ಗಂಡಸಿಗ್ಯಾಕೆ ಗೌರಿ ದುಃಖ: ಡಾ. ವೃಂದಾ ಸಂಗಮ್

ಅಷ್ಟಲ್ಲದೇ ಹೇಳ್ತಾರಾ, ಗಂಡಸಿಗ್ಯಾಕೆ ಗೌರಿ ದುಃಖ. ಇಂತಹದೊಂದು ಗಾದೆ ಮಾತು, ಹೆಣ್ಣು ಮಕ್ಕಳು ಬಸಿರು, ಬಾಣಂತನದಲ್ಲಿ ಮತ್ತೆ ಪ್ರತೀ ವರ್ಷ ಗೌರೀ ಹಬ್ಬದ ಪೂಜೆಯ ಸಮಯದಲ್ಲಿ ಹೇಳೇ ಹೇಳ್ತಾರೆ. ಯಾಕೆಂದರೆ, ಬಸಿರು – ಬಾಣಂತನ ಎನ್ನುವದು ಹೆಣ್ಣಿನ ಮರು ಜನ್ಮವೇ. ಆ ನೋವು ಗಂಡಸಿಗೇನೂ ತಿಳಿಯದು ಅಥವಾ ತಿಳೀಬಾರದು ಅಂತ ಹೇಳ್ತಾರೇನೋ. ಆದರೆ ಗೌರಿ ಹಬ್ಬ ಅಂದರೆ, ಸಡಗರ ಸಂಭ್ರಮ. ಅದ್ಯಾಕೆ ಗೌರೀ ದುಃಖ ಆಗಿ ಹೋಗಿದೆ ಅಂತ ನಮ್ಮ ಪದ್ದಕ್ಕಜ್ಜಿಗೇನೂ ತಿಳಿದಿರಲಿಲ್ಲ. ಬಹುಶಃ, ಹಿಂದಿನ ಕಾಲದಲ್ಲಿ … Read more

ಪಂಜು ಕಾವ್ಯಧಾರೆ

ಅವಳ ನೋವ ನೆನೆಯುತ.ಅವಳ ಮೋಹದ ಬಳ್ಳಿ ಎಲ್ಲೆಲ್ಲೋ ಚಿಗುರಿಅರಳಿ… ಒಣಗಿ.ಒಡಲ ದಾವಾನಲ ಕಮ್ಮನೆ ಕುಡಿದು.. ಹರಿದು.ಎಂತಾ ಮರವೇ ಅದು!ಎದೆಯಿಂದ ಎದೆಗೆ ಗುಂಯ್ ಗುಡುತಥೇಟು ಭ್ರಮರ ಬೃಂಗ.ಸುಳಿ ಗಾಳಿಗೆ ಹಾರಿ.. ತೂರಿ ಹಬ್ಬಿದಪರಿಮಳದಲ್ಲಿ…ಕಾಲಿಟ್ಟಲ್ಲಿ ಕೊಲೆ.. ನಕ್ಕರಂತೂ ಸುಲಿಗೆಕತ್ತಿ ಕಟಾರಿಗಳ ಮೇಳ!ವಾರನ್ನ .. ಬಿಕ್ಷಾನ್ನ ಹಗಲೆನ್ನದೆ ಇರುಳೆನ್ನದೆಗಿರ ಗಿರ ತಿರುಗಿ ಅಲೆದು!ನೀಲಿ ಕಡಲಿಗೆ ಮುಖ ಮಾಡಿ ದಾಹದಣಿವ ನೀಗಿದವಳು.ನೆನೆಯುತ್ತೇನೆ ಆ ಮುಖವನ್ನುಸ್ಪಷ್ಟ ವಾಗಿ ಮೂಡುವುದಿಲ್ಲ!ಭೂರ್ಗರೆವ ಮಳೆಯ ಸಿಡಿಲಬ್ಬರದಲ್ಲಿಫಳರನೆ ಮಿಂಚು.. ಹೃದಯ ಚೆಲ್ಲಾಡಿಕರುಳ ಕರೆಗೆ ಮರುಗಿ ತಿರುಗಿ ಬಂದಂತಮಮತೆ.ಎಂತ ಚೆಂದದ ಬೊಂಬೆ … Read more

“ಗೆಳೆಯ ನಿನ್ನ ಅದಮ್ಯ ಪ್ರೀತಿಯ ಸಾಂಗತ್ಯ ಸುಖವ ಮತ್ತೆ ಗುನುಗುತ್ತ”. .: ಡಾ. ಶ್ವೇತಾ ಬಿ.ಸಿ.

ನಲ್ಮೆಯ ದೀಪ್ˌನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ … Read more

ಕ್ಷಮಿಸು ಗೆಳೆಯ..: ಜೆ.ವಿ.ಕಾರ್ಲೊ

ಇಂಗಿಷಿನಲ್ಲಿ : ಒ’ಹೆನ್ರಿಅನುವಾದ: ಜೆ.ವಿ.ಕಾರ್ಲೊ ರಾತ್ರಿ ಹತ್ತು ಗಂಟೆಯಾಗುತ್ತಲಿತ್ತು ಎಂದಿನಂತೆ ಅವನು ಲಾಠಿ ಬೀಸುತ್ತಾ ಆ ಬೀದಿಗೆ ಇಳಿದ. ಮಾಮೂಲಿ ಪೋಲಿಸ್ ಗತ್ತಿನಿಂದ ರಸ್ತೆಯುದ್ದಕ್ಕೂ ತನ್ನ ಬೀಟ್ ಶುರು ಮಾಡಲಾರಂಭಿಸಿದ. ಮೈ ಕೊರೆಯುವ ತಣ್ಣನೆಯ ಗಾಳಿಯೊಳಗೆ ಮಳೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ತನ್ನ ಲಾಠಿಯನ್ನು ಕಲಾತ್ಮಕವಾಗಿ ಬೀಸುತ್ತಾ ರಸ್ತೆಯ ಮೂಲೆ ಮೂಲೆಗಳ ಮೇಲೆ ತೀಕ್ಷ್ಣ ದೃಷ್ಠಿ ಹರಿಸುತ್ತಾ, ರಸ್ತೆ ಬದಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರ ರಕ್ಷಕನಂತೆ ನಡೆಯುತ್ತಿದ್ದ. ಅವನು ಬೀಟ್ ಮಾಡುತ್ತಿದ್ದ … Read more

ಚಿಟ್ಟೆ ಕ್ಲಾಸ್ ಎಂಬ ಮಾಯಾ ಲೋಕ: ಡಾ. ದೋ. ನಾ. ಲೋಕೇಶ್

ಅದೊಂದು ದಿನ 1994 ರ ಮೇ ತಿಂಗಳ ಅಂತ್ಯದಲ್ಲಿ ನಮ್ಮಜ್ಜಿ ಊರು ಚಲುವಯ್ಯನಪಾಳ್ಯದಲ್ಲಿ ಆಟವಾಡುತ್ತಾ ನಮ್ಮಜ್ಜಿ ಮನೆಯ ಮುಂದಿನ ರಸ್ತೆಗೆ ಇಳಿದೆ. ದೂರದಲ್ಲಿ ಅರಳಿ ಮರದ ಹತ್ತಿರ ನಮ್ಮಮ್ಮ ಬರುತ್ತಿರುವುದು ಕಂಡು ಕುಣಿಯುತ್ತಾ ಮನೆಗೆ ಹೋಗಿ ನಮ್ಮಜ್ಜಿಗೆ ವಿಷಯ ಮುಟ್ಟಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಬೆಳಗುಂಬದಿಂದ ಸುಮಾರು ಎರಡು ಮೂರು ಕಿಲೋಮೀಟರ್ ನಡೆದು ಬಂದ ಅಮ್ಮ ತಣ್ಣನೆಯ ನೀರು ಕುಡಿದು ಸುಧಾರಿಸಿಕೊಂಡರು. ನಂತರ ಬಂದ ವಿಷಯವೇನು? ಎಂದು ಅಜ್ಜಿ ಕೇಳಿತು. ಅಮ್ಮನ ಉತ್ತರ ಕೇಳಿ ನನಗಂತೂ ಭಾರಿ … Read more

ಖಾಲಿ ಜೇಬು ಫಕೀರನ ಪ್ರೇಮದೋಲೆ..: ಆನಂದ ವೀ ಮಾಲಗಿತ್ತಿಮಠ

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ … Read more

ಹೆಸರು ಹೇಡಿ ಎಂದು ಬರೆದು ಬಿಡಿ (ಗಜಲ್ ಹಿಂದಿನ ಕಥನ): ಅಶ್ಫಾಕ್ ಪೀರಜಾದೆ.

ಮೊದಲು ನನ್ನ ರಚನೆಯ ಗಜಲ್ ಒಮ್ಮೆ ಓದಿ ಬಿಡಿ. ನಂತರ ನಾನು ಈ ಗಜಲ್ ಹುಟ್ಟಿನ ಹಿಂದಿನ ಕಥನವನ್ನು ವಿವರಿಸುವೆ. ಗಜಲ್; ನಗುನಗುತ್ತಲೇ ಉರುಳಿಗೆ ಕೊರಳ ನೀಡಿದೆವು ನಾವು/ನಗುನಗುತ್ತಲೇ ಮಣ್ಣಲ್ಲಿ ಮಣ್ಣಾಗಿ ಬೆರತೆವು ನಾವು// ದುರಂತ ಪ್ಯಾರ ಕಹಾನಿಗಳಿಗೆ ಆಸ್ತಿ ಅಂತಸ್ತಗಳೇ ಕಾರಣ/ನಸುನಗುತ್ತಲೇ ನಮ್ಮ ಪ್ರೇಮ ತ್ಯಾಗ ಮಾಡಿದೆವು ನಾವು// ಪ್ರೀತಿಗೆ ಗೋಡೆ ಬೇರೆಯಾಗಿದ್ದರೆ ಒದ್ದು ಕೆಡವ ಬಹುದಿತ್ತು/ಹಾಲೇ ಹಾಲಾಹಲವಾದಾಗ ಅಸಹಾಯಕರಾದೆವು ನಾವು// ಅವರು ಕೊಟ್ಟ ಹೂಗುಚ್ಚಕ್ಕೆ ಅದೆಂಥ ಮೊನಚಿತ್ತೋ ಕಾಣೆ/ಮುಳ್ಳಾಗಿ ನೆಟ್ಟಿದ್ದರೂ ಪ್ರೀತಿಯಿಂದ ಸ್ವೀಕರಿಸಿದೆವು ನಾವು// … Read more

ಹಾಡ್ಲಹಳ್ಳಿ ಪ್ರಕಾಶನದ ಐದು ಪುಸ್ತಕಗಳು ಈಗ ಒಂದೇ ಗುಚ್ಚದಲ್ಲಿ…

ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಉಲಿವಾಲ ಮೋಹನ್ ಕುಮಾರ್ ಅವರ “ಮುಳುಗಿದ್ದೆಲ್ಲಾ ಕಥೆಯಲ್ಲ” ಹಾಡ್ಲಹಳ್ಳಿ ನಾಗರಾಜ್ ಅವರ “ಅಜ್ಜನ ಕಮೋಡು” ಕಾದಂಬರಿ ಹಾಗು “ಮಳೆಯೆಂಬ ಮಾಯಾಂಗನೆ” ಪ್ರಬಂಧ ಹಾಗು ಚಲಂ ಹಾಡ್ಲಹಳ್ಳಿ ಅವರ “ಈ ಮಳೆಗಾಲ ನಮದಲ್ಲ” ಕವನ ಸಂಕಲನ, “ವಿ.ಸೂ. ಹೊಗೆ ಆರೋಗ್ಯಕ್ಕೆ ಒಳ್ಳೆಯದು” ಪುಸ್ತಕಗಳು ಇದೇ ಶನಿವಾರ, ಸೆಪ್ಟೆಂಬರ್‌ ೪, ೨೦೨೧ ರ ಸಂಜೆ ಐದಕ್ಕೆ ಹಾಸನದ ಸಾಹಿತ್ಯ ಪರಿಷತ್‌ ಭವನದಲ್ಲಿ ಬಿಡುಗಡೆಯಾಗಲಿವೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪುಸ್ತಕ ಕೊಳ್ಳುವವರಿಗಾಗಿ ಈ ಐದು ಪುಸ್ತಕಗಳ … Read more

ನಿಲುವಂಗಿಯ ಕನಸು (ಅಧ್ಯಾಯ ೮-೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೮: ತೋಟ ಹಾಳಾಗುವ ಕಾಲಕ್ಕೆ… ‘ನಿಮ್ಮತ್ತೆ ನಿನ್ನ ಗಂಡನ್ನ ಏಳನೇ ಕ್ಲಾಸಿಗೇ ಬಿಡಿಸುವ ಬದಲು ಇನ್ನಷ್ಟು ಓದಿಸಬೇಕಾಗಿತ್ತು ಕಣಕ್ಕ. ಒಳ್ಳೆಯ ಸಾಹಿತ್ಯಗಾರ ಆಗಿಬಿಡೋರು’ ಸುಬ್ಬಪ್ಪ ಅಕ್ಕನನ್ನು ಕಿಚಾಯಿಸಿದ. ಸೀತೆ ನಾಚಿ ತಲೆ ತಗ್ಗಿಸಿದಳು.‘ನೋಡು ಹೇಗೆ ಈಗ ಇಲ್ಲೇ ನಡೆದ ಹಂಗೆ ಹೇಳಿಬಿಟ್ರು!… ಬಹಳ ಇಂಟರೆಸ್ಟ್ ಆಗಿಬಿಡ್ತು’ ಎನ್ನುತ್ತಾ ಭಾವನ ಕಡೆ ತಿರುಗಿ ‘ಮುಂದೇನಾಯ್ತು ಹೇಳಿಬಿಡಿ… ಈ ಜಾಗನೂ ಒಳ್ಳೆ ಚಂದಾಗೈತೆ. ಇಲ್ಲೇ ಇನ್ನೊಂದು ಗಂಟೆ ಇದ್ದು ಹೋಗಣ’ ಎಂದ.ಆ ಕಡೆ ಮರಳಿನ ದಂಡೆ ಕಡೆ ನೋಡಿ, ದನಗಳು … Read more

ನೀನೇ ನನ್ನವಳಾದ ಮೇಲೆ ನಿನ್ನ ಸಿಹಿ ಕಹಿಗಳು ಇನ್ನೂ ನನ್ನದೇ: ಆರ್‌ ಸುನಿಲ್‌, ತರೀಕೆರೆ

ಗೆಳತಿ ಈ ಪ್ರೀತಿಯೆಂದರೇನು. . !?ಅಕ್ಷರಶಃ ಮೂಕ ನಾ. . ! ನಿನ್ನ ನೋಡಿ ಬಂದಾಗಿನಿಂದ ನಿಜಕ್ಕೂ ಮಾತುಗಳೆಲ್ಲಾ ಕಳೆದುಹೋಗಿದ್ದವು. ಅಕ್ಷರಗಳು ಮುನಿಸಿಕೊಂಡಿದ್ದವು. ನಿನ್ನೊಲವ ದಾಳಿಯಲ್ಲಿ ನನಗಾಗ ರಕ್ಷಣೆಯೇ ಇರಲಿಲ್ಲವಲ್ಲೇ. ಮದುವೆಯೆಂದರೆ ಮಾರುದೂರ ಓಡುತ್ತಿದ್ದವನಿಗೆ ಅಯಸ್ಕಾಂತದಂತೆ ಸೆಳೆದವಳು ನೀನು. ಆದರೆ ಒಂದಂತೂ ನಿಜ ನಾನು ನಿನಗೆ ಸಂಪೂರ್ಣ ಶರಣಾಗಿಹೋಗಿದ್ದೆ. ಎಲ್ಲೋ ಏನೋ ಕಳೆದುಕೊಂಡತಿದ್ದ ನನಗೆ ಸದಾ ನಿನ್ನ ನೆನಪುಗಳೇ ನನಗೆ ಹುರುಪು ತುಂಬುತ್ತಿದ್ದವು. ಹೊಸ ಕನಸುಗಳಿಗೆ ನಾಂದಿ ಹಾಡುತಿದ್ದ್ತವು. ಅದೇನೋ ಹೊಸ ಹುರುಪು ಹೊಸ ಮುದ. . … Read more

ಚುಟುಕಗಳು: ಮಾಂತೇಶ ಗೂಳಪ್ಪ ಅಕ್ಕೂರ

೧. ಪ್ರೀತಿ ಕುರುಡು. ನಿಜವಾಗಿಯೂ ಪ್ರೀತಿಕುರುಡು ಹಾಗಾಗಿಯೇ ನಾನದರಕಣ್ಣಿಗೆ ಕಾಣಿಸಿಕೊಳ್ಳಲಿಲ್ಲ ಬಿಡು..! ೨. ಮುತ್ತು ಹವಳ. ಕೈಯ ಹಿಡಿದಾಕ್ಷಣ ನಾನವಳಸಿಕ್ಕಂತಾಯಿತಂಥವಳಿಗೆ ಮುತ್ತು ಹವಳಇದ್ದರೂ ಇರಬಹುದೇನೋ ನನ್ನಂಥಹುಡುಗರು ತುಂಬಾ ವಿರಳ..! ೩. ಪ್ರೀತಿ & ಮೋಸ ನಾ ಒರಗುವ ದಿಂಬಿಗೂಕರಗುವ ಕಣ್ಣ್ ಕಂಬನಿಗೂಮಾತ್ರ ಗೊತ್ತು ಗೆಳತಿ ನಾನು ನಿನ್ನಪ್ರೀತಿ ಮಾಡಿದ್ದು. ನನ್ನ್ ಕಣ್ಣಿಗೆ ಚುಚ್ಚಿದ ಸೂಜಿಯಿಂದಹಿಡಿದು ನಮ್ಮಿಬ್ಬರನ್ನು ರಾಜಿ ಮಾಡಲುಬಂದವರಿಗೆಲ್ಲ ಗೊತ್ತು ಗೆಳತಿ ನೀನು ನನಗೆಮೋಸ ಮಾಡಿದ್ದು..! ೪. Block.. ರೆಕ್ಕೆಗಳಿರದಿದ್ದರು ಹಾರಿ ಬಂದು ಸಾರಿಸಾರಿ ಹೇಳುತ್ತಿದ್ದವು ನನ್ನ … Read more

ನಿಲುವಂಗಿಯ ಕನಸು (ಅಧ್ಯಾಯ ೬-೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೬: ಕೃಷಿ ಎಂಬ ಧ್ಯಾನ ಹೊಳೆಗೆ ಇಳಿದ ದನಗಳು ಬೆಳಗಿನ ಬಾಯಾರಿಕೆ ನೀಗಿಕೊಂಡು, ಹಾಗೆಯೇ ಸ್ವಲ್ಪ ದೂರ ಹೊಳೆಯೊಳಗೇ ಮುದದಿಂದ ನಡೆದು, ಬಲದ ದಂಡೆಗೆ ಹತ್ತಿ, ಅಲ್ಲಿಂದ ಮತ್ತೊಂದು ದಿಣ್ಣೆ ಏರತೊಡಗಿದವು. ಎರಡು ಪರ್ಲಾಂಗ್ ನಡೆದರೆ ಮತ್ತೊಂದು ತಳಾರ ಜಾಗ. ಕಡಿದಾದ ದಿಣ್ಣೆ ಏರಿ ದಣಿದ ದನಗಳು ದಾರಿಯಲ್ಲಿ ಮುಂದೆ ಹೋಗದೆ ವಿಶಾಲವಾದ ಆ ತಳಾರದಲ್ಲಿ ಮೇಯತೊಡಗಿದವು.ಅಕ್ಕನೊಂದಿಗೆ ಲಘುವಾಗಿ ಕೀಟಲೆ ಮಾಡುತ್ತಾ ಬರುತ್ತಿದ್ದ ಸುಬ್ಬಪ್ಪ ದನಗಳು ಮುದದಿಂದ ಮೇಯುತ್ತಿದ್ದುದನ್ನು ನೋಡಿ, ‘ಓಹೋ, ಇದಕ್ಕೇ ನಮ್ಮ ಭಾವ … Read more

ನನ್ನ ಅಂತರಾಳಕ್ಕೆ ನೀನಿಳಿದು, ನಾನು ನಿನ್ನಂತರಾಳವಾ ಹೊಕ್ಕು: ಶ್ರೀ ಕೊ ಯ

ನನ್ನ ಪ್ರಿಯೆ,ಮುಂಬರುವ ‘ಪ್ರೇಮಿಗಳ ದಿನ’ ಕ್ಕೆ ನನ್ನ ಪ್ರೀತಿಯ ಶುಭಾಶಯಗಳು. ನೀನು ಸಾಗರದಾಚೆಯ ಆ ದೇಶದಲ್ಲಿ ಇದ್ದರೆ ನಾನು ಇಲ್ಲೇ, ನಮ್ಮ ತಾಯ್ನಾಡಿನಲ್ಲಿ ಇರುವ ಪರಿಸ್ಥಿತಿ ನಮಗಿಂದು. ಅದರ ಕಾರಣಗಳು ಇಲ್ಲಿ ಅಪ್ರಸ್ತುತ. ಪ್ರಿಯೆ, ನಿನಗೆ ನೆನಪಿದೆಯೇ ನಾವು ಕಳೆದ ವರುಷ ಕೊಂಡಾಡಿದ ಆ ‘ಪ್ರೇಮಿಗಳ ದಿನ’. ಇಗೋ ಆ ನೆನಪಿನೊಡನೆ ಮತ್ತಷ್ಟು ನೆನಪುಗಳ ಸರಮಾಲೆ ನಿನ್ನ ಕೊರಳಿಗೆ. ನಿನ್ನನ್ನು ಬಣ್ಣಿಸಲು ಹೊರಟರೆ ಬಹುಶಃ ನಿಘಂಟಿನ ಗುಣವಾಚಕಗಳೆಲ್ಲವೂ ಖಾಲಿಯಾಗಬಹುದೇನೋ ಎಂಬ ಗುಮಾನಿ ನನ್ನನ್ನು ಕಾಡುತ್ತಿದೆ ಪ್ರಿಯೆ. ಹೀಗೆ, … Read more

ಒಲವಿನ ಹೋಂ-ಕ್ವಾರಂಟೈನು!: ಸಂತೆಬೆನ್ನೂರು ಫೈಜ್ನಟ್ರಾಜ್

ಗಂಧ ಲೇಪಿತ ಸುರಭಿ ಘಮವಾಗಿ ಮನ ಮನ ವ್ಯಾಪಿಸಿದವಳೇ…ಒಲವೆಂದರೆ ಮುಳ್ಳುಎದೆಗೆ ಚುಚ್ಚಿದರೂ ಹಿತ ಹಿತಸುರಿದ ರಕುತ ಲೆಕ್ಕವಿಲ್ಲ ಸಾಕಿಮದಿರೆಯ ಬಟ್ಟಲ ತುಂ-ತುಂಬಿ ಕೊಡುಇಷ್ಟು ಗಾಯಕ್ಕೆ, ಮತ್ತಿಷ್ಟು ಒಲವ ಉತ್ಪಾದಿಸುವ ಹೃದಯಗೂಡಿಗೆ ಸುರಿದು ನಗುವೆ! ಅದ್ಯಾರೋ ಬರೆದ ಪದ್ಯವಿದು ಅದೆಷ್ಟು ಬಾರಿ ಓದಿಕೊಂಡೆನೋ ಸಖಿ.. ..ಮುಳ್ಳ ಒಲವೇ ನಮ್ಮದು, ಚುಚ್ಚಿದರೇನಂತೆ ಹಿತ ಇದೆಯೆಂದ ಮೇಲೆ ಆಹಾ ಆನಂದವೇ ಸರಿ! ವಿರಹಕ್ಕೂ ಪ್ರೇಮ ಶಾಸ್ತ್ರದಲ್ಲಿ ಒಂದು ಒಲವ ಚೌಕಟ್ಟಿದೆ. ಇದ್ಯಾವುದೋ ವಿಚಿತ್ರ ಹೆಸರಿನ ಕಾಯಿಲೆ ಬಂದು ನೋಡು, ಬರೋಬ್ಬರಿ ಹತ್ತು … Read more

ನಾನು ಭಾವನೆಗಳನ್ನು ಬಚ್ಚಿಟ್ಟ ಮಹಾ ಮೌನಿ..!: ಆಶಾ ಆರ್ ಸುರಿಗೇನಹಳ್ಳಿ

ಓ.‌. ನನ್ನ ಹೃದಯ ನಿವಾಸಿಯೇ..! ಹೇ, ಹೃದಯವೇ..! ನೀ ನನ್ನ ಹೃದಯದಲಿ ನೆಲೆಸಿ ಹಲವು ವರ್ಷಗಳೇ ಸರಿದಿವೆ.. ಇನ್ನಷ್ಟು ವಸಂತಗಳು ಕಳೆದರೂ ಅದೇ ಪ್ರೀತಿ, ಮತ್ತಷ್ಟು ಪಜೀತಿ…! ಪ್ರೀತಿ ಓಕೆ ಪಜೀತಿ ಯಾಕೆ ಅಂತ ಯೋಚ್ನೆ ಮಾಡ್ತಿದ್ದೀಯಾ? ಒಂದು ತಗೊಂಡ್ರೆ ಮತ್ತೊಂದು ಫ್ರೀ ಅನ್ನೋ ಹಾಗೆ ಈ ಪ್ರೇಮಯಾನದಲಿ ಬರೀ ಸುಖವೇ ತುಂಬಿರೊಲ್ಲ ; ರೊಮ್ಯಾನ್ಸ್, ಆತ್ಮೀಯತೆ, ಒಂದಷ್ಟು ಕಾಳಜಿ, ಲೆಕ್ಕಕ್ಕೆ ಸಿಗದಷ್ಟು ಕೋಳಿ ಜಗಳಗಳು, ಕುಸಿದು ಬೀಳುವಂತಹ ಕ್ಲಿಷ್ಟ ಪರಿಸ್ಥಿತಿಗಳು ಎಲ್ಲದರ ಸಮ್ಮಿಶ್ರಣವೀ ಒಲುಮೆಯ ದಾರಿ. … Read more

ಪಂಜು ಕಾವ್ಯಧಾರೆ

ಯುದ್ದಕಾಗುವಷ್ಟು… ಧರ್ಮದ ಜಾಗರಣೆಯಲ್ಲಿ ಯುದ್ದಕಾಗುವಷ್ಟು ಮದ್ದಿದೆಆ ಫಕೀರನ ಜೋಳಿಗೆಯಲ್ಲಿಜಗಕೆ ಹಂಚುವಷ್ಟು ಪ್ರೀತಿಯ ಧಾರಾಳತನ ಶಾಂತತೆಸಂನ್ಯಾಸಿ ಜೋಳಿಗೆಯಲ್ಲಿದೆ ಪಡೆಯುವ ಮನಸುಗಳ ಬರವಿದೆ…! ಇಂದೂ ನಾಳೆಗೂ ನಾಡಿದ್ದೂ ಹೇಳಹೆಸರಿಲ್ಲದೆ ಅಳಿದು ಹೋಗುವದುಷ್ಟ ಬುದ್ದಿಯ ಗೀರುಗಳೆಷ್ಟು ಕುರುವುಗಳಷ್ಟುಆಕ್ರಂದನ ಮೊರೆತಗಳಷ್ಟುಯುದ್ದಕ್ಕೆ ಶಾಂತಿಯ ಹಂಗಿಲ್ಲಪ್ರೀತಿಗೆ ಮಮತೆಗೆ ಗಡಿಯ ಹಂಗಿಲ್ಲ…! ಆಯುಧ ತಾನೇ ಉತ್ಖನನ ಮಾಡಿದ್ದಾರೂ ಕೊಲ್ಲದೆ ಇರಲು ಸಾಧ್ಯವೇನಿರಂತರವಾಗಿ ಅದರ ಬೆನ್ನು ನೇವರಿಸುತ್ತಾ ಮುದ್ದು ಮಾಡುತ್ತಾನೆಯುದ್ಧದ ವ್ಯಸನಿಅದೇ ಆಯುಧ ನಳಿಕೆಯ ತುದಿಯಲ್ಲಿ ಪಾರಿವಾಳ ಗೂಡುಕಟ್ಟಲಿ ಎಂದು ಕಾಯುತ್ತಾನೆ ಶಾಂತತೆ ವ್ಯಸನಿಇಲ್ಲಿ ಇಬ್ಬರದು ಕನಸುಬಹುಷಃ ಜಗತ್ತು … Read more

ಕೃಷ್ಣೆಗೊಂದು ಪ್ರಶ್ನೆ: ಡಾ. ಗೀತಾ ಪಾಟೀಲ, ಕಲಬುರಗಿ

ನಮ್ಮ ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ! ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ವಿಸ್ತಾರವಾಗಿ ವಿವರಿಸುವ ಈ ಮಹಾಕಾವ್ಯದಲ್ಲಿ ನಾವು ಓದಿದ, ಕೇಳಿದ ಕೆಲವು ಪಾತ್ರಗಳು ವಿಶಿಷ್ಟ ಹಾಗೂ ಇಂದಿಗೂ ನಿಗೂಢವಾಗಿವೆ. ಅಂತಹ ಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು!! ದ್ರೌಪದಿ ದ್ರುಪದ ಮಹಾರಾಜನ ಮಗಳು, ದ್ರುಷ್ಟದ್ಯುಮ್ನನ ತಂಗಿ, ಪಾಂಡುರಾಜನ ಸೊಸೆ! ರಾಜಾಧಿರಾಜರನ್ನು ಗೆದ್ದು ರಾಜಸೂಯ ಯಾಗ ಮಾಡಿದ ವೀರರೈವರ ಪಟ್ಟದ ರಾಣಿ,, ಚಕ್ರವರ್ತಿನಿ! ಸೌಂದರ್ಯದಲ್ಲಿ, ವೈಭವದಲ್ಲಿ ಅವಳಿಗೆ ಸಮನಾದವರೇ ಇಲ್ಲ ಎನ್ನಿಸಿಕೊಂಡವಳು!! … Read more

“ಗಾಂಧಿ ಆಗ್ಬೇಕಂದುಕೊಂಡಾಗ” ಪುಸ್ತಕ ಪರಿಚಯ: ಸುನೀಲ ಚಲವಾದಿ

ನಮ್ಮ ಹೆಮ್ಮೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮದವರಾದ “ವೀರಣ್ಣ ಮಂಠಾಳಕರ” ಬರೆದಿರುವಂತಹ ಒಂದು ಕವನ ಸಂಕಲನ “ಗಾಂಧಿ ಆಗ್ಬೇಕಂದುಕೊಂಂಡಾಗ” ಎಂಬ ಪುಸ್ತಕದ ಒದುಗನಾದ ನಾನು ನಿಮ್ಮೆಲ್ಲರಿಗು ಪರಿಚಯಿಸುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ. ಶ್ರೀಯುತ ವೀರಣ್ಣ ಮಂಠಾಳಕರ್ ಅವರು ಈ ವರೆಗೆ ಒಟ್ಟು 13 ಕೃತಿಗಳನ್ನು, ಬರೆದಿದ್ದಾರೆ. ಚುಟುಕು, ಹನಿಗವನ, ಕಥಾಸಂಕಲನ, ಮಾಧ್ಯಮದ ಕುರಿತಾದ ಲೇಖನಗಳನ್ನು ರಚಿಸಿ ಓದುಗರಿಗೆ ಕೊಡುಗೆಯಾಗಿ ನೀಡಿರುವುದು ಅವರ ಸಾಹಿತ್ಯ ಕೃಷಿಯ ಕನ್ನಡಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ವೀರಣ್ಣ ಮಂಠಾಳಕರ್ ಅವರು … Read more

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನಿಸುತಿದ್ದೇವೆ..ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಬೇಡ.ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000. ನಿಯಮಾವಳಿಗಳು:ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .ಕತೆಗಳನ್ನು ನುಡಿ/ಯುನಿಕೋಡಿನಲ್ಲಿ ಟಂಕಿಸಿ ಕೊನೆಗೆ ನೀಡಿದ ಮೇಲ್ ಐಡಿಗೆ ಕಳಿಸಬೇಕು.ಎಲ್ಲ ಅಂದರೆ ಹಿರಿಯ ಹಾಗೂ ಹೊಸ ಲೇಖಕ/ಲೇಖಕಿಯರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದಷ್ಟು ಹೊಸ ಕತೆಗಳ ಕಳಿಸಿ.. ಈಗಾಗಲೇ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾದ … Read more