ನನ್ನ ಮನವ ತಿಳಿಯಾಗಿಸಿದ ಆ ನವಿಲು: ಹರೀಶ್ ಆರ್ ಅಡವಿ

ನಮ್ಮ ಚಳ್ಳಕೆರೆ(ಚಿತ್ರದುರ್ಗ ಜಿಲ್ಲೆ) ಅರಣ್ಯ ಪ್ರದೇಶವು ಅಂದಾಜು ಒಂದು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ, ಬಯಲುಸೀಮೆಯ ವನ್ಯಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿನ ಅಪರೂಪದ ಅರಣ್ಯ ಪ್ರದೇಶದಲ್ಲಿ ಓಡಾಡುವುದೆಂದರೆ ನನಗೆ ಒಂದು ಖುಷಿಯ ವಿಷಯವಾಗಿದೆ. ಕೆಲವೊಮ್ಮೆ ಕಾನನದ ಒಳಗೆ ಹೋಗಿ ಹೆದರಿದ್ದೂ ಉಂಟು, ಜೋರು ಗಾಳಿ ಬೀಸುವಾಗ ನೀಲಗಿರಿಮರದ ಎಲೆಯ ಶಭ್ಧಕ್ಕೆ ಹೆದರಿ ಓಡಿದ್ದೂ ಉಂಟು, ಅದೆಷ್ಟೋ ಬಾರಿ ನನ್ನ ಹೆಜ್ಜೆಯ ಸಪ್ಪಳಕ್ಕೆ ನಾನೇ ಭಯದಿಂದ ನಡುಗಿದ್ದೇನೆ, ದೂರದಲ್ಲೆಲ್ಲೋ ಕೇಳುವ ಕೋಗಿಲೆ … Read more

ಪಂಜು ಕಾವ್ಯಧಾರೆ

ಅವು ಮತ್ತು ನಾನು ಯಾವ ನೋವುಗಳುಹೆಚ್ಚಾಗಿ ಕಾಡುವವೋ,ಆ ನೋವುಗಳನ್ನಇಚ್ಚೆಯಿಂದ ಅನುಭವಿಸುವ ಭರವಸೆಯಅವುಗಳಿಂದಲೇ ಕಲಿತುಕೊಳ್ಳುವೆ…. ಅವು ಹಟಮಾರಿಯಾದರೆನಾನೂ ಹಟಮಾರಿಯಾಗುವೆಅವು ಬಿಡಲೆನ್ನುವವಾದರೆನಾನೂ ಬರಲೆನ್ನುವವನಾಗುವೆ ಅವು ಹಿಂಡುತ್ತಿರುವಾಗನಾನು ಕಂಡವನುಅದ ಉಂಡವನೂ…ಅವು ಕುಣಿಯುತ್ತಿರುವಾಗನಾನು ಅವಕ್ಕೆ ಅಟ್ಟ ಆದವನು ಅವು ನಾನಿರುವವರೆಗೂ ಮಾತ್ರ-ನನ್ನ ತಿನ್ನುವವುನಾ ಇಲ್ಲವಾದೊಡನೆ ಅವುಗಳ ಸಾವುಅವುಗಳಿಗಾಗಿಯೇ ನಾ ಜೀವಾ ಹಿಡಿದಿರುವಾಗನನಗೆ ಗೊತ್ತು;ಸಾವೆಂಬುದು ಕ್ರೂರಿಯಲ್ಲವೆ?!… ಇರುವಷ್ಟು ದಿನ;ಅವುಗಳಿಗೆ ಉಪಕಾರಿಯಾಗಲಿ ಈ ದೇಹ;ಅವುಗಳಿಗೂ ಬದುಕಿದೆ ತಿಂದು;ತಿಂದರೂ, ಹಿಂಡಿದರೂ ಅವುಗಳದೇಎಲ್ಲಿಂದ ಮೀಟಿದರೂಅನುಮತಿ ಕೊಟ್ಟಿರುವೆ ಇಚ್ಚೆ ಇರಲಿ;ಹಟವಿರಲಿನನಗೂ;ಅವುಗಳಿಗೂ… -ಕಾಸಿಂ ನದಾಫ್ ಭೈರಾಪುರ ನಮ್ಮಮ್ಮನ ಸೊಸೆ ನಾನು ಪ್ರಾಯಕ್ಕೆ … Read more

“The Critic -ವಿಮರ್ಶಕ’ನ ವಿಮರ್ಶೆಯ ದಿಕ್ಕುದೆಸೆಗಳಿಗೆ ಎಸೆದ ಸವಾಲು”: ಎಂ.ಜವರಾಜ್

Act -1978, ನಾತಿಚರಾಮಿ, ಹರಿವು ಚಿತ್ರ ನಿರ್ದೇಶಕ ಮಂನ್ಸೋರೆ ಅವರ ‘The Critic’ ಸದ್ಯ ಈಗ ಸದ್ದು ಮಾಡುತ್ತಿರುವ ಒಂದು ಕಿರುಚಿತ್ರ. ಹಾಗೆ ’19 20 21′ ಮತ್ತು ‘ಅಬ್ವಕ್ಕ’ ಬಹು ನಿರೀಕ್ಷೆಯ ಮುಂದಿನ ಚಿತ್ರಗಳು ಎಂಬ ಸುದ್ದಿ ಇದೆ. ಸಿನಿಮಾದಲ್ಲಿ ಎರಡು ಬಗೆ. ಒಂದು length movie ಇನ್ನೊಂದು Short movie. ಸದ್ಯ Short movie ಗಳದೇ ಕಾರುಬಾರು. ಏಕೆಂದರೆ ವೆಚ್ಚದ ದೃಷ್ಟಿಯಿಂದಲೂ ಮತ್ತು ಪ್ರಯಾಣ ರಹಿತವಾಗಿಯೂ ಒಂದು ನಿಗದಿತ ಸ್ಥಳದಲ್ಲಿ ತಮ್ಮ ಕಲ್ಪನೆಯ ಒಂದಿಡೀ … Read more

ಆಭರಣಗಳು: ಜೆ.ವಿ.ಕಾರ್ಲೊ

ಮೂಲ: ಗೈ ಡಿ ಮೊಪಾಸಾಅನುವಾದ: ಜೆ.ವಿ.ಕಾರ್ಲೊ ಆ ದಿನ ಸಂಜೆ ಕಛೇರಿಯ ಮೇಲ್ವಿಚಾರಕರು ಇರಿಸಿದ್ದ ಔತಣಕೂಟದಲ್ಲಿ ‘ಆ’ ಹುಡುಗಿಯನ್ನು ನೋಡಿದ್ದೇ ಲ್ಯಾಂಟಿನ್ ಅವಳ ಮೋಹಪಾಶದಲ್ಲಿ ಸಿಲುಕಿ ನುಜ್ಜುಗುಜ್ಜಾಗಿಬಿಟ್ಟಿದ್ದ. ಆಕೆ ಕೆಲವೇ ವರ್ಷಗಳ ಹಿಂದೆ ಗತಿಸಿದ್ದ ತೆರಿಗೆ ಅಧಿಕಾರಿಯೊಬ್ಬರ ಮಗಳಾಗಿದ್ದಳು. ಆಗಷ್ಟೇ ಅವಳು ತನ್ನ ತಾಯಿಯೊಂದಿಗೆ ಪ್ಯಾರಿಸಿಗೆ ಬಂದಿಳಿದಿದ್ದಳು. ಅವಳ ತಾಯಿ ಮಗಳಿಗೊಬ್ಬ ಯೋಗ್ಯ ವರನನ್ನು ಹುಡುಕುವ ಉದ್ದೇಶದಿಂದ ಹಲವು ಮಧ್ಯಮ ವರ್ಗದ ಕುಟುಂಬಗಳ ಸಂಪರ್ಕಗಳನ್ನು ಬೆಳೆಸಿಕೊಳ್ಳುತ್ತಾ ಕಾರ್ಯೊನ್ಮುಖಳಾಗಿದ್ದಳು. ಬಡವರಾಗಿದ್ದರೂ ಸುಸಂಸ್ಕøತ ಮನೆತನದವರಾಗಿದ್ದರು. ಹುಡುಗಿಯಂತೂ, ಯಾವನೇ ಹುಡುಗನು ತನ್ನ … Read more

ಹಂಸಭಾವಿಯ ಹಸಿ ಸುಳ್ಳು ..!: ಶರಣಗೌಡ ಬಿ ಪಾಟೀಲ ತಿಳಗೂಳ

ಊರ ಜನಾ ಹಸಿ ಸುಳ್ಳು ಹೇಳತಿದ್ದಾರೆ ನಾನು ಹೇಳುವ ಮಾತು ಖರೇ ಅಂತ ಯಾರೂ ನಂಬತಿಲ್ಲ ಯಾಕಂದ್ರೆ ನಾನೊಬ್ಬ ಹುಚ್ಚ ಅಂತ ಹರಿದ ಅಂಗಿ, ಗೇಣುದ್ದ ಗಡ್ಡ ಅಸ್ತವ್ಯಸ್ತ ಮುಖದ ಹುಚ್ಚನೊಬ್ಬ ಹಂಸ ಬಾವಿ ಕಟ್ಟೆಗೆ ಕುಳಿತು ತನ್ನಷ್ಟಕ್ಕೆ ತಾನೇ ವಟಗುಟ್ಟಿದ. ಜನರ ಮಾತು ಸುಳ್ಳು ಅಂತಾನೆ ನೋಡ್ರೋ ಎಂಥಾ ಹುಚ್ಚನಿವನು ಅಂತ ಆತನ ಮಾತು ಕೇಳಿಸಿಕೊಂಡ ಕೆಲವರು ಗಹಿಗಹಿಸಿ ನಗತೊಡಗಿದರು. ನಗರೋ ನಗರಿ ಯಾರ ಬ್ಯಾಡ ಅಂತಾರೆ ಮುಂದೊಂದಿನ ಸುಳ್ಯಾವದು ಖರೇ ಯಾವುದು ಅಂತ ಸಮಯ … Read more

ಕಣ್ಣೆರಡೂ ಲವಂಗದಂತೆ…….: ಪಿ.ಎಸ್. ಅಮರದೀಪ್.

ಪ್ರೀತಿಯ ಬಿ…… ಅದೆಷ್ಟು ಹೇಳಿದರೂ ‍ನೀನು ನನ್ನನ್ನು ನಂಬುವುದಿಲ್ಲವೆಂದು ಗೊತ್ತು…. ಗೊತ್ತು ಮಾಡಿಸಲೇಬೇಕೆಂಬ ಹಠವೂ ನನಗಿಲ್ಲ. ಅದ್ಯಾವಾಗ ಧಾರವಾಡದ ಮಳೆಯಂತೆ ಇರ್ತೀಯೋ. ಒಣ ಬಿಸಿಲ ಬಳ್ಳಾರಿಯಂತಾಗುತ್ತಿಯೋ…. ತಿಳಿಯುವುದಿಲ್ಲ. ಒಮ್ಮೊಮ್ಮೆಯಂತೂ ಚಾರ್ಮಡಿ ಘಾಟಿನಲ್ಲಿ ಸದಾ ತೊಟ್ಟಿಕ್ಕುವ ಮಳೆಯ ನಡುವೆ ಮುಸುಕಿನ ಮಂಜೋ ಮಂಜು. ಹೆಂಗೇ ನಿನ್ನ ಅರ್ಥ ಮಾಡಿಕೊಳ್ಳೋದು? ಬರೀ ಸಂಜೆ, ಮುಂಜಾನೆ ಸೂರ್ಯಾನ ಫೋಟೋ ತೆಗೆದು ಹಂಚಿಕೊಳ್ಳುತ್ತಿದ್ದೆ ನಾನು. ನೀನು ಬಂದೆ ನೋಡು. ಒಳ್ಳೆಯ ಸೌಂದರ್ಯ ಪ್ರಜ್ಞೆ ಕಾಡಲು ಶುರು ಮಾಡಿದೆ. ಅಷ್ಟು ಫೋಟೋ ಹಾಕಿದರೂ ಒಂದೇ … Read more

ಹೆಣದ ಗಾಡಿ: ಜಯರಾಮಚಾರಿ

ಅಲ್ಲೊಂದು ಸಾವಾಗಿದೆ. ಸತ್ತವನ ದೇಹ ಮನೆಯ ಹೊರಗೆ ಇದೆ, ಸತ್ತವನು ಕೆಲವು ವರ್ಷಗಳಿಂದ ಯಾವ ಕೆಲಸವೂ ಮಾಡದೇ ಕುಡಿಯುತ್ತಾ, ಮನೆಯವರನ್ನು ಪೀಡಿಸುತ್ತಾ, ತನ್ನ ಕುಡಿತದ ಚೇಷ್ಟೇಗಳಿಂದ ಪರರನ್ನು ನಗಿಸುತ್ತ ಬದುಕಿದ್ದಾಗಲೇ ಸತ್ತಿದ್ದ. ಈ ಸಂಜೆ ಮತ್ತೆ ಸತ್ತ. ಸತ್ತವನನ್ನು ಮಂಚದ ಮೇಲೆ ಮಲಗಿಸಲಾಗಿದೆ, ಅವನ ದೇಹವನ್ನು ಹಳೇ ಕಂಬಳಿಯಿಂದ ಮುಚ್ಚಲಾಗಿದೆ, ಆ ಕಂಬಳಿಗೆ ಸುಮಾರು ಆರರಿಂದ ಏಳು ತೂತುಗಳಿವೆ. ಅವನ ದೇಹದ ಕೆಳಗೆ ಮಾಸಲಾದ ಬೆಡ್ ಶೀಟ್ ಅದರ ಕೆಳಗೆ ಉಪಯೋಗಿಸದೇ ಇದ್ದ ಹಳೆಯ ಚಾಪೆಯಿದೆ. ಅವನ … Read more

ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’: ರಾಘವೇಂದ್ರ ಅಡಿಗ ಎಚ್ಚೆನ್

’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕೆಯಷ್ಟೇ ಸುಂದರವಾಗಿದೆ. ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು … Read more

ಆಸೆಗಳು ನೂರಾರು: ಕೃಷ್ಣವೇಣಿ ಕಿದೂರ್.

”ನನ್ನಲ್ಲಿ ಕೇಳದೆ ನೀವು ಅದು ಹ್ಯಾಗೆ ಬರಲು ಹೇಳಿದ್ರಿ? ನನಗೆ ಒಪ್ಪಿಗೆ ಇಲ್ಲ. ಜುಜುಬಿ ಇಂಜನಿಯರು ಆತ. ಬೇಡವೇ ಬೇಡ. ಹೈಲಿ ಕ್ವಾಲಿಫೈಡ್ ಆದವರು ನಿಮ್ಮ ಕಣ್ಣಿಗೆ ಬೀಳುವುದೇ ಇಲ್ವಾ? ಬಿ. ಇ. ಮುಗಿಸಿದವನನ್ನು ನಾನು ಒಪ್ತೇನೆ ಎಂದು ಹೇಗೆ ಅಂದ್ಕೊಂಡ್ರಿ?ಹೋಗಲಿ, ಎಂ. ಟೆಕ್ ಆದ್ರೂ ಒಪ್ಪಬಹುದು. ಡಾಕ್ಟರು, ಅದರಲ್ಲೂ ಎಂ. ಡಿ. ಆದ ಡಾಕ್ಟರ್ಸ್, ಅಮೆರಿಕಾದಲ್ಲೇ ಕೆಲಸ ಮಾಡ್ತಿರುವ ಇಂಜನಿಯರ್ಸ್ ಅಂಥವರ ಸಂಬಂಧ ಬೇಡಾ ಅಂತ ನಾನು ಹೇಳಲ್ಲ. ನಿಮ್ಮ ಹಳೆ ಸ್ನೇಹಿತನ ಮಗ ಬೇಡವೇ … Read more

ಡಾ.ಮಹೇಂದ್ರ ಎಸ್ ತೆಲಗರಹಳ್ಳಿಯವರ ಒಂದು ಬೆಸ್ಟ್‌ ಕವಿತೆ

ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವ ಕನ್ನಡದ ಉತ್ತಮ ಕವಿತೆಗಳನ್ನು ಓದುಗರಿಗೆ ತಲುಪಿಸುವ ಒಂದು ಪ್ರಯತ್ನ ಇದು. ಈ ಪೋಸ್ಟ್‌ ನಲ್ಲಿ ಕವಿತೆ, ಯೂಟ್ಯೂಬ್‌ ನಲ್ಲಿ ಪ್ರಕಟಗೊಂಡಿರುವ ಕವಿತೆಯ ವಾಚನದ ಲಿಂಕ್ ಮತ್ತು ಪುಸ್ತಕ ದೊರೆಯುವ ವಿವರಗಳನ್ನು ನೀಡಲಾಗಿದೆ. ಡಾ. ಮಹೇಂದ್ರ ಎಸ್.‌ ತೆಲಗರಹಳ್ಳಿಯವರ ಈ ಕವಿತೆ ನಿಮಗೆ ಇಷ್ಟವಾದರೆ ಅವರ ಕೃತಿ “ಬೇವರ್ಸಿಯ ಬಯೋಡೇಟಾ”ದ ಪ್ರತಿಗಳಿಗಾಗಿ ಅವರ ಮೊಬೈಲ್‌ ಸಂಖ್ಯೆ: 8431110644 ಅನ್ನು ಸಂಪರ್ಕಿಸಿ. ಪುಸ್ತಕದ ಬೆಲೆ ಕೇವಲ 80/- ರೂಪಾಯಿ ಮಾತ್ರ. ದುಡ್ಡು ಇಲ್ಲ ಅಂದ್ರೂ ಓದೋ … Read more

ನೀನಿಲ್ಲದೇ ಖಾಲಿಯಾಗಿದೆ ಬದುಕು: ಪೂಜಾ ಗುಜರನ್, ಮಂಗಳೂರು.

ಮೊದಲು ನಿನ್ನನ್ನು ಸರಿಯಾಗಿ ಬೈದು ಬಿಡಬೇಕು ಅನ್ನುವಷ್ಟು ಕೋಪ ಉಕ್ಕಿ ಬಂದರೂ ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ. ಅದೆಷ್ಟು ಬೈದರೂ ಅದು ನನ್ನ ಮೂಕವೇದನೆಗಷ್ಟೆ ಸಮಾ.ಈ ಮೌನಕ್ಕೂ ನಿನ್ನದೇ ಗುರುತು. ಅದಕ್ಕೆ ಸುಮ್ಮನಿದ್ದು ಬಿಡುತ್ತೇನೆ. ನಿನ್ನ ನೆನಪುಗಳನ್ನು ಮೂಟೆಕಟ್ಟಿ ಮೂಲೆಗೆಸದರೂ ನೀನು ಕಾಡುವುದನ್ನು ನಿಲ್ಲಿಸುವುದಿಲ್ಲ. ಅದೆಂತಹ ಹಠಮಾರಿ ನಿನ್ನ ನೆನಪುಗಳು. ‌ಕಾಡಿಸಿ ಪೀಡಿಸಿ ಗೊಂದಲವಾಗಿಸುತ್ತದೆ. ನೀನು ಮತ್ತೆ ಬರಲಾರೆ ಅನ್ನುವ ಸತ್ಯವನ್ನು ಯಾವುದೇ ಕಾರಣಕ್ಕೂ ಈ ಮನಸ್ಸು ಒಪ್ಪುತ್ತಿಲ್ಲ. ನಿನ್ನ ತಲುಪುವ ಎಲ್ಲ ಮಾರ್ಗಗಳು ಮುಚ್ಚಿ ಹೋಗಿವೆ. ಆದರೂ … Read more

ಪಂಜುವಿನ ವಿಶೇಷ ಸಂಚಿಕೆಗೆ ಬರಹಗಳ ಆಹ್ವಾನ

ಆತ್ಮೀಯರೇ, ನೋಡ ನೋಡುತ್ತಿದ್ದಂತೆ ಇದೇ ಜನವರಿ ಇಪ್ಪತ್ತೊಂದರಂದು ಪಂಜು ಹತ್ತನೇ ವರ್ಷಕ್ಕೆ ಕಾಲಿಡುತ್ತಿದೆ. ಪಂಜು ದಶಕ ತಲುಪುತ್ತಿರುವ ಸಂಭ್ರಮಕ್ಕೆ ಒಂದು ವಿಶೇಷ ಸಂಚಿಕೆ ಮಾಡದಿದ್ದರೆ ಹೇಗೆ. ಹೀಗೆ ಬಂದು ಹಾಗೆ ಮರೆಯಾಗುವ ನೂರಾರು ವೆಬ್ ತಾಣಗಳ ನಡುವೆಯೂ ಪಂಜುವಿಗೆ ತನ್ನದೇ ಐಡೆಂಟಿಟಿ ಕೊಟ್ಟವರು ನೀವು. ಇವತ್ತಿಗೂ ಯಾರಿಗೂ ಪರ್ಸನಲ್ ಆಗಿ ಕರೆ ಮಾಡಿಯೋ ಮೆಸೇಜ್ ಹಾಕಿಯೋ ಪಂಜುವಿಗಾಗಿ ಬರೆಯಿರಿ ಅಂತ ಕೇಳಿದ್ದು ತುಂಬಾನೆ ಕಡಿಮೆ. ಪಂಜುವಿಗೆ ಬರೆಯಲೇಬೇಕೆಂಬುವವರು ತುಂಬು ಹೃದಯದಿಂದ ಇಲ್ಲಿಯವರೆಗೂ ಬರೆದಿದ್ದಾರೆ. ಇನ್ನು ಮುಂದೆಯೂ ಬರೆಯುತ್ತಾರೆ … Read more

ಪಂಜು ಕಾವ್ಯಧಾರೆ

ಕವಿತೆಯೊಳಗೊಬ್ಬ ಅಪ್ಪ ಮೊನ್ನೆ ಮೊನ್ನೆಯ ತನಕಚೆನ್ನಾಗಿ ನಗು ನಗುತಲೇಮಾತನಾಡುತ್ತಿದ್ದ ಅಪ್ಪಯಾಕೋ ಸಾಯಂಕಾಲಮಾತೇ ನಿಲ್ಲಿಸಿದ…..ನಿಂತುಹೋಗಿರುವದು ಅಪ್ಪನಮಾತುಗಳು ಅಥವಾ ಉಸಿರು ಅನ್ನುವುದುಮಲಗಿದ ಅಪ್ಪನ ಹಾಸಿಗೆಯ ಮುಂದೆಕೂತ ಅಕ್ಕನಿಗೂ ತಂಗಿಗೂ ತಿಳಿಯಲಿಲ್ಲ….ಎರಡೇ ದಿನ ಹೋಗಿ ಬರುವುದಾಗಿಅಪ್ಪನಿಗೆ ಹೇಳಿ ಹೋಗಿ ಮರಳಿ ಬರುವಾಗಅರ್ಧ ದಾರಿಯಲ್ಲೇ ಮುಟ್ಟಿದ ಹೆತ್ತಮಗನಿಗೂ ಗೊತ್ತಾಗಲಿಲ್ಲ…….ಕಾಯಿಲೆ ಗುಣವಾಗಿ ಅಪ್ಪ ಬೇಗನೆಮನೆ ಸೇರುತ್ತಾನೆಂಬ ಆಸೆಯಲ್ಲಿ ಅಮ್ಮ,ಅಮ್ಮನಿಗೆ ಹೇಗೆ ಹೇಳಬೇಕೋಅನ್ನುವುದು ಅಪ್ಪನ ಪ್ರೀತಿಯ ಸೊಸೆಗೂಅರ್ಥವಾಗಲಿಲ್ಲ…….ಅಜ್ಜನ ಬಾಲ ಹಿಡಿದು ಓಡಾಡುವಮೊಮ್ಮಗ ಮತ್ತೆ ಮತ್ತೆ ಕೇಳುತ್ತಾನೆಅಜ್ಜ ಮರಳಿ ಯಾವಾಗ ಬರುತ್ತಾನೆ…?ಮೊನ್ನೆ ಮೊನ್ನೆಯ ತನಕ ನೂರಾರು ಸಲಆ … Read more

ಲೇಖನ ಕಳುಹಿಸಿ

ಸಹೃದಯಿಗಳೇ, “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು … Read more

ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ: ಜಹಾನ್ ಆರಾ ಕೋಳೂರು, ಕುಷ್ಟಗಿ

“ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ “ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್ ನಲ್ಲಿ ಬರುತ್ತಿದ್ದಂತಹ ಬೆಳಗು ಕವಿತೆಗಳು ಇಂದು ಸಂಕಲನವಾಗಿ ‘ವಿಶ್ವಾಸದ ಹೆಜ್ಜೆಗಳು’ ಎಂಬ ಶಿರೋನಾಮೆಯಲ್ಲಿ ಬಿಡುಗಡೆಗೊಂಡಿದೆ. ಅಂತಹ ಸುಂದರ ಕವಿತೆಗಳನ್ನು ಓದುವುದೇ ಒಂದು ಹರ್ಷ. ಹಾಗೂ ಅವುಗಳ ಬಗ್ಗೆ ಹೇಳುವುದು ಅಥವಾ ನಾಲ್ಕು ಜನರ ಮುಂದೆ ತೆರೆದಿಡುವುದು ನಿಜಕ್ಕೂ ಒಂದು ಖುಷಿಯೇ ಹೌದು. ಸೂರ್ಯನ ಹೃದಯಸ್ಪರ್ಶಿ ಬೆಳಗು, ಮಿಹಿರನ … Read more

ಸಾವಿತ್ರಿಬಾಯಿ ಫುಲೆಯವರ ಬದುಕು – ಬರಹ: ತೇಜಾವತಿ ಎಚ್. ಡಿ.

ನಡೆ! ಶಿಕ್ಷಣ ಪಡೆ!ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು!ಪಡೆ ವಿವೇಕ! ಪಡೆ ಸಂಪತ್ತು!ಇದಕಾಗಲಿ ನಿನ್ನಯ ದುಡಿಮೆ ಈ ಸಾಲುಗಳು ಸಾವಿತ್ರಿಬಾಯಿ ಫುಲೆಯವರಲ್ಲಿನ ಶಿಕ್ಷಣದೆಡೆಗಿನ ಒಲವನ್ನು ಸಾರುತ್ತವೆ. ಇವರು ಸ್ವತಂತ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತ್ರವಲ್ಲ. ಶಿಕ್ಷಣ, ಸೇವೆ, ವೈಚಾರಿಕತೆ, ಸ್ತ್ರೀವಾದಿ ಹೋರಾಟಗಾರ್ತಿ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಸಾವಿತ್ರಿ ಬಾಯಿ ಫುಲೆಯವರು ಹುಟ್ಟಿದ್ದು ಮಹಾರಾಷ್ಟ್ರ ಜಿಲ್ಲೆಯ ಖಂಡಾಲ ತಾಲ್ಲೋಕಿನ ನಯಗಾಂವ್ ಎಂಬ ಪುಟ್ಟ ಹಳ್ಳಿಯಲ್ಲಿ. 1831 ಜನವರಿ 3 ರಂದು … Read more

ಹಸಿವಿನಿಂದ ಹೊಟ್ಟೆ ತುಂಬುವವರೆಗೆ ಒಂದು ಕಿರು ನೋಟ: ಸುಮ ಉಮೇಶ್

ಮೊದಲ ತುತ್ತು: ಅನ್ನಪೂರ್ಣೇ ಸದಾಪೂರ್ಣೆ ಹಸಿವು ಎನ್ನುವುದು ಎಷ್ಟು ಘೋರ. ಹೊಟ್ಟೆ ತುಂಬಿದ ನಮಗೆಲ್ಲ ಹಸಿವಿಂದ ಬಳಲುವವರ ಸಂಕಟ ಊಹೆಗೂ ನಿಲುಕದ್ದು. ದಿನಕ್ಕೆ ಮೂರು ನಾಲ್ಕು ಬಾರಿ ತಿಂದರೂ ತೃಪ್ತಿಯಿಲ್ಲದ ಈ ಜೀವಕ್ಕೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡಿ, ಕೊನೆಗೆ ಸಿಕ್ಕ ಅಲ್ಪಾಹಾರವನ್ನೇ ಸಂತೋಷದಿಂದ ತಿಂದು ಈ ದಿನ ಇಷ್ಟಾದರೂ ಸಿಕ್ಕಿತಲ್ಲ ಅನ್ನೋ ತೃಪ್ತಿಯ ಕಲ್ಪನೆ ನಮಗೆ ಇಲ್ಲ. ಅದೊಂದು ಕಾಲವಿತ್ತಂತೆ. ಬೆಳಿಗ್ಗೆ ಶಾಲೆಗೆ ಹೊರಟ ಮಕ್ಕಳು ಜೋಳದ ಮುದ್ದೆಗೆ ಉಪ್ಪಿನಕಾಯಿ ನೆಂಚಿಕೊಂಡು ತಿಂದು ಮತ್ತೆ … Read more