ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾತ್ಮ ಪರ್ವತದ ತುದಿಯಲ್ಲಿ ಇರುವ ಪುಟ್ಟ ಮನೆಯಲ್ಲಿ ವಿವೇಕಿಯಾದ ಮಹಾತ್ಮನೊಬ್ಬ ವಾಸಿಸುತ್ತಿದ್ದಾನೆ ಎಂಬ ಸುದ್ದಿ ಗ್ರಾಮಾಂತರ ಪ್ರದೇಶದಲ್ಲಿ ಹರಡಿತು.  ಹಳ್ಳಿಯ ನಿವಾಸಿಯೊಬ್ಬ ಸುದೀರ್ಘವೂ ಕಠಿಣವೂ ಆದ ಪ್ರಯಾಣ ಮಾಡಿ ಅವನನ್ನು ಭೇಟಿಯಾಗಲು ನಿರ್ಧರಿಸಿದ. ಆ ಮನೆಯನ್ನು ಅವನು ತಲುಪಿದಾಗ ಒಳಗಿದ್ದ ವೃದ್ಧ ಸೇವಕನೊಬ್ಬ ಬಾಗಿಲಿನಲ್ಲಿ ತನ್ನನ್ನು ಸ್ವಾಗತಿಸಿದ್ದನ್ನು ಗಮನಿಸಿದ. ಅವನು ಸೇವಕನಿಗೆ ಹೇಳಿದ, “ವಿವೇಕಿಯಾದ ಮಹಾತ್ಮನನ್ನು ನಾನು ನೋಡಬಯಸುತ್ತೇನೆ.” ಸೇವಕ ನಸುನಕ್ಕು ಅವನನ್ನು ಮನೆಯೊಳಕ್ಕೆ ಕರೆದೊಯ್ದ. ಮನೆಯಲ್ಲಿ ಕೋಣೆಯಿಂದ ಕೋಣೆಗೆ ಹೋಗುತ್ತಿರುವಾಗ ಮಹಾತ್ಮನನ್ನು ಸಂಧಿಸುವ ನಿರೀಕ್ಷೆಯಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಣ್ಣಾವ್ರ ನೆನಪುಗಳು: ಹೊ.ರಾ.ಪರಮೇಶ್ ಹೊಡೇನೂರು

       ಇದೇ ಏಪ್ರಿಲ್ 12ಕ್ಕೆ ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರು ವಿಧಿವಶರಾಗಿ ಒಂಭತ್ತು ವರ್ಷಗಳು ಪೂರೈಸಿವೆ.ಭೌತಿಕವಾಗಿ ಇಲ್ಲವಾದರೂ ಜನ ಮಾನಸದಲ್ಲಿ ಅವರು ಸ್ಥಾಪಿಸಿರುವ ಛಾಪು ಚಿರ ಕಾಲ ಉಳಿಯವಂತಾದ್ದು. ಅಣ್ಣಾವ್ರ ಒಂಭತ್ತನೇ ಪುಣ್ಯತಿಥಿ  ಹಾಗೂ ಅವರ ಜನ್ಮ ದಿನ(ಏಪ್ರಿಲ್-24)) ಸಂದರ್ಭದಲ್ಲಿ  ಈ ಲೇಖನ.              ಕನ್ನಡ ಚಿತ್ರರಂಗದ ಅನಭಿಶಕ್ತ ದೊರೆ, ಕಲಾಕೌಸ್ತುಭ, ಕರ್ನಾಟಕ ರತ್ನ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹರಕೆ ತೀರಿತ್ತು…! (ಕೊನೆ ಭಾಗ) : ಸಾವಿತ್ರಿ ವಿ. ಹಟ್ಟಿ

ನಾಗರಾಜ ಗದಗ್‍ಗೆ ಸ್ಥಳಾಂತರವಾದ ಮೇಲೆ ಮೊದಲ ದಿನಗಳಲ್ಲಿ ಮಂಕು ಬಡಿದವನಂತೆ ಕುಳಿತಿರುತ್ತಿದ್ದ. ಕ್ರಮೇಣ ಅವನು ಗೆಲುವಾಗತೊಡಗಿದ. ಮಕ್ಕಳೊಂದಿಗೆ ಬ್ಯಾಂಕ್ ರೋಡ್‍ನಲ್ಲಿರುವ ವಾಸು ಸ್ಟೋರ್‍ನಿಂದ ದೀಪಿಕಾಳಿಗೆ ಬೇಕಾಗುವ ಹೊಲಿಗೆ ಪರಿಕರಗಳನ್ನು ತರುವುದು, ಮಾರ್ಕೆಟ್‍ನಿಂದ ತರಕಾರಿ ತರುವುದು, ಸಾಯಂಕಾಲ ಹೆಂಡತಿ-ಮಕ್ಕಳೊಂದಿಗೆ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಹೋಗಿ ಅಜ್ಜನವರ ದರ್ಶನ ಪಡೆಯುವುದು… ಹೀಗೆ ಹೊಸ ದಿನಚರಿಯೊಂದಿಗೆ ಅವನು ಹೊಂದಾಣಿಕೆಯನ್ನು ಸಾಧಿಸತೊಡಗಿದ್ದ. ದೀಪಿಕಾಳ ಹೊಲಿಗೆ ವಿದ್ಯೆ ತನ್ನ ನಿಜವಾದ ವಿಸ್ತಾರವನ್ನು ವ್ಯಕ್ತಪಡಿಸುವ ಕಾಲ ಅದಾಗಿತ್ತು. ಆಕೆ ಮನೆಯ ಹತ್ತಿರದಲ್ಲೇ ಇರುವ ಪಠೇಲ್ ರೋಡ್‍ನಲ್ಲಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 73): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ೨೦೧೫ ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು? ೨.    ಫೀಫಾ (FIFA) ನ ವಿಸ್ತೃತ ರೂಪ? ೩.    ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು? ೪.    ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ? ೫.    ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ? ೬.    ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು? ೭.    ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ? ೮.    ದಕ್ಷಿಣ ಭಾರತದಿಂದ ಮೊದಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಯಿಮರಿಯ ಇಂಗ್ಲೀಷೂ.. ಕೇಶಣ್ಣನ ಹಲ್ಲು ಸೆಟ್ಟೂ..: ಅನಿತಾ ನರೇಶ್ ಮಂಚಿ

ಮಕ್ಕಳಿಗೆ ಯಾವಾಗಲೂ ಮನುಷ್ಯರಿಗಿಂತ ಪ್ರಾಣಿಗಳೇ ಇಷ್ಟವಾಗುವುದು. ಇನ್ನೂ ನಡೆಯಲು ಬಾರದ ಪುಟ್ಟು ಮಕ್ಕಳನ್ನು ಕೇಳಿ ನೋಡಿ. ’ಮನೆಯಲ್ಲಿ ಆಡಲಿಕ್ಕೆ ಆಟದ ಸಾಮಾನು ಕೊಡ್ತೀನಿ, ತಿನ್ನೋದಿಕ್ಕೆ ತಿಂಡಿ ಕೊಡ್ತೀನಿ’ ಎಂದೆಲ್ಲಾ ಗೋಗರೆದರೂ ಬಾರದಿರುವ ಮಕ್ಕಳು ’ಮನೆಯಲ್ಲಿ ನಾಯಿ ಮರಿ ಇದೆ, ಬೆಕ್ಕಿನ ಮರಿ ಇದೆ, ಪುಟಾಣಿ ಉಂಬೆ ಕರು ಇದೆ ಬರ್ತೀಯಾ’ ಅಂದ ಕೂಡಲೇ ಅಮ್ಮನ ತೆಕ್ಕೆ ಬಿಡಿಸಿಕೊಂಡು ಚಾಚಿರುವ ನಮ್ಮ ಕೈಗೆ ಹಾರುತ್ತವೆ. ಬೇರೆಯವರ ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ನೋಡಿ ಸಂತಸ ಪಡುವುದೇನೋ ಸರಿ. ಆದರೆ ನಮ್ಮಲ್ಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂರ್ಯನ ಸುತ್ತುವ ಗ್ಲೋಬು ಮತ್ತು ನ್ಯೂಟನ್ನಿನ ಸೇಬು: ರೋಹಿತ್ ವಿ. ಸಾಗರ್

ಮೊನ್ನೆ ಹತ್ತಿರದ ಪ್ರಾಥಮಿಕ ಶಾಲೆಯೊಂದರ ಬಳಿ ಹೋಗುತ್ತಿದ್ದೆ, ಮೈದಾನದಲ್ಲಿ ‘ಸೂರ್ಯ’ ಎಂಬ ಫಲಕ ಹಿಡಿದ ಒಬ್ಬ ಹುಡುಗ ನಿಂತಿದ್ದ, ಆ ಶಾಲೆಯ ಮೇಷ್ಟ್ರು ಕೈಯಲ್ಲಿ ಒಂದು ಗ್ಲೋಬು ಹಿಡಿದು ಆ ಹುಡುಗನ ಸುತ್ತಾ ಸುತ್ತುತ್ತಿದ್ದರು ಉಳಿದವರು ಅವರಿಬ್ಬರನ್ನೇ ಬಾಯಿ ಕಳೆದುಕೊಂಡು ನೋಡುತ್ತಾ ನಿಂತಿದ್ದರು ನಾನೂ ಅವರನ್ನು ಸೇರಿಕೊಂಡೆ. ಅವರೇಕೆ ಹಾಗೆ ಮಾಡುತ್ತಿದ್ದಾರೆ ಎಂದು ಆ ಕ್ಷಣ ಅರ್ಥವಾಗಲಿಲ್ಲ, ಆಮೇಲೆ ವಿಷಯ ಹೊಳೆಯಿತು, ಗ್ರಹಗಳ  ಚಲನೆಯ ಬಗ್ಗೆ ಪಾಠ ಮಾಡಲು ಆ ಶಿಕ್ಷಕ ಈ ಚಟುವಟಿಕೆಯನ್ನು ಮಾಡಿಸುತ್ತಿದ್ದರು.  ಈಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಲಿನಕ್ಸ್ install ಮಾಡೋದು ಹೇಗೆ ?: ಪ್ರಶಸ್ತಿ ಪಿ.

ಕಂಪ್ಯೂಟರನ್ನು ಹೆಚ್ಚೆಚ್ಚು ಬಳಸೋರಿಗೆ ಲಿನಕ್ಸೆನ್ನೋದು ಪರಿಚಿತವಾದ್ರೂ ಹೊಸದಾಗಿ ಬಳಸೋರಿಗೆ ಅದ್ರ ಬಗ್ಗೆ ಇಲ್ಲದ ಭಯ ಇರ್ಬೋದು.ಏ ಲಿನಕ್ಸು ಸಿಕ್ಕಾಪಟ್ಟೆ ಕಷ್ಟ ಮಾರಾಯ, ಎಲ್ಲದಕ್ಕೂ ಕಮಾಂಡ್ ಕೊಡ್ತಾ ಕೂರ್ಬೇಕು ಅಂತ ಓಬಿರಾಯನ ಕಾಲದಲ್ಲಿ ಯಾರೋ ಹೇಳಿದ್ದನ್ನೇ ನಂಬಿಕೊಂಡು ಕೂರೋರು ಅದ್ರಲ್ಲಿ ಎಷ್ಟು ಪ್ರತಿಶತ ಸತ್ಯವಿದೆ ಅಂತ ಪರೀಕ್ಷಿಸಲೂ ಹೋಗೋಲ್ಲ. ಕಂಪ್ಯೂಟರ್ ಕೊಳ್ಳುವಾಗ ಕೆಲವೇ ಕೆಲವು ಕಂಪ್ಯೂಟ್ರುಗಳ ಜೊತೆಗೆ ಮಾತ್ರ ಒರಿಜಿನಲ್ ವಿಂಡೋಸ್ ಬರುತ್ತೆ. ಉಳಿದಿದ್ದೆಲ್ಲಾ ಪೈರೇಟೆಡ್ ಅಥವಾ ಕಳ್ಳಮಾಲು ! ಚೈನಾ ಬಜಾರ್ಗೆ ಹೋಗಿ ಒಂದು ಕಳ್ಳಮಾಲಿನ ಶರ್ಟೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹರಕೆ ತೀರಿತ್ತು…! (ಮೊದಲ ಭಾಗ) : ಸಾವಿತ್ರಿ ವಿ. ಹಟ್ಟಿ

ದೀಪಿಕಾ ಮೇಲೆದ್ದು ಕುಳಿತಳು. ಎಷ್ಟೊ ಹೊತ್ತು ನಿದ್ರೆ ಬಾರದೆ ಸೆಖೆ ಸೆಖೆ ಎಂದು ಒದ್ದಾಡುತ್ತಲೆ ಇದ್ದ ಪತಿ ನಾಗರಾಜ ಅದೇ ದನೇ ನಿದ್ರೆ ಹೋಗಿದ್ದ. ಗಡಿಯಾರದ ಕಡೆ ನೋಡಿದಳು. ಆಗಲೆ ಮಧ್ಯರಾತ್ರಿ. ಪಕ್ಕದಲ್ಲಿ ಮಕ್ಕಳು ಲೋಕದ ಯಾವ ಚಿಂತೆಯ ಸೋಂಕೂ ಇಲ್ಲದೆ ಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ನಿದ್ರೆ ಸನಿಹವೂ ಸುಳಿಯುತ್ತಿಲ್ಲ. ಅವಳ ಒಡಲು ಬೆಂಕಿಗೆ ಆಹುತಿಯಾಗಿ ದಗದಗಿಸುತ್ತಿದೆ. ಕಟು ಸತ್ಯ ಸಂಗತಿಯನ್ನು ತಿಳಿದುಕೊಂಡಾಗಲೆ ಎದೆ ಬಿರಿದು ಎರೆಭೂಮಿ ಬಾಯಿ ಬಿಟ್ಟಂತಾಗಿದೆ. ಕಣ್ಣುಗಳಲ್ಲಿ ಆ ಮದ್ಯಾಹ್ನದವರೆಗೂ ನಳನಳಿಸುತ್ತಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಲ್ಲಿ ಮಾವಿಗೆ ಮರಣದಂಡನೆ – ಇಲ್ಲಿ ಕಾಡೆಮ್ಮೆ ಕರುವಿನ ದುರಂತ: ಅಖಿಲೇಶ್ ಚಿಪ್ಪಳಿ

ನೈಸರ್ಗಿಕ ಸಂಪತ್ತನ್ನು ಬರಿದು ಮಾಡಲು ಯಾರೆಲ್ಲಾ, ಏನೆಲ್ಲಾ ದಾರಿಗಳನ್ನು ಹುಡುಕುತ್ತಾರೆ. ಪಶ್ಚಿಮಘಟ್ಟಗಳ ಕಾಡನ್ನು ಬರಿದು ಮಾಡಲಾಗಿದೆ. ಅಳಿದುಳಿದ ಅರಣ್ಯವನ್ನು ನುಂಗಿ ನೊಣೆಯುವ ಹಂತಕ್ಕೆ ಸರ್ಕಾರವೇ ಬಂದು ನಿಂತಿದೆ. ನಮ್ಮ ಘನ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, ನೀಲಗಿರಿ, ಅಕೇಶಿಯಾದ ಕೆಲವು ತಳಿಗಳು, ಅಡಕೆ-ತೆಂಗಿನ ಮರಗಳು, ನಿಂಬೆ-ಪೇರಳೆ ಗಿಡ, ಕಾಫಿ ಗಿಡ, ಹಳದಿ ಬಿದಿರು, ಹೆಬ್ಬೇವು, ಶಮೆಗಳ ಹೀಗೆ ಒಟ್ಟು 26 ಗಿಡ-ಮರಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದರಿಂದ ವಿನಾಯತಿ ನೀಡಲಾಗಿದೆ. ಅಂದರೆ, ಅರಣ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೇ.ಸಿ.ಬಿ!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು.  …ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಸಂತೋಷಕುಮಾರ ಸೋನಾರ, ಲಕ್ಷ್ಮೀಕಾಂತ ಇಟ್ನಾಳ, ನಳಿನಾಕ್ಷಿ ಹೀನಗಾರ್

ಅಪ್ಪ ಬೆಂಕಿ ಉಗುಳುವ ಕಣ್ಣು| ಘರ್ಜಿಸುವ ದನಿ| ಹೃದಯ ಸೂಕ್ಷ್ಮ | ಒಮ್ಮೊಮ್ಮೆ ಉಗ್ರ ಪ್ರತಾಪಿ | ಮಗದೊಮ್ಮೆ ಮಗುವಿನ ಮನಸ್ಸು|  ಅರ್ಥಕ್ಕೆ ನಿಲುಕದಾ ನನ್ನ ಅಪ್ಪ ನೆನಪಾಗುತ್ತಾರೆ !   ಏನೀ ಪ್ರಶ್ನೆಗಳು? ಈ ಹಳೆಯ ಕಾಲದ ಮಂದಿ| ಏನೇನೋ ಕೇಳುವರು ದೊಡ್ಡ ವೈದ್ಯರಿಗೇ ಪ್ರಶ್ನೆ | ಈ ನರ್ಸುಗಳು |  ಬಿಳಿ ಬಟ್ಟೆ ವೈದ್ಯರು ಕಂಡಾಪಟ್ಟೆ ಓದಿದವರು|  ಆತನ ಪ್ರಶ್ನೆಗಳಿಗೆ ಉತ್ತರಿಸಲಾರರು ಅದಕ್ಕೆ ಅಪ್ಪ ನೆನಪಾಗುತ್ತಾರೆ ! ಇನ್ನೂ ಈ ಮಕ್ಕಳು ಮರಿಗಳು? ಚಿಕ್ಕವರಿದ್ದಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾದವ ಯುವ ಸನ್ಯಾಸಿಯೊಬ್ಬ ಜ್ಞಾನೋದಯದ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆಂದು ಗುರುಗಳು ಒಂದು ದಿನ ಘೋಷಿಸಿದರು. ಈ ವಾರ್ತೆ ಸಂಭ್ರಮಕ್ಕೆ ಕಾರಣವಾಯಿತು. ಯುವ ಸನ್ಯಾಸಿಯನ್ನು ನೋಡಲು ಕೆಲವು ಸನ್ಯಾಸಿಗಳು ಹೋದರು. “ನಿನಗೆ ಜ್ಞಾನೋದಯವಾಗಿದೆ ಎಂಬ ಸುದ್ದಿ ಕೇಳಿದೆವು. ಅದು ನಿಜವೇ?” ಕೇಳಿದರು ಸನ್ಯಾಸಿಗಳು. “ಅದು ನಿಜ,” ಉತ್ತರಿಸಿದ ಯುವ ಸಂನ್ಯಾಸಿ. “ಈಗ ನೀನು ಹೇಗಿರುವೆ?” ವಿಚಾರಿಸಿದರು ಸಂನ್ಯಾಸಿಗಳು. “ಎಂದಿನಂತೆ ದುಃಖಾರ್ತ,” ಪ್ರತಿಕ್ರಿಯಿಸಿದ ಯುವ ಸಂನ್ಯಾಸಿ ***** ೨. ಸಭ್ಯಾಚಾರ ಒಂದು ದಿನ ಆ ಪ್ರಾಂತ್ಯದ ಆಡಳಿತದ ಜವಾಬ್ದಾರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಲೇಖನಗಳು: ಕುಮಾರಿ ವರ್ಷಾ

ಪರಿವರ್ತನೆ ಒಂದು ಊರಲ್ಲಿ ಪುಟ್ಟ ಎಂಬ ಹುಡುಗ ಇದ್ದ.ಇವನು ಆ ಊರಿನ ಕಿಲಾಡಿ ಕಿಟ್ಟ ಮುಂಜಾನೆಯಿಂದ ಸಂಜೆಯವರೆಗೆ ಆಟ ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಇವನ ತಂದೆ ತಾಯಿಯೂ ರೈತಾಪಿ ಜನರು.ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮತ್ತೇ ರಾತ್ರಿನೇ ಮನೆಗೆ ಬರುತ್ತಿದ್ದರು. ಹೀಗಾಗಿ ಅವರಿಗೆ ಮಗ ಏನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಿಲ್ಲ. ಪಾಲಕರು ಯಾವಾಗಲೂ ತಮ್ಮ ಮಕ್ಕಳು ಆದರ್ಶ ವ್ಯಕ್ತಿಗಳಾಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ಪುಟ್ಟನ ತಂದೆ ತಾಯಿಯೂ ಸಹ, ತಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಡುವೆ ಸುಳಿವಾತ್ಮ…: ಮಹಾದೇವ ಹಡಪದ

 ಬನದ-ಭಾರತ ಹುಣಿವಿಗೆ ಯಲ್ಲಮ್ಮ ತಾಯಿ ಜಾತ್ರೆ ಜೋರು ನಡಿತದ. ಉಡಿ ತುಂಬಸೋದು, ಮುತ್ತು ಕಟಗೊಂಡವರು ಸೇವಾ ಮಾಡೋದು, ಬೇವಿನ ತಪ್ಪಲದಾಗ ಕುಂತ ತಾಯಿಯನ್ನ ಎರೆಯೋದು, ದೀಡ ನಮಸ್ಕಾರ ಹಾಕೋದು, ಪಡ್ಡಲಗಿ ಹಿಡದು ನೇಮದ ಸಲುವಾಗಿ ನಾಕೈದು ಮನಿ ಜೋಗ ಬೇಡೋದು ಹಿಂಗ ಒಕ್ಕಲ ಮಕ್ಕಳ ಮನಿಯೊಳಗ ಸಡಗರ ಹೊಗೆಯಾಡತಿರತದ. ಜಡೆಬಿಟ್ಟ ಜೋಗಮ್ಮ ಜೋಗಪ್ಪಗಳು ತಿಂಗಳ ಕಾಲ ಬಿಡುವಿಲ್ಲದ ಮುಯ್ಯಿ ಮಾಡತಿರತಾರು. ಬಳಿ ಒಡೆದು ರಂಡೆ ಮಾಡೋದರಿಂದ ಶುರುವಾಗುವ ವಿಧಿವಿಧಾನಗಳು ಸೀರಿ ಉಡಿಸಿ, ಮುತ್ತು ಕಟ್ಟಿ, ಕುಂಕಮ ಇಡೋವರೆಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂರ್ಯನ ಮೇಲೆ ಇರಲಿ ಭಕ್ತಿ, ಕೊಡುತಾನಂತೆ ಪುಗಸಟ್ಟೆ ಸೌರಶಕ್ತಿ: ರೋಹಿತ್ ವಿ. ಸಾಗರ್

ನಿಸರ್ಗದ ಅತೀ ಬುದ್ಧಿವಂತ ಕೂಸು ಎಂದೇ ಕರೆಯಲ್ಪಡುವ ಮಾನವನ ಅತೀ ಬುದ್ಧಿವಂತಿಕೆಯ ಪರಾಕಾಷ್ಟೆ ಆ ನಿಸರ್ಗದ ಬುಡವನ್ನೇ ಅಲುಗಾಡಿಸುವಂತದ್ದು. ಕುತೂಹಲ ಯೋಚನಾ ಸಾಮರ್ಥ್ಯದ ಬಲದಿಂದ  ಮೊದಲು ಬೆಂಕಿಯನ್ನು ಕಂಡುಹಿಡಿದ, ಅದರಿಂದ  ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಎಗ್ಗಿಲ್ಲದೆ ಮಾಡತೊಡಗಿದ. ಬೇಯಿಸಿದ ಆಹಾರ ರುಚಿಯೆನಿಸಿತು; ಬೆಂಕಿ ಉರಿಸಲು ಕಟ್ಟಿಗೆ ಬೇಕು ಕಾಡು ಕಡಿದ, ಬೆಂಕಿಯ ಬೆಳಕು ಬೇಕು ಕಾಡು ಕಡಿದ, ಮರಕ್ಕಿಂತ ಕಲ್ಲಿದ್ದಲು ಉತ್ತಮ ಎಂದು ಅರಿತ, ಗಣಿ ಬೇಕು, ಕಾಡು ಕಡಿದ, ವಿದ್ಯುತ್ ಕಂಡುಹಿಡಿದ, ಅದಕ್ಕೆ ಅಣೆಕಟ್ಟು ಬೇಕು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೋಲಾಪಾನಕ ಉಪಾಖ್ಯಾನ ಸಹಿತ ರಘುವರಚರಿತ ಲಘುವ್ಯಾಖ್ಯಾನವು: ಎಸ್. ಜಿ. ಸೀತಾರಾಮ್

ವಿಧವಿಧ ರಾಮಾಯಣಗಳಿಂದ ಹೆಚ್ಚುತ್ತಿರುವ ಹೊರೆಯಿಂದಾಗಿ, ಭೂಭಾರವನ್ನು ಹೊತ್ತ ಆದಿಶೇಷನು ನುಲಿದಾಡುತ್ತಿದ್ದಾನೆ; ರಾಮಾಯಣ ಸಾಹಿತ್ಯ ಪ್ರದೇಶ ಕಾಲಿಡಲಾಗದಷ್ಟು ನಿಬಿಡವಾಗಿಹೋಗಿದೆ ಎಂಬಂತೆ ಕುಮಾರವ್ಯಾಸನು ಸುಮಾರು ೬೦೦ ವರ್ಷಗಳ ಹಿಂದೆಯೇ ಹೇಳಿದ್ದನೆಂದಮೇಲೆ, ಇಂದು ಆ ಹೊರೆ ಇನ್ನೆಷ್ಟು ಹೆಚ್ಚಿರಬಹುದೆಂದು ಊಹಿಸಬಹುದು. ಆದ್ದರಿಂದಾಗಿ, ಮತ್ತೆ ಅದೇ ಕಥೆಯನ್ನೇ ಇರುಳುದ್ದ ಹೇಳಿ, ಹಗಲು ಹರಿಯುತ್ತಿದ್ದಂತೆ, ರಾಮಣ್ಣ-ರಾವಣ್ಣ ಯೇನ್ ಅಣ್ಣ-ತಮ್ಮಂದ್ರಾ? ಎಂಬ ಆಕಳಿಕೆಯ ಆಲಾಪವನ್ನು ಆಲಿಸುವ ಬದಲು, ಈಗಿನ ರಾಮಜನ್ಮದಿನಾಚರಣೆಗಾಗಿ ಅದೇ ರಘುವರಕಥೆಯ ಕೆಲವೇ ವಿಚಾರಗಳ ಲಘುನೋಟವೊಂದನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಆ ಕಥೆಯ ಕೆಲವು ಪ್ರಮುಖ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಕ ಕನಸ ಬೆನ್ನೇರಿ: ಪ್ರಶಸ್ತಿ ಪಿ.

ಬೀದಿಗೆಲ್ಲಾ ಬೆಳಕೀಯುತ್ತಿದ್ದ ಪಾದರಸ ದೀಪದ ಅಂಚು ಕಪ್ಪುಗಟ್ಟಿತ್ತು. ಕಣ್ಣುರಿಸೋ ಪ್ರಖರ ಬೆಳಕ ಲೆಕ್ಕಿಸದೆ ಅತ್ತಲೇ ದಿಟ್ಟಿಸುವವರಿಗೆ ಆ ಕಪ್ಪೊಂದು ಸಾವರಾಶಿ ಅಂತ ಹೊಳೆಯುತ್ತಿತ್ತು. ಒಳಹೊಕ್ಕಲು ಜಾಗವೇ ಇಲ್ಲವೆಂಬಂತೆ ಭಾಸವಾಗುತ್ತಿದ್ದ ಮರ್ಕ್ಯುರಿ ದೀಪದ ಶಾಖವನ್ನೂ ಲೆಕ್ಕಿಸದೇ ಆ ಹುಳುಗಳು ಅದೇಗೆ ಒಳಹೊಕ್ಕವೋ, ಬೆಳಕ ಜೊತೆಗೇ ಇದ್ದ ಬಿಸಿಗೆ ಸುಟ್ಟು ಸತ್ತವೋ ಮೊದಮೊದಲ ನೋಡುಗನಿಗೆ ಸದಾ ಅಚ್ಚರಿಹುಟ್ಟಿಸುವಂತಿತ್ತು. ಬೆಳಕಿಗೆ ಕಾರಣವ ಹೊತ್ತು ನಿಂತ ಉದ್ದನೆ ಕಂಬಕ್ಕೆ ಕಾಡುತ್ತಿರೋ ಏಕತಾನತೆ, ಎಲ್ಲಾ ಮಲಗಿರುವಾಗ ಎದ್ದಿದ್ದು ಜಗಕೆ ಬೆಳಗ ತೋರೂ ನಿರ್ಲ್ಯಕ್ಷ್ಯಕ್ಕೊಳಗಾಗುತ್ತಿರೋ ಬೇಸರದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ