ಕಲ್ಲು ದೇವರು ದೇವರಲ್ಲ: ಮನು ಗುರುಸ್ವಾಮಿ

ವಿಗ್ರಹಾರಾಧನೆ ಎಂಬುದು ಬಹುತೇಕ ಮೂರ್ತಿ ಪೂಜೆ ಎಂಬ ಅರ್ಥವನ್ನೇ ನೀಡುವಂತದ್ದು. ಜನಪದರಿಂದ ಹಿಡಿದು ಶಿಷ್ಟಪದದವರೆಗೂ ಮೂರ್ತಿ ಪೂಜೆ ಅಸ್ತಿತ್ವದಲ್ಲಿರುವುದನ್ನು ನಾವು ಗಮನಿಸಬಹುದು. ಕೆಲವರು ಕಲ್ಲು, ಮಣ್ಣು, ಮರ, ಲೋಹ ಇತ್ಯಾದಿಗಳನ್ನು ಬಳಸಿ ನಿರ್ಮಿಸಲ್ಪಟ್ಟ ಒಂದು ಆಕೃತಿಗೆ ದೇವರೆಂಬ ಸ್ಥಾನಕೊಟ್ಟು ಆರಾಧಿಸುತ್ತಾ ಬಂದಿದ್ದಾರೆ. ಇನ್ನೂ ಕೆಲವರು ಕಲ್ಲು, ಮಣ್ಣು, ಮರ ಮೊದಲಾದ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸಿತ್ತಾ ಬಂದಿದ್ದಾರೆ. ಭೌತಿಕ ವಸ್ತುಗಳು ಮಾನವನ ನಿತ್ಯ ಜೀವನದಲ್ಲಿ ಅವಶ್ಯಕವಾಗಿರುವುದರಿಂದ ಜನಪದರು ಅದನ್ನೇ ದೇವರೆಂದು ನಂಬಿ ಪೂಜಿಸುತ್ತಾ ಬಂದಿದ್ದಾರೆ ಎಂಬ ಮಾತು … Read more

ಹಿಂದಿ ಚಿತ್ರಕಥಾ ಸಂವಾದದಲ್ಲಿ ಮಾಹಿರರಾಗಿದ್ದ ಕಾದರ್ ಖಾನ್ !: ಎಚ್ಚಾರೆಲ್

ಕಾದರ್ ಖಾನ್ : (೨೨, ಅಕ್ಟೋಬರ್ ೧೯೩೭-೩೧, ಡಿಸೆಂಬರ್, ೨೦೧೮) ನಿಧನರಾದಾಗ ಅವರ ವಯಸ್ಸು : ೮೧ ವರ್ಷವಾಲಿದ್ ಹೆಸರು, : ಅಬ್ದುಲ್ ರೆಹ್ ಮಾನ್ ಖಾನ್,ವಾಲಿದಾರ ಹೆಸರು, ಇಕ್ಬಾಲ್ ಬೇಗಂಹೆಂಡತಿಯ ಹೆಸರು : ಅಜ್ರಾ ಖಾನ್ಪಸ್ಟೂನ್ ಟ್ರೈಬ್, ಸುನ್ನಿ ಜಾತಿಗೆ ಸೇರಿದವರು.ಓದಿದ ಕಾಲೇಜ್ : ಇಸ್ಮೇಲ್ ಯೂಸುಫ್ ಕಾಲೇಜ್, ಬೊಂಬಾಯಿ.ಆಗಿನ ಕಾಲದ ಸಿವಿಲ್ ಇಂಜಿನಿಯರಿಂಗ್ ಶಾಖೆಯಲ್ಲಿ ಸ್ನಾತಕೋತ್ತರ ಪದವೀಧರ ಬೊಂಬಾಯಿನ ಸಾಬು ಸಿದ್ದಿಕಿ, ಇಂಜಿನಿಯರಿಂದ ಕಾಲೇಜ್, ಸಿವಿಲ್ ಇಂಜಿನಿಯರಿಂಗ ಶಾಖೆಯಲ್ಲಿ ಪ್ರೊಫೆಸರ್, (೧೯೭೦-೭೫ ರವರೆಗೆ)ಹಫೀಜ್-ಎ-ಖುರಾನ್ ಎಂದು … Read more

ಪೆಟ್ರಿಕೋರ್‌ ಎಂಬ ಪ್ರೇಮಕಾವ್ಯ: ಡಾ. ನಟರಾಜು ಎಸ್.‌ ಎಂ.

ಒಂದು ಕಾಲದಲ್ಲಿ ಪುಸ್ತಕಗಳ ಕೊಳ್ಳಲು ಕೆಲವೇ ಕೆಲವು ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡಬೇಕಿತ್ತು. ಈಗ ಮನೆಯಲ್ಲೇ ಕುಳಿತು ಇಷ್ಟದ ಪುಸ್ತಕಗಳನ್ನು ಆನ್‌ ಲೈನ್‌ ನಲ್ಲಿ ಆರ್ಡರ್‌ ಮಾಡಿದರೆ ಪುಸ್ತಕಗಳು ಒಂದೆರಡು ದಿನಗಳಲ್ಲಿ ನಮ್ಮ ಮನೆಗಳ ತಲುಪಿಬಿಡುತ್ತವೆ. ಆನ್‌ ಲೈನ್‌ ನಲ್ಲಿ ಹೋಗಿ ವೆಬ್‌ ಸೈಟ್‌ ಗಳಲ್ಲಿ ವಿವರಗಳನ್ನು ತುಂಬಿ ಪುಸ್ತಕ ಆರ್ಡರ್‌ ಮಾಡುವ ಪ್ರಕ್ರಿಯೆಗಳ ಬದಲು ಕನ್ನಡದ ಮಟ್ಟಿಗೆ ಅತೀ ಸುಲಭವಾಗುವಂತೆ ವಾಟ್ಸ್‌ ಅಪ್‌ ಗಳಲ್ಲಿ ಪುಸ್ತಕದ ಹೆಸರು ಮತ್ತು ವಿಳಾಸಗಳನ್ನು ತಿಳಿಸಿದರೆ ಅತೀ ಕಾಳಜಿಯಿಂದ ಪುಸ್ತಕಗಳನ್ನು … Read more

ನವರಾತ್ರಿ: ಡಾ. ವೃಂದಾ ಸಂಗಮ್ 

ನವರಾತ್ರಿ ಬರತದ ಅಂತ ಸೂಚನಾ ಹೆಂಗ ಅನ್ನೋದು ನೋಡಿದರನ ತಿಳೀತದ. ಶ್ರಾವಣ ಮಾಸ ಹಬ್ಬ- ಹುಣ್ಣವೀ ಸುರಿಮಳಿ. ದಿನಾ ಕಡಬು-ಹೋಳಿಗೆ, ಮಾಡಿ ಮತ್ತ ತಿಂದು ಎರಡೂ ಸುಸ್ತಾಗಿರತದ. ಅಷ್ಟ ಅಲ್ಲ, ಖರ್ಚಂತೂ ಕೇಳಬ್ಯಾಡರೀ, ಮುಗೀದಂಥಾದ್ದು, ಮ್ಯಾಲ ಹೊಲ ಮನೀಯವರಿಗಂತೂ ಕಳೇ-ಕಂಬಳೀ ಅಂತ ಹಗಲೂ ರಾತ್ರೀ ಕೆಲಸಾ. ಅಷ್ಟಲ್ಲದನ ಮ್ಯಾಲ ಜಿಟಿ ಜಿಟಿ ಮಳೀ. ಹಿಂತಾದರಾಗ, ಯಾರನರೇ ಕೇಳರೀ, ನಮ್ಮನಿಯೊಳಗ, ಶ್ರಾದ್ಧ, ಶ್ರಾವಣ ಮಾಸದಾಗ ಬರತಾವ ಅಂತಾರ. ಮತ್ತ ಹಿರೇರೂಂದರ ದೇವರ ಸಮಾನ ಅಂತ ಅವರೂ ತಮ್ಮದೊಂದು ನೆನಪು … Read more

ನ್ಯಾನೋ ಕತೆಗಳು: ಸ್ನೇಹಲತಾ ದಿವಾಕರ್, ಕುಂಬ್ಳೆ.

­­­­­­­­­­­­­­­­­­­­­­­­ ಅನುಭವವೇ ಗುರಿ ಪ್ರೀತಿ                                                                       ಮಗುವನ್ನು ಜಿಗುಟಿದ ಕೈಗಳು ತೊಟ್ಟಿಲನ್ನೂ ತೂಗಿದವು. ನೋಡುವ ಕಂಗಳಿಗೆ ಕಾಣಿಸಿದ್ದು ತೂಗುವತೋಳುಗಳ ಕಾಳಜಿ ಮಾತ್ರ. ಜಿಗುಟಿದ ಉಗುರುಗಳ ಕ್ರೌರ್ಯ ಯಾರ ಕಣ್ಣಿಗೂ ಬೀಳಲಿಲ್ಲ  ಹೊಂದಾಣಿಕೆ ಅವರಿಬ್ಬರದ್ದು ತುಂಬಾ ಹೊಂದಾಣಿಕೆಯ ಸಂಸಾರ. ಅವನು ಪ್ರತೀ ಬಾರಿ ಅದೇ ತಪ್ಪನ್ನು ಮಾಡುತ್ತಾ ಇದ್ದ. ಮತ್ತು ಅವಳು ಎಲ್ಲಾ ಸಲವೂ  ಅದಕ್ಕಾಗಿ ಕ್ಷಮೆ ಕೇಳುತ್ತಲೇ ಹೋದಳು. ಬೆಸ್ಟ್ ಆಕ್ಟರ್ ಮದುವೆಯಾಗಿದ್ದರೂ ಇನ್ನೂ ಸಿನಿಮಾ ರಂಗದಲ್ಲಿ  ಶೋಭಿಸುತ್ತಿರುವ ಅವಳಿಗೆ ಗಂಡ ನೀಡುತ್ತಿರುವ ಪ್ರೋತ್ಸಾಹ ಮತ್ತು ಸ್ವಾತಂತ್ರ್ಯ … Read more

ಸೋಲೆಂಬುದೇ ನಿಜ ಗೆಲುವು !: ಡಾ. ಹೆಚ್ ಎನ್ ಮಂಜುರಾಜ್

ಕಲಿಸು ಗುರುವೇ, ಸೋಲುವುದನು ! ಸೋತು ಸುಖಿಸುವುದನು……..!! ಎಂಬ ಪದ್ಯವೊಂದನು ಹಿಂದೆ ಬರೆದಿದ್ದೆ. ಅದನು ಗಮನಿಸಿದವರು ಕೇಳಿದರು: ಜಗತ್ತಿನಲ್ಲಿ ಎಲ್ಲರೂ ಗೆಲ್ಲಬೇಕೆಂದು ಹೊರಟಿದ್ದಾರೆ; ನೀವೇನಿದು: ಹೀಗೆ ಬರೆದಿದ್ದೀರಿ? ಅದಕೆ ನಾನೆಂದೆ: ಎಲ್ಲರೂ ಗೆಲ್ಲುವುದಾದರೆ ಸೋಲುವವರು ಯಾರು? ಒಬ್ಬರು ಗೆಲ್ಲಲು ಹಲವರು ಸೋಲಲೇಬೇಕಲ್ಲವೆ? ಅಂಥವರ ಪೈಕಿ ನಾನು ಎಂದೆ. ಅವರಿಗೆ ಏನನಿಸಿತೋ? ವಿಚಿತ್ರವಾಗಿ ನೋಡಿದರು. ಲೋಕದಲ್ಲಿ ಗೆಲುವಿಗಾಗಿ ಹಂಬಲಿಸುವವರೇ ಎಲ್ಲ; ಸೋಲುವವರು ಇಲ್ಲವೇ ಇಲ್ಲ! ನಮ್ಮ ಮನೆ, ಮನೆತನ, ಸಂಬಂಧಿಕರು, ಸ್ನೇಹಿತರು, ಶಾಲೆ, ಶಿಕ್ಷಣ, ವ್ಯವಸ್ಥೆ ಅಷ್ಟೇ ಅಲ್ಲ; … Read more

ಮಲೆನಾಡಿನ ಪದವೀಧರ ಯುವಕನ ಜೇನುಕೃಷಿ ಯಶೋಗಾಥೆ: ಚರಣಕುಮಾರ್

ಸಹ್ಯಾದ್ರಿಯ ಶೃಂಗದ ದಟ್ಟಡವಿಯ ಮಧ್ಯಭಾಗದಲ್ಲೊಂದು ಪುಟ್ಟ ಗ್ರಾಮ ಹಕ್ಲಮನೆ. ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲ್ಲೂಕಿನಲ್ಲಿ ಬರುವ ಈ ಹಳ್ಳಿಯಲ್ಲೊಬ್ಬ ಪ್ರಗತಿಪರ ಮತ್ತು ಪದವಿಧರ ಜೇನುಕೃಷಿಕ ಸಂತೋಷ ಹೆಗಡೆ. ಹೆಸರಿನಲ್ಲೇ ಸಂತೋಷ ಎಂದು ಇಟ್ಟುಕೊಂಡಿರುವ ಈ ಸಂತೋಷ ಬಿ.ಕಾಂ ಪದವಿ ಪಡೆದಿದ್ದರೂ ಕೂಡ ಪೇಟೆಯ ಕಡೆ ಮುಖ ಮಾಡಲಿಲ್ಲ. ಆದರೂ ಒಮ್ಮೆ ಬಿ.ಕಾಂ ಮುಗಿದ ಮೇಲೆ ಉದ್ಯೋಗಕ್ಕಾಗಿ ಪೇಟೆಯ ಕಡೆ ಹೊರಟ ಈತನಿಗೆ, ತಾಯಿಯ ಆರೋಗ್ಯದಲ್ಲಿ ಕಾಣಿಸಿಕೊಂಡ ಏರು-ಪೇರು ಮನೆಬಿಟ್ಟು ಹೋಗಲು ಅವಕಾಶ ನೀಡಲೇಇಲ್ಲ. ಹೇಳಿ-ಕೇಳಿ ಇವರದು … Read more

ಕುಟುಂಬವೆಂದರೆ ಒಬ್ಬ ವ್ಯಕ್ತಿಯಲ್ಲ, ಅವನೊಡನೆ ನಿಲ್ಲುವ ಪ್ರಪಂಚವೇ ಕುಟುಂಬ ಎನ್ನುವ “ಅಜ್ಜನ ಕಮೋಡು”: ಡಾ. ನಟರಾಜು ಎಸ್.‌ ಎಂ.

ಈ ತಿಂಗಳ ಮೊದಲ ವಾರದಲ್ಲಿ ಹಾಸನಕ್ಕೆ ಹೋಗಿದ್ದೆ. ನಮ್ಮ ನಡುವಿನ ಅಧ್ಬುತವಾದ ಅನುವಾದಕರಾದ ಜೆವಿ ಕಾರ್ಲೊ ಸರ್‌, ಮೈಸೂರಿನ ಕಥೆಗಾರ ಗೆಳೆಯ ಡಾ. ಗವಿಸ್ವಾಮಿ ಸಿಕ್ಕಿದ್ದರು. ಅವರ ಜೊತೆ ಮಾತನಾಡಿ ಸಂಜೆ ಹಿರಿಯ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜು ರವರನ್ನು ಭೇಟಿಯಾದೆ. ಹಾಸನದ ಬಳಿ ಅತ್ತಿಹಳ್ಳಿಯ ತೋಟದ ಮನೆಯಲ್ಲಿ ವಾಸವಿರುವ ಹಿರಿಯರಾದ ನಾಗರಾಜುರವರನ್ನು ಭೇಟಿಯಾದ ದಿನ ಹೊರಗೆ ಸಣ್ಣನೆ ತುಂತುರು ಮನೆ ಹನಿಯುತ್ತಿತ್ತು. ಒಂದೆರಡು ಗಂಟೆ ಅವರೊಡನೆ ಹರಟೆ ಹೊಡೆದು ರಾತ್ರಿ ಊಟ ಮಾಡಿ ವಾಪಸ್ಸು ಬರುವಾಗ ನನ್ನ … Read more

ಪಂಜುವಿಗೆ ನೆರವಾಗಿ

ಸಹೃದಯಿಗಳೇ, ನಿಮಗೆ ತಿಳಿದಂತೆ ಕಳೆದ ಒಂಬತ್ತು ವರ್ಷಗಳಿಂದ ಪಂಜು ಪತ್ರಿಕೆ ಕನ್ನಡದ ಸೇವೆಯಲ್ಲಿ ನಿರತವಾಗಿದೆ. ಪ್ರತಿ ವರ್ಷದ ಹೋಸ್ಟಿಂಗ್‌ ವೆಚ್ಚ, ವೆಬ್‌ ಡೊಮೈನ್‌ ನವೀಕರಣ ವೆಚ್ಚ ಮತ್ತು ಇತರ ವೆಚ್ಚಗಳು ಹೆಚ್ಚತ್ತಲೇ ಹೋಗುತ್ತಿವೆ. ಈ ಎಲ್ಲಾ ವೆಚ್ಚಗಳನ್ನು ಪಂಜು ಇಷ್ಟು ವರ್ಷ ನಿಭಾಯಿಸುತ್ತಲೇ ಬಂದಿದೆ. ಹೆಚ್ಚುತ್ತಿರುವ ತಂತ್ರಜ್ಞಾನಗಳ ಜೊತೆಗೆ ಅವುಗಳಿಗೆ ಹಣ ನೀಡಬೇಕಾದ ಅವಶ್ಯಕತೆ ಕೂಡ ಇರುವುದರಿಂದ ನಿಮಗೆ ಪಂಜುವಿಗೆ ನೆರವಾಗುವ ಮನಸಿದ್ದರೆ ನಿಮಗೆ ಅನಿಸಿದ್ದಷ್ಟು ಹಣವನ್ನು ಪಂಜುವಿಗೆ ಡೊನೇಟ್‌ ಮಾಡಿ. Google pay/ Phone Pay: … Read more

ಮರ ಕಡಿಯುವುದಾಗಲಿ ಅಥವಾ ಅದನ್ನು ಘಾಸಿಗೊಳಿಸುವುದಾಗಲಿ ಮಾಡುವುದು ಬಿಷ್ಣೋಯಿ ಧರ್ಮಕ್ಕೆ ವಿರುದ್ಧವಾದುದ್ದು: ಮಿತಾಕ್ಷರ

ಇತಿಹಾಸದಲ್ಲಿ ನಡೆದ ಅತಿ ಘೋರ ಘಟನೆ ಅದು ನಡೆದದ್ದು ರಾಜಸ್ಥಾನದ ಜೋಧಪುರದಲ್ಲಿ ಅಲ್ಲಿನ ರಾಜ ಅಜಿತ ಸಿಂಹ ತನ್ನ ಅರಮನೆಯ ಸೌಂದರ್ಯ ಹೆಚ್ಚಿಸಲು ತನ್ನ ರಾಜ್ಯದ ಬಿಷ್ಣೋಯಿ ಸಮಾಜದವರೆ ಹೆಚ್ಚಾಗಿದ್ದ ಜೆಹ್ನಾದ್‌ನ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದ ಖೇಜ್ರಿ ವೃಕ್ಷಗಳನ್ನು ಕತ್ತರಿಸಿ ತರುವಂತೆ ಮಂತ್ರಿ ಗಿರಿಧರ ಭಂಡಾರಿಗೆ ಆಜ್ಞೆಪಿಸಿದ. ಸೈನಿಕರೊಡನೆ ಹೊರಟ ಮಂತ್ರಿ ಗ್ರಾಮದಲ್ಲಿ ಮರ ಕಡಿಯಲು ಮುಂದಾದ. ಸುದ್ದಿ ತಿಳಿದು ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಅಲ್ಲಿನ ಬಿಷ್ಣೋಯಿ ಸಮಾಜದ ಅಮೃತಾದೇವಿ ಬಿಷ್ಣೋಯಿ ತಕ್ಷಣ ಮರಗಳ ರಕ್ಷಣೆಗೆ … Read more

ಬೆರಗು ಹುಟ್ಟಿಸುವ ಬೇತಾಳ: ರಾಜಶ್ರೀ. ಟಿ. ರೈ. ಪೆರ್ಲ

ಊರ ದೇವರ ಜಾತ್ರೆ ಬಂತು ಎಂದರೆ ಒಂಥರಾ ತನು ಮನದಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುತ್ತದೆ. ಹಳೇಯ ನೆನಪುಗಳು, ಊರಿಗೆ ಬರುವ ಅಥಿತಿಗಳ ಸ್ವಾಗತದ ತಯಾರಿ. ಅದರಲ್ಲೂ ಧಕ್ಷಿಣ ಕನ್ನಡ ಕಾಸರಗೋಡು ಈ ಭಾಗದಲ್ಲಿ ದೇವಸ್ಥಾನದ ಜಾತ್ರೆಯೆಂದರೆ ಒಂದು ಬಗೆಯ ಸಾಂಸ್ಕøತಿಕ ಉತ್ಸವವೇ ಸರಿ.ಅಲ್ಲಿ ಎಲ್ಲವೂ ಉಂಟು ಎನ್ನುವ ಹಾಗೆ. ಪ್ರತೀ ದಿನ ನಿಗದಿತ ಹೊತ್ತಿಗೆ ನಡೆಯುವ ಪೂಜೆ ಮತ್ತು ಇತರ ನಿತ್ಯ ನೈಮಿತ್ತಿಕ ಕ್ರಿಯೆ ವಿಧಿಯನ್ನು ಬಿಟ್ಟರೆ ಕೆಲವು ಹಬ್ಬದ ಸಮಯಕ್ಕೆ ಸಣ್ಣ ಸಂಭ್ರಮ. ಆದರೆ ಜಾತ್ರೆ … Read more

ಬಡತನಕ್ಕೂ ಸೊಗಸಿದೆ ಎನ್ನುವ ಮುಕ್ಕಾದ ಭಿಕ್ಷಾಪಾತ್ರೆ ಬೌಲ್: ಡಾ. ನಟರಾಜು ಎಸ್.‌ ಎಂ.

ಎಂ ಎಸ್‌ ಮೂರ್ತಿಯವರ ಆಟೋಗ್ರಾಫ್‌ ಇರುವ ಅವರ ಬೌಲ್‌ ಕಾದಂಬರಿ ನನ್ನ ಕೈ ಸೇರಿ ಹತ್ತು ದಿನವಾಗಿರಬಹುದು. ಮೊದಲ ದಿನ ಊರಿನಲ್ಲಿ ಪುಸ್ತಕ ಓದಲು ಕುಳಿತಾಗ ಎರಡು ನಿಮಿಷಕ್ಕೆ ಒಂದು ಪುಟದಂತೆ ಐವತ್ತು ಪುಟಗಳ ಮೊದಲ ಅಧ್ಯಾಯವನ್ನು ಓದಿ ಮುಗಿಸಿದ್ದೆ. ಉಳಿದ ಅ‍ಧ್ಯಾಯಗಳನ್ನು ಬಿಡುವಿದ್ದಾಗ ಓದಿಕೊಂಡು ಇವತ್ತು ಬೆಳಿಗ್ಗೆ ಈ ಪುಸ್ತಕದ ಓದು ಪೂರ್ತಿಯಾಯಿತು. ಒಂದಷ್ಟು ಪುಟಗಳಲ್ಲಿನ ವಿಷಯಗಳು ಅದರಲ್ಲೂ ಗುರುಪರಂಪರೆಯ ಕುರಿತು ಬರೆದ ಅಧ್ಯಾಯಗಳು ಚೂರು confuse ಆದಂತೆ ಅನಿಸಿದ್ದರಿಂದ ಆ ಪುಟಗಳನ್ನು ಮತ್ತೆ ಓದಿಕೊಂಡೆ. … Read more

ಪಂಜು ಕಾವ್ಯಧಾರೆ

ಹಸಿ ರಕ್ತ ಮುಸಿ ಮುಸಿ ನಗುತ್ತಲಿತ್ತುಎಡ ಬಲದ ಭುಜಹತ್ತಿ ಕ್ರೌರ್ಯ ಮೆರೆಯುತ್ತಲಿತ್ತುತಾನು ನಗುತ್ತಲೇ ಪ್ರಶ್ನೆ ಕೇಳುತ್ತಿತ್ತು? ಯಾರೊಳಗೆ ನಾನಿಲ್ಲ ?ನನ್ನ ಬಲ್ಲವರಿಲ್ಲನಿನ್ನೊಳಗಿನ ಅವನಅವನೊಳಗಿನ ನಿನ್ನನಡುವಿನಅಂತರ ಇಷ್ಟೇಅದು ನಾನು! ನಿನ್ನೊಳಗಿನ ನನಗೆನಾನಾ ಮುಖಗಳುನಾನಿದ್ದೆ ನನ್ನಂತೆನೀನೇ ತೊಡಿಸಿದೆಸಿದ್ದಾಂತದ ಸೋಗಿನಲ್ಲಿಧರ್ಮಾಂಧತೆಯ ಮಸಿಯನಾನೇನು ಮಾಡಲಿಕರ್ತವ್ಯ ಮುಗಿಸಿದೆಕಾರಣ ಇಷ್ಟೇಅದು ನಾನು! ಸಿಡಿವುದಷ್ಟೇ ಗೊತ್ತುಗುಂಡಿಗೆಕಡಿಯುವುದಷ್ಟೇ ಗೊತ್ತುಮಚ್ಚಿಗೆಪಾಪ ಅವುಗಳ ತಪ್ಪಿಲ್ಲತಪ್ಪಿಗೆ ತೀರ್ಪಿಷ್ಟೇಅದು ನಾನು ! ಹೆತ್ತವರೋ ಹೊತ್ತವರೋತುತ್ತಿಟ್ಟು ಸಾಕಿದವರೋಯಾರ ಕಣ್ಣೊರೆಸುವೆ ?!ನೀ ಸತ್ತನಂತರಬೇಕೇ ನಿಜ ಕಾರಣ ?ಹ್ಞೂಂ..!ಅದು ನಾನೆಂಬನೀನು ಅಷ್ಟೇ !! ಹಸಿ ರಕ್ತ ಮುಸಿ ಮುಸಿ … Read more

ಗಾಡಿ ಹೋಟೆಲ್: ಎಸ್.ಗಣೇಶ್

ಸದಾಶಿವನಿಗೆ ಒಂದು ದೊಡ್ಡ ಚಟವಿತ್ತು. ತಿನ್ನೋ ಚಟ. ಯಾವಾಗಲೂ ಬಾಯಿ ಆಡ್ತಾನೇ ಇರಬೇಕು. ಅವರು, “ಗಾಡಿ ಹೋಟೆಲ್” ತಿಂಡಿ ಚಪಲ. ಮನೆಯಲ್ಲಿನ ಮೇವು ಹಿಡಿಸುತ್ತಿರಲಿಲ್ಲ. ಹೊರಗಡೆಯ ಯಾವುದೇ ತಿನಿಸು ಬಿಡುತ್ತಿರಲಿಲ್ಲ. ಬೇರೆ ಊರಿಗೆ ಹೋದರೂ.. ರಸ್ತೆ ಬದಿ ಕಾಣುತ್ತಿದ್ದ ಗಾಡಿ ಹೋಟೆಲ್ ಕಡೆಯೇ ಗಮನ. ಊಟದ ವಿಷಯಕ್ಕೆ ಎಷ್ಟೋ ಸಲ, ಮಡದಿ ಗಂಗಾಂಬ ಜೊತೆ ಜಗಳವಾಡಿಕೊಂಡು ಕಳೆದ ವರ್ಷ 12 ಬಾರಿ “ಗಾಡಿ ಹೋಟೆಲ್” ಜೊತೆ 1 ಬಾರಿಗೆ 1 ವಾರದಂತೆ ಸಂಸಾರ ಮಾಡಿದ ರೆಕಾರ್ಡ ಇದೆ. … Read more

ಸೋಲಿಗರ ಜೊತೆ ಒಂದು ದಿನ: ಶೈಲಜೇಷ ಎಸ್.

ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳ ಬೇಕಿಲ್ಲ ಅಲ್ಲವೇ, ಅಂತ ಒಂದು ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ. ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಪ್ರಯಾಣ ಅಂತ ಹೋಗುತ್ತಿದ್ದದ್ದೆ ವರುಷಕ್ಕೆ ಒಮ್ಮೆಯೋ ಅಥವಾ ಎರಡು ಬಾರಿಯೊ ಅಷ್ಟೆ, ಈಗ ಹಾಗಿಲ್ಲ ಪ್ರತಿವಾರದ ಕೊನೆಯ (weekend) ದಿನಗಳನ್ನು ಪ್ರಯಾಣದ ದಿನಗಳೆಂದೆ ಘೋಷಿಸಬಹುದು ಅಷ್ಟರ ಮಟ್ಟಿಗೆ ಎಲ್ಲರೂ ಪ್ರಯಾಣದಲ್ಲಿ ಇರುವವರೆ. ಕಾಡು, ಮೇಡು, ಚಾರಣ, ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳ, ರೆಸಾರ್ಟ್, ಹೋಮ್ ಸ್ಟೇಗಳು ಹೀಗೆ ಎಲ್ಲೆಲ್ಲೂ ಜನರಿಂದ … Read more

ಪಂಜು ಕಾವ್ಯಧಾರೆ

ಯಾರ ಮಾನಸ್ಯಾಗ ಏನೈತೋ! ಬೊಗಸೆಯಾಗೆ ಏನಿಲ್ಲಕಣ್ಣ ತುಂಬಿ ಕಂಬನಿ ತುಳುಕ್ಯಾವಲ್ಲಯಾರ ಮನಸ್ಯಾಗ ಏನೈತೋಕಾಣದ ಆ ದ್ಯಾವನೆ ಬಲ್ಲ ಹೊರಳ್ಯಾದ ಹಕ್ಕಿ ಮರಳಿ ಗೂಡಿಗೆಹೋಗುವುದಾದರೂ ಹಾರಿ ಎಲ್ಲಿಗೆ?ಹಾರಲಿಕ್ಕ ಇರುವುದು ಆಕಾಸ ದಿಟಬದುಕೆನೆದ್ದರೂ ಭೂಮಿ ಮ್ಯಾಗೆ ಎಲ್ಲಿಂದ ಬಂದಿಯೋಅಲ್ಲಿಗೆ ಹೋಗಾಂವ ನೀಖರೇ ಅಂದ್ರ ನಿನ ಬದ್ಕು ಮೂರು ದಿನದ ಸಂತಿ ಐತಿಖದರಿರಲಿ ತಿಳಕೊಂಡು ಬಾಳು ನೀ ಎಷ್ಟಾಂತ ಹೊರ್ತಿಬವಣೆಗಳ ಮೂಟೆಗಳಇಷ್ಟಲಿಂಗ ಇಟ್ಟಂಗ್ ಆಗತೈತೆಯಾಕೆ ನೀ ಸುಮ್ನೆ ಚಿಂತಿ ಮಾಡ್ತಿ ಎಲ್ಲರೂ ಸಾಯೋವ್ರೆ ಒಂದ್ ದಿವ್ಸಅಮರ ಯಾರಿಲ್ಲ ಈ ಲೋಕದಾಗನೀ ನಡದಂತೆ … Read more

ಹೊಟ್ಟೆಪಾಡಾ..? ಸಾಧನೆಯಾ..?: ಮಧುಕರ್ ಬಳ್ಕೂರು

“ಯಾಕೋ ನನ್ ಟೈಮೇ ಚೆನ್ನಾಗಿಲ್ಲ. ಹಾಳಾದ್ದು ಈ ಟೈಮಲ್ಲೆ ಒಳ್ಳೊಳ್ಳೆ ಯೋಚನೆಗಳು ಬರ್ತವೆ. ಆದರೂ ಏನು ಮಾಡೋಕೆ ಆಗ್ತಾ ಇಲ್ಲ. ಥತ್…” ಹೀಗೆ ನಿಮಗೆನೆ ಗೊತ್ತಿಲ್ಲದಂತೆ ದಿಢೀರ್ ಅಂತ ಒಂದು ಅಸಹನೆ ಸ್ಪೋಟಗೊಳ್ಳುತ್ತೆ. ಖಂಡಿತ ನಿಮ್ಮ ಸಮಸ್ಯೆ ಇರೋದು ಟೈಮ್ ಚೆನ್ನಾಗಿಲ್ಲ ಅಂತಲ್ಲ. ನಿಜ ಹೇಳಬೇಕಂದ್ರೆ ಟೈಮು ಚೆನ್ನಾಗಿರೋದಕ್ಕೆನೆ ನಿಮ್ಮಲ್ಲಿ ಒಳ್ಳೆಯ ಯೋಚನೆಗಳು ಬರ್ತಿರೋದು. ಇನ್ನು ಹೇಳಬೇಕಂದ್ರೆ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮೂಡುತ್ತಿವೆ ಅಂದ್ರೆ ಅದನ್ನ ಕಾರ್ಯರೂಪಕ್ಕೆ ಇಳಿಸುವುದಕ್ಕೆ ಇದಕ್ಕಿಂತ ಒಳ್ಳೆ ಟೈಮ್ ಮತ್ತೊಂದಿಲ್ಲ. ಆದರೂ ನಿಮಗೆ … Read more

ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಯ ಕೇಂದ್ರವಾಗಿದ್ದ ಬಸ್ರೂರು: ರಾಘವೇಂದ್ರ ಅಡಿಗ ಎಚ್ಚೆನ್.

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕರ್ನಾಟಕ ಅದರಲ್ಲಿಯೂ ಬಸ್ರೂರು, ಸುತ್ತಮುತ್ತಲಿನ ಜನರ ಕೊಡುಗೆಗಳ ಬಗ್ಗೆ ಚಿಕ್ಕ ಪರಿಚಯ ನೀಡುವ ಉದ್ದೇಶ ಇಲ್ಲಿಯದು. ಇಂದಿನ ಬಸ್ರೂರು ಹಿಂದೆಲ್ಲಾ ವಸುಪುರ ಎಂದು ಕರೆಯಲ್ಪಡುತ್ತಿತ್ತು ಇದು ಕರಾವಳಿಯ ವಾರಾಹಿ ನದಿ ದಂಡೆಯ ಮೇಲಿರುವ … Read more

ಶ್ರಾವಣ ಮಾಸದ ಗೌರೀ ಹಬ್ಬದ ನೆನಪುಗಳು: ಡಾ. ವೃಂದಾ ಸಂಗಮ್

ಶ್ರಾವಣ ಮಾಸ ಅಂದರ ಹಬ್ಬಗಳ ಮಾಸ. ಅದು ಶುರುವಾಗೋದೇ, “ಈ ಸಲಾ ಐದು ಶುಕ್ರವಾರ ಬಂದಿಲ್ಲ, ನಾಲ್ಕೇ ವಾರ ಬರತಾವ. ಅದರಾಗೂ ಮೊದಲನೇ ವಾರ ನಾಗರ ಚೌತಿ, ಹಂಗಾದರ, ಎರಡನೇ ವಾರ, ಅಂದರ, ವರ ಮಹಾಲಕ್ಷ್ಮಿ ಏಕಾದಶೀನೋ, ದ್ವಾದಶೀನೋ, ಇರತದ, ಈ ಸಲಾ ಈ ಗೌರವ್ವನೂ ನಮಗ ಖರ್ಚು ಕಡಿಮೀ ಮಾಡ್ಯಾಳ.” ಅನ್ನುವ ಲೆಕ್ಕಾಚಾರದಿಂದ. ಯಾಕೆಂದರೆ, ಶ್ರಾವಣ ಮಾಸದ ಗೌರಿದೇವಿ ಅಂದರ ಭಕ್ತಿ ಎಷ್ಟೋ, ಮಡಿನೂ ಅಷ್ಟೇ, ಅಲ್ಲದೇ ಖರ್ಚೂ ಅಷ್ಟೇ ಹೆಚ್ಚು. ಶ್ರಾವಣ ಮಾಸದ ಖರ್ಚು … Read more