ಸಲ್ಲದ ಪ್ರೇಮ ಪತ್ರ: ಅಜ್ಜೀಮನೆ ಗಣೇಶ್

ನೀನು ಆಗಾಗ ಹೇಳುತ್ತಿದ್ದೆ ಗೊತ್ತಾ…ಒಂದೂರಿನ ರಾಜನ ಕಥೆ, ಅದೇ ಕಣೆ, ತಾಜ್‍ಮಹಲ್ ಕಟ್ಟಿದವನು..ಒಲವಿಗೆ ಅವನೇ ರಾಯಭಾರಿಯಂತೆ. ಆತ ಕಟ್ಟಿದ ಪ್ರೀತಿ ಸಂಕೇತವೇ ಇವತ್ತಿಗೂ ಜಗತ್ತಿನ ಲವ್ ಸಿಂಬಲ್ ಅಂತೆ. ಏನೇ ಆಗಲಿ, ಆ ರಾಜನ ಪ್ರೇಮಕ್ಕಿಂತ ನಮ್ಮಿಬ್ಬರ ಪ್ರೀತಿ ಒಂದು ಮೆಟ್ಟಿಲಾದರೂ ಎತ್ತರದಲ್ಲಿರಬೇಕು ಅಂತಿದ್ದೆ ನೋಡು. ಅದಕ್ಕಾಗಿ ವಾರಕೊಮ್ಮೆ ಒಪ್ಪತ್ತು ಮಾಡಿ, ನನ್ನನ್ನೂ ಉಪವಾಸ ಕೆಡವುತ್ತಿದ್ದೆ ನೋಡು..ವಿಷಯ ಗೊತ್ತಾ..ನಿನ್ನ ಉಪವಾಸ ಫಲನೀಡಿದೆ. ನಾನೀಗ ನಿನ್ನ ಆಸೆ ಈಡೇರಿಸುತ್ತಿದ್ದೇನೆ. ನಾಚಿಕೆ ಮುಳ್ಳಿನಂತ ನಮ್ಮಿಬ್ಬರ ಪ್ರೇಮವೀಗ ಇತಿಹಾಸದ ಸಾಕ್ಷಿ ಹೇಳುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆ ಮೂರು ದಿನಗಳು: ಗುಂಡುರಾವ್ ದೇಸಾಯಿ ಮಸ್ಕಿ

ಯಾವು ಆ ಮೂರು ದಿನಗಳು!  ವೈಶಾಖದ ದಿನಗಳಾ, ಆಷಾಢದಿನಗಳಾ ಅಂತ ಭಾವಿಸಿದ್ರಾ! ಅಲ್ಲ ಅಲ್ಲ. ಇಕಿ ಒಮ್ಮಿಂದೊಮ್ಮೆಲೆ ದೂರ ನಿಂತು ನೀರು  ಕೋಡ್ರಿ, ಹಾಸಿಗಿ ಕೊಡ್ರಿ ಅಂತ ಸ್ಟಾರ್ಟ ಮಾಡಿದ್ರ  ’ಎದಿ ಝಲ್’ ಅಂತದ. ಏನ್ರೀ ಹೊರಗಿದ್ದ ಮೂರುದಿನದ ಬಗ್ಗೆ ಸಿರಿಯಸ್ಸ ತೋಳೊದಾ! ಅಂತ ಮೂಗು ನೀವು ಮುರಿಬಹುದು. ಅದಕ್ಕಲ್ಲ ಸಂಕಟ ಪಡೋದು ಕೆಲಸ ಮಾಡಕ. ಅಯ್ಯೋ! ಇವರು ಎಂಥವರ್ರೀ ತಿಂಗಳಾನಗಟ್ಟಲೇ ಮಾಡಿ ಹಾಕೋರಿಗೆ ಕೂಡ್ರಿಸಿ ಮೂರು ದಿನ ಹಾಕಕ ಏನು ಧಾಡಿ ಅಂತ ಅಂದಕೊಂಡಿರಲೂ ಬಹುದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

೨೦೧೫ ಡಿಸೆಂಬರ್ ಪ್ಯಾರೀಸ್ ಶೃಂಗಸಭೆಯ ಮುನ್ನ ಒಂದಿಷ್ಟು!!: ಅಖಿಲೇಶ್ ಚಿಪ್ಪಳಿ

ಈ ಬಾರಿ ಶಿವರಾತ್ರಿ ಕಳೆದ ಮೇಲೂ ಚಳಿ ಮುಂದುವರೆದಿತ್ತು. ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅಕಾಲಿಕ ಮಳೆ ಅಡಚಣೆಯಾಗಿ ಕಾಡಿತು. ಬಿಲ್ಲನ್ನು ಎಳೆದು ಬಿಟ್ಟಾಗ ಬಾಣ ನುಗ್ಗುವ ರೀತಿಯಲ್ಲಿ ಬೇಸಿಗೆ ದಾಪುಗಾಲಿಕ್ಕಿ ಬರುತ್ತಿದೆ. ಉಳ್ಳವರು ಸೆಖೆಯಿಂದ ಬಚಾವಾಗಲು ಹವಾನಿಯಂತ್ರಕದ ಮೊರೆ ಹೋಗುತ್ತಾರೆ. ಎಂದಿನಂತೆ ತಂಪುಪಾನೀಯಗಳ ಜಾಹಿರಾತು ಟಿ.ವಿಯಲ್ಲಿ ಧಾಂಗುಡಿಯಿಡುತ್ತಿವೆ. ಅಂಟಾರ್ಟಿಕಾವನ್ನು ನಾಚಿಸುವಂತೆ ತಣ್ಣಗೆ ಮಾಡುವ ರೆಪ್ರಿಜಿರೇಟರ್ ಭರಾಟೆಯೂ ವ್ಯೋಮಕ್ಕೆ ಜಿಗಿದಿದೆ. ಅತ್ತ ಪ್ಯಾರೀಸ್ ನಗರ ಡಿಸೆಂಬರ್ ತಿಂಗಳಿಗಾಗಿ ಕಾಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ೧೯೬ ದೇಶಗಳ ಸಾವಿರಾರು ಧುರೀಣರು, ವಿಜ್ಞಾನಿಗಳು, ಭಾಗಿದಾರರು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನನ್ಯ ವ್ಯಕ್ತಿಚಿತ್ರಕ, ಸುಹೃದ ವಿಶಾರದ: ಎಸ್. ಜಿ. ಸೀತಾರಾಮ್, ಮೈಸೂರು.

[ಕನ್ನಡ ಸಾಹಿತ್ಯಾಕಾಶದ ಕೃಷಿಋಷಿಮಂಡಲದಲ್ಲಿ ತಮ್ಮ ವಿದ್ವಚ್ಛಕ್ತಿಪ್ರಭೆಯಿಂದ ವಿರಾಜಮಾನರಾಗಿರುವ, ಮತ್ತು ವಾತ್ಸಲ್ಯಾದಿ ಗುಣೋಜ್ವಲತೆಗಳಿಂದ ತಮ್ಮ ಅಭಿಮಾನಿಗಳ ಹೃದಯಾಕಾಶದಲ್ಲಿಯೂ ಅಂತೆಯೇ ಶೋಭಿಸುತ್ತಿರುವ,  ಮೈಸೂರಿನ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಈಗ ಸಹಸ್ರ  ಪೂರ್ಣಚಂದ್ರ ದರ್ಶನ ಪ್ರತಿಫಲನದಿಂದ ಮತ್ತಷ್ಟು ಕಾಂತಿಯುತರಾಗಿದ್ದಾರೆ.  ಮಾರ್ಚ್-೨೦೧೫ರಲ್ಲಿ ಜರುಗಿದ ಅವರ ಸಹಸ್ರ ಚಂದ್ರ ದರ್ಶನೋತ್ಸವ ಸಂದರ್ಭದಲ್ಲಿ ಅವರಿಗಿಲ್ಲೊಂದು ಬರಹಮಣಿಹ.]         ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಸಾಹಿತ್ಯಶಾಸ್ತ್ರಗಳಲ್ಲಿ ವೆಂಕಟಾಚಲಸದೃಶರೇ ಸರಿ. ಆ ದೊಡ್ಡಬೆಟ್ಟದ ದಾರಿಯಲ್ಲಿ ಸುಳಿಯುವ ಸಂಭವವೂ ಇಲ್ಲದ ನನಗೂ-ಅವರಿಗೂ ನಡುವೆ ಇರುವ ಒಡನಾಟವು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 70): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು? ೨.    ನಾಸಾ (NASA) ದ ವಿಸ್ರೃತ ರೂಪವೇನು? ೩.    ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ ದೇಶದಲ್ಲಿದೆ? ೪.    ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ? ೫.    ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ  ಜಿಲ್ಲೆ ಯಾವುದು? ೬.    ಗಾಂಧಿಜಿಯ ಸಬರಮತಿ ಅಶ್ರಮ ಯಾವ ರಾಜ್ಯದಲ್ಲಿದೆ? ೭.    ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ? ೮.    ಸಿಖ್ಖರ ಐದನೇ ಗುರು ಯಾರು? ೯.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೀಣಾ: ಶ್ರೀಮಂತ್ ಎಮ್. ಯನಗುಂಟಿ

’ಏ ಮಾಮು ಏಳೋ ಇನ್ನು ಎಷ್ಟೊತ್ತು ಮಲಗ್ತೀಯಾ’ ರಾತ್ರಿಯೆಲ್ಲಾ ಸೀಟು ಸಿಗದೆ ನಿಂತುಕೊಡಿದ್ದವನಿಗೆ ನಸುಕಿನ ಮೂರು ಗಂಟೆಯಲ್ಲೊಂದು ಸೀಟು ಸಿಕ್ಕಿತ್ತು. ನಿದ್ದೆಬರುವುದಿಲ್ಲ ಅಂತ ಗೊತ್ತಿತ್ತು. ಆದರೂ ಸುಮ್ಮನೆ ಬೋರಲಾಗಿ ಮಲಗಿದ್ದೆ. ಯಾರೋ ಚಪ್ಪಾಳೆ ಹಾಕುತ್ತಾ ಮೈದಡವಿದಂತಾಯ್ತು. ಎದ್ದು ಸಮಯ ನೋಡಿದೆ ಇನ್ನೂ ಗಂಟೆಯ ಮುಳ್ಳು ಐದನ್ನೆ ದಾಟಿರಲಿಲ್ಲ. ಸ್ವಲ್ಪ ಹಿಂತಿರುಗಿ ನೋಡಿದೆ. ಮಂಗಳಮುಖಿಯೊಬ್ಬಳು ಬಹಳ ಸಹಜವೆಂಬಂತೆ ಮಾಮೂಲಿ ಕೇಳಲು ಬಂದಿದ್ದಳು.  "ರೀ ನಿಮಗೆ ಹೊತ್ತು ಗೊತ್ತು ಏನೂ ಇಲ್ವಾ. ಇಗಲಾದ್ರೂ ಮಲಗಿದ್ದಿನಿ ನಿಮ್ಮದೊಳ್ಳೆ ಸಹವಾಸ" ಎಂದು ನಿದ್ದೆಯಲ್ಲಿ ಗೊಣಗುತ್ತಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕು ಬಣ್ಣದ ಸಂತೆ: ಹೃದಯಶಿವ

ಹೋಳಿ ಹಬ್ಬದ ಸಂಭ್ರಮ, ಖುಷಿಗಳನ್ನು ನೀವೂ ಅನುಭವಿಸಿರುತ್ತೀರಿ.  ಹೋಳಿಹಬ್ಬ ಕೂಡ ದೀಪಾವಳಿಯಂತೆಯೇ ಭಾರತೀಯರ ಮನಸ್ಸಿನಲ್ಲಿ ವರ್ಣಮಯವಾಗಿ, ಮನರಂಜನಾತ್ಮಕವಾಗಿ ಆವರಿಸಿರುತ್ತದೆ. ವರ್ಷವೆಲ್ಲಾ ಅಪ್ಪಟ ಗಂಭೀರ ವ್ಯಕ್ತಿಗಳಂತೆ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡು ಆಫೀಸಿಗೆ ಹೋಗಿ ಬರುವ ಸೀರಿಯಸ್ ಮನುಷ್ಯರೂ ಹೋಳಿ ಹೋಳಿಹಬ್ಬದಂದು ಮಕ್ಕಳಾಗಿಬಿಡುತ್ತಾರೆ. ಬಣ್ಣ ಎಚ್ಹರಿ ಖುಷಿ ಪಡುತ್ತಾರೆ. ಮುಖದಲ್ಲಿ ಗಂಭೀರ ಗೆರೆಗಳು ಮಾಯವಾಗಿ ಉಲ್ಲಾಸ ಮಡುಗಟ್ಟುತ್ತದೆ.  ಹೋಳಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಒಂದೆರಡು ಅಂಶಗಳನ್ನು ಹೇಳುತ್ತೇನೆ… ಮನುಷ್ಯನ ಮನಸ್ಸು ರಂಗುಮಯವಾದದ್ದು. ಬಹುತೇಕ ಜನ ಪರಸ್ಪರ ಬಣ್ಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕಾರ್ಮೋಡ” ಮಳೆಯಾಗಿ ಸುರಿದ ನಂತರ ತಡರಾತ್ರಿಗೆ ಮುಕ್ತಿ: ಅಮರ್ ದೀಪ್ ಪಿ.ಎಸ್.

ಅಂದು ಸಂಜೆ ಹೊಸಪೇಟೆಯಿಂದ ರೈಲು ಹತ್ತಿದಾಗ ಸಂಜೆ ಏಳು ಗಂಟೆ.  ನನ್ನ ಜನ್ಮ ಜಾತಕದಲ್ಲಿ ಅಮವಾಸ್ಯೆ ದಿನ ಪ್ರಯಾಣದಲ್ಲಿ ಅಪಘಾತದ ಸೂಚನೆ ನೀಡಿದ್ದ ಜ್ಯೋತಿಷಿಯ ನೆನಪಾಯಿತು.  ಪ್ರತಿ ದಿನವೂ ಕತ್ತಲಂತೇ ದೂಡುತ್ತಿದ್ದ ಬದುಕಿನಲ್ಲಿ ಒಂದು ದಿನದ ಅಮವಾಸ್ಯೆಯು ತನಗೇನೂ ಕೇಡು ಬಗೆಯುವುದಿಲ್ಲವೆಂಬದು ನನ್ನ ದಿಟ್ಟ ನಂಬಿಕೆ.  ರೈಲು ಭೋಗಿಯಲ್ಲಿ ಹೆಜ್ಜೆಯಿಡಲೂ ಜಾಗವಿರದಂಥ ಜನರಲ್ ಕಂಪಾರ್ಟ್ ಮೆಂಟ್. ಅದರಲ್ಲೂ ಹೆಂಗಸರು ಮಕ್ಕಳು ಜಾಗ ಅಲ್ಲಲ್ಲಿ ಹುಡುಕಿ ಕೂಡುತ್ತಿದ್ದರು. ಪಾಸ್ ಮಾಡಿಸಿಕೊಂಡು ದಿನವೂ ಓಡಾಡುವ ಸಂಭಾವಿತ ಗಂಡಸರು ವಯಸ್ಸಾದವರಿಗೆ ಜಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಿಣಿಶಾಸ್ತ್ರದ ಸ೦ಚು: ಆದರ್ಶ ಸದಾನ೦ದ ಅರ್ಕಸಾಲಿ

ಮೂರು ತಿ೦ಗಳ ಹಿ೦ದೆ ಮಾರಿಯಮ್ಮನ ಜಾತ್ರೆಯಲ್ಲಿ, ನನಗೆ ಆಸಕ್ತಿ ಇಲ್ಲದಿದ್ದರೂ, ವಯಸ್ಸಾದ ಗಿಣಿಶಾಸ್ತ್ರ ಹೇಳುವ ಅಜ್ಜಿಯೊ೦ದು ನನ್ನ ಹತ್ತಿರ ಕರೆದು, ನನ್ನ ಕಿವಿಯಲ್ಲಿ ನನಗೊ೦ದು ಒಳ್ಳೆಯ ಸುದ್ಧಿಯೊ೦ದು ಕಾದಿದೆಯೆ೦ದು, ಅದರಿ೦ದ ನನ್ನ ಏಳ್ಗೆಯಾಗುವುದೆ೦ದು ಹಿತವಚನ ನುಡಿದಾಗ, ನನಗೆ ಕುತೂಹಲ ತಡೆಯಲಾಗಲಿಲ್ಲ. ಯಾವ ಜೋತಿಷಿಯೇ ಆಗಲಿ, ಭವಿಷ್ಯ ಹೇಳುವ ಮುನ್ನ ಅವರ ಫೀಸನ್ನು ಮು೦ದುಗಡೆ ಇರುವ ದೇವರ ಫೋಟೋದಡಿ ಇಡಲು ಹೇಳುತ್ತಾರೆ. ಭವಿಷ್ಯ ಕೇಳಿ ಜನ ದುಡ್ಡು ಕೊಡದೆ ಓಡಿ ಬಿಟ್ಟರೆ? ದೇವರ ಫೋಟೋದ ಮು೦ದೆ ದುಡ್ಡಿಡುವಾಗ ಒ೦ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿದ್ಯುತ್ ಅಪವ್ಯಯ ಬಿಟ್ಟುಬಿಡಿ , ಎಲ್.ಇ.ಡಿ ಬಂತು ದಾರಿ ಬಿಡಿ: ರೋಹಿತ್ ವಿ. ಸಾಗರ್

ವಿದ್ಯುತ್ ಅಥವಾ ಕರೆಂಟ್ ನಮಗೆ ತುಂಬಾ ಪರಿಚಿತವಾಗಿರುವ, ಅದಿಲ್ಲದೆ ಜೀವನವನ್ನು ಊಹಿಸಿಕೊಳ್ಳಲೂ ಆಗದಿರುವಂತಹ ಒಂದು ಮೂಲಭೂತ ಅಗತ್ಯತೆಯಾಗಿಬಿಟ್ಟಿದೆ. ಅದು ಹೇಗೆ ಎಂಬುದನ್ನ ಇಪ್ಪತ್ತೊಂದನೇ ಶತಮಾನದವರಾದ ನಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ನಿತ್ಯ ಜೀವನದ ಹೆಚ್ಚು ಕಡಿಮೆ ಎಲ್ಲಾ ಕ್ರಿಯೆಗಳಿಗೂ ನಾವೀಗ ವಿದ್ಯುತ್ತನ್ನೇ ಅವಲಂಬಿಸಿದ್ದೇವೆ. ಯಾವುದೇ ಶೋಕಿಗಳಿಲ್ಲದಿದ್ದರೂ ಕನಿಷ್ಟ ಬೆಳಕಿಗಾಗಿಯಾದರೂ ನಮಗೆ ವಿದ್ಯುತ್ ಬೇಕೇ ಬೇಕು. ಸುತ್ತಲಿನ ಪರಿಸರದ ಅಂದ-ಚೆಂದಗಳನ್ನು, ಆಗು ಹೋಗುಗಳನ್ನು ಕಣ್ತುಂಬಿಕೊಳ್ಳಲು ಬೆಳಕು ಬೇಕು. ಹಗಲಿನಲ್ಲಿ ಸೂರ್ಯ ಪುಗಸಟ್ಟೆಯಾಗಿ, ಧಾರಾಕಾರವಾಗಿ ಬೆಳಕನ್ನು ನೀಡಿಬಿಡುತ್ತಾನೆ. ಆದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿಯೂ, ಊರ ಗುಬ್ಬಿಯೂ: ಪ್ರಶಸ್ತಿ

ಒಂದೂರಲ್ಲೊಂದು ಗುಬ್ಬಿಯಿತ್ತಂತೆ. ಆ ಗುಬ್ಬಿಗೆ ಸಿಕ್ಕಾಪಟ್ಟೆ ಗೆಳೆಯರು. ಗುಬ್ಬಿ ಪ್ರತೀ ಸಾರಿ ಚೀಂವ್ಗುಟ್ಟಿದಾಗಲೂ ಆಹಾ ಎಂತಾ ಮಧುರ ಗಾನ. ನಿನ್ನ ಚೀಂಗುಟ್ಟುವಿಕೆಯ ಮುಂದೆ ಕೋಗಿಲೆಯ ಗಾಯನವನ್ನೂ ನಿವಾಳಿಸಿ ಎಸೆಯಬೇಕೇನೋ ಎಂದು ಹೊಗಳುತ್ತಿದ್ದರಂತೆ. ಮೊದಮೊದಲು ಸುಮ್ಮನೇ ಹೊಗಳುತ್ತಿದ್ದಾರೆಂದುಕೊಂಡಿದ್ದ ಗುಬ್ಬಿಗೆ ನಿಧಾನಕ್ಕೆ ಅವರು ಹೇಳಿದ ಮಾತುಗಳೇ ಸತ್ಯವೆನಿಸಲಾರಂಭಿಸಿತು. ಅಷ್ಟೆಲ್ಲಾ ಜನ ಸುಳ್ಳು ಹೇಳುತ್ತಾರಾ ಅಂತ. ನಾನೆಂದ್ರೇನು ? ನಾ ಚೀಂಗುಟ್ಟುವುದೆಂದ್ರೇನು.. ಆಹಾ ಯಾರಾದ್ರೂ ನನಗೆ ಸಾಟಿಯುಂಟೆ ಅನ್ನೋ ಭಾವ ಅದಕ್ಕೇ ಅರಿವಿಲ್ಲದಂತೆ ಅದರೊಳಗೆ ಬೆಳೆಯಲಾರಂಭಿಸಿತು. ಒಂದಿನ ಹಿಂಗೇ ಆಹಾರ ಹುಡುಕುತ್ತುಡುಕುತ್ತಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಪ್ಪು ಮಣ್ಣಿನಲಿ ಹೂತಿಟ್ಟ ಕರುಣೆ: ಸಚೇತನ

ಬಂದೂಕಿನಿಂದ ಹೊರಟ ಕಾಡತೂಸು ಕೊಲ್ಲುವದು ಕೇವಲ ಗುರಿಯಾಗಿ ನಿಂತ ಮನುಷ್ಯನನ್ನು ಮಾತ್ರವಲ್ಲ, ಒಂದು ಜನಾಂಗದ ಬದುಕನ್ನು. ಸತ್ತವರು ಬೂದಿಯಾದರು ಬದುಕಿ ಉಳಿದವರು ಸತ್ತವರ ಪ್ರೇತಗಳಾಗುವರು. ಹಿಂಸೆ ಕೋಣೆಯೊಳಗೆ ಕಿಟಕಿಗಳಿಲ್ಲ, ಒಳ ಹೊಕ್ಕರೆ ಹೊರಬರಲು ಬಾಗಿಲುಗಳಿಲ್ಲ.  "ನಿನ್ನ ಬಂದೂಕುಗಳನ್ನು ಗೌರವಿಸು, ಇವತ್ತಿನಿಂದ ಅವು ನಿನ್ನ ತಂದೆ ತಾಯಿ. "  ಆಟದ ಬಂದೂಕಿನಲ್ಲಿ, ಆಟದ ವಯಸ್ಸಿನಲ್ಲಿನ ಮಕ್ಕಳನ್ನುದ್ದೇಶಿಸಿ ಹೇಳಲಾಗುತ್ತಿದೆ. ಆಫ್ರಿಕಾದ ಯಾವುದೋ ಮೂಲೆಯ ಹಳ್ಳಿಯೊಂದರ ಪುಟ್ಟ  ಜೀವಗಳು ಥರಗುಟ್ಟುತ್ತ ಈ ಮಾತನ್ನು ಕೇಳುತ್ತಿವೆ. ಎದುರಿಗೆ ನಿಂತ, ಬಂದೂಕು ಹಿಡಿದ  ವ್ಯಕ್ತಿಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯ

ನೀ ಬಂದು ನಿಂತಾಗ ಎಂದಾದರೊಮ್ಮೆ  ಬಳಿ ನೀನು ಬಂದರೆ  ಕೊಡಲೇನ ನಿನಗಾಗಿ ಹೇಳು ಚಂದದ ಚೆಲುವಿನ   ಮನದಾಗಿನ ಭಾವನೆಗಳ ಸಾರುವ ಅಂದದ ಕಾಣಿಕೆಯು  ನಿನಗಾಗಿ ಕಾದಿಹುದು ಕೇಳು ಪ್ರತಿದಿನವು ಮೂಡಿಹುದು  ಒಲವಿನ ರಂಗವಲ್ಲಿ ನಿನ್ನ ಆಗಮನಕ್ಕಾಗಿ ಕಾದು ಪ್ರತಿಸಾಲು ಸಾರಿಹುದು ಅಭಿಮಾನವ ರಂಗುಚೆಲ್ಲಿ ನನ್ನೆಲ್ಲಾ ಗಮನವ ನಿನ್ನೆಡೆಗೆ ಸೆಳೆದು ತಂಪಾದ ತಂಗಾಳಿ ಚಾಮರವ ಬೀಸಲು ಅಣಿಯಾಗಿದೆ ಬಳಿ ನೀನು ಬರಲು ದಣಿದು ಮುಗಿಲಿನ ಮೋಡವು ಪನ್ನೀರ  ಎರಚಲು ಸುತ್ತೆಲ್ಲಾ ಕವಿದಿದೆ ಖುಷಿಯಿಂದ ಕುಣಿದು ಮತ್ತಷ್ಟು ಉಡುಗೊರೆಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸ್ವಿನಿ: ಅಭಿಲಾಷ್ ಟಿ ಬಿ

ಕುರಿಗಾಹಿಯೊಬ್ಬನು ತನ್ನ ಎಲ್ಲಾ ಕುರಿಗಳನ್ನು ಒ೦ದೇ ಕಡೆ ಮೇಯಿಸಲು ಹೊರಟನೆ೦ದರೆ ಅದು ಬಯಲುಸೀಮೆಯೇ ಆಗಿರುತ್ತದೆ. ಬರ, ಕ್ಷಾಮ, ಅನಾವೃಷ್ಠಿ, ಅಭಾವ, ಇವರಿಗೆ ಸಾಮಾನ್ಯವಾಗಿ ಹೋಗಿದೆ. ಈ ಕಾರಣಕ್ಕಾಗಿ ಬಯಲುಸೀಮೆಯ ಕೆರೆಗಳಿಗೆ  ಸರ್ಕಾರ ಅಣೆಕಟ್ಟುಗಳಿ೦ದ ನಾಲೆಗಳ ಮುಖಾ೦ತರ ಜೀವಜಲವನ್ನು ಒದಗಿಸುತ್ತಿದೆ. ಕಲ್ಲೂರು, ಗ೦ಗರ, ಚ೦ದ್ರಾಪುರ, ಬೆಣ್ಣೆನಹಳ್ಳಿ,..ಒ೦ದೇ ಎರಡೇ, ಇ೦ತಹ ನೂರಾರು ಹಳ್ಳಿಯ ಜನರು, ಜಾನುವಾರುಗಳು ರಾಮನಿಗಾಗಿ ಶಬರಿ ಕಾಯುವ ಹಾಗೆ ನೀರಿಗಾಗಿ ಕಾಯುತ್ತಿರುತ್ತಾರೆ. ಈ ನೀರಿಗಾಗಿ ಕಾಯುತ್ತಿರುವ ಜನರು, ಎಮ್ಮೆಗಳೂ, ಹೋತಗಳು, ಬಸವಿಗಳು, ಟಗರುಗಳು, ಹಸುಗಳ ಪೈಕಿ ಸತ್ಯವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಮಾರ್ಗ ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾ. ಕಾ.. ಕಾಗೆ. . . ನೀ ಏಕೆ ಹೀಗೆ?: ಅಖಿಲೇಶ್ ಚಿಪ್ಪಳಿ

ನೆನಪಿದೆಯೇ? ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈಸೋಫನ ಕಾಗೆ ನೀರು ಕುಡಿದ ಕತೆ. ಹೂಜಿಯ ತಳಭಾಗದಲ್ಲಿದ್ದ ನೀರು ಕಾಗೆಗೆ ಎಟಕುತ್ತಿರಲಿಲ್ಲ. ಬುದ್ಧಿವಂತ ಕಾಗೆ ಅಕ್ಕ-ಪಕ್ಕದಲ್ಲಿರುವ ಕಲ್ಲುಗಳನ್ನು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ನೀರನ್ನು ಕುಡಿದು ಬಾಯಾರಿಸಿಕೊಂಡಿತು. ಕಾಗೆಯ ಬುದ್ಧಿಮತ್ತೆಯನ್ನು ಹೊಗಳಲು ಈ ಕತೆಯನ್ನು ಸೃಷ್ಟಿ ಮಾಡಿರಬೇಕು ಎಂದು ಕೊಂಡರೆ ತಪ್ಪು, ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತಿಕೆ ಕಾಗೆಗಳಿಗೆ ಇದೆ.  ವಿಜ್ಞಾನಿಗಳು ಯಾವುದೆಲ್ಲಾ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತಾರೆ. ಭೂಮಿಯ ಮೇಲೆ ಇರುವ ಚರಾಚರಗಳನ್ನೆಲ್ಲಾ, ಹುಡುಕಿ, ಹೆರಕಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ: ಪದ್ಮಾ ಭಟ್

                            ಪ್ರೀತಿಯ ಅಮ್ಮ.. ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ  ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು..  ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು. ನಿನ್ನ ಪತ್ರವು ಕೇವಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 69): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು? ೨.    ಬಿಸಿಸಿಐ (BCCI) ನ ವಿಸ್ತೃತ ರೂಪವೇನು? ೩.    ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು? ೪.    ಕಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ? ೫.    ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು? ೬.    ಅಂತರರಾಷ್ರ್ಟೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು? ೭.    ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? ೮.    ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬ್ಲಾಕ್ ಎಂಡ್ ಲೈಪ್ ಕಲರ್ ಫುಲ್ ಕನಸು ಕಾಣುತ್ತದೆ: ಅಜ್ಜೀಮನೆ ಗಣೇಶ

“Holi is the day to express love with colors. It is a time to show affection. All the colors that are on you are of love!” ಬಣ್ಣಗಳಲ್ಲೂ ಒಲವಿನ ಒಲುಮೆಯನ್ನೆ ಕಾಣುತ್ತಾನೆ ಕ್ರೇಜಿ ಗುರು ಓಶೋ… ಹೋಳಿ ಬಗ್ಗೆ ಏನಾದ್ರು ಬರೆಯಿರಿ, ಅಂತ ಪಂಜುವಿನ ನಟರಾಜು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ಸಹ ಮತ್ತದೆ ..ಓಶೋ..ಕಾರಣ ಸಿಂಪಲ್.. ಕೈಲಿರೋ ಹಿಡಿ ಬಣ್ಣವನ್ನು ಎದುರಿದ್ದವರ ಮುಖಕ್ಕೆ ಎರಚಿ, ಅವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಕು ಮತ್ತು ಅದರೊಂದಿಗೆ ಜೀವನದ ತಳುಕು: ರೋಹಿತ್ ವಿ. ಸಾಗರ್

ಬಹಳ ಹಿಂದಿನಿಂದಲೂ ಮಾನವನ ಕುತೂಹಲವನ್ನು ಅತಿಯಾಗಿ ಕೆರಳಿಸುತ್ತಿರುವ ವಿಷಯಗಳಲ್ಲಿ ಬೆಳಕು ಸಹ ಒಂದು. ನಮ್ಮ ಜೀವನದಲ್ಲಿ  ವಿವಿಧ ಮಜಲುಗಳಲ್ಲಿ ವಿವಿಧ ರೀತಿ-ನೀತಿಗಳಲ್ಲಿ ಬೆಳಕು ನಮ್ಮೊಂದಿಗೆ ಬೆರೆತು ಹೋಗಿದೆ. ಜೊತೆಗೆ ಅವೆಲ್ಲವಕ್ಕೂ ಸಂಬಂಧಪಟ್ಟ ವಿವಿಧ ಪ್ರಶ್ನೆಗಳನ್ನೂ ನಮ್ಮಲ್ಲಿ ಹುಟ್ಟು ಹಾಕುತ್ತಿದೆ. ಬೆಳಕಿನಲ್ಲಿ ಹಸಿರಾದ ಎಲೆ ಹಸಿರಾಗಿಯೇ ಏಕೆ ಕಾಣುತ್ತದೆ ? ಆಕಾಶ ಹಗಲಿನಲ್ಲಿ ನೀಲಿಯಾಗಿ ಬೆಳಗ್ಗೆ ಮತ್ತು ಸಂಜೆ ಕೆಂಪಾಗಿ ಹಾಗೂ ರಾತ್ರಿಯಲ್ಲಿ ಕಪ್ಪಾಗಿ ಕಾಣುವುದೇಕೆ ? ಎಂಬ ಎಷ್ಟೋ ಪ್ರಶ್ನೆಗಳು ನಮ್ಮ ನಿಮ್ಮೆಲ್ಲರ ಮನಗಳಲ್ಲಿ ಹುಟ್ಟುತ್ತವೆಯಾದರೂ, ಉತ್ತರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆವವಳೂ: ಅನಿತಾ ನರೇಶ್ ಮಂಚಿ

ಹೆಸರು ಕೇಳಿ ಮಾರ್ಚ್ ಎಂಟು ಬಂದೇ ಬಿಡ್ತಲ್ಲಾ ಅಂದುಕೊಳ್ಳಬೇಡಿ. ನಾನಂತೂ ಮಹಿಳೆಯರ ದಿನಾಚರಣೆಯನ್ನು ಒಂದು ದಿನಕ್ಕೆ ಆಚರಿಸುವವಳಲ್ಲ. ಎಲ್ಲಾ ದಿನವೂ ನಮ್ಮದೇ ಅಂದ ಮೇಲೆ ಆಚರಣೆಯ ಮಾತೇಕೆ?  ಸಮಯವೇ ಇಲ್ಲದಷ್ಟು ಗಡಿಬಿಡಿಯಲ್ಲಿರುವಾಗ  ಪ್ರೀತಿ ತುಂಬಿದ ಮಾತುಗಳನ್ನು ಕೇಳಿ ಯಾವಾಗೆಲ್ಲ ಮನಸ್ಸು ಉಲ್ಲಾಸವಾಗುತ್ತೋ ಆ ಎಲ್ಲಾ ದಿನಗಳು ನನ್ನವೇ ಅಂದುಕೊಂಡಿದ್ದೇನೆ. ಈಗ ಮೈನ್ ಮುದ್ದಾ ಕ್ಕೆ ಬರೋಣ. ಸುಮ್ಮನೆ ಅಲ್ಲಿಲ್ಲಿ ಅಲೆಯುವಾಟ ಯಾಕೆ ಬೇಕು?  ತಿಂಡಿಗೆ ಏನು ಮಾಡೋದು?  ಇದೊಂದು ಎಲ್ಲಾ ಮನೆಯ ಗೃಹಿಣಿಯರಿಗೆ ಕಾಡುವ ಮಿಲಿಯನ್ ಡಾಲರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಹೋಳಿ ಕಾವ್ಯ ಧಾರೆ

ಹಿಗ್ಗಿನ ಹೋಳಿ ಶೋಭಿಸುತಿದ್ದವು ಮೊಗಗಳು ಬಣ್ಣಗಳ ಸಮ್ಮಿಲನದಿಂದ, ಬೆಳಗುತಿದ್ದವು ಕಣ್ಣುಗಳು ಅಂತರಾಳದಲ್ಲಿರುವ ಆನಂದದಿಂದ, ಥಳಿಥಳಿಸುತಿದ್ದವು ತೊಯ್ದ ಉಡುಪುಗಳು ರಂಗುರಂಗಿನ  ಲೇಪನದಿಂದ. ಎಲ್ಲಾ ದಿನಗಳಲ್ಲಿದ್ದಂತೆ ಆತುರವಿರಲಿಲ್ಲ, ಮಕ್ಕಳಿಗೆ ಶಾಲೆಯ ಗೋಜಿರಲಿಲ್ಲ, ವಯಸ್ಕರಿಗೆ ವೃತ್ತಿಯ ಲಕ್ಷ್ಯವಿರಲಿಲ್ಲ, ವೃದ್ಧರಿಗೆ ಸಂಕೋಚವಿರಲಿಲ್ಲ, ಮಕ್ಕಳಾಗಿದ್ದರು ಎಲ್ಲಾ ಪ್ರಕೃತಿಯ, ಎರಚುತ್ತಾ ರಂಗುರಂಗಿನ ಓಕುಳಿಯ. ಭೇದವಿರಲಿಲ್ಲ ಜಾತಿ, ಮತ, ವರ್ಗಗಳ, ಸುಳಿವಿರಲಿಲ್ಲ ಕಷ್ಟ ಕಾರ್ಪಣ್ಯಗಳ, ಎಲ್ಲರೂ ಭಾಗ್ಯವಂತರು ಅಲ್ಲಿ, ಹಿಗ್ಗಿನ ಸುಗ್ಗಿಯ ಸೊಬಗಿರುವಲ್ಲಿ, ಹಂಚುತಿದ್ದರು ಸಿಹಿ ಸಂತೋಷಗಳ, ಹಚ್ಚುತ್ತಾ ರಂಗುರಂಗಿನ ಬಣ್ಣಗಳ. ಉರಿಸಲಾಗಿತ್ತು ಅಗ್ನಿ ಈಗಾಗಲೇ, ಚಂದಿರನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಂಗ್ ರಂಗಿನ ಹೋಳಿಹಬ್ಬದ ಹಿನ್ನೆಲೆ : ಶುಭರಾಣಿ. ಆರ್

ನಮ್ಮ ಭಾರತ ದೇಶದಾದ್ಯಂತ  ಸಡಗರದಿಂದ   ಆಚರಿಸಲ್ಪಡುವ  ರಂಗು ರಂಗಿನ ಹಬ್ಬ  ಹೋಳಿಹಬ್ಬ. ಮಾಘ -ಫಾಲ್ಗುಣ ಮಾಸಗಳ ಶಶಿರ ಋತು  ಮುಗಿದು ಚೈತ್ರ ಮಾಸ ವಸಂತ ಋತು  ಕಾಲಿಡುವಾಗ ಹೊಸಚಿಗುರು ಮೂಡಿ,ಹೂಗಳು  ಅರಳಿನಿಂತು  ನಲಿಯುವಾಗ ನಾವುಗಳು  ಸಂತಸದಿಂದ  ರಂಗಿನಾಟವನ್ನು  ಆಡಲು ತೊಡಗುತ್ತೇವೆ. ಪಾಲ್ಗುಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ  ದಿನದಂದು ಹೋಳಿಹಬ್ಬವನ್ನು  ಆಚರಿಸಲಾಗುತ್ತದೆ.  ಈ ಹಬ್ಬವನ್ನು  ಒಂದೊಂದು ರಾಜ್ಯದಲ್ಲೂ  ಅದರದೆಯಾದ  ನಾಮಾವಳಿಗಳಿಂದ ಆಚರಿಸುವರು. ನಮ್ಮಲ್ಲಿ  "ಹೋಳಿಹಬ್ಬ, ಕಾಮನ ಹಬ್ಬ  ಅಥವಾ ಕಾಮದಹನ ,ರಂಗಿನ ಹಬ್ಬ(ಬಣ್ಣಗಳ ಹಬ್ಬ ) "ಎನ್ನುತ್ತೇವೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಮಣ್ಣನ ಮಕ್ಕಳು: ಆದರ್ಶ ಸದಾನ೦ದ ಅರ್ಕಸಾಲಿ

ಎ೦.ಬಿ.ಬಿ.ಎಸ್ ನ ಎರಡನೆಯ ಪರ್ವಕ್ಕೆ(phase) ಕಾಲಿಟ್ಟ ಕಾಲ. ಒಟ್ಟು ಒ೦ದೂವರೆ ವರ್ಷದ ಮೂರು ಪರ್ವಗಳಿರುತ್ತವೆ. ಮೊದಲನೆಯ ಪರ್ವದಲ್ಲಿ ಹೊಸ ವಾತಾವರಣಕ್ಕೆ ಹೊ೦ದಿಕೊ೦ಡು, ಹೊಸ-ಹೊಸ ವಿಷಯಗಳನ್ನು ಅರಿತು ತಿಳಿದುಕೊಳ್ಳುವ ಸಾಹಸದಲ್ಲಿ ಸವೆದರೆ, ಎರಡನೆಯ ಪರ್ವ ಇದರ ತದ್ವಿರುದ್ದವಾಗಿ ಮಜಾ ಮತ್ತು ಉಡಾಳತನದಲ್ಲಿ ಕಳೆಯುತ್ತದೆ. ಇದು ತಲೆಮಾರುಗಳಿ೦ದ ಬ೦ದ ಕಟ್ಟುನಿಟ್ಟಾದ ಪದ್ದತಿ. ಮೊದಲನೆಯ ಪರ್ವದಲ್ಲಿ ಅನುಭವಿಸಿದ ಹಿ೦ಸಾಜನಕ ಸ್ಥಿತಿಗಳನ್ನು ( ಸೀನಿಯರ್ ಗಳ ರಾಗಿ೦ಗ್ ನಿ೦ದ ಹಿಡಿದು ವೈವಾ(viva)ದಲ್ಲಿ ಸರ್ ಗಳ ರಾಗಿ೦ಗ್ ) ಮರೆಯಲು, ಅದಾಗಲೇ ದೇಹದಲ್ಲಿ ತಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ: ಸಚಿನ್ ಎಂ. ಆರ್.

ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೋಳಿ ಹಬ್ಬದಲ್ಲಿ ‘ಹಾಲಕ್ಕಿ ಗೌಡರ ಸುಗ್ಗಿ ರಂಗು’: ಎಸ್. ಎಸ್. ಶರ್ಮಾ

ಉತ್ತರ ಕನ್ನಡ ಜಿಲ್ಲೆಯ ಜಾನಪದ ಮತ್ತು ಪಾರಂಪರಿಕ ವಿಶೇಷತೆ ಕರ್ನಾಟಕ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣನೀಯ ಜನಸಂಖ್ಯೆಯಲ್ಲಿರುವ ಹಾಲಕ್ಕಿ ಜನಾಂಗದವರು ಆಚರಿಸುವ ಹೋಳಿಯಲ್ಲಿ ಕಲೆ, ಜಾನಪದ, ಸಂಸ್ಕೃತಿಯ ಜೊತೆಗೆ ಪರಂಪರೆಯ ಸೊಗಡು ವಿಜ್ರಂಭಿಸುವುದನ್ನು ಇಂದಿಗೂ ನೋಡಬಹುದು. ಹೋಳಿಯನ್ನು ಸುಗ್ಗಿ ಸಂಭ್ರಮವಾಗಿ ಊರಿಂದೂರಿಗೆ ಕುಣಿದು ಕುಪ್ಪಳಿಸಿ ರಂಗಾಗುವ 'ರಂಗುರಂಗಿನ' ಹಾಲಕ್ಕಿ ಗೌಡರುಗಳು ಇಲ್ಲಿನ ಬದುಕಿನಲ್ಲಿ ಅಚ್ಚೊತ್ತಿದ ಹೆಜ್ಜೆಗಳ ಕಿರು ಪರಿಚಯ ಇಲ್ಲಿದೆ.  ಕರಾವಳಿ, ಬಯಲುಸೀಮೆ ಹಾಗೂ ಮಲೆನಾಡು ಈ ಮೂರೂ ನಿಸರ್ಗ ಸಹಜ ಲಕ್ಷಣಗಳನ್ನು ಒಳಗೊಂಡಿರುವ ಉತ್ತರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾನವ ಮತ್ತು ಪ್ರಕೃತಿಯ ಅವಿನಾಭಾವ ಆಚರಣೆ ಹೋಳಿ ಹುಣ್ಣಿಮೆ: ಬೆಳ್ಳಾಲ ಗೋಪಿನಾಥ ರಾವ್

ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳಲ್ಲಿ ಹಬ್ಬ ಹರಿದಿನಗಳು ಮಾನವತೆ ಸ್ನೇಹ ಸೌಹಾರ್ದತೆಯ ಪ್ರತೀಕ. ಅಂತಹ ಸೌಹಾರ್ದತೆಯ ಹಬ್ಬ ಈ ಹೋಳಿ ಹುಣ್ಣಿಮೆ. ಶಿಶಿರದ ಚಳಿಗಾಲ ಮುಗಿದು ಚಿಗುರ ಚೈತ್ರದ ವಸಂತ ಋತು ಆರಂಭವಾಗುವ ಕಾಲ. ಸಕಲ ಜೀವ ರಾಶಿಗಳಲ್ಲಿ ಚೈತನ್ಯ ಚಿಲುಮೆ ಉಕ್ಕಿಸೋ ಮಾಸವಿದು. ಮಾಮರ ಚಿಗುರೊಡೆದು ಕೋಗಿಲೆಯ ದನಿ ಮೂಡುವ ಪವಿತ್ರ ಕಾಲದಲ್ಲೇ ಈ ಹೋಳಿ ಅಥವ ಹೋಲಿ ಹಬ್ಬ ಆಚರಿಸಲ್ಪಡುತ್ತದೆ. ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ವಿಭಿನ್ನ ಚಿತ್ರ ವಿಚಿತ್ರವಾಗಿ ಆಚರಿಸೋ ಹಬ್ಬವಿದು. ನಮ್ಮಲ್ಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವಳೊಡನೆ ಕೊನೇ ಹೋಳಿ…: ಸಖ್ಯಮೇಧ

ಅವಳ ಕೆನ್ನೆಯ ಗುಳಿ ತುಂಬಾ ಬಣ್ಣ ಬಳಿದ ಆ ಕೊನೇ ಹೋಳಿ ನೆನೆದರೇ ಮನದಲ್ಲಿ ವಿಷಾದದ ಗಾಳಿ ಏಳುತ್ತದೆ. ಏಕೆಂದರೆ ಅದೇ ಕೊನೆ, ಬಣ್ಣದ ಹೋಳಿಯೂ ಅವಳೊಡನೆ ದೂರಾಯಿತು….ಹೋಳಿಯ ತಲೆಬುಡ ತಿಳಿದಿರದಿದ್ದರೂ ಅದೊಂದು ನಿರೀಕ್ಷೆಯ ಹಬ್ಬ. ಬಟ್ಟಲುಕಂಗಳ ಆ ಹುಡುಗಿಯ ನುಂಪು ಕೆನ್ನೆಗಳಿಗೆ ಮೃದುವಾಗಿ ಬಣ್ಣ ಸವರಿ ಕಂಗಳಲ್ಲಿ ಮೂಡುವ ಬೆಳಕು ಕಾಣಲೆಂದು ಕಾತರಿಸಿದ ಹಬ್ಬ. ಜೊತೆಗೆ ಓರಗೆಯವರ ಜತೆಗೂಡಿ ಬಣ್ಣದ ಲೋಕದಲ್ಲಾಡುತ್ತಾ ಕಳೆದು ಹೋಗುವ ಸಂತಸ … ಅಪ್ಪನ ಕಿಸೆಯಿಂದ ಎಗರಿಸುವುದಲ್ಲದೇ ಶಾಲೆಗೆ ನಡೆದುಕೊಂಡೇ ಹೋಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ