ನಾನಂತೂ ಆ ಕ್ಷಣ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೀನಿ: ಪರಮೇಶ್ವರಪ್ಪ ಕುದರಿ

ಪ್ರೀತಿಯ ವಿಜಯಾ, ನಾನಿಲ್ಲಿ ಕ್ಷೇಮ, ನಿನ್ನ ಕ್ಷೇಮದ ಬಗ್ಗೆ ತಿಳಿಯುವ ಹಂಬಲ. ಹೇಗಿದ್ದಿಯಾ ವಿಜು? ಅಂದು ನೀ ನನ್ನಿಂದ ಅಗಲಿದ ಮೇಲೆ ತುಂಬಾ ಹೊತ್ತು ನಿನ್ನದೇ ಧ್ಯಾನ – ನಿನದೇ ನೆನಪು ! ನನ್ನ ಜೀವನದ ಕೊನೆಯವರೆಗೂ ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯುವ ಪರಮ ಇಚ್ಚೆ ನನಗೆ. ನಮ್ಮಿಬ್ಬರ ಪ್ರೇಮದ ಹಾದಿಗೆ ಅದ್ಯಾರೇ ಅಡ್ಡ ಬಂದರೂ, ನಾನು ಜಯಿಸಿ ನಿನ್ನನ್ನು ಪಡೆದೇ ಪಡೆಯುತ್ತೆನೆ ಎಂಬ ಬಲವಾದ ನಂಬಿಕೆ ನನಗಿದೆ ಚಿನ್ನಾ. ನೀನು ಬಡವಿ ನಾನು ಶ್ರೀಮಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೋರಿಯ ಸುತ್ತ ಸಪ್ತಪದಿ ತುಳಿದಾಗ…: ಶಿವಲೀಲಾ ಹುಣಸಗಿ ಯಲ್ಲಾಪುರ

ಅವಳೊಮ್ಮೆ ನೋಡಿದಾಗ ಕರುಳು ಕಿವುಚಿದ ಅನುಭವ. ದೈವಕ್ಕೊಂದು ಹಿಡಿಶಾಪ ಹಾಕಬೇಕೆನ್ನಿಸಿತು. ಅವನಾದರೋ ಹೇಳ ಹೆಸರಿಲ್ಲದೇ ತರಗಲೆಯಂತೆ ಮಣ್ಣೋಳು ಮಣ್ಣಾಗಿ ಹೋದ. ಗೋರಿ ಮೇಲೊಂದಿಷ್ಟು ಗರಿಕೆ ಹುಲ್ಲು ಬೆಳೆದು ಅವನು ಪುನಃ ಚಿಗುರಿದನೆಂಬ ನಂಬಿಕೆ ಅವಳಲ್ಲಿ. ಪ್ರತಿನಿತ್ಯ ಗೋರಿಗೊಂದು ಹೂ ಇಟ್ಟು ಊದಿನಕಡ್ಡಿ ಹಚ್ಚಿ ಗರಿಕೆ ಹುಲ್ಲು ಕೊಯ್ದಕೊಂಡು ಎರಡು ಮೂರು ಸಲ ಕಣ್ಣಿಗೆ ಒತ್ತಿಕೊಂಡು ಹೀಗೆ ಹುಟ್ಟುವ ಮನಸ್ಸಿದ್ದರೆ ನನ್ಯಾಕೆ ಮದುವೆಯಾದೆ? ದಿಕ್ಕುದಿಸೆಯಿಲ್ಲದೆ ಮರೆಯಾಗಿ ಹೋದಿ ಏಕೆ? ಎಂಬ ಸಂಕಟವನ್ನು ಹೊರ ಚೆಲ್ಲುವ ಅವಳಿಗೆ ಸಂತೈಸುವ ಪರಿವೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರಳಿ ಬಂದ ಪತ್ರ: ಅಶ್ಫಾಕ್ ಪೀರಜಾದೆ

ಇಂತಹದ್ದೊಂದು ತಿರುವು ನನ್ನ ಜೀವನದಲ್ಲಿ ಬರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ತೃಪ್ತಿದಾಯಕ ಅಖಂಡ ಮೂವತ್ತೈದು ವರ್ಷಗಳ ವೈವಾಹಿಕ ಜೀವನದಲ್ಲಿ ಆಕಸ್ಮಿಕವಾಗಿ ಅಲೆಯೊಂದು ಹುಟ್ಟಿ ಬಂದು ಸುಂದರವಾದ ನನ್ನ ಸಂಸಾರದಲ್ಲಿ ಹೀಗೆ ಹುಳಿ ಹಿಂಡಬಹುದು ಎಂದು ಭಾವಿಸಿರಲಿಲ್ಲ. ಬದುಕಿನ ಈ ಮುಸ್ಸಂಜೆಯಲ್ಲಿ ಹೀಗೆ ಅಪರಾಧಿಯಾಗಿ ಅವಳ ಮುಂದೆ ನಿಲ್ಲಬೇಕಾಗುತ್ತೆ ಎಂದು ನನಗೆ ಯಾವತ್ತಿಗೂ ಅನಿಸಿರಲಿಲ್ಲ. ನನಗಿಂತ ವಯಸ್ಸಿನಲ್ಲಿ ಕೇವಲ ಐದು ವರ್ಷ ಚಿಕ್ಕವಳು ಅವಳು. ಅವಳಿಗೆ ಐವತ್ತೈದು ನನಗೆ ಕೇವಲ ಅರವತ್ತು. ಈ ಅರವತ್ತನೇಯ ವಯಸ್ಸಿನ ಇಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಲಿಕೆ v/s ಕುಡಿತ: ಶೈಲಜ ಮಂಚೇನಹಳ್ಳಿ

ಈ ಹಿಂದೆ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಕಲಿಯಲೆಂದು ಸುಮಾರು ೨೫ ವರ್ಷದ ಒಬ್ಬ ವ್ಯಕ್ತಿ ಬಂದ, ಈಗ ಆತನ ಹೆಸರು ನೆನಪಿಗೆ ಬರುತ್ತಿಲ್ಲ, ತನ್ನನ್ನು ಪರಿಚಯಿಸಿಕೊಳ್ಳುವಾಗ ಆತ ನನಗೆ ಒತ್ತಿ ಒತ್ತಿ ಹೇಳಿದುದು ನನಗೆ ಕಂಪ್ಯೂಟರ್ ಕಲಿಯಬೇಕೆಂದು ತುಂಬಾ ಆಸೆ ಇದೆ ಎಂದು. ತಾವು ನನಗೆ ಹೇಳಿಕೊಡುವಿರ ಮೇಡಮ್? ಎಂದು ಕೇಳಿದ. ವಯಸ್ಸಿನ ವಯೋಮಿತಿ ಇಲ್ಲದೆ ಎಲ್ಲಾ ವಯಸ್ಸಿನವರಿಗೂ ನಾನು ಕಂಪ್ಯೂಟರ್ ಕಲಿಸುತ್ತಿದ್ದರಿಂದ ಆತನ ಈ ಕೇಳಿಕೆಯಿಂದ ನನಗೆ ಯಾವುದೇ ವಿಶೇಷವೆನಿಸಲಿಲ್ಲ. ನಾನು ಪ್ರತಿಕ್ರಿಯಿಸುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಬಸಿದ ಕಣ್ಣೀರ ಭಾಷೆಯೊಳಗಿನ ಮತಂಗ ಕುಲದ ಧ್ಯಾನಸ್ಥ ಪರಂಪರೆಯ ಜೀವ ಕಾರುಣ್ಯದ ಮೋಹಕ ನವಿಲುಗಳ ಹೆಜ್ಜೆ ಗುರುತು!”: ಎಂ.ಜವರಾಜ್

ಆರನಕಟ್ಟೆ ರಂಗನಾಥರ ‘ಕಾರುಣ್ಯದ ಮೋಹಕ ನವಿಲುಗಳೇ’ ಕವಿತೆಗಳ ಆಳವು “ಬೋಧಿಸತ್ವ ಮಾತಂಗನು ತನಗೆ ಸಿಕ್ಕ ಭಿಕ್ಷಾನ್ನವನ್ನು ತೆಗೆದುಕೊಂಡು ಒಂದು ಗೋಡೆಯನ್ನಾಶ್ರಯಿಸಿ ಜಗಲಿ ಮೇಲೆ ಕೂತು ತಿನ್ನ ಹತ್ತಿದ್ದನು.. ಆತನ ಗಮನ ಬ್ರಹ್ಮಲೋಕದಲ್ಲಿತ್ತು. ಉಣ್ಣುತ್ತಿದ್ದ ಬೋಧಿಸತ್ವ ಮಾತಂಗನನ್ನು ರಾಜಭಟರು ಖಡ್ಗದಿಂದ ಕತ್ತರಿಸಿ ಹಾಕಿದರು. ಆ ಚಂಡಾಲನು ಸತ್ತ ಕೂಡಲೆ ಬ್ರಹ್ಮಲೋಕದಲ್ಲಿ ಉದಯಿಸಿದನು. ದೇವತೆಗಳು ಕೋಪಗೊಂಡು ಮೇಧರಾಷ್ಟ್ರದ ಮೇಲೆ ಕೆಂಡದ ಮಳೆಗರೆದರು. ಇಡೀ ರಾಷ್ಟ್ರ ಮತ್ತು ಪರಿಷತ್ತು ಸುಟ್ಟು ನಷ್ಟವಾಯಿತು. ಮೆಜ್ಜಾರಣ್ಯ ಮಾತಂಗಾರಣ್ಯ ಎಂದಾಯಿತು. ಬುದ್ದನು ಹೇಳಿದನು ‘ನಾಯಿಯ ಮಾಂಸವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾವನೆಗಳ ರೋಲರ್-ಕೋಸ್ಟರ್: ಅಮೂಲ್ಯ ಭಾರದ್ವಾಜ್‌

“ಅದ್ಯಾಕೋ ನಿದ್ದೆನೆ ಬರ್ತಿಲ್ಲ ಕಣೆ”, ಎಂದು ಶ್ರೀಧರ ಇತ್ತಲಿಂದ ಅತ್ತ ತನ್ನ ಮಗ್ಗಲನ್ನು ಬದಲಿಸಿ ಪಕ್ಕದಲ್ಲಿ ಮಲಗಿದ್ದ ಸೀತಾಳಿಗೆ ಹೇಳಿದ. “ನಂಗೂನು ಅಷ್ಟೆ ರೀ”, ಅವಳು ಅವನ ಕಡೆ ತಿರುಗಿ ಹೇಳಿದಳು. “ಗಂಟೆ ಎಷ್ಟಾಯ್ತು ನೋಡು ಸ್ವಲ್ಪ” ಎಂದು ಕೇಳಿದ. ಸೀತಾ ದೀಪ ಹಚ್ಚಿಕೊಂಡು ಮಂಚದ ಕೆಳಗಿಟ್ಟಿದ್ದ ತನ್ನ ಮೊಬೈಲ್‌ಫೋನನ್ನು ಕೈಗೆತ್ತಿಕೊಂಡು- “ಓಹ್‌ ಆಗ್ಲೇ ೩.೩೦ ಆಗ್ಬಿಟಿದೆ, ಯೋಚ್ನೇಲಿ ಟೈಮಾಗಿದ್ದೇ ಗೊತ್ತಾಗ್ಲಿಲ್ಲ” ಎಂದು ಹುಬ್ಬೇರಿಸಿದಳು. “ಅದೇನ್‌ಯೋಚ್ನೆನೆ ನಿಂಗೆ? ಯಾವಾಗ್ಲು ಏನೋ ತಲೆಗ್‌ ಹಾಕೊತ್ಯಾಪ” ಶ್ರೀಧರನಿಗೆ ವಾಸ್ತವ ಗೊತ್ತಿದ್ದರೂ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಿದ್ಧಲಿಂಗಯ್ಯ ಎಂಬ ಬೇಲಿ ಮೇಗಳ ಹೂವು !: ಅಶ್ಫಾಕ್ ಪೀರಜಾದೆ

ಕವಿಯೆಂದರೆ ಹೇಗಿರಬೇಕು ಎನ್ನುವ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಂತಿಲ್ಲ. ತಥಾಗತಿತ ಸಮಾಜದ ಪ್ರತಿನಿಧಿಯಂದು ನಾವು ಭಾವಿಸುವ ಕವಿ ವಾಸ್ತವದಲ್ಲಿ ದೈವೀ ಗುಣಗಳಿಂದ ಕೂಡಿರಬೇಕು. ಗಾಂಧಿಯಂತೆ ಕ್ಷಮಾಗುಣ ಹೊಂದಿದ ಮಹಾತ್ಮನಾಗಿರಬೇಕು. ಪವಾಡ ಪುರಷನೋ.. ಪ್ರವಾದಿಯೋ ಅಥವಾ ಇದಕ್ಕಿಂತ ಮಿಗಿಲಾಗಿ ಸ್ವತಃ ದೇವರೇ ಆಗಿರಬೇಕೆಂದು ಬಯಸುವವರಿದ್ದಾರೆ. ಇನ್ನೂ ಅವನಿಗೆ ಸಂಸ್ಕೃತಿಕ ಲೋಕದ ಪ್ರತಿನಿಧಿ ಎನ್ನುವ ಹಣೆಪಟ್ಟಿ ಅಂಟಿದ ನಂತರವಂತೂ ಮುಗಿಯಿತು. ಅವನಾಡುವ ಒಂದೊಂದು ಮಾತೂ ತುಂಬ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅವನಿಡುವ ಒಂದೊಂದು ಹೆಜ್ಜೆಗೂ ಸಾವಿರ ಸಲ ವಿಚಾರ ಮಾಡಬೇಕಾಗುತ್ತದೆ. ಅವನು ಸಾವಿರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಪಲ್ಲವಿ ಎರಡು ಹಾಡು ಹಲವು ಚರಣ ಹಂಸಲೇಖರ ಪದ ಬೀಡು: ಜಯರಾಮ ಚಾರಿ

ಕಳೆದ ವಾರ ನಮ್ಮ ಅಡಕಸಬಿ ಅಡ್ಡದಲ್ಲಿ ಹಂಸಲೇಖರ ಬಗ್ಗೆ ಬರೋಬ್ಬರಿ ಆರು ದಿನಗಳ ಕಾಲ ಕೇವಲ ಅವರ ಸಾಹಿತ್ಯ ಕುರಿತು ಅದನ್ನು ಒಡೆದು ನೋಡುವ ಒಂದು ಸಣ್ಣ ಪ್ರಯತ್ನ ಮಾಡಿದ್ವಿ. ಆದರೆ ಹಂಸಲೇಖ ಬರೆದ ಹಾಡುಗಳ ಸಂಖ್ಯೆ ಕಮ್ಮಿಯಿಲ್ಲ 3500 ಕ್ಕೂ ಹೆಚ್ಚು ಹಾಡು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಹಂಸಲೇಖ ತಟ್ಟದ ಪದಗಳಿಲ್ಲ, ಅವರು ನಾದಬ್ರಹ್ಮನು ಹೌದು, ಪದಪರಮಾತ್ಮನು ಹೌದು .ಆರು ದಿವಸ ನಡೆಸಿದರು ಎಷ್ಟೋ ಹಾಡುಗಳು ಎಷ್ಟೋ ಸಾಲುಗಳು ಹಾಗೆ ಉಳಿದುಬಿಟ್ಟವು. ಹಂಸಲೇಖರು ಒಂದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ಲಬ್‌ ಹೌಸ್‌ ನಲ್ಲಿ ಒಂದೊಂದು ಸಂಜೆ ಒಂದೊಂದು ಹಂಸಗೀತೆ

ನಾದಬ್ರಹ್ಮ ಹಂಸಲೇಖರವರ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಆಪ್‌ ಆದ ಕ್ಲಬ್‌ ಹೌಸ್‌ ನಲ್ಲಿ ಅಡ್ಡಕಸಬಿ ಅಡ್ಡ ಎಂಬ ಕ್ಲಬ್‌ ನಲ್ಲಿ ಸಂಜೆ 6.30 ಕ್ಕೆ ಪ್ರತಿದಿನ 23.06.2021 ರವರೆಗೆ ʼಹಂಸಮಯʼ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಈ ಕೆಳಗಿನ ಚಿತ್ರದಲ್ಲಿವೆ. ಕ್ಲಬ್‌ ಹೌಸ್‌ ನಲ್ಲಿ ಅಡ್ಡಕಸಬಿ ಅಡ್ಡ ಸೇರಲು ನಿಮ್ಮ ಮೊಬೈಲ್‌ ನಲ್ಲಿ ಕ್ಲಬ್‌ ಹೌಸ್‌ install ಮಾಡಿಕೊಂಡು ಲಾಗಿನ್‌ ಆದ ಮೇಲೆ ಈ ಲಿಂಕ್‌ ಕ್ಲಿಕ್ ಮಾಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಳೆ ಊರಿನ ಹುಡುಗಿ…: ವೃಶ್ಚಿಕ ಮುನಿ

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.ಗೆ..ಮಳೆ ಊರಿನ ಹುಡುಗಿಗೆರಥ ಬೀದಿಯ ಕೊನೆಯ ತಿರುವುಕೆಂಪು ಹೆಂಚಿನ ಮನೆಫೋಸ್ಟ :ಮಳೆಊರು ಇಂದ..ಅಲೆಮಾರಿಯ ನೆಲೆಯಿಂದಖಾಸಾಕೋಣೆಯ ಬಿಸಿಯುಸಿರುಶಾಯಿಯಲ್ಲಿ. ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ . ನೋಡು… ನಾನು ಎಷ್ಟು ಪೆದ್ದು ಅಂತಾ …! ಸರಿಯಾದ ಒಕ್ಕಣಿಕ್ಕೆಯನ್ನು ಕೊಟ್ಟು ಬರೆಯಲು ಆಗುವುದಿಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಕೆಳತುಟಿಯ ಪಕ್ಕ ಇರುವ ಮಚ್ಚೆಯ ಮೇಲಾಣೆ..: ಡಾ. ಪ್ರೀತಿ. ಕೆ. ಎ

ಬೆಳದಿಂಗಳ ನಗುವಿನ ಹುಡುಗಿಯೇ, ಮೊನ್ನೆ ನಿನ್ನನ್ನು ಭೇಟಿಯಾದ ನಂತರ ನಾನು ನಾನಾಗಿ ಉಳಿದಿಲ್ಲ. ನಿನ್ನ ನೆನಪುಗಳನ್ನು ಎಷ್ಟೇ ಕೊಡವಿಕೊಂಡು ಎದ್ದರೂ ಮತ್ತೆ ಮತ್ತೆ ನಿನ್ನೆಡೆಗೇ ವಾಲುತ್ತಿದ್ದೇನೆ. ಮೊದಲಿಗೆ ಇದು ನಿನ್ನೆಡೆಗಿನ ಆಕರ್ಷಣೆಯಷ್ಟೇ ಅಂದುಕೊಂಡಿದ್ದೆ. ಹೆಚ್ಚೆಂದರೆ ಯಾವುದೋ ಗಳಿಗೆಯಲ್ಲಿ ಹುಟ್ಟಿ ಕೆಲವು ದಿನಗಳವರೆಗೆ ಕಾಡಬಹುದಾದ ಮೋಹವೆಂದುಕೊಂಡೆ. ಉಹುಂ.. ನನ್ನೆಣಿಕೆ ತಪ್ಪಾಯಿತು. ನೀನು ನನ್ನನ್ನು ಆವರಿಸಿಕೊಂಡ ಪರಿಗೆ ಬೆರಗಾಗುತ್ತಿರುವಾಗಲೇ ನಿನ್ನ ನೆನಪುಗಳ ಬಂಧದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ. ಯಾರೋ ಗೀಚಿದ ಕವಿತೆಯ ಸಾಲುಗಳಲ್ಲಿ, ಓದಲು ಕೈಗೆತ್ತಿಕೊಂಡ ಕಥೆಯಲ್ಲಿ, ರಫಿಯ ಸಂಗೀತದ ಅಮಲಿನಲ್ಲಿ… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಪ್ರೀತಿಯೆಂಬ ನಿಷ್ಕಲ್ಮಶ ತೇರಿಗೆ…: ಕಾವ್ಯ ಎಸ್.‌

ನನ್ನ ಆತ್ಮದಂಥವನೇ……. ನಾ ನಿನ್ನೊಳಗಿನ ಅಂತರಾತ್ಮದಲ್ಲಿ ಹುದುಗಲು ಈ ಜನಮದಲ್ಲಿ ಸಾಧ್ಯವಾಗಲಿಲ್ಲ, ಕ್ಷಮಿಸೆಂದು ಕೇಳಲು ಒಳಮನಸ್ಸಿನ ಮುಖವಿಲ್ಲ. ಅರಿವಿರದ ಅವಧಿಯಲ್ಲಿ ನೀ ನನ್ನೊಳಗಿದ್ದಾಗ ನಾ ಅದನ್ನು ಅರಿಯದೇ ಅನಾಥಳಾದೆ. ನೀ ನನ್ನೊಳಗೆ ಅಂತರಂಗ ಬೆಳಗುವ ಆತ್ಮ ಶಕ್ತಿ. ನೀ ಪ್ರತಿಕ್ಷಣದಲ್ಲೂ ಆವಿರ್ಭವಿಸುವ ಬೆಳಕು. ನಿನ್ನ ಬೆಳಕಲ್ಲಿ ಹುಟ್ಟಿದ ಒಂದು ಪುಟ್ಟ ಕಿಡಿ ನಾನು. ನಿನ್ನನ್ನು ನಾ ಅಪ್ಪಿಯಾಗಿ ನನ್ನ ಮನಸ್ಸಿನಲ್ಲಿ ನಿನ್ನಂತೆ ಹಸಿರಿನ ಜಾಗ ಕೊಟ್ಟಿದ್ದೇನೆ. ಇಂದಿನ ಆಗು -ಹೋಗುಗಳ ವಾಸ್ತವಿಕತೆಯ ನೆಲೆಗಟ್ಟನ್ನು ಅರೆಕ್ಷಣ ಮರೆವಿನ ಗುಳಿಗೆಯಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕು ಬರೀ ಇವೇ ಅಲ್ಲ ಎಂದು ನಾ ಬಲ್ಲೆ: ಸಹನಾ ಪ್ರಸಾದ್

ನನ್ನ ನಲ್ಲ, ಪ್ರಿಯತಮ, ಇನಿಯ, ಪ್ರಾಣಸ್ನೇಹಿತ, ಗೆಳೆಯ, ನನ್ನೊಲವೇ, ಜೀವವೇ, ಸ್ಪೂರ್ತಿಯೇ, ಮನದಲ್ಲಿ ಭದ್ರವಾಗಿ ತಳವೂರಿರುವ ಮೂರ್ತಿಯೇ…ಲವ್ ಯೂ…ತುಂಬಾ ತುಂಬಾ… ಉಮ್ಮ್…ನಿನ್ನ ಪ್ರೀತಿಯಲ್ಲಿ ಕೊಚ್ಚಿ ಹೋಗುತ್ತಿರುವ ನಿಮ್ಮ ಮನದನ್ನೆಯ ಪತ್ರ ಬರೀ ಪದಗಳ ಜೋಡನೆಯಲ್ಲ. ಹೃದಯದ ತಂತಿಗಳ ಮಿಡಿತ, ಧಮನಿಗಳಲ್ಲಿ ಸೇರಿ ಹೋಗಿರುವ ನಿಮ್ಮ ಪ್ರೀತಿಯ ತುಡಿತ,ಮನಸ್ಸಿನಲ್ಲಿ ಉಕ್ಕುತ್ತಿರುವ ಭಾವೆನೆಗಳನ್ನು ಪದಪುಂಜದಲ್ಲಿ ಹಿಡಿಯಲು ಮಾಡುತ್ತಿರುವ ಪ್ರಯತ್ನ! ಜೀವನದ ಸೆಲೆ ನೀವು, ಆಮ್ಲಜನಕದ ತರಹ ಅತ್ಯಾವಶ್ಯಕ ನನಗೆ. ನಿಮ್ಮ ಇರುವಿಕೆ ಬಹಳ ಮುಖ್ಯ. ಎದೆಬಡಿತ ನಿಮ್ಮದೇ ರಾಗ, ನಿಮ್ಮದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ: ಕೆ. ಎನ್‌ ಶ್ರೀವಲ್ಲಿ

ನನ್ನೊಲವಿನ ಇನಿಯಾ, ಸವಿನೆನಪೆಂಬ ರೇಷಿಮೆ ದಾರದಿಂದ ಕನಸೆಂಬ ಹೊನ್ನಿನ ಬಟ್ಟೆಯ ನೇಯ್ದಂತೆ ನನ್ನ ಮನದಲಿ ನಿನ್ನದೇ ರೂಪ ಅಚ್ಚೊತ್ತಿದೆ. ಪಿಸುಮಾತಿನ ಸಮಾಗಮದ ಕಲೆಯನ್ನು ನನ್ನಲ್ಲಿ ಅರಳಿಸಿದ್ದು ನೀನಲ್ಲವೆ. ನನ್ನ ಕಡೆಗಣ್ಣಿನ ಮಿಂಚಿನ ನೋಟ, ಚೆಂದುಟಿಯ ಮುಗುಳುನಗೆ, ಕಿರುಬೆರಳ ಸ್ಪರ್ಶ, ನನ್ನ ಮನದ ಭಾವನೆಯನ್ನು ನಿನಗೆ ತಿಳಿಸಿಲ್ಲವೆ. ನನ್ನ ಅನಿಸಿಕೆಗಳು ನಿನಗೇಕೆ ಅರಿವಾಗಲೇ ಇಲ್ಲ. ಮೋಡದ ಮುಸುಕಿನಲಿ ಪೂರ್ಣಚಂದ್ರ ಮರೆಯಾದ ಆ ಬೆಳದಿಂಗಳ ರಾತ್ರಿಯಲಿ, ನಿನ್ನ ಕಣ್ಣೋಟದ ಬೆಳ್ಳಿ ಬೆಳಕಿಗೆ ನಾ ಸೋತು ಕಣ್ಮುಚ್ಚಿದ್ದು ನಿನಗೇಕೆ ಅರಿವಾಗಲೇ ಇಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು

ಈ ವೀಕೆಂಡ್ನಲ್ಲಿ “ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು. ನೀವು ನೋಡಿ ಫೀಡಬ್ಯಾಕ್ ಕೊಟ್ರೆ ನಮ್ಮ ತಂಡಕ್ಕೆ ಖುಷಿ. ಲಾಕ್ಡೌನ್ ಇರದಿದ್ರೆ ಇಷ್ಟೊತ್ತಿಗೆ ನಮ್ಮ ಜನರಂಗದಿಂದ “ಅಲೈದೇವ್ರು” ನಾಟಕ ಹತ್ತಾರು ಪ್ರದರ್ಶನ ಕಾಣುತ್ತಿತ್ತೇನೋ. ಸಾಲಸೋಲ ಮಾಡಿ, ಕೆಲವರು ಹತ್ರ ಇಸ್ಕೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ 35 ಜನ ಹೊಸಬರೊಂದಿಗೆ ನಾಟಕ ಕಟ್ಟಿದ್ದೆವು. ಆದರೆ, ಇನ್ನು ಮುಂದೆ ಪ್ರದರ್ಶನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಈ ನಾಟಕವು ಈಗ ಜೂನ್ 19ರಿಂದ ಶನಿವಾರ ಬೆಳಿಗ್ಗೆ 7 ಗಂಟೆಯಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾ ಕಂಡ ಸಂತೆ: ಮಂಜು ನವೋದಯ

ಶುದ್ದ ನಗರಿಕರಣದಿಂದ ದೈತ್ಯ ನಗರಗಳು ಯಾಂತ್ರಿಕವಾಗಿ ಮುನ್ನೆಡೆಯುವ ಇಂದಿನ ಜೀವನ ಶೈಲಿ ಅದೇಕೋ ನನಗೆ ಹಿಡಿಸಲಾರದಷ್ಟು ಯಾತನೆ ಪಡಿಸುತ್ತೆ. ಅದೇ ಹಳ್ಳಿಗಳ ಗ್ರಾಮೀಣ ಬದುಕು ರೀತಿರಿವಾಜುಗಳು, ರಾಜಕೀಯದ ಒಳಪಟ್ಟುಗಳು, ಅಣ್ಣ ತಮ್ಮರ ವ್ಯಾಜ್ಯ, ಜಾತ್ರೆಯ ಬಾಡೂಟ- ಇಂತಹ ಹಲವಾರು ನಿದರ್ಶನಗಳು ಗ್ರಾಮ್ಯ ಸಮಾಜದ ಜೀವಂತಿಕೆಯನ್ನು ಹಾಗೂ ಬದುಕಿನ ಶ್ರೀಮಂತಿಕೆಯನ್ನು ಹೆಜ್ಜೆ- ಹೆಜ್ಜೆಗೂ ಪ್ರತಿಪಾದಿಸುತ್ತವೆ. ನಮ್ಮ ಊರಿನ ಆಜುಬಾಜಿನ ಸುಮಾರು 30 ಹಳ್ಳಿಗಳ ಜನರು ತಮ್ಮ ಜಾನುವಾರು, ಬೆಳ್ಗೆ ಹಾಗೂ ದೈನಂದಿನ ಅವಶ್ಯಕ ವಸ್ತುಗಳ ಖರೀದಿ ಹಾಗೂ ಬಿಕರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 76 & 77): ಎಂ. ಜವರಾಜ್

-೭೬- ಕಂತಕಟ್ಟ ಗದ್ದಮಾಳಗಕುಂ ಅಂತಿತ್ತು ಕೆರ ಪಾಚಿಕಟ್ಟಿಜೊಂಡು ಬೆಳ್ದುಮಧ್ಯದಲಿ ಒಂದೇಡ್ ತಾವರ ಹೂ ಆ ಹೂವ್ಗಳುಅತ್ತ ಅಳ್ದಾಗು ಅಲ್ಲಇತ್ತ ಮೊಗ್ನಾಗು ಅಲ್ಲಜೋತ್ಗಂಡು ಮ್ಯಾಕ್ಕ ನೋಡ್ತಮ್ಯಾಲ ತಿಂಗ್ಳು ಬೆಳ್ಕು ಬೆಳುಗ್ತಾ.. ಇತ್ತಗಈ ಅಯ್ನೋರು ನನ್ನ ಮೆಟ್ಟಿಈ ಮೆಟ್ಟಿರ ಪಾದ್ವಈ ಭೂಮ್ತಾಯ್ಗ ಕುಟ್ಟಿ ಕುಟ್ಟಿಸುಮ್ನ ಅತ್ತಗು ಇತ್ತಗು ನೋಡ್ತಾ.. ಹಂಗ ನೋಡ್ತಾ ನೋಡ್ತಾಆ ತಿಂಗ್ಳು ಬೆಳುಕ್ಲಿಕೆರ ಮಗ್ಗುಲ್ಲಿ ಅದೇನ ಸದ್ದಾಯ್ತುಆ ಸದ್ದು,ಹೆಜ್ಜ ಸದ್ದೇ ಆದಂಗಿತ್ತು ಈ ಅಯ್ನೋರು ಬೆಚ್ತ ಮ್ಯಾಕೆದ್ರು ಮರದ ಕೊಂಬ ಮ್ಯಾಲಿಂದಬೇರು ಕಂಡಾಗಿ ಜೋತಾಡ್ತಭೂಮ್ತಾಯಿಗ ಅಂಟ್ಗಂಡಿದ್ದಆಲದ ಮರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಚುಟುಕುಗಳು1ಬಿಸಿಲಿನಲ್ಲಿ ಅಲೆದು ಅವನಹಸಿವು ಹೆಚ್ಚಿ ಸುಸ್ತು ಆಗಿಹಸಿರು ಮರದ ನೆರಳಿಗಾಗಿ ತುಂಬ ಅಲೆದನುಮಳೆಯ ಕಾಲದಲ್ಲಿ ಹತ್ತುಗೆಳೆಯರೊಡನೆ ಸೇರಿಕೊಂಡುನಾಳೆಗಾಗಿ ಹಲವು ಸಸಿಯ ನೆಟ್ಟು ಬಂದನು2ಹುಡುಗನೋರ್ವ ಬಿಸಿಲಿನಲ್ಲಿನಡೆದು ಬರಲು ಸುಸ್ತು ಆಗಿಗಿಡದ ನೆರಳಿನಲ್ಲಿ ಕೊಂಚ ಒರಗಿಕೊಂಡನುಮರಳಿ ಮನೆಗೆ ತೆರಳಿ ತಾನು,ಹುರುಪಿನಿಂದ ಗೆಳೆಯರೊಡನೆಅರಳಿ, ಹೊಂಗೆ ಸಸಿಯ ದಾರಿ ಬದಿಗೆ ನೆಟ್ಟನು3ಬಿಸಿಲ ಕಾಲದಲ್ಲಿ ಬುವಿಯಹಸಿರು ಮಾಯವಾಗುತಿರಲುಹೆಸರು ಉಳಿಸುವಂತ ಕೆಲಸಕೆಂದು ಪುಟ್ಟನುಕಟ್ಟೆ ಮೇಲೆ ಹಕ್ಕಿಗಳಿಗೆಬಟ್ಟಲಲ್ಲಿ ನೀರು ಕಾಳುಇಟ್ಟು ತಿನ್ನಲೆಂದು ಒಲುಮೆಯಿಂದ ಕರೆದನು4ಬರವು ಬಿದ್ದು ಬುವಿಯು ಸುಡಲುಮರಗಳೆಲ್ಲ ಒಣಗುತಿರಲುನರಳುತಿಹವು ಜೀವರಾಶಿ ವರುಣನಿಲ್ಲದೆಇಳೆಯ ಮೇಲೆ ಗಿಡವ ನೆಡದೆಮಳೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಚಿತೆಯಾಗದ ಮಾತುಗಳು ಬನ್ನಿ ಮಲಗೋಣ ಯಾರೂ ಇಲ್ಲ ನಮಗೀಗಮಣ್ಣಿನ ಮಾತು ಮನಸಲಿ ಕೂತಿದೆಮಸಣದಲಿ.. ನಾವು ಮಾಡಿದ ಕೆಲಸಗಳಮಾತು-ಕತೆ ಶುರುವಾಗಿದೆಬೆಂಕಿ ಇಡುವ ಮುನ್ನ ನನ್ನ ಸೋಂಕಿನಇತಿಹಾಸವನ್ನೆಲ್ಲ ಎಲ್ಲರೂಊರು ಹೊಡೆಯುತ್ತಿದ್ದಾರೆ. ವಾಸನೆ ಹೆಚ್ಚಾಗಿ ಮೂಗು ಮುಚ್ಚುತ್ತಿದ್ದಾರೆಮುಟ್ಟಲು ಸಮಾಜವನ್ನೆಧಿಕ್ಕರಿಸುತ್ತಿದ್ದಾರೆಅತ್ತು ಕರೆಯಲು ಸಮಯವಿಲ್ಲಚಿತಾಗಾರದ ಬಾಗಿಲಲ್ಲಿಯತಾಸ್ಥಿತಿಯಲ್ಲಿ ಕ್ಯೂ ಹೆಚ್ಚೆ ಆಗಿದೆಸತ್ತವರು ನಾವೆಅವರ ಹೆಸರಲ್ಲಿ ಅವರ ಉಸಿರಲ್ಲಿ. ಅಂಬೆಗಾಲಿಟ್ಟು ನಡೆಯಲುಪ್ರೋತ್ಸಾಹಿಸಿದ ನೆಲದವ್ವನವ ನವ ಜಾತಿಯ ಸೋಂಕನ್ನು ಮಡಿಲುತುಂಬಿಸಿಕೊಳ್ಳುತ್ತಿದ್ದಾಳೆಕರುಳ ಬೇನೆಯು ಇಲ್ಲತೀವ್ರವಾದ ಎದೆಹಾಲಿನ ಕೊರತೆಯು ಇಲ್ಲಬರಿ ಬರಡಾಗಿರುವಗರ್ಭದಲಿ ಸೃಷ್ಠಿಯ ಋತುಸ್ರಾವಸಂಕಟಗಳ ವ್ಯರ್ಥ ಹರಿವು. ನಿನ್ನ ನನ್ನ ಭೇಟಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪರಿಸ್ಥಿತಿಯ ಕೈಗೊಂಬೆಯಾದಾಗ ಬದುಕು ಅಸಹನೀಯವಾಗುತ್ತದೆ”: ಪೂಜಾ ಗುಜರನ್ ಮಂಗಳೂರು.

ಇದೊಂದು ಸಂಕಷ್ಟದ ಕಾಲ. ಸಾಲು ಸಾಲು ಸೋಲುಗಳು ಕಣ್ಣೆದುರೆ ನಿಂತಿದೆ. ಎದ್ದೇಳಬೇಕು ಅಂದಾಗಲೆಲ್ಲ  ಈ ಕಣ್ಣಿಗೆ ಕಾಣದ ಸೂಕ್ಷ್ಮಾಣು ಕಣ ಮತ್ತೆ ಮತ್ತೆ ಬದುಕನ್ನು ಸೋಲಿಸುತ್ತಿದೆ. ದುಡಿವ ಕೈಗಳಿಗೆ ಯಾರೋ ಬೇಡಿ ತೊಡಿಸಿ ಕುಕ್ಕರುಗಾಲಿನಲ್ಲಿ ಕೂರಿಸಿದಂತೆ. ಏನೀದು ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸನ್ನು ದಾಳಿ ಮಾಡಿ ಬಿಡುತ್ತದೆ. ವಿಪರ್ಯಾಸವೆಂದರೆ ನಾವು ಎಲ್ಲದಕ್ಕೂ ಒಂದೇ ಕಾರಣವನ್ನು ಕೊಟ್ಟು ಅದನ್ನೇ ದೂಷಿಸುತ್ತೇವೆ. ಇವತ್ತು ಹೀಗೆ ಆಗಲು ಆ ಒಂದು ರೋಗವೇ ಕಾರಣ ಅನ್ನುವ ಮಾತು ಎಲ್ಲರಲ್ಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ