ಮೂವರ ಕವಿತೆಗಳು: ಪ್ರವೀಣ, ನಳಿನಾ ಡಿ., ಶಶಿಕಿರಣ್

ಎದ್ದಾಗ ಸುತ್ತೆಲ್ಲ ಕತ್ತಲು ಸಾಯುವ ದಿನ ನಿಕ್ಕಿಯಿಲ್ಲವೆಂದು ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು ತಿಂದುಬಿಡುವ ಕಾತುರಕೆ ಹಸಿವು ಸಾಯುವುದಿಲ್ಲ.   ಇದ್ದ ಎಣ್ಣೆಯನೆಲ್ಲ ದೀಪಕೆ ಸುರುವಿ ಬೆಳಕನು ಹೊದ್ದು ಗಡದ್ದು ನಿದ್ದೆ ಎದ್ದಾಗ ಸುತ್ತೆಲ್ಲ ಕತ್ತಲು.   ನಿರ್ದಯ ದೈವದೆದುರು ಮುಗಿದ ಕೈಗಳು ನೈವೇದ್ಯದ ಸಕ್ಕರೆ ಇರುವೆ ತಿಂದು ಖಾಲಿ ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೆ ಖಾಲಿ ಪುಟದ ತುಂಬೆಲ್ಲ ರಾಡಿ.   ಅತಿರಥ ಮಹಾರಥ ಭಗೀರಥ ಪ್ರಯತ್ನ ಆಗಸ ಮುಟ್ಟುವ ಹುತ್ತಿನ ಪರ್ವತದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಲದ ವಿಷಯ (ಭಾಗ 2): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈಗಿನ ಕಾಲದಲ್ಲಿ ಕ್ರೆಡಿಟ್ ಕಾರ್ಡಿಲ್ಲದವನು, ಮೊಬೈಲ್ ಫೋನಿರದವನು ಶ್ವಾನಕಿಂತ ಕಡೆಯೆಂದ ಸರ್ವಜ್ಞ! ದೂರವಾಣಿ ಮಾಡಿ ತಲೆ ತಿನ್ನುವ ಕ್ರೆಡಿರ್ಟ್ ಕಾರ್ಡು ಕಂಪನಿಯವರನ್ನು ನಾನು ಒಮ್ಮೆ ಸತಾಯಿಸಿದ್ದು ಹೀಗೆ. ’ಸರ್, ದಯವಿಟ್ಟು ನಿಮ್ಮ ಕೆಲ ನಿಮಿಷಗಳನ್ನು ಬಳಸಿಕೊಳ್ಳಲೇ?’ ಕರ್ಣಾನಂದಕರ ದನಿ, ಆಂಗ್ಲ ಭಾಷೆಯಲ್ಲಿತ್ತು. ’ಸರಿ, ಹೇಳಿ,’ ’ನಾವು… ಬ್ಯಾಂಕಿನವರು. ನಿಮಗೆ ಕ್ರೆಡಿಟ್ ಕಾರ್ಡನ್ನು ಫ್ರೀಯಾಗಿ ಕೊಡುತ್ತೇವೆ.’ ನಾನು ಅವಳ ಮಾತು ಮುಂದುವರಿಸುವ ಮೊದಲೇ ಹೇಳಿದೆ, ’ಹೌದಾ? ನನಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡಿನ ಅವಶ್ಯಕತೆ ಇದೆ. ನಾನು ಈಗಾಗಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭೂತಯ್ಯನ ಮಗ ಅಯ್ಯು: ವಾಸುಕಿ ರಾಘವನ್ ಅಂಕಣ

“ಗ್ರಾಮೀಣ ಚಿತ್ರ”ಗಳಲ್ಲಿ ಬರುವ ಕ್ಲೀಷೆಗಳಿಗೆ ಲೆಕ್ಕವಿಲ್ಲ. ಹಸಿರು ಹಸಿರಾಗಿ ಉದ್ದಗಲಕ್ಕೂ ಹರಡಿಕೊಂಡಿರುವ ಗದ್ದೆಗಳು, ಲಂಗ ದಾವಣಿ ಹಾಕಿರೋ ನಾಯಕಿ, ಹೆಗಲ ಮೇಲೆ ಬಿಳೀ ಮೇಕೆಮರಿಯನ್ನು ಎತ್ತಿಕೊಂಡು “ಅಯ್” ಅನ್ನುವ ಮುಖಭಾವ, ಸದಾ ಎಲೆಯಡಿಕೆ ಜಗಿಯುವ ಹುಳುಕಲು ಹಲ್ಲಿನ ಅಜ್ಜಿ, ಆ ಅಜ್ಜಿ ಒಮ್ಮೆಯಾದರೂ “ಬೋ ಪಿರುತಿ” ಅನ್ನುವ ಕೃತಕ ವಾಕ್ಯಪ್ರಯೋಗ, ಹಳ್ಳಿಯವರೆಲ್ಲಾ ಒಳ್ಳೆಯವರು, ಹೊರಗಿಂದ ಬಂದ ಪಟ್ಟಣದವರು ಮಾತ್ರ ಕೆಟ್ಟವರು ಅನ್ನುವ ಧೋರಣೆ ಇತ್ಯಾದಿ ಇತ್ಯಾದಿ. ಈ ಪ್ರಕಾರದಲ್ಲಿ ಬಂದಿರುವ ಲೆಕ್ಕವಿಲ್ಲದಷ್ಟು ಕೆಟ್ಟ ಚಿತ್ರಗಳನ್ನು ನೋಡಿದ್ದ ನನಗೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳೆಯುವ ಸಿರಿ ಮೊಳಕೆಯಲ್ಲಿ: ಡಾ. ವಾಣಿ ಸುಂದೀಪ್

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಕ್ಕಳ ಒಲವು ಯಾವ ಕಡೆ ಎಂಬುದು ಪೋಷಕರಿಗೆ ಮಕ್ಕಳು ಚಿಕ್ಕವರಿರುವಾಗಲೇ ಅರ್ಥವಾಗಬೇಕು.  ಮಕ್ಕಳನ್ನು ಬೆಳೆಸುವುದು, ಪಾಲಿಸುವುದು ಸುಲಭದ ಕೆಲಸವಲ್ಲ. ಮಕ್ಕಳ ಆಟ, ಹಟ, ನಗು, ಬಾಲ್ಯತನ ಎಲ್ಲವೂ ಹಿತ ನೀಡುತ್ತವೆ. ಆದರೆ ಮಕ್ಕಳ ಜವಾಬ್ದಾರಿಯ ವಿಚಾರ ಬಂದಾಗ ಎಲ್ಲ ತಂದೆ-ತಾಯಿಯರೂ ಜಾಗೃತರಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ, ಅದರ ಜೊತೆಗೆ ಹೊರ ಜಗತ್ತಿನ ಅನುಭವವನ್ನು ಮಾಡಿಸಬೇಕು. ಮಕ್ಕಳ ಆಸೆಗಳನ್ನೂ ಪೂರೈಸಬೇಕು.   ಮಗು ಹಠ ಮಾಡುತ್ತಿದೆ ಎಂದು ಕೈಲಾಗದ ವಸ್ತುಗಳನ್ನು ತರಲು ಸಾಧ್ಯವಿಲ್ಲ. ಮೊದಲನೆಯದಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೃದಯದ ಹಂದರದಲ್ಲೊಂದು ಸ್ನೇಹ ಸಿಂಚನಾ: ರಾಮು ಗುಂಡೂರು

                                 ಈ ನೆನಪೆ ಶಾಶ್ವತವು ಮಿಂಚಿದ ಶಾಲದಿನವು ಈ ಹಾಡು ನಮ್ಮ ಕಥೆಗೆ ಎಷ್ಟು ಸಾಮ್ಯತೆಯಿದೆಯೆಂದರೆ….? ನನ್ನ ನೆನಪಿನ ಸಂಚಿಯ ಪ್ರತಿ ನೆನಪಿಗೂ ಜೀವ ತುಂಬಬಲ್ಲ ಶಕ್ತಿಯಿದೆ ಎಂದರೆ ಅತಿಯೋಶಕ್ತಿಯಾಗಲಾರದು. ನನ್ನ ಮನದಾಳದ ವ್ಯತೆಯನ್ನು ಕಥೆಯಾಗಿ ಹೇಳುವೆ ಗೆಳತಿ ಮನಸಾರೆ ಕೇಳುವೆಯೆಂಬ ನಿರೀಕ್ಷೆಯೊಂದಿಗೆ ನನ್ನ ಪತ್ರವನ್ನು ಆರಂಭಿಸುತ್ತೇನೆ. ಡಿಯರ್ ಗೆಳತಿ ನಿನ್ನೊಂದಿಗೆ ಕಳೆದ ಶಾಲಾದಿನಗಳು ಎಷ್ಟೊಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿ (ಭಾಗ 18): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಆಕೆಯ ಬದುಕಿನಲ್ಲಿ ಎದುರಾಗುತ್ತಿರುವ ತಿರುವು ಮುರುವುಗಳನ್ನು ನನ್ನನ್ನು ಕೂಡ ಆತಂಕಗೊಳಿಸಿದ್ದವು. ನಮ್ಮ ಆಫೀಸ್‍ನಲ್ಲಿ ಹಿರಿಯ ಲೈಂಗಿಕ ಕಾರ್ಮಿಕರನ್ನು ಕಾಂಡೋಮ್ ಹಂಚುವ 'ಸಂರಕ್ಷಾ ಸಖಿ'ಯರನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದು ನೆನಪಾಗಿ ನಾನು ಆಕೆಗೆ ವಿಷಯವನ್ನೆಲ್ಲ ತಿಳಿಸಿದೆ. ನಮ್ಮ ಕಚೇರಿಯ ವಿಳಾಸ ಕೊಟ್ಟು ಹೊರ ಬಂದೆ. ಮನೆಯ ಬಾಗಿಲಿನಲ್ಲಿ ಕುಳಿತಿದ್ದ ರಾಜಿಯ ಅರಳುತ್ತಿರುವ ಚೆಲುವನ್ನು ನೋಡಿ ನನಗೆ ಸಂತೋಷ, ಗಾಬರಿಗಳೆರಡು ಒಟ್ಟೊಟ್ಟಿಗೆ ಆದವು. ಮತ್ತೆ ಮನೆಯೊಳಗೆ ಹೋಗಿ ರಾಜಿ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ನೇಹ ಭಾಂದವ್ಯ (ಭಾಗ 4): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಆ ದಿನ ರಾತ್ರಿ ಸುಧಾಳಿಗೆ ನಿದ್ದೆ ಹತ್ತಿರ ಸುಳಿಯದಾಯಿತು ಈ ವಿಷಯವನ್ನು ಹೇಗಾದರೂ ಮಾಡಿ ರೇಖಾಳಿಗೆ ತಿಳಿಸಬೇಕು. ಊರಿಗೆ ಬಂದು ಐದಾರು ದಿನಗಳು ಕಳೆದಿವೆ ಆದರೂ ರೇಖಾಳನ್ನು ಭೇಟಿಯಾಗಿಲ್ಲ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಬೇಕೆಂದು ಚಿಂತಿಸುತ್ತ ಮಲಗಿದವಳಿಗೆ ಬೆಳಕು ಹರಿದಿದ್ದೆ ತಿಳಿಯಲಿಲ್ಲ. ಏಳೇ ಸುಧಾ ಇನ್ನು ಮಲಗೆ ಇದ್ದೀಯಲ್ಲೆ. ಗಂಡಿನ ಕಡೆಯವರು ಬರುವುದರೊಳಗಾಗಿ ಮನೆಯ ಕೆಲಸವೆಲ್ಲ ಮುಗಿಯಬೇಕು ಎಂದು ಕಾವೇರಮ್ಮ ಎಬ್ಬಿಸಿದಾಗಲೇ ಸುಧಾಳಿಗೆ ಎಚ್ಚರ. ಸುಧಾ ಎದ್ದು ಬೇಗ ಬೇಗನೆ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಪ್ರವಾಸ ಕಥನ ಸ್ಪರ್ಧೆ

  ಪಂಜು ಅಂತರ್ಜಾಲ ವಾರಪತ್ರಿಕೆ (https://www.panjumagazine.com/) ಮತ್ತು ಪಂಜು ಪ್ರಕಾಶನದ ವತಿಯಿಂದ ಪಂಜು ಪ್ರವಾಸ ಕಥನ ಸ್ಪರ್ಧೆಗೆ ನಿಮ್ಮ ಪ್ರವಾಸ ಕಥನಗಳನ್ನು ಆಹ್ವಾನಿಸಲಾಗಿದೆ. ಲೇಖನಗಳು ಸ್ವಂತ ರಚನೆಗಳಾಗಿರಬೇಕು. ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನಗಳನ್ನು ಕಳುಹಿಸಬಹುದು (ಗರಿಷ್ಠ ಮಿತಿ 3 ಲೇಖನಗಳು). ಪ್ರತಿ ಲೇಖನಗಳು ಕನಿಷ್ಠ 3000 ಪದಗಳಿಂದ ಕೂಡಿರಬೇಕು (ಗರಿಷ್ಠ ಮಿತಿ 5 ಸಾವಿರ ಪದಗಳು). ಲೇಖನಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರವಾಸಗಳ ವೈವಿಧ್ಯತೆ ಇರಲಿ. ಸಾಧ್ಯವಾದರೆ ಲೇಖನಗಳ ಜೊತೆಗೆ ಲೇಖನಕ್ಕೆ ಹೊಂದುವ ನೀವೇ ತೆಗೆದಿರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರಿಮುಗಿಲುಗಳ ನಡುವೆ: ಜಯರಾಮ ಚಾರಿ

"ಬೆಳಕಿನ ವೇಗದಲ್ಲಿ ನೀನಿದ್ದಾಗ ಎಲ್ಲವೂ ಶೂನ್ಯವಾದಂತೆ ಭಾಸವಾಗುತ್ತದೆ; ಅಸಲು ಶೂನ್ಯವೇ ಆಗಿರುತ್ತದೆ" ಯಾವುದೋ ಅನಾಮಧೇಯ ವಿಜ್ಞಾನಿಯ ಈ ವಾಕ್ಯ ನನ್ನೊಳಗೆ ಎನನ್ನೋ ಹುಟ್ಟಿಹಾಕಿರಬೇಕು!. ಇಲ್ಲದಿದ್ದರೆ ಇಷ್ಟೊಂದು ಕಾಡುವ ಅಗತ್ಯವೇನಿತ್ತು? ಈ ಪ್ರವಾಹಭರಿತ 'ಜಲಧಾರಿನಿ' ತುಂಬಿ ಹರಿವಾಗ, ಅದರಲ್ಲಿ ಕೊಚ್ಚಿಹೋಗೋ ಸಾವಿರ ಕಲ್ಮಶಗಳ ನಡುವೆ ಇಂತಹುದೊಂದು ಪ್ರಶ್ನೆ ಯಾಕೆ ನನ್ನ ಕಾಡಬೇಕು? ಅದು ನನ್ನದಲ್ಲದ ಪ್ರಶ್ನೆಗೆ!. ಕರಿಮುಗಿಲಕಾಡು; ಈ ಹೆಸರೇ ವಿಚಿತ್ರತೆರನದು ಕರಿಮುಗಿಲೆಂದರೆ ಕಪ್ಪಾದ ಮುಗಿಲುಗಳು. ಮುಗಿಲುಗಳು ಸೇರಿ ಕಾಡಾದೀತೆ? ಕಾದಾಡಿತಷ್ಟೇ. ಇಂತಹುದೊಂದು ವಿಚಿತ್ರ ಊರಿಗೆ ನಾಗರೀಕತೆ ತುದಿಯಲ್ಲಿರೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಲದ ವಿಷಯ (ಭಾಗ 1): ಸೂರಿ ಹಾರ್ದಳ್ಳಿ

ಕೆಲವರಿದ್ದಾರೆ, ಅವರಿಗೆ ಒಣ ಪ್ರತಿಷ್ಠೆ. ಯಾವುದೇ ಕಿವಿ ಸಿಕ್ಕರೂ, ಅದು ಮರದ್ದೇ ಆಗಿರಬಹುದು, ಮಣ್ಣಿನದ್ದೇ ಆಗಿರಬಹುದು, ಬೊಗಳೆ ಬಿಡುತ್ತಾರೆ: ತಾನು ಯಾವ ಸಾಲವನ್ನೂ ಮಾಡಿಲ್ಲ, ಹಾಲಪ್ಪನಿಂದ ಕೂಡಾ. ಹಾಗಾಗಿ ಸಾಲ ಕೊಟ್ಟವರು ಯಾರೂ ತನ್ನ ಮನೆಯ ಬಾಗಿಲನ್ನು ತಟ್ಟುವಂತಿಲ್ಲ, ಎಂದು, ಎದೆ ತಟ್ಟಿಕೊಂಡು, ತಲೆ ಎತ್ತಿಕೊಂಡು! ಆದರೆ ಹಾಗೆ ಯಾರೂ ಹೇಳುವಂತಿಲ್ಲ. ಯಾಕೆಂದರೆ ಸಿನೆಮಾ ಹಾಡೊಂದು ಹೇಳುತ್ತದೆ, ‘ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯಾ ಜನ್ಮವ ತಳೆದು…’ ಎಂದು. ಸಾಲ ತೀರಿದ ನಂತರವೇ ಮರುಜನ್ಮದ ಸರಣಿಯಿಂದ ಬಿಡುಗಡೆ ಎಂಬುದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಅನುಭವ (ಭಾಗ ೧): ಗುರುಪ್ರಸಾದ ಕುರ್ತಕೋಟಿ

"ಯಾವುದೆ ಪ್ರವಾಸದಲ್ಲಿ ಅನುಭವಿಸುವ ಅನಂದಕ್ಕಿಂತ ಆ ಪ್ರವಾಸಕ್ಕಾಗಿ ಮಾಡುವ ಸಿಧ್ಧತೆ ಹಾಗೂ ಅದರ ಕಲ್ಪನೆಯಲ್ಲಿ ಸಿಗುವ ಮಜವೇ ಅದ್ಭುತ!" ಅಂತ ನಮ್ಮ ಕೃಷ್ಣ ಮೂರ್ತಿ ಅವರ ಅಂಬೋಣ. ಅದು ನಿಜವೂ ಹೌದು. ಹಾಗೂ ಆ ಮಾತು ಪ್ರವಾಸಕ್ಕಷ್ಟೇ ಸೀಮಿತವಲ್ಲ. ಯಾವುದೇ ವಿಷಯದಲ್ಲೂ ಕಲ್ಪನೆಯಲ್ಲಿರುವ ಖುಷಿಯೇ ಬೇರೆ. ಹೀಗೆ ನಮ್ಮ ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಪರಿಕಲ್ಪನೆ ಶುರುವಾದದ್ದು ಮೂರು ತಿಂಗಳ ಹಿಂದೆ. ಎಲ್ಲೆಲ್ಲಿ ಹೋಗುವುದು, ಏನೇನು ಸಿದ್ಧತೆಗಳು, ಎಲ್ಲಿ ಪ್ಲೇನು, ಎಲ್ಲಿ ಟ್ರೇನು ಅನ್ನುವ ಹಲವಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎತ್ತರದ ಗಡಿಯಲ್ಲಿ..: ಪ್ರಶಸ್ತಿ ಅಂಕಣ

"ಉತ್ತರೇ ಯತ್ಸಮುದ್ರಸ್ಯ, ಹಿಮಾದ್ರೇಶ್ಚೈವ ದಕ್ಷಿಣಾತ್. ವರ್ಷೇ ತದ್ಭಾರತಂ ನಾಮ, ಭಾರತೀಯತ್ರ ಸಂತತಿ:"  ಅಂತೊಂದು ಶ್ಲೋಕ ಇತ್ತು ಹೈಸ್ಕೂಲಲ್ಲಿ. ಹುಟ್ಟುತ್ತಿರೋ ಸೂರ್ಯ ನಿಮ್ಮ ಎಡಭಾಗದಲ್ಲಿರುವಂತೆ ನೀವು ಈ ದೇಶದ ಯಾವುದೋ ಭಾಗದಲ್ಲಿ ನಿಂತಿದ್ದೀರ ಎಂದು ಕಲ್ಪಿಸಿಕೊಂಡರೆ ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳೋದು ಸುಲಭ. ಯಾವ ದೇಶದ ಉತ್ತರದಲ್ಲಿ(ಕೆಳಭಾಗ) ಕಣ್ಣು ಹಾಯಿಸಿದಷ್ಟೂ ಮುಗಿಯದ  ಸಮುದ್ರವಿದೆಯೋ , ದಕ್ಷಿಣದಲ್ಲಿ ಹಿಮಾಲಯದಂತಹ ವಿಶ್ವದ ಅತಿ ಎತ್ತರದ ಪರ್ವತಶ್ರೇಣಿಯಿದೆಯೋ, ಎಲ್ಲಿ ಭಾರತೀಯರೆಂಬ ಸಂತತಿಯಿದೆಯೋ ಆ ದಿವ್ಯ ಭಾರತ ನನ್ನದು ಅಂತ.. ಕೇಳುತ್ತಾ ಇದ್ರೆ ಎಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡ ಪ್ರೇಮಿ: ಮಹಾಂತೇಶ್ ಯರಗಟ್ಟಿ

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ ಬಾಯ್ ವೊಲಿಸ್ಯಾರೆದ್ರೊವೆ|| ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ನ ಮನಸನ್ ನೀ ಕಾಣೆ|| ಈ ಮೇಲಿನ ಸಾಲುಗಳನ್ನು ಓದಿದರೆ ತುಂಬಾ ರೋಮಾಂಚನ ಅನಿಸುತ್ತೆ ಅಲ್ವಾ..? ನಮ್ಮ ನಾಡಿನ ಗಡಿ ಜಿಲ್ಲೆಯಾದ ಚಾಮರಾಜನಗರದ, ಗುಂಡ್ಲುಪೇಟೆಯ ಹಿರಿಯ ಸಾಹಿತಿಗಳಾದ ಶ್ರೀ ಜಿ.ಪಿ.ರಾಜರತ್ನಂರವರ ಈ ಸಾಲುಗಳು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನನ್ನು ಬಡಿದ್ದೆಬ್ಬಿಸುತ್ತವೆ. ಅವರ ಅಪ್ಪಟ ಕನ್ನಡಾಭಿಮಾನವನ್ನು ಬಿಂಭಿಸುವ, ಈ ಸಾಲುಗಳಂತೆ ಇದೇ ಗುಂಡ್ಲುಪೇಟೆಯ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ” ದಲ್ಲಿ ಕಂಡಕ್ಟರಾಗಿ ಕೆಸಲನಿರ್ವಹಿಸುತ್ತಿರುವ, ಶ್ರೀ ನಟರಾಜ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಸ್ಯಾಹಾರ ವರ್ಸಸ್ ಮಾಂಸಾಹಾರ: ಅಖಿಲೇಶ್ ಚಿಪ್ಪಳಿ ಅಂಕಣ

  ಮೊನ್ನೆ ಪರಿಚಿತರೊಬ್ಬರು ಸಿಕ್ಕಿದ್ದರು. ಮಾತು ದೇಶ-ವಿದೇಶಗಳನ್ನು ಸುತ್ತಿ, ಕಡೆಗೆ ನಾವು ಸೇವಿಸುವ ಆಹಾರದ ಬಗ್ಗೆ ಹೊರಳಿತು. ತಟ್ಟನೆ ಆ ಪರಿಚಿತರು ಪ್ರತಿಕ್ರಯಿಸಿದರು. ಮಾರಾಯ ಈಗಿನ ಪೀಡೆನಾಶಕದ ಹಾವಳಿಯಲ್ಲಿ ತರಕಾರಿಗಿಂತ ಕೋಳಿ ತಿನ್ನೋದೆ ಸ್ವಲ್ಪ ಮಟ್ಟಿಗೆ ಒಳ್ಳೆದು ಅಂತ ಕಾಣ್ತದೆ ಎಂದರು. ಯಾಕೆ ಎಂದೆ. ನೋಡು ತರಕಾರಿಗಳಿಗೆ ಇಂತದೇ ವಿಷ ಹಾಕ್ತಾರೆ ಅಂತ ಹೇಳೊಕಾಗಲ್ಲ. ಪಾದರಸದಿಂದ ಹಿಡಿದು ಎಂಡೋಸಲ್ಪಾನ್‍ವರೆಗೂ ಎಲ್ಲಾ ತರಹದ ಔಷಧ ಹೊಡಿತಾರೆ. ಯಾವುದೇ ನಿಯಮಗಳನ್ನೂ ಪಾಲಿಸೋದಿಲ್ಲ. ಕೋಳಿಯಾದ್ರೆ ಜೀವಂತ ಪ್ರಾಣಿ ಹಾಗಾಗಿ ಅದಕ್ಕೆ ಯದ್ವಾತದ್ವಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಬಿಫೋರ್” ಟ್ರೈಲಾಜಿ: ವಾಸುಕಿ ರಾಘವನ್ ಅಂಕಣ

“ಫ್ರಾನ್ಚೈಸೀ” ಚಿತ್ರಗಳಲ್ಲಿ, ಮೊದಲ ಚಿತ್ರದಷ್ಟೇ ಉತ್ತಮವಾಗಿ ನಂತರದ ಚಿತ್ರಗಳು ಬರುವುದು ಬಹಳ ಅಪರೂಪ. ಅದಕ್ಕೆ ಕಾರಣ ಸೀಕ್ವೆಲ್ಲುಗಳನ್ನು ಮಾಡುವ ಹಿಂದಿರುವ ಸಾಮಾನ್ಯ ಮನಸ್ಥಿತಿ – ಮೊದಲ ಚಿತ್ರ ಗೆದ್ದಿತ್ತು, ಆ ಗೆಲುವಿನ ಬೆನ್ನೇರಿ ಇನ್ನೊಂದಷ್ಟು ದುಡ್ಡು ಮಾಡಿಕೊಳ್ಳೋಣ ಅನ್ನುವುದು. ಅದಕ್ಕೆ ಅಪವಾದ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ “ಬಿಫೋರ್” ಟ್ರೈಲಾಜಿ. 1995ರಲ್ಲಿ ಬಂದ “ಬಿಫೋರ್ ಸನ್ರೈಸ್” ಸಾರ್ವಕಾಲಿಕ ಅತ್ಯುತ್ತಮ ರೋಮ್ಯಾನ್ಸ್ ಚಿತ್ರಗಳಲ್ಲಿ ಒಂದು. ಯೂರೋಪಿನ ಟ್ರೈನಿನಲ್ಲಿ  ಪ್ರಯಾಣ ಮಾಡುವಾಗ ಅಮೆರಿಕಾದ ಯಾತ್ರಿಕ ಜೆಸ್ಸಿ ಮತ್ತು ಫ್ರೆಂಚ್ ಯುವತಿ ಸೆಲೀನ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಮಂಜು ಹಿಚ್ಕಡ್, ಚೇತನ್ ಕೆ ಹೊನ್ನವಿಲೆ, ಕಾಜೂರು ಸತೀಶ್

ಹೂ-ದುಂಬಿ  ಹೂಬನದಿ ಆಗತಾನೇ ಅರಳಿದ ಹೂ ಕಾದಿಹುದು ದುಂಬಿ ತನ್ನ ಚುಂಬಿಸಲೆಂದು.   ಮುಂಜಾವಿನ ತಂಗಾಳಿಗೆ ಮೈಯೊಡ್ಡಿ ಕಾದಿಹುದು ಎಂದು ಸೂರ್ಯ, ಉದಯಿಸಿಹೆನೆಂದು.   ಪಕಳೆಗಳ ಅರಳಿಸಿ ಕಾದಿಹ ಸುಮವ ಕಂಡು ತಾ ಮೋಹಗೊಂಡು ಹಾರಿತು ದುಂಬಿ ಆಗತಾನೆ ಅರಳಿನಿಂತ ಆ ಸುಮದೆಡೆಗೆ.   ಝೇಂಕರಿಸಿ ತನ್ನೆಡೆಗೆ ಹಾರಿ ಬಂದ ದುಂಬಿಗೆ ತನ್ನ ಮೈ ಅಲುಗಿಸಿ ಸ್ವಲ್ಪ ಸತಾಯಿಸಿ ಸಹಕರಿಸಿತು ದುಂಬಿಗೆ ತನ್ನ ಮಕರಂದ ಹೀರಲು.   ಮಕರಂದ ಹೀರಿ ತನ್ನಾಸೆ ತೀರಿತೆಂದು ಹಾರಿತು ದುಂಬಿ ಇನ್ನೊಂದರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ನೇಹ ಭಾಂದವ್ಯ (ಭಾಗ 3): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…)  ಇತ್ತ ಗೆಳತಿಯರಿಬ್ಬರು ಮುಂದೇನು ಎಂದು ಚಿಂತಿಸತೊಡಗಿದರು. ಆಗ ರೇಖಾನೆ ಮೊದಲಿಗಳಾಗಿ ಸುಧಾ ನಾಳೆ ಬೆಳಿಗ್ಗೆ ನಾವಿಬ್ಬರು ಮೊದಲು ಎಲ್ಲಾದರೂ ರೂಮು ಬಾಡಿಗೆಗೆ ಸಿಗುತ್ತದಾ ಅಂತ ನೋಡೋಣಾ ಎಂದಳು. ಗೆಳತಿಯ ಮಾತಿಗೆ ಸುಧಾ ಸಮ್ಮತಿಸಿದಳು. ಅನಂತರ ಪಕ್ಕದ ರೂಮಿನ ಹುಡುಗಿಯೊಬ್ಬಳು ಬಂದು ಊಟಕ್ಕೆ ಬರ್ರಿ ಎಂದು ಹೇಳಿ ಹೋದಳು. ಅದರಂತೆ ರೇಖಾ ಮತ್ತು ಸುಧಾ ಇಬ್ಬರು ಊಟದ ಹಾಲಿಗೆ ಬಂದಾಗ ಕನಿಷ್ಟ ನಲವತ್ತು ಹುಡುಗಿಯರು ಊಟಕ್ಕೆ ಕುಳಿತ್ತಿದ್ದರು. ಇವರು ಹೋಗಿ ಕುಳಿತರು. ಆಗ ಹುಡುಗಿಯರೆಲ್ಲ ಒಬ್ಬೊಬ್ಬರಂತೆ ಇವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿ (ಭಾಗ 17): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ