ಮರೆಯಲಾಗದ ಮದುವೆ (ಭಾಗ 13): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೧೨- ಚಿನ್ನಪ್ಪ ಮತ್ತು ಅಯ್ಯರ್ ಮುಂಜಾನೆ ಬೇಗನೆದ್ದು ನಿತ್ಯಕರ್ಮಗಳನ್ನು ಮುಗಿಸಿ ಉಪಹಾರ ಸೇವಿಸಿ ಗೂಡೂರಿಗೆ ಹೊರಟಾಗ ಅಯ್ಯರ್ ಭಾವುಕರಾದರು. ಅಯ್ಯರ್ ಕಣ್ಣಲ್ಲಿ ನೀರಾಡಿದ್ದು ಕಂಡು ಚಿನ್ನಪ್ಪನ ಹೆಂಡತಿಗೆ ಮುಜುಗರವಾಗಿ ಕಸಿವಿಸಿಗೊಂಡಳು. ಅಯ್ಯರ್ ಚಿನ್ನಪ್ಪನ ಮಗುವನ್ನೆತ್ತಿಕೊಂಡು ಮುತ್ತಿಕ್ಕಿ ತಮ್ಮ ಮನದಾಳದಿಂದ ಒಮ್ಮೆ ಹೆಂಡತಿ ಮಗುವಿನೊಂದಿಗೆ ತಮ್ಮ ಮನೆಗೆ ಬರಬೇಕೆಂದು ಚಿನ್ನಪ್ಪನಿಗೆ ಆಗ್ರಹಮಾಡಿ ಹೇಳಿದರು. ರಾತ್ರಿ ಚಿನ್ನಪ್ಪನ ಋಣ ತೀರಿಸಲಾಗದಿದ್ದರೂ ಪಡೆದ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಮಾಡಬೇಕೆಂದುಕೊಂಡದ್ದು ನೆನಪಾಗಿ ಒಂದು ಕಾಗದದಲ್ಲಿ ಅವನ ವಿಳಾಸ ಬರೆದುಕೊಡುವಂತೆ ಚಿನ್ನಪ್ಪನಿಗೆ ಹೇಳಿದರು. … Read more

ಮರೆಯಲಾಗದ ಮದುವೆ (ಭಾಗ 12): ನಾರಾಯಣ ಎಮ್ ಎಸ್

“ಸಾರ್… ರೈಲ್ವೇಸಿಂದ ಫೋನು, ಅದ್ಯಾವ್ದೋ ಕಾವ್ಲೀ ಅನ್ನೋ ಸ್ಟೇಷನ್ನಲ್ಲಿ ಯಾವ್ದೋ ವಯ್ಸಾಗಿರೋರ ಹೆಣಾ ಸಿಕ್ಕಿದ್ಯಂತೇ…ಈಗ್ಲೇ ಯಾರಾರೂ ಬಾಡಿ ಐಡೆಂಟಿಫೈ ಮಾಡಕ್ಕೋಗ್ಬೇಕಂತೆ” ರಿಸೆಪ್ಷನ್ ಕೌಂಟರಿನಿಂದ ಯಾವನೋ ಅವಿವೇಕಿ ಗಟ್ಟಿಯಾಗಿ ಕಿರುಚಿದ್ದ. ಲಾಬಿಯಿಡೀ ನೀರವ ಮೌನ ಆವರಿಸಿತು. ಪಾಪ ಸೀತಮ್ಮನವರ ಹೊಟ್ಟೆ ತಳಮಳಗುಟ್ಟಿತು. ಮೆಲ್ಲನೆ ತಮ್ಮ ಎಡಕುಂಡೆಯನ್ನೆತ್ತಿ ಸುಧೀರ್ಘವಾಗಿ ’ಠುಯ್ಯ್…………………’ ಎಂದು ತಾರಕಸ್ಥಾಯಿಯಲ್ಲಿ ಸದ್ದು ಹೊರಡಿಸಿ ಕಣ್ಣು ತೇಲಿಸಿಬಿಟ್ಟರು. ಮೊಮ್ಮಗ ಕಣ್ಣನ್ ಕಣ್ಣರಳಿಸಿ ಸುರುಳಿಯಾಗಿಸಿದ ಅಂಗೈಯನ್ನು ಬಾಯಿನ ಸುತ್ತ ಹಿಡಿದು ’ಠುಯ್ಯ್…………………’ ಎಂದು ನಕಲು ಮಾಡಿ ಪಕಪಕನೆ ನಕ್ಕ. ಇದರಿಂದ … Read more

ಮರೆಯಲಾಗದ ಮದುವೆ (ಭಾಗ 11): ನಾರಾಯಣ ಎಮ್ ಎಸ್

-೧೧- ಗಂಡಿನಮನೆಯವರನ್ನು ಸ್ವಾಗತಿಸಲೆಂದು ಈಗಾಗಲೇ ರೈಲ್ವೇಸ್ಟೇಷನ್ನಿಗೆ ಬಂದಿದ್ದ ಕೃಷ್ಣಯ್ಯರ್ ಮಕ್ಕಳಾದ ಶೇಖರ್ ಮತ್ತು ಮೋಹನ್ ತಮ್ಮ ಪತ್ನಿಯರೊಂದಿಗೆ ಅಯ್ಯರ್ ಕುಟುಂಬದವರಿಗಾಗಿ ಕಾಯುತ್ತಿದ್ದರು. ಸುಮಾರು ನಾಲ್ಕು ಘಂಟೆಹೊತ್ತಿಗೆ ತಿರುವಾರೂರಿನ ರೈಲು ವಿಶಾಖಪಟ್ಟಣ ಸ್ಟೇಷನ್ನಿಗೆ ಬಂದು ತಲುಪಿತು. ಜೋತುಮೋರೆ ಹಾಕಿಕೊಂಡು ಒಲ್ಲದ ಮನಸ್ಸಿನಿಂದ ಯಾಂತ್ರಿಕವಾಗಿ ಒಬ್ಬೊಬ್ಬರೇ ರೈಲಿನಿಂದಿಳಿಯುತ್ತಿದ್ದ ಗಂಡಿನ ಮನೆಯವರನ್ನು ಕಂಡ ಶೇಖರ್ ಮತ್ತು ಮೋಹನರಿಗೆ ಎಲ್ಲವೂ ಸರಿಯಿಲ್ಲವೆಂಬ ಸುಳಿವು ಮೇಲ್ನೋಟಕ್ಕೇ ಸಿಕ್ಕಿಹೋಯಿತು. ಅತಿಥಿಗಳ ಲಗೇಜುಗಳನ್ನು ಒತ್ತಾಯದಿಂದ ಕೆಳಗಿಳಿಸಿಕೊಳ್ಳುವಾಗ ಹೆಂಗಸರು ಸಣ್ಣಗೆ ಅಳುತ್ತಿದ್ದುದು ಗಮನಿಸಿ ಏನೋ ಎಡವಟ್ಟಾಗಿರಬೇಕೆಂದು ಗಾಬರಿಯಾಯ್ತು. ಸುಬ್ಬುವನ್ನು … Read more

ಮರೆಯಲಾಗದ ಮದುವೆ (ಭಾಗ 10): ನಾರಾಯಣ ಎಮ್ ಎಸ್

-೧೦- ಬಹುಶಃ ಬದುಕಿನಲ್ಲಿ ಮೊದಲಬಾರಿಗೆ ಅಯ್ಯರಿಗೆ ತನಗೆ ವಯಸ್ಸಾಗುತ್ತಿರುವ ಅರಿವಾಯಿತು. ಕೊಮ್ಮರಕುಡಿಯಿಂದ ಗೂಡೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯರ್ ಒಂದೆರಡು ಮೈಲು ನಡೆಯುವಷ್ಟರಲ್ಲೇ ಹೈರಾಣಾಗಿ ಬಿಟ್ಟಿದ್ದರು. ಮೊದಲೇ ಅಯ್ಯರಿಗೆ ಒರಟು ರಸ್ತೆಯಮೇಲೆ ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ನಡೆದು ಅಭ್ಯಾಸವಿರಲಿಲ್ಲ, ಸಾಲದ್ದಕ್ಕೆ ಏರುಬಿಸಿಲು ಬೇರೆ. ಅರೆಕ್ಷಣಕ್ಕೆ ಸುಮ್ಮನೆ ಕೊಮ್ಮರಕುಡಿ ರೈಲ್ವೇ ಸ್ಟೇಷನ್ನಿಗೆ ಮರಳಿ ಸಂಜೆ ನಾಲ್ಕೂಕಾಲಿನವರೆಗೂ ಕಾದು ವಿಜಯವಾಡಕ್ಕೆ ಹೋಗುವ ರೈಲಿನಲ್ಲಿ ನೆಲ್ಲೂರಿಗೆ ಹೋದರೆ ಹೇಗೆಂಬ ಯೋಚನೆ ಬಂತು. ಮರುಕ್ಷಣವೇ ಟಿಕೆಟ್ಟಿಗೆ ಹಣವಿಲ್ಲದ್ದು ನೆನಪಾಗಿ ಖೇದವಾಯಿತು. ಹಿಂದೆಯೇ ಆಪತ್ಕಾಲದಲ್ಲಿ ಅನಿವಾರ್ಯವಾಗಿ … Read more

ಮರೆಯಲಾಗದ ಮದುವೆ (ಭಾಗ 9): ನಾರಾಯಣ ಎಮ್ ಎಸ್

   ಇಲ್ಲಿಯವರೆಗೆ      -೯- ಬೆಂಗಳೂರಿನಿಂದ ರೈಲಿನಲ್ಲಿ ಹೊರಟಿದ್ದ ಮುಕ್ತಾಳ ಕುಟುಂಬ ವಿಶಾಖಪಟ್ಟಣ ತಲುಪಿದಾಗ ಸಮಯ ಬೆಳಗ್ಗೆ ಹತ್ತೂವರೆಯಾಗಿತ್ತು. ರೈಲುನಿಲ್ದಾಣದಿಂದ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿಗೆ ಹೊರಟ ಟ್ಯಾಕ್ಸಿಯ ಕಿಟಕಿಗಳ ಬಳಿ ಕುಳಿತಿದ್ದ ಯುಕ್ತಾ ಮತ್ತು ಶರತ್ ವಿಶಾಖಪಟ್ಟಣ ಸಿಟಿಯನ್ನು ಕುತೂಹಲದಿಂದ ನೋಡುತ್ತಿದ್ದರು. ಗ್ರ್ಯಾಂಡ್ ರೆಸಿಡೆನ್ಸಿ ಇನ್ನೂ ಸ್ವಲ್ಪದೂರವಿದ್ದಂತಯೇ ಬಹುಮಹಡಿ ಕಟ್ಟಡವನ್ನು ಗುರುತಿಸಿದ ಶರತ್ “ಅಮ್ಮಾ… ನೋಡಲ್ಲೀ… ಹೋಟ್ಲು ಬಂತು” ಎಂದು ಉತ್ಸಾಹದಿಂದ ಕೂಗಿದ. ಅಷ್ಟರಲ್ಲಿ ಹೋಟೆಲಿನ ಸೈನ್ಬೋರ್ಡಿದ್ದ ಸ್ವಾಗತಕಮಾನು ಪ್ರವೇಶಿಸಿ ಸುಮಾರು ನೂರುಮೀಟರಿದ್ದ ಪುಷ್ಪಾಲಂಕೃತ ಕಾರಿಡಾರನ್ನು ದಾಟಿದ ಟ್ಯಾಕ್ಸಿ … Read more

ಮರೆಯಲಾಗದ ಮದುವೆ (ಭಾಗ 8): ನಾರಾಯಣ ಎಮ್ ಎಸ್

ಹನುಮಾನ್ ಜಂಕ್ಷನ್ನಿನ ಪೋಲೀಸ್ ಚೌಕಿಯಲ್ಲಿ ಅಯ್ಯರ್ ಕಾಣೆಯಾಗಿದ್ದ ದೂರನ್ನು ಅಧಿಕೃತವಾಗಿ ದಾಖಲಿಸಲು ತಂಗಮಣಿಯವರಿಗೆ ಸಾಕಷ್ಟು ಸಮಯ ಹಿಡಿಯಿತು. ಪೋಲೀಸರು ಅಯ್ಯರ್ ಹಿನ್ನಲೆ ಕುರಿತು ಹತ್ತುಹಲವು ಪ್ರಶ್ನೆಗಳನ್ನು ಕೇಳಿದರು. ವೇಲಾಯಧನ್ ಮತ್ತು ತಂಗಮಣಿ ತಮಗೆ ತಿಳಿದಿದ್ದ ಎಲ್ಲ ಮಾಹಿತಿಗಳನ್ನು ಒದಗಿಸಿದರು. ಮದ್ರಾಸು ಸ್ಟೇಷನ್ನಿನಿಂದ ರೈಲು ಹೊರಟಾಗ ಅಯ್ಯರ್ ರೈಲಿನಲ್ಲಿದ್ದುದು ರೈಲ್ವೇ ಪೋಲೀಸರಿಗೆ ಖಾತ್ರಿಯಾಗಿತ್ತು. ಹಾಗಾಗಿ ಹನುಮಾನ್ ಜಂಕ್ಷನ್ನಿನಿಂದ ಹಿಡಿದು ಮದ್ರಾಸಿನವರೆಗೆ ಆ ಮಾರ್ಗದಲ್ಲಿದ್ದ ಎಲ್ಲಾ ನಿಗದಿತ ನಿಲ್ದಾಣಗಳಿಗೂ ಅಯ್ಯರ್ ಕಾಣೆಯಾಗಿದ್ದ ದೂರಿನ ಮಾಹಿತಿ ಕಳುಹಿಸುವ ವ್ಯವಸ್ಥೆ ಮಾಡಿದರು. ಅಯ್ಯರ್ … Read more

ಮರೆಯಲಾಗದ ಮದುವೆ (ಭಾಗ 7): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೭- ’ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಕುಯ್ಯ್…’ ಎಂದಾದ ಸದ್ದಿಗೆ ಅಯ್ಯರಿಗೆ ಎಚ್ಚರವಾಯ್ತು. ಕೂತಲ್ಲೇ ಕಣ್ತೆರೆದರು. ಎದುರಿಗೆ ಒಂದು ಬಡಕಲು ಕುನ್ನಿ ಕಂಡಿತು. ಅದೀಗ ಸ್ವಲ್ಪದೂರದಲ್ಲಿ ಬಿದ್ದಿದ್ದ ನಶ್ಯದಕವರಿನತ್ತ ದಿಟ್ಟಿಸಿ ತನ್ನ ಕೋರೆಹಲ್ಲು ತೋರುತ್ತಾ ಗುರ್ರ್ ಎಂದು ಗುರುಗುಟ್ಟತೊಡಗಿತು. ಪಾಪ ಪ್ರಾಣಿ ಏನೋ ತಿನ್ನಲು ಸಿಕ್ಕಿತೆಂದು ನಶ್ಯದಕವರಿಗೆ ಬಾಯಿಹಾಕಿರಬೇಕು. ನಶ್ಯದ ಫಾಟಿಗೆ ಸೀನುಬಂದು ನಾಯಿ ಗಾಬರಿಗೊಂಡಿತ್ತು. ಅಯ್ಯರಿಗೆ ತಾನೆಲ್ಲಿದ್ದೇನೆ ತಿಳಿಯಲಿಲ್ಲ. ಅಪರಾತ್ರಿಯ ನೀರವತೆಯಲ್ಲಿ ದೂರದಲ್ಲೆಲ್ಲೋ ಜೀರುಂಡೆಗಳು ಗುಯ್ಗುಟ್ಟುತ್ತಿದ್ದುವು. ನಿಧಾನಕ್ಕೆ ಸಿಕ್ಕಿಕೊಂಡಿದ್ದ ಪರಿಸ್ಥಿತಿ ಅರಿವಾಗಹತ್ತಿತು. ಕೈಯಲ್ಲಿ ಬಿಡುಗಾಸಿಲ್ಲ. ಮೈಮೇಲೆ … Read more

ಅಂತರಾಗ್ನಿ (ಕೊನೆಯ ಭಾಗ): ಕಿರಣ್. ವ್ಹಿ

ಇಲ್ಲಿಯವರೆಗೆ ವಿಶಾಲವಾದ ಹಾಲ್. ಕಿಕ್ಕಿರಿದು ತುಂಬಿರುವ ಜನ, ಚಪ್ಪಾಳೆ ಹೊಡೆದಾಗಲೆಲ್ಲ ಸೀಲಿಂಗ್ ಸೀಳಿಹೋಗುವುದೇನೊ ಎಂಬಂತೆ ಭಾಸವಾಗುತ್ತಿತ್ತು. ಅದು ‘ Reflection ‘ ಎಂಬ ಅಂಧಮಕ್ಕಳ ಶಾಲೆಯ ಉದ್ಘಾಟನಾ ಸಮಾರಂಭವಾಗಿತ್ತು. ” ಈಗ ನಮ್ಮೆಲ್ಲರ ಅಕ್ಕರೆಯ ‘Reflection charitable trust’ ನ ಮುಖ್ಯಸ್ಥರಾದ ಶ್ರೀಯುತ ಹರಿಯುವರನ್ನು, ಈ ಸಂಸ್ಥೆಯ ಕುರಿತು ಒಂದೆರಡು ಮಾತನಾಡಬೇಕೆಂದು ಕೋರಿಕೊಳ್ಳುತ್ತೇನೆ.” ಎಂಬ ಆಹ್ವಾನಕ್ಕೆ ಎದ್ದುನಿಂತ ಹರಿ, ವೇದಿಕೆ ಮೇಲೆ ಹೊರಡಲು ಸಿದ್ಧನಾದ. ಚಪ್ಪಾಳೆಗಳ ಸುರಿಮಳೆಯೆ ಹರಿಯಿತು. ” ಎಲ್ಲರಿಗೂ ನಮಸ್ಕಾರ ನಮ್ಮ ಈ ‘Reflection … Read more

ಅಂತರಾಗ್ನಿ (ಭಾಗ ೬): ಕಿರಣ್. ವ್ಹಿ

ಇಲ್ಲಿಯವರೆಗೆ ರೂಮಿಗೆ ಬಂದ ಹರಿ, ಹೊಸ ಅನುಭವದಲ್ಲಿ ತೇಲಾಡುತ್ತಿದ್ದ. ಒಂದು ಬಗೆಯ ಎಲ್ಲದರಿಂದ ವಿಮುಕ್ತನಾದಂತಹ ಭಾವನೆ ಅವನಲ್ಲಿ ಮೂಡಿತ್ತು. ಅದೇ ವೇಳೆಗೆ, ಗೋಪಾಲ ವರ್ಮಾರನ್ನು ಎಷ್ಟೊಂದು ಬೈಕೊಂಡು ಬಿಟ್ಟೆ ಅಂತ ಬೇಜಾರಾದ. ನಿಜವಾಗಿಯೂ, ವರ್ಮಾರವರು ಅವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದರು. ಅದು ಹೇಳಲಾಗದಷ್ಟು ಗಾಢವಾದ ಪರಿಣಾಮ. ಆದರೂ, ಒಂದು ಮೂಲೆಯಲ್ಲಿ ಹಳೆಯ ನೆನಪು ಅವನನ್ನು ಕಾಡುತ್ತಿತ್ತು. ಒಂದೇ ದಿನಕ್ಕೆ ಹೋಗುವುದಿಲ್ಲ ನೋಡಿ, ಮತ್ತೆ ಅದೇ ಮೂಡ್ ಗೆ ಹೋಗಿಬಿಟ್ಟರೆ ಕಷ್ಟ ಎಂದು, ಬಿಯರ್ ಬಾಟಲ್ ಕೈಗೆತ್ತಿಕೊಂಡು … Read more

ಅಂತರಾಗ್ನಿ (ಭಾಗ 5): ಕಿರಣ್. ವ್ಹಿ

ಇಲ್ಲಿಯವರೆಗೆ.. ” ಆಮೇಲೆ ಇಲ್ಲಿಗೆ ಹೊರಟದ್ದು ಮಧ್ಯದಲ್ಲಿ ನೀವು ಸಿಕ್ಕಿದ್ದು. ನಿಮ್ಮ ಪರಿಚಯ. ಇದೆಲ್ಲ ನಡೆದದ್ದು. ಇಲ್ಲಿ ಕೂತುಕೊಂಡು ಗುಂಡು ಹಾಕುತ್ತಿರೋದು. ಅಷ್ಟೇ ಅಂಕಲ್. ಹೆಂಗಿತ್ತು ನನ್ನ ಪ್ಲಾಪ್ ಲವ್ ಸ್ಟೋರಿ?” ಎನ್ನುತ್ತಾ ನಕ್ಕ ಹರಿ. ಅಷ್ಟರಲ್ಲಿ ನಶೆಯಲ್ಲಿ ತೇಲುತ್ತಿದ್ದ. ” ಇಷ್ಟೆಲ್ಲಾ ಆಗಿದೆ ನಿನ್ನ ಲೈಫ್ನಲ್ಲಿ ಅಂತಾಯ್ತು..” ” ಹಂ ಅಂಕಲ್. ಎಲ್ಲರೂ ಮೋಸಗಾರು……. ಮೋಸಗಾರರು.” ಎನ್ನುತ್ತ ಧೊಪ್ಪನೆ ಬಿದ್ದುಬಿಟ್ಟ. ಹುಡುಗ ಫುಲ್ ಟೈಟ್ ಆಗಿದ್ದಾನೆ ಎಂದುಕೊಂಡು, ಎಲ್ಲವನ್ನೂ ನೀಟಾಗಿ ತೆಗೆದಿಟ್ಟು, ತಮ್ಮ ರೂಮಿಗೆ ನಡೆದರು … Read more

ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ.. ಒಂದು ವಾರದಿಂದ ಅನೂಷಾ ಸರಿಯಾಗಿ ಮಾತನಾಡುತ್ತಿರಲಿಲ್ಲ. ಏನಾಯಿತು ಎಂದು ಕೇಳಿದರೆ ಬಾಯಿ ಸಹ ಬಿಡಲಿಲ್ಲ. ಇಗ್ನೋರ್ ಮಾಡುತ್ತಿದ್ದಾಳೆ ಎಂಬ ಭಾವನೆ ಹರಿಯಲ್ಲಿ ಮೂಡಲಾರಂಭಿಸಿತು. ಮುಂದಿನವಾರ ಊರಿಗೆ ಹೋಗುವ ಯೋಚನೆಯಲ್ಲಿದ್ದ ಹರಿ, ಅದೇ ಶುಕ್ರವಾರದ ರಾತ್ರಿ ಬಸ್ ಹತ್ತಿದ. ಏನಾಗಿದೆಯೋ ಎಂಬ ಚಿಂತೆ ಅವನನ್ನು ಬಹಳವೇ ಕಾಡುತ್ತಿತ್ತು. ರಾತ್ರಿಯಿಡಿ ನಿದ್ರೆ ಮಾಡಲಿಲ್ಲ ಹರಿ. ಏನೇನೋ ಯೋಚನೆಗಳು ಬೆಳಗು ಯಾವಾಗ ಆದೀತು, ಯಾವಾಗ ತಲುಪುತ್ತೇನೊ, ಎನ್ನುವ ಅವಸರ. ಬೆಳಗ್ಗೆ ಏಳರ ಸುಮಾರು ಬೆಂಗಳೂರು ತಲುಪಿದ. ಮನೆಗೆ ಹೋದವನೇ ಫ್ರೆಶ್ … Read more

ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ ರೂಮಿಗೆ ಬಂದ ಹರಿ ಅನೂಷಾಳಿಗೆ ಕಾಲ್ ಮಾಡಿದ. “ಹೇ ಅನೂಷ ಏನ್ ಮಾಡ್ತಿದ್ದೀಯಾ?” ” ಏನಿಲ್ಲಪ್ಪ. ಈಗ ಜಸ್ಟ್ ಊಟ ಆಯ್ತು, ಸುಮ್ಮನೆ ಕೂತಿದ್ದೀನಿ. ಮನೆಯಲ್ಲಿ ಫುಲ್ ಖುಷ್ ಕಣೋ, ಕೆಲಸ ಸಿಕ್ಕಿದ್ದಕ್ಕೆ” ” ಹೌದಾ… ನಮ್ಮನೇಲೂ ಅಷ್ಟೇ, ತುಂಬಾ ಖುಷಿಯಾಗಿದ್ದಾರೆ. ಆದ್ರೂ ನಮ್ಮಪ್ಪ, ಕೊನೆಗೊಂದು ಬಾಂಬ್ ಹಾಕಿನೆ ಹೋದ್ರು ನೋಡು.” ” ಹ್ಹ….ಹ್ಹ…. ಹಂಗೆ ಆಗ್ಬೇಕು ನಿನಗೆ. ಅಂದ್ಹಾಗೆ, ಏನ್ ಬಾಂಬು ಅದು ಮಿಸ್ಟರ್ ಹರಿ?”. ಎಂದು ರೇಗಿಸಿದಳು ಅನೂಷಾ. “ಏಯ್… ಸಾಕು ಸುಮ್ನಿರೇ … Read more

ಅಂತರಾಗ್ನಿ (ಭಾಗ 3): ಕಿರಣ್. ವ್ಹಿ

ಇಲ್ಲಿಯವರೆಗೆ ಹೊರಗೆ ಬಂದ ಇಬ್ಬರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲು ಮುಂದಾದರು. ಹರಿಗೆ ತನ್ನ ಬೈಕ್ ಸರಿಯಾದರೆ ಸಾಕಾಗಿತ್ತು. ಆ ನಡುರಸ್ತೆಯಲ್ಲಿ ಕೆಟ್ಟು ನಿಂತದ್ದು ಮತ್ತೊಂದು ತಲೆನೋವಾಗಿತ್ತು. ಸಹಾಯಕ್ಕೆಂದು ಮ್ಯಾನೇಜರ್ ರವಿಯ ಬಳಿ ಹೋದ. ಗೋಪಾಲ್ ವರ್ಮಾರವರು ಕೂಡ ತಮ್ಮ ಮನೆಯವರೆಲ್ಲರ ಜೊತೆ ಸಪ್ತಗಿರಿಯನ್ನು ನೋಡಲು ಹೊರಟರು. ರವಿ, ಹರಿಗೆ ಒಬ್ಬ ಮೆಕ್ಯಾನಿಕ್ನನ್ನು ಪರಿಚಯಿಸಿ ಅವನ ಜೊತೆಯಲ್ಲಿ ಹೋಗಿ ಬೈಕನ್ನು ರಿಪೇರಿ ಮಾಡಿ, ತೆಗೆದುಕೊಂಡು ಬರಲು ಹೇಳಿದ. ಇಬ್ಬರು ಮೆಕ್ಯಾನಿಕ್ ನ ಬೈಕ್ನಲ್ಲಿ ಹೋಗಿ ಗಾಡಿಯನ್ನು ರಿಪೇರಿ … Read more

ಅಂತರಾಗ್ನಿ (ಭಾಗ ೨): ಕಿರಣ್. ವ್ಹಿ

ಇಲ್ಲಿಯವರೆಗೆ ಆಗಲೇ ಮೊವತ್ತು ಕಿಲೋಮೀಟರ್ ಪ್ರಯಾಣಿಸಿಯಾಗಿತ್ತು. ಮುಂದೆ ಸಿಗುವುದು ಬರೀ ಕಾನನ, ತಿರುವು-ಮುರುವು ರಸ್ತೆ ಹಾಗು ನೀರವ ಮೌನವೆಂದು ಅವನಿಗೆ ಗೊತ್ತಿತ್ತು. ಇದನ್ನೇ ಅರಸಿ ಅವನ ಅಂತರಾಳ ಇಲ್ಲಿಗೆ ಕರೆದುಕೊಂಡು ಬಂದಿತ್ತೊ ಏನೊ…! ಸಪ್ತಗಿರಿಯದು ದೊಡ್ಡ ಘಾಟ್ ಆಗಿತ್ತು. ಸುಮಾರು ನಲವತ್ತು ಕಿಲೋಮೀಟರ್ ನಷ್ಟು ರಸ್ತೆ ತಿರುವಿನಿಂದಲೆ ಕೂಡಿತ್ತು. ಒಂದು ಬದಿಗೆ ಮುಗಿಲು ಮುಟ್ಟುವಷ್ಟು ಎತ್ತರದ ಗುಡ್ಡ, ಮತ್ತೊಂದು ಬದಿಗೆ ನೆಲ ಕಾಣಿಸದಷ್ಟು ಆಳವಾದ ಪ್ರಪಾತ. ಅದೆಷ್ಟು ಅಮಾಯಕ ಜೀವಿಗಳು ಪ್ರಾಣ ತೆತ್ತಿವೆಯೋ ಏನೊ. ಕಾಡು ಎಷ್ಟೊಂದು … Read more

ಅಂತರಾಗ್ನಿ: ಕಿರಣ್. ವ್ಹಿ

ಧೋಧೋ ಎಂದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ನೆಲವೆಲ್ಲ ತೋಯ್ದು ಘಮ್ ಎಂದು ಹೊರಸೂಸುವ ಮಣ್ಣಿನ ಸುವಾಸನೆಗೆ ಎಂತಹವರೆ ಆದರು ಮೈಮರೆಯುವರು. ಅಂತಹ ಸಮಯವದು. ಸಂಜೆಯಾಗಿದ್ದರಿಂದ, ಸೂರ್ಯ ತನ್ನ ಪ್ರತಾಪವನ್ನು ಇಳಿಮುಖಗೊಳಿಸಿ ಮರಳುತ್ತಿದ್ದ. ದೂರದ ಬಾನಂಚಿನಲ್ಲಿ ಮುಳುಗುತ್ತಿದ್ದ  ನೇಸರನನ್ನೆ ದಿಟ್ಟಿಸಿ ನೋಡುತ್ತಿದ್ದ ಹರಿ. ಅವನ ಮನಸ್ಸು ಅಲ್ಲಿರಲಿಲ್ಲ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವಂತೆ ನಿಂತಿದ್ದ. ರಪರಪನೆ ಹೊಡೆಯುವ ಹೊಡೆತವು ಅವನ ಅರಿವಿಗೆ ಬರಲಿಲ್ಲ. “ಥೋ  ಇದೇನು ಮಳೆ. ಬೆಳಗ್ಗೆಯಲ್ಲ ನೆತ್ತಿ ಸುಡುವಂತೆ ಬಿಸಿಲಿರತ್ತೆ. … Read more

ಓಯಸಿಸ್: ನಿನಾದ (ಭಾಗ 4)

ಅಷ್ಟು ಹೊತ್ತಿಗೆ ನಿಶಾಂತ್ ಕರೆ ಮಾಡಿ ಹೇಳಿದ ತಡೆ  ಹಿಡಿದ ವೇತನ ಬಿಡುಗಡೆ ಆಗಿದೆ. ಯಾವ್ ಯಾವ್ದಕ್ಕೆ ಎಷ್ಟು ಎಂದು ವಿಲೇವಾರಿ  ಹೇಳು. ಮೊದಲು ಆ ಜೈನ್  ಗೆ ಫೋನ್ ಮಾಡಿ ಹೇಳು, ಹೇಳಿದ್ರೆ ಆವಾ ನಂಬೋಲ್ಲ ನಿನ್ನೆ ಅಕೌಂಟ್ ಗೆ  ಹಾಕಿದ ಹಣ ವಾಪಸು ಮಾಡಬೇಕು. ಸರಿ ಈಗಲೇ ಹೇಳುವೆ ನೀ ವಾಪಾಸು  ಮಾಡಿ ಬಿಡು. ಎಂದು ನಿಶಾಂತ್ ಹೇಳಿ ಕರೆಯನ್ನು ಮುಗಿಸಿದ. ಅಲ್ಲಿಗೆ ಒಂದು ವಿಲೇವಾರಿ ಆಯಿತು. ಅಂತೂ ಚಿಂತೆಯ ಮೂಟೆ ಹೊತ್ತು ಬಂದು ಎಲ್ಲ … Read more

ಓಯಸಿಸ್: ನಿನಾದ (ಭಾಗ 4)

ಇಲ್ಲಿಯವರೆಗೆ ಇತ್ತ ಟೀಂ ಲೀಡರ್ ಹಂಜ್ಹಾ.. ನಿಗೆ ಮೈ ಪರಚಿ ಕೊಳ್ಳುವಂತೆ ಆಯಿತು. ಒಂದು ದಿನ ಸಮಯ ನೋಡಿ ಹೇಳಿ ಬಿಟ್ಟೆ. ನೋಡು ನಾನು  ಎಲ್ಲಿಯೂ ಸಲ್ಲುವೆ. ಹೀಗಾಗಿ ಮಾತ್ರ ನನ್ನ ಇಲ್ಲಿ ವಾಪಸು ಕರೆದರು. ನಿನಗೆ ನೀನ್ ಹೇಳಿದ್ದು  ನೆನಪಿದೆಯ??? ನೀ ಮಾತ್ರ ಇಲ್ಲೇ ಇರು… ಅಂದಾಗ ಅವನ ಮುಖ ನೋಡಬೇಕಿತ್ತು. ಆಗ ನಿನಾದ ೪ ವರ್ಷದ ಕೆಳಗಿನ ಒಂದು ದಿನದ ಕಹಿ ಘಟನೆ ಹೇಳಿದಳು. ಒಂದು ದಿನ ಶುಕ್ರವಾರ, ಮದ್ಯನ್ನ ಸರಿ ಸುಮಾರು ೨ … Read more

ಸ್ನೇಹ ಭಾಂದವ್ಯ (ಕೊನೆಯ ಭಾಗ): ನಾಗರತ್ನಾ ಗೋವಿಂದನ್ನವರ

        (ಇಲ್ಲಿಯವರೆಗೆ…) ರಾಜೇಶ ಇನ್ನು ಮನೆಗೆ ಬಂದಿರಲಿಲ್ಲ. ಆಗ ಪದ್ಮಮ್ಮ ರೇಖಾಳಿಗೆ ಬಾರಮ್ಮ ಬಾ ನಿನ್ನಿಂದ ಒಂದು ಉಪಕಾರ ಆಗಬೇಕಾಗಿದೆ ಎಂದಳು. ನಮ್ಮ ರಾಜೇಶ ಸುಧಾಳ ನೆನಪಲ್ಲೆ ಹುಚ್ಚನ ಹಾಗಾಗಿದ್ದಾನೆ. ನಿನ್ನ ಮಾತಿಗೆ ಆತ ಗೌರವ ಕೊಡುತ್ತಾನೆ ದಯವಿಟ್ಟು ಅವನಿಗೆ ಮೊದಲಿನ ರಾಜೇಶ ಅಗೋಕೆ ಹೇಳಮ್ಮ. ಇದ್ದ ಒಂದು ವಂಶದ ಕುಡಿನು ದ್ವೇಷಿಸೋಕೆ ಕಲಿತಿದ್ದಾನೆ. ಏನು ಮಾಡಬೇಕು ಅಂತ ತಿಳಿತಿಲ್ಲಾ ಎಂದರು ಪದ್ಮಮ್ಮ. ಆದರೆ ಅಂದು ಎಷ್ಟು ಹೊತ್ತಾದರು ರಾಜೇಶ ಬಾರದಿರುವುದನ್ನ ಕಂಡು … Read more

ಸ್ನೇಹ ಭಾಂದವ್ಯ (ಭಾಗ 11): ನಾಗರತ್ನಾ ಗೋವಿಂದನ್ನವರ

            ಇಲ್ಲಿಯವರೆಗೆ ಪತ್ರ ಓದಿದ ಸುಧಾಳಿಗೆ ತುಂಬಾ ಸಂತೋಷವಾಯಿತು. ಅವಳು ಕಲಾಕೃತಿಯನ್ನು ಕೈಗೆ ತಗೊಂಡು ನೋಡಿದಳು. ಆಗ ಚಂದ್ರು ಏನಕ್ಕಾ ನೀನು ಎಷ್ಟೊಂದು ಒಳ್ಳೆ ಉಡುಗೊರೆಗಳು ಬಂದಿವೆ ಅದು ಬಿಟ್ಟು ನೀನು ಕಡಿಮೆ ಬೆಲೆಯ ಆ ಕಲಾಕೃತಿಯನ್ನು ಹಿಡಿದಿದೆಯಲ್ಲ ಎಂದ. ಚಂದ್ರು ಹಾಗೆಲ್ಲ ಅನಬಾರದು. ಉಡುಗೊರೆಗಳಿಗೆಲ್ಲಾ ಹಾಗೆಲ್ಲ ಬೆಲೆ ಕಟ್ಟಬಾರದು. ಇಷ್ಟೆಲ್ಲಾ ಉಡುಗೊರೆಗಳಲ್ಲಿ ಈ ಉಡುಗೊರೆ ತುಂಬಾ ಅಮೂಲ್ಯವಾದದ್ದು ಗೊತ್ತಾ ಇದರಲ್ಲಿ ತಾಯಿ ಮಗುವಿನ ಬಂಧ ಎಂತದು ಅನ್ನೊದು ಗೊತ್ತಾಗತ್ತೆ. … Read more

ಸ್ನೇಹ ಭಾಂದವ್ಯ (ಭಾಗ 10): ನಾಗರತ್ನಾ ಗೋವಿಂದನ್ನವರ

ರೇಖಾ ಇನ್ನು ಎರಡು ದಿನಕ್ಕೆ ತಿರುಗಿ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು. ಆದ್ದರಿಂದ ಸುಧಾಳನ್ನು ಇನ್ನೊಂದು ಸಲ ನೋಡಬೇಕು ಎಂದುಕೊಂಡಳು. ಸಾಯಂಕಾಲ ರಾಜೇಶ ಸುಧಾಳನ್ನು ಮನೆಗೆ ಕರೆತಂದ. ಆಗ ಕಾವೇರಮ್ಮ ಬರ್ರಿ ಅಳಿಯಂದ್ರೆ ಎಂದಳು. ಸುಧಾ ಒಳಗೆ ಹೋದಳು. ರಾಜೇಶ ಅತ್ತೆ ನಾನು ಹೋಗ್ತಿನಿ ಅಂದ. ಕಾಫಿ ಕುಡಿದು ಹೋಗುವಿರಂತೆ ಎಂದಳು. ಬೇಡಾ ಅತ್ತೆ ಮನೆಯಲ್ಲಿ ಅಮ್ಮ ಕಾಯ್ತಿರ್‍ತಾಳೆ ಹೋಗ್ತಿನಿ ಎಂದು ಹೋಗಿಯೆಬಿಟ್ಟ. ಮರುದಿನ ರೇಖಾ ಸುಧಾಳ ಮನೆಗೆ ಹೋಗಬೇಕೆಂದು ಕೊಂಡವಳು ಅವಳತ್ತೆಗೆ ನನ್ನ ಕಂಡರೆನೆ ಆಗಲ್ಲಾ ಏನು ಮಾಡೋದು … Read more

ಸ್ನೇಹ ಭಾಂದವ್ಯ (ಭಾಗ 9): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಸುಧಾ ಎಚ್ಚರವಾಗಿದುದ್ದನ್ನು ನೋಡಿದ ರಾಜೇಶ ಅವಳ ಹತ್ತಿರ ಒಂದು ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಿದ್ದ ಕಾವೇರಮ್ಮ ಅವನಿಗೆ ಜಾಗ ಬಿಟ್ಟು ಎದ್ದಳು. ಆಗ ರಾಜೇಶ ಆ ಕುರ್ಚಿಯಲ್ಲಿ ಕೂಡುತ್ತ ಸುಧಾ ಎಂದು ಅವಳ ಕೈಯನ್ನು ಹಿಡಿದ ಆಗ ಸುಧಾಳ ಕಣ್ಣಲ್ಲಿ ನೀರು ಹರಿಯಲಾರಂಭಿಸಿತು. ದಯವಿಟ್ಟು ನನ್ನ ಕ್ಷಮಿಸು ಸುಧಾ. ನಾನು ನನ್ನ ಕೆಲಸದ ಒತ್ತಡದಲ್ಲಿ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಾ ಅವಳ ಕಣ್ಣೀರು ಒರೆಸಿದ. ಇನ್ನು ಮೇಲೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ನಂಬು ಎಂದ. … Read more

ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ … Read more

ಸ್ನೇಹ ಭಾಂದವ್ಯ (ಭಾಗ 7): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ರೇಖಾ ಶಿವಮೊಗ್ಗಕ್ಕೆ ಹೋದಳು. ಅವಳಿಗೆ ಮಾತ್ರ ತಾನು ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುವ ಹಕ್ಕಿ ತಾನಾಗಬೇಕು ಎಂದೆನಿಸಿತು. ಸುಧಾಳ ಬಗ್ಗೆ ಅವಳಿಗೆ ಅತೀವ ದುಃಖವಾಯಿತು. ತನ್ನ ಗೆಳತಿಯ ಜೀವನ ಹೀಗೇಕಾಯಿತು ಅಂದು ಚಿಂತಿಸುತ್ತಿದ್ದಳು.       ಈ ಸಲ ದೀಪಾವಳಿ ಹಬ್ಬಕ್ಕೆ ಅಳಿಯ-ಮಗಳನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ವೆಂಕಟಗಿರಿಗೆ ಕಾವೇರಮ್ಮ ಹೇಳಿದರು. ಅದರಂತೆ ಹೌದು ಕಣೆ ಮರೆತುಬಿಟ್ಟಿದ್ದೆ. ಇವತ್ತೆ ಹೋಗಿ ಹೇಳಿ ಬರುತ್ತೇನೆ ಎಂದು ವೆಂಕಟಗಿರಿ ಸುಧಾಳ ಮನೆಗೆ ಹೋದರು. ಬಾಗಿಲಲ್ಲಿ ಕುಳಿತಿದ್ದ ರಮಾನಂದರು ವೆಂಕಟಗಿರಿಯನ್ನು … Read more

ಸ್ನೇಹ ಭಾಂದವ್ಯ (ಭಾಗ 6): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ಇತ್ತ ರೇಖಾಳ ಮನೆಯಲ್ಲಿ ರಾಧಮ್ಮ ನೋಡ್ರಿ ನಾವು ನಮ್ಮ ರೇಖಾಳಿಗೆ ಮದುವೆ ಮಾಡಬೇಕೂರಿ ಎಂದು ಗಂಡನಿಗೆ ಹೇಳಿದಳು. ಅದಕ್ಕೆ ಶಿವಾನಂದ ಮಾಡೋಣ ಬಿಡು ಈಗ ಅವಳಿಗೇನು ವಯಸ್ಸಾಗಿರೋದು ಎಂದು ಮಾತು ತೇಲಿಸಿದನು. ರೇಖಾಳಿಗೆ ವಾರ್ಷಿಕ ಪರೀಕ್ಷೆಯು ಹತ್ತಿರ ಬಂದಿದ್ದರಿಂದ ಓದುವುದು ಹೆಚ್ಚಾಗಿ ಊರಿಗೆ ಬರಲು ಸಾಧ್ಯವಾಗಲಿಲ್ಲ. ಅವಳು ಸುಧಾಳಿಗೆ ಪರೀಕ್ಷೆಗೆ ಹಾಜರಾಗಲು ಪತ್ರ ಬರೆದಳು. ಅದನ್ನೊದಿದ ಸುಧಾಳಿಗೆ ಗೆಳತಿಗೆ ತನ್ನ ಬಗ್ಗೆ ಇರುವ ಕಾಳಜಿಯನ್ನು ಕಂಡು ರೇಖಾಳ ಬಗ್ಗೆ ಅಭಿಮಾನ ಮೂಡಿತು. ಒಂದು ದಿನ ಅವಳು … Read more

ಕೆಂಗುಲಾಬಿ (ಕೊನೆಯ ಭಾಗ): ಹನುಮಂತ ಹಾಲಿಗೇರಿ

ರಾಜಿಯ ದಾಂಪತ್ಯದ ಬದುಕಿನ ಬಗ್ಗೆ ಶಾರದೆಯ ಮೂಲಕ ದೀಪಾಳಿಗೂ, ದೀಪಾಳ ಮೂಲಕ ನನಗೂ ಗೊತ್ತಾಗುತ್ತಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮತ್ತು ಮುಖದ ಮೇಲಿನ ಕಳೆ ಮಾಯವಾಗುತ್ತಿರುವುದು ಶಾರದೆಯ ಗಮನಕ್ಕೂ ಬಂದಿತಂತೆ. ರಾಜಿಯ ದಾಂಪತ್ಯದೊಳಗೆ ಹೊಗೆಯಾಡಲಿಕ್ಕೆ ಶುರುವಾಗಿದೆ ಎಂಬುದನ್ನು ಅವಳು ಅರಿತುಕೊಂಡಿದ್ದಳು. ಅಳಿಯ ಕೆಲಸಕ್ಕೆ ಹೋಗೋದನ್ನು ಬಿಟ್ಟು ಪೂರ್ತಿಯಾಗಿ ಕುಡಿತಕ್ಕೆ ಅಂಟಿಕೊಂಡಿದ್ದ. ಕೆಲಸಕ್ಕೆ ಹೋಗು ಅಂತ ರಾಜಿ ಗಂಡನನ್ನು ಒತ್ತಾಯಿಸಿದಾಗ ಆತ ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. ‘ನಿಮ್ಮಮ್ಮನ್ನ ತಂದ್ಹಾಕು ಅಂತ ಹೇಳು. ಒಬ್ಬ … Read more

ಸ್ನೇಹ ಭಾಂದವ್ಯ (ಭಾಗ 5): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಇತ್ತ ಸಂಜೆ ಆಫೀಸಿನಿಂದ ಮನೆಗೆ ಎಂದ ರಾಜೇಶ ತುಂಬಾ ಖುಷಿಯಾಗಿರುವದನ್ನು ಗಮನಿಸಿದ ಪದ್ಮಮ್ಮ ಏನೋ ರಾಜೇಶ ಇವತ್ತು ತುಂಬಾ ಖುಷಿಯಾಗಿದೆಯಲ್ಲೋ ಏನಾದರೂ ಲಾಟರಿ ಹೊಡೆಯಿತೇನೋ ಎಂದಳು. ಆಗ ರಾಜೇಶನಿಗೆ ಬೇಸರವಾಗಿ ಹೋಗಮ್ಮ ನಿನಗ್ಯಾವಾಗಲು ದುಡ್ಡಿನದೇ ಚಿಂತೆ ಎನ್ನುತ್ತಾ ತನ್ನ ರೂಮಿಗೆ ಹೋದ. ಅವನಿಗೆ ಬೇಗ ನಿದ್ದೆ ಬರದೆ ತನ್ನ ಕಾಲೇಜಿನ ದಿನಗಳು ನೆನಪಾದವು. ತನ್ನ ಸಹಪಾಠಿಯಾದ ಸುನಿತಾಳನ್ನು ತುಂಬಾ ಪ್ರೀತಿಸುತ್ತಿದ್ದ. ದಿನಾ ಅವಳನ್ನು ನೋಡುತ್ತಾ ತನ್ನ ಮನದಲ್ಲಿರೋದನ್ನ ಅವಳಿಗೆ ಹೇಳಬೇಕು ಅಂತ ಎಷ್ಟೊಂದು ಬಾರಿ ಪ್ರಯತ್ನಿಸಿದರೂ … Read more

ಕೆಂಗುಲಾಬಿ (ಭಾಗ 18): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಆಕೆಯ ಬದುಕಿನಲ್ಲಿ ಎದುರಾಗುತ್ತಿರುವ ತಿರುವು ಮುರುವುಗಳನ್ನು ನನ್ನನ್ನು ಕೂಡ ಆತಂಕಗೊಳಿಸಿದ್ದವು. ನಮ್ಮ ಆಫೀಸ್‍ನಲ್ಲಿ ಹಿರಿಯ ಲೈಂಗಿಕ ಕಾರ್ಮಿಕರನ್ನು ಕಾಂಡೋಮ್ ಹಂಚುವ 'ಸಂರಕ್ಷಾ ಸಖಿ'ಯರನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದು ನೆನಪಾಗಿ ನಾನು ಆಕೆಗೆ ವಿಷಯವನ್ನೆಲ್ಲ ತಿಳಿಸಿದೆ. ನಮ್ಮ ಕಚೇರಿಯ ವಿಳಾಸ ಕೊಟ್ಟು ಹೊರ ಬಂದೆ. ಮನೆಯ ಬಾಗಿಲಿನಲ್ಲಿ ಕುಳಿತಿದ್ದ ರಾಜಿಯ ಅರಳುತ್ತಿರುವ ಚೆಲುವನ್ನು ನೋಡಿ ನನಗೆ ಸಂತೋಷ, ಗಾಬರಿಗಳೆರಡು ಒಟ್ಟೊಟ್ಟಿಗೆ ಆದವು. ಮತ್ತೆ ಮನೆಯೊಳಗೆ ಹೋಗಿ ರಾಜಿ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು … Read more

ಸ್ನೇಹ ಭಾಂದವ್ಯ (ಭಾಗ 4): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಆ ದಿನ ರಾತ್ರಿ ಸುಧಾಳಿಗೆ ನಿದ್ದೆ ಹತ್ತಿರ ಸುಳಿಯದಾಯಿತು ಈ ವಿಷಯವನ್ನು ಹೇಗಾದರೂ ಮಾಡಿ ರೇಖಾಳಿಗೆ ತಿಳಿಸಬೇಕು. ಊರಿಗೆ ಬಂದು ಐದಾರು ದಿನಗಳು ಕಳೆದಿವೆ ಆದರೂ ರೇಖಾಳನ್ನು ಭೇಟಿಯಾಗಿಲ್ಲ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಬೇಕೆಂದು ಚಿಂತಿಸುತ್ತ ಮಲಗಿದವಳಿಗೆ ಬೆಳಕು ಹರಿದಿದ್ದೆ ತಿಳಿಯಲಿಲ್ಲ. ಏಳೇ ಸುಧಾ ಇನ್ನು ಮಲಗೆ ಇದ್ದೀಯಲ್ಲೆ. ಗಂಡಿನ ಕಡೆಯವರು ಬರುವುದರೊಳಗಾಗಿ ಮನೆಯ ಕೆಲಸವೆಲ್ಲ ಮುಗಿಯಬೇಕು ಎಂದು ಕಾವೇರಮ್ಮ ಎಬ್ಬಿಸಿದಾಗಲೇ ಸುಧಾಳಿಗೆ ಎಚ್ಚರ. ಸುಧಾ ಎದ್ದು ಬೇಗ ಬೇಗನೆ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡಿ … Read more

ಸ್ನೇಹ ಭಾಂದವ್ಯ (ಭಾಗ 3): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…)  ಇತ್ತ ಗೆಳತಿಯರಿಬ್ಬರು ಮುಂದೇನು ಎಂದು ಚಿಂತಿಸತೊಡಗಿದರು. ಆಗ ರೇಖಾನೆ ಮೊದಲಿಗಳಾಗಿ ಸುಧಾ ನಾಳೆ ಬೆಳಿಗ್ಗೆ ನಾವಿಬ್ಬರು ಮೊದಲು ಎಲ್ಲಾದರೂ ರೂಮು ಬಾಡಿಗೆಗೆ ಸಿಗುತ್ತದಾ ಅಂತ ನೋಡೋಣಾ ಎಂದಳು. ಗೆಳತಿಯ ಮಾತಿಗೆ ಸುಧಾ ಸಮ್ಮತಿಸಿದಳು. ಅನಂತರ ಪಕ್ಕದ ರೂಮಿನ ಹುಡುಗಿಯೊಬ್ಬಳು ಬಂದು ಊಟಕ್ಕೆ ಬರ್ರಿ ಎಂದು ಹೇಳಿ ಹೋದಳು. ಅದರಂತೆ ರೇಖಾ ಮತ್ತು ಸುಧಾ ಇಬ್ಬರು ಊಟದ ಹಾಲಿಗೆ ಬಂದಾಗ ಕನಿಷ್ಟ ನಲವತ್ತು ಹುಡುಗಿಯರು ಊಟಕ್ಕೆ ಕುಳಿತ್ತಿದ್ದರು. ಇವರು ಹೋಗಿ ಕುಳಿತರು. ಆಗ ಹುಡುಗಿಯರೆಲ್ಲ ಒಬ್ಬೊಬ್ಬರಂತೆ ಇವರ … Read more

ಕೆಂಗುಲಾಬಿ (ಭಾಗ 17): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.   … Read more