ನೆನಪಿನ ಪಯಣ:  ಬಾಗ – 1: ಪಾರ್ಥಸಾರಥಿ ಎನ್

  ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ ! ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು.  ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ. ನಿದ್ರಾದೇವಿಯನ್ನು ಅಹ್ವಾನಿಸಲು ಹೊಸ ಹೊಸ ರೀತಿಯ ಪ್ರಯೋಗ.  ಒಮ್ಮೆ ಕೆಲವು ರಾತ್ರಿ  ನಿದ್ದೆ ಬರಲಿ ಎನ್ನುವ ಕಾರಣಕ್ಕೆ ಮನಸನ್ನು ಒಂದೇ ಕಡೆ ಕೇಂದ್ರಿಕರಿಸಲು ಪ್ರಯತ್ನಿಸುತ್ತ, ಬೆಳಗ್ಗೆಯಿಂದ ರಾತ್ರಿಯ ತನಕ ಏನೆಲ್ಲ ಆಯಿತು ಎಂದು ನೆನೆಯುತ್ತ ಹೋದೆ. ಯಾರುಯಾರ ಜೊತೆಯೆಲ್ಲ ಮಾತನಾಡಿದೆ, ಬೆಳಗಿನ ತಿಂಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

 ಪದ್ಮಪತ್ರದ ಜಲಬಿಂದುವಿನಂತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾವು ಈ ಭೂಮಿಯ ಮೇಲೆ ಶಾಶ್ವತವಾಗಿ ಬದುಕಲು ಬಂದವರಲ್ಲ. ಪಂಚಭೂತಗಳಿಂದಾದ ಈ ದೇಹ ಇಲ್ಲಿ ಬದುಕುವ ಸಾಮರ್ಥ್ಯ ಕಳೆದುಕೊಂಡಾಕ್ಷಣ ಭೂಮಿಯ ಬದುಕು ಅಂತ್ಯವಾಗುತ್ತದೆ. ಒಮ್ಮೊಮ್ಮೆ ದೇಹ ಬದುಕಲು ಸಮರ್ಥವಾಗಿದ್ದರೂ ಅನೇಕ ಕಾರಣಗಳಿಂದ ಬದುಕು ಅಂತ್ಯವಾಗುವುದನ್ನು ನೋಡಿದ್ದೇವೆ. ಆದರೆ ಯಾವಾಗ ನಮ್ಮ ಬದುಕು ಕೊನೆಗೊಳ್ಳುತ್ತದೆಂದು ಯಾರಿಗೂ ತಿಳಿದಿರುವುದಿಲ್ಲ.  ಬದುಕಲು ಸ್ವಲ್ಪ ಆಹಾರ, ವಸ್ತ್ರ, ವಸತಿ ಅವಶ್ಯಕ. ನಮ್ಮ ಜೀವಿತಾವಧಿ ಅಲ್ಪ ಎಂದು ತಿಳಿದೂ, ಆಸಯೇ ದುಃಖಕ್ಕೆ ಮೂಲ ಎಂದು ಕೇಳಿ, ಇತರರಿಗೆ ಬೋಧಿಸಿ,  ಅದು ತಮಗೆ ಅನ್ವಹಿಸುವುದಿಲ್ಲವೆಂಬಂತೆ ವರ್ತಿಸುತ್ತಾರೆ! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಖುಷಿ ಮತ್ತು ಸಂತೋಷ: ಶಿವರಾಜ್ ಬಿ. ಎಲ್

ನಾನು ಅನೇಕ ಬಾರಿ, ತುಂಬಾ ದಿನಗಳಿಂದ ಅತಿಯಾಗಿ ಕಾಡುತ್ತಿದೆ ಅದೇನೆಂದರೆ ನಮ್ಮ ಜೀವನದ ಮುಖ್ಯ ಗುರಿ ಕೇವಲ ಸಂತೋಷವಾಗಿರುವುದಾ???. ಹೌದು ತಾನೇ ನಮ್ಮ ಜೀವನದ ಮುಖ್ಯ ಉದ್ದೇಶ ನಾವು ಖುಷಿಯಾಗಿ ಇರುವುದೇ ಆಗಿದೆ,  ಆದರೆ ಈ ನೋವು ಮತ್ತು ಕಷ್ಟ ಪಡುವುದು ಯಾಕೆ ?? ಇವು ಕೂಡ ನಾವು ಸಂತೋಷವನ್ನು ಪಡೆಯೋಕೆ ಇರುವ ಕೆಲವು ಕಾರಣಗಳು. ಈ ರೀತಿಯಾಗಿ ನಂಬಿರುವುದು ನಾನೊಬ್ಬನೇ ಅಲ್ಲ,ನಮ್ಮ ಸುತ್ತ ಮುತ್ತಲಿನ ಎಲ್ಲ ಜನರು ಇದೆ ಸಿದ್ಧಾಂತ ನಂಬಿ ಜೀವನ ಮಾಡುತ್ತಿದ್ದಾರೆ. ಕೆಲವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನ್ನದಾತ ಕ್ಯಾಂಟೀನ್: ಪ್ರಶಸ್ತಿ

ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳವು. ಎರಡು ದಿನ ನೆಂಟರ ಮನೆಯಲ್ಲಿದ್ದರೂ ಮೂರನೇ ದಿನದೊತ್ತಿಗೆ ಪೀಜಿಯೋ ರೂಮೋ ಹುಡುಕಲೇ ಬೇಕೆನ್ನೋ ಹಠ. ಹಠವೆನ್ನಬೇಕೋ, ಸ್ವಾಭಿಮಾನವೆನ್ನಬೇಕೋ ಗೊತ್ತಿಲ್ಲ. ಹಿಂದೊಮ್ಮೆ ಬಂದಾಗಿನ ಊಟವಿಲ್ಲದ ಉರಿಬಿಸಿಲ ದಿನಗಳಿಲ್ಲದಿದ್ದರೂ ಆದಷ್ಟು ಬೇಗ ಸ್ವಂತದ್ದೊಂದು ನೆಲ ಹುಡುಕೋ ಹವಣಿಕೆ. ಸಂಬಳ ಕೊಡೋ ಕಂಪೆನಿ ಕೆಲಸ ಕೊಡಲು ಶುರುಮಾಡದಿದ್ದರೂ ಗೊತ್ತಿಲ್ಲದ ಊರಲ್ಲಿ ಪರಕೀಯನಾಗದಿರಲು ಒದ್ದಾಟ. ನೆಂಟರ ಮನೆಯಲ್ಲಿದ್ದಷ್ಟು ದಿನವೂ ತಾನು ಈ ಊರಿಗೆ ನೆಂಟನೇ ತಾನೇ ? ಈ ಊರಲ್ಲೊಬ್ಬನಾಗಬೇಕೆಂದರೆ ಇಲ್ಲಿಯ ಸಾಮಾನ್ಯರಲ್ಲೊಬ್ಬನಾಗಬೇಕೆಂಬ ಕನವರಿಕೆ. ಅಂತದ್ದೇ ಕನಸಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ   ಕಣ್ಣಂಚಿನ ನೋಟದಲಿ ಸೆರೆ ಹಿಡಿರುವೆ ನನ್ನ ಮನ ಮೋಹಿಸುವ ನಿನ್ನ ಪಿಸು ಮಾತುಗಳೆ  ಚೆನ್ನ ನೀ ತಿರುಗೆ ನೋಡುವ ಆ ನೋಟ ಬಹು ರೋಮಾಂಚನ ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಸದಾ ನಿನ್ನ ನೋಡುವ ಆಸೆ ಮುಚ್ಚದೆ ಕಣ್ಣ ರೆಪ್ಪೆಯನ್ನ ಸವಿಯಲು ಕಾತುರ ನಿನ್ನ ತುಟಿ ಅಂಚಿನ ಸಿಹಿ ಜೇನನ್ನ ಸೆರೆ ಹಿಡಿದು ಬಂಧಿಸು ನಿನ್ನ ಮನಸಲಿ ನನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹನ್ನೊಂದು ದಿನಗಳ ವನವಾಸ (ಭಾಗ ೧): ಪ್ರಸಾದ್ ಕೆ.

ಅವಳು ಮೆಲ್ಲನೆ ತನ್ನ ಕಣ್ಣುಗಳನ್ನು ತೆರೆಯಲು ಪ್ರಯತ್ನಿಸಿದಳು. ಕಣ್ಣೆಲ್ಲಾ ಮಂಜು. ಎದ್ದೇಳಲು ಎಷ್ಟು ಪ್ರಯತ್ನಿಸಿದರೂ ಶಕ್ತಿಯೇ ಸಾಲುತ್ತಿಲ್ಲ. ಒದ್ದೆ ನೆಲವು ತನ್ನ ದೇಹದ ಶಕ್ತಿಯನ್ನೆಲ್ಲಾ ಹೀರಿ ಕಚ್ಚಿ ಹಿಡಿದಿರುವಂತೆ.  ಹೀಗೆ ಅದೆಷ್ಟು ಬಾರಿ ಪ್ರಯತ್ನಿಸಿದಳೋ ಏನೋ ಆ ಹುಡುಗಿ. ಕೊನೆಗೂ ಹಲವು ಘಂಟೆಗಳ ನಂತರ ಪ್ರಜ್ಞೆಯು ಮರಳಿ ಬಂದಾಗ ತಾನು ದಪ್ಪನೆಯ ಕುಚರ್ಿಯಂತಿರುವ ಆಕೃತಿಯ ಕೆಳಗೆ ಮುದುಡಿ ಮಲಗಿರುವುದು ಅವಳಿಗೆ ಗೊತ್ತಾಗಿದೆ. ಮಲಗಿದ ಭಂಗಿಯಲ್ಲೇ ಪ್ರಯಾಸದಿಂದ ಕಣ್ಣನ್ನಾಡಿಸಿದರೆ ಸುತ್ತಲೂ ಕಾಡೇ ಕಾಡು. ಪ್ರಯಾಸದಿಂದ ತಲೆಯೆತ್ತಿ ನೋಡಿದರೆ ತಲೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನವಳು: ಗಿರಿಜಾ ಜ್ಞಾನಸುಂದರ್

   ಎಲ್ಲೋ ತುಂಬಾ ಸದ್ದು ಕೇಳಿಸುತ್ತಿರುವಂತೆ ಅನುಭವ. ಕಣ್ಣು ತೆರೆಯಲು ಆಗುತ್ತಲೇ ಇಲ್ಲ. ರೆಪ್ಪೆಗಳು ತುಂಬಾ ಭಾರ. ತನ್ನ ಮೈ ತನ್ನ ಮತ್ತೆ ಕೇಳುತ್ತಿಲ್ಲ ಅನ್ನಿಸುತ್ತಿದೆ. ತನ್ನಷ್ಟಕ್ಕೆ ತಾನು ಅತಿ ನೋವು ಅನುಭವಿಸುತ್ತಿದೆ. ಸುತ್ತಲೂ ಮಷೀನ್ ಗಳ ಶಬ್ದ. ತನಗೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಂಡ ಮೇಲೆ ತಿಳಿಯುತ್ತಿದೆ ನಾನು ಆಸ್ಪತ್ರೆಯಾ ಐ ಸೀ ಯು ವಾರ್ಡ್ನಲ್ಲಿದ್ದೀನಿ ಎಂದು. ಎದೆನೋವೆಂದು ಹೇಳಿದ್ದೊಂದೇ ನೆನಪು. ಆಮೇಲೇನಾಯಿತೋ ಗೊತ್ತಿಲ್ಲ. ಆಸ್ಪತ್ರೆ ನನ್ನನ್ನು ಆಲಂಗಿಸಿದೆ. ತನ್ನ ಅರೋಗ್ಯ ಹದಗೆಟ್ಟಿದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಶಿ (ಕೊನೆಯ ಭಾಗ): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಮರುದಿನ ಬೆಂಗಳೂರಿಗೆ ತೆರಳಿದ ನನಗೆ ಒಂದು ಗಳಿಗೆಯೂ ಪುರುಸೊತ್ತು ಇಲ್ಲದಂತಾಗಿತ್ತು. ಕಂಪನಿಯ ವಾರ್ಷಿಕ ಸಮ್ಮೇಳನದ ಸಮಾರಂಭದಲ್ಲಿ ನನಗೆ ಬೆಸ್ಟ್ ರೆಪ್ರಸೆಂಟಿಟಿವ್ ಆಫ್ ದಿ ಇಯರ್’ ಪ್ರಶಸ್ತಿ ಬಂದಾಗ ನನ್ನ ಸಂತೋಷ ಹೇಳತೀರದು. ಕಂಪನಿಗೆ ಸೇರಿದ ಎರಡೇ ವರ್ಷಗಳಲ್ಲಿ ಇಂಥದ್ದೊಂದು ಪ್ರಶಸ್ತಿ ಪಡೆದುಕೊಳ್ಳುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಆಗಿತ್ತು. ಪ್ರಶಸ್ತಿ ಫಲಕ , ಪ್ರಶಸ್ತಿಪತ್ರ ಸ್ವೀಕರಿಸಿ ಕಂಪನಿಯ ರೀಜನಲ್ ಮ್ಯಾನೇಜರಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಷ್ಟರಲ್ಲಿ ರಿಂಗಣಿಸಿದ ಫೋನಿನ ತೆರೆಯ ಮೇಲೆ ’ಅಮ್ಮ’ಎಂದು ತೋರಿಸುತ್ತಿತ್ತು. ತಕ್ಷಣ ಕರೆಯನ್ನು ಕಟ್ ಮಾಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವ್ಯಕ್ತಿ – ದೇಶಭಕ್ತಿ- ಭೂಶಕ್ತಿ: ಅಖಿಲೇಶ್ ಚಿಪ್ಪಳಿ

ಪಶ್ಚಿಮಘಟ್ಟಗಳ ತಪ್ಪಲಿನಲ್ಲಿಂದ ಹಿಡಿದು ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲೂ ಅದೆಷ್ಟೋ ಪ್ರಭೇದಗಳು ನಾಶವಾಗಿವೆ. ಋತುಮಾನಗಳ ಬದಲಾವಣೆಯಿಂದಾಗಿ ಹೊಸ-ಹೊಸ ಪ್ರಭೇದಗಳು ಸೃಷ್ಟಿಯೂ ಆಗುತ್ತಿವೆ. ಸ್ಟೀಫನ್ ಹಾಕಿಂಗ್ಸ್‍ನಂತಹ ಮೇಧಾವಿಗಳು ಮಾನವನ ಕಾರಣಕ್ಕಾಗಿ ಬದಲಾವಣೆಯಾಗುತ್ತಿರುವ ಹವಾಗುಣದಿಂದ ಮನುಷ್ಯಕುಲಕ್ಕೇ ಆಪತ್ತು ಬಂದಿದೆ. ಇನ್ನೊಂದು ಸಾವಿರ ವರ್ಷದ ಒಳಗೆ ನಮ್ಮಗಳ ವಾಸಕ್ಕೆ ಬೇರೆ ಗ್ರಹವನ್ನು ಹುಡುಕಿಕೊಳ್ಳದಿದ್ದರೆ ನಮ್ಮ ಅವಸಾನ ಖಂಡಿತ ಎನ್ನುವ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವ ವಿಜ್ಞಾನವನ್ನು ಕಂಡುಕೊಳ್ಳುವ ಹಂತದಲ್ಲಿ ನಮ್ಮ ವೈಜ್ಞಾನಿಕ ಕಾರ್ಯಕ್ಷೇತ್ರ ತ್ವರಿತವಾಗಿ ಬದಲಾಗಬೇಕಿದೆ.  ವ್ಯಕ್ತಿಗಳನೇಕರು ಸೇರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಹನೆಯೇ ಸ್ತ್ರಿ ಅರಿವು: ನಾಗರೇಖಾ ಗಾಂವಕರ

“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲೆ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ ಆದರೆ ಸಾಧ್ಯವಾಗದೇ ಕಾಗೆಗಳಿಗೆ ಆಹಾರ ವಾಗುತ್ತದೆ. ”ಈ ಸ್ಥಿತಿಯೇ ಸೀತಾಳ ಮನಸ್ಥಿತಿ ಕೂಡ. ಅನಿತಾ ದೇಸಾಯಿಯ shall we go this summer? ಕಾದಂಬರಿಯ ಕೇಂದ್ರ ಪಾತ್ರ ಸೀತಾ. ಒತ್ತಡದ ದಬ್ಬಾಳಿಕೆಯ ಬದುಕಿನಿಂದ ಆಕೆ ಪಲಾಯನ ಮಾಡ ಬಯಸುತ್ತಾಳೆ ಹದ್ದಿನಂತೆ. ಆದರೆ ಸಂಸಾರದ ಬಂಧನದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭವಿಷ್ಯದ ಭರವಸೆಯ ಕಥೆಗಾರ ತಿರುಪತಿ ಭಂಗಿ: ಮಹಾದೇವ ಎಸ್, ಪಾಟೀಲ

  ಬಾಗಲಕೋಟೆ ನಗರದಗೌರಿ ಪ್ರಕಾಶನದಿಂದ ಲೋಕಾರ್ಪಣೆಗೊಂಡ"ಕೈರೊಟ್ಟಿ"ಕಥಾಸಂಕಲನ,  ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ ಪ್ರಕಾರಸಫಲ ಸಮೃದ್ಧತೆಯಿಂದ, ಉಳಿದೆಲ್ಲ ಪ್ರಕಾರಗಳನ್ನು ಮೀರಿ ನಿಂತು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕುತ್ತಿದೆ ಎನ್ನುವ: ಶ್ರೀಇಂದ್ರಕುಮಾರ ಎಚ್,ಬಿ ದಾವಣಗೆರೆ ರವರು "ಕೈರೊಟ್ಟಿ" ಕಥಾಸಂಕಲನಕ್ಕೆ ಮುನ್ನುಡಿ  ಬರೆಯುತ್ತಾ ಹೇಳಿರುವಮಾತು' ತಿರುಪತಿ ಭಂಗಿಯಂತ ಇನ್ನು ಅನೇಕ ಹೋಸ ಕಥೆಗಾರರಿಗೆ ಬೆನ್ತಟ್ಟಿದಂತಾಗಿದೆ'. ಬಾಗಲಕೋಟೆ ಜಿಲ್ಲೆಯ ದೇವನಾಳದ ತಿರುಪತಿ ಭಂಗಿಯವರು ರ್ಬಾಲ್ಯದಲ್ಲಿಯೇಹೆತ್ತವರ ಕಳೆದುಕೊಂಡುಅಜ್ಜ- ಅಜ್ಜಿಯರ ಆಶ್ರಯದಲ್ಲಿ ಬೆಳೆಯುವ ಅನಿವಾರ್ಯದೊಂದಿಗೆ, ಕೂಲಿ- ನಾಲಿ ಮಾಡುತ್ತಲೇ ಓದುವ ಮೂಲಕ; ಅಜ್ಜ- ಅಜ್ಜಿಯರನ್ನು ಕಳೆದುಕೊಂಡು, ತಂಗಿಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯುಗಾದಿ ಹೊಸ ವರ್ಷಾರಂಭವೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಭಾರತದ ಕೆಲವು ರಾಜ್ಯಗಳಲ್ಲಿ ಹೊಸ ವರ್ಷವನ್ನು ಯುಗಾದಿ ಅಥವಾ ಉಗಾದಿ ಎಂದು ಆಚರಿಸುತ್ತಾರೆ. ' ಯುಗ ' ಎಂದರೆ ಒಂದು ನಿಗಧಿತ ಕಾಲಾವಧಿ. ವರ್ಷ ಎಂದೂ ಅರ್ಥವಿದೆ. ' ಆದಿ ' ಎಂದರೆ ಆರಂಭ. ಯುಗಾದಿ ಎಂದರೆ ವರ್ಷದ ಆರಂಭ. ದಕ್ಷಿಣ ಭಾರತೀಯರಿಗೆ ಚೈತ್ರ ಮಾಸದ ಆರಂಭದ ದಿನವೇ ವರ್ಷದ ಆರಂಭ. ಅಂದು ಯುಗಾದಿಯನ್ನು ಕರ್ನಾಟಕ, ಆಂದ್ರಪ್ರದೇಶದಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ಯ ಎಂದು ಆಚರಿಸುತ್ತಾರೆ. ಯಾವುದೇ ಸಂತೋಷ ಸಂಭ್ರಮಾಚರಣೆಗಳು ಬದುಕಿಗೆ ನವಚೇತನವನ್ನು ನೀಡುತ್ತವೆ. ಆದ್ದರಿಂದಾಗಿ ಅಂತಹ ಅವಕಾಶಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮುಂಜಾನೆ ಮುಂಬಾಗಿಲು ಗುಡಿಸಿ  ಸಾರಿಸಿ ರಂಗೋಲಿ ಬರೆದು ತುಟಿಮೇಲೆ ನಗು ಹೊದ್ದುಕೊಳ್ಳಬೇಕು ಬೈಯ್ಯುವವರ ಮುಂದೆ ಬಿಲ್ಲಾಗಬೇಕು ಮೊಗ್ಗುಮೈಯ್ಯಲ್ಲಿ ಮನೆತುಂಬ ತಿರುಗಬೇಕು ಹೊಗಳಿದರೆ ಹೂವಾಗಬೇಕು ಹಕ್ಕಲ್ಲ ಎಸೆದ ರೊಟ್ಟಿಯ ಚೂರು        ಕತ್ತಲ ಕೊನೆದೀಪ        ಆರುವತನಕ        ತಾನಾಗಿದ್ದುಕೊಂಡು        ನಾನೆಂಬುವರಿಗೆಲ್ಲ ಹೂಂಗುಟ್ಟು        ಅಳಬೇಕೆಂದುಕೊಳ್ಳುತ್ತಲೇ ನಕ್ಕು        ನಗುವಲ್ಲೂ ಕಣ್ಕೊನೆಯುಕ್ಕಿ        ಕತ್ತಲ ಕೊನೆಯಾಟಕ್ಕೂ ಹಾಸಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೆ ಒದಗಿದೊಂದು ಓದು: ಅನುರಾಧ ಪಿ. ಸಾಮಗ

ಉತ್ತರಕಾಂಡ ಓದಿ ಮುಗಿಸಿದ್ದಾಗಿತ್ತು.  ಕತೆಯೊಂದಕ್ಕೆ ಎದುರಾದಾಗಲೆಲ್ಲ ಪಾತ್ರಗಳಿಂದ, ಅವುಗಳ ಪಾಡುಗಳಿಂದ ಅಂತರ ಕಾಯ್ದುಕೊಂಡು ಸಾಗುವುದು ಇಲ್ಲಿಯವರೆಗೂ ಸಾಧ್ಯವಾಗಿಲ್ಲದೆ, ಒಮ್ಮೊಮ್ಮೆ ಆ  ಮನಸುಗಳ ಒಳಹೊಕ್ಕು, ಇನ್ನೊಮ್ಮೆ ಅವುಗಳನ್ನು ಒಳಗಿಳಿಸಿಕೊಂಡು ಅಂತೂ ಕೊನೆಯ ಪುಟಗಳ ಕಡೆಗೆ ಬರುತ್ತಾ ಪಾತ್ರಗಳು ನಡಕೊಂಡ ರೀತಿಯನ್ನು ಸಾಮಾನ್ಯ ಮನುಷ್ಯರ ಬಾಳ್ವೆಯಂತೆಯೇ ಬಿಂಬಿಸಿದ್ದರ ಪರಿಣಾಮವಾಗಿ ಉಮ್ಮಳಿಸಿ ಬಂದು ಢಾಳಾಗಿ ಉಳಕೊಂಡದ್ದೆಂದರೆ  ಎಲ್ಲೆಡೆ ಮುಖ ಮಾಡಿದ  ಜೀವಪ್ರೀತಿ! ಬಹುಶಃ ಕತೆಗಾರನೊಬ್ಬನಿಗೆ ತನ್ನ ಬರವಣಿಗೆಯ ಮೂಲಕ ಕತೆಗೆದುರಾದ ಮನಸಿನಲ್ಲಿ ಜೀವನಪ್ರೀತಿ, ಜೀವಪ್ರೀತಿಗಳನ್ನು ಫಳ್ಳಂತ ಮಿನುಗಿಸುವುದು ಸಾಧ್ಯವಾದರೆ ಅದು ಬರವಣಿಗೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರಾಳ ಶುಕ್ರವಾರ: ಪ್ರಸಾದ್ ಕೆ.

ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಹೊಟ್ಟೆಪಾಡಿಗೆಂದಿದ್ದ ಮೆಕ್ಯಾನಿಕ್ ಉದ್ಯೋಗವೂ ಈಗ ಕಳೆದುಹೋಗಿದೆ. ಒಳ್ಳೆಯ ಉದ್ಯೋಗವಾಗಿತ್ತದು. ಒಳ್ಳೆಯ ಬಾಸ್ ಕೂಡ ಇದ್ದ. ನಿನ್ನ ಬಾಸ್ ನಿನ್ನ ಉದ್ಯೋಗದ ಬಗ್ಗೆ ಹೇಳುತ್ತಾ ಇದಕ್ಕೇನೂ ಭದ್ರತೆಯಿಲ್ಲವೆಂದೂ ಮತ್ತು ಇದು ದೇಶದ ಆಥರ್ಿಕತೆಯದ್ದೇ ಸಮಸ್ಯೆಯೆಂದೂ ಹೇಳಿದ್ದ. ಅವನ ಮಾತುಗಳ ಪ್ರಕಾರ ನಿನ್ನ ಬಗ್ಗೆ ಅವನಿಗೆ ಕಾಳಜಿಯಿತ್ತು. ವಿಚಿತ್ರವೆಂದರೆ ಅವನ ಮಾತನ್ನು ನೀನು ನಂಬಿಯೂ ಬಿಟ್ಟೆ.  ಇದ್ದ ಒಂದು ಉದ್ಯೋಗವನ್ನು ಕಳೆದುಕೊಂಡ ನಂತರವಂತೂ ಭಾರವಾದ ಹೃದಯವನ್ನು ಮತ್ತು ಚುರುಗುಟ್ಟುವ ಹೊಟ್ಟೆಯನ್ನು ಸಂಭಾಳಿಸುತ್ತಾ ಅಷ್ಟಕ್ಕೂ ಆಗಿದ್ದೇನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ