ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 69 & 70): ಎಂ. ಜವರಾಜ್
-೬೯-ಮೊಕ್ಕತ್ಲು ಕವಿಕಂಡು ಕಣ್ಣು ಕತಿ ಕಾಣ್ದುಏನ್ಮಾಡಗಿದ್ದದುನಾ ತೇಲ್ತನೇ ಇದ್ದಿ.. ಮೋಟ್ರು ಸದ್ದಾಯ್ತನೆ ಇತ್ತುಅದ ಆಪ್ಮಾಡ್ದೆನೀರು ತುಂಬಿ ತುಳುಕ್ತತೆವ್ರಿ ಮ್ಯಾಲ ಏರಿ ಹರಿತಿತ್ತುನಾನು ಆ ಹರಿಯ ನೀರ್ಲಿ ತೆವ್ರಿ ಸುತ್ತದೋಣಿತರ ತೇಲ್ತ ಸುತ್ತ ಬರದೇ ಆಯ್ತು.. ಆಗ ತೆವ್ರಿ ಮ್ಯಾಲಅದೇನ ಬುಸುಗುಟ್ಟ ಸದ್ದಾಯ್ತುನಂಗ ಗಾಬ್ರಿಯಾಗಿ ತಿರುಗ್ದಿಆ ಬುಸಗುಟ್ಟ ಜಾಗದ ಮ್ಯಾಲಪಣುಕ್ನುಳ್ಗಳ ಹಿಂಡೆ ಹಾರಾಡ್ತಆ ಪಣುಕ್ನುಳ್ಗಳ ಬೆಳುಕ್ಲಿದಪ್ದು ಕರಿ ನಾಗ್ರಾವು ಕಾಣ್ತು..ಅದು ಬುಸುಗುಡ್ತ ತೆವ್ರಿ ಮ್ಯಾಲನೀರ ಸರಿಸ್ತಾ ಹರಿತಾ ಹೋಯ್ತಿತ್ತು ಅದೆ ಗಳುಗ್ಗ ಅತ್ತಿಂದ ಯಾರೊಓಡ್ಬತ್ತಿರ ಸದ್ದಾಯ್ತುನಂಗ ಅತ್ತಗ ದಿಗಿಲಾಗಿ … Read more