ಲೈಕು ಕಾಮೆಂಟುಗಳಲ್ಲಿ ಮರೆಯಾದ ಲೈಫು: ಪ್ರಶಸ್ತಿ ಪಿ.

ಮೊನ್ನೆ ವಾಟ್ಸಾಪಲ್ಲೊಂದು ವೀಡಿಯೋ ನೋಡ್ತಿದ್ದ್ರೆ. ಒಬ್ಬ ಸಮುದ್ರದಲ್ಲಿ ಮುಳುಗೋಕೆ ಅಂತ ಕಡಲಮಧ್ಯದಲ್ಲಿ ತಯಾರಾಗಿ ಕೂತಿರ್ತಾನೆ. ಮೀನುಗಳು ಅವನ ಕಡಲ ವಸ್ತ್ರ ತೊಟ್ಟ ಕಾಲಿಗೆ ಮುತ್ತಿಕ್ಕುತಿರುತ್ವೆ. ಆದ್ರೆ ಅವ ತನ್ನ ಸ್ಮಾರ್ಟ್ ಫೋನಲ್ಲಿ ಏನೋ ಮಾಡೋದ್ರಲ್ಲಿ ಬಿಸಿ ! ಇನ್ನೊಬ್ಬ ಟಾಯ್ಲೆಟ್ಟಲ್ಲಿ ತಾನು ಬಂದ ಕೆಲಸವನ್ನೇ ಮರೆತು ಸ್ಮಾರ್ಟ್ ಫೋನಲ್ಲಿ ಮುಳುಗಿ ಅದನ್ನಲ್ಲಿ ಬೀಳಿಸಿಕೊಳ್ತಾನೆ. ಮತ್ತೊಬ್ಬಳು ಆಯಿಲ್ ಮಸಾಜ್ ಮಾಡಿಸ್ಕೊಳ್ಳೋಕೆ ಅಂತ ಬಂದ ಪೇಷಂಟನ್ನೂ ಮರೆತು ತನ್ನ ಸ್ಮಾರ್ಟ್ ಫೋನಲ್ಲಿ ಮುಳುಗಿರ್ತಾಳೆ. ಉದಾಹರಣೆಗಳು ಹೀಗೇ ಮುಂದುವರೆದು ಇಷ್ಟೆಲ್ಲಾ ಹಚ್ಚಿಕೊಳ್ಳುವಿಕೆ(addiction) … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾಪ್ರಭುವಿನ ಮಕ್ಕಳು ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ. ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು. ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು. “ಹೊಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಣ್ಣದ ಸಂಜೆ: ಪ್ರಸಾದ್ ಕೆ.

ಬಾನಿನಲ್ಲಿ ಬಣ್ಣಗಳು ಮಾತಾಡತೊಡಗಿದ್ದವು.  ಹೋಳಿ ಹಬ್ಬದ ಸಂಜೆ. ಅವನು ಒಂದರ ಹಿಂದೊಂದು ಸಿಗರೇಟುಗಳನ್ನು ಸುಡುತ್ತಾ ಸುಮ್ಮನೆ ಸಮುದ್ರವನ್ನು ದಿಟ್ಟಿಸುತ್ತಿದ್ದ. ಮಾತನಾಡುವುದಕ್ಕೇನೂ ಇಲ್ಲವೆಂಬಂತೆ ಅವಳೂ ತುಟಿ ಬಿಚ್ಚಲಿಲ್ಲ. ಹನ್ನೊಂದು ವರ್ಷಗಳ ಸುದೀರ್ಘ ಅವಧಿಯ ನಂತರ ಇಬ್ಬರೂ ಆಕಸ್ಮಿಕವಾಗಿ ಪಣಂಬೂರಿನ ಸಮುದ್ರತಟದಲ್ಲಿ ಎದುರುಬದುರಾಗಿದ್ದರು. ಅವನು ಸರಕಾರಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಅವಳು ನಗರದಲ್ಲಿ ತಳವೂರುತ್ತಿರುವ ದಂತ ವೈದ್ಯೆ. ಅಂದಹಾಗೆ ಇಬ್ಬರೂ ಒಂದಾನೊಂದು ಕಾಲದಲ್ಲಿ ಪ್ರೇಮಿಗಳು.  ಎಷ್ಟು ಚೆನ್ನಾಗಿದ್ದ ಇವ ಥೇಟು ಶಾರೂಖನಂತೆ, ಚಾಕ್ಲೇಟು ಬಾಯ್ ಇಮೇಜ್ ಇದ್ದ ಹುಡುಗ. ಒಣಕಲಾಗಿ ಹೋಗಿದ್ದಾನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭರವಸೆಯ ಬಣ್ಣದ ಬದುಕು: ಸೀಮಾ ಶಾಸ್ತ್ರಿ

ಧೂಳಿನಿಂದ ಹಳೆಯದಾಗಿದ್ದ ಬೀದಿ ದೀಪವು ಅದರ ಕೆಳಗೆ ಕುಳಿತಿದ್ದ ಆ ಯುವ ಗುಂಪಿನ ಮನದಂತೆ ಮಬ್ಬಾಗಿತ್ತು… ಕತ್ತಲೆಯಲ್ಲಿ ಎಲ್ಲವೂ ಅಸ್ಪಷ್ಟ… ಅಲ್ಲಿದ್ದ ಗೆಳೆಯ ಗೆಳತಿಯರ ಗುಂಪು ಮನದಲ್ಲಿದ್ದ ದುಗುಡವನ್ನು ಹಂಚಿಕೊಳ್ಳುತ್ತಿದ್ದರು. ಊರಿನಲ್ಲಿದ್ದ ಸಾಮಾಜಿಕ ಅನಿಷ್ಟವಾದ ಕೋಮು ಜಗಳದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತಿದ್ದರು. "ಶಿವನೂ ದೇವರೇ, ಅಲ್ಲನೂ ದೆವರೇ ಅಲ್ಲವೇ?  ಅವರೇನು ವೈರಿಗಳಲ್ಲವಲ್ಲ… ಆದರೆ ಅವರನ್ನು ಅನುಸರಿಸೋ ಈ ಹುಲುಮಾನವರಲ್ಲಿ ಯಾಕೆ ಈ ರೀತಿ ?" ಸಲ್ಮಾನ್ ಹೇಳಿದ.  " ನನ್ನ ಪ್ರಕಾರ ಹೇಳೊದಾದ್ರೆ… ಯಾರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೧೦): ಅಖಿಲೇಶ್ ಚಿಪ್ಪಳಿ

(ಕೊನೆಯ ಕಂತು) ಈ ಲೇಖನ ಮಾಲೆಯಲ್ಲಿ ಎರಡೂ ವರದಿಯ ಹಲವು ವಿಚಾರಗಳನ್ನು ವಿವರವಾಗಿ ನೋಡಲಾಗಿದೆ. ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರಿಗೆ ವರದಿಯ ಪ್ರಾಮಾಣಿಕ ನೋಟ ಬೇಕಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು, ಹೂಡಿಕೆದಾರರು ಹಾಗೂ ರಾಜಕಾರಣಿಗಳು ಸೇರಿಕೊಂಡು ವರದಿಯನ್ನು ತಿರುಚಿ ಜನರನ್ನು ತಪ್ಪ ದಾರಿಗೆ ಎಳೆಯುತ್ತಿದ್ದಾರೆ. ದೂರದೃಷ್ಟಿಯಿಂದ ಯೋಚಿಸುವುದಾದರೆ, ಮಾಧವ ಗಾಡ್ಗಿಳ್ ವರದಿಯು ಹೆಚ್ಚು ಜನಸ್ನೇಹಿ ಹಾಗೂ ಪರಿಸರಸ್ನೇಹಿಯಾಗಿದೆ. ಮಾಧವ ಗಾಡ್ಗಿಳ್ ವರದಿಗೆ ವ್ಯಾಪಕ ವಿರೋಧ ಎದುರಾಗಿದ್ದರಿಂದ, ಈ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಜನಸ್ನೇಹಿ ಹಾಗೂ ಪರಿಸರಸ್ನೇಹಿಗೊಳಿಸುವ ಅಂಶಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಧಕರ ಶ್ವಾಸ, ಆತ್ಮವಿಶ್ವಾಸ: ಹೊರಾ.ಪರಮೇಶ್ ಹೊಡೇನೂರು

          ವಿದ್ಯಾರ್ಥಿ ಜೀವನದಲ್ಲಿ ಕಲಿಕಾ ಫಲವನ್ನು ಯಶಸ್ವಿಯಾಗಿ ಪಡೆಯಲು ಅಗತ್ಯವಾಗಿ ಬೇಕಾದ ಅಂಶಗಳಲ್ಲಿ ಪ್ರಮುಖವಾದದ್ದು 'ಆತ್ಮವಿಶ್ವಾಸ'. ಎಷ್ಟೇ ಬುದ್ಧಿ ಶಕ್ತಿ, ತಾರ್ಕಿಕ ಸಾಮರ್ಥ್ಯ, ಸೃಜನಶೀಲ ಸ್ವಭಾವ ಹೊಂದಿದ್ದರೂ ಆತ್ಮವಿಶ್ವಾಸ ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. "ಮೇಕೆದಾಟು"ವಿನ ಬಗ್ಗೆ ಗೊತ್ತಲ್ವ. ಹಿಂದೊಮ್ಮೆ ಅಲ್ಲಿ ಮೇಕೆಗಳನ್ನು ಮೇಯಿಸುತ್ತಿರುವಾಗ, ಒಂದು ಮೇಕೆಯು ಕಾಲುವೆಯ ಆಚೆ ಬದಿಯಲ್ಲಿ ಇದ್ದ ಹಸಿರು ಸೊಪ್ಪನ್ನು ತಿನ್ನುವ ಆಸೆ ಉಂಟಾಗಿ, ಅಗಲವಾದ ಆ ಕಾಲುವೆಯನ್ನು ಅಗಾಧವಾದ ಆತ್ಮವಿಶ್ವಾಸದಿಂದ ಒಂದೇ ನೆಗೆತಕ್ಕೆ ಜಿಗಿದು ದಾಟಿ ತನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 68): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ಮೈಸೂರು ಯದು ವಂಶದ ೨೭ನೇ ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು? ೨.    ಇತ್ತೀಚೆಗೆ ೭೫ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ ಕರ್ನಾಟಕದ ಜಿಲ್ಲೆ ಯಾವುದು? ೩.    ಲೇಸರ್ (LASER)ನ ವಿಸ್ತೃತ ರೂಪವೇನು? ೪.    ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? ೫.    ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ಯಾವುದು? ೬.    ಸುಜನ ಇದು ಯಾರ ಕಾವ್ಯ ನಾಮವಾಗಿದೆ? ೭.    ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ ಅಂಗಗಳು ಯಾವುವು? ೮.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿಕ್ಷಣ ಮತ್ತು ಧರ್ಮ: ಅರ್ಪಿತ ಮೇಗರವಳ್ಳಿ

                               ನಾನು ಶಾಲೆಯಲ್ಲಿ ಓದುತ್ತಿದ್ದ ಕಾಲಕ್ಕೆ ಬೆಳಿಗ್ಗೆ ಶಾಲೆಯ ಪ್ರಾರ್ಥನಾ ಸಮಯದಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದ ನ೦ತರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮುಖ್ಯ ಸುದ್ದಿಗಳನ್ನು ಮತ್ತು ಸುಭಾಷಿತವನ್ನು ವಿದ್ಯಾರ್ಥಿಗಳಿ೦ದಲೇ ಓದಿಸುವ ಪದ್ಧತಿಯಿತ್ತು. ಮಧ್ಹ್ಯಾನದ ಊಟದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ದೊಡ್ಡದಾದ ಹಾಲ್‍ನಲ್ಲಿ ಕುಳಿತು ’ಅಸತೋಮ ಸದ್ಗಮಯ…. ’ ಶ್ಲೋಕ ಮತ್ತು ಅದರ ಅರ್ಥವನ್ನು ಹೇಳಿದ ನ೦ತರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವನ ಹೆಸರೇ ಜೇಮ್ಸ್…: ಗುರುಪ್ರಸಾದ್ ಕುರ್ತಕೋಟಿ

(ಇಲ್ಲಿಯವರೆಗೆ) ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ: ರೋಹಿತ್ ವಿ. ಸಾಗರ್

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂ ಗಮಯ ಎಂದು ಶಾಂತಿ ಮಂತ್ರದಲ್ಲಿ ನಮ್ಮ ಹಿರಿಯರು ಬೆಳಕನ್ನು ಸತ್ಯಕ್ಕೆ, ಮನುಷ್ಯ ಜೀವನದ ಅಮೃತತ್ವಕ್ಕೆ ಹೋಲಿಸಿದ್ದಾರೆ. ಈ ಬೆಳಕು ಎಂಬುದು ಎಷ್ಟು ಬೆಲೆಬಾಳುತ್ತದೆ ಎಂದೇನಾದರು ನೀವು ಸರಳವಾಗಿ ತಿಳಿಯಬೇಕೆಂದರೆ, ಒಂದು ಕ್ಷಣ ಅದು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ? ಕತ್ತಲಲ್ಲಿ ನಮ್ಮ ಹಿತ್ತಲಲ್ಲಿ ಓಡಾಡಲೂ ಹಿಂಜರಿಯುತ್ತೇವೆ ನಾವು; ಅಂತಹದ್ದರಲ್ಲಿ ವಿಶ್ವದಲ್ಲೆಲ್ಲೂ ಬೆಳಕೇ ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನು ಊಹಿಸಲು ಅಥವಾ ಕಲ್ಪಿಸಲೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ನಾವು ಬೆಳಕಿನೊಂದಿಗೆ ಬೆರೆತು ಬಿಟ್ಟಿದ್ದೇವೆ, ಅದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ವತಂತ್ರ ಭಾರತದ ಹೋರಾಟಗಾರ: ಪ್ರಭು ಎಸ್. ಪಾಟೀಲ

     ರಾಜೀವ ದೀಕ್ಷಿತ ಎಂಬ ಅಕ್ಷರಗಳ ಹೆಸರನ್ನು ಕೇಳಿದೊಡನೆಯೇ ಮೈತುಂಬ ರಾಷ್ಟ್ರೀಯತೆ ಓಡಾಡಲಾರಂಭಿಸುತ್ತದೆ.  ಈ ಹೆಸರೇ ಒಂದು ಮಂತ್ರದಂತೆ. ಪಾಶ್ಚಾತ್ಯ ಹಾಗೂ ಜಾಗತಿಕರಣವೆಂಬ ಮಾಯಾಜಾಲದಲ್ಲಿ ಕುರುಡರಂತೆ ಅನುಕರಿಸುತ್ತಾ ಭಾರತೀಯರಾದ ನಾವು ನಮ್ಮತನವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಹುತೇಕ ಮರೆತೆ ಹೋಗಿದ್ದ ಸ್ವದೇಶಿ ಮೌಲ್ಯಗಳನ್ನು ಈ ದೇಶದ ಘನತೆ, ಹಿರಿಮೆ ಹಾಗೂ ವಾಸ್ತವತೆಯನ್ನು ಹಾಗೂ ಸಮಸ್ಯೆಗಳಿಗೆ ಸಿಲುಕಿ ಅದರ ಮೂಲ ತಿಳಿಯದೆ ಪರಿಹಾರ ಕಾಣದೆ ನಿಷ್ಕ್ರೀಯರಾಗಿದ್ದ ಭಾರತೀಯರನ್ನು ತಮ್ಮ ಉಪನ್ಯಾಸಗಳಿಂದ ಸೂಕ್ತ ಅಂಕಿ ಅಂಶಗಳಿಂದ ಬಡಿದೆಬ್ಬಿಸಿದ ಧೀರ ಸಾಧಕನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬ್ರಹ್ಮ ರಾಕ್ಷಸ ಮತ್ತ ಜಮೀನದಾರಿಣಿ (ಆಡಿಯೋ ಕತೆ): ಸುಮನ್ ದೇಸಾಯಿ

ಹೀಂಗೊಂದ ಊರೊಳಗ ಒಬ್ಬ ಶ್ರೀಮಂತ ಜಮೀನದಾರ ಇದ್ನಂತ. ಆಂವಾ ಭಾಳ ಜೀನಗೊಟ್ಟ(ಜೀಪುಣ) ಇದ್ನಂತ. ತನ್ನ ಕೈ ಕೆಳಗ ಕೆಲಸಾ ಮಾಡೊವರ ಕಡೆ ಜಬರದಸ್ತ ಕೆಲಸಾ ತಗೋತಿದ್ನಂತ, ಆದ್ರ ಅವರಿಗೆ ಬರೊಬ್ಬರಿ ಪಗಾರನ ಕೋಡ್ತಿದ್ದಿಲ್ಲಂತ. ಆಳು ಮಕ್ಕಳು ಪಗಾರ ಕೇಳಲಿಕ್ಕೆ ಬಂದವರಿಗೆಲ್ಲ ಏನರೇ ನೆವಾ ಹೇಳಿ. ರೊಕ್ಕಾ ಕೊಡದಾ ಹಂಗ ಕಳಿಸ್ತಿದ್ನಂತ. ಇದರಿಂದ ಕೆಲಸಗಾರರಿಗೆ ಭಾಳ ನೋವಾಗ್ತಿತ್ತಂತ, ಜಮೀನದಾರಗ ಅಂಜಿ ಏನು ಹೇಳಲಾರದ ಸುಮ್ನಾಗ್ತಿದ್ರಂತ.  ಆದ್ರ ಜಮೀನದಾರಿಣಿಗೆ ಗಂಡನ ಈ ಜೀನಗೊಟ್ಟತನ ಒಟ್ಟ ಸೇರ್ತಿದ್ದಿಲ್ಲಂತ. ಆಕಿ ಜಮೀನದಾರಗ, “ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಶಿವಕುಮಾರ ಸಿ., ತಿರುಪತಿ ಭಂಗಿ, ಲೋಕೇಶಗೌಡ ಜೋಳದರಾಶಿ

ಕಾವ್ಯದ ಕೂಗು ಅದೆಲ್ಲಿದೆ…… ದುತ್ತನೆ ಸಮುದ್ರದ ತೀರದಲ್ಲಿ ಯಮಯಾತನೆಯ ಹೊತ್ತು , ಮಣಬಾರದ ಹೆಜ್ಜೆಯಿಟ್ಟು ಮಹಲಿನಲ್ಲಿ ಹಲ್ಲುಕಿರಿದು ಕಿಕ್ಕಿರಿದು ಸೇರಿದ್ದ ಸಂದಣಿಯಲ್ಲಿ  ಗುನುಗುನುಗುತ್ತಿತ್ತು. ಆರ್ಭಟದ ಅಳಲಿನಲಿ, ಪಂಚಾಯ್ತಿ, ಗುಡಿಸಲು, ಗುಡಿ ಗುಂಡಾರಗಳಲ್ಲಿ, ಇಲ್ಲಿ ಕಚ್ಚೆ ಕಟ್ಟುವ, ಅಲ್ಲಿ ಸ್ಕರ್ಟ ಹಾಕಿರುವ, ಭೂವಿಸಖಿ, ಗಗನಸಖಿಯರಲ್ಲಿ, ಹುಬ್ಬು, ಹುನ್ನಾರಗಳಲ್ಲಿ, ತೇರು ಹರಿವ ಮಾದಕ ನೋಟಗಳಲ್ಲಿ, ಕುಣಿಕುಣಿದಾಡುತ್ತಿತ್ತು. ಒಮ್ಮೆ ತಿರುಗಿ ನೋಡಬೇಕಿತ್ತು ತೆರಪಿರದೇ ಕಣ್ಣಲ್ಲೇ ಕುಣಿಯುತ್ತಿದ್ದ ಹಗಲುಗನಸುಗಳ ಸೈಡಿಗಿಟ್ಟು ಹಳೇ ಬಸ್ಟಾಂಡಿನ ಚಿಲ್ಲರೆ ಮುದುಕಿಯ  ಕಷ್ಟ ಕೇಳಬಹುದಿತ್ತು ನಾನೇ ನೋಡಬಹುದಿತ್ತು ಪಾಯ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಕಿಂಗ್ ಫಿಷರ್’ ನನ್ನ ಮೊಬೈಲ್ ನಲ್ಲಿ: ನವೀನ್ ಮಧುಗಿರಿ

ಅವತ್ತು ನಾನು ನಮ್ಮ ಹೊಲಕ್ಕೆ ನೀರಿಡುತ್ತಿದ್ದೆ. ಆ ನೀರಿಡುವ ಸಮಯದಲ್ಲಿ ಹುಳು ಹುಪ್ಪಟೆಗಳು ನೀರಿನಲ್ಲಿ ತೇಲುತ್ತವೆ. ಅಂತಹ ಹುಳುಗಳನ್ನು ತಿನ್ನಲೆಂದು ಒಂದಷ್ಟು ಹಕ್ಕಿ ಪಕ್ಷಿಗಳು ಬರುತ್ತವೆ. ತನ್ನ ಬೆಳಗಿನ ಉಪಹಾರಕ್ಕೆಂದು ಹಾಗೆ ಬಂದ 'ಕಿಂಗ್ ಫಿಷರ್' ನನ್ನ ಮೊಬೈಲ್ ನಲ್ಲಿ ಹೀಗೆ ಸೆರೆಯಾಯ್ತು. ಮೊದಲಿಗೆ ಸ್ವಲ್ಪ ದೂರದಲ್ಲಿ ನಿಂತು ಕ್ಲಿಕ್ಕಿಸಿದೆ. ಆಮೇಲೆ ನಿಧಾನವಾಗಿ ಸದ್ದಾಗದಂತೆ ಹೆಜ್ಜೆಯೂರಿ ಸ್ವಲ್ಪ ಹತ್ತಿರಕ್ಕೆ ಹೋದೆ. ಒಂದೊಂದು ಫೋಟೋಗಳನ್ನ ಕ್ಲಿಕ್ಕಿಸುತ್ತ ಒಂದೊಂದು ಹೆಜ್ಜೆ ಹತ್ತಿರಕ್ಕೆ ಹೋದೆ.  ಗೊತ್ತಾದರೆ ಹಾರಿ ಹೋಗಬಹುದೆಂದು ತುಂಬಾ ಎಚ್ಚರವಹಿಸಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊಂದು ಕ(ವ್ಯ)ಥೆ: ಲಿಯೋ ರೆಬೆಲ್ಲೋ

"ಅಮ್ಮ.. ಚಾರ್ಲಿ ಮಾಮ ಬಂದಿದ್ದಾರೆ" ಅಕ್ಕನ ಮಗ ಸುಕೇಶ್ ಅಡಿಗೆಮನೆಯಲ್ಲಿದ್ದ ಅಮ್ಮನಿಗೆ ಕೂಗಿ ಹೇಳಿದ್ದು ಕಿವಿ ಮೇಲೆ ಬಿದ್ದಾಗ ಅವನ ಹ್ರದಯದಲ್ಲಿ ಕಸಿವಿಸಿಯಿಂದ ಆಗಲೇ ಸುನಾಮಿ ಅಲೆಗಳು ಆರಂಭಗೊಂಡಿದ್ದವು. ಮಕ್ಕಳ ಜೊತೆಜೊತೆಗೆ ಮೊಮ್ಮಕ್ಕಳೂ ತಾಯಿಗೆ ಅಮ್ಮ ಎಂದು ಕರೆಯುವುದು ಆ ಕುಟುಂಬದ ಅಭ್ಯಾಸ. ಬಾಬೂ… ಚಾರ್ಲಿ ಬಂದಿದ್ದಾರೆ ಹೊರಡು, ಸಮಯವಾಗಿದೆ ಎಂದು ಅಮ್ಮ ಕೂಗೊಟ್ಟಾಗ ಕೋಣೆಯ ಮಂಚದ ಮೇಲೆ ಕುಳಿತವನ ಕಾಲುಗಳಿಗೆ ಬಲವಿಲ್ಲದಂತಾಗಿ ಮೇಲೇಳಲು ಸಾಧ್ಯವಾಗಲಿಲ್ಲ, ಕೆಲಕ್ಷಣಗಳ ನಂತರ ಸುಧಾರಿಸಿಕೊಂಡು ಹೊರಡುವ ವೇಳೆ ಕೈಯನು ಅದುಮಿಡಿದ ಅವಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಟ್ಟೇಬಿಡುವ ಸಿಟ್ಟು: ಪ್ರಶಸ್ತಿ ಪಿ.

ಅವನಿಗೆ ಮೂಗಿನ ತುದಿಗೇ ಕೋಪ, ಇವ ದೂರ್ವಾಸ ಮುನಿಯ ಅಪರಾವತಾರ ಅಂತ ಹೆಚ್ಚೆಚ್ಚು ಸಿಟ್ಟು ಮಾಡಿಕೊಳ್ಳೋ ಜನರ ಬಗ್ಗೆ ಮಾತನಾಡೋದು ಎಲ್ಲಾದ್ರೂ ಕೇಳೇ ಇರ್ತೇವೆ. ಕ್ಷಣ ಕ್ಷಣಕ್ಕೂ ಕೋಪ ಮಾಡಿಕೊಳ್ಳೋ ಜನರಿರೋ ತರ ಸಾಮಾನ್ಯವಾಗಿ ಶಾಂತ ಸ್ವಭಾವದ ಜನರೂ ಕೆಲಸಲ ಇದ್ದಕ್ಕಿದ್ದಂತೆ ಕೋಪಗೊಳಗಾಗುತ್ತಾರೆ. ಸಾತ್ವಿಕ ಸಿಟ್ಟು, ಜಗಳ ವಿಪರೀತಕ್ಕೊಳಗಾಗಿ ಮಿತ್ರರನ್ನೇ ಕೊಲ್ಲೋ ಸಿಟ್ಟು, ಕೆಲಸ ಮಾಡಿಸಲೋಸುಗ ತೋರೋ ಹುಸಿ ಸಿಟ್ಟು .. ಹಿಂಗೆ ಸಿಟ್ಟನ್ನು ಹಲಪರಿಯಲ್ಲಿ ವಿಂಗಡಿಸಬಹುದಾದ್ರೂ ಸಿಟ್ಟಿಂದ ಆಗಬಹುದಾದ ಲಾಭಗಳಿಗಿಂತ ಒದಗೋ ಅಪಾಯಗಳೇ ಹೆಚ್ಚೆಂದು ಕಾಣಿಸುತ್ತವೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಭೂತವೊಂದರ ನಿಗ್ರಹ ಚಿಕ್ಕ ವಯಸ್ಸಿನ ಪತ್ನಿಯೊಬ್ಬಳು ರೋಗಪೀಡಿತಳಾಗಿ ಸಾಯುವ ಹಂತ ತಲುಪಿದ್ದಳು. ಅವಳು ತನ್ನ ಪತಿಗೆ ಇಂತೆಂದಳು: “ನಾನು ನಿನ್ನನ್ನು ಬಹುವಾಗಿ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಹೋಗಲು ನಾನು ಬಯಸುವುದಿಲ್ಲ. ನನ್ನ ನಂತರ ಬೇರೆ ಯಾವ ಹೆಂಗಸಿನ ಹತ್ತಿರವೂ ಹೋಗಬೇಡ. ಹಾಗೇನಾದರೂ ಹೋದರೆ ನಾನು ಭೂತವಾಗಿ ಹಿಂದಿರುಗಿ ನಿನ್ನ ಅಂತ್ಯವಿಲ್ಲದ ತೊಂದರೆಗಳಿಗೆ ಕಾರಣಳಾಗುತ್ತೇನೆ.” ಇದಾದ ನಂತರ ಅನತಿಕಾಲದಲ್ಲಿಯೇ ಆಕೆ ಸತ್ತಳು. ತದನಂತರದ ಮೊದಲ ಮೂರು ತಿಂಗಳ ಕಾಲ ಅವಳ ಇಚ್ಛೆಯನ್ನು ಪತಿ ಗೌರವಿಸಿದನಾದರೂ ಆನಂತರ ಸಂಧಿಸಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನೆಲ್ಲಾ ಭಾವಗಳಿಗೆ ನಿನ್ನ ಪ್ರೀತಿಯ ಲೇಪನ..: ಪದ್ಮಾ ಭಟ್

          ಕೂಸೆ.. ನಿನ್ ಸಂತಿಗೆ ಮಾತಾಡ್ತಾ ಇದ್ರೆ, ಸಮಯ ಹೋಗೋದೇ ಗೊತ್ತಾಗ್ತಿಲ್ಲೆ.. ಅದೆಂತಕ್ಕೆ ನೀ ಯಂಗೆ ಅಷ್ಟು ಇಷ್ಟ ಆದೆ.. ಅಂತಾ ಪದೇ ಪದೇ ಹೇಳುವ ನಿನಗೆ ನನ್ನಿಂದ ಉತ್ತರ ಕೊಡುವುದು ಕಷ್ಟ.. ಅದೇ ಆ ದಿನ. ಆ ಮುಸ್ಸಂಜೆಯ ಕೋಲ್ಮಿಂಚಿನಲಿ, ನಿನ್ನ ಮುಖವಷ್ಟೇ ಕಾಣುತ್ತಿದ್ದ ತುಸು ಬೆಳಕು, ಹೃದಯದ ಬಡಿತ ಇಷ್ಟು ಜೋರಾಗಿದ್ದನ್ನು ನಾನೆಂದೂ ಕೇಳಿರಲಿಲ್ಲ.. ಚಳಿಯಿಂದ ಮೈ ಕೊರೆಯುತ್ತಿತ್ತು.. . ಮೌನದ ಆಳದೊಳಗೆ , ಆಡಲಾಗದ ಮಾತುಗಳನ್ನೆಲ್ಲಾ ಕಣ್ಣುಗಳೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೯): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಕರ್ನಾಟಕದ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಗುಂಡ್ಯ ನದಿಗೆ ಅಡ್ಡಡ್ಡಲಾಗಿ ಆಣೆಕಟ್ಟು ಕಟ್ಟುವ ಪ್ರಸ್ತಾವನೆಯನ್ನು  ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆ.ಪಿ.ಸಿ.ಎಲ್) ಹೊಂದಿದೆ. ಮೂರು ಹಂತಗಳಲ್ಲಿ ೨೦೦ ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸಿದ್ಧಪಡಿಸಿದೆ. ಮೊದಲನೇ ಹಂತವಾಗಿ ಎತ್ತಿನಹೊಳೆ, ಕೇರಿಹೊಳೆ, ಹೊಂಗದಹಳ್ಳ ಮತ್ತು ಬೆಟ್ಟಕುಮಾರಿ ಹರಿವಿನ ನೀರನ್ನು ಬಳಸುವುದು, ಇದರಲ್ಲಿ ನೀರು ಸಂಗ್ರಹಣೆಗಾಗಿ ೧೭೮.೫ ಚ.ಕಿ.ಮಿ ವಿಸ್ತೀರ್ಣ ಮುಳುಗಡೆಯಾಗುತ್ತದೆ. ಹಾಗೆಯೇ ಎರಡನೇ ಹಂತದಲ್ಲಿ ಕುಮಾರಧಾರಾ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 67): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಅರವಿಂದ ಕೇಜ್ರಿವಾಲ್ ರವರು ಇತ್ತೀಚೆಗೆ ದೆಹಲಿಯ ಎಷ್ಟನೇಯ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು? ೨.    ಪಿ.ಡಬ್ಲೂ.ಡಿ (PWD) ನ ವಿಸ್ತೃತ ರೂಪವೇನು? ೩.    ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ? ೪.    ರಾಜೀವ ಇದು ಯಾರ ಕಾವ್ಯ ನಾಮವಾಗಿದೆ? ೫.    ಪಂಚಕರ್ಮ ಚೈತನ್ಯ ವಿಧ್ಯೆಯು ಯಾವುದಕ್ಕೆ ಸಂಬಂಧಿಸಿದೆ? ೬.    ವಿಶ್ವದಲ್ಲಿ ಪ್ರಕಟವಾದ ಮೊದಲನೆ ವಿಜ್ಞಾನ ಪುಸ್ತಕ ಯಾವುದು? ೭.    ಸೌರವ್ಯೂಹದಲ್ಲಿ ಗುರುತ್ವಾಕರ್ಷಣ ಶಕ್ತಿ ಹೊಂದಿರುವ ಏಕೈಕ ಗ್ರಹ ಯಾವುದು? ೮.    ಪ್ರಸಿದ್ಧ ಯಾತ್ರಾಸ್ಥಳ ಮಧುರೈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಗ್ರಾಮದ ಪರಿಸರ ಸಮಸ್ಯೆ: ಅಕ್ಷಯ ಕಾಂತಬೈಲು

ಪರಿಸರವು ಸಕಲ ಜೀವಗಳ ಚಟುವಟಿಕೆಯ ಮಡಿಲು. ಹಗಲು- ಇರುಳು ಮರಳಿ ಮರಳಿ ಮುರಳಿಯ ನಾದದ ತೆರದಿ ಬರುತ್ತಾ ಹೊಗುತ್ತಾ ಇದ್ದರೂ ಪರಿಸರ ಮಾತ್ರ  ಧ್ಯಾನಸ್ಥ ಸ್ಥಿತಿಯಿಂದ ತನ್ನೊಡಲ  ಸಕಲ ಜೀವಗಳ ಬೇಕು ಬೇಡಗಳನ್ನು  ಅದಾವುದೋ ಮಾಯೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ಉಲ್ಕೆಯೊಂದು ನಭವ ಛಿದ್ರಿಸಿ ಧರೆಗಪ್ಪಳಿಸಿದಂತೆ ಪರಿಸರಕ್ಕೆ ಸಮಸ್ಯೆಯೊಂದು ಬಂದೊದಗಿದರೆ ಸಾಕು ಅಪಾಯದ ಸಂಕೋಲೆ ಬೆಳೆಯತೊಡಗುತ್ತದೆ. ಸಂಕೊಲೆ ಬೆಳೆದು ಬೆಳೆದು ಜೀವಸಂಕುಲಕ್ಕೆ ಬಿಗಿಯಾಗಿ ಬಂಧಿಸಲ್ಪಡುತ್ತದೆ.   ಹಸಿರು ಸೀರೆಯುಟ್ಟ ದೇವತೆಯ ಹಾಗೆ ಕೊಡಗಿನ ಚೆಂಬು, ಸಂಪಾಜೆ ಜೊತೆಗೆ ಪೆರಾಜೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುರುತ್ವದ ಅಂಕಿತವಿರಬಹುದೇನೋ..? ಬ್ರಹ್ಮನೆಂಬ ಹೆಸರು…: ರೋಹಿತ್ ವಿ. ಸಾಗರ್

’ಕಾಲು ಜಾರಿದರೆ ಸೊಂಟ ಮುರಿಯುತ್ತದೆ’ ಎಂಬುವುದರಿಂದ ಹಿಡಿದು ’ಆಕಾಶಕ್ಕೆ ಉಗಿದರೆ ಮುಖಕ್ಕೆ ಬೀಳುತ್ತದೆ’ ಎಂಬ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರೆ, ಮೇಲಿದ್ದ ವಸ್ತು ಅಥವಾ ಮೇಲಕ್ಕೆಸೆದ ವಸ್ತು ಕೆಳಗೇ ಬೀಳಬೇಕು ಅನ್ನುವುದು ಎಷ್ಟೊಂದು ಸಹಜಕ್ರಿಯೆಯಲ್ಲವೇ ಎನಿಸಿಬಿಡುತ್ತದೆ. ನಾವು ಹುಟ್ಟಿದಾಗಿನಿಂದಲೂ ನೋಡುತ್ತಿರುವ, ನಾವು ಆಗಬಾರದೆಂದುಕೊಂಡರೂ ಆಗೇ ಆಗುವ ಹಲವು ಕ್ರಿಯೆಗಳಲ್ಲಿ ಇದೂ ಒಂದಾದ್ದರಿಂದ, ಇಂತಹ ವಿಷಯಗಳು ನಮ್ಮ ಕುತೂಹಲದಿಂದ ಪ್ರಾಯಶಃ ದೂರ ಸರಿದು ಬಿಟ್ಟಿವೆ. ಆದರೆ ನ್ಯೂಟನ್ ಎಂಬ ಭೌತಶಾಸ್ತ್ರಜ್ಞ ನಮ್ಮ ಹಾಗೆ ಸಹಜವಾಗಿ ನೋಡದೆ ಆ ಕ್ರಿಯೆಯಲ್ಲಿ ಅಡಗಿಕೊಂಡಿದ್ದ ವಿಶೇಷತೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಾದಗಟ್ಟಿ: ಆನಂದ ಈ. ಕುಂಚನೂರ

    II ಶ್ರೀ ಕಾಡಸಿದ್ಧೇಶ್ವರ ಪ್ರಸನ್ನ II ದಿ: 13-09-2010 ಮಾನ್ಯರೇ, ನಮ್ಮೂರಿನ ಮಗನಂತಿದ್ದ ಶ್ರೀ ಕಾಡಸಿದ್ಧೇಶ್ವರರ ವರಪುತ್ರನೆನೆಸಿದ್ದ ಕಾಡಪ್ಪನು  ನಿನ್ನೆ ರಾತ್ರಿ 2 ಗಂಟೆಗೆ ವಿಧಿವಶನಾಗಿರುತ್ತಾನೆ ಎಂದು ತಿಳಿಸಲು ವಿಷಾದವೆನಿಸುತ್ತದೆ. ಇಂದು ಮುಂಜಾನೆ 10 ಗಂಟೆಗೆ ನಡೆಯುವ ಅವನ ಅಂತ್ಯಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿ.   –  ಬನಹಟ್ಟಿಯ ದೈವಮಂಡಳಿ. ಹೀಗೊಂದು ಸಂಗತಿ ಊರಿನ ಪ್ರಮುಖ ನಾಮಫಲಕಗಳ ಮೇಲೆ ರಾರಾಜಿಸುತ್ತಲೇ ಎಲ್ಲರ ಗಂಟಲು ಉಬ್ಬಿಬಂದಿದ್ದುವು. 'ಯವ್ವಾs, ದೈವದ ಮಗಾsನ ಹ್ವಾದಲ್ಲಬೇ…' ಎಂದು ಹೆಂಗಸರು ಜಮಾಯಿಸುವುದರೊಂದಿಗೆ, 'ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನ: ಅನಿತಾ ನರೇಶ್ ಮಂಚಿ

ಇದೊಂದು ವಿದ್ಯೆ ಮನುಷ್ಯರು ಸ್ವತಃ ಕಲಿತದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಹೆಚ್ಚಾಗಿ ಇಂತಹ ಕೆಲಸಗಳ ಕ್ರೆಡಿಟ್ಟನ್ನು ಇಲಿಗಳೋ, ಹೆಗ್ಗಣಗಳೋ, ಏಡಿಗಳೋ ತೆಗೆದುಕೊಂಡು ಮನುಷ್ಯರ ಗುರುಗಳು ನಾವೇ ಎಂದು ಫೋಸ್ ಕೊಡುತ್ತವೆ. ಅಂತಹ ಅತ್ಯುತ್ತಮ ವಿದ್ಯೆ  ಯಾವುದೆಂದರೆ ’ಕನ್ನ ಹಾಕುವುದು ಅಥವಾ ಕೊರೆಯುವುದು’… ಹಾಗೆ ನೋಡಿದರೆ ಯಾವ ವಿದ್ಯೆಯೂ ಮನುಷ್ಯನ ಸ್ವಂತದ್ದಲ್ಲವೇ ಅಲ್ಲ ಬಿಡಿ. ’ಎಲ್ಲವಂ ಬಲ್ಲಿದರಿಂದ ಕೇಳಿ, ನೋಡಿ, ಮಾಡಿ’ಯೇ ಕಲಿತದ್ದು. ಆದರೆ ಆ ವಿದ್ಯೆಗಳಲ್ಲಿ ಮನುಷ್ಯ ಎಷ್ಟು ಪಳಗಿಬಿಡುತ್ತಾನೆ ಎಂದರೆ ಕಲಿಸಿದ ಗುರುವೇ ತಲೆಬಾಗಿ ಪ್ರಣಾಮ ಮಾಡುವಷ್ಟು. ಇರಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಂಗಳೂರ ಅತೀ ಹಳೆಯ ದೇಗುಲದ ಬಗ್ಗೆಯೊಂದಿಷ್ಟು: ಪ್ರಶಸ್ತಿ

ಜೀ ಕನ್ನಡ ವಾಹಿನಿಯ ಡಿವೈಡೆಡ್ ಅನ್ನೋ ಕಾರ್ಯಕ್ರಮದಲ್ಲೊಂದು ಪ್ರಶ್ನೆ. ದೊಮ್ಮಲೂರಲ್ಲಿರೋ ಚೊಕ್ಕನಾಥಸ್ವಾಮಿ ದೇವಸ್ಥಾನ ಕಟ್ಟಿಸಿದರು ಯಾರು ? ೧)ಯಲಹಂಕ ನಾಡ ಪ್ರಭುಗಳು ೨)ಚೋಳರು ೩)ಮೈಸೂರ ಅರಸರು. ಅವತ್ತು ನಾನಂದುಕೊಂಡತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೂ ಹೇಳಿದ ಉತ್ರ ಯಲಹಂಕ ನಾಡ ಪ್ರಭುಗಳು. ಬೆಂಗ್ಳೂರಿಗೆ ಚೋಳರೆಲ್ಲಿಂದ ಬರಕ್ಕಾಗುತ್ತೆ ? ಮೈಸೂರರಸರು ಬೆಂಗ್ಳೂರಿಗೆ ಬಂದ್ಯಾಕೆ ದೇವಸ್ಥಾನ ಕಟ್ಟುಸ್ತಾರೆನ್ನೋ ಲಾಜಿಕ್ಕು. ಆದ್ರೆ ಅದು ತಪ್ಪು. ! ಚೊಕ್ಕನಾಥಸ್ವಾಮಿ ಅಥವಾ ಚೊಕ್ಕಪೆರುಮಾಳ್ ದೇವಸ್ಥಾನವನ್ನು ಸುಮಾರು ಕ್ರಿ.ಶ ೧೨೦೦ ರ ಸುಮಾರಿಗೆ  ಕಟ್ಟಿಸಿದ್ದು ಚೋಳರಸ ರಾಜರಾಜ ಚೋಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿತೆಗಳು: ಸಿಪಿಲೆ ನಂದಿನಿ, ಸಂತೆಬೆನ್ನೂರು ಫೈಜ್ನಟ್ರಾಜ್, ನವೀನ್ ಮಧುಗಿರಿ, ನಾಗರಾಜ ಎಸ್. ಹಣಗಿ

ಕೆಂಪು ನಕ್ಷತ್ರದ ಹೂ ತೇಲುವ  ಬೆಳ್ಳಿ ಮೋಡಗಳ  ಜೀವಗಳಲಿ ಸಂಗ್ರಾಮ ಕೆಂಪುಮಳೆ ಬಿದ್ದರೆ ತರಗೆಲೆ ತುಂತುರ ಹನಿಯೊಳಗೆ ಬೆಳಕು..! ನಕ್ಷತ್ರದ ಹೂಗಳಲಿ ಸಂಭ್ರಮ ಎದೆಯ ನೋವ ರಕ್ತದೊಳಗೆ ಕಾಡು ಜನರಿಗೆ ಹರ್ಷ ಕೆಂಪು ನಕ್ಷತ್ರದ ಹೂವು ಮಳೆ ಇಬ್ಬನಿಗಳ ರಂಬಿಸುವ  ಅನಂತ  ಆಕಾಶವೇಕೆ ಶೂನ್ಯ? ಪ್ರಭುತ್ವ ಜೀವಗಳಲಿ ಬಿನ್ನತೆ ಏತಕೆ?  ಹಸಿರುಬೇಟೆ ಹೆಸರಲಿ ನಿತ್ಯ ಮಾರಣ ಹೋಮ ತರಗಲೆಯೊಳಗೆ  ಬಲಿಯಾದವರೆಲ್ಲ ಮಳೆಕಾಡ ನೆಲದೆದೆಯ ಒಂದೇ  ರಕ್ತದ ಸಹೋದರರು    ಕಾಡು ಮಲೆಗಳಲಿ ವಿಶಿಷ್ಟತೆಯ ಸೊಗಸು ದಮನಿಯೊಳಗೆ ಲುಪ್ತವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾದ ಕಳ್ಳ ಒಂದು ಸಂಜೆ ಶಿಚಿರಿ ಕೋಜುನ್‌ ಶ್ಲೋಕಗಳನ್ನು ಪಠಿಸುತ್ತಿದ್ದಾಗ ಹರಿತವಾದ ಖಡ್ಗಧಾರೀ ಕಳ್ಳನೊಬ್ಬ ಒಳಕ್ಕೆ ಪ್ರವೇಶಿಸಿ ಹಣ ಅಥವ ಪ್ರಾಣ ಎರಡರಲ್ಲೊಂದು ನೀಡಬೇಕೆಂಬ ಒತ್ತಾಯಪೂರ್ವಕ ಬೇಡಿಕೆ ಮುಂದಿಟ್ಟ. ಶಿಚಿರಿ ಅವನಿಗೆ ಇಂತು ಹೇಳಿದ: “ನನ್ನ ನೆಮ್ಮದಿ ಕೆಡಿಸಬೇಡ. ಆ ಪೆಠಾರಿಯ ಒಳಗೆ ಹಣವಿದೆ, ನೋಡು.” ಆನಂತರ ಅವನು ಪಠನವನ್ನು ಮುಂದಿವರಿಸಿದ. ತುಸು ಸಮಯದ ನಂತರ ಪಠನ ನಿಲ್ಲಿಸಿ ಕರೆದು ಇಂತು ಹೇಳಿದ: “ಅಲ್ಲಿರುವುದೆಲ್ಲವನ್ನೂ ತೆಗೆದುಕೊಳ್ಳ ಬೇಡ. ನಾಳೆ ತೆರಿಗೆ ಕಟ್ಟಲೋಸುಗ ನನಗೆ ಸ್ವಲ್ಪ ಹಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಗಿಲಿನ ತುಂಬ ಮುತ್ತಿನ ಬೀಜ: ಸಚೇತನ

ನೀಲ ಪಟದ ಮೇಲೆ ಚಿತ್ರಗಳು ಸಾಕಷ್ಟಿದ್ದರೂ ಕೆಲವೊಮ್ಮೆ ದಟ್ಟ ವಿಷಾದವೊಂದು ತೆಳ್ಳಗೆ ಆವರಿಸಿರುತ್ತದೆ. ಅಂಕಿಯ ಲೆಕ್ಕಕೆ ಸಿಗದ ಚುಕ್ಕಿಗಳನ್ನೆಲ್ಲ  ಕಪ್ಪು ಮೋಡ ಮುಚ್ಚಿಟ್ಟಿರುತ್ತದೆ. ಆಕಾಶ ಕಪ್ಪಲ್ಲ, ಕಡು ನೀಲ, ಚುಕ್ಕಿ  ಖಾಲಿಯಾಗದ ಕಾಲ.   ಸು ರಂ ಎಕ್ಕುಂಡಿ ಕವನವೊಂದರ ಕೆಲವು ಸಾಲುಗಳು : ಮುಗಿಲಿನ ತುಂಬ ಮುತ್ತಿನ ಬೀಜ  ಬಿತ್ತುವವರೇ ಇಲ್ಲ  ಬಣ್ಣದ ಲೋಕದ ಬೆಳಕಿನ ತೇರ  ಎಳೆಯುವವರೇ ಇಲ್ಲ  ನಂದನವನದ ರೆಕ್ಕೆಯ ಕುದುರೆಯ  ಹತ್ತುವವರೆ ಇಲ್ಲ  ಕಡಲಿನ ಭಗವದ್ಗೀತೆಗೆ ಭಾಷ್ಯವ  ಬರೆಯುವವರೇ ಇಲ್ಲ  ನಮಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ