ಪಂಜು ಕಾವ್ಯಧಾರೆ

ಪಳೆಯುಳಿಕೆಗಳು ಅದೆಷ್ಟು ಕಾಲ ಕಣಿವೆಗಳಲಿನಿಶ್ಯಬ್ದವಾಗಿ ಬಿದ್ದಿವೆ ಅಸ್ಥಿಗಳು ಗತಕಾಲದ ರೋಚಕತೆಗೆ ಸಾಕ್ಷಿಯಾಗಿತಮ್ಮ ಇರುವಿಕೆಯ ಸ್ಪಷ್ಟ ಪಡಿಸಲು ಬದ್ದವಾಗಿಕಾದು ಕೂತಿವೆ ಪಳೆಯುಳಿಕೆಗಳಾಗಿ ಚರ್ಮ ಮಾಂಸ ಮಜ್ಜೆಗಳಿಲ್ಲಜೀವ ಆತ್ಮದ ಜೊತೆ ತಮಗಿಲ್ಲಆದರೂ ಇತಿಹಾಸವಾಗುವ ಆಸೆ ತೀರಿಲ್ಲ ಎಂದೋ ಯಾರೋ ಬರಬಹುದೆಂದುಹೊರಗೆಳೆದು ಪರಿಶೀಲಿಸಿ ದಾಖಲಿಸಬಹುದೆಂದುನಮ್ಮ ಕಥೆಗೂ ಜೀವ ತರಬಹುದೆಂದು ಆಸ್ತಿಗಳ ಆಸೆಗಷ್ಟೆ ಅಲ್ಲದೇಅಸ್ಥಿಗೂ ಬೆಲೆ‌ ಇರಬಹುದೆಂದುಸರಿದು ಹೋದ ತಮ್ಮನ್ನುಸಮಾಜದೆದುರು ತರಬಹುದೆಂದು ಆ ಕಲ್ಲು, ಬಂಡೆ, ಕೋಟೆ, ಅರಮನೆಯಂತೆಜೊತೆಗೆ ಸಿಕ್ಕ ನಿಧಿಗಳಂತೆ, ಬಳಸಿ ಎಸೆದ ಆಭರಣದಂತೆಹಿಂದೆ ಕೇಳಿದ ಪುರಾಣಗಳಂತೆ ತಮಗೂ ಬೆಲೆಯು ಸಿಗಬಹುದೆಂದುತಮ್ಮ … Read more

ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು … Read more

ಅರೆಹೊಟ್ಟೆಯಲ್ಲಿ ಬಳಲಿದ ಸಮಾರಂಭದ ಅತಿಥಿ: ಮಹಾಬಲ ಕೆ ಎನ್‌

ಸ್ನೇಹದ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದು ಆಗಾಗ್ಗೆ(ವರ್ಷಕ್ಕೊಮ್ಮೆ ಅನ್ನಿ. ಮೈಸೂರಿನಲ್ಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮವೊಂದಕ್ಕೆ ಬಹುತೇಕ ವೇದಿಕೆಯಲ್ಲಿ ಕುಳಿತ (ಮೂಕ)ಪ್ರೇಕ್ಷಕನಾಗಿ ಭಾಗವಹಿಸುವ ದೌರ್ಭಾಗ್ಯ ನನ್ನ ಪಾಲಿಗೆ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಮೆಟ್ಟಿಕೊಂಡು ಬಂದಿದೆ. ಹತ್ತು ಗಂಟೆಗೆ ಆರಂಭವಾಗಿ ಒಮ್ಮೊಮ್ಮೆ ಸಾಯಂಕಾಲ ಏಳರವರೆಗೆ ನಡೆಯುವ ಸಾಹಿತ್ಯಕ, ಸಾಮಾಜಿಕ, ಸಾಸ್ಕೃತಿಕ ಮತ್ತು ವೈದ್ಯಕೀಯ(ಏಕೆಂದರೆ ನೇತ್ರ ವಾಗ್ದಾನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುತ್ತಾರೆ) ಕಲಾಪ ಹೊಂದಿರುವ ವ್ಯಾಪಕ ಯೋಜನೆಯ ಕಾರ್ಯಕ್ರಮವಿದು. ಬೆಳಿಗ್ಗೆ ಸಭಾಕಲಾಪ ಉದ್ಘಾಟನೆ. ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಗಣ್ಯರ ಕೈಯಿಂದ ಕೈಗೆ ರಿಲೇ ರೇಸಿನ … Read more

ರಾಜು ಸನದಿ ಅವರ “ದುಗುಡದ ಕುಂಡ”: ಅಶ್ಫಾಕ್ ಪೀರಜಾದೆ.

ಯುವ ಕವಿ “ರಾಜು ಸನದಿ” ತಮ್ಮ ಚೊಚ್ಚಿಲ ಕವಿತಾ ಗುಚ್ಚ “ದುಗುಡದ ಕುಂಡ” ತುಂಬ ಪ್ರೀತಿಯಿಂದ ಕಳಿಸಿಕೊಟ್ಟು ದಿನಗಳೇ ಕಳೆದವು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದುಕೊಂಡು ಪ್ರಕಟವಾಗಿರುವ ಈ ಪುಸ್ತಕವನ್ನು ಕೆಲಸದ ಒತ್ತಡದಲ್ಲಿ ಓದಿ ಪ್ರತಿಕ್ರಿಯಿಸಲು ಆಗಿರಲಿಲ್ಲ. ಕೆಲಸದ ನಡುವೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ದುಗುಡದ ಕುಂಡ ಕೈಗೆತ್ತಿಕೊಂಡು ಈಗಷ್ಟೇ ಕೆಂಡದ ಕಾವು ಅನುಭವಿಸಿದ್ದೇನೆ. ಇಲ್ಲಿ ದಾಖಲಾದ ಪ್ರತಿ ಪದವೂ ಕಿಡಿಗಳಾಗಿ, ಪದಗಳು ಕೆಂಡದುಂಡೆಗಳಾಗಿ, ಮತ್ತು ಕವಿತೆಗಳು ಜ್ವಾಲಾಮುಖಿಯಾಗಿ ಹೊರಹೊಮ್ಮಿವೆ ಎಂದು ಹೇಳಬಹುದು. ಉತ್ತಮವಾದ … Read more

ಪ್ರಭಾವತಿ ದೇಸಾಯಿಯವರ ಗಜಲ್‌ ಸಂಕಲನ “ಭಾವಗಂಧಿ”: ಶಿವಕುಮಾರ ಮೋ ಕರನಂದಿ

ಕೃತಿ: ಭಾವಗಂಧಿ (ಗಜಲ್ ಸಂಕಲನ)ಲೇಖಕಿ: ಶ್ರೀಮತಿ ಪ್ರಭಾವತಿ ದೇಸಾಯಿಪ್ರಕಾಶನ: ಗಗನ ಪ್ರಕಾಶನ ವಿಜಯಪುರ ಸುಕೋಮಲವಾದ ಭಾವನೆಗಳ ಅಭಿವ್ಯಕ್ತಿಯೇ ‘ಗಜಲ್’ ಅರಬ್ಬಿ ಭಾಷೆಯ ಕಾವ್ಯರೂಪವಾದ ಇದು ಉರ್ದುವಿನಲ್ಲಿ ಅತ್ಯಂತ ಜನಪ್ರಿಯವಾದ ಕಾವ್ಯಪ್ರಕಾರವಿದು. ಉರ್ದುವಿನಲ್ಲಿ ಗಜಲ್ ಗೆ ಕಾವ್ಯರಾಣಿ ಎಂದು ಕರೆಯುತ್ತಾರೆ. ಕನ್ನಡ ಮಣ್ಣಿನೊಂದಿಗೆ ಬೆರೆತು ಸಮೃದ್ಧವಾಗಿ ಬೆಳೆಯುತ್ತಿರುವ ಗಜಲ್ ಕಾವ್ಯ ಪ್ರಕಾರವೂ ಹೈದ್ರಾಬಾದ್ ಕರ್ನಾಟಕದ ಶಾಂತರಸರಿಂದ ಕನ್ನಡಕ್ಕೆ ಪರಿಚಿತವಾಯಿತು, ಶಾಂತರರಸರು, ಎಚ್ ಎಸ್ ಮುಕ್ತಾಯಕ್ಕ, ಬಸವರಾಜ ಸಬರದ, ದಸ್ತಗಿರಸಾಬ್ ದಿನ್ನಿ, ಕಾಶಿನಾಥ ಅಂಬಲಿಗೆ, ಅಲ್ಲಾಗಿರಿರಾಜ್, ಗಿರೀಶ್ ಜಕಾಪುರೆ, ದೊಡ್ಡಕಲ್ಲಹಳ್ಳಿ … Read more

ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 59 & 60): ಎಂ. ಜವರಾಜ್

-೫೯-ರಾತ್ರ ಹತ್ತಾಗಿತ್ತೇನೋಊರಲ್ಲಿ ಎದ್ದಿರ ಗಲಾಟಿಈ ಅಯ್ನೋರ್ ಗಮನುಕ್ಕ ಬಂತು ಈ ಗಲಾಟಿ ಯಾಕ ಅನ್ತಅಯ್ನೋರ್ ತಲ ಕೊರಿತಿತ್ತೇನಾಅಸ್ಟೊತ್ಗ ಕುಲೊಸ್ತರು ಬಂದ್ರುಈ ಅಯ್ನೋರು ಜಗುಲಿ ಅಂಚ್ಗ ಕುಂತಿದ್ರು ‘ಅಯ್ನೋಅ ನೀವು ಚೇರ್ಮನ್ ಆದ್ರಿಆದ್ರ ಊರ್ಲಿ ಪುಂಡೈಕ ಹೆಚ್ಚವಊರ್ಲಿ ಚನೈನಬ್ಬ ಮಾಡ್ದಾಗಇದ್ದ ಒಗ್ಗಟ್ಟು ಹೊಂದಾವಣಿಈಗ ಕಾಣ್ದುಒಂದಲ್ಲ ಒಂದು ಗಲಾಟಿಕುಲ ಸೇರ್ಸಿಏನಾರ ಬಿಗಿ ಭದ್ರ ಮಾಡ್ಬೇಕಲ್ಲಾ..’ಅನ್ತ ಕುಲೊಸ್ತರು ವರದಿ ಒಪ್ಸುದ್ರು ಈ ಅಯ್ನೋರು‘ಸುಮ್ ಸುಮ್ನೆ ಈ ಗಲಾಟಿ ಯಾಕ..ಏನನ್ತ ಕುಲ ಮಾಡ್ದರಿಯಾರ್ ಮ್ಯಾಲ ಅನ್ತ ಹೇಳ್ದರಿ’ ಅನ್ತ ಕೇಳುದ್ರು ‘ಅಯ್ನೋರಾ ಕಾಲುನ್ … Read more

ಮೈತ್ರಿ ಪ್ರಕಾಶನವು ಏರ್ಪಡಿಸಿರುವ ಮೈತ್ರಿಪುಸ್ತಕ-2021 ಸ್ಫರ್ಧೆ

ಎಲ್ಲರಿಗೂ ಹೊಸವರ್ಷದ ಶುಭಾಷಯಗಳು.ಮೈತ್ರಿಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ.ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು.ಆಯ್ಕೆಯಾದ ಹಸ್ತಪ್ರತಿಗೆ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ. ಈ ಕೆಳಗಿನ ಆಂಶಗಳನ್ನು ಗಮನಿಸಿ.1) ಇದುವರೆಗೂ ಒಂದೂ ಕತಾಸಂಕಲನ ಪ್ರಕಟಿಸದ ಕತೆಗಾರರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸಾಹಿತ್ಯದ ಇತರೇ ಪ್ರಕಾರಗಳಲ್ಲಿಒಂದೆರಡು ಪುಸ್ತಕ ಪ್ರಕಟವಾಗಿದವರೂ ಸ್ಫರ್ಧೆಯಲ್ಲಿ ಭಾಗವಹಿಸಬಹುದು.2) ಕತೆಗಳನ್ನು ಕಡ್ಡಾಯವಾಗಿ ನುಡಿ./ಯುನಿಕೋಡ ಮೂಲಕ ಟಂಕಿಸಿ ಪ್ರಿಂಟರೂಪದಲ್ಲಿ ಕಳಿಸಬೇಕು. ಇಮೇಲ ಮೂಲಕ ಕಳಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.3) ಹಸ್ತಪ್ರತಿಯಲ್ಲಿ ಎಲ್ಲಿಯೂ ಲೇಖಕರ … Read more

ಪಂಜು ಕಾವ್ಯಧಾರೆ

ಹನಿಗಳು.. ನಗಲು ಹೇಳಿದಬುದ್ಧಆದರೆಮಾನವ ನಗದು ಗಾಗಿನಗುವುದನ್ನೇಮರೆತಬುದ್ಧಮೌನನಾದ… ನಾನು ಅಹಂಕಾರದಲ್ಲಿಶಾಂತಿ ನೆಮ್ಮದಿಗಾಗಿಊರೂರುಅಲೆದೆಶಾಂತಿ ತನ್ನೊಳಗೆ ಇದೆಎಂದು ತಿಳಿದಾಗಅವನ್ನಲ್ಲಿನ‘ನಾನು’ ಚಿರನಿದ್ರೆಗೆಜಾರಿತ್ತು… ನಾಕಷ್ಟವೆಂದುಬುದ್ಧನೆಡೆಗೆ ಹೋದೆಬುದ್ಧನ ನಗುಕಂಡನನ್ನ ಕಷ್ಟಗಳುನನ್ನಲ್ಲಿಯೇಲೀನವಾದವು… ಬುದ್ಧನೆಂಬ ಬೆಳಕುಇಲ್ಲಿ ಹಚ್ಚಿಟ್ಟ ದೀಪದ ಪ್ರಭೆಬೆಳಕ ನಡುವೆದುಃಖಕಷ್ಟಅಹಿಂಸೆಅಶಾಂತಿಅಸುನಿಗಿದ್ದವು… ಜಗತ್ತಿನ್ನು ನಿದ್ದೆಯಿಂದ ಎಬ್ಬಿಸಲುನಡುರಾತ್ರಿ ನಿದ್ದೆತೊರೆದ ಬುದ್ದುಜಗತ್ತಿನ ನಿದ್ದೆಯಿಂದ ಏಳುವಯಾವ ಪ್ರಯತ್ನಮಾಡಲಿಲ್ಲ.. ನಗುವಿನ ಶಾಂತಿಯಮಹತ್ವ ಹೇಳಿದಬುದ್ದನಗರದ ಗದ್ದಲದನಡುವೆಬುದ್ದ ನಗುವಿತ್ತುಯಾರ ಮನಸ್ಸಿನಲ್ಲಿನಗುವಿನ ಕುರುಹು ಇರಲಿಲ್ಲ.. ಬುದ್ದನಪ್ರತಿಮೆಗೆಗೆದ್ದಲು ಕಟ್ಟಿರಬಹುದುಪ್ರತಿ ಎದೆಯಲ್ಲಿ ನೆಲೆಸಿರುವಬುದ್ಧನವಿಚಾರಗಳಿಗಲ್ಲ.. -ವೃಶ್ಚಿಕ ಮುನಿ.. ಶಾಲ್ಮಲೆಯ ಸ್ವಗತ ಧಾರವಾಡದ ಸೋಮೇಶ್ವರ ತಾಣದಿಹುಟ್ಟುವೆ ನಾನು ಚಿಕ್ಕ ಚಿಲುಮೆಯ ರೂಪದಿಶಾಲ್ಮಲಾ ಎಂದೆನುವ ಸುರನದಿಯು … Read more

“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು. -ಕುವೆಂಪು ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು … Read more

“ಬಯಲುಡುಗೆಯ ಬೊಂತಾ – ಕತ್ತಲ ಗರ್ಭದ ಬೇಗೆಯಲಿ ಬೇಯುವ ಸಾವಿರದ ಒಂದು ಚಿತ್ರಕಾವ್ಯ”: ಎಂ.ಜವರಾಜ್

“ಸಂಸಾರವೆಂಬುದೊಂದು ಗಾಳಿಯ ಸೊಡರು,ಸಿರಿಯೆಂಬುದೊಂದು ಸಂತೆಯ ಮಂದಿ, ಕಂಡಯ್ಯ!ಇದ ನೆಚ್ಚಿ ಕೆಡಬೇಡ ಸಿರಿಯೆಂಬುದ!ಮರೆಯದೆ ಪೂಜಿಸುಆಚಾರವೇ ಸ್ವರ್ಗ, ಅನಾಚಾರವೇ ನರಕ,ನೀವೇ ಪ್ರಮಾಣು ಕೂಡಲಸಂಗಮದೇವ”(-ಬಸವಣ್ಣ) ಲೇಖಕ, ತಾನು ಅನುಭಿಸಿದ ನೋವು, ಯಾತನೆ, ತುಮುಲ, ರಂಜನೆ, ಕಾಮ, ಭೋಗ, ಶೀಲ, ಶೋಷಣೆ, ಚಳುವಳಿ, ಹೋರಾಟ, ಧರ್ಮ, ದೇವರು, ಜಾತಿ, ಮತ, ಪಂಥ, ಕುರಿತಾದ ತನ್ನೊಳಗಿನ ಅನುಭವವನ್ನು ಹೊಸದೇ ಎನುವ ಸೃಜನಶೀಲ ಕತೆ ಕವಿತೆ ಕಾದಂಬರಿ ಮತ್ತು ಮಹಾಕಾವ್ಯವಾಗಿ ಚಿತ್ರಿಸಿದ್ದಿದೆ. ಇದರ ಆಚೆಗು ಲೇಖಕನೊಬ್ಬನ ಮೂಲಕ ತಾನು ಹುಟ್ಟುವ ಮುನ್ನಿನ – ಈಗಾಗಲೇ ನಡೆದು … Read more

ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ … Read more

ದಂತ ಪುರಾಣ: ಸಂಗೀತ ರವಿರಾಜ್

ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ. ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ ಏನೋ … Read more

ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ … Read more

ಕಷ್ಟವೇ ದೇವರು………?: ದೀಪಾ ಜಿ.ಎಸ್

ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ನಾವುಗಳು ಯಾಕೆ ದೇವರನ್ನ ನೆನಪು ಮಾಡ್ಕೊಂತೀವಿ . ಅದೇ ನಾವು ಸಂತೋಷದಿಂದ ಇದ್ದಾಗ ದೇವರನ್ನ ನೆನಪು ಮಾಡ್ಕೊಳ್ಳೊದೇ ಇಲ್ಲ ಅಲ್ವಾ. ಜೀವನದಲ್ಲಿ ಕಷ್ಟಗಳು ಬಂದಾಗ ನಾವ್ ಯಾಕೆ ತಲೆ ಬಾಗಬೇಕು. ನಾವ್ ಯಾಕೆ ಕಷ್ಟಗಳಿಗೆ ಹೆದರ್ಬೇಕು……? ನಾವ್ ಯಾಕೆ ಕಷ್ಟಗಳಿಗೆ ಅಂಜಬೇಕು…..? ಕಷ್ಟಗಳು ಬಂದಾಗ ನಾವ್ ಯಾಕೆ ಹೆದರಿ ಕೂತ್ಕೋಬೇಕು….? ನಾವ್ ಯಾಕೆ ಅಳ್ಬೇಕು….? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಾಗ ಉತ್ತರ ನಮ್ಮಲ್ಲೇ ಇದೆ ಅಲ್ವ. ನಮ್ಮಲ್ಲೂ ಕೂಡ ಆ … Read more

ಚಿಮಮಾಂದ ಅಧಿಚೀಯ Americanah: ನಾಗರೇಖಾ ಗಾಂವಕರ

“A white boy and a black girl who grow up in the same working class town in England can get together and race is secondary, but in America even if the white boy and black girl grow up in the same neighbourhood , race would be primary” ಇದು ಆಫ್ರಿಕಾದ ಸಮಕಾಲೀನ ಸಾಹಿತ್ಯ ಲೋಕದ ಶ್ರೇಷ್ಠ ಪ್ರತಿಭೆ ಚಿಮಮಾಂದ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 57 & 58): ಎಂ. ಜವರಾಜ್

-೫೭-ತಿಥಿ ಆಗಿ ತಿಂಗ್ಳಾಯ್ತುಈ ಅಯ್ನೋರು ಅಂದ್ಕೊಂಡಂತೆಪಂಚಾಯ್ತಿ ಚೇರ್ಮನ್ರು ಆದ್ರುಈ ನೆಪ ಮುಂದಿಟ್ಕಂಡುಸುತ್ಮುತ್ಲ ಮುಂದಾಳ್ನೆಲ್ಲತ್ವಾಟ್ಗ ಬರೇಳ್ಕಂಡಿದ್ರು ರಾತ್ರ ಆಗಿತ್ತುಆ ಆಳು ಎಲ್ಲಯವಸ್ತಿ ಮಾಡಿದ್ನಎತ್ತಗ ತಿರಿಕಂಡ್ರು ಬಾಡೆಬಾಡುನ್ ಗಮಲೆಯಾರ್ ಕೈಲ್ನೋಡು ಹೆಂಡುದ್ ಬಾಟ್ಲೆಹೆಂಡುದ್ ವಾಸ್ನೆನೆ ಈಗ ಪಂಚಾಯ್ತಿ ಆಳ್ತನ ಎಲ್ಲಈ ಅಯ್ನೋರ್ ಕೈಲೆ ಆಗ ಆ ಚೆಂಗುಲಿಸೋದುರ್ ಮಾವ ಬಂದ ಅನ್ಸುತ್ತಈ ಅಯ್ನೋರು‘ಹ್ಞು ಏನಾ ಇಲ್ಲಿಗಂಟ ಬಂದಿದೈ’ ಅಂದ್ರು‘ಅಯ್ನೋರಾ ಕೇಸು ಏನಾಯ್ತು’‘ನೀನು ಮೈಸೂರ್ ಸಿಟಿಲಿರಂವಕೋರ್ಟು ಲಾಯಿರಿಕಾನೂನ್ ಗೊತ್ತಿರಂವದುಡ್ಡುಕಾಸು ತುಂಬಿರಂವನೀನ್ತಾನೆ ಕಂಪ್ಲೆಂಟ ಕೊಡ್ಸಿಆ ಪರ್ಶುನ ಎಳಿಸ್ದಂವಕಾಲ್ನು ಕಾಲ್ನೆಡ್ತಿನು ಗಲಾಟಿ ಮಾಡಕರಂಪ ರಾದ್ದಾಂತುಕ್ಕ … Read more

ಪಂಜು ಕಾವ್ಯಧಾರೆ

ನನ್ನಲ್ಲಿಷ್ಟು ಕನಸುಗಳಿವೆಮಾರಾಟಕ್ಕಲ್ಲ,ಎಲ್ಲರೆದೆಯ ಬರಡು ಭೂಮಿಯಲ್ಲಿಹೂಳುತ್ತೇನೆ,ಹೊಸ ನಾಳೆಗಳನ್ನೇ ಚಿಗುರಿಸುತ್ತೇನೆ ! ನನ್ನೀ ಕನಸುಗಳು-ಬುದ್ದನ ನಗೆಯ ನೆರಳಲ್ಲಿಬೆಳೆದು ಬಂದಂತಹವು,ಊರಾಚೆಯ ಒಲೆಯ – ಊರೊಳಗೆನೆಮ್ಮದಿಯ ನಗೆ ಬೀರುವಕನಸು ಕಾಣುತ್ತದೆ, ನನ್ನೀ ಕನಸು ! ಮೈಲು ದೂರದಲ್ಲಿಯ ಬೆಟ್ಟದ ಮ್ಯಾಲಿನದೇವದಾಸಿಯೂ ಅಂಗಲಾಚುತ್ತಾಳೆ-ನನ್ನೀ ಕನಸುಗಳಿಗಾಗಿ !ಮುಟ್ಟಾದ ಪುಟ್ಟ ತಂಗಿಯತುಂಬಿ ನಿಂತ ಕಣ್ಣಾಲೆಯೂ ಕೈಚಾಚಿದೆ-ನನ್ನ ಕನಸುಗಳತ್ತ ! ಸುಸ್ತಾಗಿದ್ದ ‘ಗಸ್ತಿ’ಯೂ ಗಸ್ತು ತಿರುಗಲು-ಅಣಿಯಾಗುತಿದ್ದಾನೆ , ಮತ್ತೇನಂಬಿಕೆಯಿದೆ ನನ್ನೀ ಕನಸುಗಳಲ್ಲಿ,ಅಪ್ಪ ಮುಟ್ಟಿದ ನೀರು ಮೈಲಿಗೆಯೆಂದದೊರೆಗಳಿಂದುಕನಸುಗಳ ಕಂಡು – ದಡಬಡಿಸುತ್ತಿದ್ದಾರೆ ! ಇಂದು ಬದುಕಿದ್ದರೆ -ನನ್ನಅಂಬೇಡ್ಕರ್ ?ನನ್ನೀ ಕನಸುಗಳ … Read more

ಸಾಲ: ಅನಂತ ರಮೇಶ್

1 ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ. ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ! ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, … Read more

ಇಳಾ: ಗಿರಿಜಾ ಜ್ಞಾನಸುಂದರ್‌

“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು. ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ … Read more

ಮರೆಯಲಾಗದ ಮದುವೆ (ಕೊನೆಯ ಭಾಗ): ನಾರಾಯಣ ಎಮ್ ಎಸ್

ಅಯ್ಯರೊಂದಿಗೆ ಮಾತಾಡಿದ್ದು ಎಲ್ಲರಿಗೂ ಸಮಾಧಾನ ತಂದಿತ್ತು. ತನಿಯಾವರ್ತನದ ನಂತರ ಸಿಂಧು ಭೈರವಿ, ತಿಲಂಗ್ ಮತ್ತು ಶಿವರಂಜನಿಯಲ್ಲಿ ಹಾಡಿದ ದೇವರನಾಮಗಳು ಮುದ ಕೊಟ್ಟವು. ಕಛೇರಿ ಕೊನೆಯ ಭಾಗ ತಲುಪಿದ್ದರಿಂದ ಮೈಕು ಹಿಡಿದ ಮೋಹನ ವೇದಿಕೆ ಹತ್ತಿದ. ನೇದನೂರಿಯವರಿಂದ ಪ್ರಾರಂಭಿಸಿ, ಒಬ್ಬೊಬ್ಬರಾಗಿ ಪಿಟೀಲು, ಮೃದಂಗ, ಖಂಜಿರ ಮತ್ತು ತಂಬೂರಿಯಲ್ಲಿ ಸಾಥ್ ನೀಡಿದ ಪ್ರತಿಯೊಬ್ಬ ಕಲಾವಿದರ ಬಗ್ಗೆಯೂ ಒಂದೆರಡು ಒಳ್ಳೆಯ ಮಾತನಾಡಿ ಧನ್ಯವಾದ ಅರ್ಪಿಸಿದ. ಒಬ್ಬೊಬ್ಬರಿಗೂ ಧನ್ಯವಾದ ಹೇಳಿದ ಬೆನ್ನಲ್ಲೇ ಕ್ರಮವಾಗಿ ಆಯಾ ಕಲಾವಿದರಿಗೆ ಕೃಷ್ಣಯ್ಯರ್ ಖುದ್ದು ತಮ್ಮ ಹಸ್ತದಿಂದ ಸೂಕ್ತ … Read more

ಹಾರುವ ಹಂಸೆಯ ಕಾವ್ಯಗುಣ: ವಿನಯಚಂದ್ರ

“ಹಾರುವ ಹಂಸೆ” ಇತ್ತೀಚಿನ ದಿನಗಳಲ್ಲಿ ನಾನು ಓದಿ ಮೆಚ್ಚಿದ, ಇತ್ತೀಚಿನ ತಲೆಮಾರಿನವರು ರಚಿಸಿದ ಕೃತಿಗಳಲ್ಲಿ ಬಹಳ ಉತ್ತಮವಾದ ಕೃತಿ ಎಂದು ನಿಸ್ಸಂಶಯವಾಗಿ ಹೇಳಿಬಿಡಬಹುದು. ಇದು ಚಾಮರಾಜನಗರದ ಆರ್ ದಿಲೀಪ್ ಕುಮಾರ್ ರವರ ಕವಿತೆಗಳ ಸಂಕಲನ. ಗಂಭೀರವಾದ ಸಾಹಿತ್ಯ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಯನದ ಆಧಾರದ ಮೇಲೆ, ಉತ್ತಮ ಕಾವ್ಯಗಳಲ್ಲಿ ಇರಬಹುದಾದ ಲಕ್ಷಣಗಳನ್ನು ಗುರುತು ಹಾಕಿಕೊಂಡು, ಅದಕ್ಕೆ ನಿಷ್ಠನಾಗಿ ಕಾವ್ಯ ರಚನೆ ಮಾಡಿದರೆ ಕವಿತೆಗಳು ಹೇಗೆ ಮೂಡಬಹುದೋ, ಕ್ವಚಿತ್ತಾಗಿ ಹಾಗೆಯೇ ಮೂಡಿವೆ ದಿಲೀಪರ ಕವಿತೆಗಳು. ಕಾವ್ಯದಲ್ಲಿ ಮುಖ್ಯವಾಗಿ ವಸ್ತು ವಿಷಯ, … Read more

ಡಿಸೆಂಬರ್ ಎಂದರೆ ಪ್ರವಾಸಗಳ ನೆನಪು..: ವಿನಾಯಕ ಅರಳಸುರಳಿ

ಶಾಲಾ ಪ್ರವಾಸವೆನ್ನುವುದು ಬದುಕಿನ ಮತ್ತೆಲ್ಲ ಪ್ರವಾಸಗಳನ್ನೂ ಮೀರಿಸುವಂಥಹಾ ಸವಿನೆನಪು. ಅರ್ಧವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ಛಳಿಗಾಲದ ಪ್ರವೇಶವಾಗುವ ಹೊತ್ತಿಗೆ ಶೈಕ್ಷಣಿಕ ಪ್ರವಾಸದ ಘೋಷಣೆಯನ್ನು ಸ್ವತಃ ಹೆಡ್ ಮಾಷ್ಟರೇ ಮಾಡುತ್ತಿದ್ದರು. ಬರುವ ಆಸೆ ಎಲ್ಲರಲ್ಲೂ ಇರುತ್ತಿತ್ತಾದರೂ ನೂರಿನ್ನೂರು ರೂಪಾಯಿಗಳ ಪ್ರವಾಸ ಶುಲ್ಕವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿರುವ ವಿಷಯವಾಗಿರಲಿಲ್ಲ. ಕೆಲವರಿಗೆ ಸುಲಭವಾಗಿ ಸಿಗುತ್ತಿದ್ದ ಈ ಹಣ ಇನ್ನು ಕೆಲವರಿಗೆ ಅಪ್ಪ-ಅಮ್ಮನಿಂದ ಬೆನ್ನಿನ ಮೇಲೆ ನಾಲ್ಕು ಗುದ್ದಿಸಿಕೊಂಡ ಬಳಿಕವೇ ಸಿಗುತ್ತಿತ್ತು. ಇನ್ನೂ ಕೆಲವರು ತಾವು ಅಲ್ಲಿಲ್ಲಿ ಅಡಿಕೆ ಸುಲಿದು, ಗೇರುಬೀಜ ಹೆಕ್ಕಿ ಸಂಪಾದಿಸಿದ್ದ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 55 & 56): ಎಂ. ಜವರಾಜ್

-೫೫-ಓಟಾಗಿ ಎಂಟೊಂಬತ್ದಿನ ಆಗಿತ್ತುಇವತ್ತು ಎಣ್ಕ ಅದನಾಳಿದ್ದು ಕಳ್ದು ಆಚ ನಾಳನೀಲವ್ವೋರ್ ತಿಥಿ ಅದ ಈ ಅಯ್ನೋರು ಆಳ್ಗಳ್ ಬುಟ್ಕಂಡುಸುಣ್ಣನುವ ಗೋಪಿ ಬಣ್ಣನುವಮನಗ್ವಾಡ್ಗ ತುಂಬುಸ್ತಿದ್ರು ಈಗ ಈ ದೊಡ್ಡವ್ವ ಬುಟ್ರ ಯಾರಿದ್ದರು..ಈ ಅಯ್ನೋರ್ಗ ಈ ದೊಡ್ಡವ್ವನೇ ಗತ್ಯಾದ್ಲುಈ ದೊಡ್ಡವ್ವ ಹೇಳ್ದಾಗೇ ಕೇಳ್ಬೇಕುಈ ದೊಡ್ಡವ್ವನ ಮಾತ್ನಂತೆಸತ್ತೋದ ನೀಲವ್ವೋರ ಅವ್ವ ಅಪ್ಪಬಂದುಮಗಳ ನೆನ್ಕಂಡು ಮನ ಕೆಲ್ಸ ಮಾಡ್ತಿದ್ರು ಈಗ ಈ ಅಯ್ನೋರು ದೊಡ್ಡವ್ವನ್ಗ ಹೇಳಿತಾಲ್ಲೊಕ್ಕಚೇರಿ ಕಡ ನಡುದ್ರುಹಿಂಗ ತಾಲ್ಲೊಕ್ಕಚೇರಿ ಕಡ ನಡ್ದಾಗಆ ಆಳು ದಾರಿಲಿ ಸಿಕ್ಕಿಗುಸುಗುಸು ಮಾತಾಡ್ತ ನಡ್ದಹಂಗೆ ಇನ್ನಿಬ್ರು ಬಂದ್ರುತಾಲ್ಲೊಕ್ಕಚೇರಿ … Read more

ಬೆರಗೊಂದು ಕೊರಗಾಗಿ ಕಾಡಿದಾಗ…. : ಸುಂದರಿ ಡಿ.

ತನ್ನ ಪಾಡಿಗೆ ತಾನು ಹಾಡಿಕೊಂಡು, ಹನಿಗಳ ಚುಮುಕಿಸಿ, ಬಳುಕುತ ಬಿಸಿಲ ನೇರ ಕೋಲುಗಳ ಸ್ಪರ್ಶದಿಂದಲೇ ಮತ್ತಷ್ಟು ಹೊಳಪಿನಿಂದ ತನ್ನಾಳದ ಮರಳನೂ ಚಿನ್ನದಂತೆ ಹೊಳೆಯಿಸುತ, ಜುಳು-ಜುಳು ನಾದದೊಂದಿಗೇ ಹರಿಯುತಿದ್ದ ನೀರ ಬದಿಯಲಿ ತನ್ನ ಸೊಬಗತೋರುತ, ನೀರ ಸೊಬಗನೂ ಹೆಚ್ಚಿಸಲೆಂಬಂತೆ ಅದರ ಸತ್ವವನೇ ಹೀರಿ ನಿಜವಾದ ಹಸಿರೆಂದರೆ ಇದೇ ಎಂಬಂತೆ ಬೆಳೆದು ನಿಂತಿದ್ದ ಗಿಡಗೆಂಟೆಗಳು, ಅವುಗಳಲ್ಲಿ ಬೆಟ್ಟದ ಹೂವಿನಂತೆ ಇತರರನು ತಮ್ಮತ್ತ ಸೆಳೆವ ಯಾವ ಗೋಜಿಗೂ ಹೋಗದೆ ಬೇಲಿಯ ಹೂವೆಂದೇ ಕರೆಸಿಕೊಂಡರೂ ಸಹಜ ಸೌಂದರ್ಯದ ಕಾರಣವೊಂದರಿಂದಲೇ ತಮ್ಮತ್ತ ತಿರುಗಿ ನೋಡುವಂತೆ … Read more

“ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ

ಸಾಹಿತ್ಯಾಸಕ್ತರೇ,ಸಹೃದಯೀ ಕವಿಮನಸ್ಸುಗಳೇ,ಫೆಬ್ರವರಿಯಲ್ಲಿ ನಮ್ಮ ಸಂಸ್ಥೆಯ ಕಡೆಯಿಂದ “ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. 🎉 ಆಸಕ್ತರು ನಿಮ್ಮ ಸ್ವರಚಿತ ಕುತೂಹಲ ಭರಿತ ನೀತಿಕಥೆ ಮತ್ತು ಮಕ್ಕಳಿಗೆ ಸುಲಲಿತವಾಗಿ ಹಾಡಲು ಬರುವಂತಹ ಮಕ್ಕಳ ಪದ್ಯವನ್ನು ಕಳುಹಿಸಿಕೊಡಬೇಕಾಗಿ ಕೋರಿಕೆ. ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದು. ನಿಮ್ಮ ಗುರುತಿನ ಚೀಟಿ ಅಗತ್ಯವಾಗಿ ಲಗತ್ತಿಸಿದರೆ ದತ್ತ ಮೊತ್ತದಲ್ಲಿ ಕಡಿತಗೊಳಿಸಲಾಗುವುದು. ÷ ಮಕ್ಕಳ ಪದ್ಯ (೧ ಪುಟ)÷ ಕಥನ-ಕವನವಾದರೆ ( ೧-೨ ಪುಟಗಳು)÷ ಮಕ್ಕಳ ನೀತಿಕಥೆ ( ೨-೩ ಪುಟಗಳು ) ಅಲ್ಲದೇ … Read more

ಸೇತುವೆ….: ಸತೀಶ್ ಶೆಟ್ಟಿ ವಕ್ವಾಡಿ.

ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ … Read more

ಪ್ರೇಮನಾದ: ಸುಮ ಉಮೇಶ್

ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ … Read more

ಸಾರ್ಥಕ್ಯ: ಡಾ. ಅಜಿತ್ ಹರೀಶಿ

ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ … Read more