ಆರು ವರ್ಷದ ಬಾಲ ಪ್ರತಿಭೆ ಕುಮಾರಿ ಮೈತ್ರಿ : ನಿಯಾಜ್ ಪಡೀಲ್

ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಕುಮಾರಿ ಮೈತ್ರಿ ಎಸ್ ಮಾದಗುಂಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂತಹ ಪ್ರತಿಭೆ ಬೇಲೂರಿನ ಆರು ವರ್ಷದ ಬಾಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೋಲಿಕೆಗಳು ಮಕ್ಕಳನ್ನೇ ಆಗಲಿ ಮನಸ್ಸುಗಳನ್ನೇ ಆಗಲಿ ಸೋಲಿಸಿ ಬಿಡುತ್ತವೆ.: ನಿಮ್ಮೊಳಗೊಬ್ಬ ನಾರಾಯಣ

ನೋಡು ಅವರು ಹೇಗಿದ್ದಾರೆ ಈ ಮಾತು ಉದಾಹರಣೆಗೆ ಆದರೆ ಸ್ವಲ್ಪ ಮಟ್ಟಿಗೆ ಸರಿ ಆದರೆ ಪದೇಪದೇ ಇದೆ ಒಂದು ಆಯುಧವಾದರೆ. ನಾವು ನಮ್ಮಲ್ಲಿರುವ ಬಲವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಕಲ್ಲಿನಲ್ಲಿ ಒಂದು ವೈಶಿಷ್ಟ್ಯ ಇರುತ್ತದೆ. ಅದನ್ನು ಗುರುತಿಸುವ ಜಾಣ್ಮೆ ನಮಗಿರಬೇಕು. ಶಾಲೆಯಲ್ಲಿ ಓದಿ ಉತ್ತಮ ಅಂಕಗಳನ್ನು ಗಳಿಸುವುದು ಮಕ್ಕಳ ಕರ್ತವ್ಯ. ಹಾಗೆಯೇ ಕೆಲಸದಲ್ಲಿ ಉನ್ನತ ಮಟ್ಟ ತಲುಪಿ ಉತ್ತಮ ಸಂಪಾದನೆ ಮಾಡುವುದು ನಮ್ಮ ಕರ್ತವ್ಯ. ಆದರೆ ಆ ಕ್ಷೇತ್ರಗಳಲ್ಲಿ ಉತ್ತಮ ಮಟ್ಟ ತಲುಪಬೇಕೆಂಬ ನಿರೀಕ್ಷೆ ನಮ್ಮ ಒತ್ತಡಗಳಿಂದಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರೋನ ಕರೋನ- ಮನೆಯಲ್ಲಿ ಇರೋಣ!: ಸಹನಾ ಪ್ರಸಾದ್‌

ಮಾಸ್ಕ್ ಗಳನ್ನು ಕರೊನ, ಕರೊನ ಅಂತ ಮಾರುತ್ತಿದ್ದ ವೀಡಿಯೊ ಎಲ್ಲರೂ ನೋಡಿದ್ದಾರೆ. ಕರೊನ ವಿರುದ್ಧ ಹೋರಾಡಲು ಬೇಕಾದ ಅವುಗಳನ್ನೇ ಕರೊನ ಎಂದು ಕರೆದು ಒಂದು ತಮಾಷೆಯ ನೋಟವಾಗಿಸಿದ ಅವನ ಮನಸ್ಸಲ್ಲಿ ಏನಿತ್ತೋ? ” ಅಬ್ಬಾ, ಈ ಮಕ್ಕಳಿಗೆ ರಜೆ ಕೊಟ್ಟುಬಿಟ್ಟರಲ್ಲಾ, ಇನ್ನು ೩ ತಿಂಗಳು ಇವರನ್ನು ಹಿಡಿದಿಟ್ಟುಕೊಳ್ಳುವುದು ಹೇಗಪ್ಪಾ? ಮ್ಯೂಸಿಕ್ ಕ್ಲಾಸ್ ಇಲ್ಲ, ಸ್ವಿಮ್ಮಿಂಗ್ ತರಗತಿಗಳಿಲ್ಲ, ಸಮ್ಮರ್ ಕ್ಯಾಂಪುಗಳು ರದ್ದು. ನೆನೆಸಿಕೊಂಡರೆ ಭಯ ಆಗುತ್ತೆ” ಇದು ಬಹಳಷ್ಟು ತಾಯಂದಿರ ಅಳುಕು. ಹೌದು. ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಬಲು ಕಷ್ಟ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಿರಿಯರು ಹೇಳಿಕೊಟ್ಟ ನಾವು ಬಿಟ್ಟ ಆಚರಣೆಗಳು: ಶೀಲಾ. ಎಸ್. ಕೆ.

ಅಜ್ಜಿ ಹೇಳಿಕೊಟ್ಟ ಮಾತದು, ನಾವು ಕಲಿಯಲಿಲ್ಲ. ನಮ್ಮ ಹಿರಿಯರ ಮಾತಿನಲ್ಲಿ ಉದ್ದೇಶ, ಪ್ರಯೋಜನ ಹುಡಿಕಿದ ನಾವು, ಹಿಂದೆ ಮುಂದೆ ನೋಡದೆ ಉದ್ದೇಶ, ಪ್ರಯೋಜನ ಕೇಳದೆ, ತಿಳಿಯದೆ ಹೊರಗಡೆ ಅಂತರ್ರಾಷ್ಟ್ರೀಯ ಆಚರಣೆಗಳನ್ನು ಅಪ್ಪಿಕೊಂಡೆವು . ನಿಜ, ನಮ್ಮ ಹಿರಿಯರು ಅವರ ಆಚರಣೆಗೆ ಪ್ರಯೋಜನ, ಉದ್ದೇಶಗಳನ್ನು ಬರೆದಿಡಲು ಅಥವಾ ಮುಂದಿನ ಪೀಳಿಗೆಗೆ ಹೇಳಲು ಸೋತರು ಆದ್ರೆ ತಪ್ಪಾಗಿರಲಿಲ್ಲ. ಈಗ ಕೊರೋನ ಎಂಬ ವೈರಸ್‌ ಪ್ರಪಂಚ ನುಂಗಲಾರಂಭಿಸಿದೆ. ಪ್ರಪಂಚ ನಮ್ಮ ಹಿರಿಯರ ಆಚರಣೆ, ಅನುಸರಣೆಗಳನ್ನು ಅಪ್ಪುತ್ತಿವೆ. ಈಗ ಬೇರೆಯವರು ಹಿಂದಿನ ಆಚರಣೆಗಳತ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯುಗಾದಿಯೋ ಯುಗಾಂತ್ಯವೋ?: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಯುಗಾದಿ ಬರುತ್ತಿದ್ದಂತೆ ” ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ” ಎಂಬ ದ ರಾ ಬೇಂದ್ರೆಯವರ ಪ್ರಸಿದ್ದ, ಜನಪ್ರಿಯ ನಿತ್ಯನೂತನ ಗೀತೆ ಪ್ರತಿ ವರುಷ ನೆನಪಾಗುವುದು. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತಂದು ಹೊಸತೆಂಬಂತೆ ಯುಗಾದಿ ಗೋಚರಿಸಿದರೆ ಈ ಗೀತೆಯೂ ಹೊಸತೆಂಬಂತೆ ಹಾಡಿಸಿಕೊಳ್ಳುವುದು. ಹೊಸತೆಂಬ ಯುಗಾದಿ ಸುಂದರವೂ ಹಿತಕಾರಿಯೂ ಮನಮೋಹಕವು ಆಗಿರುವುದರಿಂದ ಇಷ್ಟವಾಗುವುದು! ಚೈತ್ರಮಾಸದಲ್ಲಿ ಇಡೀ ಪ್ರಕೃತಿಯೇ ಹರಿದ ಹಾಳಾದ ತೂತುಬಿದ್ದ ಅಂದಗೆಟ್ಟ ಎಲೆಗಳೆಂಬ ಹಳೆ ಕೊಳೆ ಮಲಿನ ಉಡುಪು ಇಲ್ಲವಾಗಿಸಿಕೊಂಡು ಹೊಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ… ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಹೈಕುಗಳು. ಅಮ್ಮನ ಪ್ರೇಮ ಎಲ್ಲೆಲ್ಲಿಯೂ ಸಿಗದ ಅಮೃತದಂತೆ. * ಏನು ಚೆಂದವೋ ಸೂರ್ಯನ ಕಿರಣವು ಪ್ರತಿ ಮುಂಜಾವು. * ಗುರು ಬಾಳಿಗೆ ದೇವತಾ ಮನುಷ್ಯನು ಜೀವನ ಶಿಲ್ಪಿ. * ಬಾಳ ಬೆಳಗೋ ಆ ಸೂರ್ಯ, ಚಂದ್ರರಿಗೆ ಕೋಟಿ ಪ್ರಣಾಮ. * ನಿರ್ಗತಿಕರ ಸೇವೆ ನೀ ಮಾಡುತಲಿ ದೇವರ ಕಾಣು. * ಸಿರಿಗನ್ನಡ ನಮ್ಮ ಕಣಕಣದಿ ಪುಟಿಯುತ್ತಿದೆ. * ದಾನ ಹಸ್ತಕ್ಕೆ ಜಾತಿ ಕಾರಣವೇಕೆ ಮಾನವ ಧರ್ಮ. * ತಾಯಿಯ ಪ್ರೇಮ ದೇವನಿಗೆ ಸಮಾನ ಮಿಕ್ಕದ್ದು ಮಿಥ್ಯ. * … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದುರಂತ: ಗೀತಾ ಜಿ. ಹೆಗಡೆ, ಕಲ್ಮನೆ.

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.  ಅಲ್ಲಿ ಸುರೇಶನದು ಒಪ್ಪವಾದ ಸಂಸಾರ.  ಅವನಿಶ್ಚೆಯನರಿತ ಸತಿ, ಮುದ್ದಾದ ಒಬ್ಬಳೇ ಮಗಳು, ವಯಸ್ಸಾದ ಪ್ರೀತಿಯ ಅಮ್ಮ.  ಇವರೊಂದಿಗೆ ಬದುಕಿನ ಗತಿ ಸುಗಮವಾಗಿ ಸಾಗುತ್ತಿರುವಾಗ ಕೂಡಿಟ್ಟ ಅಲ್ಪ ಸ್ವಲ್ಪ ಹಣ ಸೇರಿಸಿ ಸರ್ಕಾರದ ಯೋಜನೆಯಡಿಯಲ್ಲಿ ಸಿಕ್ಕ ಒಂದೂವರೆ ಲಕ್ಷ ರೂಪಾಯಿ ಹಾಗೂ ಹೆಂಡತಿಯ ಒತ್ತಾಯದ ಮೇರೆಗೆ ಅವಳ ತವರಿನ ಒಡವೆ ಕೂಡಾ ಮಾರಿ ಎರಡು ರೂಮಿರುವ ಪುಟ್ಟದಾದ ಹೆಂಚಿನ ಮನೆ ಕಟ್ಟಿದ.  ಅದೇನೊ ಸಂಭ್ರಮ, ಸಂತೋಷ ಮನೆಯವರೆಲ್ಲರ ಮುಖದಲ್ಲಿ.  ತಮ್ಮದೇ ಆದ ಸ್ವಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆತ್ಮ(ಮಿಯ)ಗೆಳೆಯ: ಜಯಂತ್ ದೇಸಾಯಿ

ಅದೊಂದು ದಿನ ಸುಬ್ಬರಾಯ ಆಟ ಆಡುತ್ತಾ ಆಡುತ್ತಾ ಮನೆಯಿಂದ ಎಷ್ಟೋ ದೂರ ಇರೋ ಮೊಬೈಲ್ ಟವರ್ ಹತ್ತಿರ ಹೋದ. ಅಲ್ಲಿ ಬಿದ್ದಿದ್ದ ಬಾಲ್ ತೆಗೆದುಕೊಂಡು ಯಾರ ಜೊತೆ ಮಾತಾಡುತ್ತಾ ಇದ್ದಂತೆ ಮಾಡಿ ತಿರುಗಿ ವಾಪಸ ಬಂದ. ಬಂದ ಮಗನನ್ನು ತಾಯಿ ರಾಧಾ ಯಾರ್ ಜೊತೆ ಮಾತಾಡುತ್ತಿದ್ದೆ ಅಲ್ಲಿ ಅಂದರೆ, ಅಮ್ಮ ಅವನು ಯಾರೋ ನನ್ನ ಸಹಾಯ ಬೇಕು ಅಂತಿದ್ದ ಅಮ್ಮ ಕಾಯುತ್ತಿದ್ದಾಳೆ ನಾಳೆ ನೋಡುವ ಅಂತ ಹೇಳಿ ಬಂದೆ ಅಂದ. ಆದ್ರೆ ತಾಯಿಗೆ ಏನೋ ಅನುಮಾನ ಬಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಮಣ್ಣ ಮಕ್ಕಳೊ: ರೇಣುಕಾ ಕೋಡಗುಂಟಿ

ಅಂದು ಹೋಳಿ ಹುಣ್ಣಿಮೆಯ ದಿನ ಬಳಿಗಾರ ಓಣಿಯ ಮಕ್ಕಳೆಲ್ಲ ಸೇರಿ ರಾಗಾ, ಶರಣಾ, ಮಲ್ಲಾ, ಮಂಜಾ ಇವರ ಮುಂದಾಳತ್ವದಲ್ಲಿ ಒಟ್ಟು 12 ಜನ ಮಕ್ಕಳು ಕಾಮಣ್ಣನ್ನ ಕೂರಿಸಾಕ ನಿರ್ಧಾರ ಮಾಡಿದ್ದರು. ಅಲ್ಲಿ ಇಲ್ಲಿ ಸ್ವಲ್ಪ ಪಟ್ಟಿ ಎತ್ತಿ ಒಂದು ಟೆಂಟ್ ಹೊಡೆದು ತಯಾರಿ ಮಾಡಿದ್ದರು. ಒಂದು ಹಳೆ ಅಂಗಿ ಪ್ಯಾಂಟು ತಂದು ಅದರಲ್ಲಿ ಹುಲ್ಲು ತುಂಬಿ, ಅಂಗಿನ್ನು ಪ್ಯಾಂಟನ್ನು ಸೂಜಿ ದಾರದಿಂದ ಹೊಲಿದು ಕಾಮಣ್ಣನ್ನ ರೆಡಿ ಮಾಡಿದ್ದರು. ಕಾಮಣ್ಣನ ಹೊಟ್ಟೆಯನ್ನು ದಪ್ಪವಾಗಿ ಕಾಣುವಂತೆ ಮಾಡಿದ್ದರು. ಕುಂಬಾರ ಮನಿಯಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬರವಣಿಗೆ: ಭಾರ್ಗವಿ ಜೋಶಿ

ಕಲ್ಪನೆ,  ವಾಸ್ತವ ಯಾವುದೇ ಇರಲಿ ಅದಕ್ಕೆ ಅಕ್ಷರ ರೂಪ ಕೊಡುವುದೇ ಬರಹ. ಮನದ ಗೂಡಲ್ಲಿ ಒಡಮೂಡಿ,  ರೆಕ್ಕೆ ಕಟ್ಟಿ ಹಾರ ಬಯಸುವ ಪ್ರತಿ ಭಾವನೆಗಳು ಒಂದು ಬರಹವೇ.  ಹಾಗಾದರೆ ಯಾರು ಏನಾದರು ಗೀಚಿದರು ಅದು ಬರಹ ಆಗುತ್ತದಾ ಅನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.  ನನ್ನ ಅನಿಸಿಕೆ  ಖಂಡಿತವಾಗಿಯೂ ಹೌದು.  ಯಾಕೆಂದರೆ ಬರಹಗಾರರ ಪ್ರೀತಿ,  ಶ್ರದ್ಧೆ ಅಲ್ಲಿ ಅಡಕವಾಗಿರುತ್ತದೆ.  ಎಲ್ಲರು ಒಮ್ಮೆಲೆ ಉತ್ತಮ ಬರಹಗಾರರು,  ಪ್ರಶಸ್ತಿ ವಿಜೇತರು ಆಗಲು ಸಾಧ್ಯವಿಲ್ಲ.  ಎಲ್ಲವು ಅ, ಆ, ಇ, ಈ ಇಂದಲೇ ಆರಂಭವಾಗಬೇಕು.  ಬರಹ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಾಹನದ ವೇಗ ಮತ್ತು ಮಿತಿ: ಗಾಯತ್ರಿ ನಾರಾಯಣ ಅಡಿಗ

‘ಅವಸರವೇ ಅಪಾಯಕ್ಕೆ ಕಾರಣ ‘ ಎಂಬ ಮಾತೊಂದಿದೆ. ಪ್ರತಿಯೊಂದು ವಿಷಯದಲ್ಲಿಯೂ ಈ ಮಾತು ನೂರಕ್ಕೆ ನೂರು ಸತ್ಯ. ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ವಾಹನವನ್ನು ಹೊಂದಿರುತ್ತಾರೆ. ಒಂದೆಡೆ ವಾಹನಗಳಿಂದ ನಮಗೆ ಎಷ್ಟು ಅನುಕೂಲಗಳಿವೆಯೋ  ಇನ್ನೊಂದೆಡೆ ಆಷ್ಟೇ ಅನನುಕೂಲಗಳಿವೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತೊಂದು ಇಲ್ಲಿ ನೆನಪಿಗೆ ಬರುತ್ತದೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ವಾಹನದ ವೇಗಕ್ಕೆ ಮಿತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತದೆ. ಇಂದಿನ ಯುವಕರಿಗಂತೂ ಇರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 9): ಎಂ. ಜವರಾಜ್

೯- ಅಯ್ಯಯ್ಯೋ ಬನ್ರಪ್ಪ ಅಯ್ಯಯ್ಯೋ ಬನ್ರವ್ವ ಅಯ್ಯಯ್ಯೋ ಬನ್ರಣ್ಣ ಅಯ್ಯಯ್ಯೋ ಬನ್ರಕ್ಕ ಅಯ್ಯಯ್ಯೋ ಯಾರ್ಯಾರ ಬನ್ನಿ ಈ ಅಯ್ನೋರು  ಆ ನೀಲವ್ವನ ನನ್ನ ಮೆಟ್ದ ಮೆಟ್ಲಿ ತುಳ್ದು ತುಳ್ದು ಜೀವ ತಗಿತಾವ್ನ ಬನ್ನಿ ಬನ್ಬಿ.. ಅಂತಂತ ನಾನ್ ಕೂಗದು ಕೇಳ್ನಿಲ್ವಲ್ಲೊ.. ಆಗ ಜನ ಜಗನ್ ಜಾತ್ರಾಗಿ ಆ ನೀಲವ್ವ  ಅಯ್ಯೋ ಉಸ್ಸೋ ಅನ್ಕಂಡನ್ಕಂಡು ಸುದಾರುಸ್ಕಂಡು ಮೇಲೆದ್ದು  ನಿಂತ ಜನ ನೋಡ್ತ ನೋಡ್ತ ಮೋರಿ ದಾಟಿ ಜಗುಲಿ ಅಂಚಿಗೆ ಕುಂತು ಗೋಳಾಡ್ತ ಗೋಳಾಡ್ತ  ಜಗುಲಿ ಕಂಬ ಒರಗಿದಳಲ್ಲೋ… ‘ಅಯ್ನೋರಾ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ಷಮೆ ಮತ್ತು ರಾಜಿ ಸೂತ್ರ ಪ್ರತಿಪಾದಿಸುವ The tempest: ನಾಗರೇಖ ಗಾಂವಕರ

ಆಫ್ರಿಕಾದ ಟ್ಯುನಿಸ್‍ನಲ್ಲಿ ವಿವಾಹಕಾರ್ಯದಲ್ಲಿ ಭಾಗವಹಿಸಿ ಮರಳುತ್ತಿದ್ದ Neapolitansಗಳಾದ [ನೇಪಲ್ಸ್‍ನ ನಿವಾಸಿಗಳು] ಇಟಲಿಯ ನೇಪಲ್ಸ್‍ನ ರಾಜ ಅಲೆನ್ಸೋ ಆತನ ಪುತ್ರ ಫರ್ಡಿನಾಂಡ್, ಸಹೋದರ ಸೆಬಾಸ್ಟಿಯನ್ ಹಾಗೂ ಮಿಲನ್‍ನ ಡ್ಯೂಕ್ ಅಂಟೋನಿಯೋ ಮತ್ತು ಇತರ ಸಂಗಡಿಗರಿದ್ದ ಹಡಗು ಸಮುದ್ರ ಮಧ್ಯೆ ಬಿರುಗಾಳಿಯ ಹೊಡೆತಕ್ಕೆ ನಲುಗಿ ಹೋಗಿದೆ. ಇದಕ್ಕೆ ಕಾರಣ ಪ್ರೊಸ್ಪೆರೋ. ಆತನ ಉದ್ದೇಶವೆಂದರೆ ಅವರೆಲ್ಲಾ ತಾನು ವಾಸವಾಗಿದ್ದ ಆ ನಡುಗಡ್ಡೆಗೆ ಬರುವಂತಾಗಬೇಕು. ಅದಕ್ಕಾಗಿ ಅತ ತನ್ನ ಮಾಂತ್ರಿಕ ವಿದ್ಯೆಯನ್ನು ಬಳಸಿ ಚಂಡಮಾರುತವನ್ನೆಬ್ಬಿಸಿದ್ದಾನೆ. ಇದಕ್ಕೆ ಕಾರಣವಿದೆ. ಆತನಿಗೆ ಅವರಿಂದ ಅನ್ಯಾಯವಾಗಿದೆ. ಮಿಲನ್‍ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಧ್ಯಾತ್ಮಿಕತೆಯ ಆಧುನಿಕ ನೆಲೆ……: ಪ್ರವೀಣ್.ಪಿ

ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ಇಂದಿನ ಸಮಾಜ ವಿಭಿನ್ನತೆಯೊಂದಿಗೆ ಹೊಸ ಬದುಕಿಗೆ ತೆರದುಕೊಳ್ಳಲು ಹವಣಿಸುತ್ತಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸತನದ ಅಲೆಯೊಂದು ಜನರನ್ನ ಬೇರೆ ದಿಕ್ಕಿಗೆ ಸೆಳೆಯುತ್ತಿದೆ. ಮಾರ್ಡನಿಟಿಗೆ ಮಾರುಹೋದ ಜನರು ತಮ್ಮ ಆಲೋಚನೆ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ್ದಾರೆ. ಪ್ರೀತಿಯು ಆಧುನಿಕತೆಯ ನೆಲೆಯಲ್ಲಿ ನಡೆಯುತ್ತಿದೆ. ಇದರಲ್ಲಿ ಆಧ್ಯಾತ್ಮಿಕ ಕ್ಷೇತ್ರವು ಹೊರತಾಗಿಲ್ಲ. ಆಧ್ಯಾತ್ಮವು ಇಂದು ಉದ್ಯಮಶೀಲತೆಯ ತಳಹದಿಯಲ್ಲಿ ಸಾಗುತ್ತಿದೆ. ಆಚಾರ, ಸಂಪ್ರದಾಯ, ಪೂಜೆ, ಪುನಸ್ಕಾರ, ಸಂಸ್ಕೃತಿ ಎಲ್ಲವೂ ಆಧುನೀಕರಣದೊಂದಿಗೆ ಬೆರೆತು ಹೋಗಿದೆ. ಇದರ ಪರಿಣಾಮ ಹುಡುಗರಲ್ಲಿ ಬೇರೊಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀವನ ಕೌಶಲ್ಯಗಳು: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ತಗ್ಗು ದಿಬ್ಬ ಗುಂಡಿ ಗೊಟರು ಸರೋವರ ಸಂದುಗೊಂದುಗಳಲಿ ಬದುಕಿನಬಂಡಿ ಅಪಾಯಕ್ಕೆ ಸಿಲುಕದಂತೆ ಉಪಾಯವಾಗಿ ಪಾರುಮಾಡಿ ಮುಟ್ಟಬೇಕಾದ ಗುರಿ ತಲುಪುವಂತೆ ಮಾಡುವ ಜೀವನ ಕೌಶಲ್ಯಗಳು ಎಲ್ಲರಿಗೂ ಅವಶ್ಯ ಅಮೂಲ್ಯ! ಬದುಕಿನಲ್ಲಿ ಶಾಲೆ, ಶಾಲೆಯಲ್ಲಿ ಪಠ್ಯಪುಸ್ತಕ, ಪಠ್ಯ ಪುಸ್ತಕದಲ್ಲಿ ಸ್ವಲ್ಪ ಬದುಕು ಇರುವುದು. ಪಠ್ಯಕ್ಕಿಂತ ಪಠ್ಯದಿಂದ ಹೊರಗಡೆಯೇ ಹೆಚ್ಚು ಬದುಕು ವ್ಯಾಪಿಸಿರುವುದು! ಶಾಲೆ, ಪಠ್ಯ ಪುಸ್ತಕ, ಅದರಲ್ಲಿನ ಜ್ಞಾನ ಏಕೆ ಬೇಕು! ಅವಿಲ್ಲದೆ ಬದುಕಲು ಆಗುವುದಿಲ್ಲವೆ? ಆಗುತ್ತದೆ! ಆದರೆ ಪಠ್ಯದಿಂದ ಹೊರಗಿರುವ ಬದುಕನ್ನು ವ್ಯವಸ್ಥಿತವಾಗಿ ಬದುಕುವಂತಾಗಲು, ಈಗ ಇರುವ ಬದುಕನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಬಾಲಲೀಲೆಗಳು ಮರಳಬೇಕೆನಿಸುತಿದೆ ಆ ಸಮೃದ್ಧಿಯ ದಿನಗಳಿಗೆ. ನುಗ್ಗಿಬರುತಿವೆ ನೆನೆಪುಗಳ ಬುಗ್ಗೆ, ಮನಸಿಗೆ ಬಂಧನವಿರದ, ಹೃದಯಕೆ ದಣಿವಾಗದಿರದ, ಆ ಮುಗ್ದ ಮುಕ್ತ ರಸವತ್ತಾದ ದಿನಗಳಿಗೆ. ಕಣ್ಣಿಗೆ ಕಟ್ಟಿದಂತಿವೆ ಆ ಆಟ ಪಾಟಗಳು… ಬೀದಿ ಬೀದಿ ಅಲೆದು ಹುಣೆಸೆ ಬೀಜ ಗುಡ್ಡೆಯಾಕಿ ಅಟಗುಣಿ ಆಡಿದ್ದು. ಹಳ ಕೊಳ್ಳಗಳ ಶೋಧಿಸಿ ಕಲ್ಲುತಂದು ಅಚ್ಚಿನಕಲ್ಲು ಆಡಿದ್ದು. ಬಳಪ ಸೀಮೆಸುಣ್ಣ ಸಿಗದೆ ಇದ್ದಲಿನಲಿ ಚೌಕಬಾರ ಬರೆದಿದ್ದು. ಕುಂಟೆಬಿಲ್ಲೆ ಆಡಿ ಕಾಲು ಉಣುಕಿಸಿಕೊಂಡಿದ್ದು. ಕಣ್ಣಾಮುಚ್ಚಾಲೆ ಹಾಡುವಾಗ ಕಣಜದಲಿ ಅಡಗಿ ನೆಲ್ಲಿನ ನವೆಗೆ ದಿನವೆಲ್ಲಾ ಮೈಕೆರೆದುಕೊಂಡಿದ್ದು. ಬರಿಗಾಲಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೋಳಿ ಮತ್ತು ಕೊರೋನ: ಡಾ. ನಟರಾಜು ಎಸ್. ಎಂ.

ವರ್ಷ ಎರಡು ಸಾವಿರದ ಹದಿಮೂರರ ಡಿಸೆಂಬರ್ ತಿಂಗಳು ಅನಿಸುತ್ತೆ. ಜಲ್ಪಾಯ್ಗುರಿಯಲ್ಲಿ ತುಂಬಾ ಚಳಿ ಇತ್ತು. ಒಂದು ಮುಂಜಾನೆ ಯಾವುದೋ ರೋಗ ಪತ್ತೆ ಹಚ್ಚಲು ನಮ್ಮ ಟೀಮ್ ಜೊತೆ ಕಾರಿನಲ್ಲಿ ಹೊರಟ್ಟಿದ್ದೆ. ನನ್ನ ಜೊತೆ ನನ್ನ ಡಾಟ ಮ್ಯಾನೇಜರ್, ಇಬ್ಬರು ಹೆಲ್ತ್ ವರ್ಕರ್ಸ್ ಮತ್ತು ಡ್ರೈವರ್ ಇದ್ದ. ಹೆಲ್ತ್ ವರ್ಕರ್ ಆಗಿದ್ದ ತೊರಿಕ್ ಸರ್ಕಾರ್ ಗೆ ಅವತ್ತು ತುಂಬಾ ಕೆಮ್ಮಿತ್ತು. ಕೆಮ್ಮಿದ್ದರೂ ಆತ ಮಾರ್ಗ ಮಧ್ಯೆ ಆಗಾಗ ಸಿಗರೇಟ್ ಸೇದುತ್ತಲೇ ಇದ್ದ. ಆತ ಮುಂದೆ ಡ್ರೈವರ್ ಪಕ್ಕ ಕುಳಿತ್ತಿದ್ದ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡ v/s ಇಂಗ್ಲಿಷ್ : ಸೂರಿ ಹಾರ್ದಳ್ಳಿ

ನಮ್ಮ ಕಂಪನಿಯಲ್ಲಿ ಕನ್ನಡೇತರರಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅಕ್ಷರಗಳ ಮಾಲೆ ಕೊಟ್ಟಾಗ ‘ಓಹ್ ಮೈ ಗಾಡ್,’ ಎಂಬೊಂದು ಉದ್ಗಾರ ಹಿಂದಿನಿಂದ ಬಂತು. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳು ಸರಿಯೆಂದ ನಮ್ಮವರು ಕನ್ನಡದಲ್ಲಿ ಇಷ್ಟೊಂದು ಅಕ್ಷರಗಳೇ, ಕಲಿಯಲು ಕಷ್ಟ ಎಂದು ಮೂಗು ಮುರಿಯುತ್ತಾರೆ. ಆದರೆ ಚೀನೀ ಭಾಷೆಯಲ್ಲಿ ಸುಮಾರು 43 ಸಾವಿರ ಅಕ್ಷರಗಳಿವೆ ಎಂದರೆ ನಂಬುವಿರಾ? ನಂಬಲೇಬೇಕು. ಆದರೆ ಒಬ್ಬ ವ್ಯಕ್ತಿಯು ಮಾತನಾಡಲು ಮೂರನೆಯ ಒಂದು ಭಾಗ ಮಾತ್ರ ಕಲಿತರೆ ಸಾಕಂತೆ. ಆದರ ಇನ್ನೊಂದು ದುರಂತ ಎಂದರೆ ಅದು ಧ್ವನಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಂಬಿಕೆ ದ್ರೋಹ ಮತ್ತು ದ್ವೇಷದ ಕಥಾನಕ- ಹ್ಯಾಮ್ಲೆಟ್: ನಾಗರೇಖ ಗಾಂವಕರ

ಆತ ಪ್ರಿನ್ಸ್ ಹ್ಯಾಮ್ಲೆಟ್ ಕಪ್ಪು ಬಟ್ಟೆ ಧರಿಸಿದ ಆತ ಮಾನಸಿಕವಾಗಿ ದ್ವಂದ್ವ ಸ್ಥಿತಿಯಲ್ಲಿದ್ದಾನೆ. ಅಷ್ಟೇ ಅಲ್ಲ ರೊಚ್ಚಿಗೆದ್ದಿದ್ದಾನೆ. ಕಾರಣ ತಂದೆ ಡೆನ್ಮಾರ್ಕನ ರಾಜ ಹ್ಯಾಮ್ಲೆಟ್ ಸಾವನ್ನಪ್ಪಿದ್ದಾರೆ. ತಾಯಿ ರಾಣಿ ನಾಚಿಕೆಯಿಲ್ಲದೇ ನಿಷ್ಠೆ ಇಲ್ಲದೇ ಮರುವಿವಾಹವಾಗಿದ್ದಾಳೆ. ಅದು ರಾಜಕುಮಾರನಿಗೆ ಇಷ್ಟವಿಲ್ಲ. ಆಕೆ ಹಾಗೆ ಮಾಡಿದ್ದು ತನ್ನ ತಂದೆಗೆ ಮಾಡಿದ ದ್ರೋಹವೆಂದೆನ್ನಿತ್ತದೆ.ಹಾಗಾಗಿ ಆತನ ಒಳಗುದಿ ಕುದಿಯುತ್ತಿರುವುದು ಬರಿಯ ತಂದೆಯ ಸಾವಿನಿಂದಲ್ಲ. ಬದಲಿಗೆ ತಾಯಿಯ ಮರುವಿವಾಹ ಅದೂ ತನ್ನ ಚಿಕ್ಕಪ್ಪ ಕ್ಲಾಡಿಯಸ್ ನೊಂದಿಗೆ ಹಾಗೂ ಆತ ರಾಣಿ ಗೆರ್ಟ್ರೂಡ್ ಳನ್ನು ಮದುವೆಯಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾಯಕಾರ: ತಿರುಪತಿ ಭಂಗಿ

ತಮ್ಮ ತಲೆಯಲ್ಲಿ ಅಲ್ಲಲ್ಲಿ ಹುಟ್ಟಿಕೊಂಡ ಬಿಳಿ ಕೂದಲು ನೋಡಿದೊಡನೆ ಅವತ್ತು, ತನ್ನ ವಯಸ್ಸು ದಿನೆದಿನೆ ಮಂಜುಗಡ್ಡೆಯಂತೆ ಕರಗುತ್ತಿದೆ ಎಂಬ ಅರಿವಾಗಿ ಸಾವಕಾರ ಸಿದ್ದಪ್ಪನ ಮನದಲ್ಲಿ ಶೂನ್ಯ ಆವರಿಸಿತು.“ನನಗೆ ಮಕ್ಕಳಾಗಲಿಲ್ಲ, ಆಗುವುದೂ ಇಲ್ಲ, ನಾನೊಬ್ಬ ಎಲ್ಲ ಇದ್ದು, ಏನೂ.. ಇಲ್ಲದ ನತದೃಷ್ಟ, ಕೈಲೆ ಆಗದವನು, ಮಕ್ಕಳನ್ನು ಹುಟ್ಟಿಸಲು ಆಗದ ಶಂಡ ನಾನು…..”ನೂರೆಂಟು ವಿಚಾರಗಳನ್ನು ಮನದಲ್ಲಿ ರಾಶಿ ಹಾಕಿಕೊಂಡು ನೆನೆ-ನೆನೆದು ವ್ಯಥೆಪಟ್ಟ. ಯಾರಿಗೂ ಗೊತ್ತಾಗದಂತೆ ಬೆಂಗಳೂರು, ಕಾರವಾರ, ಕೇರಳ, ಸುತ್ತಾಡಿ ನಾ..ನೀ.. ಅನ್ನುವ ನಂಬರ್ ಒನ್ ವೈದ್ಯರ ಮುಂದೆ ತಾವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್: ಭಾರ್ಗವಿ ಜೋಶಿ

ಜೀವನದಲ್ಲಿ ನೆನಪುಗಳು ಅಂದರೇನೇ ಸುಂದರ. ಆ ಕ್ಷಣಕ್ಕೆ ಅತಿಯಾದ ನೋವು ಕೊಟ್ಟ ವಿಷಯಗಳು ಸಹ ಇವತ್ತಿಗೆ ನಗು ತರಿಸುತ್ತವೆ. ಅದಕ್ಕೆ ನೆನಪುಗಳು ಅನ್ನೋದು. ಈ ರೀತಿಯ ನೆನಪುಗಳ ಆಗರವೇ ನಮ್ಮ ಬಾಲ್ಯ. ಆ ಬಾಲ್ಯದ ನೆನಪುಗಳೇ ನಮ್ಮ ಇಂದಿನ ಈ ಬಡಿದಾಟದ ಬದುಕಿಗೆ ಆಕ್ಸಿಜನ್ ಅಂದ್ರೆ ತಪ್ಪಾಗಲಾರದು. ಅಂತಹ ಬಾಲ್ಯದ ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್ ಹೋಗೋಣ.. ಕಳೆದು ಹೋದ ದಿನವೇ ಬಾಲ್ಯ ಮರಳಿ ಬರದ ಬದುಕೇ ಬಾಲ್ಯ ಬಿದ್ದ ಗಾಯವು ಕಲೆಯಾಗಿ ನೋವುಗಳೆಲ್ಲ ನಲಿವಾಗಿ ಮಾಸದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪದ್ಮಜಾ: ಮಲ್ಲಪ್ಪ ಎಸ್.

“ಅಮ್ಮಾ ನನ್ನ ಪೆನ್ಸಿಲ್ ಬಾಕ್ಸ ಎಲ್ಲಿ?” ಅನಿತಾ ಮಾಡು ಹಾರಿ ಹೋಗುವಂತೆ ಕಿರುಚಿದಳು. “ ಅಲ್ಲೇ ಇರಬೇಕು ನೋಡೆ. ನೀನೇ ಅಲ್ವಾ ನಿನ್ನೆ ರಾತ್ರೆ ಜಾಮಿಟ್ರಿ ಮಾಡ್ತಾ ಇದ್ದವಳು?” ಪದ್ಮಜಾ ಒಲೆಯ ಮೇಲೆ ಇದ್ದ ಬಾಣಲೆಯಲ್ಲಿಯ ಒಗ್ಗರಣೆ ಸೀದು ಹೋಗುತ್ತಲ್ಲಾ ಎಂದು ಚಡಿಪಡಿಸುತ್ತಾ ಕೈ ಆಡಿಸಲು ಚಮಚಕ್ಕಾಗಿ ಹುಡುಕಾಡುತ್ತಾ ಬಾಗಿಲಕಡೆ ಮುಖ ಮಾಡಿ ಉತ್ತರಿಸುತ್ತಿದ್ದಳು. “ಅಮ್ಮಾ ನನ್ನ ಇನೊಂದು ಸಾಕ್ಸ ಕಾಣುತ್ತಿಲ್ಲ. ಲೇ ಅನಿ-ಶನಿ ನನ್ನ ಸಾಕ್ಸ ಎಲ್ಲಿ ಬಿಸಾಕಿದ್ದಿಯೇ?” ದಕ್ಷ ಒಂದು ಕಾಲಲ್ಲಿ ಸಾಕ್ಸ ಹಾಕಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 8): ಎಂ. ಜವರಾಜ್

-೮- ಸೂರ್ಯ ಮೂಡೊ ಹೊತ್ತು ‘ಕಾ..ಕಾ.. ಕಾ..’ ಕಾಗೆ ಸದ್ದು ಮೈಮುರಿತಾ ಕಣ್ಬುಟ್ಟು ನೋಡ್ದಿ ಅವಳು ಕಸಬಳ್ಳು ತಗಂಡು ಮೂಲ್ ಮೂಲೆನು ಗುಡಿಸೋಳು ಆ ಕಸಬಳ್ಳು ನನಗಂಟು ಬಂದು ಗೂಡುಸ್ತು ಆ ಕಸಬಳ್ಳು ಗೂಡ್ಸ ದೆಸೆಗೆ ನಾನು ಮಾರ್ದೂರ ಬಿದ್ದು ಬೀದೀಲಿ ಒದ್ದಾಡ್ತಿದ್ದಂಗೆ ಸೂರ್ಯ ಕೆಂಪೇರ್ಕಂಡು ಮೇಲೆದ್ದು ನಂಗ ತಾಕಿ ನನ್ ಮೈ ಮುಖ ನೊಚ್ಚಗಾದಂಗಾಯ್ತು. ಆ ಕಸಬಳ್ಳು ಅಲ್ಲಿಗೂ ಬಂದು ನನ್ನ ಇನ್ನಷ್ಟು ದೂರ ತಳ್ತ ತಳ್ತ ಮೋರಿ ಅಂಚಿಗೆ ಬಂದು ನೋಡ್ತಿದ್ದಂಗೆ ‘ಏ.. ನೀಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಮಲೋಕ ಭ್ರಷ್ಟಾಚಾರ ಮುಕ್ತವಾಗಲಿ: ಪಿ.ಕೆ. ಜೈನ್ ಚಪ್ಪರಿಕೆ

ಮರುಜನ್ಮದಲ್ಲಿ ನಾವೇನಾಗ್ತಿವಿ ಅನ್ನೋದು ನಾವು ಮಾಡಿದ ಪಾಪ ಪುಣ್ಯದ ಫಲಕ್ಕೆ ನೇರ ಸಂಬಂಧವಿದೆ ಅಂತಾ ಹೇಳ್ತೀವಿ. ಅದನ್ನೇ ಕರ್ಮಸಿದ್ಧಾಂತ ಅಂತಲೂ ಕರೀತಾರೆ. ಮುಂದಿನ ಜನ್ಮ ಮನುಷ್ಯ ಜನ್ಮವೇ ಆಗಬೇಕು ಅಂತಾದರೆ ಸಿಕ್ಕಾಪಟ್ಟೆ ಪುಣ್ಯ ಸಂಪಾದಿಸಬೇಕು ಅಂತಾ ಹೇಳ್ತಾ ಇರೋದನ್ನು ಕೇಳಿದ್ದೀವಿ. ಹಾಗೆಯೇ ಮುಂದಿನ ಏಳು ಜನ್ಮಗಳು ಮನುಷ್ಯನಲ್ಲದ ಜನ್ಮಗಳಾಗಿರ್ತಾವೆ ಅಂತಾನೂ ಕೇಳಿದ್ದೀವಿ. ಆದ್ರೆ ಇವೆಲ್ಲದರ ನಡುವೆ ಒಂದು ಕನ್ಫ್ಯೂಸನ್ ಮತ್ತು ಉತ್ತರ ಸಿಗದ ಪ್ರಶ್ನೆ ಈ ಕರೊನಾ ವೈರಸ್ ಬಂದಾಗ ಶುರು ಆಯ್ತು…ಎನ್ ಗೊತ್ತಾ…!??? ಪ್ರಸ್ತುತ ಪ್ರಪಂಚದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಹಜ ನಗು ಆರೋಗ್ಯದ ಆಗರ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ

‘ ನಗು ‘ ಎಂಬುದು ಮುಖದಲ್ಲಿ ಪ್ರಕಟವಾಗುವ ಒಂದು ಭಾವ! ಮನಸ್ಸು ಒಳಗಿರುವುದರಿಂದ ಅದರ ನೇರ ಸಾಕ್ಷಾತ್ ದರುಶನ ಕಷ್ಟ. ಮನ ಭಾವಗಳ ಮೂಲಕ ತನ್ನ ಸಾಕ್ಷಾತ್ ದರುಶನ ಮಾಡಿಸುವುದು! ಮುಖದಲ್ಲೆ ಮನದ ಭಾವಗಳು ಮೇಳೈಸುವುದು! ಮುಖದಲ್ಲೆ ಮನ ಬಂದು ನರ್ತಿಸಿ ತನ್ನ ಖುಷಿಯ ಪ್ರಕಟಿಸುವುದು! ದುಃಖವ ಅನಾವರಣಗೊಳಿಸುವುದು. ಮುಖವೆ ಮನದ ಆಡೊಂಬಲ. ಮುಖ ಎಂಬುದು ಆತ್ಮದ ಭಾವಗಳನ್ನು ಪ್ರಕಟಿಸುವ ಜೀವಂತ ಸ್ವಾಭಾವಿಕ ಕಿರು ಪರದೆ! ಮುಖದಲ್ಲೇ ನಗುವೆಂಬ ಅಮೂಲ್ಯ ಆಭರಣ ಮೈದೋರಿ ಮುಖದ ಸೊಗಸು ಹೆಚ್ಚಿಸುವುದು! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ… ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ, ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ…. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪೀಯರ್ ಬದುಕು ಬರಹ ಮತ್ತು ಕಾಲ: ನಾಗರೇಖ ಗಾಂವಕರ

ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪಿಯರ ಎಲ್ಲ ಕಾಲ ದೇಶಗಳಿಗೂ ಪ್ರಶ್ತುತ ಎನ್ನಿಸುವ ಸಾಹಿತ್ಯ ಕೃತಿಗಳ ರಚಿಸುವ ಮೂಲಕ ಸರ್ವಮಾನ್ಯ ಸಾಹಿತಿ ಎಂದೇ ಪ್ರಸಿದ್ಧ. ತನ್ನ ಜೀವನ ಮತ್ತು ಬರವಣಿಗೆಗಳಲ್ಲಿ ಪ್ರೌಢತೆಯನ್ನು ಬಿಂಬಿಸಿದ್ದ ಶೇಕ್ಸಪಿಯರ ಜ್ಞಾನ, ಔದಾರ್ಯ, ನಂಬಿಕೆ, ಯುವ ಪ್ರೇಮದ ತುಡಿತ, ಕ್ಷಮೆ ಹೀಗೆ ಮಾನವ ಸಂವೇದನೆಗಳ ಸುತ್ತ ಹೆಣೆದ ಆತನ ಕೃತಿಗಳು ಲೋಕ ಪ್ರಸಿದ್ಧವಾಗಿವೆ. ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ಎಲಿಜಬೆತನ್ ಯುಗ ಸುವರ್ಣ ಕಾಲ. ಐತಿಹಾಸಿಕವಾಗಿ ಜ್ಞಾನಪುನರುಜ್ಜೀವನ, ಧಾರ್ಮಿಕ ಸುಧಾರಣೆ, ಭೌಗೋಲಿಕ ಅನ್ವೇಷಣೆಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನು ನೀನೇ ಎಂದವರ ನಡುವೆ: ಅಮರ್ ದೀಪ್

ಸಂಗೀತಕ್ಕೆ ವಯಸ್ಸಿನ ಹಂಗಿಲ್ಲ ಕಲಿಯಲಾಗಲಿ, ಕೇಳಿ ಖುಷಿಪಡಲಾಗಲಿ…. ನಾನಂತೂ ಸಮಯ ಸಿಕ್ಕಾಗಲೆಲ್ಲಾ ಸಂಗೀತವನ್ನು ಆಸ್ವಾದಿಸದೇ ಇರಲಾರೆ.  In fact ನನ್ನ ದು:ಖವನ್ನು ನೀಗಿಸುವುದೂ ಸಂಗೀತವೇ ಮತ್ತು ನನ್ನ ದಟ್ಟ ದರಿದ್ರ, ಸೋಮಾರಿತನದಿಂದ “ಎದ್ದೇಳಾ, ನಿನ್ನ ಸೋಮಾರಿತನಕ್ಕಿಷ್ಟು ಬೆಂಕಿ ಹಾಕ” ಎಂದು ಮತ್ತೆ ಮತ್ತೆ ಪುನಶ್ಚೇತನಗೊಳಿಸುವುದೂ ಸಂಗೀತವೇ…  ಇವತ್ತು, ಬಿಡಿ ಇವತ್ತಲ್ಲ ಸುಮಾರು ಮೂರು ತಿಂಗಳಾಯ್ತೇನೋ ಮಧ್ಯಾಹ್ನ ಊಟಕ್ಕೆ ಹೊರಡಬೇಕೆಂದರೆ ಸಾಕು, ಯಾಕಾದ್ರೂ ಊಟದ ಸಮಯವಾಗುತ್ತೋ? ಯಾವ ಖಾನಾವಳಿಯ ಸೋಡಾ ಹಾಕಿದ ಅನ್ನ ತಿನ್ನಬೇಕೋ… ಹೊಟ್ಟೆ ಕೆಡಿಸಿಕೊಳ್ಳಲು? ಎಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಳೆಗಾಲ ನಮ್ಮದೂ ಒಂದು ಕತೆ: ಭಾರ್ಗವಿ ಜೋಶಿ

ಅಂದೊಂದು ಸುಂದರ ಸಂಜೆ.. ಸೂರ್ಯನು ಭಾರತದ ಸೌಂದರ್ಯವನ್ನು ಮಿಂಚಿಸಿ ಈಗ ಬೇರೆ ದೇಶಗಳಲ್ಲಿ ಕಣ್ಣುತೆರೆಸುವ ಸರದಿ.. ಸೂರ್ಯ ನಿಧಾನವಾಗಿ ಹೆಜ್ಜೆಯಿಟ್ಟು ದಾಟುತ್ತಿದ್ದ.. ಚಂದ್ರನು ನಾನಿಲ್ಲೇ ಇದ್ದೀನಿ ಅಂತಾ ಮೋಡದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿದ್ದ. ಅವನ ಬರುವಿಕೆಯನ್ನು ತಡೆಯಲು ಸಫಲವಾದ ಮೋಡಗಳು ಈಗ ನಮ್ಮ ಸಮಯ ಎಂದು ಮಳೆಸುರಿಸಲು ಸಿದ್ಧವಾಗಿದ್ದವು.. ಸಂಧ್ಯಾಕಾಲ, ತಂಪಾದಗಾಳಿ, ಮಸಕು ಬೆಳಕು, ತುಂತುರು ಮಳೆ… ಮನೆಯ ಅಟ್ಟದಮೇಲೆ ಈ ಅಂದವನ್ನು ಅನುಭವಿಸುತ್ತ ನಿಂತಿದ್ದಳು ನಮ್ಮ ಅರುಂದತಿ… (ಭಾಳ್ ದಿವಸದ ಮೇಲೆ ಕರ್ಕೊಂಡು ಬಂದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ