ಪದ್ದಕ್ಕಜ್ಜಿ ಫೇಸ್ ಬುಕ್ ಲೈವ್: ಡಾ. ವೃಂದಾ. ಸಂಗಮ್

ಹೆಂಗಿದೀರಿ ಎಲ್ಲಾರೂ. ಈ ಕರೋನಾ ಅಂತ ಎಲ್ಲಾರೂ ಭೇಟಿ ಆಗೋದ ಕಡಿಮಿ ಆಗೇದಲ್ಲ. ಏನು ಮಾಡೋದು. ನಮ್ಮ ಪದ್ದಕ್ಕಜ್ಜಿನೂ ಹೀಂಗ ಒದ್ದಾಡತಾರ. “ಹೂಂ ರೀ, ಭಾಳ ದಿನಾ ಆಗಿತ್ತಲ್ಲ, ಪದ್ದಕ್ಕಜ್ಜಿ ಬಗ್ಗೆ ಮಾತನಾಡಿ. ಏನು ಮಾಡೋದು, ಕಾಲಮಾನ ಕೆಟ್ಟ ಕೂತಾವ, ಸುಟ್ಟ ಬರಲೀ, ಈ ಕರೋನಾದಿಂದ ಒಬ್ಬರಿಗೊಬ್ಬರು ಒಂದ ಊರಾಗ, ಒಂದ ರಸ್ತೆದಾಗ, ಆಜೂ ಬಾಜೂ ಮನಿಯೊಳಗಿದ್ದರೂನೂ ಸೈತೇಕ, ಅಮೇರಿಕಾ – ಆಸ್ಟ್ರೇಲಿಯಾದಾಗ ಇದ್ಧಂಗ ಕಂಪ್ಯೂಟರಿನ್ಯಾಗ ಮಾರಿ ನೋಡೋ ಹಂಗಾದೇದ “ ಅಂತಾರ ನಮ್ಮ ಪದ್ದಕ್ಕಜ್ಜಿ. ನಿಮಗೆಲ್ಲಾರಿಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಹಿಳಾ ಶಿಕ್ಷಣಕ್ಕೆ “ರಾಜ”ಮಾರ್ಗವನ್ನು ರೂಪಿಸಿದ ದಿನಗಳು: ಅಮೂಲ್ಯ ಭಾರದ್ವಾಜ್‌

ಒಂದು ದೇಶವನ್ನು ನಿರ್ಮಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದ ಮಹತ್ವ ಎಂದೆದಿಗೂ ಅಳಿಯಲಾರದ್ದು. ಮಹಿಳೆಯರ ಶಿಕ್ಷಣದ ಜಾಗೃತಿಯು ಅನೇಕ ಸ್ಥರಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆಯೇ ಹೆಣ್ಣು ಮಕ್ಕಳ ಶಿಕ್ಷಣ ಯಾವುದೇ ರಾಷ್ಟ್ರಕ್ಕೆ ಎಷ್ಟು ಮುಖ್ಯವೆಂದು ನಿರೂಪಿತವೂ ಆಗಿದೆ. ಪ್ರತಿ ದೇಶವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ. ಮಹಿಳೆಯರ ಶಿಕ್ಷಣ ಯಾವುದೇ ಶೋಷಣೆಯಿಂದ ದೂರವಿರಲು ಮತ್ತು ತಮ್ಮನ್ನು ತಾವೇ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. 1848 ರಲ್ಲಿ ಪುಣೆಯ ಬಿದೆ ವಾಡಾದಲ್ಲಿ ಸಾವಿತ್ರಿಬಾಯಿ ಪುಲೆಯವರು ಪ್ರಪ್ರಥಮ ಹೆಣ್ಣು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಟ್ಟಿಗಿತ್ತಿ: ಡಾ. ದೋ. ನಾ. ಲೋಕೇಶ್

2016 ಅಥವಾ 2017 ನೇ ಇಸವಿಯ ಮಳೆಗಾಲದ ಒಂದು ದಿನ, ನಮ್ಮ ಇಲಾಖೆಯ ಅರೆತಾಂತ್ರಿಕ ಸಿಬ್ಬಂದ್ಧಿಯೊಬ್ಬರು ಎಮ್ಮೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮಗೆ ತೋರಿಸಲು ಹೇಳಿದ್ದಾರೆ ಬನ್ನಿ ಸರ್ ಎಂದು ಅವರ ವಿಳಾಸ ಹೆಸರು ಎಲ್ಲ ಹೇಳಿದರು. ಅದು ನಾನು ಕೆಲಸ ಮಾಡುವ ಸ್ಥಳದಿಂದ ಬೇರೊಂದು ದಿಕ್ಕಿಗಿದ್ದು ನಮ್ಮ ಮನೆಯಿಂದ 6-7 ಕಿ. ಮೀ. ದೂರವಿದ್ದದ್ದರಿಂದ, ನಾನು ಸಂಜೆ ಕೆಲಸ ಮುಗಿಸಿ ಬಂದು ನಿಮ್ಮ ಎಮ್ಮೆಯನ್ನು ನೋಡುತ್ತೇನೆ ಎಂದು ಹೇಳಿದೆ. ಅದರಂತೆ ಸಂಜೆ ಸುಮಾರು 5.30 ಅಥವಾ 5.45 … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುವಂಗಿಯ ಕನಸು (ಅಧ್ಯಾಯ ೧-೩): ಹಾಡ್ಲಹಳ್ಳಿ ನಾಗರಾಜ್

‌ ಅಧ್ಯಾಯ ೧: ಮೊಳಕೆಯೊಡೆಯಿತು ಎರಡೊಂದ್ಲ ಎರಡು…ಎರಡೇಡ್ರ್ಳ ನಾಲ್ಕು…ಊರ ಪ್ರಾಥಮಿಕ ಶಾಲೆಯ ಕಡೆಯಿಂದ ಸಮೂಹಗಾನದಂತೆ ರಾಗವಾಗಿ ಹೊರಟ ಮಕ್ಕಳ ಧ್ವನಿ ಪಶ್ಚಿಮದ ಕಾಡಲ್ಲಿ ಕ್ಷಣಕಾಲ ಅನುರಣಿಸಿ ಹಿಂತಿರುಗಿ ಸೀತೆಯ ಕಿವಿಯಲ್ಲಿಳಿದು ಹೃದಯದಲ್ಲಿ ದಾಖಲಾಗತೊಡಗಿತು. ಅದರಲ್ಲಿ ತನ್ನ ಮಗಳು ಪುಟ್ಟಿಯ ಧ್ವನಿಯೂ ಸೇರಿದಂತೆ ಕಲ್ಪಿಸಿಕೊಂಡು ಕ್ಷಣಕಾಲ ಪುಳಕಿತಳಾದಳು.ಪುಟ್ಟಿಗೆ ಈಗಾಗಲೇ ನಾಲ್ಕು ವರ್ಷ ತುಂಬಿದೆ. ಬರುವ ವರ್ಷ ಈ ದಿನಕ್ಕೆ ಅವಳೂ ಅಲ್ಲಿ ನಿಂತು ಮಕ್ಕಳೊಂದಿಗೆ ಮಗ್ಗಿ ಹೇಳುವಂತಾಗುತ್ತಾಳೆ. ‘ಅವ್ವನ ಮನೆಯಿಂದ ಅವಳನ್ನು ಕರೆತಂದು ಇದೇ ಶಾಲೆಗೆ ಸೇರಿಸಬೇಕು. ಹಳ್ಳಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಲಕೋಶ ಎನ್ನುವ ಕಳೆದುಹೋದ ಕಾಲದ ಕನ್ನಡಿ: ಸತೀಶ್ ಶೆಟ್ಟಿ ವಕ್ವಾಡಿ

ಶಶಿಧರ ಹಾಲಾಡಿಯವರ ಕಾಲಕೋಶ ಕೈಸೇರುವ ಸಮಯದಲ್ಲಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾದ ಗ್ರಹಣವೆನ್ನುವ ವೆಬ್ ಸೀರೀಸ್ ಅನ್ನು ನೋಡಿ ಒಂದೆರಡು ದಿನವಾಗಿತ್ತಸ್ಟೆ. ಈ ಗ್ರಹಣ ಬಂದು 1984ರ ಇಂದಿರಾ ಗಾಂಧಿ ಹತ್ಯೆಯ ನಂತರ ನೆಡೆದ ಸಿಖ್ಖರ ಮೇಲಿನ ದಾಳಿಯ ಕುರಿತಾದ ವಸ್ತುವನ್ನು ಒಳಗೊಂಡ ವೆಬ್ ಸೀರೀಸ್ . ಕಾಲಕೋಶದಲ್ಲೂ ಸಹ ಅದೇ ವಸ್ತು ಇದೆ ಅನ್ನೋ ಅಂಶ ಪುಸ್ತಕದ ಬಗ್ಗೆ ಬಂದ ವಿಮರ್ಶೆಯಲ್ಲಿ ಓದಿದ್ದರಿಂದ ಪುಸ್ತಕವನ್ನು ಓದಲು ಆರಂಭಿಸಿದಾಗ ಅದೇ ವಿಷಯ ಪುನಃ ಇಲ್ಲಿ ಮತ್ತೆ ಮರುಕಳಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ಖಾತ್ರಿ

ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡೆಯ ಬಾಕ್ಸಿಂಗ್ ನ ಕ್ವಾರ್ಟರ್ ಫೈನಲ್ ನಲ್ಲಿ (64-69 ಕೆ.ಜಿ. ವಿಭಾಗ) ಭಾರತದ ಲವ್ಲೀನ ಬೊರ್ಗೊಹೈನ್ ತನ್ನ ಎದುರಾಳಿ ಚೀನಾದ ಚೆನ್ ನೀನ್-ಚಿನ್ ರವರನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ. ಸೆಮಿ ಫೈನಲ್ ನಲ್ಲಿ ಗೆದ್ದರೆ ಚಿನ್ನದ ಪದಕಕ್ಕಾಗಿ ಸೆಣೆಸುವ ಅವಕಾಶ ಪಡೆಯುವ ಲವ್ಲೀನರವರು ಒಂದು ವೇಳೆ ಸೆಮಿ ಫೈನಲ್ ನಲ್ಲಿ ಸೋತರೆ ಕಂಚಿನ ಪದಕ ಪಡೆಯಲಿದ್ದಾರೆ. ಸೆಮಿಫೈನಲ್ ನಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಪಿಯುಸಿ ನಂತರ ಮುಂದೇನು?’ ಫೇಸ್ ಬುಕ್ ಲೈವ್ ಕಾರ್ಯಕ್ರಮ

ಸ್ನೇಹಿತರೆ,‘ಪಿಯುಸಿ ನಂತರ ಮುಂದೇನು?’ ಎಂಬ ವಿಷಯದ ಕುರಿತು ಫೇಸ್ ಬುಕ್ ಲೈವ್ ಕಾರ್ಯಕ್ರಮವನ್ನು ಭಾರತೀಯ ವಿದ್ಯಾರ್ಥಿ ಸಂಘ (BVS) ಏರ್ಪಡಿಸಿದೆ. ಈ ದಿನ ರಾತ್ರಿ ಎಂಟಕ್ಕೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿರುವ ಅವಕಾಶಗಳ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ. ಬಿ ಅವರು ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು BVS ಫೇಸ್ ಬುಕ್ ಪುಟವನ್ನು ಭೇಟಿ ನೀಡಿ. ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಕೊನೆಯ ಭಾಗ): ಎಂ. ಜವರಾಜ್

-೮೦- ‘ಏಯ್,ಗೊತ್ತಾಯ್ತ..ಈಗ್ಲಾದ್ರು ಗೊತ್ತಾಯ್ತಇಲ್ಲಿಗಂಟ ಹೇಳುದ್ದು ನಿನ್ನೆದ್ಗ ಇಳಿತಾ..’ ಗದುರ್ತು ನನ್ಗ ನಿದ್ರ ಮಂಪ್ರುತೂಕುಡ್ಕ ಆ ತೂಕುಡ್ಕಲೆಈ ಅಯ್ನೋರ್ ಕತ ಕೇಳ್ತ ಕೇಳ್ತಗುಡುಗುಡು ಗುಡಗಾ ಸದ್ದುಕಿವಿಗ ಅಪ್ಪುಳುಸ್ತು ‘ಏಯ್,ನಾ ಮಾತಾಡ್ತನೆ ಅವ್ನಿನಿ ತಲ ಬಗ್ಗುಸ್ಕಂಡುತೂಕುಡುಸ್ತನೆ ಇದ್ದಯಲ್ಲ..’ ಆಗ ಸುಂಯ್ಯಂತ ಸುಂಯ್ಗುಟ್ತಪಣ್ಕ ಪಣ್ಕಂತ ಪಣ್ಗುಡಮಿಂಚು ಮಿಂಚ್ತಾ..ಆ ಪಣ್ಗುಡ ಮಿಂಚು ಕಣ್ಗ ರಾಚ್ತನಿಧಾನುಕ್ಕ ಕಣ್ಬುಟ್ಟುಬೀದಿದಿಕ್ಕ ನೋಡ್ದಿ, ಆಗ ಆ ಮೆಟ್ಟು..ಆ ಮಿಂಚುನ್ ಸಂದಿಲೂದಗ ದಗ ದಗಾಂತಉರಿತಾ “ತೂ..ನಾ ಅಂಗ್ಳ ಹರ್ಕಂಡೂ..ಆಗ್ಗಿಂದ ಈಗ್ಗಂಟೂ..ನಿದ್ದನು ಮಾಡ್ದೇ..ಒನ್ನಂಕ್ರೂ ಬುಡ್ದೇ..ಈ ಅಯ್ನೋರ್ ಕತ ಒಪ್ಸುದ್ನಲ್ಲಾ..ನಂಗೇನ್ ತೀಟಿಡ್ದಿತ್ತೂ.. “ನೋಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿರಹಕ್ಕೊಂದು ಪತ್ರ: ಪೂಜಾ ಗುಜರನ್. ಮಂಗಳೂರು.

“ಪ್ರೀತಿಸಿದ ತಪ್ಪಿಗೆ ವಿರಹಕ್ಕೊಂದು ಪತ್ರ”. ಇದು ನನ್ನೆದೆಯ ಬೀದಿಯಲ್ಲಿ ದಿನ ಬಂದು ಕಾಡಿಸುವ ನೋವಿಗೆ ಸಮಧಾನಿಸುವ ಸಲುವಾದರೂ ಬಿಡಿಸಿ ಕಣ್ಣಾಡಿಸು‌.ಇದು ನನ್ನ ಅಭಿಪ್ರಾಯವಷ್ಟೆ. ಸುಮ್ಮನ್ನೆ ಇದ್ದವಳ ಬದುಕಿನಲ್ಲಿ ನಿನ್ನ ಆಗಮನ ಒಂದು ವಿಶೇಷವಾದ ಚೈತನ್ಯವನ್ನು ನೀಡಿತ್ತು.ನಿನ್ನ ಮಾತಿನ ಚಾತುರ್ಯಕ್ಕೆ ಸೋತು ನನ್ನ ಹೃದಯವನ್ನೇ ನಿನ್ನ ಅಂಗೈಯಲ್ಲಿ ಇಟ್ಟು ನಿನ್ನ ಬೊಗಸೆಯೊಳಗೆ ಬೆಚ್ಚಗೆ ಶರಣಾಗಿದ್ದೆ.ನಿನ್ನ ಜೊತೆ ಬೆಸೆದುಕೊಂಡು ಬಂಧಕ್ಕೆ ನನಗೆ ಸಿಕ್ಕಿದ್ದು ಒಂದೇ. ಅದು ಕೊನೆವರೆಗೂ ನನ್ನ ಜೀವ ಜೀವನವನ್ನು ಕಿತ್ತು ತಿನ್ನುವ ಸಂಕಟವಷ್ಟೆ.. ನನ್ನ ಅತಿರೇಕದ ಪ್ರೀತಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮತ್ತೆ ಮಳೆಯಾಗಿದೆ ನಿನ್ನ ಕಣ್ಣ ಬಿಂಬಲಿನಾನು ಪ್ರತಿಬಿಂಬವಾದಾಗಮೋಡ ಕವಿದು ಪ್ರೀತಿಯ ಮಳೆಯಾಗಿದೆ ನಿನ್ನ ಮುಂಗುರಳ ಚಾಚಿನನ್ನ ಕೈ ಹಿಡಿದು ಕರೆದಾಗಮತ್ತೆ ಮಳೆಯಾಗಿದೆ ನಿನ್ನ ಸನಿಹ ನಾ ಬಂದು ನಿಂತಿರುವೆಬಿಸಿಯುಸಿರು ತಾಕಿಸಿದಾಗಹೃದಯ ಬಡಿತ ಜೋರಾಗಿಮತ್ತೆ ಮಳೆಯಾಗಿದೆ ತುಟಿಗೆ ತುಟಿಯು ಸೇರಿಸಿಪ್ರೀತಿಯ ಚುಂಬನ ನೀಡಿದಾಗಪ್ರೇಮಲೋಕದಲಿ ತೇಲಾಡುವಾಗಮತ್ತೆ ಮಳೆಯಾಗಿದೆ ಮುಖ ಕೆಂಪಾಗಿಸಿ ನಾಚಿದಾಗಅಕ್ಕರೆಯಿಂದ ಅಪ್ಪಿಕೊಂಡುಕಳ್ಳ ನೋಟದಿ ನೋಡುವಾಗಮತ್ತೆ ಮಳೆಯಾಗಿದೆ –ಉಮಾಸೂಗೂರೇಶ ಹಿರೇಮಠ…. ಹಳ್ಳಿ ಮತ್ತು ಅಪಾರ್ಟ್‍ಮೆಂಟು ಪ್ರತಿ ಮುಂಜಾನೆ ಕಾಫಿ ಹೀರುತ್ತಾಕಿಟಕಿಯಾಚೆಯ ನೂರಾರು ಮನೆಗಳುಳ್ಳಒಂದು ಅಪಾರ್ಟ್‍ಮೆಂಟನ್ನು ನೋಡುತ್ತಲೇ ಇರುತ್ತೇನೆಅಪಾರ್ಟ್‍ಮೆಂಟ್ ಏಕೆ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದ್ರಮ: ಡಾ. ವೃಂದಾ. ಸಂಗಮ್

ನಾನು ಛಂದಾಗಿ ಓದಿ, ಶ್ಯಾಣ್ಯಾಕ್ಯಾಗಿ, ಛೊಲೋ ಕೆಲಸಾ ಹಿಡದು, ಅವ್ವಾ ಅಪ್ಪನ್ನ ಸುಖದಿಂದ ನೋಡಿಕೋಬೇಕು, ದಿನಾ ಇದ ಆಶೀರ್ವಾದ ಕೇಳಿ ಕೇಳಿ ನನಗ ಸಣ್ಣಕಿದ್ದಾಗ ಹೆಂಗನಸತಿತ್ತಂದರ, ಏನು ಮಾಡತಿದ್ದರೂ, ಅಯ್ಯೋ ಇದು ಬ್ಯಾಡ, ನಾನು ಬರೇ ಓದಕೋತ ಇರಬೇಕು, ಬ್ಯಾರೆ ಏನು ಮಾಡಿದರೂ ಅದು ತಪ್ಪು. ಆಮ್ಯಾಲೆ, ಆಮ್ಯಾಲೆ ನನಗ ಅರ್ಥ ಆತು. ಈ ಹಿರೇ ಮನಶ್ಯಾರಿಗೆ ಬ್ಯಾರೆ ಕೆಲಸಿಲ್ಲ. ಆಶೀರ್ವಾದ ಮಾಡೋದರಾಗೂ ತಮ್ಮ ಸುಖಾನ ನೋಡತಿರತಾರ. ನಾನು ಖರೇನ ಶಾಣ್ಯಾಕಿ ಆಗ ಬೇಕಂದ್ರ, ಆಟ ನೋಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಸತ್ಯ-ಸುಳ್ಳಿನ ನಡುವೆ ಮನದ ಮಂಟಪ ಮನದಾಳದಲ್ಲಿ ಒಮ್ಮೊಮ್ಮೆ ಮತ್ತೇರಿಮಿಡಿದಭಾವನಾತ್ಮಕ ನುಡಿಗಳಿಗೆ ಕೊನೆಯಿಲ್ಲಅಲ್ಲಿ ಜನಿಸುವ ಭಾವಗಳೆಷ್ಟರ ಮಟ್ಟಿಗೆ ಸತ್ಯವೋ?ಸಂದರ್ಭಕ್ಕೆತಕ್ಕಂತೆ ಬಿಂಬಿಸುವ ಆಸೆಗಳೆಷ್ಟು ಮಿಥ್ಯವೋ? ಪ್ರತಿಬಾರಿ ಅದರ ಮೂಲ ಹುಡುಕುತ್ತಾ ಹೋದರೆಸತ್ಯ ಪ್ರಪಂಚದ ಅನಾವರಣ ಆದರೂ ಆಗಬಹುದುಇಲ್ಲವೇ ಸುಳ್ಳಿನ ಪ್ರಪಂಚದ ಕಗ್ಗತ್ತಲು ಆವರಿಸಿನಕಾರಾತ್ಮಕತೆಯನ್ನು ಸೃಷ್ಟಿಸಿ ನರ್ತಿಸಬಹುದು ಒಮ್ಮೊಮ್ಮೆ ಸತ್ಯ ಜೀವನದ ಸಂಬಂಧಗಳೆಲ್ಲಾಸತ್ಯವೆಂದು ಸಮರ್ಥಿಸುವ ಪ್ರಯತ್ನದಲ್ಲಿ ಬಿದ್ದರೆಮತ್ತೊಮ್ಮೆ ಭಾವಗಳಲೆಯಲ್ಲಿ ಸುಳ್ಳುಕೋಟೆ ನಿರ್ಮಿಸಿಅದರಲ್ಲಿ ಸಿಲುಕಿ ಒದ್ದಾಡುವಂತಾಗುವುದು ಕಲ್ಪನಾಲೋಕ ಪ್ರತಿಬಿಂಬಿಸುವ ಸತ್ಯ-ಸುಳ್ಳಿನನಡುವೆ ಸಿಲುಕಿ ಒಮ್ಮೆ ಆಸೆಯ ಆಶಾಗೋಪುರದತುತ್ತತುದಿಯಲ್ಲಿ ಕುಣಿದಂತೆ ಭಾಸವಾದರೆಮತ್ತೊಮ್ಮೆ ಕೆಳಗೆಬೀಳಿಸಿ ಮಣ್ಣುಪಾಲಾದಂತಾಗುವುದು ಕೊನೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಜಲ್: ಜಯಶ್ರೀ.ಭ.ಭಂಡಾರಿ

ಗಜಲ್ 1 ಸುಂದರ ವದನ ಇಂದೇಕೆ ಬಾಡಿದೆ ಹೇಳು ಗೆಳತಿಕಣ್ಣುಗಳಲ್ಲಿ ಎಂದಿನ ಕಾವ್ಯ ಕಳೆ ಇಲ್ಲ ಗೆಳತಿ ನೀಳ ನಾಸಿಕ ಅದೇಕೆ ಕೆಂಪಾಗಿದೆ ಹೇಳಲಾರೆಯಾಅಳು ನುಂಗಿ ನಗುವ ಪ್ರಮೇಯ ಯಾಕೆ ಗೆಳತಿ ಹಣೆಯ ಕಾಸಿನಗಲ ಕುಂಕುಮದಲಿ ಸಂಭ್ರಮ ನಗುತ್ತಿಲ್ಲಬಾಗಿದ ಹುಬ್ಬುಗಳಲಿ ಕಾಮನ ಬಿಲ್ಲಿನಂದ ತೋರುತ್ತಿಲ್ಲ ಗೆಳತಿ ತೊಂಡೆಯ ತುಟಿಗಳಲ್ಲಿ ಜೇನು ವಸರುವದು ಕಾಣುತ್ತಿಲ್ಲಕೆನ್ನೆಯಲ್ಲಿ ಗುಲಾಬಿ ರಂಗು ಸೊರಗಿದೆ ಏಕೆ ಹೇಳು ಗೆಳತಿ ಭರವಸೆಯಲ್ಲಿ ಬೆಳಕು ಚೆಲ್ಲುವ ನೀನೇ ಹೀಗಾದರೆ ಹೇಗೆಜುಮಕಿಯ ನಾದದಲ್ಲಿಯೂ ಅದೇಕೊ ಇಂಪಿಲ್ಲ ಗೆಳತಿ ಕಪ್ಪಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡೊಂಟ್ ವರಿ, ಒಮ್ಮೊಮ್ಮೆ ಹೀಗೂ ಆಗುವುದು: ಮಧುಕರ್ ಬಳ್ಕೂರ್

“ಏನ್ ಸರ್ ಸಮಾಚಾರ ? ಮತ್ತೇನ್ ಡ್ಯೂಟಿಗ್ ಹೊರಟ್ರಾ..? ಏನಿಲ್ಲ ಸರ್, ನೀವು ಯಾರನ್ನಾದ್ರು ಲವ್ ಮಾಡಿದೀರಾ..? ಇಲ್ವಾ…? ಹಾಗಿದ್ರೆ ನೀವು ವೇಸ್ಟ್ ಬಿಡಿ ಸಾರ್. ನಾನು ಈ ಪ್ರೀತಿ ಗೀತಿ ಅಂತೆಲ್ಲಾ ಅದೆಷ್ಟು ಸರ್ಕಸ್ ಮಾಡಿದೀನಿ ಗೊತ್ತಾ? ಬಿಡಿ, ನಿಮಗೆಲ್ಲಾ ಅದು ಎಲ್ಲಿ ಅರ್ಥ ಆಗ್ಬೇಕು? ಅನುಭವ ಇದ್ರೆ ತಾನೆ..” ಹಾಗಂತ ಅವನು ವ್ಯಂಗವಾಡುತ್ತಲೇ ಹೋದ. ಜೊತೆಗಿದ್ದವರು ಅದೇ ವ್ಯಂಗದಲ್ಲಿ ಜೋರಾಗಿ ನಗತೊಡಗಿದರು. ಆ ಒಂದು ಕ್ಷಣಕ್ಕೆ ಏನನ್ನಬೇಕೆನ್ನುವುದ ತಿಳಿಯದೆ ಮುಜುಗರಕ್ಕೊಳಗಾಗುತ್ತೀರಿ. ಮೊದಲೇ ಡ್ಯೂಟಿಗೆ ಹೊರಟಿದ್ದೀರಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾವು ಏನೂ ಅನುಭವಿಸಿದರೂ ಅದು ನಮ್ಮ ಕರ್ಮಫಲವಷ್ಟೆ: ಪೂಜಾ ಗುಜರನ್. ಮಂಗಳೂರು.

ಆವತ್ತು ಅತ್ಮೀಯ ಗೆಳೆಯರೊಬ್ಬರ ಸಂಬಂಧಿಕರ ಸಾವು ನಡೆದಿತ್ತು. ಅವರು ತುಂಬಾ ಬೇಜಾರಿನಲ್ಲಿ ನನ್ನಲ್ಲಿ ಒಂದು ಮಾತು ಹೇಳಿದರು. ಅಲ್ಲ ಏನಾಗುತ್ತಿದೆ ಇಂದು. ಎಲ್ಲಿ ನೋಡಿದರು ಸಾವು, ನೋವು, ಈಗ ಇದ್ದವರು ಮತ್ತೆ ಇಲ್ಲ. ನೋಡ ನೋಡುತ್ತಿದಂತೆ ಎದ್ದು ಹೋಗುತ್ತಿದ್ದಾರಲ್ವ. ಇದೆಂತಹ ಕ್ರೂರ ಸಮಯ,  ಇದನ್ನೆಲ್ಲ ನೋಡುವುದಕ್ಕಾಗಿಯಾ ನಾವಿನ್ನು ಬದುಕಿರೋದು. ಹೀಗೆ ಅವರ ನೋವಿನ ಮಾತುಗಳು ಸಾಗುತ್ತಿದ್ದವು. ಅವರ ಹಣೆಬರಹವೇ ಸರಿ ಇಲ್ಲವೇನೋ ಅದಕ್ಕೆ ವಿಧಿ ಹೀಗೆ ಮಾಡುತ್ತಿದ್ದಾನೆ. ಅಂದಾಗ ನನಗೆ ಏನೂ ಉತ್ತರಿಸಬೇಕೋ ತಿಳಿಯದಾಗಿತ್ತು. ಅಲ್ಲ ನಾವ್ಯಾಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 78 & 79): ಎಂ. ಜವರಾಜ್

-೭೮- ಆಗ..ಆಗ..ಆಗ ಏನಾಯ್ತು ಅಂದ್ರಾ..‘ಏ…ಯ್…’ಅಂತ ಅಬ್ರುಸ್ತಮರದ ಮ್ಯಾಲಿಂದ ಕೆಳಕಆಗ್ಲೆ ಕಂಡಆ ನೆಳ್ ರೂಪುದುತ್ತಂತ ಬಿದ್ದು ಎಗುರಿಮುಂದ ನಿಂತ್ಗಂಡೂ“ಏ..ಯ್..ಆಗ್ಲೆ ಬಿದ್ದೇಟ್ಗಹೆದ್ರಿ ಹೋಯ್ತಿದ್ದರಿ ಅನ್ಕಂಡಿಆದ್ರ..ಆದ್ರ..ಇಲ್ಲಿಗಂಟು ಬಂದಿದರಿ ಅಂದ್ರನಿಮ್ಮ ಬುಡಗಿದ್ದಾ..ಈ ನೀರಂಜಿ ಬುಡ್ಕೇಹಾರ ಮಾಡ್ದೆ ಬುಡಲ್ಲ” ಈ ಅಯ್ನೋರ್ ಕಾಲುಗಡಗಡ ನಡುಗ್ತಅವ್ರು ನಡ್ಗ ರೀತಿಗನಂಗೂ ಮೈಬಾರ ಆಯ್ತಿರಗಾಯ್ತು ಅಂವಅದೆ, ಎಳುರುಂಡಿ ಮಾದೇವಗರ ಬಡ್ದಿರತರ ನಿಂತನ.. ಅಂವ ನಿಂತಿರ ತರುಕ್ಕಇವ್ನ್ ಮ್ಯಾಗಆಗಿಂದ ಅನ್ಕಂಡದೆಲ್ಲಸರುಕ್ನ ಇಳ್ಕಂಡಗಾಯ್ತು ಈ ಅಯ್ನೋರು ಆಗ್ಗಿಂದ ಈಗ್ಗಂಟುಇಂತೆವ್ನ ಮುಂದಿಟ್ಗಂಡುಯವರ ಮಾಡ್ತಿದ್ರಲ್ಲಾ..ಇಂವ,ಇಂತಾ ಅಡ್ಕಸ್ಬಿ ಪುಕ್ಕುಲ್ನಾ..ತೂ..ಸೂಳಮಗನಾ.. ಅನ್ನುಸ್ತು ಎಳುರುಂಡಿ ಮಾದೇವ ಅಂದ್ರ,ಸುತ್ಮತ್ತು ಏಳೂರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮ್ಮ ಅನ್ನೋ ಎರಡು ಅಕ್ಷರ: ದೀಪಾ ಜಿ. ಎಸ್.

ಅಮ್ಮ ಅಂದ್ರೆ ಒಂದು ಜೀವಕ್ಕೆ ಜೀವ ತುಂಬೋ ತ್ಯಾಗಮಯಿನೇ ಅಮ್ಮ. ನಾನು ಈ ಭೂಮಿಗೆ ಕಾಲಿಟ್ಟ ಕ್ಷಣದಿಂದ ಹಿಡಿದು ಇಲ್ಲಿಯವರೆಗೂ ನನ್ನ ಜೀವನದಲ್ಲಿ ಒಂದೊಂದು ಕ್ಷಣ ಒಂದೊಂದು ಕಲಿಕೆಯನ್ನು ಕಳಿಸಿದವಳೇ ಅಮ್ಮ. ನನ್ನ ಮೊದಲನೆಯ ಗುರು, ಮೊದಲನೆಯ ಸ್ನೇಹಿತೆ, ಎಲ್ಲಾನು ಅವಳೇ. ಜೀವನದಲ್ಲಿ ಕಷ್ಟಕ್ಕೆ ಎಡವಿ ಬಿದ್ದಾಗ ಮೊದಲು ನೆನಪಾಗೋದೇ ಅಮ್ಮ. ಅಮ್ಮ ಅನ್ನೋ ಪದದಲ್ಲೇ ಅಮೃತಾನೆ ತುಂಬಿರುವಾಗ ನನ್ನ ಹತ್ತಿರಾನೂ ಸಾವು ಅನ್ನೋ ಪದಾನೇ ಸುಳಿಯೋಲ್ಲ. ಅಮ್ಮ ಅನ್ನೋ ಒಂದು ಜೀವ ಇದ್ರೆ ಸಾಕು ಇಡೀ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹದಿಹರೆಯದ ಮಕ್ಕಳು ಮತ್ತು ಪೋಷಕರು: ಪ್ರವೀಣ ಶೆಟ್ಟಿ, ಕುಪ್ಕೊಡು

ದೃತಿ ಯಾಕೋ ತುಂಬಾ ಕಾಡ್ತಾ ಇದ್ದಾಳೆ. ಹೌದು ದೃತಿ “ದ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನ ಮುಖ್ಯ ಪಾತ್ರಧಾರಿ ಶ್ರೀಕಾಂತ್ ತಿವಾರಿಯ ಮಗಳು. ತಂದೆ – ತಾಯಿ ಇಬ್ಬರೂ ತಮ್ಮ ತಮ್ಮ ಕೆಲಸಗಳ ನಡುವೆ ಬ್ಯೂಸಿಯಾಗಿರುವಾಗ ಮಕ್ಕಳ ಮೇಲೆ ಗಮನ ಕಡಿಮೆಯಾಗಿ ಮಕ್ಕಳು ಕೆಟ್ಟ ಹಾದಿ ತುಳಿದರೂ ತಂದೆ ತಾಯಿಗೆ ಅದರ ಬಗ್ಗೆ ಕಿಂಚಿತ್ತೂ ಗಮನವಿರುವುದಿಲ್ಲ. ಮಗಳು ಬಾಯ್ ಫ್ರೆಂಡ್ ಎಂದು ಅಲೆಯುತ್ತಿರುವಾಗಲೂ, ಓದುವುದನ್ನು ಬಿಟ್ಟು ಇಡೀ ದಿನ ಮೊಬೈಲ್ ನಲ್ಲಿ ಚಾಟಿಂಗ್ ಮಾಡುವುದನ್ನೂ ಹೆತ್ತವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ