ಸೀಮಾತೀತ ಸಿಮೊನ್‌ ದ ಬೋವಾ: ಸಂಗನಗೌಡ ಹಿರೇಗೌಡ

ಭಾರತೀಯ ಮತ್ತು ಭಾರತೇತರ ಪ್ರಮುಖ ಸಾಂಸ್ಕೃತಿಕ ನಾಯಕರು, ಕವಿಗಳು, ಲೇಖಕರು ಅವರ ಒಟ್ಟು ಬದುಕಿನಲ್ಲಿ ಘಟಿಸಿದ ಮುಖ್ಯ ಘಟನೆಗಳನ್ನಿಟ್ಟುಕೊಂಡು ಕನ್ನಡಕ್ಕೆ ತರ್ಜುಮೆಗೊಂಡ ನಾಲ್ಕು ಕೃತಿಗಳನ್ನು ನನ್ನ ಮಿತಿಯೊಳಗೆ ಓದಿಕೊಂಡಿದ್ದೇನೆ. ನಟರಾಜ ಹುಳಿಯಾರವರು ಸಂಪಾದಿಸಿರುವ “ಲೋಹಿಯಾ ಕಂಡ ಗಾಂಧಿ” ಇದರಲ್ಲಿ ಬಿ.ಎ ಸನದಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಸನ್‌ ನಯೀಂ ಸುರಕೋಡ. ಸತ್ಯವ್ರತ, ರವೀಂದ್ರ ರೇಶ್ಮೆ, ಸಿ, ನಾಗಣ್ಣ, ನಟರಾಜ ಹುಳಿಯಾರ, ಈ ಏಳು ಜನ ಲೇಖಕರು ಲೋಹಿಯಾ ಅವರ ಬದುಕಿನ ಪ್ರಮುಖವಾದ ಭಾಷಣ, ಚಳುವಳಿ, ಹೋರಾಟಗಳಿನ್ನಿಟ್ಟುಕೊಂಡು, ಗಾಂಧಿಯ ಕುರಿತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಗೋಡೆಯ ಮೇಲೆ ತಮ್ಮದೇ ರಕ್ತದಲ್ಲಿ ಗೀಚಿ ಗೀಚಿ ಬರೆದ ದಲಿತ ತಲೆಮಾರುಗಳ ತವಕ ತಲ್ಲಣ!”: ಎಂ. ಜವರಾಜ್

“ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಬಿದಲೋಟಿ ರಂಗನಾಥ್ ಅವರ ನಲವತ್ತು ಕವಿತೆಗಳನ್ನೊಳಗೊಂಡ ಒಂದು ಪರಿಪೂರ್ಣ ಸಂಕಲನ. ಇಲ್ಲಿ ‘ಪರಿಪೂರ್ಣ’ ಪದ ಬಳಕೆಯು ಕವಿತೆಗಳು ಓದುಗನಿಗೆ ಗಾಢವಾಗಿ ಆವರಿಸಿಕೊಳಬಹುದಾದ ಲಯದ ಒಂದು ದಟ್ಟ ದನಿ. ಈ ಆವರಿಕೆ, ಕವಿಯು ಕಾವ್ಯ ಕಟ್ಟುವಿಕೆಯಲ್ಲಿ ಅನುಸರಿಸಿರುವ ಒಂದು ಕುಶಲ ತಂತ್ರವೇ ಆಗಿದೆ. ಈ ಪರಿಪೂರ್ಣತೆಯನ್ನೆ ಹಿಗ್ಗಿಸಿ ಬಿದಲೋಟಿ ರಂಗನಾಥರ ಕವಿತೆಗಳ ಓದು ಮತ್ತು ಮುನ್ನೋಟವನ್ನು ಪರಿಣಾಮಕಾರಿಯಾಗಿ ಒಳಗಣ್ಣಿನಿಂದ ನೋಡುತ್ತಾ ಪರಾಮರ್ಶನೆಗೆ ಒಳಪಡಿಸುವುದಾದರೆ “ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಎಂಬುದು ದಲಿತ ನೆಲೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುವಂಗಿಯ ಕನಸು (ಅಧ್ಯಾಯ ೧೬-೧೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೬: ಹೊನ್ನೇಗೌಡನ ಟೊಮೆಟೋ ತೋಟ ತೀವ್ರಗತಿಯಲ್ಲಿ ಜರುಗಿದ ಘಟನಾವಳಿಗಳ ಹೊಡೆತದಿಂದ ಚೆನ್ನಪ್ಪನ ಮನ್ನಸ್ಸು ವಿಚಲಿತವಾಗಿತ್ತು. ಮಂಕು ಬಡಿದವರಂತೆ ಕುಳಿತ ಗಂಡನನ್ನು ಕುರಿತು ‘ಅದೇನೇನು ಬರುತ್ತೋ ಬರಲಿ ಎದುರಿಸೋಕೆ ತಯಾರಾಗಿರಣ. ನೀವು ಹಿಂಗೆ ತಲೆ ಕೆಳಗೆ ಹಾಕಿ ಕೂತ್ರೆ ನಮ್ಮ ಕೈಕಾಲು ಆಡದಾದ್ರೂ ಹೆಂಗೆ? ಈಗ ಹೊರಡಿ, ದೊಡ್ಡೂರಿನಲ್ಲಿ ಏನೇನು ಕೆಲ್ಸ ಇದೆಯೋ ಮುಗಿಸಿಕಂಡು ಬನ್ನಿ. ನಾನೂ ಅಷ್ಟೊತ್ತಿಗೆ ಮನೆ ಕೆಲಸ ಎಲ್ಲಾ ಮುಗ್ಸಿ ಬುತ್ತಿ ತಗಂಡ್ ಹೋಗಿರ್ತೀನಿ’. ಸೀತೆ ಗಂಡನಿಗೆ ದೈರ್ಯ ತುಂಬುವ ಮಾತಾಡಿದಳು. ನಂತರ ಸುಬ್ಬಪ್ಪನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹರಿವು: ತಿರುಪತಿ ಭಂಗಿ

“ಕೇಳ್ರಪೋ..ಕೇಳ್ರೀ.. ಇಂದ ಹೊತ್ತ ಮುನಗೂದ್ರವಳಗಾಗಿ ಊರ ಖಾಲಿ ಮಾಡ್ಬೇಕಂತ ನಮ್ಮ ಡಿ.ಸಿ ಸಾಹೇಬ್ರ ಆದೇಶ ಆಗೇತಿ, ಲಗೂನ ನಿಮ್ಮ ಸ್ವಾಮಾನಾ ಸ್ವಟ್ಟಿ ತಗೊಂದ, ನಿಮ್ಮ ದನಾ ಕರಾ ಹೊಡ್ಕೊಂಡ, ತುಳಸಿಗೇರಿ ಗುಡ್ಡಕ ಹೋಗಿ ಟಿಕಾನಿ ಹೂಡ್ರೀ ಅಂತ ಹೇಳ್ಯಾರು, ನನ್ನ ಮಾತ ಚಿತ್ತಗೊಟ್ಟ ಕೇಳ್ರಪೋ..ಕೇಳ್ರೀ.. ಹೇಳಿಲ್ಲಂದಿರೀ.. ಕೇಳಿಲ್ಲಂದಿರೀ ಡಣ್..ಡಣ್” ಅಂತ ಡಬ್ಬಿ ಯಮನಪ್ಪ ಡಂಗರಾ ಹೊಡದದ್ದ ತಡಾ. ಊರ ಮಂದಿಯಲ್ಲಾ ಡಬ್ಬಿ ಯಮನಪ್ಪನ ಮಾತ ಕೇಳಿ ಗಾಬ್ರಿ ಆದ್ರು. ಕೆಂಪರಾಡಿ ಹೊತಗೊಂದ, ಎರಡೂ ಕಡವಂಡಿ ದಾಟಿ, ದಡಬಡಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ನೇಹ ಸ್ವರ್ಗ !: ಅಶ್ಫಾಕ್ ಪೀರಜಾದೆ

Marriages are made in heaven-John lyly ಬಿಎಂಡ್ಬ್ಲೂ ಕಾರೊಂದು ಮನೆ ಮುಂದೆ ನಿಂತಾಗ ಮನೆಯಿಂದ ಹೊರಗೆ ಬಂದು ಆಶ್ಚರ್ಯಚಕಿತಳಾಗಿ ಕಣ್ಣಗಲಿಸಿ ನೋಡುತ್ತಿರಬೇಕಾದರೆ ತಿಳಿಗುಲಾಬಿ ಸೀರೆ , ಕಡು ಕಪ್ಪು ಬಣ್ಣದ ರವಿಕೆ ತೊಟ್ಟು ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿದ್ದ ನೀಳಕಾಯದ ಸುಂದರ ಹೆಣ್ಣೊಂದು ಕಾರಿನಿಂದ ಇಳಿದು ಬರುತ್ತಿರಬೇಕಾದರೆ ಸಾಕ್ಷಾತ್ ಅಪ್ಸರೆಯೇ ತನ್ನತ್ತ ನಡೆದು ಬರುವಂತೆ ಕಲ್ಪನಾಳಿಗೆ ಭಾಸವಾಗಿತ್ತು.“ಗುರುತು ಸಿಗಲಿಲ್ಲವೇನೇ.. ಕಲ್ಪನಾ?”ಎಂದು ಆ ಗುಲಾಬಿ ಹೂವಿನಂತಹ ಹೆಣ್ಣು ತನ್ನ ಇಂಪಾದ ಕಂಠದಿಂದ ಉಲಿದಾಗಲೇ ಕಲ್ಪನಾ ವಾಸ್ತವಲೋಕಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

“ಬೇಕಿದ್ದರೊಮ್ಮೆ ಅತ್ತುಬಿಡು” ಬೇಕಿದ್ದರೊಮ್ಮೆ ಜೋರಾಗಿ ಅತ್ತುಬಿಡುಒಳಗೊಳಗೇ ಮಮ್ಮಲ ಮರುಗುವುದೇಕೆ?ಸಿಗಲಾರದಕ್ಕೆ ಕೈ ಚಾಚುವ ಹುಂಬತನವೇಕೆ?ಹಸಿದ ಭುವಿಗೆ ಕೊಳದೊಳಗೆ ಬಿದ್ದಚಂದ್ರ ಹೊಟ್ಟೆ ತುಂಬಿಸಲಾರ!ಬಿಸಿಯುಸಿರಿಗೆ ಕುದಿಯುವ ರಕ್ತ ಆರಿಮೌನದಲಿ ಹೆಪ್ಪುಗಟ್ಟುವುದು ಬೇಡ.. ಜುಳು ಜುಳು ಸದ್ದು ಮಾಡುತಹರಿಯುವ ನದಿ ಅತ್ತದು ಯಾರಾದರೂಗಮನಿಸಿಹರೇ?ಕಾಲ್ಗಳ ಇಳಿಬಿಟ್ಟು ತೋಯ್ದುಕೊಂಡರೆ ವಿನಃಆತುಕೊಂಡವರಿಲ್ಲ..ಅಳಿದ ಮೇಲೂ ಉಳಿದು ಹೋಗುವಗಾಯದ ಕಲೆಗಳಿಗೆ ನಿತ್ಯ ನರಳಾಡದೆಅತ್ತು ಮುಕ್ತಿ ಕೊಟ್ಟು ಬಿಡು.. ಇಳೆಯ ಕೊಳೆಯನ್ನು ತೊಡೆದು ಹಾಕಲುಸುರಿವ ಭಾರೀ ಮಳೆಯಂತೆ..ಕಿಟಕಿಯಾಚೆ ಕಾಣುವ ರಸ್ತೆಗೆ ನೆಟ್ಟಕಣ್ಣ ಪದರಿನಿಂದ ನೋವುಗಳೆಲ್ಲಹರಿದು ಹೋಗುವಂತೆ ಒಮ್ಮೆಜೋರಾಗಿ ಅತ್ತುಬಿಡು..ಹಠಮಾರಿ ನೆನಪುಗಳು ಎದೆಯೊಳಗೆಗೂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುವಂಗಿಯ ಕನಸು (ಅಧ್ಯಾಯ ೧೪-೧೫): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೪: ಸಮೂಹ ಸನ್ನಿ ಚಿನ್ನಪ್ಪ ಕ್ಷಣ ತಬ್ಬಿಬ್ಬಾದ. ಸಮಸ್ಯೆಯ ಗೊಸರಿನ ಮೇಲೆ ಕಾಲಿಟ್ಟಿದ್ದೇನೆ. ಕಾಲಕ್ರಮದಲ್ಲಿ ಭಾರ ಹೆಚ್ಚಾಗಿ ಅದರಲ್ಲಿ ಹೂತು ಹೋಗಿ ಬಿಟ್ಟರೆ, ಶರೀರ ಭಯದಿಂದ ಸಣ್ಣಗೆ ಅದುರಿದಂತೆನಿಸಿತು. ಅಂಗೈಯಲ್ಲಿದ್ದ ಕರಿಮಣಿ ಸರವನ್ನೊಮ್ಮೆ ವಿಷಾದದಿಂದ ನೋಡಿ ನಂತರ ಪ್ಯಾಂಟಿನ ಜೇಬಿನಲ್ಲಿ ಇಟ್ಟಿಬಿಟ್ಟು ರಸ್ತೆಗೆ ಇಳಿದ.ಎದುರಿಗೇ ಪ್ರಭಾಕರನ ಬ್ರಾಂಡಿ ಷಾಪು ಕಾಣುತ್ತಿತ್ತು. ಈವತ್ತು ಸಂತೆಯ ದಿನವಾಗಿದ್ದರೆ ವಾಡಿಕೆಯಂತೆ ಸಂಜೆ ಅಲ್ಲಿ ಸ್ನೇಹಿತರೊಂದಿಗೆ ಕುಳಿತು ಬ್ರಾಂದಿ ಗುಟುಕರಿಸುತ್ತಾ ನನ್ನ ಸಮಸ್ಯೆಯನ್ನು ಅವರ ಮುಂದಿಟ್ಟು ಮನಸ್ಸು ಹಗುರಮಾಡಿ ಕೊಳ್ಳಬಹುದಿತ್ತಲ್ಲ!ಚಿನ್ನಪ್ಪನ ಮನಸ್ಸಿನಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಹೆಣ್ಣಿನ ಒಳ ವೇದನೆಯ ಚಿತ್ರಣವನ್ನು ಓದುಗನ ಎದೆಗೆ ಎರಕ ಉಯ್ದು ಬೆಚ್ಚಿಸುವ ಕವಿತೆಗಳು”: ಎಂ. ಜವರಾಜ್

ಬದುಕಿನ ಸತ್ಯಗಳನ್ನು ಕೆಲವೇ ಪದಗಳಲ್ಲಿ ಕೆಲವೇ ಸಾಲುಗಳಲ್ಲಿ ಕೆಲವೇ ನುಡಿಗಟ್ಟುಗಳಲ್ಲಿ ಹೇಳಬಲ್ಲ ಶಕ್ತಿ ಇರುವುದು ಕಾವ್ಯಕ್ಕೆ. ಸಾಹಿತ್ಯದ ಹುಟ್ಟಿನ ಮೂಲ ಸಾಮಾನ್ಯ ಜನರ ‘ಪದ’ದಿಂದ. ಈ ಜಾನಪದಕ್ಕೆ ಶಕ್ತಿ ಹೆಚ್ಚು. ಒಂದು ಕವಿತೆ ತನ್ನ ಎದೆಯೊಳಗೆ ನೂರಾರು ಸಂಕಟಗಳನ್ನು ನೋವುಗಳನ್ನು ಅಭಿಲಾಷೆಗಳನ್ನು ಇಟ್ಟಕೊಂಡಿರುವ ದೈತ್ಯ ಕಣಜ. ಈ ಕಣಜದೊಳಗೆ ಪ್ರೀತಿ ಪ್ರೇಮ ಪ್ರಣಯ ಲೋಲುಪ ಸಾವು ಹಾಸ್ಯ ಲಾಸ್ಯ ಸರಸ ವಿರಸ ಕಾಮ ಭೋಗ ಸಂಭೋಗ ಒಳಿತು ಕೆಡುಕು ಕಸ ರಸಗಳ ವಿವರಗಳೂ ಉಂಟು. ಹೀಗಾಗಿ ನೂರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಅಮೃತಮತಿಪತಿಯ ಕಣ್ತಪ್ಪಿಸಿ ಅಷ್ಠಾವ೦ಕನ ಜೊತೆಗಜಶಾಲೆಯಲ್ಲಿ ದೈಹಿಕ ಸ೦ಬ೦ಧವನ್ನುಬೆಳೆಸಿದ ರಾಣಿ ಅಮೃತಮತಿಗೆತಾನೊಬ್ಬಳು ಉಜ್ಜಯನಿಯ ರಾಣಿರಾಜಾ ಯಶೋಧರನ ಮಡದಿ ಅನ್ನುವುದುಮರೆತು ಹೋಗಿತ್ತೋ ಏನೋ…… ಮನಪ್ರಿಯೆ ಮಡದಿ ಅಮೃತಮತಿಒಬ್ಬ ಸದ್ಗುಣಗಳಿರುವ ವ್ಯಕ್ತಿ ಸಾತ್ವಿಕಗುಣಗಳನ್ನು ತು೦ಬಿಕೊ೦ಡ ಪತಿಯಿಂದದೈಹಿಕ ಸುಖ ಸಿಗದಾದಾಗ ಆಕೆಮಾನಸಿಕವಾಗಿ ಬೇಸರಗೊ೦ಡಿದ್ದು,ಬೇಸರದಲ್ಲಿ ಆಕೆ ತೆಗೆದುಕೊಂಡ ನಿರ್ಧಾರಸರಿ ಅಥವಾ ತಪ್ಪಾಗಿರಬಹುದೋ ಏನೋ… ಹೀಗೆಯೇ ನಿರ೦ತರವಾಗಿ……. ಕತ್ತಲೆಯ ರಾತ್ರಿಯಲ್ಲಿ ಅದೊ೦ದು ದಿನಹಿ೦ಬಾಲಿಸಿಹೋದ ಪತಿಅಷ್ಠಾವ೦ಕನ ಬೆತ್ತಲೆಯ ದೇಹದ ಜೊತೆಬೆತ್ತಲೆಯಾಗಿ ಮಡದಿ ಅಮೃತಮತಿಕಾಮಿಸುವದನ್ನು ಗುಟ್ಟಾಗಿ ನೋಡಿಅಸ೦ಹ್ಯಪಟ್ಟು ರೊಚ್ಚಿಗೆದ್ದ ರಾಜಾಯಶೋಧರ ಮಾಡಿದ್ದಾದರೂ ಏನು…..?ಕೋಪದಿಂದ ಹೊರತೆಗೆದ ಖಡ್ಗಮರಳಿ ಹಿಂದೆ ಸರಿದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುವಂಗಿಯ ಕನಸು (ಅಧ್ಯಾಯ ೧೨-೧೩): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೨: ಒಬ್ಬ ರೈತನ ಆತ್ಮಹತ್ಯೆ ಸೀಗೆಕಾಯಿ ಗೋದಾಮಿನ ಮುಂದುಗಡೆ ರಸ್ತೆಗೆ ತೆರೆದುಕೊಂಡಂತೆ ಉಳಿದ ಸೈಟ್ ಕ್ಲೀನ್ ಮಾಡಿಸಿ ಪಿಲ್ಲರ್ ಏಳಿಸಿ ಬಿಟ್ಟಿದ್ದ ಜಾಗದಲ್ಲಿ ಮೂರು ಮಳಿಗೆಗಳು ತಲೆಯೆತ್ತಿದವು. ಒಂದರಲ್ಲಿ ಶ್ರೀ ನಂದೀಶ್ವರ ಟ್ರೇಡರ್ಸ್ (ಗೊಬ್ಬರ ಮತ್ತು ಔಷಧಿ ವ್ಯಾಪಾರಿಗಳು) ಎಂಬ ಅಂಗಡಿ ಉದ್ಘಾಟನೆಯಾಯಿತು.ಕತ್ತೆರಾಮನ ಯೋಜನೆ ಅಷ್ಟಕ್ಕೆ ನಿಂತಿರಲಿಲ್ಲ. ಆ ಇಡೀ ಜಾಗವನ್ನೆಲ್ಲಾ ಬಳಸಿಕೊಂಡು ಒಂದು ಕಾಂಪ್ಲೆಕ್ಸ್ ಕಟ್ಟಲು ನೀಲನಕ್ಷೆ ತಯಾರು ಮಾಡಿ ಇಟ್ಟುಕೊಂಡಿದ್ದ.ಅದರಲ್ಲಿ ಮುಖ್ಯರಸ್ತೆಗೆ ತೆರೆದುಕೊಂಡAತೆ ಆರು ಮಳಿಗೆಗಳು, ಹಿಂದುಗಡೆ ಶೆಡ್ ಇರುವ ಕಡೆಗೆ ಒಂದು ವಾಸದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲಕ್ಷ್ಮವ್ವನ ತೇರು. ಅಂದರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ. ತೇರಬ್ಬ (ತೇರು-ಹಬ್ಬ) ಅಂದ ಕೂಡಲೇ ಮಕ್ಕಳಾದ ನಮಗೆಲ್ಲಾ ಖುಷಿ ಆಗಬೇಕಾದ್ದು ಸಹಜನ. ಈಗ ಐವತ್ತು ವರ್ಷದ ಹಿಂದೆ, ನಮಗೆಲ್ಲಾ ಜಾತ್ರೆ ತೇರುಗಳೇ ಊರ ಜನರನ್ನು ಒಗ್ಗೂಡಿಸುವ ಹಬ್ಬಗಳು ವಿಶೇಷ ಮನರಂಜನೆಗಳು. ಮಕ್ಕಳಾದ ನಮಗೆ, ಹೋದ ವರ್ಷ ಜಾತ್ರೆಯಲ್ಲಿ ನಾನು ಪುಟ್ಟ ಮಣ್ಣಿನ ಕುಡಿಕೆ ಕೊಂಡಿದ್ದೆ. ಕಟ್ಟಿಗೆಯ ಆಟದ ಸಾಮಾನಿನ ಡಬ್ಬಿ ಕೊಂಡಿದ್ದೆ. ಅವತ್ತು ಕೊಂಡಿದ್ದ ಪುಗ್ಗ (ಬಲೂನು), ಗಿರಿಗಿಟ್ಲೆ ಮನೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಐ ಡೊಂಟ್ ಕೇರ್ ಅನ್ನೋದಕ್ಕೂ ಮೊದಲು’: ಮಧುಕರ್ ಬಳ್ಕೂರ್

“ಐ ಡೊಂಟ್ ಕೇರ್, ನನ್ನ ಲೈಪು ನನ್ನ ಇಷ್ಟ, ನಾನು ಯಾರನ್ನು ಕೇರ್ ಮಾಡೋಲ್ಲ” ಹಾಗಂತ ಬೆಳಿಗ್ಗೆ ಜೋಶ್ ನಲ್ಲಿ ಎದೆ ಉಬ್ಬಿಸಿ ಹೊರಟು ಸಂಜೆ ಆಗೋ ಹೊತ್ತಿಗೆ “ನನ್ನನ್ನ ಯಾರೂ ಅರ್ಥಾನೆ ಮಾಡ್ಕೊತಾ ಇಲ್ಲವಲ್ಲ” ಅಂತಾ ಅನಿಸೋಕೆ ಶುರುವಾದ್ರೆ ಅವರದು ಮೊಸ್ಟ್ ಕನ್ಪ್ಯೂಶಿಯಸ್ ಸ್ಟೇಜ್. ಮೀಸೆ ಮೂಡುವಾಗ ದೇಶ ಕಾಣೊದಿಲ್ಲ. ಬೇಕೆಂದಾಗ ಕಡ್ಲೆಕಾಯಿ ಸಿಗೋದಿಲ್ಲ ಅನ್ನೋ ಹಾಗೆ ಮೀಸೆ ಮೂಡೊ ಪ್ರಾಯದಲ್ಲಿ ಈ ತರಹದ ತಲ್ಲಣಗಳು ಎದುರಾದರೆ ಅದು ಸಹಜವೆನ್ನಬಹುದು. ಅದರಂತೆ ರೆಕ್ಕೆ ಬಲಿತ ಹಕ್ಕಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುವಂಗಿಯ ಕನಸು (ಅಧ್ಯಾಯ ೧೦-೧೧): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೦: ಕತ್ತೆಯ ಅಂಗಡಿ ಇನ್ನೇನು ನಾಳೆ ನಾಡಿದ್ದರಲ್ಲಿ ಅಪ್ಪಣಿ ಬಂದ್‍ಬಿಡ್ತಾನೆ. ಈ ಸರ್ತಿ ಒಂದ್ ನಾಲ್ಕು ದಿನ ಇಟ್ಟುಕೊಂಡು ಬೇಲಿ, ಮೆಣಸಿನ ಪಾತಿ, ನೀರಿನ ಗುಂಡಿ ಎಲ್ಲಾ ಮಾಡಿಸಿಕೊಂಡೇ ಕಳಿಸ್ಬೇಕು… ಹತಾರ ಎಲ್ಲಾ ಹೊಂದಿಸಿ ಇಟ್ಗಳಿ. ನಿಮಗೇನು, ಕೋಲ್ ತಗಂಡು ದನಿನ ಹಿಂದುಗಡೆ ಹೊರಟು ಬಿಡ್ತೀರಿ. ಗುದ್ದಲಿ ಕೆಲಸ ಎಲ್ಲಾನೂ ನಾನೇ ಮಾಡಕ್ಕಾಗುತ್ತಾ…ಸೀತೆಯ ಗೊಣಗಾಟ ನಡೆದಿತ್ತು.ರಾತ್ರಿಯ ಊಟ ಮುಗಿಸಿ ದಿಂಬಿಗೆ ತಲೆಕೊಟ್ಟ ಚಿನ್ನಪ್ಪನಿಗೆ ಮಾಮೂಲಿನಂತೆ ಕೂಡಲೇ ನಿದ್ದೆ ಹತ್ತಲಿಲ್ಲ.‘ಸೀತೆ ಹೇಳುವುದು ಸರಿ. ಎಲ್ಲಾ ಹತಾರ ಹೊಂದಿಸಿಕೊಳ್ಳಬೇಕು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಂಡಸಿಗ್ಯಾಕೆ ಗೌರಿ ದುಃಖ: ಡಾ. ವೃಂದಾ ಸಂಗಮ್

ಅಷ್ಟಲ್ಲದೇ ಹೇಳ್ತಾರಾ, ಗಂಡಸಿಗ್ಯಾಕೆ ಗೌರಿ ದುಃಖ. ಇಂತಹದೊಂದು ಗಾದೆ ಮಾತು, ಹೆಣ್ಣು ಮಕ್ಕಳು ಬಸಿರು, ಬಾಣಂತನದಲ್ಲಿ ಮತ್ತೆ ಪ್ರತೀ ವರ್ಷ ಗೌರೀ ಹಬ್ಬದ ಪೂಜೆಯ ಸಮಯದಲ್ಲಿ ಹೇಳೇ ಹೇಳ್ತಾರೆ. ಯಾಕೆಂದರೆ, ಬಸಿರು – ಬಾಣಂತನ ಎನ್ನುವದು ಹೆಣ್ಣಿನ ಮರು ಜನ್ಮವೇ. ಆ ನೋವು ಗಂಡಸಿಗೇನೂ ತಿಳಿಯದು ಅಥವಾ ತಿಳೀಬಾರದು ಅಂತ ಹೇಳ್ತಾರೇನೋ. ಆದರೆ ಗೌರಿ ಹಬ್ಬ ಅಂದರೆ, ಸಡಗರ ಸಂಭ್ರಮ. ಅದ್ಯಾಕೆ ಗೌರೀ ದುಃಖ ಆಗಿ ಹೋಗಿದೆ ಅಂತ ನಮ್ಮ ಪದ್ದಕ್ಕಜ್ಜಿಗೇನೂ ತಿಳಿದಿರಲಿಲ್ಲ. ಬಹುಶಃ, ಹಿಂದಿನ ಕಾಲದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಅವಳ ನೋವ ನೆನೆಯುತ.ಅವಳ ಮೋಹದ ಬಳ್ಳಿ ಎಲ್ಲೆಲ್ಲೋ ಚಿಗುರಿಅರಳಿ… ಒಣಗಿ.ಒಡಲ ದಾವಾನಲ ಕಮ್ಮನೆ ಕುಡಿದು.. ಹರಿದು.ಎಂತಾ ಮರವೇ ಅದು!ಎದೆಯಿಂದ ಎದೆಗೆ ಗುಂಯ್ ಗುಡುತಥೇಟು ಭ್ರಮರ ಬೃಂಗ.ಸುಳಿ ಗಾಳಿಗೆ ಹಾರಿ.. ತೂರಿ ಹಬ್ಬಿದಪರಿಮಳದಲ್ಲಿ…ಕಾಲಿಟ್ಟಲ್ಲಿ ಕೊಲೆ.. ನಕ್ಕರಂತೂ ಸುಲಿಗೆಕತ್ತಿ ಕಟಾರಿಗಳ ಮೇಳ!ವಾರನ್ನ .. ಬಿಕ್ಷಾನ್ನ ಹಗಲೆನ್ನದೆ ಇರುಳೆನ್ನದೆಗಿರ ಗಿರ ತಿರುಗಿ ಅಲೆದು!ನೀಲಿ ಕಡಲಿಗೆ ಮುಖ ಮಾಡಿ ದಾಹದಣಿವ ನೀಗಿದವಳು.ನೆನೆಯುತ್ತೇನೆ ಆ ಮುಖವನ್ನುಸ್ಪಷ್ಟ ವಾಗಿ ಮೂಡುವುದಿಲ್ಲ!ಭೂರ್ಗರೆವ ಮಳೆಯ ಸಿಡಿಲಬ್ಬರದಲ್ಲಿಫಳರನೆ ಮಿಂಚು.. ಹೃದಯ ಚೆಲ್ಲಾಡಿಕರುಳ ಕರೆಗೆ ಮರುಗಿ ತಿರುಗಿ ಬಂದಂತಮಮತೆ.ಎಂತ ಚೆಂದದ ಬೊಂಬೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಗೆಳೆಯ ನಿನ್ನ ಅದಮ್ಯ ಪ್ರೀತಿಯ ಸಾಂಗತ್ಯ ಸುಖವ ಮತ್ತೆ ಗುನುಗುತ್ತ”. .: ಡಾ. ಶ್ವೇತಾ ಬಿ.ಸಿ.

ನಲ್ಮೆಯ ದೀಪ್ˌನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ಷಮಿಸು ಗೆಳೆಯ..: ಜೆ.ವಿ.ಕಾರ್ಲೊ

ಇಂಗಿಷಿನಲ್ಲಿ : ಒ’ಹೆನ್ರಿಅನುವಾದ: ಜೆ.ವಿ.ಕಾರ್ಲೊ ರಾತ್ರಿ ಹತ್ತು ಗಂಟೆಯಾಗುತ್ತಲಿತ್ತು ಎಂದಿನಂತೆ ಅವನು ಲಾಠಿ ಬೀಸುತ್ತಾ ಆ ಬೀದಿಗೆ ಇಳಿದ. ಮಾಮೂಲಿ ಪೋಲಿಸ್ ಗತ್ತಿನಿಂದ ರಸ್ತೆಯುದ್ದಕ್ಕೂ ತನ್ನ ಬೀಟ್ ಶುರು ಮಾಡಲಾರಂಭಿಸಿದ. ಮೈ ಕೊರೆಯುವ ತಣ್ಣನೆಯ ಗಾಳಿಯೊಳಗೆ ಮಳೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ತನ್ನ ಲಾಠಿಯನ್ನು ಕಲಾತ್ಮಕವಾಗಿ ಬೀಸುತ್ತಾ ರಸ್ತೆಯ ಮೂಲೆ ಮೂಲೆಗಳ ಮೇಲೆ ತೀಕ್ಷ್ಣ ದೃಷ್ಠಿ ಹರಿಸುತ್ತಾ, ರಸ್ತೆ ಬದಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರ ರಕ್ಷಕನಂತೆ ನಡೆಯುತ್ತಿದ್ದ. ಅವನು ಬೀಟ್ ಮಾಡುತ್ತಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಟ್ಟೆ ಕ್ಲಾಸ್ ಎಂಬ ಮಾಯಾ ಲೋಕ: ಡಾ. ದೋ. ನಾ. ಲೋಕೇಶ್

ಅದೊಂದು ದಿನ 1994 ರ ಮೇ ತಿಂಗಳ ಅಂತ್ಯದಲ್ಲಿ ನಮ್ಮಜ್ಜಿ ಊರು ಚಲುವಯ್ಯನಪಾಳ್ಯದಲ್ಲಿ ಆಟವಾಡುತ್ತಾ ನಮ್ಮಜ್ಜಿ ಮನೆಯ ಮುಂದಿನ ರಸ್ತೆಗೆ ಇಳಿದೆ. ದೂರದಲ್ಲಿ ಅರಳಿ ಮರದ ಹತ್ತಿರ ನಮ್ಮಮ್ಮ ಬರುತ್ತಿರುವುದು ಕಂಡು ಕುಣಿಯುತ್ತಾ ಮನೆಗೆ ಹೋಗಿ ನಮ್ಮಜ್ಜಿಗೆ ವಿಷಯ ಮುಟ್ಟಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಬೆಳಗುಂಬದಿಂದ ಸುಮಾರು ಎರಡು ಮೂರು ಕಿಲೋಮೀಟರ್ ನಡೆದು ಬಂದ ಅಮ್ಮ ತಣ್ಣನೆಯ ನೀರು ಕುಡಿದು ಸುಧಾರಿಸಿಕೊಂಡರು. ನಂತರ ಬಂದ ವಿಷಯವೇನು? ಎಂದು ಅಜ್ಜಿ ಕೇಳಿತು. ಅಮ್ಮನ ಉತ್ತರ ಕೇಳಿ ನನಗಂತೂ ಭಾರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಖಾಲಿ ಜೇಬು ಫಕೀರನ ಪ್ರೇಮದೋಲೆ..: ಆನಂದ ವೀ ಮಾಲಗಿತ್ತಿಮಠ

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ