ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ: ಭಾಗ್ಯ ಭಟ್

ಎಲ್ಲಿ ನೋಡಿದರಲ್ಲಿ ಹಸಿರ ಸೊಬಗು… ದಾರಿಯುದ್ದಕೂ ಮನವ ಮುದ್ದಿಸೋ ತಂಪು ಗಾಳಿಯ ಇಂಪು… ತಿಳಿ ನೀಲ ಆಗಸದಿ ಮೆರವಣಿಗೆ ಹೊರಡೋ ಮೋಡಗಳು… ಚಂದದ ಊರಿದು, ಪಕ್ಕಾ ಮಲೆನಾಡ ತಂಪ ಉಣಬಡಿಸೋ ಕಾಫೀ ನಾಡು. ಅದೆಷ್ಟೋ ಚಂದದ ಬೆಟ್ಟ ಗುಡ್ಡಗಳಿಂದ ಕಣ್ಮನ ತಣಿಸುತಿರೋ ಚಿಕ್ಕಮಗಳೂರ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕಲ್ಲತಗಿರಿಗಳ ಸುತ್ತೋ, ನಿಸರ್ಗದ ಅಚ್ಚರಿಗಳ ಸಮೀಕರಿಸೋ ಸಣ್ಣದೊಂದು ಭಾಗ್ಯ ಸಿಕ್ಕಿದ್ದು ಇಲ್ಲಿಗೆ ಬಂದು ವರ್ಷವೊಂದಾದ ಮೇಲೆ.. ಇಲ್ಲಿ ದಕ್ಕಿದ್ದ, ಪಡೆದುಕೊಂಡ ಚಂದದ ಅನುಭವಗಳ ಪದಗಳಲಿ ಹಿಡಿಯೋದು ಕಷ್ಟವೇನೋ…. ಈ … Read more

ನಿಯತ್ತಿನ ಘರ್ಷಣೆ: ಪಾರ್ಥಸಾರಥಿ ಎನ್.

ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,ತಂಗಿ ಓದುತ್ತ ಕುಳಿತಿರಬಹುದು. ಆದಿನದ ಮಟ್ಟಿಗೆ ಕೆಲಸವೇನು ಬಾಕಿ ಇರಲಿಲ್ಲ. ಸರಿ ಹೊರಡೋಣವೆಂದು ಎದ್ದು ನಿಂತ. ಅವನ ಸ್ನೇಹಿತ ಶ್ರೀನಾಥ ಇವನತ್ತ ನೋಡಿದ, ಏನು ಹೊರಟೆ ಅನ್ನುವಂತೆ. ಇಬ್ಬರೂ ಸೇರಿ ದೂರದ ಆ ನಾಡಿನಲ್ಲಿ ಮನೆ ಮಾಡಿದ್ದರು.  "ನಾನು ಹೊರಟಿರುತ್ತೇನೆ"  ಗುರು ನುಡಿದ,  ಶ್ರೀನಾಥನತ್ತ ನೋಡುತ್ತ.  ಶ್ರೀನಾಥ … Read more

ಹಂಗುಗಳಾಚೆಯ ’ಪಾಪಿ’ ಪದ್ಯಗಳು: ಜ್ಞಾನೇಂದ್ರ ಕುಮಾರ್

ಯಾವ ವಿಮರ್ಶಕನ ಪುತ್ಥಳಿಯನ್ನೂ  ಯಾವ ಊರ ಸರ್ಕಲಿನಲ್ಲೂ ಇಡುವುದಿಲ್ಲ – ಅನ್ನುತ್ತಲೇ ವಿಮರ್ಶೆಯ ಹಂಗಿನಾಚೆ ಬರೆಯುತ್ತಿರುವವರು ತಾವು ಎಂದು ಘೋಷಿಸಿಕೊಳ್ಳುವ ಕವಿ ಚಕ್ರವರ್ತಿ ಚಂದ್ರಚೂಡ್, ಪದ್ಯ ಹೆಣಿಗೆಯ ಖಚಿತ ಚೌಕಟ್ಟುಗಳಾಚೆಯೇ ನಿಂತು ಬರೆಯುತ್ತಿರುವವರು. ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿಯವರ "ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)" ಕವನ ಸಂಕಲನ ಇದಕ್ಕೊಂದು ನಿದರ್ಶನ.  * ಇಲ್ಲಿನ ಪದ್ಯಗಳನ್ನು ಓದುವಾಗ ಸಾವಿನ ಮನೆಯ ಚಟುವಟಿಕೆಯಂತೆ ವಿಲಕ್ಷಣ ಅನುಭವ ಉಂಟಾಗುತ್ತದೆ. ಅದೊಂದು ಬಗೆಯ ಸತ್ಯದ ಮುಖಾಮುಖಿ, ನಿರಾಕರಿಸುತ್ತಲೇ ಒಪ್ಪಿಕೊಳ್ಳುವ ಬಗೆ ಹಾಗೂ ನಮಗೂ … Read more

ಹಾಡಿನಲ್ಲಿ ಭಾವಗಳ ಸಂಗಮವಿದೆ: ಪದ್ಮಾ ಭಟ್.

ಹುದುಗಲಾರದ ದುಃಖ ಹುದುಗಿರಿಸಿ ನಗೆಯಲ್ಲಿ ನಸು ನಗುತ ಬಂದೆ ಇದಿರೋ.. ಇನಿತು ತಿಳಿಯದ ಮೂಢನೆಂದು ಬಗೆದೆಯೋ ನನ್ನ. ಹೀಗೆ ಕಿವಿ ಮೇಲೆ ಬೀಳುತ್ತಿರುವ ಹಾಡನ್ನು ಕೇಳುತ್ತಾ ..ನಮಗೆ ನಾಳೆ ಪರೀಕ್ಷೆ ಎನ್ನೋದನ್ನೇ ಮರೆತು ಬಿಟ್ಟಿದ್ದೆ..ಪುಸ್ತಕವನ್ನು ಮಡಚಿ ಬದಿಗಿಟ್ಟು ಕೇಳುತ್ತ ಕೂರುವುದೊಂದೇ ಕೆಲಸ..ಈ ಹಾಡುಗಳು ಎಂತಹ ವಿಚಿತ್ರ ಅಲ್ವಾ? ಮನಸಿನ ಒಂದಷ್ಟು ದುಃಖವನ್ನು ನೋವನ್ನು ಮರೆಯಿಸುವ ಶಕ್ತಿಯಿದೆ. ಭಾವಗೀತೆಗಳನ್ನು ಕೇಳುವಾಗ ನನ್ನ ಬಗ್ಗೆಯೇ ಬರೆದಿದ್ದಾರೆಯೋ ಎನ್ನಸುವಷ್ಟು ಹತ್ತಿರದಿಂದ ಅನುಭವಿಸಿದ್ದುಂಟು.. ಅದೇ ಆ ಒಂಟಿ ರೂಂನಲ್ಲಿ ಹಾಡಿನ ನೆನಪುಗಳ ಕಲರವಗಳಿವೆ.. … Read more

ಕಾಳಮಂಜಿ ಗುಡ್ಡ, ಉರಿಸೆಖೆ ಮತ್ತು ಆಹಾರಭದ್ರತೆ: ಅಖಿಲೇಶ್ ಚಿಪ್ಪಳಿ

ಅರೆಮಲೆನಾಡಿನ ಸ್ನೇಹಿತರೊಬ್ಬರು ಮಲೆನಾಡಿಗೆ ಬಂದಿದ್ದರು. ಸಾಗರದಂತಹ ಮಲೆನಾಡಿನಲ್ಲಿ ಈ ಪರಿ ಸೆಖೆಯಿದೆ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ. ಇದಕ್ಕೇನು ಕಾರಣ ಎಂದು ಕೇಳಿದರು. ಇದನ್ನು ಸ್ವಲ್ಪ ಸುತ್ತಿ-ಬಳಸಿ ಹೇಳುವುದು ಒಳ್ಳೆಯದು ಎಂದು ತೋರುತ್ತದೆಯೆಂಬ ಕಾರಣಕ್ಕೆ ಉದಾಹರಣೆಯನ್ನು ನೀಡುವುದು ಅನಿವಾರ್ಯವಾಯಿತು.  ೧೯೭೪-೭೫ರಷ್ಟು ಹಿಂದಿನ ಘಟನೆಯಿದು. ಲಿಂಗನಮಕ್ಕಿಯಿಂದ ಎ.ಬಿ.ಸೆಟ್‌ವರೆಗೆ ಹಾಗೆಯೇ ಎ.ಬಿ.ಸೆಟ್‌ನಿಂದ ಲಿಂಗನಮಕ್ಕಿಯವರೆಗೆ ನೀರು ಸಾಗಣೆಗಾಗಿ ಒಂದು ಚಾನೆಲ್ ನಿರ್ಮಿಸುವ ಯೋಜನೆ ತಯಾರಾಯಿತು.  ಈ ಯೋಜನೆಗೆ ಸೆಂಟ್ರಲ್ ಆಡಿಟ್ ಚಾನೆಲ್ ಎಂದು ಹೆಸರಿಡಲಾಯಿತು. ಈಗಿನ ಹಾಗೆ ತಂತ್ರಜ್ಞಾನ ಮುಂದುವರೆದು ಆಧುನಿಕ ರಾಕ್ಷಸ … Read more

ಈರಬದ್ದೇವ್ರು ಮತ್ತು ಇದ್ದೂ ಇರಬಾರದಂಥ ಭಕ್ತಿ: ಅಮರ್ ದೀಪ್ ಪಿ.ಎಸ್.

"ಭಾವದಲೊಬ್ಬ ದೇವನ ಮಾಡಿ….  ಮನದಲ್ಲೊಂದು ಭಕ್ತಿಯ ಮಾಡಿ  ಕಾಯದ ಕೈಯಲಿ ಕಾರ್ಯವೂ ಉಂಟೆ? ವಾಯಕೆ ಬಳಲುವರು ನೋಡ …..  ಎತ್ತನೇರಿ ಎತ್ತನರಸುವರು  ಎತ್ತ ಹೋದರಯ್ಯ ..ಗ಼ುಹೇಶ್ವರ….. "  ಅಲ್ಲಮ ಪ್ರಭು ಅವರ ವಚನ ಸಾಹಿತ್ಯವನ್ನು ನನ್ನ ಮೆಚ್ಚಿನ  ಹುಡುಗನೊಬ್ಬ  ಹಾಡುವುದನ್ನು ಆಗಾಗ  ಕೇಳುತ್ತಲೇ ಇದ್ದೆ.. ಅದು ಈ ಬರಹಕ್ಕೆ ಎಷ್ಟರ ಮಟ್ಟಿಗೆ ಹೊಂದುತ್ತದೋ ಇಲ್ಲವೋ ಗೊತ್ತಿಲ್ಲ.. ಆದರೆ ಈ  ಬರಹ ಬರೆಯುವ ಹೊತ್ತಿಗೆ ಈ ಹಾಡು ನನ್ನನ್ನ್ನು ಬಹುವಾಗಿ ಕಾಡಿದ್ದಂತೂ ಸತ್ಯ.   ಹೊಸಪೇಟೆ ದಾಟಿ ಮರಿಯಮ್ಮನಹಳ್ಳಿ … Read more

ಹಾದಿ ದೂರವಿದೆ ಇನ್ನೂ, ಭವ್ಯ ಭಾರತಕ್ಕೆ: ಪ್ರಶಸ್ತಿ ಪಿ.

ಮುಂದುವರೆಯೋ ಮುನ್ನವೇ ಹೇಳಿಬಿಡುತ್ತೇನೆ. ಇದು ಬರಹಕ್ಕೆ ಕೇಸರಿ, ಹಸಿರು ಅಥವಾ ಇನ್ಯಾವುದೇ ಬಣ್ಣ ಬಳಿಯೋ ಪ್ರಯತ್ನವಲ್ಲ. ಕಮಲ, ಹಸ್ತ, ಆನೆ, ಕತ್ತಿ, ಪೊರಕೆ ಅಥವಾ ಇನ್ಯಾವುದೇ ಚಿನ್ನೆ ತೊಡಿಸೋ ಪ್ರಯತ್ನವಲ್ಲ.  ಧರ್ಮ, ರಾಜ್ಯ, ಪಕ್ಷಗಳೆಂಬ ಬೇಧಗಳ ಹೊರಬಂದು ವಾಸ್ತವದ ಅನಿವಾರ್ಯತೆಗಳೇನಿದೆಯೆಂಬುದನ್ನು ಬಿಂಬಿಸೋ ಅಗತ್ಯವಷ್ಟೇ .ಮೂವತ್ತು ವರ್ಷಗಳ ಕಿಚಡಿ ಸರ್ಕಾರಗಳ ನಂತರ ಕೊನೆಗೂ ಭಾರತಕ್ಕೊಂದು ಸುಭದ್ರ ಸರ್ಕಾರ ಸಿಕ್ಕಿದೆ. ಕಾಂಗ್ರೆಸ್ಸಾಗಲಿ, ಭಾಜಪಾವೇ ಆಗಲಿ. ಆದ್ರೆ  ಸದಾ ಸ್ಟ್ರೈಕೇ ಮಾಡೋ ಕಮ್ಯೂನಿಸ್ಟು, ಮಾರ್ಕಿಸ್ಟು, ಲೆಫ್ಟಿಸ್ಟುಗಳ ಕಾಲು ಹಿಡಿಯೋ ಕರ್ಮದ ಚಿತ್ರಾನ್ನ … Read more

ಸಾಮಾನ್ಯ ಜ್ಞಾನ (ವಾರ 28): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು? ೨.    ಕನ್ನಡ ವಡ್ಸ್‌ವರ್ತ್‌ರೆಂದು ಖ್ಯಾತರಾದವರು ಯಾರು? ೩.    ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪೆನಿ ಯಾವುದು? ೪.    ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು? ೫.    ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು? ೬.    ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ? ೭.    ಭಾರತ ಸರ್ಕಾರವು ರೂರಲ್ ಎಲ್‌ಕ್ಟ್ರಿಫಿಕೇಶನ್ ಕಾರ್ಪೋರೇಷನ್‌ನ್ನು (ಖಇಅ) ಸ್ಥಾಪಿಸಲಾದ ವರ್ಷ ಯಾವುದು? ೮.   … Read more

ಕೊಡಬಹುದ್ದಾದ್ದದ್ದು ದುಡ್ಡು ಒಂದನ್ನ?: ಹೇಮಲತಾ ಪುಟ್ಟನರಸಯ್ಯ

ಫೇಸ್ಬುಕ್ ನಲ್ಲಿ ಒಂದು ಫೋಟೋ ಚಿಂದಿ ಆಯುವ ಕೆಳಸ್ಥರದ  ಹೆಂಗಸು ತನಗೆ ದಕ್ಕಿದ ಒಂದು ಹೊತ್ತಿನ ಊಟವನ್ನು ಬೀದಿ ನಾಯಿಯೊಂದಿಗೆ ಹಂಚಿಕೊಂಡು ತಿನ್ನುತ್ತಿರುವುದು.  ಎಂತವರಿಗೂ ಕಾಡುವ ಚಿತ್ರ. ಈ ತರದ ಸನ್ನಿವೇಶವನ್ನು ಕಣ್ಣಾರೆ ಹಲವು ಬಾರಿ ನೋಡಿರ್ತಿವಿ.  ಜೊತೆಜೊತೆಗೆ ಮನೆಗೆ ಬಂದ ನೆಂಟರಿಗೆ ಬಾಯಿ ಮಾತ್ತಲ್ಲಾದರು  ಊಟ ಮಾಡಿ ಎನ್ನದ, ತಿಂಡಿ ಮನೆಯವರಿಗಷ್ಟೇ ಎಂದು ಎತ್ತಿಟ್ಟುಕೊಂಡ ಪೈಸೆ ಟು ಪೈಸೆ ಜನರನ್ನು ಅನುಭವ ಮಾಡಿಕೊಂಡಿರ್ತೀವಿ.  ಫೇಸ್ಬುಕ್ ನಲ್ಲಿ  ಫೋಟೋ ಶೇರ್ ಮಾಡಿದಾಕ್ಷಣ ನಾವು generous ಆಗಿಬಿಟ್ವಿ ಅಂತೇನು ಆಗಬೇಕಿಲ್ಲ … Read more

ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳೋತ್ಸವ ಕಾರ್ಯಕ್ರಮ: ವಿಶ್ವನಾಥ ಕೆ.ಎಂ.

ಸಾರ್ವಜನಿಕ ಶಿಕ್ಷಣ ಶಿಕ್ಷಣ ಯಾದಗಿರಿ, ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್‌ನ ಅಡಿಯಲ್ಲಿ ಯಾದಗಿರಿ  ತಾಲೂಕಿನ ಆಯ್ದ ಶಾಲೆಗಳಲ್ಲಿ ಇದೀಗ ಮಕ್ಕಳೋತ್ಸವ ಎನ್ನುವ  ವಿನೂತನ ಬೇಸಿಗೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ.  ಕಾರ್ಯಕ್ರಮದ ಹಿನ್ನಲೆ ಮಕ್ಕಳಿಗೆ ಶಾಲೆಯ ಬಗ್ಗೆ ಆಸಕ್ತಿ ಮೂಡಿಸುವುದು. ಶಾಲಾ ವಾತವರಣದಲ್ಲಿ ಮಕ್ಕಳಿಗೆ ಉತ್ತಮ ಶಾಲೆಯ ಕಲ್ಪನೆ ಕೊಡುವುದು. ಹೊರಗಿನ ಪ್ರಪಂಚಕ್ಕೆ ಮಕ್ಕಳ ಜ್ಞಾನವನ್ನು ಬೆಳೆಸುವುದು. ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವುದು. ವಿವಿಧ ರೀತಿಯ ಹಬ್ಬಗಳ ಬಗ್ಗೆ ಮಾಹಿತಿ ನೀಡುವುದು. ದಿನ ವಿಶೇಷಗಳ … Read more

ಪಥ್ಥರ್ ದಿಲವಾಲೆ ಫಡ್ಡು (ಗುಂಡಪಂಗಳಾ): ಸುಮನ್ ದೇಸಾಯಿ

ಹೋದವಾರ ಸಂಜಿಮುಂದ ನಮ್ಮ ತಮ್ಮ ತನ್ನ ಗೆಳೆಯಾ ರಮ್ಯಾ(ರಮೇಶ)ನ್ನ ಕರಕೊಂಡ ನಮ್ಮನಿಗೆ ಬಂದಿದ್ದಾ. ಅವತ್ತ ರವಿವಾರಾ ಮುಂಝಾನೆ ದ್ವಾಸಿ ಮಾಡಿದ್ದೆ. ಇನ್ನು ಹಿಟ್ಟು ಉಳದಿತ್ತು. ನನ್ನ ತಮ್ಮಾ ಅಕ್ಕಾ ಹಸಿವ್ಯಾಗಲಿಕತ್ತದ ಎನರೆ ಮಾಡಿಕೊಡು ಅಂದಾ ಅದಕ್ಕ ನಾ " ತಡಿ ಮುಂಝಾನಿದು ಹಿಟ್ಟ ಅದ ಬಿಸಿ ಬಿಸಿ ಫಡ್ಡ ಮಾಡಿಕೊಡತೇನಿ ಅಂದೆ" ಅದಕ್ಕ ಅವನ ಗೇಳೆಯಾ ಘಾಬರ್ಯಾಗಿ "ಅಕ್ಕಾರ ನಿಮಗ ಕೈ ಮುಗಿತೇನಿರಿ ನೀವ ಎನ್ಕೊಟ್ರು ತಿಂತೇನಿ ಆದ್ರ ಫಡ್ಡ ಮಾತ್ರ ಕೋಡಬ್ಯಾಡ್ರಿ ಅಂದು ಮಾರಿ ಹುಳ್ಳಗ … Read more

ನಿಮ್ಮ ಸಾಹಿತ್ಯಕ್ಕೆ ಆಡಿಯೋ ರೂಪ ಕೊಡಿ…

ಮೊನ್ನೆ ಓದಲು ಸಿಕ್ಕ ಗೆಳೆಯರೊಬ್ಬರ ಪುಸ್ತಕದಲ್ಲಿ ಇಂಗ್ಲೀಷ್ ಕವಿತೆಯೊಂದರ ಸಾಲಿತ್ತು. ಆ ಕವಿತೆಯ ಸಾಲು ತುಂಬಾ ಇಷ್ಟವಾದ ಕಾರಣ ಪೂರ್ಣ ಕವಿತೆಗಾಗಿ ಗೂಗಲ್ ಸರ್ಚ್ ಮಾಡಿದೆ. ಆ ಕವಿತೆ poetry foundation ಎಂಬ ವೆಬ್ ತಾಣದಲ್ಲಿ ಓದಲು ಸಿಕ್ಕಿತು. ಓದಲು ಸಿಕ್ಕಿದ ಕವಿತೆಯ ಜೊತೆಗೆ ಆಡಿಯೋ ಫೈಲ್ ಸಹ ಇತ್ತು. ಆ ಫೈಲ್ ಕ್ಲಿಕ್ ಮಾಡಿ ಕೇಳಿದೆ. ಇದೇ ತರಹದ ಪ್ರಯೋಗವನ್ನು ಪಂಜುವಿನಲ್ಲಿ ಯಾಕೆ ಮಾಡಬಾರದು ಎಂದುಕೊಂಡಿದ್ದೇ ನನ್ನ ಹತ್ತಿರವಿದ್ದ ಹಾಡೊಂದರ ಫೈಲ್ ಅನ್ನು ಪಂಜುವಿಗೆ ಅಪ್ … Read more

ಉಳಿತಾಯ: ಅನಿತಾ ನರೇಶ್ ಮಂಚಿ

ಅತ್ತ ಕಡೆಯಿಂದ ಚಿಕ್ಕಿಯ ಫೋನ್. ಹೇಗಿದ್ದರೂ ಅರ್ಧ ಗಂಟೆಗಿಂತ ಕಮ್ಮಿ ಮಾತನಾಡಿ ನಮಗಿಬ್ಬರಿಗೂ ಗೊತ್ತೇ ಇಲ್ಲ. ’ಲೈನಲ್ಲಿರು ಬಂದೇ’ ಎಂದು ಕೂಗಿ ಅಡುಗೆ ಮನೆಗೆ ನುಗ್ಗಿ ಸ್ಟವ್ ಆಫ್ ಮಾಡಿ, ಪಕ್ಕದ ಕೋಣೆಯ ಫ್ಯಾನ್ ನಿಲ್ಲಿಸಿ ಮತ್ತೆ ಲ್ಯಾಂಡ ಫೋನಿನ ರಿಸೀವರ್ ಕೈಯಲ್ಲಿ ಹಿಡಿದು ಲ್ಯಾಂಡಾದೆ. ನಮ್ಮ ಪಕ್ಕದ ಮನೆಯ ದನಗಳಿಗೆ ತಿನ್ನಲು ಹಾಸನದಿಂದ ತರಿಸಿದ ಒಣ ಹುಲ್ಲಿನ ಬಣ್ಣದಿಂದ ಹಿಡಿದು ಮೊನ್ನೆ ನಮ್ಮನೆ ನಾಯಿಯ ಬಾಯಿಗೆ ಸಿಕ್ಕಿ ಸತ್ತ ಹೆಗ್ಗಣದ ಬಾಲದವರೆಗಿನ ಕಥೆ ನನ್ನ ಕಡೆಯಿಂದ … Read more

ಪಂಜು ಕಾವ್ಯಧಾರೆ

ದೇವನೊಲಿದ ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ- 'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ' ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ ಪ್ರಾರ್ಥಿಸಿದೆ ದೇವರಿಗೆ-  'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ' ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ … Read more

ಸನ್ಯಾಸಿಯ ಮಗು: ಗಣೇಶ್ ಖರೆ

"ಅವ್ವಾ.. ಅವ್ವಾರ ತಿನ್ನಾಕ ಒಸಿ ನೀಡ್ರೀ.. ಹೂಟ್ಟಿ ಹಸಿದೈತಿ ಎನಾರ ಕೊಡ್ರಿ ಮನಿಗೆ ಒಳ್ಳೆದಾಕೈತಿ…" ಬೆಳಿಗ್ಗೆ ಮುಂಚಾ ಅಂಗಳದಾಗ ಅನಾಮಧೇಯ ಧ್ವನಿ ಕೇಳಾಕತ್ತಿತ್ತು. "ಬೆಳಿಗ್ಗೆ ಆಗೋ ಪುರುಸೊತ್ತಿಲ್ಲ ಮನಿ ಬಾಗಿಲನಾಗ ಬಂದು ಬೇಡಾಕ್ ಸುರು ಆತು" ಅಂತ ಬಯ್ಕೋತ ಸೀತವ್ವ ಸಿಟ್ನಾಗ ಹೊರಗಡೆ ಮುಖಾನೂ ಹಾಕ್ದೆ ಹಿತ್ತಲಮನಿ ಕಡಿಗೆ ಹೋದ್ಲು..  "ಉಳದಿದ್ದು ಬಳದಿದ್ದು ಎನಾರ ನಡಿತೈತಿ, ಒಸಿ ನೀಡ್ರಿ ಹೊಟ್ಟಿ ಹಸದೈತಿ ಕೊಡೋರಿಗೆಲ್ಲಾ ಸಿಕ್ಕಪಟ್ಟೆ ಕೊಟ್ಟೀರಿ, ದೇವ ಧರ್ಮಾ ಎಲ್ಲಾ ಮಾಡೀರಿ ನನಗೂ ತುಸಾ ನೀಡ್ರಿ, ಕೂಸಿಲ್ಲದ … Read more

ಬೆಳಕಿನ ಕಡೆಗೆ: ಸುಮನ್ ದೇಸಾಯಿ

ಭಾಳ ವರ್ಷದ್ದ ಮ್ಯಾಲೆ ನಮ್ಮ ಅಮ್ಮನ ತವರೂರಾದ ಹಳ್ಳಿಗೆ ಹೊಗಬೇಕಾದ ಪ್ರಸಂಗ ಬಂತು. ಸಣ್ಣಂದಿರತ ಅಲ್ಲೆ ಆಡಿ ಬೆಳೆದು ದೊಡ್ಡವರಾದ ಸಿಹಿ ನೆನಪುಗಳ ಗಂಟನ ಇತ್ತು. ಊರು ಹೇಂಗೆಂಗ ಹತ್ರ ಬರಲಿಕತ್ತು ಹಂಗಂಗ ಹಳೆನೆನಪುಗಳು ತಾಜಾ ಆಗಲಿಕ್ಕತ್ತುವು. ಊರು ಅಂದಕೂಡಲೆ ಪ್ರೀತಿಯ ಗೆಳತಿ ಸುಧಾ ನೆನಪಾಗಲಿಕತ್ತಳು.  ಗಂಡ, ಮನಿ ಮಕ್ಕಳು ಸಂಸಾರ ಅಂತ ನಂದೆ ಆದಂಥಾ ಲೋಕದೊಳಗ ಮುಳುಗಿ ಹೋಗಿದ್ದೆ. ಹಿಂಗಾಗಿ ಊರಿನ ಯಾವ ಸುದ್ದಿಗೊಳು ಗೊತ್ತಾಗ್ತನ ಇರಲಿಲ್ಲ. ಆವಾಗೊಮ್ಮೆ ಇವಾಗೊಮ್ಮೆ ಊರಿನ ಸುದ್ದಿ ಕಿವಿಗೆ ಬಿಳತಿದ್ವು. … Read more

ನೂರರ ಕಸಾಪ ತೊಡಬೇಕಾಗಿರುವ ರೂಪ: ಪ್ರದೀಪ್ ಮಾಲ್ಗುಡಿ

ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಯ ಉದ್ದೇಶದಿಂದ ೦೫/೦೫/೧೯೧೫ರಂದು  ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದಿಗೆ ಕಸಾಪಗೆ ೯೯ ವರ್ಷಗಳು ತುಂಬಲಿವೆ. ಅಂದಿನ ಉದ್ದೇಶಗಳೆಲ್ಲ ಇಂದಿಗಾದರೂ ಈಡೇರಿದೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಈ ಸಮಯದಲ್ಲಿ ೨೩ ಅಧ್ಯಕ್ಷರ ಅವಧಿ ಮುಗಿದು, ೨೪ನೆಯವರು ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆಯನ್ನು ಹೊರತು ಪಡಿಸಿದರೆ … Read more

ನಾರಾಣಾಚಾರಿ ಕಾಂಪೌಂಡಿನ ಅತೃಪ್ತ ಆತ್ಮ ಮತ್ತು ನಾನು: ಅಮರ್ ದೀಪ್ ಪಿ.ಎಸ್.

ನಿಮ್ ಹೆಸರೇನ್ ಸರ?  ಯಾವ್ ಊರು? ಈ ಊರಿಗೆ  ಬಂದ್ ಎಷ್ಟ್ ವರ್ಸಾತು? … ಮದ್ವೆ ಆಗೇದೋ? ಎಷ್ಟು ಮಕ್ಳು ?  ಹೀಗೆ ಒಬ್ಬ ಮುದುಕ ಎನ್ಕ್ವೈರಿ ಮಾಡುತ್ತಿದ್ದ.  ಯಜ್ಮಾನ, ನಾನ್ ಪರೀಕ್ಷೆಗೆ ಕುಂತಿಲ್ಲೋ ಯಪ್ಪಾ, ಒಂದೊಂದ್ ಪ್ರಶ್ನೆ ಕೇಳು ಅಂದೆ.   "ಆತು ಹೇಳಪಾ" ಅಂದ.   ಆ ವಯಸ್ಸಾದ ಮುದುಕ ಬರೀ ಒಂದು ಪಂಜೆ, ಮೇಲೊಂದು  ಬನೀನು ಹೆಗಲ ಮೇಲೊಂದು ಟವೆಲ್ ಹಾಕಿ ಕೊಂಡು ಬಸವಣ್ಣ ಸರ್ಕಲ್ ಬಳಿಯ ಸೈಕಲ್ ಶಾಪ್ ಕಟ್ಟೆಗೆ ಕೂತು ವಿಚಾರಿಸುತ್ತಿದ್ದ.  ನೋಡುತ್ತಿದ್ದಂತೆಯೇ … Read more

ಬಾಳೇಕಾಯಿ ರಂಗಪ್ಪನ ಕತೆಗಳು: ಪ್ರಶಸ್ತಿ ಪಿ.

ಬಾಳೇ ಹಣ್, ಬಾಳೇ ಹಣ್.. ನೇಂದ್ರ ಬಾಳೆ, ಮೈಸೂರ್ ಬಾಳೆ, ಪುಟ್ ಬಾಳೆ, ಏಲಕ್ಕಿ ಬಾಳೆ, ವಾಟ್ ಬಾಳೆ.ಬಾಳೆ ಹಣ್.. ಬಾಳೇ ಹಣ್.. ಬೀದಿ ಬೀದಿ ಕೂಗಿ ಕೂಗಿ ರಂಗಪ್ಪನ ಬಾಳೇ ಹಣ್ಣಾಗಿಹೋಗಿತ್ತು. ಈ ಬಾಳೇ ಹಣ್ಣಿನ ಕೂಗು ಸಂಜೆ ಹೊತ್ತಿಗೆ ಬರ್ತಾ ಇದ್ರೆ ಬೀದಿ ಹುಡುಗ್ರೆಲ್ಲಾ ಆ ಗಾಡಿಗೆ ಮುತ್ತಾ ಇದ್ರು. ರಂಗಪ್ಪನ ಮನೆಯೂ ಈ ಬೀದಿಯ ಹತ್ರವೇ ಇದ್ದಿದ್ರಿಂದಲೋ, ಆ ಬೀದಿಯ ಚಿಳ್ಳೆ ಪಿಳ್ಳೆ ಹುಡುಗ್ರ ಜೊತೆ ಮಾತಾಡೋದ್ರಲ್ಲಿ ಸಿಗೋ ಅದಮ್ಯ ಸುಖಕ್ಕೋಸ್ಕರವೋ ಗೊತ್ತಿಲ್ಲ … Read more

ವಿಚಿತ್ರಗಳು-ವಿಕೃತಿಗಳು: ಅಖಿಲೇಶ್ ಚಿಪ್ಪಳಿ

ಈ ಮನುಷ್ಯರಲ್ಲಿ ಜಾತಿಯನ್ನು ಯಾರು ಹುಟ್ಟು ಹಾಕಿದರೋ? ಎಲ್ಲರೂ ಉಸಿರಾಡುವುದು ಗಾಳಿಯನ್ನೇ! ತಿನ್ನುವುದು ಅನ್ನ, ಕುಡಿಯುವುದು ನೀರು. ಆದರೂ ಜಾತಿ-ತಾರತಮ್ಯ, ಮೇಲು-ಕೀಳು ಎಲ್ಲಾ ಹೊಲಸುತನದ ಪರಮಾವಧಿ. ಸರ್ಕಾರಗಳೂ ತಮ್ಮ ಲಾಭಕ್ಕೋಸ್ಕರ ಜಾತಿಯನ್ನು ಪೋಷಿಸುವ ವ್ಯವಸ್ಥಿತ ಕಾರ್ಯವನ್ನು ಮಾಡುತ್ತವೆ. ಶಾಲೆಗೆ ಸೇರಿಸುವಾಗಲೇ ಜಾತಿಯನ್ನು ನಮೂದಿಸಬೇಕು ಕಡ್ಡಾಯವಾಗಿ. ಇರಲಿ, ಮನುಷ್ಯ ಸಮಾಜದ ವಿಕೃತಿಗಳು ಕಾಲಕ್ರಮೇಣದಲ್ಲಿ ಸುಧಾರಿಸಬಹುದು ಎಂಬ ಆಶಾವಾದವನ್ನು ಇಟ್ಟುಕೊಳ್ಳೋಣ. ಪ್ರಾಣಿ-ಪಕ್ಷಿ ಪ್ರಪಂಚದಲ್ಲೂ ಕೋಟಿಗಟ್ಟಲೆ ಪ್ರಭೇದಗಳಿವೆ. ಹಲವು ಪ್ರಭೇದಗಳು ಪರಿಸರಕ್ಕೆ, ಸಮಾಜಕ್ಕೆ ಉಪಕಾರವನ್ನು ಮಾಡಿದರೆ, ಕೆಲವು ಪ್ರಭೇದಗಳು ಹಾನಿಯನ್ನುಂಟು ಮಾಡುತ್ತವೆ. … Read more

ಕ್ಲಬ್: ಎಚ್.ಕೆ.ಶರತ್

ಅದೊಂದು ಸಾದಸೀದಾ ಬಿಲ್ಡಿಂಗು. ಹಗಲಲ್ಲಿ ಹಾಗೆ ಸುಮ್ಮನಿರುತ್ತೆ. ಬೆಳಕು ತೆರೆಮರೆಗೆ ಸರಿದು ಕತ್ತಲ ಕಾರುಬಾರು ಶುರುವಾದರೆ, ಅದು ವಿಶಿಷ್ಟ ಬಣ್ಣ ಬಳಿದುಕೊಂಡು ಬಿಡುತ್ತೆ. ಆ ಬಣ್ಣ ಹಗಲಿಗೆ ಅಪರಿಚಿತ. ಆ ಬಿಲ್ಡಿಂಗಿನ ಕಾಂಪೌಂಡಿನೊಳಕ್ಕೆ ಕತ್ತಲು ಕವಿದಂತೆಲ್ಲಾ ವಾಹನಗಳು ಬಂದು ನಿಲ್ಲುತ್ತವೆ. ವಯಸ್ಸಾದರೂ ಮನೆಯಲ್ಲಿ ಮುದುರಿಕೊಂಡು ಕೂರಲು ಬಯಸದ ಅಥವಾ ಹಾಗೆ ತೆಪ್ಪಗಿರುವುದು ತಮ್ಮ ಜಾಯಮಾನಕ್ಕೆ ಒಗ್ಗುವುದಿಲ್ಲ ಎಂದು ತೀರ್ಮಾನಿಸಿದ ವಯೋವೃದ್ಧರು ವಾಹನಗಳ ಮೇಲೇರಿ ಅಲ್ಲಿಗೆ ಬರುತ್ತಾರೆ. ತುಂಬಾ ಗೌರವಾನ್ವಿತರಂತೆ ಕಾಣುವ ದಿರಿಸು ತೊಟ್ಟುಕೊಂಡು ಬಂದಿರುವ ಅವರು, ಹೊರಜಗತ್ತಿಗೆ … Read more

ಸಾಮಾನ್ಯ ಜ್ಞಾನ (ವಾರ 27): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು? ೨.    ನವದೆಹಲಿಯಲ್ಲಿ ನಡೆದ ಐವತ್ತೆನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು? ೩.    ೧೯೭೧ರಲ್ಲಿ ರಾಜಸ್ಥಾನ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು? ೪.    ಖ್ಯಾತ ಸಂಗೀತ ವಿದ್ವಾನ್ ಡಾ|| ಬಾಲ ಮುರಳಿ ಕೃಷ್ಣ ಅವರು ಮೊದಲ ಬಾರಿಗೆ ಕರ್ನಾಟಕದಲ್ಲಿ ಸಂಗೀತ ಕಛೇರಿ ನೀಡಿದ್ದು ಎಲ್ಲಿ? ೫.    ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು? ೬.    ಭಾರತದಲ್ಲಿಯೇ ಮೊದಲ ಬಾರಿಗೆ … Read more

ಫೋಟೋಗ್ರಾಫಿ: ಸೀಮಾ ಶಾಸ್ತ್ರಿ

                      ಸೀಮಾ ಶಾಸ್ತ್ರಿಯವರು ಉತ್ತರ ಕನ್ನಡ ಜಿಲ್ಲೆಯ ಸಿರಸಿಯವರು. ಸದ್ಯಕ್ಕೆ ಆಂಧ್ರಪ್ರದೇಶದ ಮದನಪಲ್ಲಿಯ ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯುರಿಟಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೋಟೋಗ್ರಾಫಿ ಇವರ ನೆಚ್ಚಿನ ಹವ್ಯಾಸ…   

ಖಾಜಾ ಪಾಷಾನ ನಸೀಬು ಮತ್ತು ಗುಡ್ಡದ ಮೇಲಿನ ಗೆಸ್ಟ್ ಹೌಸ್: ಅಮರ್ ದೀಪ್ ಪಿ.ಎಸ್.

ಅಂಗೈ ನೋಡಿಕೊಂಡೆ.  ವಾಹ್ ಮೇರೆ ನಸೀಬ್?  ಇದೇ ಡಿಶ್ ಕೇಬಲ್ ನನ್ನ ಜೀವನದ ಹೈಸಿಯತ್  ಬದಲಾಯಿಸಿಬಿಡುತ್ತಾ ? ಈಗ ನನ್ನ ಕೈಯಲ್ಲಿ ಹರಿದಾಡುತ್ತಿರುವ ದುಡ್ಡು ನೋಡಿದರೆ ಹಾಗೆ ಅನ್ನಿಸುತ್ತೆ. ಮುಂದೆ ಗೊತ್ತಿಲ್ಲ.  ಆದರೆ ಇದೇ ಸ್ಪೀಡಲ್ಲಿ ನಾನೇನಾದರೂ ದುಡ್ಡು ಮಾಡಿದರೆ ಒಂದಿನ ನಾನು ನನ್ನ ಸ್ವಂತಕ್ಕೆ ಮಕಾನ್ ಮಾಡ್ಕೊಬೋದು, ಮತ್ತು  ಜೀರ್ಣವಾಗಿಸಿ ಹೂ….. ಮತ್ತೇನಿದೆ ನಿನ್ನ ತಾಕತ್ತಿಗೆ ನನ್ನ ಚೀಲ ತುಂಬಿಸಲು ಎನ್ನುವಂತೆ ಸವುಂಡೆ ಮಾಡದೇ ಸಂಕಟ ನೀಡುವ ಪೇಟ್ ಕಾ ಸವಾಲ್ ಹಮೇಶಾ  ಇದ್ದೇ ಇರುತ್ತೆ.  … Read more

ಹೀಗೊಂದು ಗೆಳೆಯರ ಬಳಗ!: ಗುರುಪ್ರಸಾದ ಕುರ್ತಕೋಟಿ

ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!  "ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… … Read more

ಆ ಅವಳು..: ಸುಧಾ ಚಿದಾನಂದಗೌಡ

“ಇಲ್ರೀ, ಇದೊಂದ್ ವಿಷ್ಯದಾಗ ತಲಿ ಹಾಕಬ್ಯಾಡ್ರೀ..” “ಸರಿಯವ್ವಾ, ನಿನ್ನ ಬಂಧುಬಳಗ, ಕುಲಸ್ಥರು, ದೈವಸ್ಥರು ಹೇಳಿದ್ದಕ್ಕೇ ನೀ ಒಪ್ಪಿಲ್ಲ. ಇನ್ನು ನನ್ನ ಮಾತಿಗೆ ಒಪ್ಪಿಕ್ಯಂತೀ ಅಂತ ನಾ ಏನೂ ಅನ್ಕಂಡಿಲ್ಲ. ಆದ್ರ ದುರ್ಗಾಶಕ್ತಿ ಅಂತ ಒಬ್ಬಾಕಿ ಅದಾಳ ನೋಡು, ಆಕೀದು ಅಭಿಪ್ರಾಯ ಕೇಳಬೇಕಲ್ಲಾ..” “ಅಂದ್ರ, ದುರುಗಮ್ಮನ ಗುಡೀಮುಂದ, ಪೂಜಾರಪ್ಪನೆದುರಿಗೆ ಹಾರ ಹಿಡ್ಕೊಂಡು ನಿಂದ್ರು ಅಂತ ಹೇಳಾಕ್ಹತ್ತೀರಿ ಹೌದಿಲ್ಲೋ..? ಆತು ಬಿಡ್ರೀ..ನಂಗೇನ್ ಅಭ್ಯಂತರ ಇಲ್ಲ. ನೋಡು ಪೂಜಾರಣ್ಣ, ಇದಾ ಮಂಗಳವಾರ ಹೂವಿನಹಾರ ತಗೊಂಡು ಗುಡಿ ಮುಂದ ಶರಣಾಗ್ತೀನಿ. ಅದೇನ್ ಮಾತು … Read more

ಗುಡುಗುಮ್ಮ ಬಂದಾ: ಅಖಿಲೇಶ್ ಚಿಪ್ಪಳಿ

ಗುಡುಗುಮ್ಮ ಬಂದ ಹೆಡಿಗೆ ತಂದಾ ಅಕ್ಕಿ ಬ್ಯಾಡಂತೆ ಭತ್ತ ಬ್ಯಾಡಂತೆ ನೀನೇ ಬೇಕಂತೆ!!! ಇಂತದೊಂದು ದಾಟಿಯನ್ನು ಹೇಳಿ ಅಳುವ ಮಕ್ಕಳನ್ನು ಸಂತೈಸುವ ಪ್ರಯತ್ನವನ್ನು ಮಲೆನಾಡಿನ ಹಳ್ಳಿಗಾಡುಗಳಲ್ಲಿ ಕಾಣಬಹುದಿತ್ತು. ನಮಗೂ ಈ ಹಾಡನ್ನು ಹೇಳಿ ಹೆದರಿಸಿ ಸಂತೈಸುತ್ತಿದ್ದದು ನೆನಪು. ಬೇಸಿಗೆ ಬೇಗೆಯಲ್ಲಿ ಬೇಯುತ್ತಾ ಸೂರ್ಯನಿಗೆ ಶಾಪ ಹಾಕುತ್ತಾ, ತಣ್ಣನೆಯ ಪಾನೀಯಗಳನ್ನು ಹೀರುತ್ತಾ, ಮೈಯೆಲ್ಲಾ ಬೆವರು, ನೀರಿದ್ದವರು ಎರೆಡೆರೆಡು ಸ್ನಾನ ಮಾಡುತ್ತಾ, ಮತ್ತೆ ಬೆವರುವ ಪರಿ, ಮಳೆಯಾದರೂ ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸುವ ಕೋಟ್ಯಾಂತರ ಮನಸ್ಸುಗಳ ಆರ್ತ ಕೇಳಿ ಮೇಲೇರಿದ … Read more