ ಉಕ್ಕಿ ಹರಿಯುತ್ತದೆ. ಹಿಮೂ ಎಂಬ ಪ್ರಾರ್ಥನಾ ಳ ದೇವರು, ತಂದೆಯಂತೆ ಅವಳಿಗೆ ಹೊಸ ಜೀವನ ಕೊಟ್ಟು ಶಿವಮೊಗ್ಗ ಕೇ ಕರೆದು ತರುತ್ತಾನೆ. ಸೋದರನಂತೆ ಯಾವತ್ತು ಅವಳ ಆರೈಕೆ ಮಾಡುತ್ತಾನೆ. ಗೆಳೆಯನಂತೆ ಅವಳ ಕನಸಿಗೆ ಬಣ್ಣ ತುಂಬುತ್ತಾನೆ, ಗುರುವಿನಂತೆ ದಾರಿ ತೋರುತ್ತಾನೆ. ಪ್ರಿಯಕರನಂತೆ … Read more

ರವಿಬೆಳಗೆರೆಯವರನ್ನು ನೆಗ್ಲೆಕ್ಟ್ ಮಾಡಲಿಕ್ಕಂತೂ ಸಾಧ್ಯವಿಲ್ಲ: ನಟರಾಜು ಮೈದನಹಳ್ಳಿ

‘ರವಿ ಬೆಳಗೆರೆ’ ಈ ಹೆಸರು ಗೊತ್ತಿರದ ಕನ್ನಡಿಗನೇ ಇಲ್ಲ ಎನ್ನಬಹುದು. ಬಿಸಿಲು ನಾಡಿನ ಬಳ್ಳಾರಿಯಲ್ಲಿ ದಿನಾಂಕ: 15-03-1958 ರಂದು ಪಾರ್ವತಮ್ಮ ಟೀಚರ್ ಮಗನಾಗಿ ಹುಟ್ಟಿ, ಕಡು ಕಷ್ಟಗಳನ್ನು ಅನುಭವಿಸಿ, ಮುನ್ನೂರು ಚಿಲ್ಲರೆ ರೂ.ಗಳೊಂದಿಗೆ ಬೆಂಗಳೂರು ಎಂಬ ಮಾಯಾನಗರಿಗೆ ಬಂದು, ಅನೇಕ ಬವಣೆಗಳನ್ನು ಅನುಭವಿಸಿ, ಪತ್ರಿಕೋದ್ಯಮದ ದೈತ್ಯನಾಗಿ, ಅಕ್ಷರ ಮಾಂತ್ರಿಕನಾಗಿ ಬೆಳೆದಿದ್ದು ಒಂದು ಯಶೋಗಾಥೆ. ರವಿ ಬೆಳಗೆರೆ ಒಬ್ಬ ಬಹುಮುಖ ಪ್ರತಿಭೆ. ಇವರು ಪತ್ರಕರ್ತ, ಸಂಪಾದಕ, ಕತೆಗಾರ, ಕಾದಂಬರಿಕಾರ, ಸಿನಿಮಾ ನಟ, ಟಿವಿ ನಿರೂಪಕ ಇತ್ಯಾದಿ. ಪತ್ರಕರ್ತ ಆಗುವುದಕ್ಕೆ … Read more

ರವಿ ಬೆಳಗೆರೆಯವರ ನೆನಪಿನ ವಿಶೇಷ ಸಂಚಿಕೆಗಾಗಿ ಲೇಖನಗಳ ಆಹ್ವಾನ

ಸಹೃದಯಿಗಳೇ, ಮಾರ್ಚ್ 15 ಖ್ಯಾತ ಬರಹಗಾರರಾದ ರವಿ ಬೆಳಗೆರೆಯವರು ಹುಟ್ಟಿದ ದಿನ. ಆ ದಿನ ಅವರ ನೆನಪಿನ ವಿಶೇಷ ಸಂಚಿಕೆಯನ್ನು ಪಂಜು ತರಲು ಬಯಸುತ್ತದೆ. ಅವರ ಕುರಿತ ಅವರ ಪುಸ್ತಕಗಳ ಕುರಿತ ನಿಮ್ಮ ಲೇಖನಗಳನ್ನು ಮಾರ್ಚ್ 14, 2021 ರ ಒಳಗೆ ನಮಗೆ ಕಳುಹಿಸಿ. ನಿಯಮಗಳು: ಲೇಖನಗಳು ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ಬರಹಗಳು ಯೂನಿಕೋಡ್ ನಲ್ಲಿದ್ದರೆ ಒಳ್ಳೆಯದು. ಪಿಡಿಎಫ್ ನಲ್ಲಿರುವ ಬರಹಗಳನ್ನು … Read more

ನಿರಾಳ ಭಾವ: ವಸುಂಧರಾ ಕದಲೂರು

ಇಪ್ಪತ್ತಾರರ ಟಿಕೇಟಿಗೆ ನಾನು ಐದುನೂರು ರೂಪಾಯಿ ನೋಟು ಕೊಟ್ಟೆ. ಕಂಡಕ್ಟರ್ ‘ಚಿಲ್ಲರೆ ಇಲ್ವೇನ್ರಿ?’ ಗೊಣಗಾಡುತ್ತಲೇ ಚೀಟಿ ಹಿಂದೆ ನಾನೂರಎಪ್ಪತ್ನಾಲ್ಕು ಎಂಬ ಅಂಕಿಗಳನ್ನು ಗೀಚಿ ‘ಸರಿಯಾಗಿ ಚಿಲ್ಲರೆ ತರಕಾಗಲ್ವೇನ್ರೀ’ ಎನ್ನುತ್ತಾ ಟಿಕೇಟಿಕೆ ಕೈ ಚಾಚಿದ ನನ್ನ ಅಂಗೈಗೆ ತುಸು ಬಿರುಸಿನಿಂದಲೇ ತುರುಕಿ ಮುಂದೆ ಹೋದರು. ಬಸ್ಸಿನೊಳಗಿದ್ದವರ ಮುಂದೆ ಕಂಡಕ್ಟರ್ ಹೀಗೆ ಮಾಡಿದಕ್ಕೆ ಪಿಚ್ ಎನಿಸಿದರೂ ನನ್ನದೇ ತಪ್ಪೆನಿಸಿದ್ದರಿಂದ ಸುಮ್ಮನಾದೆ. ಆದರೆ ಬೆಳಿಗ್ಗೆ ಮನೆಯಿಂದ ಹೊರಟಾಗ ಬಸ್ಸಿನಲ್ಲಿ ಹೊರಡಬೇಕಾಗುತ್ತೆ ಎಂದುಕೊಂಡಿರಲಿಲ್ಲ. ಸಮಯಕ್ಕೆ ಸರಿಯಾಗಿ ಸ್ಕೂಟರ್ ಸ್ಟಾರ್ಟೇ ಆಗಲಿಲ್ಲ. ಕ್ಯಾಬ್ ಗೆ … Read more

ಜಾನಪದದಲ್ಲಿ ಪ್ರೇಮ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಈ ಜಗತ್ತು ಸುಂದರ ಮತ್ತು ಸುಖಮಯವಾಗಿ ಕಾಣುವಲ್ಲಿ ಪ್ರೇಮದ ಕೊಡುಗೆಯು ಸಿಂಹಪಾಲು ಬಹುಶಃ ಮಾನವನೆದೆಯಲ್ಲಿ ಉಂಟಾಗುವ ಭಾವನೆಗಳಿಗೆ ಮೂರ್ತ ರೂಪ ನೀಡುವಲ್ಲಿ ಈ ಪ್ರೇಮಕ್ಕೆ ಹಲವು ರೀತಿಯ ಮುಖಗಳಿವೆ. ಮೊದಲ ನೋಟಕ್ಕ ಉಂಟಾಗುವಂತಹದ್ದು ಪ್ರೀತಿ ಆತ್ಮೀಯತೆ ಅರಳಿಸುವಂತಹದ್ದು ಪ್ರೇಮ ಕನಸುಗಳ ಮೈದಡವಿ ಬಯಕೆಗಳ ಬೆನ್ನೇರಿಸಿಕೊಂಡು ಭೂಮ್ಯಾಕಾಶದ ಆಚೆಗೂ ಪಯಣಿಸುವ ಹುಮ್ಮಸ್ಸು ತುಂಬುವಂತಹದ್ದು ಒಲವು. ಇಹಲೋಕದಲ್ಲವನ್ನೂ ಧಿಕ್ಕರಿಸುತ್ತಾ ಅನೂಹ್ಯ ಲೋಕದ ಸುಖವನ್ನು ಅನುಭವಿಸುವ ಸ್ವರ್ಗಲೋಕದ ತುತ್ತ‌ ತುದಿಗೆ ಒಯ್ದು ಬದುಕನ್ನು ಸುಂದರಗೊಳಿಸುವಂತಹದ್ದು ಪ್ರಣಯ. ಗಂಡು ಹೆಣ್ಣುಗಳ ಮನಸ್ಸುಗಳು ಹುಟ್ಟಾ … Read more

ಉಗುಳುವುದೂ ಒಂದು ಕಲೆ ; ಬೇಡವಾದ ಅಗುಳನು: ಸುಂದರಿ ಡಿ.

ಉಗುಳುವುದು ಎಂದೊಡನೇ ಬಾಯಿಯ ಮುಖೇನ ಬೇಡವಾದ ಎಂಜಲನು ಹೊರಹಾಕುವ ಕ್ರಿಯೆ ಎಂದೇ ಗ್ರಹಿಸುವ ನಾವು ಉಗುಳುವ ಕ್ರಿಯೆಯನ್ನು ಸೀಮಿತಾರ್ಥದಲ್ಲಿ ಬಳಸುತ್ತಿದ್ದೇವೆ ಎನಿಸುತ್ತದೆ. ಏಕೆಂದರೆ ಬೇರೆಯವರನ್ನು ಬೈಯ್ಯುವ, ನಮಗೆ ಬೇಡವಾದವರನ್ನು ಬಿಡುವ ಕ್ರಿಯೆಯನ್ನೂ ಈ ಪರಿಭಾಷೆಯಲೇ ಕರೆಯುವುದು ರೂಢಿ. ಆದರೆ ಬೇಡವಾದುದನು ಹೊರ ಹಾಕುವ ಕ್ರಿಯೆಯನ್ನೇ ಉಗುಳುವುದು ಎಂದು ಗ್ರಹಿಸಬೇಕಾಗುತ್ತದೆ ಎಂದು ನನಗನಿಸುತ್ತದೆ. ಇದೊಂದು ನುಡಿಗಟ್ಟೆಂಬುದನು ತಕ್ಷಣಕೆ ನಾವು ಮರೆತಿರುತ್ತೇವೆ. ಜೀವರಾಶಿಯಲಿ ಈ ಸಂಗತಿ ಕ್ಷಣ ಕ್ಷಣವೂ ಜರುಗುತ್ತಲೇ ಇರುತ್ತದೆ. ನಮ್ಮ ದೇಹದ ಪ್ರತಿಯೊಂದು, ಪ್ರತಿಯೊಂದೂ ಅಂಗೋಪಾಂಗಗಳೂ ಕೂಡಾ … Read more

ಹೆಣ್ಣೆಂದರೆ ಶಕ್ತಿ..: ಪೂಜಾ ಗುಜರನ್ ಮಂಗಳೂರು

ಪ್ರತಿ ವರ್ಷವೂ ಹೆಣ್ಣಿನ ಬಗ್ಗೆ ಅವಳ ನೋವು ಸಾಧನೆಯ ಬಗ್ಗೆ ಬರೆಯುವಾಗಲೆಲ್ಲ ಏನೋ ಕಸಿವಿಸಿ. ಯಾರು ಎಷ್ಟೆ ಬರೆದರೂ ಏನೇ ಹೇಳಿದರೂ ಅವಳ ಅಂತರಂಗವನ್ನು ಮುಟ್ಟಲು ಯಾರಿಂದಲೂ ಆಗುವುದಿಲ್ಲ. ಅವಳ ಒಳಗಿರುವ ನೋವು ಅಸಹಾಯಕತೆ ಯಾರ ಕಣ್ಣಿಗೂ ಗೋಚರವಾಗುವುದಿಲ್ಲ. ಯಾಕೆಂದರೆ ಅವಳು ಹೆಣ್ಣು. ಕಲ್ಪನೆಗೂ ಮೀರಿದ ವ್ಯಕ್ತಿತ್ವದವಳು. ಬರೆದರೂ ಮುಗಿಯದಷ್ಟಿದೆ ಹೇಳಿದರೂ ಹೇಳದಷ್ಟು ಬಾಕಿ ಉಳಿಯುತ್ತದೆ. ಹೊಗಳಿಕೆ ತೆಗಳಿಕೆಗಳು ಅವಳಿಗೆ ಸರ್ವೇಸಾಮಾನ್ಯ. ಆದರೂ ಅವಳನ್ನು ವರುಷಕ್ಕೊಮ್ಮೆ ಗುಣಗಾನ ಮಾಡಿ ತೋಚಿದನ್ನು ಗೀಚಿದಾಗ ಒಂದು ದಿನದ ಮಟ್ಟಿಗೆ ಅವಳು … Read more

ಹೆಣ್ಣು ಕೇವಲ ಹೆರುವ ಯಂತ್ರವಲ್ಲ: ಗಾಯತ್ರಿ ನಾರಾಯಣ ಅಡಿಗ

” ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ” ಪ್ರತಿ ಹೆಣ್ಣು ಸುಶಿಕ್ಷಿತಳಾಗಿ ತನ್ನ ಕುಟುಂಬ ಮತ್ತು ಇಡೀ ಸಮಾಜವನ್ನು ಸಂಸ್ಕಾರಯುತವನ್ನಾಗಿ ರೂಪಿಸುತ್ತಾಳೆ. ಮುಂದುವರೆದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆಯು ಪುರುಷನಿಗೆ ಸಮಾನಳು. ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯು ಮನೆ, ಮಕ್ಕಳು, ಕುಟುಂಬ ನಿರ್ವಹಣೆ, ಹಬ್ಬ ಹರಿದಿನಗಳು, ಸಂಪ್ರದಾಯಗಳು, ಕಟ್ಟುಪಾಡುಗಳು, ಪರಂಪರೆಗಳು, ಅರೋಗ್ಯ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಸಫಲತೆಯನ್ನು ಕಂಡಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀ ತನ್ನ ಮನೆಯ ಪರಿಸ್ಥಿತಿಯನ್ನು ನಾಜೂಕಾಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 68): ಎಂ. ಜವರಾಜ್

-೬೮-ತ್ವಾಟ ಒಣ್ಗಿ ದಳ್ಳಿಡ್ದಿತ್ತುಬಿದ್ದಿರದು ಬಿದ್ದಿರತವೇ ಇತ್ತುಇದ ನಂಬದ ಬುಡದ ಅನ್ನಗಾಯ್ತುಕಪಲ ಬಾವಿಲಿ ಜೊಂಡು ಬೆಳ್ದುಬಾವಿ ಇದ್ದದ ಇಲ್ವ ಅನ್ನಗಿತ್ತುಮೋಟ್ರು ಸದ್ದಾಯ್ತ ಇರದು ಕೇಳ್ತನೀರು ಚೊಳಚೊಳ ಚೊಳ್ಗುಟ್ತದಿಕ್ಕಾಪಾಲು ಹರಿತಿತ್ತುತಿಗುನ್ ಮರಗಳು ಬೆಳ್ದುಚೊಕ್ವಿಲ್ದೆ ಗರಿಗಳು ಒಣಿಕಂಡುಅಲ್ಲಲ್ಲೆ ನ್ಯಾತಾಡ್ತ ಗಾಳಿಗ ಅಳ್ಳಾಡ್ತಮ್ಯಾಲ ತಾರ್ಗಟ್ಲ ಕಾಯಿ ಒಣ್ಗಿ ಉದ್ರತರ ಕಾಣ್ತಿದ್ದು ಈ ಅಯ್ನೋರು ನನ್ನ ಮೆಟ್ದೆಈ ತ್ವಾಟ ನೋಡ್ದೆಬಲು ಜಿನ್ವಾಗಿತ್ತುಆ ಆಳುವ ಆ ಆಳ್ನೆಡ್ತುವಮಣುಮಾತ ಆಡ್ಕಂಡುಅಯ್ನೋರ್ ತಿಕುದ್ ಸಂದಿಲೆ ಒಸುಗ್ತತ್ವಾಟನ ಬರುದು ಮಾಡಿರದು ನಂಗೇನು ಗೊತ್ತು..ಈ ಅಯ್ನೋರು ಕೇಳ್ದೆ ಸುಮ್ನ ಯಾಕಿದ್ದರು.. ಅಲಲಲಾ.. … Read more

ಪಂಜು ಕಾವ್ಯಧಾರೆ

ಮಾಯವಾಗಿದೆ ಖಾಸಗಿತನ ಮಾಯವಾಗಿದೆ ನಮ್ಮ ಖಾಸಗಿತನಮಾಯವಾಗಿದೆಅಬ್ಬರದ “ಸೆಲ್ಪಿ”ಗಳ ನಡುವೆಸೂತು ಸೊರಗಿದೆ ಎಲ್ಲವನ್ನು ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿಸಾಮಾಜಿಕ ಜಾಲಕ್ಕೆ ಹರಿಬಿಡುವ,ಅಳಿಯದ ಗೋಡೆಗೆ ಅಂಟಿಸುವಧಾವಂತದಲಿ ಮಾಯವಾಗಿ ನಮ್ಮ ಖಾಸಗಿತನ‌ ಎನಿದ್ದರು ಆಗದು ಬಣ್ಣದ ಪಟಎಷ್ಷೂ ತೆಗೆದರು ಸಾಲದುಕಾಯಕವೇ ಕೈಲಾಸ ಮರೆತುಹೊಯಿತುಎಲ್ಲೆಂದರಲ್ಲಿ ಸೇಲ್ಪಿ ಕಾಯಕವಾಯಿತುಕಾರು ,ಬಸ್ಸುಗಳಲ್ಲದೆ, ತಿಂದ್ದು ,ಹೇತದ್ದು ಎಲ್ಲ ಪಟಗಳನ್ನು“ಅಪ್ಲೋಡ್ ” ಮಾಡುವದೇ ಕೆಲಸವಾಯಿತು ..!ಖಾಸಗಿತನ‌ ಮಾಯಾವಾಯಿತು . ಮರೆಯದ ಗೋಡೆಗೆ ಅಂಟಿಸಿ ,ಮನೆಯಲ್ಲೂ ,ಮನದಲ್ಲೂ ಗೋಡೆಗಳುಎದ್ದುನಿಲ್ಲವಂತಾಯಿತು .ಗೋಡೆ ಮರೆಯುವದಿಲ್ಲಮನಗಳು ಒಂದಾಗುವದಿಲ್ಲ ..! ಸಾಮಾಜಿಕ ತಾಣ ಖಾಸಗಿತನದಸರಕಾಯಿತು ಸಮಾಜ ,ಬದುಕಿನನಡುವಿನ ಸೂಕ್ಷ್ಮ … Read more

“ಸಾವು” ಯಾರು ನಿರಾಕರಿಸಲಾಗದ ಸತ್ಯ: ಪೂಜಾ ಗುಜರನ್. ಮಂಗಳೂರು

ಸಾವಿನ ನಂತರ ಏನು? ಸ್ವರ್ಗ, ನರಕ, ಇದೆಲ್ಲ ಇದೆಯಾ? ಇದೆ ಅನ್ನುತ್ತದೆ ಪುರಾಣ. ಪುರಾಣ ಹೇಳುತ್ತದೆ ಸತ್ತ ವ್ಯಕ್ತಿ ಒಳ್ಳೆಯವನು ಆಗಿದ್ದರೆ ಸ್ವರ್ಗಕ್ಕೆ ಹೋಗುತ್ತಾನೆ. ಕೆಟ್ಟವನು ನರಕಕ್ಕೆ ಹೋಗುತ್ತಾನೆ? ಈ ಸ್ವರ್ಗ, ನರಕ,ಪಾಪ, ಪುಣ್ಯ, ಸಾವಿನ ನಂತರ ಏನು? ಇದೆಲ್ಲವನ್ನೂ ನೋಡಿದವರು ಯಾರು? ಸಾವು ಎಂದರೇನು? ಹುಟ್ಟಿದವನು ಸಾಯಲೇಬೇಕೆ? ಇದೆಲ್ಲವನ್ನೂ ಮನುಷ್ಯ ಆಳವಾಗಿ ಚಿಂತಿಸಿ ವಿಮರ್ಶೆ ಮಾಡುತ್ತಾನೆ. ವೇದ ಮಹರ್ಷಿಗಳಿಂದ ಹಿಡಿದು ಜಗತ್ತಿನ ಮೇಧಾವಿಗಳೆಲ್ಲ ಸಾವಿನ ಬಗ್ಗೆ ಅದರ ಅನುಭವದ ಬಗ್ಗೆ ಬರೆದಿದ್ದಾರೆ. ಈ ಭೂಮಿ ಮೇಲಿನ … Read more

ನಾಲ್ವರ ಗಜ಼ಲ್ ಗಳು

ಗಜ಼ಲ್ ಕಪ್ಪೆಂದು ಜರಿದು ದೂರ ಉಳಿಸಿದವರು ಕೆಲವರುಅಸಹ್ಯದಿಂದ ಮುಖ ಸಿಂಡರಿಸಿದವರು ಕೆಲವರು ನನ್ನ ಬಣ್ಣ ನಿಮ್ಮ ಮುಖಕ್ಕೇನಾದರೂ ಮೆತ್ತಿಕೊಂಡೀತೇ?ಕೇಳಬೇಕೆನಿಸಿತ್ತು ಕ್ಷಣ ಮಾತ್ರವೂ ನಿಲ್ಲದೇ ಹೋದವರು ಕೆಲವರು ಬಣ್ಣದಲ್ಲೇನಿದೆ ಬಾ ಗೆಳೆಯ ಕೂಡಿ ಆಡೋಣವೆಂದ ಮಾತುಗಳು ಸಾಕಷ್ಟಿವೆಅವುಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದವರು ಕೆಲವರು ದೂಷಿಸಿದವರ ಕೇಳಿದೆ ನಿಮ್ಮ ನೆರಳಿನ ಬಣ್ಣ ಯಾವುದು?ಉತ್ತರಿಸಲಾಗದೆ ಗರಬಡಿದಂತೆ ನಿಂತವರು ಕೆಲವರು ದೇಸು ಇದೇ ಬಣ್ಣ ಬೇಕೆಂದು ಬೇಡಿಕೊಂಡನೆ? ಇಲ್ಲವಲ್ಲಾ!!!ಕೇಳಿದ್ದಕ್ಕೇ…ನಕ್ಕು ಅಪಹಾಸ್ಯ ಮಾಡಿ ಹೊರಟವರು ಕೆಲವರು ದೇಸು ಆಲೂರು… ಗಜಲ್ ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ … Read more