ನೀನೆಂಬ ವಿಸ್ಮಯ: ಶ್ರುತಿ ಬಿ.ಆರ್.

ಓಯ್ ತಿಂಡಿ ಪೋತಿ, ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲೆ, ನೆನಪಾದಾಗಲೆಲ್ಲ ನನ್ನ ಮುಖದ ಮೇಲೆ ಹಾದು ಹೋಗುವ ಸಣ್ಣ ನಗು, ನಿನ್ನತ್ತಲೇ ಎಳೆಯುವ ಹುಚ್ಚು ಮನಸ್ಸು, ನಿನಗೆ ಹೇಳಬೇಕಾಗಿರೋದನ್ನು ಹೇಳಲು ಸಹಕರಿಸದ ಹೇಡಿ ಮಾತುಗಳು, ಆದರೆ ಇನ್ನೂ ನಾನು ತಡಮಾಡಬಾರದೆಂದು ಎಚ್ಚರಿಸುತ್ತಿರುವ ಬುದ್ಧಿ, ಇದೆಲ್ಲವೂ ಸೇರಿ ಪತ್ರವೇ ಸರಿಯಾದ ಮಾರ್ಗ ಅಂತ ಅನ್ನಿಸಿದೆ ಕಣೆ. ಚೆನ್ನಾಗಿ ತಿಂದು ಬಂದಿರುವುದಕ್ಕೆ ಸಾಕ್ಷಿಯಾಗಿ ಇರುವ ಯಾವಾಗಲೂ ಲವಲವಿಕೆಯಿಂದ ಕೂಡಿದ ನಿನ್ನ ನಗುಮುಖ, ಲಾಡುವಿನಂತೆ ಕೆನ್ನೆ, ಲಾಡುವಿನ ಮೇಲಿನ ದ್ರಾಕ್ಷಿಯಂತೆ ಕೆನ್ನೆಯ ಮೇಲಿನ … Read more

ಪ್ರೇಮದ ಕಾಲ್ಪನಿಕ ಕೊಳದಲ್ಲಿ: ಮಸಿಯಣ್ಣ ಆರನಕಟ್ಟೆ

ಒಲವಿನ ಆತ್ಮದೊಡತಿಗೆ, ನನ್ನುಸಿರ ಅರ್ಪಣೆಯು, ನನ್ನಾತ್ಮದ ನುಡಿಗೆ ಅರ್ಥವೇನೊಂದಿಲ್ಲ; ಅದರಿಂದ ನೀನು ಅರ್ಥ ಮಾಡಿಕೊಳ್ಳುವುದುದೇನೊಂದು ಇಲ್ಲ. ಆದರೂ, ನೀನು ಕಿವಿಗೊಟ್ಟು ಕೇಳುವೆ, ಅರ್ಥವಾಗದಿದ್ದರೂ, ಅರ್ಥವಾದಂತೆ ಕಿರುನಗೆ ಬೀರುವೆ ಎಂಬುದೇ ನನ್ನ ಭಾವ. ಕಾರಣ, ನೀನು ನನ್ನದೇ ಮನಸ್ಸಿನ ಭಾಗ. ಕಾಲಾನುಗತಿಯಲ್ಲಿ ನಿನ್ನನ್ನೊಗಳುವೆ; ಕ್ಷಣಾರ್ದದಲ್ಲೇ ತೆಗಳುವೆ; ಪ್ರೇಮದ ಕಾವ್ಯಕಲ್ಪನೆಯಲ್ಲಿರಬಹುದು ಅಥವಾ ಮೋಹದ ಮಾಯೆಯಲ್ಲಿರಬಹುದು. ನಾನಾಗಲೇ ನಿನಗೇಳಿದಂತೆ, ಇಲ್ಲಿ ಅರ್ಥಮಾಡಿಕೊಳ್ಳಲು ಏನುಯಿಲ್ಲ ಎಂಬ ಮುಗ್ಧಭಾವ ಆವರಿಸಿದೆ. ಹಾಗಾಗಿ ನುಡಿಯುವೆ, ಒಮ್ಮೆ ಬೆತ್ತಲಾದ ಆಕಾಶವನ್ನು ನೋಡುತ್ತಾ ಕೂತಿದ್ದೆ, ಎರಡು ಗಿಳಿಗಳು ಹಾರಾಡುತ್ತಾ … Read more

ನನ್ನೀ ಆತ್ಮದಲ್ಲಿ ಬೆರೆತವರು ತಾವು: ಅಂಬಿಕಾ ಪ್ರಸಾದ್

ಶೃಂಗಬೀಡು ಸಂಸ್ಥಾನದ ಘನತೆವೆತ್ತ ದೊರೆಯಾದ ಶ್ರೀ ಶ್ರೀ ಶ್ರೀ ಹಯವದನ ನಾಯಕರಲ್ಲಿ ಒಂದು ಗೌಪ್ಯವಾದ ವಿಷಯವನ್ನು ಹಲವು ಬಾರಿ ಯೋಚಿಸಿ ತಿಳಿಸಲು ಇಚ್ಛಿಸುತ್ತಿದ್ದೇನೆ. ಮೊನ್ನೆ ಸೂರ್ಯಾಸ್ತದ ಸಮಯದಲ್ಲಿ ತಂದೆಯವರ ಬಳಿ ನನ್ನ ಹೃದಯದಲ್ಲಿ ನೀವು ಹಿತವಾಗಿ ಬಂದು, ಬಲವಾಗಿ ಅಪ್ಪಿ ಕುಳಿತಿರುವುದರ ಬಗ್ಗೆ ತಿಳಿಸಬೇಕೆಂದು ಬಹಳ ಆತಂಕದಿಂದ, ಸಂಕೋಚದಿಂದ ಒಂದೊಂದೇ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿರಬೇಕಾದರೆ, ನನ್ನ ನೂಪುರದ ಘಲ್ ಘಲ್ ಎಂಬ ನಿನಾದವೇ ಭಯ ಬೀಳಿಸುವಂತೆ ನಿಶ್ಶಬ್ದವಾದ ರಂಗೇರಿದ ಅರಮನೆಯಲ್ಲೆಲ್ಲಾ ಮಾರ್ದನಿಸುತ್ತಿತ್ತು. ಅಂದು ತಾವು ನನಗೆ ಪ್ರೀತಿಯಿಂದ … Read more

ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ: ಶ್ರೀಲಕ್ಷ್ಮೀ ಅದ್ಯಪಾಡಿ

ಒಲವೇ,ಎಷ್ಷೊಂದು ಇಷ್ಟ ಪಡುವೆ ಹೀಗೆ ಕರೆದರೇ. ಬಹಳ ದಿನಗಳಾದವಲ್ಲವೇ ನಿನಗೊಂದು ಪತ್ರ ಬರೆಯದೇ. ಒಲವಿನ ಅನುಭೂತಿಗಳನ್ನು ಅಕ್ಷರಗಳಲ್ಲಿ ಮೂಡಿಸುವುದೇ ಸೊಗಸು. ಇಂದೇಕೋ ಹೊತ್ತಲ್ಲದ ಹೊತ್ತಿನಲ್ಲಿ ನಿನ್ನ ನೆನಪು ಸತಾಯಿಸುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಾಡುವ ನೆನಪುಗಳಿಗೇನು ಗೊತ್ತು ನಿನ್ನ ನನ್ನ ನಡುವೆ ಹಗಲು ರಾತ್ರಿಯ ಅಂತರವಿದೆ ಎಂದು. ಕನಸುಗಳಿಗೇಕೋ ವಾಸ್ತವದ ಜೊತೆ ಕ್ರೂರ ಶತ್ರುತ್ವ. ಅರೆಬರೆ ನಿದ್ದೆಯ ಮಗ್ಗುಲಲ್ಲಿ ನಿನ್ನದೇ ನೆನಪುಗಳ ಸದ್ದಿಲ್ಲದ ರಾಜ್ಯಭಾರ. ಪ್ರೀತಿಯೆಂದರೆ. ಇದೇ ಏನೋ. ನಿತ್ಯ ಬೇಸರವಿಲ್ಲದ ಕಾಯುವಿಕೆ. ಪ್ರತಿದಿನ ಕಣ್ಣು ತೆರೆಯುತ್ತಲೇ ಯಾರು … Read more

ಆ ಗುಲಾಬಿ ಹೂವಿನಮ್ಯಾಲಿನ ಹನಿಯಂಥಾಕಿ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಪ್ರೀತಿಯ ಸಖಿ ಚಿಮಣಾ… ಅಂದು ಸಂಜೆ ತಂಗಾಳಿಯೊಂದಿಗೆ ಮಾತಿಗಿಳಿದು ಮೆಲ್ಲನೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದಾಗ ದಾರಿಯಲಿ ಉದುರಿಬಿದ್ದ ಎರಡು ಹಳದಿ ಹೂಗಳನ್ನು ಎತ್ತಿ ನನ್ನ ಕೈಗಿಟ್ಟು ಬಿಡಿಸಿಕೊಂಡು ಬಿದ್ದಿವೆ ಬೀದಿಗೆ ಸಾಧ್ಯವಾದರೆ ಬದುಕಿಸಿಕೊ ಎಂದು ಹೇಳಿದೆಯಲ್ಲ ನಾನಾಗಾ ಸಖತ್ ಸೀರಿಯಸ್ಸಾಗಿ ನಿನ್ನನ್ನು ಪ್ರೀತಿಸಲು ಶುರುಮಾಡಿದ್ದು ನಿಜ. ಮುಂಜಾನೆ ಸೂರ್ಯನ ಕಿರಣಗಳು ಮುಗುಳುನಗುತ್ತ ಮನೆಯಂಗಳಕೆ ಬೆಳಕಿನ ರಂಗೋಲಿ ಇಡುತ್ತಿದ್ದಾಗ ನೀ ಹಾದು ಹೋಗುವ ದಾರಿ ತಿರುತಿರುಗಿ ನನ್ನೆ ದುರುಗುಟ್ಟುತ್ತಿತ್ತು. “ಹೇ ಹಿಂಗೆಲ್ಲ ಕಾದಂಬರಿಯೊಳಗ ಕವನ ಬರದಾಂಗ ಬರದ್ರ ಹೆಂಗ … Read more

ನೀ.. ಈ ಬಿಕ್ಕುಗಳ ಹಕ್ಕುದಾರ: ನಳಿನಿ. ಟಿ. ಭೀಮಪ್ಪ

ಪ್ರೀತಿಸುವ ದಿನ ಹತ್ತಿರ ಬರುತ್ತಿದೆ ಅಂತಾದರೂ ಗೊತ್ತಾ ನಿನಗೆ?…ನನ್ನ ಕರ್ಮ, ಅದನ್ನೂ ನಾನೇ ನೆನಪು ಮಾಡಬೇಕು. ಅನುಕ್ಷಣ, ಅನುದಿನ ನನ್ನನ್ನೇ ಆರಾಧಿಸುತ್ತ, ಪ್ರೀತಿಸುವ ನಿನಗೆ ವರ್ಷಕ್ಕೊಮ್ಮೆ ಆಚರಿಸುವ ಈ ಪ್ರೀತಿಯ ದಿನದ ಬಗ್ಗೆ ನಂಬಿಕೆ ಇಲ್ಲವೆಂದು ಗೊತ್ತು. ಆದರೆ ನನಗೆ ಆ ದಿನ ತುಂಬಾ ಅಮೂಲ್ಯವಾದುದು ಗೊತ್ತಾ? ಪ್ರೀತಿ ಎನ್ನುವ ಪದವೊಂದು ಜೀವನದಲ್ಲಿ ನಿನ್ನ ಮೂಲಕ ಅಂಕುರಿಸಿದ ಘಳಿಗೆಯೊಂದು ಚಿರಸ್ಮರಣೀಯವಾಗಿ, ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಅಭಿಲಾಷೆ ನನ್ನದು. ಅಂದು ನೀ ಕೊಡುವ ಕೆಂಪು ಗುಲಾಬಿಯ ಕಾಣಿಕೆಯನ್ನು, ಕೆಂಪೇರಿದ ಮೊಗದೊಡನೆ … Read more

ಒಲವಿಗೊಂದು ಓಲೆ: ಪೂಜಾ.ಎಲ್.ಕೆ

ಹೇ ಗೆಳೆಯ ಅದೇನ್ ನಿನ್ನ ಕಣ್ಣ ಹೊಳಪು, ಅದೇನ್ ನಿನ್ನ ಕಾಳಜಿ, ಅದೇನ್ ನಿನ್ನ ಭರವಸೆ, ಅದೇನ್ ನಿನ್ ನಂಬ್ಕೆ ಇದೆಲ್ಲದ್ರ ಅರ್ಥ ಖಂಡಿತವಾಗಿಯೂ ಒಲವಲ್ಲವೇ? ಇನಿಯ. ಇಣುಕಿ ಇಣುಕಿ ಹೃದಯದ ಕಿಟಕಿ ತೆಗೆದೆಬಿಟ್ಟೆ ಕೊನೆಗೂ ನೀನು ಸುಳಿವಿಲ್ಲದ ತಂಗಾಳಿಯ ಹಾಗೆ , ಕತ್ಲೇನೆ ಕಂಡಿರದ ದೀಪದ ಹಾಗೆ,ಹೇ ಜಾದುಗಾರ ಅದೇನ್ ಮೋಡಿ ಮಾಡ್ಬಿಟ್ಟೆ ಈ ಬಡಪಾಯಿ ಹೃದಯಕ್ಕೆ, ಪ್ರತಿ ಬಡಿತಕ್ಕೂ ನಿನ್ ಹೆಸರನ್ನೇ ಮಿಡಿಯುತ್ತೆ. ಅಷ್ಟೇ ಅಲ್ಲ ಈ ಹಾಳಾದ್ ಮನಸ್ ಕೂಡ ನಿನ್ನನ್ನೇ ಸದಾ … Read more

ನಿನ್ನವನಲ್ಲದ ಪಾಪಿ ಪ್ರೇಮಿ: ಸಾವಿತ್ರಿ ಹಟ್ಟಿ

ಪ್ರೀತಿಯ ಇವ್ಳೇ, ಕಾಲ ಅನ್ನೂದೇನಾರ ನಮ್ ಕೈಯ್ಯಾಗಿದ್ದಿದ್ರ ಎಳ್ಕೊಂಬಂದು ನಮ್ಮನಿ ಪಡಸಾಲಿ ನಡುಗಂಬಕ್ಕ ಕಟ್ಟಿ ಹಾಕ್ತಿದ್ದೆ ನೋಡು ಹುಡುಗಿ. ಆಗ ಬಹುಶಃ ನಾನು ನೀನು ಸಣ್ಣ ಹುಡುಗ ಹುಡುಗಿ ಆಗೇ ಇರತಿದ್ವಿ. ಶ್ರಾವಣ ಮಾಸ, ಪಂಚಮಿ ದಿನಗೊಳಂದ್ರ ನಿನಗ ಪ್ರಾಣ ಅಲಾ! ನಿನ್ನ ಉದ್ದನ ಜಡಿಗಿ ಬಾಬಿ ರಿಬ್ಬನ್ ಗೊಂಡೆ ಹೆಣಕೊಂಡು, ಚಿತ್ತಾರದ ನಿರಿಗಿ ಲಂಗ ಉಟ್ಕೊಂಡು, ಗಗ್ರಿ ತೋಳಿನ ಪೋಲ್ಕಾ ಹಾಕೊಂಡು, ಆಬಾಲಿ, ಮಲ್ಲಿಗಿ ಕ್ಯಾದಗಿ ಹೂವು ಮುಡ್ಕೊಂಡು ಜೋಕಾಲಿ ಆಡುವಾಗ ನನಗ ಯಾಡ್ ಕಣ್ಣು … Read more

ನೀ ಎದುರಿಗೆ ಬಂದ್ರೆ ಏನೋ ಓಂಥರಾ ಖುಷಿ ಆಕ್ಕೇತಿ!: ಕಾವ್ಯ. ಎನ್

ಲೋ ಹುಡ್ಗ,ಪ್ರೀತಿ ಪ್ರೇಮ ಎಲ್ಲ ನನ್ನಂತ ಹಳ್ಳಿ ಹುಡ್ಗಿಗೆ ಸರಿ ಬರೋದಲ್ಲ, ನನ್ನ ಕೆಲಸ್ ಏನಂದ್ರ ಓದೋದು ಅಷ್ಟೇ ಅಂತಾ ನಿರ್ಧಾರ ಮಾಡಿದ್ ನನ್ಗೆ, ಆ ವಿಸ್ಯಾನೇ ಮರೆಯಂಗೇ ಮಾಡಿದವ ನೀನು? ಅದ್ಯಾಗೆ ನಾನು ನಿನ್ನ ಪ್ರೀತಿಲಿ ಬಿದ್ನೊ ಒಂದು ತಿಳಿತಿಲ್ಲ. ವತ್ತು ಹುಟ್ಟಾದಗ್ನಿಂದ, ವತ್ತು ಬೀಳಾವರೆಗೂ ನಿಂದೆ ಜಪ. ನೀ ಎದುರಿಗೆ ಬಂದ್ರ ಏನೋ ಓಂಥರಾ ಕುಸಿ. ಒಂದು ನಿಮಿಷಕ್ಕೆ 72 ಸಾರಿ ಬಡ್ಕೊಳೋ ಹೃದಯ ನಿನ್ನ ಮೊಗ ಕಂಡಿದ್ ತಕ್ಷಣ ನೂರ್ಸಾರಿ ಬಡಿತೈತೆ. ಆಗ … Read more

ನೀ ಬರುವ ದಾರಿಯಲಿ ಕಂಗಳ ಹಾಸಿ: ಜಯಶ್ರೀ ಭಂಡಾರಿ.

ನಮ್ಮ ಭೇಟ್ಟಿ ಎಷ್ಟು ಅನಿರೀಕ್ಷಿತವಾಗಿ ಆಯಿತು. ಆದರೆ ಪ್ರೀತಿ ತುಂಬಾ ವಿಚಿತ್ರ. ನಿನಗೆ ನೆನಪಿದೆಯಾ ನನ್ನ ಸುಂದರ ಫೋಟೋ ಅದೆಲ್ಲಿ ನೋಡಿದೆಯೋ… ನೀ. ನಿನ್ನಿಂದ ನನ್ನ ಮೇಲಗೆ ಮೆಸ್ಸೇಜ ಬಂತು. ಪ್ಲೀಜ ಮೊಬೈಲ ನಂಬರ ಕಳಿಸಿ ನಿಮಗೆ ಅರ್ಜೆಂಟ ಮಾತಾಡೋದು ಇದೆ ಅಂತ. ನೀನ್ಯಾರೋ ತಿಳಿಯದ ನಾನು ನಿರ್ಲಕ್ಷ್ಯ ಮಾಡಿದೆ. ಮತ್ತೆ ಮತ್ತೆ ನೀ ರಿಪೀಟ ಮಾಡಿದೆ. ಕೂತೂಹಲದಿಂದ ಅಂದು ನನ್ನ ನಂಬರ ಕಳಿಸಿದೆ. ನೀ ಸಣ್ಣಗೆ ನನ್ನೊಳಗೆ ನುಗ್ಗಿದೆ. ಮನಸಲಿ ನೆಲೆ ನಿಂತೆ. ಜೊತೆಯಿಲ್ಲದ ಒಂಟಿ … Read more

ಚೈನ್ ಲಿಂಕ್ ಚತುರರು: ವಿನಾಯಕ ಅರಳಸುರಳಿ

ನೀವು ಬೆಂಗಳೂರಿಗೆ ಕೆಲವೇ ದಿನಗಳ ಕೆಳಗೆ ಹೊಸದಾಗಿ ಬಂದು ಸೇರಿಕೊಂಡಿದ್ದೀರ. ಈಗಷ್ಟೇ ಒಂದು ಕೆಲಸ ಸಿಕ್ಕಿದೆ. ಅಲ್ಲಿ ಯಾವುದೋ ರೋಡಿನ ಎಷ್ಟನೆಯದೋ ಕ್ರಾಸಿನಲ್ಲಿರುವ ನಿಮ್ಮ ರೂಮಿನಿಂದ ಆಫೀಸಿಗೆ ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದೀರ‌. ಭಾರತದ ಜ್ವಲಂತ ಸಮಸ್ಯೆಯಾದ ಜನಸಂಖ್ಯಾ ಸ್ಪೋಟದ ನೇರ ಪರಿಣಾಮದಿಂದ ಹಿಗ್ಗಮಗ್ಗಾ ರಶ್ ಆಗಿರುವ ಬಸ್ಸಿನಲ್ಲಿ ಸೊಂಟ ಬಳುಕಿದ ತೆಂಗಿನ ಮರದಂತೆ ನಿಂತು ದಿನವೂ ಪ್ರಯಾಣಿಸುತ್ತಿದ್ದ ನಿಮಗೆ ಈ ದಿನ ಇದ್ದಕ್ಕಿದ್ದಂತೆ ಸೀಟೊಂದು ಸಿಕ್ಕಿದೆ. ಬಸ್ಸಿನಲ್ಲಿ ನಿಂತಿರುವ ಉಳಿದ ಅಸಂಖ್ಯಾತ ಪ್ರಯಾಣಿಕರ ನಡುವೆ ನಿಮಗೆ ಮಾತ್ರ … Read more

ಸುಶೀಲೆ: ವರದೇಂದ್ರ ಕೆ.

ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ … Read more

ಪಂಜು ಪ್ರೇಮ ಪತ್ರ ಸ್ಪರ್ಧೆ 2021

ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ … Read more

ಪಂಜು ಕಾವ್ಯಧಾರೆ

ಮೊದಲ ಮುಟ್ಟು ಅಂಗಳದಲ್ಲಿ ಮೂಡಿದಕೆಂಪು ರಂಗೋಲಿಭಯ ಹುಟ್ಟಿಸುತ್ತದೆಶಾಲಾ ಶೌಚಾಲಯದಗೋಡೆ ಮೇಲೆಲ್ಲಾಗಾಭರಿಯ ಗೀಟುಗಳು ಎದೆಯ ಹೊಸ್ತಿಲಲ್ಲಿಅಡ್ಡಲಾಗಿ ಬಿದ್ದಭಯದ ಪೆಡಂಭೂತತಲೆಯ ಹಗ್ಗದ ಮೇಲೆಹಿಂಜರಿಕೆಯ ದೊಂಬರಾಟ ಕಿಬ್ಬೊಟ್ಟೆಯಲ್ಲೊಂದು ನೋವುಗಂಟು ಕಟ್ಟಿಕೊಂಡರೆಮನದೊಳಗೆ ಮುಜುಗರದಬ್ರಹ್ಮಗಂಟುಗಿಡಕ್ಕೆ ಕಚ್ಚಿದ್ದ ಮೊಗ್ಗುಭಯದಲ್ಲೇ ಅರಳುತ್ತದೆ ಕೇರಿ ಕೇರಿಯಲು ಸದ್ದುಮಾಡಿದ್ದ ಗೆಜ್ಜೆಯದುಲಜ್ಜೆ ಹಿಡಿದುಕೋಣೆ ಸೇರುತ್ತದೆರೆಂಬೆ ಕೊಂಬೆ ಹತ್ತಿದ್ದಕಾಲ್ಗಳಿಗೆ ಸರಪಳಿಯಸತ್ಕಾರ ಪ್ರಕೃತಿಯ ಕೊಡುಗೆಗೆನೂರೆಂಟು ಗೊಡವೆದೇವತೆಯನ್ನೂ ಬಿಡಲಿಲ್ಲಮಡಿವಂತಿಕೆ ಸರಿಯೇ ಮಡಿಲ ಕೂಸ ಸೆರಗಲ್ಲಿಬಚ್ಚಿಡುವ ಆಟಗಂಡು ನೆರಳು ಸೋಕದಂತೆಬಿಗಿ ಬಂದೂಬಸ್ತ್ಅವಳನ್ನು ಅವಳೊಳಗೇಬಚ್ಚಿಡುವ ಕಣ್ಣಾಮುಚ್ಚಾಲೆ ಆಟ ಏರಿದವರ್ಯಾರೋಈ ಕಟ್ಟುಪಾಡುಸ್ವಾಭಾವಿಕ ಕ್ರಿಯೆಗೆಸಂಕೋಚದ ಸೊಂಟದ ಪಟ್ಟಿಕಟ್ಟಿ ನಡುರಸ್ತೆಗೆ ಬಿಡುವರೀತಿ ನೋಡು … Read more

ರಾಷ್ಟ್ರೀಯ ‘ ಹುತಾತ್ಮರ ದಿನ ‘: ಡಾ.ಅವರೆಕಾಡು ವಿಜಯ ಕುಮಾರ್

ಜನವರಿ 30 ಈ ವಿಶೇಷ ದಿನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ದೇಶದ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಹೋರಾಡಿ ಮಡಿದ ರಾಷ್ಟ್ರೀಯ ವೀರ ನಾಯಕರುಗಳನ್ನು ನೆನೆಯುವ ದಿನ. ಭಾರತವು ಸೇರಿದಂತೆ ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ರಾಷ್ಟ್ರೀಯ ದಿನವನ್ನು’ ಹುತಾತ್ಮರ ದಿನ’ ಅಥವಾ ‘ಸರ್ವೋದಯ ದಿನ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.ಭಾರತ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತವರ ತ್ಯಾಗಕ್ಕೆ ಎಂದೆಂದಿಗೂ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 63 & 64): ಎಂ. ಜವರಾಜ್

-೬೩-ದಿನ ಕಳಿತಾ ಊರು ಬಣ್ಗೆಡ್ತಿತ್ತುಚೇರ್ಮನ್ ಗಿರಿನು ಮುಗಿತಾ ಇತ್ತುಬರವ್ರು ನಿಂತ್ರು ಹೋಗವ್ರು ಹೋದ್ರುಮೈನೆರಿದೆ ಇರ ಆ ದೊಡ್ಡವ್ವುನ್ ಮೊಮ್ಮೆಣ್ಣುಮದ್ವ ಆಗಿ ಗಂಡುನ್ ಮನ ಸೇರ್ತುಆದ್ರ ಆ ಆಳ್ ಮಾತ್ರ ಹಂಗೆ ನಗ್ತಾ ನಗ್ತಾಈ ಅಯ್ನೋರ್ ತಿಕುದ್ ಸಂದಿ ಬುಟ್ಟದು ಕಾಣಿಈಗಿರ ಅರ್ಧ ತ್ವಾಟ ಅವ್ನೆಸ್ರುಗ ಖಾತನು ಆಗಿತ್ತುಅನ್ನದು ಗುಟ್ಟಾಗಿ ಉಳಿಯದೇನ್ ಬಂತು… ರಾತ್ರ ಸ್ಯಾನೆ ಹೊತ್ತಾಗಿತ್ತುಆ ಆಳು ಅದ್ಯಾತಿಕ್ಯಾ ಏನಾಈ ಅಯ್ನೋರ್ ಜಗುಲಿ ಮ್ಯಾಲಹೆಡ್ತಿನ ಕುಂಡ್ಸಿ ತ್ವಾಟ್ಕ ಹೋದಂಗಿತ್ತುಆ ಆಳ್ನ ಹೆಡ್ತಿ ಅಯ್ನೊರ್ ಮಾತ್ಗ ನಗ್ತಸೆರುಗು ಜಾರಿ … Read more

‘ಮಾತೆಂಬುದು ಜ್ಯೋತಿರ್ಲಿಂಗ’: ವಸುಂಧರಾ ಕದಲೂರು.

ನನ್ನ ಸ್ನೇಹಿತೆಯ ಸ್ನೇಹಿತೆ ಆಕೆ. ನನಗೂ ಒಂದೆರಡು ಬಾರಿಯ ಒಡನಾಟದಿಂದ ಪರಿಚಿತಳಾಗಿದ್ದಳು. ಕೆಲವು ದಿನಗಳ ಹಿಂದೆ ಒಂದು ಸಂಜೆ ನಾನು ಆಫೀಸು ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ‘ಕಾಫಿ ಕುಡಿಯೋಣ ಎಲ್ಲಾದರೂ ಸಿಗಲು ಸಾಧ್ಯವಾ?’ ಎಂಬ ಮೆಸೇಜು ಮಾಡಿದ್ದಳು. ನಾನು ವರ್ಷಾರಂಭದಿಂದಲೇ ಚಹಾ- ಕಾಫಿ ಸೇವನೆ ಬಿಟ್ಟಿರುವುದಾಗಿ ಆಕೆಗೆ ಗೊತ್ತಿತ್ತು. ಆದರೂ ಬೇರೆ ಏನನ್ನೋ ಫೋನಿನಲ್ಲಿ ಹೇಳಿಕೊಳ್ಳಲಾರದ್ದಕ್ಕೆ ಕಾಫಿಯ ನೆವ ತೆಗೆದು ಮಾತನಾಡಲು ಕರೆದದ್ದಿರಬಹುದೆ? ಎಂಬುದು ನನಗೆ ಅರ್ಥವಾಗಿ, ’ಸರಿ, ಬರುವೆ. ಆದರೆ ‘ಕಾಫಿ ಡೇ‘ಗೆ ಹೋಗೋಣ. … Read more

ದೀಪಗೃಹದಲ್ಲಿ ಒಂದು ರಾತ್ರಿ…..: ಜೆ.ವಿ.ಕಾರ್ಲೊ.

ಇಂಗ್ಲಿಷ್ ಮೂಲ: ಜೆ.ಎಸ್.ಫ್ಲೆಚರ್ಅನುವಾದ: ಜೆ.ವಿ.ಕಾರ್ಲೊ. ‘ಶಿವರಿಂಗ್ ಸ್ಯಾಂಡ್’ ದೀಪಗೃಹಕ್ಕೆ ಮತ್ತೊಬ್ಬ ಕಾವಲುಗಾರನಾಗಿ ಮೊರ್ಡೆಕಾಯ್ ಚಿಡ್ಡೋಕ್ ಬಂದು ಇಳಿದಾಗ , ಜೆಝ್ರೀಲ್ ಕಾರ್ನಿಶ್ ತನ್ನ ಪಾಲಿನ ಪಾಳಿಯನ್ನು ಮುಗಿಸಿ ಆಗ ತಾನೇ ನಿದ್ದೆ ಹೋಗಿದ್ದ. ಕಾರ್ನಿಶ್ ನಿದ್ದೆಯಿಂದ ಏಳುವಾಗ ತಾನು ಎದುರುಗೊಳ್ಳಲಿರುವ ಮನುಷ್ಯ ಯಾರು, ಎಂತವನು ಎಂದು ಅವನಿಗೆ ಆ ಗಳಿಗೆಯಲ್ಲಿ ಗೊತ್ತಾಗಿರುವ ಸಂಭವವಿರಲಿಲ್ಲ. ಗೊತ್ತಿದ್ದರೆ ಅವನು ಆಗಷ್ಟೇ ತಿಂಗಳ ರೇಶನ್ ಮತ್ತು ಚಿಡ್ಡೋಕನನ್ನು ಇಳಿಸಿ ಹಿಂದುರಿಗಿದ ದೋಣಿಯನ್ನು ಹತ್ತುವುದರಲ್ಲಿ ಯಾವುದೇ ಸಂಶಯವಿರಲಿಲ್ಲ! ಚಿಡ್ಡೋಕ್ ಬರುವ ಮುನ್ನ ನಾವಿಬ್ಬರೇ … Read more

ನಮ್ಮ ಜಿಲ್ಲೆಯ ಗಜಲ್ ಕಾರರು…(ಕೊನೆಯ ಭಾಗ): ವೇಣು ಜಾಲಿಬೆಂಚಿ

ಮತ್ತೋರ್ವ ಭರವಸೆಯ ಗಜಲ್ ಬರಹಗಾರರು ಶ್ರೀ ಪ್ರಕಾಶ ಬುದ್ದಿನ್ನಿಯವರು… ಅವರು ಬರೆದ ಗಜಲ್ ನ ಸಾಲು ಹೀಗಿದೆ… ” ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ “ ಎಂತಹ ಮನೋಜ್ಞವಾದ ಸಾಲು… ರಾತ್ರಿ ಎಂಬುದೇ ಪ್ರೀತಿಯ ಸಲ್ಲಾಪಕ್ಕೆ ಕರೆಯುವ ವೇದಿಕೆ. . . ಅದರಲ್ಲೂ ದೀಪ ಹಚ್ಚಿಟ್ಟುಕೊಂಡು ಪ್ರಿಯತಮೆಯ ಬರುವಿಕೆಗಾಗಿ ಕಾಯುತ್ತಿರುವ ಪ್ರಿಯಕರ. ಆದರೆ ಎಷ್ಟು ಕಾದರೂ ಅವಳು ಬಂದಳಾ? ನಿರಾಶೆಯನ್ನೇ ಉಳಿಸಿತೆಂದು ಮುಂದಿನ … Read more

‘ಎಮ್ಮೆಗುಂಡಿಯಲ್ ಒಂದು ದಿನ ‘ “ನಿಲುವಂಗಿಯ ಕನಸು “: ದಾಕ್ಷಾಯಿಣಿ

ಯಾವುದೇ ಕೃತಿಯೊಂದನ್ನು ಓದುವಾಗಲೂ ನನ್ನನ್ನು ಬಹುವಾಗಿ ಸೆಳೆಯೋದು ಆ ಕೃತಿಯಲ್ಲಿ ಚಿತ್ರಿತವಾಗುವ ಸ್ತ್ರೀ ಪಾತ್ರಗಳ ಪರಿಭಾವನೆಗಳು.ಈ ನಿಟ್ಟಿನಲ್ಲಿ “ಹಾಡ್ಲಹಳ್ಳಿ ನಾಗರಾಜ್” ಸರ್ ಅವರ “ನಿಲುವಂಗಿಯ ಕನಸು ” ಕಾದಂಬರಿಯಲ್ಲಿಯೂ ನನ್ನ ಗಮನ ಸೆಳೆದ ಪ್ರಮುಖ ಸ್ತ್ರೀ ಪಾತ್ರಗಳು ಎರಡು, ಒಂದು”ಅವ್ವ” ನದು ಮತ್ತೊಂದು “ಸೀತೆ” ಯದು.ಇವರಿಬ್ಬರೂ ಇಡೀ ಕಾದಂಬರಿಯಲ್ಲಿ ಹಸಿರಿನೊಂದಿಗೆ ಜೀವ ಬೆಸೆದು ಮಾತನಾಡುವ ಸ್ತ್ರೀ ತತ್ವದ ಸಂಕೇತಗಳಾಗೇ ನನಗೆ ಕಂಡು ಬರುತ್ತಾರೆ. ಕೃಷಿ ಎಂದ ತಕ್ಷಣ ಅದ್ಯಾಕೋ ನನಗೆ ರೈತ ಪುರುಷನ ಚಿತ್ರ ಕಣ್ಮುಂದೆ ಬರೋದೇ … Read more

ಮತ್ತೊಂದು ಮಹಾಭಾರತ (ಭಾಗ ೧): ಡಾ.ಸಿ.ಎಂ.ಗೋವಿಂದರೆಡ್ಡಿ

ಅರಿಕೆ ಹಸ್ತಿನಾವತಿ ಶಂತನು ಸತ್ಯವತಿಯರ ಪ್ರೇಮ ಪ್ರಸಂಗ -ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು.ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ.ಇಲ್ಲಿ ಚಂದ್ರವಂಶದ ಅರಸ ದುಷ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನ ಪರಂಪರೆಯಲ್ಲಿ ಜನಿಸಿದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನು ಒಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೊರಟವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು ಅವಳ ರೂಪಸಂಪತ್ತಿಗೆ ಮರುಳಾದ- -ಡಾ.ಸಿ.ಎಂ.ಗೋವಿಂದರೆಡ್ಡಿ ಮುಂದುವರೆಯುವುದು.. … Read more

ಸ್ಪೂರ್ತಿಯ ಸುಮಗಳೊಂದಿಗೆ ಮನಸ್ಪೂರ್ತಿಯಾಗಿ ಮಾತಾದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಕವನಸಂಕಲನ: ಸ್ಪೂರ್ತಿಯ ಸುಮಗಳುಲೇಖಕಿಯರು: ಶ್ರೀಮತಿ ದಾಕ್ಷಾಯಣಿ ಮಂಡಿ ‘ಸ್ಪೂರ್ತಿಯ ಸುಮಗಳು’ ಶ್ರೀಮತಿ ದಾಕ್ಷಾಯಿಣಿ ಮಂಡಿ ಅವರ ಮೊದಲ ಕವನ ಸಂಕಲನ ಈ ಸಂಕಲನದಲ್ಲಿ 60 ವಿಭಿನ್ನವಾದ ಕವಿತೆಗಳಿವೆ. ಪ್ರತಿಯೊಂದು ಕವಿತೆಯ ವಸ್ತುವು ವಿಭಿನ್ನತೆಯಿಂದ ಕುಡಿದೆ. ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿಶೇಷವಾಗಿ ಮಹಾಕವಿ ರನ್ನ, ಹೆಣ್ಣಿನ ಕೋರಿಕೆ, ಮನದ ಹಂಬಲ, ಗುರುವಿನ ಮಹಿಮೆ, ಮಹಾತ್ಮ ಗಾಂಧೀಜಿ, ನೂತನ ಪಿಂಚಣಿ, ದೇಶ ರಕ್ಷಕ, ನಿಸರ್ಗ ರಮ್ಯತೆ, ಮತದಾನ, ಗೆಳೆತನದ ಮಾಧುರ್ಯ, ಕೃಷಿ, ಭ್ರಷ್ಟಾಚಾರ, ವೈಯಕ್ತಿಕ ಹೋರಾಟದ … Read more

ಅಂತರ್ಜಾಲ ಪತ್ರಿಕೆ ನಡೆಸುವವರ ಕಷ್ಟಸುಖಗಳು: ನಟರಾಜು ಎಸ್.‌ ಎಂ.

ಪಂಜುವಿಗೆ ಎಂಟು ವರ್ಷಗಳು ತುಂಬಿ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿತು. ಇಷ್ಟು ಸುದೀರ್ಘ ಕಾಲ ಕನ್ನಡದಲ್ಲಿ ನೆಲೆ ನಿಂತ ಅಂತರ್ಜಾಲ ಪತ್ರಿಕೆಗಳು ಬೆರಳೆಣಿಕೆಯಷ್ಟು ಮಾತ್ರ.. ಒಮ್ಮೊಮ್ಮೆ ಅಂತರ್ಜಾಲ ಪತ್ರಿಕೆಗಳನ್ನು ನಡೆಸೋದು ಒಂದು ರೀತಿಯಲ್ಲಿ ಸುಲಭ ಮತ್ತೊಂದು ರೀತಿಯಲ್ಲಿ ಬಲು ಕಠಿಣ. ಸುಲಭ ಯಾಕೆಂದರೆ ಇವತ್ತು ಒಂದಷ್ಟು ದುಡ್ಡು ಖರ್ಚು ಮಾಡಿದರೆ ಚಂದದ ವೆಬ್‌ ಸೈಟ್‌ ಗಳನ್ನು ಒಂದಷ್ಟು ಗಂಟೆಗಳಲ್ಲಿ ತಯಾರು ಮಾಡಿಬಿಡಬಹುದು. ಆದರೆ ವೆಬ್ ತಯಾರು ಮಾಡಿದ ಮೇಲೆ ಅದನ್ನು ನಡೆಸೋದು ಕಠಿಣ. ಯಾಕೆಂದರೆ ಮೊದಲಿಗೆ ವೆಬ್‌ ಸೈಟ್‌ … Read more

ಪಂಜು ಹುಟ್ಟುಹಬ್ಬದ ಫೇಸ್ ಬುಕ್‌ ಚಾಲೆಂಜ್

ಜನವರಿ ೨೧ ಪಂಜು ಮ್ಯಾಗಜಿನ್‌ ಹುಟ್ಟಿದ ದಿನ.ಪಂಜುವಿನ ಒಂಬತ್ತನೇ ಹುಟ್ಟಹಬ್ಬದ ದಿನವನ್ನು ನಾವು ನೀವು ಎಲ್ಲರೂ ಸೇರಿ ಆಚರಿಸೋಣ.ಪಂಜುವಿನ ಕುರಿತು ನಿಮಗೆ ಅನಿಸಿದ್ದನ್ನು ಅಥವಾ ಪಂಜುವಿನಲ್ಲಿ ನೀವು ಓದಿದ/ಬರೆದ ಯಾವುದಾದರೊಂದು ಬರಹದ ಒಂದಷ್ಟು ಸಾಲುಗಳನ್ನು ಓದಿ ಪುಟ್ಟ ವಿಡಿಯೋ ಮಾಡಿಆ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ಬಳಸಿ ಅಪ್‌ ಲೋಡ್‌ ಮಾಡಿಈ ಚಾಲೆಂಜ್‌ ಸ್ವೀಕರಿಸಲು #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ನೊಂದಿಗೆ ನಿಮ್ಮ ಗೆಳೆಯರನ್ನು ಟ್ಯಾಗ್‌ ಮಾಡಿ ನಾಮಿನೇಟ್‌ ಮಾಡಿ.‌ಕನ್ನಡದ ಬರಹಗಳು … Read more

“ಅಲೈದೇವ್ರು” ನಾಟಕ ಪ್ರದರ್ಶನ

ಬೆಂಗಳೂರಿನ ವಿಶ್ವರಂಗ ತಂಡವು ಕೋರೊನಾ ನಂತರದಲ್ಲಿ “ಅಲೈದೇವ್ರು” ಎಂಬ ಮಹತ್ವದ ನಾಟಕವನ್ನು ಆಯ್ದುಕೊಂಡಿದ್ದು, ರವಿವಾರ ಸಂಜೆ ೪.೩೦ಕ್ಕೆ ಮತ್ತು ೭.೩೦ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಎರಡು ಪ್ರದರ್ಶನ ನೀಡುತ್ತಿದೆ. ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ ೩೫ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ … Read more

“ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆ ಸಮಾರಂಭ

ಪ್ರಪಂಚದ ಯಾವುದೇ ಮೂಲೆಯಿಂದ ಕನ್ನಡ ಪುಸ್ತಕಗಳನ್ನು ತಮ್ಮ ಮೊಬೈಲಿನಲ್ಲಿ ಓದುವ, ಕೇಳುವ ಆಯ್ಕೆ ಕಲ್ಪಿಸಿರುವ ಮೈಲ್ಯಾಂಗ್ ಬುಕ್ಸ್ ತನ್ನ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ ಹೊರ ತರುತ್ತಿರುವ ನಾಲ್ಕನೆಯ ಪುಸ್ತಕ “ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆಯನ್ನು ಇದೇ ಜನವರಿ 22, ಶುಕ್ರವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಮೈಲ್ಯಾಂಗ್ ಫೇಸ್ ಬುಕ್ ಪುಟದಲ್ಲಿ ನಡೆಯುವ ಲೈವ್ ಮೂಲಕ ಹಮ್ಮಿಕೊಂಡಿದೆ. ವೃತ್ತಿಯಿಂದ ವೈದ್ಯರಾಗಿರುವ ಡಾ.ಅಜಿತ್ ಹರೀಶಿ ಅವರು ಬರೆದಿರುವ ಮೂಚಿಮ್ಮ ಕಥಾ ಸಂಕಲನ ಇಬುಕ್, ಆಡಿಯೋಬುಕ್ ಹಾಗೂ ಪ್ರಿಂಟ್ ಮೂರೂ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. … Read more

ಪಂಜು ಕಾವ್ಯಧಾರೆ

ಗಝಲ್ ಜಾತಿಸೀಮೆಯ ದಾಟಿ ಹೊಸನಾಡಕಟ್ಟುವೆನು ಜಗದೊಳಗೆ||ಮೌಢ್ಯತೆಯ ಕಡಿದೊಗೆದು ಸತ್ಯವನುತೋರುವೆನು ಜಗದೊಳಗೆ|| ಕಾರ್ಗತ್ತಲ ದಾರಿಯಲಿ ಮುಳ್ಳುಗಂಟಿಎತ್ತರಕೆ ಬೆಳದಿದೆ ನೋಡು|ಬಿರುಕು ಬಿಟ್ಟ ಮನಗಳಲ್ಲಿ ಪ್ರೀತಿಯನುಬಿತ್ತುವೆನು ಜಗದೊಳಗೆ|| ದ್ವೇಷ ಅಸೂಯೆಗಳ ಕಿಡಿಕಾರಿ ಬೆಂಕಿಉಗುಳುತ್ತಿದ್ದಾರೆ ಸುತ್ತಲೂ|ಘಾಸಿಗೊಂಡ ಮೃದುಮನಕೆ ಔಷಧಹಚ್ಚುವೆನು ಜಗದೊಳಗೆ|| ಅನ್ಯಾಯ ಅಕ್ರೋಶಗಳ ಮೆಟ್ಟಿ ನಿಂತುರಣಭೇರಿ ಬಾರಿಸುವೆ|ಜಯದ ಹಾದಿಯನು ವೀಕ್ಷಿಸುತಲಿಸಾಗುವೆನು ಜಗದೊಳಗೆ|| ಅಭಿನವನ ಒಡಲ ಕಿಚ್ಚದು ನಿಗಿನಿಗಿಕೆಂಡವಾಗಿ ಸುಡುತ್ತಿದೆ ||ಕೆಸರು ತುಂಬಿದ ಹೃದಯವನು ಪರಿಶುದ್ದಮಾಡುವೆನು ಜಗದೊಳಗೆ|| ಶಂಕರಾನಂದ ಹೆಬ್ಬಾಳ ಗಜಲ್ ಅನುರಾಗದ ಮೇಘವು ಅವತರಿಸಿದೆ ಮನದಲ್ಲಿಮುತ್ತಿನ ಹನಿಗಳು ಹೆಪ್ಪುಗಟ್ಟಿವೆ ನನ್ನ ಅಧರದಲ್ಲಿ ಗಾಳಿಯಾಗಿ … Read more

“ಜ಼ೀರೋ ಬ್ಯಾಲೆನ್ಸ್- ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ”: ಎಂ.ಜವರಾಜ್

ಕವಿತೆ, ಕವನ, ಕಾವ್ಯ, ಪದ್ಯ, ಕಥನ ಕಾವ್ಯ, ನೀಳ್ಗಾವ್ಯ ಹೀಗೆ ಗುರುತಿಸುವ ವಿವಿಧ ರೂಪದ ಬಾಹ್ಯ ಮತ್ತು ಆಂತರಿಕ ಭಾವದ ರಚನೆ ಒಂದೇ ತರಹದ್ದೆನಿಸುವ ಕನ್ನಡದ ಸಾಂಸ್ಕೃತಿಕ ಆಸ್ಮಿತೆ ಹೆಚ್ವಿಸಿದ ಸಾಹಿತ್ಯ ಪ್ರಕಾರವಿದು. ಕಾಲಗಳುರುತ್ತ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಜನರ ಭಾವನೆಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು. ಧಾರ್ಮಿಕವಾದ ಜಟಿಲ ಸಮಸ್ಯೆಗಳೂ ಸೃಷ್ಟಿಯಾದವು. ಅಸಮಾನ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮನಸ್ಸುಗಳು ಕವಿತೆಗಳನ್ನು ಬರೆದು ರಾಗ ಕಟ್ಟಿ ಕೆಚ್ಚೆದೆಯಲ್ಲಿ ದನಿಯೇರಿಸಿ ಹಾಡಿ ಜನ ಸಮೂಹವನ್ನು ಎಚ್ಚರಿಸಿದವು. … Read more

ಬಾಳಿ ಬದುಕಿದವರು: ಎಸ್.ಗಣೇಶ್, ಮೈಸೂರು.

ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ಮರಣ ಹೊಂದಿದರು, ಕುಟುಂಬದವರೆಲ್ಲಾ ಒಂದು ಕಡೆ ಸೇರಿ, ಮೃತರ ಆತ್ಮ ಶಾಂತಿಗಾಗಿ ಉತ್ತರಕ್ರಿಯೆಗಳನ್ನು ಹೇಗೆ ನೆರವೇರಿಸಬೇಕು? ದಾನಗಳನ್ನು ಏನು ಕೊಡಬೇಕು? ಪ್ರತ್ಯಕ್ಷ ದಾನಗಳನ್ನು ಕೊಡಬೇಕೋ? ಅದರ ವೆಚ್ಚವೆಷ್ಟು? ಎಲ್ಲಿ ಕರ್ಮಗಳನ್ನು ಮಾಡಬೇಕು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿತ್ತು.. ನಾನು ತದೇಕಚಿತ್ತದಿಂದ ಎಲ್ಲವನ್ನು ಗಮನಿಸುತ್ತಿದ್ದೆ, ಗುಂಪಿನಲ್ಲಿನ ಹಿರಿಯರೊಬ್ಬರು ಪ್ರತಿಯೊಂದು ಪ್ರಶ್ನೆಗಳಿಗೂ ಸಲಹೆಗಳನ್ನು ನೀಡುತ್ತಿದ್ದರು, ಅದನ್ನ ಉಳಿದವರು ಅನುಮೋದಿಸುತ್ತಿದ್ದರು.. ಒಟ್ಟಿನಲ್ಲಿ ಆ ಹಿರಿಯರ ಮಾತನ್ನು ಯಾರು ಮರು ಪ್ರಶ್ನಿಸುತ್ತಿರಲಿಲ್ಲ.. ಅವರ ಮಾತೇ ಅಂತಿಮವಾಗುತ್ತಿತ್ತು.. … Read more