ನಿಲುವಂಗಿಯ ಕನಸು (ಅಧ್ಯಾಯ ೧೪-೧೫): ಹಾಡ್ಲಹಳ್ಳಿ ನಾಗರಾಜ್
ಅಧ್ಯಾಯ ೧೪: ಸಮೂಹ ಸನ್ನಿ ಚಿನ್ನಪ್ಪ ಕ್ಷಣ ತಬ್ಬಿಬ್ಬಾದ. ಸಮಸ್ಯೆಯ ಗೊಸರಿನ ಮೇಲೆ ಕಾಲಿಟ್ಟಿದ್ದೇನೆ. ಕಾಲಕ್ರಮದಲ್ಲಿ ಭಾರ ಹೆಚ್ಚಾಗಿ ಅದರಲ್ಲಿ ಹೂತು ಹೋಗಿ ಬಿಟ್ಟರೆ, ಶರೀರ ಭಯದಿಂದ ಸಣ್ಣಗೆ ಅದುರಿದಂತೆನಿಸಿತು. ಅಂಗೈಯಲ್ಲಿದ್ದ ಕರಿಮಣಿ ಸರವನ್ನೊಮ್ಮೆ ವಿಷಾದದಿಂದ ನೋಡಿ ನಂತರ ಪ್ಯಾಂಟಿನ ಜೇಬಿನಲ್ಲಿ ಇಟ್ಟಿಬಿಟ್ಟು ರಸ್ತೆಗೆ ಇಳಿದ.ಎದುರಿಗೇ ಪ್ರಭಾಕರನ ಬ್ರಾಂಡಿ ಷಾಪು ಕಾಣುತ್ತಿತ್ತು. ಈವತ್ತು ಸಂತೆಯ ದಿನವಾಗಿದ್ದರೆ ವಾಡಿಕೆಯಂತೆ ಸಂಜೆ ಅಲ್ಲಿ ಸ್ನೇಹಿತರೊಂದಿಗೆ ಕುಳಿತು ಬ್ರಾಂದಿ ಗುಟುಕರಿಸುತ್ತಾ ನನ್ನ ಸಮಸ್ಯೆಯನ್ನು ಅವರ ಮುಂದಿಟ್ಟು ಮನಸ್ಸು ಹಗುರಮಾಡಿ ಕೊಳ್ಳಬಹುದಿತ್ತಲ್ಲ!ಚಿನ್ನಪ್ಪನ ಮನಸ್ಸಿನಲ್ಲಿ … Read more