ಮುಜಂಟಿ ಜೇನು ಸಾಕಿ : ನಿಮ್ಮ ತೋಟದಲ್ಲಿಯೇ ಮಾತ್ರ ಪರಾಗಸ್ಪರ್ಷ ಮಾಡಿಸಿ: ಚರಣಕುಮಾರ್

ಅದು ಅರಣ್ಯಶಾಸ್ತ್ರ ಪದವಿ ಮುಗಿಸಿ ಜೇನುನೊಣಗಳ ಹೆಚ್ಚಿನ ಸಂಶೋಧನೆಗಾಗಿ ಕಾಡುಮೇಡು ಅಲೆಯುವ ಸಮಯ. ಒಮ್ಮೆ ಸ್ಥಳಾಂತರ ಜೇನುಕೃಷಿಕರನ್ನು ಭೇಟಿಮಾಡಿ ಸಂದರ್ಶನ ಮಾಡಬೇಕೆನಿಸಿತು. ಒಮ್ಮೆ ಸ್ಥಳಾಂತರ ಜೇನುಕೃಷಿ ಮಾಡುವ ರೈತನನ್ನು ಭೇಟಿ ಮಾಡಿದೆ. ಇನ್ನೂ ವಿದ್ಯಾರ್ಥಿ ಕಲಿಕೆಯ ಗುಂಗಿನಲ್ಲಿದ್ದ ನನಗೆ ಅಲ್ಲಿ ಒಂದು ಅಚ್ಚರಿಯ ಸಂಗತಿ. ಅದೇನೆಂದರೆ, ಸ್ಥಳಾಂತರ ಜೇನುಕೃಷಿ ಮಾಡುವವರಿಗೆ ಎರಡೆರಡು ಲಾಭ. ಹೇಗೆಂದರೆ, ಜೇನುತುಪ್ಪ, ಜೇನುಕುಟುಂಬಗಳ ಮಾರಾಟ ಮತ್ತು ಇತರೆ ಜೇನು ಉತ್ಪನ್ನಗಳು ಆದಾಯದ ಒಂದು ಮೂಲವಾದರೆ, ಸ್ಥಳಾಂತರ ಜೇನುಕೃಷಿ ಮಾಡುವಾಗ ತೋಟದ ಅಥವಾ ಹೊಲ … Read more

‘ವಿಚಿತ್ರ ವಿಕ್ಷಿಪ್ತ ನಿಕೃಷ್ಠ ಬಿಸಿಯುಸಿರ ಬೇಗೆಯಲಿ ತಣ್ಣನೆ ರೋಧಿಸುವ ಕೆಂಗುಲಾಬಿ’: ಎಂ. ಜವರಾಜ್

ಹನುಮಂತ ಹಾಲಗೇರಿ ಅವರ “ಕೆಂಗುಲಾಬಿ” ಯ ವಯಸ್ಸು ಹತ್ತತ್ತಿರ ದಶಕಗಳೇ ಆಗಿವೆ. ಇದು ಪುಸ್ತಕ ರೂಪದಲ್ಲಿ ಇದುವರೆಗೆ ಐದು ಆವೃತ್ತಿ ಕಂಡಿದೆ. ಈ ‘ಕೆಂಗುಲಾಬಿ’ ಪುಸ್ತಕ ರೂಪ ತಾಳುವ ಮೊದಲು ಆನ್ ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಈ ಕೃತಿಯ ಕುರಿತಾಗಿ ಪತ್ರಿಕೆಗಳಲ್ಲಿ ಒಂದೆರಡು ಬರಹ ಓದಿದ್ದು ಬಿಟ್ಟರೆ ನಾನು ಈ ಕೃತಿ ಓದಿರಲಿಲ್ಲ. ನನ್ನ ಕಿರಿಯ ಮಿತ್ರರೊಬ್ಬರು ಸಾಕಷ್ಟು ಪುಸ್ತಕಗಳನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಾರೆ. ಅವರಿಗೆ ಈ ಎಲ್ಲ ಪುಸ್ತಕ ಓದಲು ಸಮಯಾಭಾವ … Read more

ಹಬೆಯಾಡುವ ಇಡ್ಲಿ!: ದಿನೇಶ್‌ ಉಡಪಿ

ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಾ ಇತ್ತು. ಇಂದು ಸಂಜೆಯಂತೂ ಅದರ ಆರ್ಭಟ ಜೋರಾಗಿ ಸುಮಾರು ಹೊತ್ತು ಮಳೆ ಬಂದಿತ್ತು. ಕಾಲೇಜಿನಿಂದ ಬಂದವನು ಮನೆ ಸೇರುವಷ್ಟರಲ್ಲಿ ತೋಯ್ದು ತೊಪ್ಪೆಯಾಗಿದ್ದೆ. ಒಂದು ಬಿಸಿ ನೀರಿನ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ, ಮಳೆಯ ಸೊಬಗನ್ನು ಸವಿಯುತ್ತಾ ಕಿಟಕಿಯ ಮುಂದೆ ಕೂತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಬಿಸಿ ಚಹಾದ ಕಪ್‌ ಮತ್ತು ಪ್ಲೇಟಿನಲ್ಲಿ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿ ಮುಂದೆ ಬಂದು ಕೂತಿತ್ತು!. ಇಳಿ ಸಂಜೆಯ ಮಬ್ಬು-ಮಳೆ,-ಚಳಿ, ಮತ್ತು ಹಬೆಯಾಡುವ ಇಡ್ಲಿ, … Read more

ಪ್ರೀತಿಯಿದ್ದರೆ ಪಾರಿವಾಳ ಹಾರಿಹೋಗುವುದಿಲ್ಲ: ವಿನಾಯಕ ಅರಳಸುರಳಿ

ಪ್ರೀತಿಯ ಗೆಳೆಯಾ, ನೀನು ಹಾಕುವ ಸ್ಟೇಟಸ್ ಗಳನ್ನು ನಾನು ನೋಡುತ್ತಲೇ ಇದ್ದೇನೆ. ಅದೇನೋ ಖಿನ್ನತೆ, ಮುಗಿಯದ ಬೇಸರ ನಿನಗೆ ಅಲ್ವಾ? ಮೊನ್ನೆ ನೀನು ‘ಪ್ರೀತಿಯ ಪಾರಿವಾಳ ಹಾರಿ ಹೋಯ್ತೋ ಗೆಳೆಯಾ’ ಎಂದು ವ್ಯಕ್ತಿಯೊಬ್ಬ ಅಳುತ್ತಾ ಹಾಡುತ್ತಿರುವ ಹಾಡನ್ನು ಹಾಕಿಕೊಂಡಿದ್ದೆಯಲ್ಲಾ? ಅದನ್ನು ನೋಡಿ ನಿನಗೂ ನನಗೂ ಗೆಳೆಯನಾಗಿದ್ದವನೊಬ್ಬ ‘ಅವನದೆಂಥಾ ಕರ್ಮ ಮಾರಾಯಾ? ಲವ್ ಫೇಯ್ಲೂರಿರಬೇಕು’ ಎಂದು ನಿನ್ನ ಆಡಿಕೊಂಡ. ಯಾಕೋ ಪಿಚ್ಚೆನಿಸಿ ಈ ಪತ್ರ ಬರೆಯುತ್ತಿದ್ದೇನೆ. ಪ್ರೀತಿಯ ಮೊಟ್ಟಮೊದಲ ಕನಸು ಬಿದ್ದ ದಿನದಿಂದ ಈ ಕ್ಷಣ ತನಕ ಅದೆಷ್ಟೋ … Read more

ಚಿನುಅ ಅಚಿಬೆಯ Things Fall Apart- ವಸಾಹತು ಸಂಸ್ಕೃತಿಯ ದಬ್ಬಾಳಿಕೆಯ ಅನಾವರಣ: ನಾಗರೇಖಾ ಗಾಂವಕರ

1959ರಲ್ಲಿ ಪ್ರಕಟವಾದ ಚಿನುಅ ಅಚಿಬೆಯ Things Fall Apart ಕಾದಂಬರಿ ವಸಾಹತು ಪೂರ್ವದ ನ್ಶೆಜೀರಿಯಾದ ಜನಜೀವನ ಮತ್ತು ಬ್ರೀಟಿಷ್ ಆಗಮನದ ನಂತರದ ಅಲ್ಲಿಯ ಸಾಂಸ್ಕೃತಿಕ ಕಗ್ಗೊಲೆ, ಕ್ರೈಸ್ತ ಮಿಷನರಿಗಳಿಂದ ಮೂಲ ಇಗ್ಬೋ ಜನಾಂಗ ಮತಾಂತರದ ಮುಷ್ಠಿಯಲ್ಲಿ ನರಳಿದ್ದು, ಎಲ್ಲವನ್ನೂ ಹೊರಜಗತ್ತಿಗೆ ತೆರೆದಿಟ್ಟಿತು. ಇಂಗ್ಲೀಷನಲ್ಲಿ ಮೂಡಿ ಬಂದ ಆಧುನಿಕ ಆಫ್ರಿಕನ್ ಕಾದಂಬರಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ತೀವೃ ಚರ್ಚೆಗೆ ಒಳಗಾದ ಕಾದಂಬರಿ. ಕಾದಂಬರಿಯ ತಲೆಬರಹವು W. B. Yeats ಕವಿಯ The Second Coming ಎಂಬ ಕವಿತೆಯಲ್ಲಿಯ ಸಾಲಾಗಿದ್ದು, … Read more

ಆನ್ಲೈನ್ ಶಿಕ್ಷಣದಿಂದ ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಆಗುತ್ತಿರುವ ತೊಂದರೆಗಳು : ತೇಜಾವತಿ ಹುಳಿಯಾರ್

ದೇಶದೆಲ್ಲೆಡೆ ಜನಜೀವನದೊಂದಿಗೆ ಮಕ್ಕಳ ವಿದ್ಯಾಭ್ಯಾಸವನ್ನೂ ಅಸ್ತವ್ಯಸ್ತಗೊಳಿಸಿರುವ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ಮಕ್ಕಳ ವಿದ್ಯಾಭ್ಯಾಸ ಗೊಂದಲದ ಗೂಡೇ ಆಗಿದೆ. ಒಂದು ಕಡೆ ಇಷ್ಟೊಂದು ದೀರ್ಘ ಕಾಲದ ರಜೆಯಿಂದಾಗಿ ಮಕ್ಕಳು ತಾವು ಕಲಿತದ್ದೆಲ್ಲವನ್ನು ಮರೆತು ಕುಳಿತಿದ್ದಾರೆ. ಇನ್ನೊಂದೆಡೆ ಶಿಕ್ಷಕರು ಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಗೆ ಅಣಿಗೊಳಿಸಿಕೊಂಡು ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಶಾಲೆಯ ಸಿದ್ದ ಭೌತಿಕ ಕಲಿಕಾ ಕೊಠಡಿಗಳಲ್ಲಿ ಬೋಧನೆ ಮಾಡಲು ಅವಕಾಶವಿಲ್ಲದ ಈ ಸಂದರ್ಭದಲ್ಲಿ ಮಕ್ಕಳ ಮೂಲ … Read more

ವರ್ಕ್ ಪ್ರಮ್ ಹೊಮ್ (WFH) ಆಗು -ಹೋಗುಗಳು: ಪ್ರವೀಣ್ ಶೆಟ್ಟಿ, ಕುಪ್ಕೊಡು

ಹಿಂದೆ ಒಂದು ಕಾಲ ಇತ್ತು, ತಿಂಗಳಿಗೆ ಒಂದು WFH ತಗೆದುಕೊಳ್ಳಲು ಮ್ಯಾನೇಜರ್ ಗಳ ಕೈಕಾಲು ಹಿಡಿಯಬೇಕಾಗುತಿತ್ತು. ಆದರೆ ಕೊರೊನಾ ಎಲ್ಲಾ ರೀತಿಯ ವರ್ಕ್ ಕಲ್ಚರ್ ಅನ್ನೇ ಬುಡಮೇಲು ಮಾಡಿಬಿಟ್ಟಿದೆ. ಸರಕಾರ ಲಾಕಡೌನ್ ಜೊತೆಗೆ ಐಟಿ ಕಂಪನಿ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಆದೇಶ ನೀಡಿದ ನಂತರ ಕಂಪನಿಗಳು ಮೊದ ಮೊದಲಿಗೆ ಹೆದರಿದರೂ, ಅತೀ ಶೀಘ್ರವಾಗಿ ಹೊಸ ರೀತಿಯ ಕೆಲಸದ ವಾತಾವರಣಕ್ಕೆ ಹೊಂದಿಕೊಂಡವು. ತಮ್ಮ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಗಳನ್ನು ಅವರವರ ಮನೆಗಳಿಗೆ ತಲುಪಿಸಲಾಯಿತು. ನೆಟ್ವರ್ಕ್ ಗಾಗಿ ಕಂಪನಿಯಿಂದ … Read more

ಆಕ್ರಮಣ (ಭಾಗ ೩): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಜಿಂಕೆಯ ಗ್ರಾಚ್ಚಾರ ಕೆಟ್ಟು ರಾಕ್ಷಸ ಇರುವೆಗಳ ಆಕ್ರಮಣಕ್ಕೆ ತುತ್ತಾಗಿತ್ತು. ಮೊಟ್ಟ ಮೊದಲಿಗೆ ಕಣ್ಣುಗಳ ಮೇಲೆ ಆಕ್ರಮಣ ನಡೆಸುವುದೇ ಈ ಇರುವೆಗಳ ವಿಶಿಷ್ಠತೆಯಾಗಿತ್ತು. ಬೇಟೆಯನ್ನು ಕುರುಡಾಗಿಸಿ ಅಸಹಾಯಕ ಸ್ಥಿತಿಗೆ ದೂಡುವುದೇ ಇರುವೆಗಳ ಕಾರ್ಯಾಚರಣೆಯ ಗುಟ್ಟಾಗಿತ್ತು. ತನ್ನ ಹೆಗಲಿನ ಮೇಲಿದ್ದ ಕೋವಿಯಿಂದ ಲೆನಿಂಜೆನ್ ಆ ಪ್ರಾಣಿಯನ್ನು ನೋವಿನಿಂದ ಮುಕ್ತಗೊಳಿಸಿ ತನ್ನ ಜೇಬುಗಡಿಯಾರವನ್ನು ಹೊರತೆಗೆದು ಸಮಯವನ್ನು ನೋಡಿ೮ದ. ನೋಡಲು ಕಿರಿಕಿರಿ ಅನಿ೯ಸಿದರೂ ಅವನೂ ಮುಂದಿದ್ದ ದೃಶ್ಯವನ್ನು ನೋಡಿದ.. ಆರು ನಿಮಿಷ. ಕೇವಲ ಆರು ನಿಮಿಷಗಳು. ಜಿಂಕೆಯ ಅಸ್ಥಿಪಂಜರ ಅವನ ಎದುರಿಗೆ … Read more

ಪತ್ರಿಕೋದ್ಯಮಕ್ಕೆ ಕಾಲಿಡುತ್ತಿದೆ “ಡಬಲ್ ಸ್ಟಾಂಡರ್ಡ್” ಎಂಬ ಭೂತ!: ಚವೀಶ್‌ ಜೈನ್‌

ಪತ್ರಿಕೋದ್ಯಮ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರ ಸ್ಥಂಬ. ದೇಶದ ಪ್ರತಿಯೊಂದು ವಿಚಾರಗಳಲ್ಲಿ ಮಹತ್ತರ ಪಾತ್ರವಹಿಸುವ ಸಮಾಜದ ಅವಿಭಾಜ್ಯ ಅಂಗ. ಧಮನಿತರ ಮತ್ತು ದನಿ ಇಲ್ಲದವರ ಧ್ವನಿಯಾಗುವುದೇ ಪತ್ರಿಕೋದ್ಯಮದ ಉದ್ದೇಶ. ನಿಷ್ಪಕ್ಷಪಾತವಾಗಿ, ಜಾತಿ-ಮತಗಳನ್ನು ಲೆಕ್ಕಿಸದೆ, ಅಧಿಕಾರ-ಸ್ಥಾನವನ್ನು ಚಿಂತಿಸದೆ, ತಪ್ಪು-ಒಪ್ಪುಗಳ ಕುರಿತು ಅವಲೋಕಿಸಿ, ಧೈರ್ಯದಿಂದ ತಪ್ಪನ್ನು, ಆಡಳಿತ ಲೋಪವನ್ನು ಪ್ರಶ್ನಿಸುವುದೇ ಪತ್ರಿಕೋದ್ಯಮದ ಜವಾಬ್ದಾರಿ ಮತ್ತು ಕರ್ತವ್ಯ. ರಾಷ್ಟ್ರವಾದ, ರಾಷ್ಟ್ರದ ಹಿತಾಸಕ್ತಿ, ಭದ್ರತೆ, ಅಖಂಡತೆ, ಸಮಗ್ರತೆ ಪತ್ರಿಕೋದ್ಯಮದ ಸಿದ್ಧಾಂತದಲ್ಲಿ ಅಡಗಿರಬೇಕಾದ ಮೂಲ ಚಿಂತನೆಗಳು. ಇವೆಲ್ಲವನ್ನೂ ಒಳಗೊಂಡ ಪತ್ರಿಕೋದ್ಯಮ ಸುಸ್ಥಿರ ಸಮಾಜದ … Read more

ಮರೆಯಲಾಗದ ಮದುವೆ (ಭಾಗ 8): ನಾರಾಯಣ ಎಮ್ ಎಸ್

ಹನುಮಾನ್ ಜಂಕ್ಷನ್ನಿನ ಪೋಲೀಸ್ ಚೌಕಿಯಲ್ಲಿ ಅಯ್ಯರ್ ಕಾಣೆಯಾಗಿದ್ದ ದೂರನ್ನು ಅಧಿಕೃತವಾಗಿ ದಾಖಲಿಸಲು ತಂಗಮಣಿಯವರಿಗೆ ಸಾಕಷ್ಟು ಸಮಯ ಹಿಡಿಯಿತು. ಪೋಲೀಸರು ಅಯ್ಯರ್ ಹಿನ್ನಲೆ ಕುರಿತು ಹತ್ತುಹಲವು ಪ್ರಶ್ನೆಗಳನ್ನು ಕೇಳಿದರು. ವೇಲಾಯಧನ್ ಮತ್ತು ತಂಗಮಣಿ ತಮಗೆ ತಿಳಿದಿದ್ದ ಎಲ್ಲ ಮಾಹಿತಿಗಳನ್ನು ಒದಗಿಸಿದರು. ಮದ್ರಾಸು ಸ್ಟೇಷನ್ನಿನಿಂದ ರೈಲು ಹೊರಟಾಗ ಅಯ್ಯರ್ ರೈಲಿನಲ್ಲಿದ್ದುದು ರೈಲ್ವೇ ಪೋಲೀಸರಿಗೆ ಖಾತ್ರಿಯಾಗಿತ್ತು. ಹಾಗಾಗಿ ಹನುಮಾನ್ ಜಂಕ್ಷನ್ನಿನಿಂದ ಹಿಡಿದು ಮದ್ರಾಸಿನವರೆಗೆ ಆ ಮಾರ್ಗದಲ್ಲಿದ್ದ ಎಲ್ಲಾ ನಿಗದಿತ ನಿಲ್ದಾಣಗಳಿಗೂ ಅಯ್ಯರ್ ಕಾಣೆಯಾಗಿದ್ದ ದೂರಿನ ಮಾಹಿತಿ ಕಳುಹಿಸುವ ವ್ಯವಸ್ಥೆ ಮಾಡಿದರು. ಅಯ್ಯರ್ … Read more

ಗೆಳೆಯನಲ್ಲ (ಕೊನೆಯ ಭಾಗ): ವರದೇಂದ್ರ ಕೆ.

ಇಲ್ಲಿಯವರೆಗೆ (11) “ತಪ್ಪು ಮಾಡುವುದು ಸಹಜ, ಅದನ್ನು ಅರಿತು ಪಶ್ಚಾತ್ತಾಪದಿಂದ ಬದಲಾಗಿ ಉತ್ತಮ ವ್ಯಕ್ತಿ ಆಗುವವನೇ ನಿಜವಾದ ಮನುಜ. ನಾವು ಖಂಡಿತ ನಿಮ್ಮನ್ನು ಕ್ಷಮಿಸುತ್ತೇವೆ, ನಿಮ್ಮ ಮೇಲಿನ ಕೋಪವೆಲ್ಲ ಪ್ರೀತಿಗೆ ಇಂದು ಇಳಿದಿದೆ. ಅವಳ ಮನದಲ್ಲಿನ ನೋವು ಇಂದು ಹೊರ ಬಂದು ಅವಳ ಮನಸು ನಿರಾಳವಾಗಿದೆ. ಪ್ರೀತಿ ಇಷ್ಟು ನೊಂದಕೊಂಡ ಮನುಷ್ಯನಿಗೆ ಮತ್ತೆ ನೋವು ಕೊಡುವುದು ತರವಲ್ಲ. ನಿಮ್ಮ ಸ್ನೇಹ ಯಾವತ್ತಿಗೂ ಚಿರಾಯುವಾಗಿರಬೇಕು. ನೀನೂ ನಿನ್ನ ಸ್ನೇಹಿತನ ತಪ್ಪನ್ನು ಮನ್ನಿಸಬೇಕು ಎಂದು ಪ್ರೀತಿಗೆ ಹೇಳುತ್ತಾನೆ ಸಂಪತ್. ಸಂತೋಷ್ … Read more

ನೆಲಕಿರುಬನೆಂಬ ಜೇಡ: ಚರಣಕುಮಾರ್

ನಾವು ಚಿಕ್ಕವರಿರುವಾಗ ನಮ್ಮ ತುಂಟಾಟಗಳನ್ನು ನಿಭಾಯಿಸುವುದು ಮನೆಮಂದಿಗೆಲ್ಲಾ ಬಲು ಕಷ್ಟವಾಗಿರುತ್ತಿತ್ತು. ನಮ್ಮನ್ನು ನಿಯಂತ್ರಿಸಲು ಭೂತದ ಕಥೆ, ಹುಲಿ, ಚಿರತೆ ಮತ್ತು ಮಂಗಗಳ ಚಿತ್ರಗಳನ್ನು ತೋರಿಸಿಯೋ ಅಥವಾ ಅವುಗಳ ಹೆಸರುಗಳನ್ನು ಹೇಳಿಯೋ ಹೆದರಿಸುತ್ತಿದ್ದರು. ನನ್ನೂರಿನಲ್ಲಿ ಅಜ್ಜಿಯು, ನೀನೊಬ್ಬನೆ ಮನೆಯಿಂದ ಆಚೆ ಹೋದರೆ ನೆಲಗುಮ್ಮ ಬಂದು ನಿನ್ನನ್ನು ನುಂಗಿಬಿಡುತ್ತದೆ ಎಂದು ಒಮ್ಮೆಯಾದರೆ, ನೋಡು ಆಚೆ ಹೋದರೆ ಆ ಗೋಡೆಯ ಪಕ್ಕದಲ್ಲಿ ನೆಲಪಟ್ಟು ಅಡಗಿ ಕುಳಿತಿದೆ ನಿನ್ನನ್ನು ಕಚ್ಚಿ ತಿಂದುಬಿಡುತ್ತದೆ ಎಂದು ಮತ್ತೊಮ್ಮೆಯಾದರೆ, ನಾವು ಊಟಮಾಡದೆ ಹಠಮಾಡುತ್ತಿರುವಾಗ ಒಂದು ಕೊಳವೆಯಾಕಾರದಲ್ಲಿ ಪಿ.ವಿ.ಸಿ … Read more

ಇದೇ ‘ರಮ್ಯ’ ಚೈತ್ರ ಕಾಲ: ಬೀರೇಶ್ ಎನ್. ಗುಂಡೂರ್

ಇಲ್ಲಿ ಎಲ್ಲದಕ್ಕೂ ಉತ್ತರವಿಲ್ಲ. ಪ್ರಶ್ನೆಗಳೇ ಎಲ್ಲ. ನಿನ್ನ ಒಪ್ಪಿಸುವ ಭರದಲ್ಲಿ ನಾನೆಲ್ಲೋ ಸೋತು ನಿಸ್ಸಾಯಕನಾಗಿ ನಿಂತುಬಿಟ್ಟೆ ಅನಿಸುತ್ತದೆ. ಅದೇನೋ, ಬೇರೆಯವರಲ್ಲಿ ನಿನ್ನನ್ನು ಹುಡುಕಿಕೊಳ್ಳುವುದು..ನೀರಿಲ್ಲದೆ ಮೀನು ತನ್ನ ಅಸ್ತಿತ್ವ ಹುಡುಕಿಕೊಂಡಂತೆ ಅನಿಸುತ್ತದೆ. ಈ ಜಗತ್ತಿನ ಸೊಬಗಿಗೆ, ನಾಳೆಗಳ ಆಕಾಂಕ್ಷೆಗಳಿಗೆ, ಎಲ್ಲವನ್ನು ಮೀರಿ ಬದುಕಿಬಿಡುತ್ತೇನೆ, ಗೆದ್ದುಬಿಡುತ್ತೇನೆ ಎನ್ನುವ ಈ ಮಂದಿಯ ಅದಮ್ಯ ಚೇತನಕ್ಕೆ ಅದೊಂದೇ, ‘ಪ್ರೀತಿ’ಯೇ ಕಾರಣ ಅಂತ ಅಷ್ಟು ಬಾರಿ ಓದಿಕೊಂಡಿದ್ದೇನೆ. ಅದೊಂದು ತಪಸ್ಸು. ಆರಾಧನೆ. ಎಲ್ಲವನ್ನೂ ಸಾದ್ಯವಾಗಿಸುವ, ಎಲ್ಲವನ್ನೂ ಮರೆಸುವ, ಮೆರೆಸುವ, ಇನ್ನೆಲ್ಲವನ್ನೂ ತೆಕ್ಕೆಗೆ ಬಾಚಿಕೊಳ್ಳುವ, ಎಲ್ಲವನ್ನೂ … Read more

ದೇವಮಾನವ: ಡಾ. ದೋ. ನಾ. ಲೋಕೇಶ್

ಮಾಸಿದ ಬಟ್ಟೆ, ತಲೆಗೆ ಸುತ್ತಿದ ಕೊಳಕು ಟವೆಲ್, ಎಣ್ಣೆ, ನೀರು ಕಾಣದೆ ಧೂಳು ತುಂಬಿದ, ಕನಿಷ್ಟ ದಿನಕೊಮ್ಮೆ ಬಾಚಣಿಗೆಯೂ ಕಾಣದೆ ಗುಂಗುರು ಗುಂಗುರಾದ ಕೇಶರಾಶಿಯನ್ನು ಹೊಂದಿದ್ದ, ತನ್ನ ಶಿಳ್ಳೆಯೊಂದರಿಂದಲೇ ಹಯವೇಗದಲ್ಲಿ ಓಡುತ್ತಿದ್ದ ಬಸ್ಸನ್ನು ನಿಲ್ಲಿಸುತ್ತಿದ್ದ, ಹಾಗೂ ನಿಂತಿದ್ದ ಬಸ್ಸನ್ನು ಅದೇ ಶಿಳ್ಳೆಯಿಂದ ಚಲಿಸುವಂತೆ ಮಾಡುತಿದ್ದ ಎಲ್ಲರ ನಡುವೆ ಇದ್ದೂ ಇಲ್ಲದಂತಿದ್ದ ಅವನೊಬ್ಬನಿದ್ದ. ಅವನ ಹೆಸರೇ ಕ್ಲೀನರ್. ಹಿಂದೆ ನಮ್ಮ ಬಾಲ್ಯದಲ್ಲಿ ಹಳ್ಳಿಗಾಡಿನ ಸಾರಿಗೆ ಸಂಪರ್ಕ ಸಾಧನಗಳೆಂದರೆ ಖಾಸಗಿ ಬಸ್ಸುಗಳೇ. ಈಗಿನಂತೆ ಸಾರಿಗೆ ಸಂಸ್ಥೆಯ ಬಸ್ಸುಗಳಾಗಲಿ, ಜನಗಳನ್ನು ಸರಕು … Read more

ಆಕ್ರಮಣ (ಭಾಗ 2): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ತಾನೊಬ್ಬ ಮಹಾನ್ ಬುದ್ಧಿವಂತ ಎಂದು ತಿಳಿದುಕೊಂಡಿರುವ ಮನುಷ್ಯನಿಗೆ ಒಂದು ಯಕಃಶ್ಚಿತ್ ಇರುವೆ ಯೋಚಿಸಲು ಶಕ್ತವಾಗಿರುವುದಷ್ಟೇ ಅಲ್ಲದೆ ಯೋಜನೆಯನ್ನೂ ರೂಪಿಸಲೂ ಶಕ್ತವಾಗಿರುತ್ತದೆ ಎಂದರೆ ನಂಬುವುದು ಕಷ್ಟವೇ. ಲೆನಿಂಜೆನ್ನನ ಐರೋಪ್ಯ ಬುದ್ಧಿವಂತಿಕೆ ಮತ್ತು ಬ್ರೆಜಿಲಿನ್ನಿಯರರ ದೇಶಿ ಬುದ್ಧಿವಂತಿಕೆ ಈ ಇರುವೆಗಳ ಬುದ್ದಿವಂತಿಕೆಗೆ ಸರಿಸಾಟಿಯಾಗಬಲ್ಲುದೇ? ನಿಜ. ಲೆನಿಂಜೆನ್, ಇರುವೆಗಳು ಒಳಗೆ ಬರದಂತೆ ನೀರಿನ ಕಾಲುವೆಯನ್ನೇನೋ ನಿರ್ಮಿಸಿದ್ದ. ಲೆನಿಂಜೆನ್ನನ ಯೋಜನೆ ಏನೇ ಇರಲಿ.. ಅದನ್ನು ಹಾಳುಗೆಡುವುದೇ ಇರುವೆಗಳ ಪ್ರತಿಯೋಜನೆಯಾಗಿತ್ತು. ಸಂಜೆ ನಾಲ್ಕರಷ್ಟೊತ್ತಿಗೆ ಇರುವೆಗಳ ಆಕ್ರಮಣದ ಅಂತಿಮ ರೂಪುರೇಷೆಗಳು ತಯಾರಾದಂತೆ ಕಾಣಿಸಿತು. ಕಾಲುವೆಯೊಂದೇ … Read more

ಮರೆಯಲಾಗದ ಮದುವೆ (ಭಾಗ 7): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೭- ’ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಕುಯ್ಯ್…’ ಎಂದಾದ ಸದ್ದಿಗೆ ಅಯ್ಯರಿಗೆ ಎಚ್ಚರವಾಯ್ತು. ಕೂತಲ್ಲೇ ಕಣ್ತೆರೆದರು. ಎದುರಿಗೆ ಒಂದು ಬಡಕಲು ಕುನ್ನಿ ಕಂಡಿತು. ಅದೀಗ ಸ್ವಲ್ಪದೂರದಲ್ಲಿ ಬಿದ್ದಿದ್ದ ನಶ್ಯದಕವರಿನತ್ತ ದಿಟ್ಟಿಸಿ ತನ್ನ ಕೋರೆಹಲ್ಲು ತೋರುತ್ತಾ ಗುರ್ರ್ ಎಂದು ಗುರುಗುಟ್ಟತೊಡಗಿತು. ಪಾಪ ಪ್ರಾಣಿ ಏನೋ ತಿನ್ನಲು ಸಿಕ್ಕಿತೆಂದು ನಶ್ಯದಕವರಿಗೆ ಬಾಯಿಹಾಕಿರಬೇಕು. ನಶ್ಯದ ಫಾಟಿಗೆ ಸೀನುಬಂದು ನಾಯಿ ಗಾಬರಿಗೊಂಡಿತ್ತು. ಅಯ್ಯರಿಗೆ ತಾನೆಲ್ಲಿದ್ದೇನೆ ತಿಳಿಯಲಿಲ್ಲ. ಅಪರಾತ್ರಿಯ ನೀರವತೆಯಲ್ಲಿ ದೂರದಲ್ಲೆಲ್ಲೋ ಜೀರುಂಡೆಗಳು ಗುಯ್ಗುಟ್ಟುತ್ತಿದ್ದುವು. ನಿಧಾನಕ್ಕೆ ಸಿಕ್ಕಿಕೊಂಡಿದ್ದ ಪರಿಸ್ಥಿತಿ ಅರಿವಾಗಹತ್ತಿತು. ಕೈಯಲ್ಲಿ ಬಿಡುಗಾಸಿಲ್ಲ. ಮೈಮೇಲೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 39 & 40): ಎಂ. ಜವರಾಜ್

-೩೯- ಕುಲ ಸೇರಿತ್ತು ಈ ಅಯ್ನೋರು ಕೆಂಡವಾಗಿದ್ರು ಶಂಕ್ರಪ್ಪೋರು ಕೈಕಟ್ಟಿದ್ರು. ‘ಅಯ್ನೋರಾ, ನೀವಿಲ್ಗ ಬರಂಗೇ ಇರ್ನಿಲ್ಲ ನಾವು ಕುಲ ಸೇರ್ಬೇಕೇ ಇರ್ನಿಲ್ಲ ಆದ್ರ ಕುಲ ಕುಲನೆ ಈ ಕುಲ್ಕ ಬ್ಯಲ ಕೊಟ್ಟು ಬಂದಿದರಿ… ಇಸ್ಟು ಜಿನ್ವು ನೀವೆ ನ್ಯಯ ಮಾಡ್ತಿದ್ರಿ ಆದ್ರ ದೂರು ನಿಮ್ಮನ ಕಡಿಂದ ಅದ ಕುಲ್ದ ನಿಯ್ಮ ಎಲ್ರುಗು ಒಂದೆ ಅನ್ತ ಗೊತ್ತಿರದೆ ಅಲ್ವ. ನಾವು ನಿಮ್ಬುಟ್ಟು ಕುಲ ಮಾಡ್ಬೇಕಾಗಿ ಬಂದುದಾ. ಈ ಕಾರ್ಣ ನಿಮ್ಮ ಕರೆಸ್ಬೇಕಾಯ್ತು, ಕರಸ್ದು.. ನೀವು ಬಂದಿದರಿ ಅದ್ಕ ಈ … Read more

ಗೆಳೆಯನಲ್ಲ (ಭಾಗ 5): ವರದೇಂದ್ರ ಕೆ.

ಇಲ್ಲಿಯವರೆಗೆ… (9) ಪ್ರೀತಿಯ ತಂದೆ ಬಂದು “ಅಳಿಯಂದ್ರೆ, ಗೋಪಾಲಯ್ಯ ಎಂದರೆ ಯಾರು? ಒಂದೇ ಸಮನೆ ನಿಮ್ಮ ತಾಯಿಯವರು, ಗೋಪಾಲಯ್ಯ ಕೊಲೆ ಕೊಲೆ ಎನ್ನುತ್ತಿದ್ದಾರೆ. ಬೇಗ ಬನ್ನಿ” ಎನ್ನುತ್ತಾರೆ. ಗೋಪಾಲಯ್ಯ ಹೋ ನನ್ನ ತಂದೆಯವರನ್ನು ಕೊಲ್ಲಿಸಿದವನು ಎಂದು ಆಗಾಗ ಅಮ್ಮ ಹೇಳುತ್ತಿದ್ದರು. ಈಗ್ಯಾಕೆ ಅವನ ಹೆಸರು ಹೇಳುತ್ತಿದ್ದಾರೆ. ಎಂದು ಆಶ್ಚರ್ಯದಿಂದ ಒಳ ಓಡುತ್ತಾನೆ. ಕಮಲಮ್ಮಗೆಎಚ್ಚರವಾಗಿರುತ್ತೆ. ಅಮ್ಮಾ, ಏನಾಯಿತಮ್ಮ? ಎಂದಾಗ ಬೆಳಿಗ್ಗೆ ಗೋಪಾಲಯ್ಯನ ಹಾಗೆಯೇ ಇದ್ದವ ಯಾರೋ ನಮ್ಮ ಮನೆ ಮುಂದೆ ಬಂದಿದ್ದ, ನಿಮ್ಮಪ್ಪನನ್ನು ಕೊಲ್ಲಿಸಿದ್ದು ಸಾಕಾಗಲಿಲ್ಲವೇನೋ, ಮತ್ಯಾರನ್ನು ಕೊಲ್ಲಲು … Read more

ಜೀವನದ ಆಸೆ ಆಕಾಂಕ್ಷೆಗಳು ಹಾಗೂ…..?: ಶೀಲಾ ಎಸ್.‌ ಕೆ.

ಒಂದು ಲೋಟ ಕಾಫಿ ಕೊಡ್ತಿಯಾ ಪದ್ಮ ಎಂದು ಹಜಾರಕ್ಕೆ ಬಂದು ಕುಳಿತರು ನಂಜುಂಡಪ್ಪ. ಕೈಯಲ್ಲಿ ಕಾಫಿ ಲೋಟ ಹಿಡಿದು ಬಂದ ಪದ್ಮ ತುಂಬ ಸುಸ್ತಾದವರಂತೆ ಕಾಣುತಿದ್ದಿರಿ ಎಂದು ಕೇಳಿದರು, ಆಗ ತಾನೇ ಕೆಲಸ ಮುಗಿಸಿ ಬಂದಿದ್ದ ತನ್ನ ಗಂಡನನ್ನ. ಸ್ವಲ್ಪ ಕೆಲಸ ಜಾಸ್ತಿ ಈಗ ಮೊದಲಿನಂತೆ ಅಲ್ಲ ಎಲ್ಲ ಹೊಸ ಹೊಸ ಪ್ರಯೋಗಗಳು, ಹೊಸ ಬಗೆಯ ಕೋಚಿಂಗ್ ಅಂತಾರೆ, ಈಗ ಅದನ್ನು ಕಲಿಯಲು ಅಥವಾ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಾಗು ಶ್ರಮವಾಗುತ್ತಿದೆ ಅಷ್ಟೆ ಎಂದರು. ಸರಿ ಬೇಗ … Read more