ಸೋಮವಾರದ ಸಂಚಿಕೆಯಲ್ಲಿ ನಿರೀಕ್ಷಿಸಿ…
1. ಚುಟುಕ ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ. 2. ಸಿನಿಲೋಕ ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್ 3. ಕಾವ್ಯಧಾರೆ ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ 4. ಹಾಸ್ಯ ಕೊಂಕು….ಕೊಂಚ ಕಚಗುಳಿಗೆ!!:ಸಂತು 5. ಪ್ರೀತಿ ಪ್ರೇಮ ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್ 6. ಕಥಾಲೋಕ ತಂತ್ರ: ರಾಘವೇಂದ್ರ ತೆಕ್ಕಾರ್ 7. ಕಥಾಲೋಕ ವಿಪರ್ಯಾಸ: ಬದರಿನಾಥ ಪಲವಳ್ಳಿ 8. ಸರಣಿ ಬರಹ … Read more
ಹೆಣ್ಣಿಲ್ಲದೆ ಮನೆಯೊಂದು ಮನೆಯಲ್ಲ: ಸಿ ಎಸ್ ಮಠಪತಿ
ಲೇ ಊಂಟಗೇಡಿ “ನೀನು ಹೆಣ್ಣಾಗಿ ಹುಟ್ಟ ಬಾರದಿತ್ತಾ.. ನೀ ಹೆಣ್ಣಾಗಿ ಹುಟ್ಟಿದ್ರ ನಾಳೆ ಮದ್ವಿ ಆದ್ ಮ್ಯಾಗ ಒಂದೆರಡ ಮಕ್ಳನ್ನ ಹಡ್ದು ಅವ್ನ ಬಾಳ್ ಚೆಲೋತಂಗೆ ಸಾಕ್ತಿದ್ದಿ. ಆ ದೇವ್ರ್ ನಿನ್ನ ಯಾಕರ ಗಂಡಾಗಿ ಹುಟ್ಸಿದಾ ಅನ್ಸಾಕತ್ತೈತಿ ನಂಗ” ಖರೇನ್ ಹೇಳ್ ತೀನಿ, ನೀ ಏನರಾ ಹೆಣ್ಣಾಗಿ ಹುಟ್ಟಿದ್ದಿ ಅಂದ್ರ, ನನ್ನ ಮಮ್ಮಗಗ ತಗೋಂಡು ಮನಿ ಸ್ವಸಿ ಮಾಡ್ಕೊಂಡ್ ಬಿಡ್ತಿದ್ನಿ.! ದೇವ್ರು ಮೋಸ ಮಾಡ್ದಾ. ತಪ್ಪಾಗಿ ನಿನ್ನ ಗಂಡ್ಸಾಗಿ ಹುಟ್ಸಿದಾ..!! ನಮ್ಮ “ಬಸವ್ವ” ಆಯಿ ಹಿಂಗಂತ ನಂಗ … Read more
ಮೂವರ ಕವಿತೆಗಳು: ಪ್ರೀತೀಶ, ದಿಲೀಪ್ ರಾಥೋಡ್, ಸ್ವರ್ಣ ಎನ್.ಪಿ.
ನೀ ಕೊಟ್ಟೆ ಪರೀಕ್ಷೆ ಸೀತೆ, ನೂರು ದುಗುಡಗಳ ತುಂಬಿಕೊಂಡು ಸುಮ್ಮನೆ ಕೂತುಬಿಟ್ಟೆಯಲ್ಲೇ ಶೋಕವನದೊಳಗೆ; ಅಯ್ಯೋ ಪಾಪ ಸೀತೆ ಅಷ್ಟೈಶ್ವರ್ಯ ಬಿಟ್ಟು ಕಾಡಿಗೆ ಹೋದಳು ಎಂದು ನೊಂದ ಕವಿಯ ಕಂಡು ನೊಂದುಕೊಂಡೆವಲ್ಲೇ? ಹೊಳೆಯಲೇ ಇಲ್ಲ ನಮಗೆ ನಿನಗೆ, ನಿನ್ನ ಜೊತೆಗೆ ಕೈ ಹಿಡಿದು ನಡೆವ ಕಣ್ಣೀರು ತೊಡೆವ ಮುತ್ತುಗಳ ಮತ್ತಿನಲ್ಲಿ ಮೈಮರೆಸುವ, ಚಿಗುರುತ್ತಿಹ ಜವ್ವನದ ಸಂಭ್ರಮಗಳ ತಣಿಸುವ ನಲ್ಲನಿದ್ದಾನೆಂದು! ಉರ್ಮಿಳೆಯಂತೆ ಬರೀ ವೈಢೂರ್ಯಗಳು ಮಾತ್ರ ಇಲ್ಲವೆಂದು. ಕೂತು ಬಿಟ್ಟೆ ನೆಪವಾಗಿ ಕೈಕಾಲು ಆಡಿಸದೆ ರಾವಣ … Read more
ಸಮಾಜ ಸುಧಾರಕಿ, ಮಹಿಳಾವಿಮೋಚಕಿ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆ: ಹಿಪ್ಪರಗಿ ಸಿದ್ದರಾಮ್
ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಪರಂಪರೆಯನ್ನು ಅವಲೋಕಿಸುತ್ತಾ ಹೋದಂತೆ ಭರತಖಂಡವು ಅಮೂಲ್ಯವಾದ ಸಾಮಾಜಿಕ ಸಮಾನತೆಯ ವೈಚಾರಿಕ, ಪ್ರಗತಿಪರ ಮನಸ್ಸುಗಳಿಂದೊಡಗೂಡಿದ ಅಪೂರ್ವ ರತ್ನಗಳ ಗಣಿಯಾಗಿದೆ. ಸಮಾಜ ಸೇವೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಹೀಗೆ ಹಲವಾರು ಸಂಗತಿಗಳನ್ನು ಆಯಾ ಕಾಲಘಟ್ಟವು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿರುವುದನ್ನು ಕಾಣಬಹುದು. ಹೀಗಿದ್ದರೂ ಕೆಲವು ಸಂಗತಿಗಳು ಸಮಾಜದಲ್ಲಿ ಐಕ್ಯತೆಯ ಮಂತ್ರದೊಂದಿಗೆ ಸಾಮರಸ್ಯವನ್ನುಂಟು ಮಾಡುವಲ್ಲಿ ಯಶಸ್ವಿಯಾದರೂ ಮತ್ತೆ ಕೆಲವೊಮ್ಮೆ ಸಾಮಾಜಿಕವಾಗಿ ಬಲಿಷ್ಟರು, ತಾವೇ ಶ್ರೇಷ್ಟರು ಎಂಬ ದುರಂಹಕಾರ ಮನೋಭಾವದ ಕುಹಕಿಗಳ ಕಪಟತನಕ್ಕೆ ಸಾಕ್ಷಿಭೂತವಾಗಿ ಕಹಿ … Read more
ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು: ಶ್ರೀವತ್ಸ ಕಂಚೀಮನೆ
ಕಾರ್ಯೇಶು ದಾಸಿ – ಕರಣೇಶು ಮಂತ್ರಿ – ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ – ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ … Read more
ಮತ್ತೆ ಬಂದಿದೆ ಮಹಿಳೆಗೊಂದು ದಿನ !!: ಭಾಗ್ಯ ಭಟ್
ಹಾಗೆ ನೋಡಿದ್ರೆ ಎಲ್ಲಾ ದಿನವೂ ಮಹಿಳೆಯರ ದಿನವೇ …. ಬೆಳಿಗ್ಗೆ ಎದ್ದು ಬಾಗಿಲಿಗೆ ನೀರು ಬಿಟ್ಟು ರಂಗೋಲಿ ಹಾಕೋದ್ರಿಂದ ಶುರು ಆಗಿ ರಾತ್ರಿ ಅರೆ ಊಟ ಮಾಡಿ ಮಗುವನ್ನು ಮಲಗಿಸಲು ಹೋಗೋ ತನಕ ಅದು ಅವಳಿಗೇ ಮೀಸಲಾದ ದಿನ … ಅವಳದ್ದೇ ದಿನಗಳೇ… ಬಿಡುವಿಲ್ಲದ ದಿನಚರಿ …. ಕೆಲವೊಂದಿಷ್ಟು ಕನಸುಗಳು … ಕಣ್ಣ ಮುಂದಿನ ಗುರಿ …. ಹೆಗಲ ಮೇಲೆ ಬೆಟ್ಟದಷ್ಟು ಜವಾಬ್ದಾರಿಗಳು … ಅತ್ತೆ ಮಾವಂದಿರ ಮೇಲಿನ ಕಾಳಜಿ ,ಅಪ್ಪ ಅಮ್ಮನ ಮರೆಯಲಾರದ ವಾತ್ಸಲ್ಯ … Read more
ವೈದೇಹಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕ್ರೌಂಚ ಪಕ್ಷಿಗಳು’: ಮೋಹನ್ ಕೊಳ್ಳೇಗಾಲ
ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ ದುಡಿಮೆಯಿದೆ. ಇವೆಲ್ಲಕ್ಕಿಂತಲೂ ಈ ಕಥೆಗಳಲ್ಲಿ ಪ್ರಮುಖವಾಗಿ ಗ್ರಹಿಸಿಕೊಳ್ಳಬಹುದಾದ ಅಂಶವೆಂದರೆ ‘ಪ್ರತಿ ಕಥೆಯಲ್ಲೂ ವಿರುದ್ಧಭಾವಗಳು ಒಟ್ಟೊಟ್ಟಿಗೆ … Read more
ಅಂತರಾಷ್ಟ್ರೀಯ ಸಿನಿಮೋತ್ಸವ ಹಾಗೂ ನಾ ಮೆಚ್ಚಿದ ಸಿನೆಮಾಗಳು: ಮಂಸೋರೆ
ಸಿನೆಮಾ ಜಗತ್ತೊಂದು ಅಕ್ಷಯ ಪಾತ್ರೆಯಿದ್ದಂತೆ. ಇಲ್ಲಿ ಎಷ್ಟೇ ಬಗೆದರೂ ಮತ್ತಷ್ಟು ತುಂಬಿಕೊಳ್ಳುತ್ತದೆ. ಜಗತ್ತನ್ನು ಸಿನೆಮಾ ಮಾಧ್ಯಮ ಆವರಿಸಿರುವ ಪರಿ ಹಾಗಿದೆ. ಬೇರೆಲ್ಲಾ ಅಭಿವ್ಯಕ್ತಿ ಮಾಧ್ಯಮಗಳಿಗಿಂತ ವೇಗವಾಗಿ ತನ್ನನ್ನು ತಾನು ಪುನರ್ವಿಮರ್ಶಿಸಿಕೊಂಡಿರುವ ಮಾಧ್ಯಮವೆಂದರೆ ಅದು ಸಿನೆಮಾ ಮಾತ್ರ. ಹಾಗಾಗಿಯೇ ಜಗತ್ತಿನ ಅಷ್ಟೂ ಇತಿಹಾಸವನ್ನು ತನ್ನೊಳಗಿನಿಂದ ಅಭಿವ್ಯಕ್ತಿಗೊಳಿಸುತ್ತಾ ಸಾಗುತ್ತಿದೆ. ಹಾಗಾಗಿ ಇದು ಜಗತ್ತಿನೊಳಗಿನ ಬಹುಮುಖಿ ಸಂಸ್ಕೃತಿಯಂತೆ ತನ್ನ ಅಭಿವ್ಯಕ್ತಿಯ ವ್ಯಾಪ್ತಿ, ಆಶಯ, ಆಸ್ಥೆಗಳಲ್ಲೂ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ. ಜಗತ್ತಿನ ಕೆಲವು ಭಾಗಗಳಿಗೆ ಸಿನೆಮಾ ಒಂದು ಸಮಯ ಕಳೆಯಲು ಮನರಂಜನಾ ಮಾಧ್ಯಮವಾಗಿ … Read more
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ: ರಾಜೇಂದ್ರ ಬಿ. ಶೆಟ್ಟಿ
ಯೋಗ ಅಂದರೆ ಏನೋ ಒಂದು ಅಲರ್ಜಿ. ಮಾಧ್ಯಮದವರು ಸುಮ್ಮನೆ ವಿಪರೀತ ಪ್ರಚಾರ ಕೊಡುತ್ತಿದ್ದಾರೆ ಅನ್ನುವ ಭಾವನೆ ನನ್ನಲ್ಲಿ ಬೇರೂರಿತ್ತು. ಮಂಗಳೂರಿನಿಂದ ಆಗಾಗ ದೂರವಾಣಿಯ ಮೂಲಕ ನನಗೆ ಕರೆ – ಒಂದು ವಾರ ಇದ್ದು ಯೋಗ ಕಲಿತು ಹೋಗಿ. ಆಮೇಲೆ ನೋಡಿ ನಿಮ್ಮಲ್ಲಿ ಆಗುವ ಬದಲಾವಣೆ. ಒಲ್ಲದ ಮನಸ್ಸಿನಿಂದ ಹೋದೆ. ಯೋಗದ ಮೊದಲ ಅಭ್ಯಾಸದಲ್ಲೇ ನನ್ನ ಅಭಿಪ್ರಾಯ ಬದಲಾಯಿತು ಎಂದು ಹೇಳುವ ಅಗತ್ಯವಿಲ್ಲ ಅನಿಸುತ್ತದೆ. ಮೊದಲ ಕ್ಲಾಸಿನ ಕೊನೆಯಲ್ಲಿ ನನ್ನ ಮುಖದಲ್ಲಿ ಮಂದಹಾಸವಿತ್ತು. ಮಗು ಒಂದು ಬಾವಿಗೆ ಬಿದ್ದು, … Read more
ಮೂವರ ಕವಿತೆಗಳು: ಜಮುನಾ ಪ್ರದೀಪ್, ವೀಣಾ ಭಟ್, ಶ್ರೀವತ್ಸ ಕಂಚೀಮನೆ
ನನ್ನವಳು ನನ್ನವಳು ಹೂರಾಣಿ ನಾನವಳ ಆರಾಧಕ ಆಸ್ವಾದಿಸುತ ಆಘ್ರಾಣಿಸುತ ಆಧರಿಸುತ ಸವಿಯಬೇಕು ಅವಳ ಸೌಂದರ್ಯದ ಸಿರಿಯ ಬಿಂಕ ಬೆಡಗಿನ ಒಯ್ಯಾರದ ಪರಿಯ ಹೇಳುವಾಸೆಯು ನನಗೆ ಬೆರಗುಕಂಗಳಲಿ- "ಕಂಡಿಲ್ಲ ಜಗದಲ್ಲಿ ನಿನಗಿಂತ ಸುಂದರಿಯ!!" ನನ್ನವಳು ಭಾವುಕಳು ನಾನಾಗಲಾಸೆ ಅವಳು ಬಯಸುವ ಸ್ವಪ್ನ ನಾಚುತಲಿ ನಗುನಗುತ ಕನವರಿಸಿ ಕರಗಿ ಮಿಡಿಯಲಿ ಮೌನವೀಣೆ ಝೇಂಕರಿಸಿ ಖುಷಿಯಲ್ಲಿ ಜಗವ ಮರೆತು.. ನನ್ನವಳು ಜಲಪಾತ ನಾನಾಗಬೇಕು ಜಾರಿಸಾಗುವ ನಡುವಿನ ಕಲ್ಲುಹಾಸಿನ ಧರೆಯು ನನ್ನ ಅಪ್ಪುತಲಿ ಹೊಸಕುತಲಿ ಬಳುಕುತಲಿ ಜಿಗಿಯಬೇಕು ರೌಧ್ರ ರಭಸದಿ … Read more
ನಿರ್ಮಲ: ರುಕ್ಮಿಣಿ ಎನ್.
ಬಡತನ, ಅಸಮಾನತೆ, ಅತ್ಯಾಚಾರ, ಜಾತೀಯತೆ, ರಾಜಕೀಯ ಅರಾಜಕತೆಯಿಂದ ತುಂಬಿ ತುಳುಕುತ್ತಿದ್ದ ಕೆಸರಿನಲ್ಲಿ ಬಿರಿಯಿತೊಂದು ನೈದಿಲೆ ನಿರ್ಮಲ. ನಿರ್ಮಲ ತಾಯಿಗೆ ಒಬ್ಬಳೇ ಮಗಳು. ವರದಕ್ಷಿಣೆಯ ಕಿರುಕುಳದಿಂದ ಗಂಡನಿಂದ ಬೇರೆಯಾದ ನಿರ್ಮಲಳ ತಾಯಿ ಶಾರದೆಗೆ ತಾಯಿಯ ಮನೆಯಲ್ಲಿ ಆಶ್ರಯ ಕೂಡ ಸಿಕ್ಕಲಿಲ್ಲ. ಎಷ್ಟಾದರೂ ಹೆತ್ತ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಕಾಲ ಅದು. ಕಣ್ಮರೆಯಲ್ಲಿ ಇದ್ದರೆ ಗಾಳಿಮಾತುಗಳನ್ನು ಸೃಷ್ಟಿಸುವರು ಎಂದರಿತ ಶಾರದೆ ಜನರ ಮಾತುಗಳಿಗೆ ಗ್ರಾಸವಾಗಕೂಡದು ಎಂದು ಹುಟ್ಟೂರಲ್ಲೇ ಬಾಡಿಗೆಯ ಮನೆಯೊಂದನ್ನ ಮಾಡಿಕೊಂಡು ಜೀವನ ಎಂಬ ರಣರಂಗದಲ್ಲಿ ಇಳಿದುಬಿಟ್ಟಳು. ಆ … Read more
ನನ್ನೊಳಗಿನ ಗುಜರಾತ್ (ಭಾಗ 7): ಸಿ.ಎಸ್. ಮಠಪತಿ
ಗುಜರಾತಿನಲ್ಲಿರುವ ತನಕ ನನ್ನಲ್ಲಿ ಒಂದೇ ಒಂದು ಅಪಸ್ವರವಿದ್ದದ್ದು , ಗುಜರಾತಿನ ತಿಂಡಿ ತಿನಿಸುಗಳ ಬಗ್ಗೆ. ನಮ್ಮೂರು ನಮಗೆ ಅಂದ, ನಮ್ಮೂರ ತಿಂಡಿ ತಿನಿಸುಗಳು ನಮಗೆ ಚೆಂದ ಎಂಬ ಮಾತು ಒಂದು ಕಾರಣವಾಗಿರಬೇಕು. ಮಹಾನಗರಗಳಲ್ಲಿ ಸಿಗುವಂತಹ ಆಹಾರಗಳು ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಭಾರತೀಯರಿಗೆ ಸ್ವಲ್ಪ ಹಿಡಿಸಬಹುದು . ಆದರೆ, ಗ್ರಾಮೀಣ ಪ್ರದೇಶದ ಆಹಾರಗಳು ಸುತಾರಾಂ ಹಿಡಿಸುವುದೇ ಇಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಬೆಳಗಿನ ಒಳ್ಳೆಯ ತಿಂಡಿಯ ಅಭಿರುಚಿಯೂ ಇಲ್ಲ. ಅದರಲ್ಲೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಜನರಿಗೆ … Read more
ಕನಸು: ಗಣೇಶ್ ಖರೆ
ಭಾನುವಾರ ಎದ್ದಾಗ 10 ಗಂಟೆಯಾಗಿತ್ತು. ತಲೆ ತುಂಬಾ ಭಾರವಾಗಿತ್ತು. ದಿನದ ಉತ್ಸಾಹವೂ ಇರಲಿಲ್ಲ. ಒಂದು ಕಪ್ ಕಾಫಿಯನ್ನಾದರೂ ಕುಡಿಯೋಣ ಅಂತ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಬಂದೆ. ಗ್ಯಾಸ್ ಕಟ್ಟೆಯ ಮೇಲೆ ಹರಡಿದ್ದ ಪಾತ್ರೆಗಳನ್ನೆಲ್ಲ ಬದಿಗೆ ಸರಿಸಿ ಹಾಲನ್ನು ಬಿಸಿ ಮಾಡಿ, ಕಾಫಿ ಪೌಡರ್ ಸಕ್ಕರೆ ಹಾಕಿ ಕದಡಿ ಕಪ್ಪನ್ನ ಕೈಯ್ಯಲ್ಲಿ ಹಿಡಿದು ಹಾಗೆ ಹಾಸಿಗೆಯ ಮೇಲೆ ಬಂದೊರಗಿದೆ. ಮನಸ್ಸಿನಲ್ಲಿ ನೂರಾರು ಚಿಂತೆಗಳು ಸುಳಿದಾಡುತ್ತಿದ್ದವು. ಇದೇ ಚಿಂತೆಯಲ್ಲಿ ನಿನ್ನೆ ಮಲಗಿದಾಗ ರಾತ್ರಿ ಎರಡಾಗಿತ್ತು. ಕಾಫಿಯ … Read more
ಮರೀಚಿಕೆ: ಶಶಿಕಿರಣ್ ಎ.
ರಾಹುಲ್ ಎಂದಿನಂತೆ ಆಫೀಸ್ ಪ್ರವೇಶ ಮಾಡುತ್ತಲೇ ಟೈಮ್ ನೋಡಿಕೊಂಡ, ಗಡಿಯಾರದ ಮುಳ್ಳು ಘಂಟೆ ೧೦ರಲ್ಲಿ ತೋರಿಸುತ್ತಿತ್ತು."ಛೆ ಅರ್ಧ ಘಂಟೆ ತಡವಾಯಿತು, ಬಾಸ್ ಏನೆನ್ನುತ್ತಾರೋ.." ಗೊಣಗುತ್ತಲೇ ಚೇಂಬರ್ ಸೇರಿಕೊಂಡು ನಿನ್ನೆ ಬಾಕಿ ಇದ್ದ ಫೈಲ್ ಗಳನ್ನು ಬಿಡಿಸಿ ನೋಡಲಾರಂಭಿಸಿದ. ಪ್ರೈವೇಟ್ ಕಂಪೆನಿಯೊಂದರ ಆಫೀಸಿನಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್. ಪಕ್ಕಾ ಬ್ರಾಹ್ಮಣ ಮನೆತನದ ಅಳುಕು ಸ್ವಭಾವದ ಭಾವನಾತ್ಮಕ ಹುಡುಗ. ಹೀರೋನಂತಿಲ್ಲದಿದ್ದರೂ. ನೋಡುವಂತಹಾ ಸುಂದರ. ಅದೆಲ್ಲ ಇರಲಿ, ನಿನ್ನೆ ಬಾಕಿ ಮಾಡಿ ಹೋದ ಕೆಲಸಗಳನ್ನು ತುರಾತುರಿಯಲ್ಲಿ ಮುಗಿಸುತ್ತಿದ್ದಾಗ … Read more
ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ: ವಾಸುಕಿ ರಾಘವನ್
“ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ” 2007ರಲ್ಲಿ ತೆರೆಕಂಡ ಫ್ರೆಂಚ್ ಚಿತ್ರ ನನಗೆ ತುಂಬಾ ಪ್ರಿಯವಾದ ಚಿತ್ರಗಳಲ್ಲಿ ಒಂದು. ಪರಾಲಿಸಿಸ್ ಇಂದ ಇಡೀ ದೇಹದ ಸ್ವಾಧೀನ ಕಳೆದುಕೊಳ್ಳುತ್ತಾನೆ ಜೀನ್ ಡೊಮಿನಿಕ್ ಬಾಬಿ; ತನ್ನ ಎಡಗಣ್ಣನ್ನು ಹೊರತುಪಡಿಸಿ. ಕೇವಲ ಕಣ್ಣು ಮಿಟುಕಿಸಿ ಒಂದು ಪುಸ್ತಕವನ್ನು ಬರೆಯುತ್ತಾನೆ. ಇದೇನಪ್ಪಾ ನಂಬಲಸಾಧ್ಯವಾದ ಕಥೆ ಅಂದ್ರಾ? ನಿಮಗೆ ಆಶ್ಚರ್ಯ ಆಗಬಹುದು, ಇದು ಎಲ್ ಮ್ಯಾಗಜಿನ್ ಎಡಿಟರ್ ಒಬ್ಬನ ನೈಜ ಕಥೆಯನ್ನು ಆಧರಿಸಿದ ಚಿತ್ರ! ಚಿತ್ರ ಶುರು ಆಗುವುದು, ಮೂರು ವಾರದ ಕೋಮಾ … Read more
ಮಗು ಹುಟ್ಟಿದ ಖುಷಿಗೋ, ಸತ್ತವರ ನೆನಪಿಗೋ ಒಂದೊಂದು ಗಿಡ ನೆಡುತ್ತಾ ಬಂದಿದ್ದರೆ…
ಅರಳೀ, ಹೊಂಗೆ, ಮಾವು, ಬೇವು, ನೇರಳೆ, ತೆಂಗು, ಹುಣಸೇ, ಸೀಬೆ, ಹೀಗೆ ಸಾಮಾನ್ಯವಾಗಿ ಕಾಣಸಿಗುವ ಕಾಣ ಸಿಗುತ್ತಿದ್ದ ಮರಗಳನ್ನು ಹೆಸರಿಸುತ್ತಾ ಹೋದರೆ ಆ ಮರಗಳ ಬರೀ ಚಿತ್ರಗಳಷ್ಟೇ ನಮ್ಮ ಕಣ್ಣ ಮುಂದೆ ಬರುವುದಿಲ್ಲ. ಬದಲಿಗೆ ಅವುಗಳ ಎಲೆ ಹೂವು ಹಣ್ಣು ನೆರಳು ತಂಪು ಹೀಗೆ ಏನೆಲ್ಲಾ ನಮ್ಮ ಅನುಭವಕ್ಕೆ ಬರುತ್ತದೆ. ಮರಗಳು ನಮ್ಮ ಬಾಲ್ಯದಲ್ಲಿ ನಮ್ಮೊಡನೆ ಬೆರೆತು ಹೋಗಿದ್ದ ಅನನ್ಯ ಜೀವಿಗಳು. ಮರಕೋತಿ ಆಟಗಳಿಂದ ಹಿಡಿದು ದೆವ್ವದ ಕತೆಗಳವರೆಗೆ, ಪಠ್ಯ ಪುಸ್ತಕದ ಪಾಠಗಳಲ್ಲಿ "ಅಶೋಕನು ಸಾಲು … Read more
ಮಳ್ಳೋ ಮಬ್ಬೋ…: ಗೋಪಾಲ ವಾಜಪೇಯಿ
ಬಟ್ಟ ಬಯಲ ನಟ್ಟ ನಡವ ಒಂದು ಬೇಲಿಯು… ಬೇಲಿ ಮ್ಯಾಲೆ ನಗುವ ಹೂವು ಬೇಲಿ ಒಳಗ ಚಿಣಿಗಿ ಹಾವು – ಬೇಲಿ ಆಚಿ ನನ್ನ ಕರೆಯೋ ಚೆಲುವಿ ಬಾಲಿಯು II೧II ಬಾಲಿ ಹಿಂದ ಬಲಿತು ನಿಂತ ಕೆಟ್ಟ ರಾಕ್ಷಸ ಹಲ್ಲುಹಲ್ಲು ಮಸಿಯುತಾನ ಕಲ್ಲಿ ಮೀಸಿ ತಿರುವುತಾನ – ಕೊಲ್ಲತೀನಿ ಅಂತ ಅಟ್ಟಹಾಸ ಮೆರೆಯುತ … Read more
ಹೀಗೊಂದು ಕಥೆ : ಪ್ರಶಸ್ತಿ ಪಿ.
ಗುಂಡಣ್ಣಂಗೆ ಕಥೆ ಬರೀಬೇಕು ಅನ್ನೋದೊಂದು ಕನಸು. ಮಾಲಳ್ಳಿ ಮಾಲಜ್ಜಿ ಮತ್ತು ಮಾಳ ಬೆಕ್ಕು, ಕುಂದಾಪ್ರುದ ಕಥೆ, ಮೂರಳ್ಳಿ ಕೋಟೆಯಲ್ಲೊಂದು ರಾತ್ರಿ, ನೀರ ರಾಣಿ ಮತ್ತು ನಂಜುಳ್ಳೆ.. ಹೀಗೆ ಹಲವಾರು ಶೀರ್ಷಿಕೆಗಳು, ಅರ್ಧಂಬರ್ದ ಐಡಿಯಾಗಳು ಹೊಳೆದರೂ ಅದ್ಯಾವ್ದೂ ಕಥೆಯ ಮೂರ್ತ ರೂಪ ತಾಳ್ತಿರಲಿಲ್ಲ. ನಾಳೆ ಕಥೆ ಬರ್ದೇ ಬರೀತೀನಿ ಅಂತ ಪ್ರತೀದಿನ ರಾತ್ರೆ ಮಲಗೋವಾಗ ನಿರ್ಧಾರ ಮಾಡಿದರೂ ಮಾರ್ನೇ ದಿನ ಬೆಳಗಾಗಿ, ಮಧ್ಯಾಹ್ನ ಆಗಿ ಮತ್ತೆ ರಾತ್ರೆ ಆಗೇ ಬಿಡ್ತಿತ್ತು ! ಹೀಗೆ ದಿನಗಳು, ತಿಂಗಳುಗಳು ಉರುಳುತ್ತಿರಲು ಅವನ … Read more
ಮೊಸರಾಯಣ: ಶ್ರೀನಿಧಿ ರಾವ್
ಆಗಿನ್ನೂ ಸಂಜೆ ಗೋಧೂಳಿ ಸಮಯ ಮರುಭೂಮಿಗೆ ಪಾದಾರ್ಪಣೆ ಮಾಡಿತ್ತು ಅಷ್ಟೇ. ರಾತ್ರಿ ಊಟಕ್ಕೆ ಊರಿನಿಂದ ಬರೋವಾಗ ಎಲ್ಲ ತಂದಿದ್ದೆ, ಅನ್ನ ಮೊಸರು ಬಿಟ್ಟು ! ಅನ್ನ ಮಾಡಿದ್ದೂ ಆಯಿತು. "ಮೊಸರು ಬೇಕು ಇಲ್ಲಾಂದ್ರೆ ನಂಗೆ ಊಟ ಮಾಡಿದ್ದು ಮಾಡಿದ ಹಾಗೆ ಆಗುವುದಿಲ್ಲ" ಅಂದಿದ್ದಕ್ಕೆ 'ಸರಿ' ಎಂದು ನನ್ನ ರಾಯರು ತಂದು ಕೊಟ್ರು. ಅಯ್ಯಬ್ಬಾ !! ಅದು ಬರಿ ಸಪ್ಪೆ. ನಂಗೆ ಬರೀ ಕೆನೆ ಹುಳಿ ಹುಳಿ ಮೊಸರು ತಿಂದೇ ಗೊತ್ತು!! 'ಥೂ! ಇದೂ ಒಂದು ಮೊಸರಾ ?' … Read more
ಕವಿ ನಾಗರಾಜರವರ ಆದರ್ಶದ ಬೆನ್ನು ಹತ್ತಿ : ಪಾರ್ಥಸಾರಥಿ ನರಸಿಂಗರಾವ್
ಪುಸ್ತಕ ಪರಿಚಯ : ಆದರ್ಶದ ಬೆನ್ನು ಹತ್ತಿ….. ಪ್ರಕಾಶನ : ಕವಿಪ್ರಕಾಶನ, ಶಿವಮೊಗ್ಗ. 'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೋ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೇ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೇ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ. ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು. ಆದರೆ ವಿಧಿಬಿಡಬೇಕಲ್ಲ, … Read more
ಪಶ್ಚಾತಾಪ ಮತ್ತು ಕ್ಷಮೆ: ರುಕ್ಮಿಣಿ ಎನ್.
ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ. ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ. “ನೀನೆಷ್ಟೇ ತಪ್ಪು ಮಾಡಿದರೂ, ನನಗೆ … Read more
ಸೆಂಟ್ ನರಸಿಂಹ : ವಿ.ಆರ್.ಕಾರ್ಪೆಂಟರ್
ನಾನಾಗ ಎಂಟನೇ ತರಗತಿ ಓದುತ್ತಿದ್ದೆ. ನಮ್ಮ ಮನೆಯ ಪಕ್ಕದಲ್ಲಿರುವ ದುಬ್ಬಪ್ಪನ ಹೊಲ ಕಟಾವು ಮುಗಿಸಿ ಇನ್ನೊಂದು ಬಿತ್ತನೆ ಶುರುವಾಗುವವರೆಗೂ ಊರಿನ ತಿಪ್ಪೆಯಂತೆ ಕಂಗೊಳಿಸುತ್ತದೆ. ನಾನು ನನ್ನ ಸ್ನೇಹಿತರೊಡನೆ ಅಲ್ಲಿಯೇ ಕ್ರಿಕೆಟ್, ಗೋಲಿ, ಸೈಕಲ್ ರೇಸ್, ಚಿಲ್ಲೀ ದಾಂಡು, ಬಂಗ್ರ (ಬುಗರಿ), ಪ್ಯಾಕೇಟ್ (ಸಿಗರೇಟ್ ಪ್ಯಾಕ್), ಲಗೋರಿ ಆಡುತ್ತಲೇ ಅಲ್ಲಿನ ತಿಪ್ಪೆಗಳಲ್ಲಿ ಸಿಗುವ ನಾಣ್ಯ, ಕಬ್ಬಿಣ, ತಾಮ್ರದ ವಸ್ತುಗಳನ್ನು ತಡಕುತ್ತಿದ್ದೆವು. ಒಂದೊಂದು ಸಾರಿ ಇಡೀ ತಿಪ್ಪೆಯನ್ನೇ ಬುಡಮೇಲು ಮಾಡಿ! ಅದರಿಂದ ಸಿಗುವ ಹಣದಲ್ಲಿ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದೆವು. ಅಲ್ಲಿ … Read more
ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು! : ಶೈಲಜ
‘ಕೊನೆಗೂ ತನ್ನ ಕನಸು ನನಸಾಗಲಿದೆಯೆ?’ ದೀಪಾಳಿಗೆ ನಂಬಲು ಸಾಧ್ಯವಾಗಲಿಲ್ಲ… ತನ್ನ ಮೊಬೈಲಿಗೆ ಬಂದ ಸಂದೇಶವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು. “pack ur bag. chalo mumbai… aaaaa… :)” ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಾಸ್ ಹತ್ತಿರ ಒಪ್ಪಿಗೆ ಕೇಳಿ ಮನೆಗೆ ಹೊರಟಳು. ಮನಸ್ಸು ಕೆಲವು ದಿನಗಳ ಹಿಂದಿನ ಚಿತ್ರಣವನ್ನು ಬಿಚ್ಚಿತು. ಇದ್ದಕ್ಕಿದ್ದಂತೆ ಸುಮಿ ಪ್ರತ್ಯಕ್ಷಳಾಗಿದ್ದಳು. ಸುಮ ದೀಪಳ ಬಾಲ್ಯ ಸ್ನೇಹಿತೆ. ಹೆಚ್ಚು ಕಡಿಮೆ ನಿತ್ಯವೂ ಅಂತರ್ಜಾಲ ಅಥವಾ ಮೊಬೈಲ್ ಮೂಲಕ ಸಂಪರ್ಕವಿರುವುದಾದರೂ ಊರ ಕಡೆ ಅವಳು ಬರದೇ … Read more
ಅತ್ತು ಹಗುರಾಗುವ ಭಯ : ರಘುಚರಣ್
ಎದುರಾದ ಕಣ್ಣುಗಳೆಲ್ಲ ಬತ್ತಿದ ಕೊಳಗಳು.. ನೀರಿಲ್ಲವೆಂದಲ್ಲ.. ಪ್ರತಿ ಹನಿಯೂ ಅಂತರ್ಗಾಮಿ.. ನೋವು ದುಃಖದ ಹೊಳೆಗಳಬ್ಬರಿಸುತಿದ್ದರೂ ಅಹಮಿಕೆಯ ಪರದೆಯಡಿ ಮಡುಗಟ್ಟಿ ನಿಂತಿವೆ.. ಪರದೆ ಹರಿಯುವ ತವಕ ಪ್ರತಿಯೊಂದು ಹನಿಗೆ.. ಸೋತ ಭಾವದ ನಡುಕ ಗರ್ವಗಳ ದನಿಗೆ.. ಒಳಗೊಳಗೆ ಕುಸಿದಿಹುದು ಆಂತರ್ಯ ಸೌಧ ಮುಖದ ನಗುವಿಗೆ ತಪ್ತ ಮನಸೇ ವಿರೋಧ ಇನ್ನಾದರೂ ಕಳಚಿ ಬೀಳಲಿ ಬಿಗುಮಾನದ ಬೆರಗು ಕಣ್ಣ ಹನಿಯೇ ಹೊರಬಂದು ಕಪೋಲದಲಿ ಕರಗು…. -ರಘುಚರಣ್ ಕನ್ನಡದ ಬರಹಗಳನ್ನು ಹಂಚಿ ಹರಡಿ
ಎಡ್ ವುಡ್ – ಹೀಗೂ ಒಬ್ಬ ನಿರ್ದೇಶಕ: ವಾಸುಕಿ ರಾಘವನ್
ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕರು ಯಾರು ಅಂತ ಯಾರನ್ನಾದ್ರೂ ಕೇಳಿ. ಥಟ್ ಅಂತ ಉತ್ತರ ಸಿಗುತ್ತೆ ನಿಮ್ಗೆ – ಪುಟ್ಟಣ್ಣ ಕಣಗಾಲ್ ಅಂತಲೋ, ಸತ್ಯಜಿತ್ ರೇ ಅಂತಲೋ, ಸ್ಪೀಲ್ಬರ್ಗ್, ಕ್ಯೂಬ್ರಿಕ್, ಬರ್ಗ್ಮನ್, ನೋಲನ್ ಅಂತಲೋ – ಅವರವರ ಆಸಕ್ತಿ, ಅಭಿರುಚಿ, ವಯೋಮಾನ, ಚಿತ್ರವೈವಿಧ್ಯಗಳ ಪರಿಚಯಕ್ಕೆ ತಕ್ಕಂತೆ ಉತ್ತರಿಸುತ್ತಾರೆ. ಅದೇ ನಿಮ್ಮ ಪ್ರಕಾರ ಅತ್ಯಂತ ಕಳಪೆ ನಿರ್ದೇಶಕ ಯಾರು ಅಂತ ಕೇಳಿ ನೋಡಿ, ತಕ್ಷಣ ಉತ್ತರ ಕೊಡೋದು ಕಷ್ಟ ಆಗುತ್ತೆ. ಆದರೆ ಬಹಳಷ್ಟು ಚಿತ್ರಪ್ರೇಮಿಗಳು ಹಾಗು ವಿಮರ್ಶಕರ ಪ್ರಕಾರ … Read more
ನನ್ನೊಳಗಿನ ಗುಜರಾತ್..!!! ಭಾಗ – 6: ಸಿ.ಎಸ್. ಮಠಪತಿ
ನಲ್ಮೆಯ ಒಂದು ಗೆಳೆತನ, ಒಲವಿನ ಸೆಳೆತನ, ಕಣ್ಣಂಚಿನ ಅಭಯ, ಆಪತ್ತಿನ ಸಹಾಯ ಹಸ್ತ, ವಿದಾಯದಲ್ಲಿನ ಭಾವೊದ್ವೇಗದಿ ಹಚ್ಚಿಕೊಂಡ ಎರಡು ಮನಗಳ ನಡುವಿನ ಬಿಗಿಯಾದ ಆಲಿಂಗನ, ಎಲ್ಲೋ ಒಂಟಿತನದ ದಿನಗಳಲ್ಲಿ ಜಂಟಿಯಾಗಿ, ಏಕಾಂಗಿ ಬದುಕಿನ ನೊಗಕ್ಕೆ ಹೆಗಲಕೊಟ್ಟು ಸಿಹಿ-ಕಹಿ, ಸೋಲು-ಗೆಲುವು, ಸಕಲ ಏರಿಳಿತಗಳಲ್ಲಿ ಜೊತೆಸಾಗುವ ಜೀವ. ಅಬ್ಬಾ…!! ಹೆಕ್ಕಿ- ಹೆಕ್ಕಿ ಹೊರ ಬರಸೆಳೆದು ನೆನೆಯಲೋ ಅಥವಾ ಬರೆಯಲೋ ಕುಳಿತರೆ ಒಂದೇ ,ಎರಡೇ? ಏಕಾಂಗಿ ಬೆತ್ತಲೆ ಹುಟ್ಟು ಸಾವಿನ ನಡುವೆ, ವ್ಯಾಖ್ಯಾನಿಸಲಾಗದಷ್ಟು ಭಾವ ತುಮುಲಗಳು. ಭಾವ ಜೀವಿಗಳಾಗಿ ಬದುಕಿದರೆ, … Read more