ಕನ್ನ: ಅನಿತಾ ನರೇಶ್ ಮಂಚಿ

ಇದೊಂದು ವಿದ್ಯೆ ಮನುಷ್ಯರು ಸ್ವತಃ ಕಲಿತದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಹೆಚ್ಚಾಗಿ ಇಂತಹ ಕೆಲಸಗಳ ಕ್ರೆಡಿಟ್ಟನ್ನು ಇಲಿಗಳೋ, ಹೆಗ್ಗಣಗಳೋ, ಏಡಿಗಳೋ ತೆಗೆದುಕೊಂಡು ಮನುಷ್ಯರ ಗುರುಗಳು ನಾವೇ ಎಂದು ಫೋಸ್ ಕೊಡುತ್ತವೆ. ಅಂತಹ ಅತ್ಯುತ್ತಮ ವಿದ್ಯೆ  ಯಾವುದೆಂದರೆ ’ಕನ್ನ ಹಾಕುವುದು ಅಥವಾ ಕೊರೆಯುವುದು’… ಹಾಗೆ ನೋಡಿದರೆ ಯಾವ ವಿದ್ಯೆಯೂ ಮನುಷ್ಯನ ಸ್ವಂತದ್ದಲ್ಲವೇ ಅಲ್ಲ ಬಿಡಿ. ’ಎಲ್ಲವಂ ಬಲ್ಲಿದರಿಂದ ಕೇಳಿ, ನೋಡಿ, ಮಾಡಿ’ಯೇ ಕಲಿತದ್ದು. ಆದರೆ ಆ ವಿದ್ಯೆಗಳಲ್ಲಿ ಮನುಷ್ಯ ಎಷ್ಟು ಪಳಗಿಬಿಡುತ್ತಾನೆ ಎಂದರೆ ಕಲಿಸಿದ ಗುರುವೇ ತಲೆಬಾಗಿ ಪ್ರಣಾಮ ಮಾಡುವಷ್ಟು. ಇರಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಂಗಳೂರ ಅತೀ ಹಳೆಯ ದೇಗುಲದ ಬಗ್ಗೆಯೊಂದಿಷ್ಟು: ಪ್ರಶಸ್ತಿ

ಜೀ ಕನ್ನಡ ವಾಹಿನಿಯ ಡಿವೈಡೆಡ್ ಅನ್ನೋ ಕಾರ್ಯಕ್ರಮದಲ್ಲೊಂದು ಪ್ರಶ್ನೆ. ದೊಮ್ಮಲೂರಲ್ಲಿರೋ ಚೊಕ್ಕನಾಥಸ್ವಾಮಿ ದೇವಸ್ಥಾನ ಕಟ್ಟಿಸಿದರು ಯಾರು ? ೧)ಯಲಹಂಕ ನಾಡ ಪ್ರಭುಗಳು ೨)ಚೋಳರು ೩)ಮೈಸೂರ ಅರಸರು. ಅವತ್ತು ನಾನಂದುಕೊಂಡತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೂ ಹೇಳಿದ ಉತ್ರ ಯಲಹಂಕ ನಾಡ ಪ್ರಭುಗಳು. ಬೆಂಗ್ಳೂರಿಗೆ ಚೋಳರೆಲ್ಲಿಂದ ಬರಕ್ಕಾಗುತ್ತೆ ? ಮೈಸೂರರಸರು ಬೆಂಗ್ಳೂರಿಗೆ ಬಂದ್ಯಾಕೆ ದೇವಸ್ಥಾನ ಕಟ್ಟುಸ್ತಾರೆನ್ನೋ ಲಾಜಿಕ್ಕು. ಆದ್ರೆ ಅದು ತಪ್ಪು. ! ಚೊಕ್ಕನಾಥಸ್ವಾಮಿ ಅಥವಾ ಚೊಕ್ಕಪೆರುಮಾಳ್ ದೇವಸ್ಥಾನವನ್ನು ಸುಮಾರು ಕ್ರಿ.ಶ ೧೨೦೦ ರ ಸುಮಾರಿಗೆ  ಕಟ್ಟಿಸಿದ್ದು ಚೋಳರಸ ರಾಜರಾಜ ಚೋಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿತೆಗಳು: ಸಿಪಿಲೆ ನಂದಿನಿ, ಸಂತೆಬೆನ್ನೂರು ಫೈಜ್ನಟ್ರಾಜ್, ನವೀನ್ ಮಧುಗಿರಿ, ನಾಗರಾಜ ಎಸ್. ಹಣಗಿ

ಕೆಂಪು ನಕ್ಷತ್ರದ ಹೂ ತೇಲುವ  ಬೆಳ್ಳಿ ಮೋಡಗಳ  ಜೀವಗಳಲಿ ಸಂಗ್ರಾಮ ಕೆಂಪುಮಳೆ ಬಿದ್ದರೆ ತರಗೆಲೆ ತುಂತುರ ಹನಿಯೊಳಗೆ ಬೆಳಕು..! ನಕ್ಷತ್ರದ ಹೂಗಳಲಿ ಸಂಭ್ರಮ ಎದೆಯ ನೋವ ರಕ್ತದೊಳಗೆ ಕಾಡು ಜನರಿಗೆ ಹರ್ಷ ಕೆಂಪು ನಕ್ಷತ್ರದ ಹೂವು ಮಳೆ ಇಬ್ಬನಿಗಳ ರಂಬಿಸುವ  ಅನಂತ  ಆಕಾಶವೇಕೆ ಶೂನ್ಯ? ಪ್ರಭುತ್ವ ಜೀವಗಳಲಿ ಬಿನ್ನತೆ ಏತಕೆ?  ಹಸಿರುಬೇಟೆ ಹೆಸರಲಿ ನಿತ್ಯ ಮಾರಣ ಹೋಮ ತರಗಲೆಯೊಳಗೆ  ಬಲಿಯಾದವರೆಲ್ಲ ಮಳೆಕಾಡ ನೆಲದೆದೆಯ ಒಂದೇ  ರಕ್ತದ ಸಹೋದರರು    ಕಾಡು ಮಲೆಗಳಲಿ ವಿಶಿಷ್ಟತೆಯ ಸೊಗಸು ದಮನಿಯೊಳಗೆ ಲುಪ್ತವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾದ ಕಳ್ಳ ಒಂದು ಸಂಜೆ ಶಿಚಿರಿ ಕೋಜುನ್‌ ಶ್ಲೋಕಗಳನ್ನು ಪಠಿಸುತ್ತಿದ್ದಾಗ ಹರಿತವಾದ ಖಡ್ಗಧಾರೀ ಕಳ್ಳನೊಬ್ಬ ಒಳಕ್ಕೆ ಪ್ರವೇಶಿಸಿ ಹಣ ಅಥವ ಪ್ರಾಣ ಎರಡರಲ್ಲೊಂದು ನೀಡಬೇಕೆಂಬ ಒತ್ತಾಯಪೂರ್ವಕ ಬೇಡಿಕೆ ಮುಂದಿಟ್ಟ. ಶಿಚಿರಿ ಅವನಿಗೆ ಇಂತು ಹೇಳಿದ: “ನನ್ನ ನೆಮ್ಮದಿ ಕೆಡಿಸಬೇಡ. ಆ ಪೆಠಾರಿಯ ಒಳಗೆ ಹಣವಿದೆ, ನೋಡು.” ಆನಂತರ ಅವನು ಪಠನವನ್ನು ಮುಂದಿವರಿಸಿದ. ತುಸು ಸಮಯದ ನಂತರ ಪಠನ ನಿಲ್ಲಿಸಿ ಕರೆದು ಇಂತು ಹೇಳಿದ: “ಅಲ್ಲಿರುವುದೆಲ್ಲವನ್ನೂ ತೆಗೆದುಕೊಳ್ಳ ಬೇಡ. ನಾಳೆ ತೆರಿಗೆ ಕಟ್ಟಲೋಸುಗ ನನಗೆ ಸ್ವಲ್ಪ ಹಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಗಿಲಿನ ತುಂಬ ಮುತ್ತಿನ ಬೀಜ: ಸಚೇತನ

ನೀಲ ಪಟದ ಮೇಲೆ ಚಿತ್ರಗಳು ಸಾಕಷ್ಟಿದ್ದರೂ ಕೆಲವೊಮ್ಮೆ ದಟ್ಟ ವಿಷಾದವೊಂದು ತೆಳ್ಳಗೆ ಆವರಿಸಿರುತ್ತದೆ. ಅಂಕಿಯ ಲೆಕ್ಕಕೆ ಸಿಗದ ಚುಕ್ಕಿಗಳನ್ನೆಲ್ಲ  ಕಪ್ಪು ಮೋಡ ಮುಚ್ಚಿಟ್ಟಿರುತ್ತದೆ. ಆಕಾಶ ಕಪ್ಪಲ್ಲ, ಕಡು ನೀಲ, ಚುಕ್ಕಿ  ಖಾಲಿಯಾಗದ ಕಾಲ.   ಸು ರಂ ಎಕ್ಕುಂಡಿ ಕವನವೊಂದರ ಕೆಲವು ಸಾಲುಗಳು : ಮುಗಿಲಿನ ತುಂಬ ಮುತ್ತಿನ ಬೀಜ  ಬಿತ್ತುವವರೇ ಇಲ್ಲ  ಬಣ್ಣದ ಲೋಕದ ಬೆಳಕಿನ ತೇರ  ಎಳೆಯುವವರೇ ಇಲ್ಲ  ನಂದನವನದ ರೆಕ್ಕೆಯ ಕುದುರೆಯ  ಹತ್ತುವವರೆ ಇಲ್ಲ  ಕಡಲಿನ ಭಗವದ್ಗೀತೆಗೆ ಭಾಷ್ಯವ  ಬರೆಯುವವರೇ ಇಲ್ಲ  ನಮಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇದುವೇ ಜೀವನ: ಪಾರ್ಥಸಾರಥಿ ಎನ್.

ಬೀ ಪ್ರಾಕ್ಟಿಕಲ್ ಮ್ಯಾನ್,  ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,  ಏನಾಯಿತು ?  ತನ್ನ ಹಾಗು ಕೀರ್ತಿಯ ಕನಸುಗಳೆಲ್ಲ ಕರಗಿ ಹೀಗೆ ವಿಕಾರವಾಗುವದೆಂಬ ನಿರೀಕ್ಷೆಯು ಅವನಿಗಿರಲಿಲ್ಲ.  ಅಪ್ಪ ಅಮ್ಮ ನೋಡಿ ತಾನು ಮೆಚ್ಚಿ ಮದುವೆಯಾದ ಪ್ರೀತಿಯ ಪತ್ನಿ ಕೀರ್ತಿ. ಮದುವೆಯಾಗಿ ಆರು ವರ್ಷಗಳ ನಂತರ ತಾನು ತಂದೆಯಾಗುತ್ತಿರುವ ಸಮಾಚಾರ ತಿಳಿದಾಗ ಕುಣಿದಾಡಿಬಿಟ್ಟಿದ್ದ. ಮದುವೆಯಾದ ಮೊದಲು ಮೂರುವರ್ಷ ಮಕ್ಕಳು ಬೇಡವೆಂದು ಮುಂದೆ ಹಾಕಿದ್ದಾಗಿತ್ತು, ನಂತರ ಮೂರು ವರ್ಷ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೮): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಈ ವರದಿಯು ಇಎಸ್‌ಝಡ್೧ರಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡುವುದನ್ನು ನಿರಾಕರಿಸುತ್ತದೆ. ಕರ್ನಾಟಕ ಪವರ್ ಕಾರ್ಪೊರೇಷನ್‌ನವರು ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆಯಾಗಲಿರುವ ಪ್ರದೇಶದ ವ್ಯಾಪ್ತಿಯನ್ನು ೮೦% ಕಡಿಮೆ ಮಾಡುವುದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಗದಹಳ್ಳ ಆಣೆಕಟ್ಟು ಕಟ್ಟುವುದನ್ನು ಕೈ ಬಿಡಲಿದೆ. ಆದಾಗ್ಯೂ ಬೆಟ್ಟದ ಕುಮರಿ ಪ್ರದೇಶವೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಹೀಗೆಯೇ ಅತಿರಪಳ್ಳಿ ಜಲವಿದ್ಯುತ್ ಯೋಜನೆಯ ವ್ಯಾಪ್ತಿಯೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಇದರಿಂದಾಗಿ ವರದಿಯು ಕೇಂದ್ರ ಪರಿಸರ ಇಲಾಖೆಗೆ ಯಾವುದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 66): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ೨೦೧೪ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ ನೀಡಲಾಯಿತು? ೨.    ಕಿಮ್ಸ್ (KIMS)ನ ವಿಸ್ತೃತ ರೂಪವೇನು? ೩.    ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು? ೪.    ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ? ೫.    ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ? ೬.    ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು? ೭.    ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು ಯಾರು? ೮.    ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು? ೯.    ವಿಶ್ವ ಹವಮಾನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭೌತ ವಿಜ್ಞಾನದ ಬೆನ್ನೇರಿ, ನಿಸರ್ಗದಲ್ಲೊಂದು ಸವಾರಿ: ರೋಹಿತ್ ವಿ. ಸಾಗರ್

ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸುವು ಜನಜೀವನಕೆ ಎಂದು ಡಿ.ವಿ.ಜಿಯವರು ’ಮಂಕುತಿಮ್ಮನಕಗ್ಗ’ದಲ್ಲಿ ಹೇಳಿರುವಂತೆ ಯಾವ ಆಚರಣೆ, ಸಂಪ್ರದಾಯ ಮತ್ತು ತಿಳುವಳಿಕೆಗಳು ವಿಜ್ಞಾನದೊಂದಿಗೆ ಬೆಸೆಯುತ್ತವೆಯೋ ಅವುಗಳಿಂದ ಮಾತ್ರ ಮನುಕುಲದ ಉನ್ನತೀಕರಣ ಸಾಧ್ಯ. ಆದರೆ ಈ ವಿಜ್ಞಾನವನ್ನು ಜನರಿಗೆ ತಲುಪಿಸುವುದು ಪ್ರಯಾಸದ ಕೆಲಸ ಏಕೆಂದರೆ ಎಲ್ಲಾ ಜನರಿಗೂ ಇಂಗ್ಲೀಷ್ ಬರುವುದಿಲ್ಲ ; ವಿಜ್ಞಾನದ ಪದಗಳು ಕನ್ನಡದಲ್ಲಿ ಸಿಗುವುದೇ ಇಲ್ಲ ಎನ್ನುವುದು ಕೆಲವು ಜ್ಞಾನಿಗಳ ಆಂಬೋಣ. ಇಂತಹವರ ಬಗ್ಗೆ ಜಗದೀಶ್ಚಂದ್ರ ಬೋಸ್ ಹಿಂದೊಮ್ಮೆ ಹೇಳಿದ್ದರಂತೆ ನಿಮಗೆ ಬಂಗಾಳಿ ಬಾಷೆಯಲ್ಲಿ ವಿಜ್ಞಾನವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪುಗಳ ಮಾತು ಮಧುರ!: ರುಕ್ಮಿಣಿ ನಾಗಣ್ಣನವರ

ಎಷ್ಟು ಹೊತ್ತಾಯಿತು ಬಸ್ಸಿನಲ್ಲಿ ಕುಳಿತು. ಯಾವಾಗ ಬಿಡುತ್ತೀರಿ? ನಮಗಿನ್ನೂ ತುಂಬ ಮುಂದೆ ಹೋಗಬೇಕಿದೆ. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಅಸಮಾಧಾನ ವ್ಯಕ್ತಪಡಿಸುತ್ತ ಕಂಡಕ್ಟರ್ನನ್ನು ದಬಾಯಿಸಿ ಕೇಳುತ್ತಿದ್ದ. ಬೇಗ ಬಿಡಿ ಸರ್ ತುಂಬ ಹೊತ್ತಾಯಿತಲ್ಲ ಎಂದು ಇನ್ನೇನು ನಾನೂ ಹೇಳಬೇಕು ಎನ್ನುವಷ್ಟರಲ್ಲಿ ಅಪ್ಪಯ್ಯನ ಕಾಲು ಬಂತು. ಹೊರಟ್ರ ಅಂತ ಕೇಳುತ್ತಿದ್ದರು. ಹೌದು. ಬಸ್ಸಿನಲ್ಲಿದ್ದೇನೆ. ಅವರಿಗೆ ರಜೆ ಸಿಕ್ಕಿಲ್ವಂತೆ ನಾಳೆ ಬರ್ತಾರೆ ಅಪ್ಪ ಅಂದೆ. ಆಯ್ತು. ಹುಷಾರಾಗಿ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ಕಿಟಕಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಗಲು ರಾತ್ರಿಗಳ ಗೊಂದಲದಲ್ಲಿ…: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ವೆಂಕಣ್ಣ ಯಾರೋ ಒದ್ದೆಬ್ಬಿಸಿದಂತೆ ನಿದ್ದೆಯಿಂದ ಎದ್ದು ಕೂತಿದ್ದ. ಅವನ ನಿದ್ರಾ ಭಂಗಕ್ಕೆ ಕಾರಣವಾಗಿದ್ದು ಗಾಳಿಕುಳಿ ಗೆ ಸಿಕ್ಕು ನಡುಗುತ್ತಿದ್ದ ವಿಮಾನವೋ ಅಥವಾ ಅದರ ಪರಿಣಾಮ ಬಿದ್ದ ಕನಸಿನಿಂದಲೋ ಅವನಿಗೆ ಅರ್ಥವಾಗದಾಯ್ತು. ಆದರೂ ಅವನು  ಕಂಡ ಆ ಕನಸು ಭಲೆ ವಿಚಿತ್ರವಾಗಿತ್ತು. ಅದರಲ್ಲಿ, ಅ ದೊಡ್ಡ ವಿಮಾನದ ತುಂಬಾ ಇವನು ಹಾಗೂ ಜರ್ಮನ್ ವಿಮಾನ ಸಖಿ ಇಬ್ಬರೇ ಇದ್ದರು. ಇವನಿಗೆ ಖುಷಿಯಾಯ್ತಾದರೂ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ತಮ್ಮಿಬ್ಬರ ಬಿಟ್ಟು ಉಳಿದವರೆಲ್ಲಿ ಎಂಬ ಆತಂಕದಲ್ಲಿ, ಎಲ್ರೂ ಎಲ್ಲಿಗೆ ಹೋದ್ರು? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು!: ಎಸ್.ಜಿ.ಶಿವಶಂಕರ್

   "ಹಲೋ ?" ಮಾಮೂಲಿಗಿಂತ ತುಸು ಏರಿದ ವಿಶ್ವನ ದ್ವನಿ ಟೆಲಿಫೋನಿನಲ್ಲಿ ಮೊಳಗಿತು. "ಹೇಗಿತ್ತು ಒಥೆಲೋ ನಾಟಕ" ಹಿಂದಿನ ದಿನ ನಾಟಕ ನೋಡುವುದಾಗಿ ವಿಶ್ವ ಹೇಳಿದ್ದು ನೆನಪಾಗಿ ಕೇಳಿದೆ. "ನಾಟಕದ ಮನೆ ಹಾಳಾಯಿತು! ನನ್ನ ಜೀವನ ನಾಟಕದ ದುರಂತ ದೃಶ್ಯ ನೆನ್ನೆ ನಡೆಯಿತು!" ವಿಶ್ವನ ಧ್ವನಿ ಭಾರವಾಗಿತ್ತು. ಶುದ್ಧ ವೇದಾಂತಿಯ ಮಾತಿನ ಧಾಟಿ ಕಂಡಿತು. ವಿಶ್ವನ ಮಾತಿಗೆ ವಿವರಣೆ ಬೇಕಾಗಿರಲಿಲ್ಲ. ಅವನು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ ಎಂದು ನನಗಾಗಲೇ ತಿಳಿದುಹೋಗಿತ್ತು! ಎರಡು ದಶಕಗಳ ಸ್ನೇಹದಲ್ಲಿ ವಿಶ್ವನ ವಿಶ್ವದರ್ಶನವಾಗಿತ್ತು. ನನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತ್ತೆಯ ಸಂಗೀತ ಕಛೇರಿ (ಆಡಿಯೋ ಕತೆ): ಸುಮನ್ ದೇಸಾಯಿ

ಹೀಂಗೊಂದ ಕಾಡಿನೊಳಗ ಒಂದು ಕತ್ತೆ, ಒಂದು ನರಿ ಇದ್ದುವಂತ. ಅವು ಭಾಳ ಪ್ರಾಣದ ಗೆಳೆಯರಾಗಿದ್ರಂತ. ಯಾವಾಗಿದ್ರು ಜೋಡಿ ಜೋಡಿನ ಇರ್ತಿದ್ದುವಂತ. ಯಾವಾಗ್ಲು ಕೂಡಿನ ಆಟಾ ಆಡತಿದ್ದುವಂತ. ಆಹಾರ ಹುಡಕತಿದ್ದುವಂತ.  ಹಿಂಗಿರಬೇಕಾದ್ರ ಒಂದ ದಿನ ಕತ್ತೆಗೆ ಕಲ್ಲಂಗಡಿ ಹಣ್ಣು ತಿನಬೇಕನಿಸ್ತಂತ. ಅಷ್ಟನಿಸಿದ್ದ ತಡಾ,” ದೊಸ್ತ ಇವತ್ತ ನಂಗ ಕಲ್ಲಂಗಡಿ ಹಣ್ಣು ತಿನಬೇಕನಸೇದ, ನಡಿ ಕಲ್ಲಂಗಡಿ ತೋಟಕ್ಕ ಹೋಗೊಣು” ಅಂತ ನರಿ ಗೆ ಹೇಳ್ತಂತ. ಅದಕ್ಕ ನರಿ, ಆತ ನಡಿ ಹಂಗಂದ್ರ ಅಂತ, ನರಿ ಮತ್ತ ಕತ್ತೆ ಇಬ್ಬರು ಕಲ್ಲಂಗಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎನ್ನರಸಿ, ಚೆನ್ನರಸಿ ಎಲ್ಲಿರುವೆ ? ಹೇಗಿರುವೆ ?: ನಂದೀಶ್ ಟಿ.ಜಿ.

ಕೆಲವು ವ್ಯಕ್ತಿಗಳು ನಮ್ಮ ಪಾಲಿಗೆ  ಎಂದಿಗೂ ನಿಲುಕದ ನಕ್ಷತ್ರವಾಗಿ ಉಳಿದುಬಿಡುತ್ತಾರೆ. ಮೊದಲಿಂದಲೂ ನಮ್ಮಿಂದ ಒಂದು ತೆರನಾದ ಅಂತರ ಕಾಯ್ದುಕೊಂಡು, ನಮ್ಮ ಬೇಕು ಬೇಡಗಳಿಗೆ ಸ್ಪಂದಿಸದೆ ಹಾಗೆಯೇ ಇದ್ದರೆ, ತೀರಾ ಈ ಪರಿ ನೋವು ಕಾಡುತ್ತಿರಲಿಲ್ಲ. ಒಂದು ಹೊತ್ತಲ್ಲಿ ನಮ್ಮಿರುವನ್ನೇ ಮರೆಸುವಷ್ಟು ನಮ್ಮವರಾಗಿ ಎಲ್ಲವು ಹಾಯೇನಿಸುವಂತಿರುವಾಗ ಸಂಬಂಧವನ್ನು ಕಳಚಿಕೊಂಡು  ಎದ್ದು ನಡೆದು ಬಿಡುತ್ತಾರೆ. ಒಂದಿನಿತು ಸುಳಿವು ಕೊಡದೆ, ಒಂದಿಷ್ಟು ನೊಂದುಕೊಳ್ಳದೆ ನಮ್ಮಿಂದ ನಮ್ಮವರು ದೂರ ದೂರಕ್ಕೆ ಹೆಜ್ಜೆ ಹಾಕುವಾಗ ನಮ್ಮೀ ಮನಸು ಅಕ್ಷರಶಃ  ಬೆಂಕಿಗೆ ಮೈಯೊಡ್ಡಿದ ಕಾವಲಿ.  ಮರೆತುಬಿಡಬೇಕು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪ್ರತಿಯೊಂದು ಕ್ಷಣವೂ ಝೆನ್‌ ಝೆನ್‌ ವಿದ್ಯಾರ್ಥಿಗಳು ತಾವು ಇತರರಿಗೆ ಬೋಧಿಸುವ ಮುನ್ನ ತಮ್ಮ ಗುರುಗಳೊಂದಿಗೆ ಕನಿಷ್ಠ ಎರಡು ವರ್ಷ ಕಾಲ ತರಬೇತಿ ಪಡೆಯಬೇಕಿತ್ತು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಬೋಧಕನಾಗಿದ್ದ ಟೆನ್ನೋ ಗುರು ನ್ಯಾನ್‌-ಇನ್ ಅನ್ನು ಭೇಟಿ ಮಾಡಿದ. ಆ ದಿನ ಮಳೆ ಬರುತ್ತಿತ್ತು, ಟೆನ್ನೋ ಮರದ ಚಡಾವುಗಳನ್ನು ಹಾಕಿದ್ದ ಮತ್ತು ಛತ್ರಿಯನ್ನೂ ಒಯ್ದಿದ್ದ. ಕುಶಲ ಪ್ರಶ್ನೆ ಮಾಡಿದ ನಂತರ ನ್ಯಾನ್‌-ಇನ್ ಹೇಳಿದ: “ನೀನು ನಿನ್ನ ಮರದ ಚಡಾವುಗಳನ್ನು ಮುಖಮಂಟಪದಲ್ಲಿ ಬಿಟ್ಟಿರುವೆ ಎಂಬುದಾಗಿ ಭಾವಿಸುತ್ತೇನೆ. ನಿನ್ನ ಛತ್ರಿಯು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಜಯಶ್ರೀ ದೇಶಪಾಂಡೆ, ಶ್ರೀದೇವಿ ಕೆರೆಮನೆ, ರಮೇಶ್ ನೆಲ್ಲಿಸರ

ಪ್ಯಾರಾಡೈಸ್ ಲಾಸ್ಟ್….!                                                               ಜುಳುಜುಳು ಹರಿದ ಮಳೆಯ ತಿಳಿ ನೀರಲ್ಲಿಳಿದ     ಹಳೇ ಪೇಪರಿನ ಹಡಗು, ಆ ದಂಡೆ ಈ ದಂಡೆ ವಾಲಿ ತೇಲಿ ಕೊನೆಗೆ ಹೊಡೆದ ಗೋತ, ಕಳಕೊಂಡ ಹಡಗಿನ ದ:ಖ ಮರೆಸಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನಸುಗಳು ನೆನಪುಳಿಯೋದು ಹೇಗೆ ?: ಪ್ರಶಸ್ತಿ ಪಿ.

ಹಗಲುಗನಸು, ರಾತ್ರಿಯ ಸೊಗಸಾದ ಕನಸು, ಬೆಚ್ಚಿಬೀಳಿಸೋ ಕನಸು, ಬೆಳಗು ಯಾವಾಗಾಗತ್ತೋ ಎಂದು ಕನವರಿಸುವಂತೆ ಮಾಡೋ ಸಾಧನೆಯ ಕನಸು..ಹೀಗೆ ಕನಸಲ್ಲೂ ಎಷ್ಟು ವಿಧ ಅಲ್ವಾ ?  ಆಫೀಸಲ್ಲೇ ಕೂತು ತೂಕಡಿಸಿ ತೂಕಡಿಸಿ ಬೀಳೋ ತಿಮ್ಮನಿಗೆ ಬೀಳಬಹುದಾದ ಹಗಲುಗನಸ ಬಗ್ಗೆಯಲ್ಲ ನಾ ಹೇಳಹೊರಟಿರುವುದು ಈಗ. ರಾತ್ರಿಯ ಸೊಗಸಾದ ಪರಿಸರದಲ್ಲಿ, ಕರ್ಲಾನೋ, ಕಂಬಳಿಯೋ, ಚಾಪೆಯೋ,ಜಡ್ಡಿಯೋ, ಜಮಖಾನವೋ,  ಕೊನೆಗೆ ಬರಿನೆಲದ ಮೇಲೇ ಮಲಗಿ ನಿರ್ದಿಸುತ್ತಿರುವಾಗ ನಮಗೆ ಬೀಳೋ ಸಹಜಗನಸುಗಳ ಬಗ್ಗೆ ನಾ ಹೇಳಹೊರಟಿದ್ದು. ಕನಸೆಂದರೇನು ?  ಈ ಕನಸೆಂಬುದು ನಾವು ನಿತ್ಯಜೀವನದಲ್ಲಿ ಕಂಡುಕೇಳಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೭): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಉದ್ದೇಶಿತ ಜನವಸತಿ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳ ಪ್ರಸ್ತಾವನೆ: ತಮಿಳುನಾಡು: ವಾಲ್‌ಪರಿ, ಕೊಡೈಕೆನಾಲ್ ಮತ್ತು ನೀಲಗಿರಿ ಜಿಲ್ಲೆ ಕೇರಳ: ಮಂಡಕೋಲ್, ಪನತಾಡಿ, ಪೈತಾಲ್‌ಮಾಲ, ಬ್ರಹ್ಮಗಿರಿ-ತಿರುನೇಲಿ, ವಯನಾಡ್, ಬನಸುರ-ಕುಟ್ಟಿಯಾಡಿ, ನೀಲಂಬರ್-ಮೇಪಾಡಿ, ಸೈಲೆಂಟ್‌ವ್ಯಾಲಿ, ಅಮರಂಬಲಂ, ಸಿರುವಾಣಿ, ನೀಲಂಪತೈ, ಅತ್ರಿಪಳ್ಳಿ, ಕಾರ್ಡ್‌ಮಮ್ ಹಿಲ್ಸ್, ಪೆರಿಯಾರ್, ಅಗಸ್ತ್ಯಮಾಲ. ಆರು ರಾಜ್ಯಗಳ ವಿವಿಧ ಜಿಲ್ಲೆಗಳ ತಾಲ್ಲೂಕುವಾರು ಪ್ರಸ್ತಾವಿತ ಸೂಕ್ಷ್ಮಪ್ರದೇಶಗಳ ಪಟ್ಟಿ ರಾಜ್ಯ ಜಿಲ್ಲೆ ತಾಲ್ಲೂಕು ಇಎಸ್‌ಝಡ್1 ತಾಲ್ಲೂಕು ಇಎಸ್‌ಝಡ್2 ತಾಲ್ಲೂಕು ಇಎಸ್‌ಝಡ್3 ಗುಜರಾತ್ 3 1 1 … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಮೊದಲ ಲೇಖನ: ಶೀತಲ್

ಮೊದಲ ಬಾರಿಗೆ ಬ್ಯಾಟ್ ಹಿಡಿದು, ಮೊದಲ  ಬಾಲ್ ನಲ್ಲೇ ಸಿಕ್ಸರ್ ಹೊಡೆದ ಖಿಲಾಡಿಗಳು ಬಹುಶಃ ಯಾರೂ ಇಲ್ಲವೇನೋ, ಹಾಗೆಯೇ ಮೊದಲ ಬಾರಿಗೆ ಪತ್ರಿಕೆಯಲ್ಲೊಂದು ಲೇಖನ ಎಲ್ಲಾ ಸಣ್ಣ-ಪುಟ್ಟ ಬರಹಗಾರರಂತೆ ನನ್ನದೂ ಒಂದು ಕನಸಾಗಿದೆ. ಹೇಗೆ ಸಿಕ್ಸರ್ ಹೊಡೆಯಲು ಆ ಮೊದಲ ಬಾರಿ ಬ್ಯಾಟ್ ಹಿಡಿದ ಖಿಲಾಡಿಗೆ ಆಗಲಿಲ್ಲವೋ ಹಾಗೆಯೇ ನನ್ನ ಲೇಖನವೂ  ಪ್ರಕಟವಾಗಲಿಲ್ಲ … ಸಿಕ್ಸರ್ ಹೊಡೆಯಲಾಗಲಿಲ್ಲ ಎಂದ ಮಾತ್ರಕ್ಕೆ ಪ್ರಯತ್ನವನ್ನು ಬಿಡಲು ಸಾಧ್ಯವೇ? ಖಂಡಿತಾ ಇಲ್ಲ …. ಬರೆಯುತ್ತಲೇ ಇದ್ದೇನೆ ಆದರೆ ಯಾವ ಬಾಲ್ ಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ