ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೬): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಸೂಕ್ಷ್ಮ ಪ್ರದೇಶಗಳು: ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ ಕಲಂ ೩ರಂತೆ,  ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ನೀಡಿದೆ. ಈ ಕಾಯ್ದೆಯ ಪ್ರಕಾರ ಕೇಂದ್ರವು ಪರಿಸರವನ್ನು ಕಲುಷಿತಗೊಳಿಸುವ ಎಲ್ಲಾ ತರಹದ ಕಾರ್ಖಾನೆಗಳ ಸ್ಥಾಪನೆಯನ್ನು ತಡೆಯುವುದು ಮತ್ತು ಈಗಾಗಲೇ ಪ್ರಾರಂಭಿಸಲಾಗಿರುವ ಕಾರ್ಖಾನೆಗಳಿಗೆ ನಿಷೇಧ ಹೇರುವ ಅಧಿಕಾರವಿದೆ ಅಥವಾ ಕಟ್ಟುನಿಟ್ಟಾದ ಎಚ್ಚರಿಕೆ ಕ್ರಮಕೈಗೊಳ್ಳಲು ನಿರ್ದೇಶಿಸಬಹುದಾಗಿದೆ. ಕಲಂ ೫(೧)ರಂತೆ ಜೀವಿವೈವಿಧ್ಯ ನಾಶವಾಗುವಂತಹ ಕಾರ್ಖಾನೆಗಳಿಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 64): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು  ೧.    ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು? ೨.    ಕೆಎಸ್‌ಆರ್‌ಪಿ (KSRP) ನ ವಿಸ್ತೃತ ರೂಪವೇನು? ೩.    ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ೪.    ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ  ಯಾವುದು? ೫.    ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ? ೬.    ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ ಯಾವುದು? ೭.    ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ? ೮.    ಸೋಮೇಶ್ವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಿಳಿಯ ಕರುಣೆಯ ಮೇಲೆ ಕಪ್ಪು ಕ್ರೌರ್ಯದ ಕಲ್ಲು: ಸಚೇತನ

ಮನುಷ್ಯ ! ಪ್ರೀತಿಸುವ ದ್ವೇಷಿಸುವ, ಕಾಡುವ ಕಾಡಿಸುವ, ಹೆದರುವ ಹೆದರಿಸುವ, ಅಳಿಸುವ ಸೃಷ್ಟಿಸುವ, ಕರುಣೆಯ ಕ್ರೌರ್ಯದ ಮನುಷ್ಯ. ಧರ್ಮದ ಹೆಸರಿನಲ್ಲಿ ಹಸಿದ ಹೊಟ್ಟೆಗೆ  ತುತ್ತು  ಅನ್ನ  ಕೊಡುವ ಮನುಷ್ಯ ಅದೇ ಧರ್ಮದ ಹೆಸರಿನಲ್ಲಿ ಅನ್ನಕ್ಕೆ ವಿಷವನ್ನಿಕ್ಕಬಲ್ಲ.  ಆದಿ ಮಾನವ ನಂತರದ ಆಧುನಿಕ ಮಾನವ  ಬದುಕಿಗೊಂದು ಶಿಸ್ತಿನ ಚೌಕಟ್ಟು ಬೇಕು ಎಂದು ಸೃಷ್ಟಿಸಿದ ಧರ್ಮದ ಸರಳ ರೇಖೆಗಳನ್ನ ತಿರುಚಿ ವಕ್ರವಾಗಿಸಿ ಸುಂದರ ರಂಗೋಲಿಯ ಸಾಲುಗಳನ್ನು ಕುಣಿಕೆಯಾಗಿಸಿ ಕುತ್ತಿಗೆಗೆ ಬಿಗಿಯಬಲ್ಲ ಮನುಷ್ಯ.  ಕ್ರೌರ್ಯ ಮತ್ತು ಕರುಣೆ ಒಂದೇ ಮುಖದ ಎರಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮ ಇಂದ್ರಿ ಕತಿ: ರುಕ್ಮಿಣಿ ನಾಗಣ್ಣವರ

ಕೆಲಸದ ಮ್ಯಾಲ ಹೆಡ್ ಆಫಿಸಿಗಿ ಹ್ವಾದ್ರ ನನ್ನದಲ್ಲದ ಕೆಲಸಾನೂ ನಾ ಮಾಡಬೇಕಾಗಿ ಬರ್ತದ. ಮನ್ನಿ ಮನ್ನೆರ ಕಂಪ್ಯೂಟರ್ ಕೆಲಸಕಂತ ಒಬ್ಬ ಹುಡುಗನ ನೇಮಿಸ್ಯಾರ.  ಅದೇನೋ ಡಿಪ್ಲೊಮಾ ಕೋರ್ಸ್ ಮುಗಿಸ್ಯಾನಂತ. ಆ ಊರ ಪಲ್ಲಾಳಗಿತ್ತಿ ಪದ್ದಿ ಬಾಯಾಗಿಂದ ಕೇಳಿದ ಸುದ್ದಿ. ಡಿಪ್ಲೊಮಾ ಮುಗಿಸಿದ ಹುಡಗ ಇಲ್ಲಿ ಇವರ ಕೊಡು ಯಾಡ ಸಾವಿರಕ ಅವರ ಅಂದಿದ್ದ ಅನಿಸ್ಕೊಂಡ ನಾಯಿಗಿಂತ ಕಡೆ ಆಗಿ ಯಾಕ ಸಾಯ್ಲಿಕ್ ಬಂದಾನೊ? ಅಂತ ನನಗ ಅನಿಸಿದ್ದೂ ಅದ. ಅವನ ಮಾರಿ ನೋಡಿದರ ಅಯ್ಯೋ ಪಾಪ! ಅನಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ನಿಶಾ’ಗಮನ: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ಇಡೀ ರಾತ್ರಿ ನಿದ್ದೆ ಹತ್ತಿರಕ್ಕೂ ಸುಳಿಯದೇ ಒದ್ದಾಡಿ ತನಗೆ ಯಾವಾಗಲೋ ನಿದ್ದೆ ಹತ್ತಿದ್ದು ಬೆಳಿಗ್ಗೆ ಎದ್ದಾಗಲೇ ಸುಜಯ್ ಗೆ ಗೊತ್ತಾಗಿದ್ದು. ಎದ್ದವನೇ ಅತ್ತಿತ್ತ ತಡಕಾಡಿ ತನ್ನ ಸ್ಮಾರ್ಟ್ ಫೋನು ಎಲ್ಲಿಹುದು ಅಂತ ಹುಡುಕಾಡಿದ. ಎದ್ದ ಕೂಡಲೇ ಅದರ ಮುಖ ನೋಡದಿದ್ದರೆ ಸಮಾಧಾನವಿಲ್ಲ ಅವನಿಗೆ. ಅದು ಪಕ್ಕದಲ್ಲಿರದಿದ್ದರೆ ಅವನಿಗೆ ಉಸಿರಾಡುವುದೂ ಕಷ್ಟವೇ! ಹಿಂದಿನ ಕಾಲದ  ಕಥೆಗಳಲ್ಲಿ ರಾಕ್ಷಸರ ಜೀವ ಒಂದು ಗಿಣಿಯಲ್ಲಿ ಇರುತ್ತಿತ್ತಂತೆ ಹಾಗೆಯೇ ಸುಜಯ್ ನ ಜೀವ ಅವನ ಸ್ಮಾರ್ಟ್ ಫೋನ್ ನಲ್ಲೆ ಇದೆ. ಅದನ್ನೊಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬರದ ಬೇಗೆಯಿಂದ ತತ್ತರಿಸುತ್ತಿದ್ದ ಕೂಲಿಕಾರ್ಮಿಕರಿಗೆ ಆಶಾಕಿರಣವಾದ ಆಲೆಮನೆ: ಹನಿಯೂರು ಚಂದ್ರೇಗೌಡ

ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಹನೂರಿನಲ್ಲಿ ಹಲವಾರು ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ಬರದ ಬವಣೆಯಲ್ಲಿ ತತ್ತರಿಸಿ ಗುಳೇ ಹೊರಡುವ ಸ್ಥಿತಿಯಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಕೆಲವರಿಗಾದರೂ ಕೃಷ್ಣನಾಯ್ಡುರವರ ಆಲೆಮನೆ ಆಶಾಕಿರಣವಾಗುವ ಮೂಲಕ ಆಸರೆ ನೀಡಿದೆ. ಗೊಂಬೆ ಬೆಲ್ಲವನ್ನು ತಯಾರಿಸಿ ಮಾರಾಟಕ್ಕೆ ಸಿದ್ದಪಡಿಸಿರುವುದು. ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಕಾರಣ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬಳೆಯಲು ಆಗದಿರುವಂತಹ ಪರಿಸ್ಥಿತಿಯಲ್ಲಿ, ಯಥೇಚ್ಛ ನೀರನ್ನು ಅಲವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“%”: ಪ್ರಶಸ್ತಿ ಪಿ.

ಈ ವಾರ ಯಾವ ವಿಷಯದ ಬಗ್ಗೆ ಬರೆಯೋದಪ್ಪ ಅಂತ ಯೋಚ್ನೆ ಮಾಡ್ದಾಗೆಲ್ಲಾ ಐಡಿಯಾಗಳ ಚೌಚೌಭಾತ್ ಮನಸಲ್ಲಿ. ಅದೋ , ಇದೋ ಅಥವಾ ಮತ್ತೊಂದೋ ಅಂತ ಒಂದಿಷ್ಟು ಬಿಡಿಬಿಡಿ ಎಳೆಗಳು ಹೊಳೆದಿರುತ್ತೆ. ಈ ಸಲ ೧೦೦% ಇದ್ರ ಬಗ್ಗೆನೇ ಬರಿಬೇಕು ಅಂತ ಧೃಢ ನಿರ್ಧಾರ ಮೂಡೋವರೆಗೆ ಈ ಬಿಡಿ ಬಿಡಿ ಐಡಿಯಾಗಳು ಮನದ ಒಂದಿಷ್ಟು ಪ್ರತಿಶತ ಭಾಗ ಆಕ್ರಮಿಸಿಕೊಂಡಿರುತ್ತೆ. ಸ್ವಸ್ತಿಕ್ಕು, ಸೂಪರ್ರು, ಎ,ಐ,ಝೆಡ್ ಹೀಗೆ ಚಿಹ್ನೆಗಳು ಅಕ್ಷರಗಳೆಲ್ಲಾ ಸಿನಿಮಾ ಆಗೋದು ನೋಡಿದ್ವಿ, ಇದೇನಿದು ಪ್ರತಿಶತದ ಚಿಹ್ನೆ(%) ಅಂದ್ಕೊಂಡ್ರಾ ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಗ್ನಿ: ಬೆಳ್ಳಾಲ ಗೋಪಿನಾಥ ರಾವ್

       ೧. ಬಲಿ   ಚಂದ್ರ ಹಾಸ ಮತ್ತೊಮ್ಮೆ ತಲೆ ಕೆರೆದುಕೊಂಡ.   ಎರಡಸ್ಥಂತಿನ  ಭದ್ರ ಬುನಾದಿ ಎಬ್ಬಿಸಿ ಕಟ್ಟಿಸಿದ ಈ ಕಟ್ಟೋಣ    ಅಲುಗಾಡುವದೆಂದರೇನು?  ಅರ್ಥವಾಗಲಿಲ್ಲ.     ಚೈತ್ರಂಗೆ ಹೇಳೋಣವೆಂದುಕೊಂಡ ಮತ್ತೆ ನಕ್ಕಾಳು.  ನಿನ್ನೆ ಹಲ್ಲಿನ ವೈದ್ಯರು ಕೊಟ್ಟ  ಮಾತ್ರೆಯದ್ದೇನಾದರೂ ಸೈಡ್ ಎಫೆಕ್ಟ್ ಆಗಿರಬಹುದಾ.   ಸ್ವಲ್ಪ ಮತ್ತಿನಲ್ಲಿದ್ದವರ ಹಾಗಿದ್ದೀರಾ ಚೈತ್ರನ ರಾತ್ರೆಯ ಮಾತು ನೆನಪಾಯ್ತು.  ಕಣ್ಣೂ ನಿಚ್ಚಳವಾಗಿ ಕಾಣ್ತಾ ಇದೆ.  ಚಿವುಟಿಕೊಂಡ.   ಇಲ್ಲ ಸರಿಯಾಗಿ ನೋವಾಗ್ತಾ ಇದೆ.  ಮತ್ತೆ,,?  … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಸಾಬಯ್ಯ ಕಲಾಲ್, ನಾಗರಾಜ ವಿ.ಟಿ., ಕಾವ್ಯಪ್ರಿಯ

ಗೋವಿನ ನೋವು ನನ್ನ ಕೊಬ್ಬಿದ ಮಾಂಸವನು ತಿಂದು ತೇಗುವ ನಿನಗೆ.. ಚೀಪಿದ ಮೂಳೆಯನ್ನಾದರು ಸಮಾಧಿ ಮಾಡಿದ್ದರೆ.. ನನ್ನೊಳಗಿರುವ ಮುಕ್ಕೋಟಿ ದೇವರ ಆತ್ಮಕ್ಕಾದರು ಶಾಂತಿ ದೊರಕುತ್ತಿತ್ತು..|| ಹರೆಯದಲ್ಲಿ ಹಾಲು ಕರೆದು ಹಾಲುಣಿಸಿದ ತಾಯಿಗೆ ದ್ರೋಹ ಬಗೆದು ಮುದಿತನದಲ್ಲಿ ಕಟುಕನಿಗೆ ಕೊಡುವ ಬದಲು ನೀನೆ ಜೀವಂತ ಸಮಾಧಿ ಮಾಡಿದ್ದರೆ ಹಾಲುಣಿಸಿದ ಋಣವಾದರು ತೀರುತ್ತಿತ್ತು..|| ನಿನಗಾಗಿ ಹಗಲಿರುಳು ದುಡಿದು ಬಸವಳಿದ ನನಗೆ ಕಸಾಯಿಖಾನೆಗೆ ಕಳಿಸುವ ಬದಲು ದವಾಖಾನೆಗೆ ನನ್ನ ಕಳಿಸಿದ್ದರೆ ಈ ತಾಯಿಯ ಮನದ ನೋವು ಹಗುರವಾಗುತ್ತಿತ್ತು..|| ತಾಯಿಯೆಂದು ಪೂಜಿಸಿದ ನಿನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೫): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಸುಸ್ಥಿರ ಅಭಿವೃದ್ಧಿ-ಚಿಂತನಾಯುಕ್ತ ಸಂರಕ್ಷಣೆ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೇದ್ ತಾಲ್ಲೂಕಿನಲ್ಲಿ ಮಹಾರಾಷ್ಟ್ರ ಕೈಗಾರಿಕ ಅಭಿವೃದ್ದಿ ನಿಗಮವಿದೆ. ಇಲ್ಲಿ ಭರಪೂರ ರಾಸಾಯನಿಕ ಕೈಗಾರಿಕೆಗಳಿವೆ. ನೆರೋಲ್ಯಾಕ್, ಹಿಂದೂಸ್ತಾನ್ ಲಿವರ್, ರತ್ನಗಿರಿ ಕೆಮಿಕಲ್ಸ್ ಹೀಗೆ ಹತ್ತು ಹಲವು ವಿಷಕಕ್ಕುವ ಕಾರ್ಖಾನೆಗಳಿವೆ. ಈ ತರಹದ ಕಾರ್ಖಾನೆಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಿರಲೆಂದು ಅಲ್ಲಿನ ಸರ್ಕಾರ ೨೦೦೬ರಲ್ಲಿ ಲೋಟೆ ಅಭ್ಯಾಸ್ ಗಾತ್ ಎಂಬ ಕಾರ್ಖಾನೆಗಳ ಮೇಲ್ವಿಚಾರಣೆ ಅಧ್ಯಯನ ತಂಡವನ್ನು ರಚಿಸಿತು. ಈ ಸಮಿತಿಯು ಕಾಲ-ಕಾಲಕ್ಕೆ ತನ್ನ ವರದಿಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆ ಬೆಳದಿಂಗಳ ರಾತ್ರಿಯಲಿ ಒಂಟಿತನ: ಪದ್ಮಾ ಭಟ್

ಅದೊಂದು ಸುಂದರ ಬೆಳದಿಂಗಳ ರಾತ್ರಿ.. ತಂಪು ತಂಗಾಳಿ ಎದೆಗೆ ಸೋಕಿರಲು ಕನಸುಗಳ ಪದಗುಚ್ಚವುಕವಲೊಡೆದು ಬಂದಿತು.ನಕ್ಷತ್ರಗಳನ್ನು ಎಣಿಸುತ್ತಾ ಎಣಿಸುತ್ತ ಚಂದಿರನ ನಗೆಯನು ನೋಡುತ್ತಿದ್ದೆ. ಭಾವನೆಗಳ ಹೊಸ್ತಿಲು ನೆಲಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ. ಆಗಲೇ ಕಾಡುವಒಂಟಿತನ. ಕೆಲವೊಂದು ಸಮಯಕ್ಕೆ, ಯೋಚನೆಗಳಿಗೆ ಆಸ್ಪದ ನೀಡುವ ಒಂಟಿತನ. ಆ ಒಂಟಿತನವು ಕೆಲವು ಬಾರಿಅತ್ಯಂತ ಖುಷಿಯನ್ನುಕೊಡುತ್ತದೆ.ಕನಸುಗಳ ಲೋಕಕ್ಕೆ ಒಬ್ಬಂಟಿಯಾಗಿರುವಾಗ ಮಾತ್ರ ಹೋಗಲು ಸಾಧ್ಯ. ಕನಸೇ ಬದುಕನ್ನು ನನಸೆಂದು ಮಾಡುವೆ ಎಂದು ಕೇಳಿಕೊಳ್ಳಲು ಅವಕಾಶ ನೀಡುವುದು. ಬೇಕಾದ ಹಾಗೆ ತಿರುಗಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 63): ಮಹಾಂತೇಶ್ ಯರಗಟ್ಟಿ

    ಪ್ರಶ್ನೆಗಳು: ೧.    ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ? ೨.    ಯುನಿಸೆಫ್ (UNICEF) ವಿಸ್ತೃತ ರೂಪವೇನು? ೩.    ವೀಚಿ ಇದು ಯಾರ ಕಾವ್ಯನಾಮವಾಗಿದೆ? ೪.    ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು? ೫.    ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ? ೬.    ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಯದ ಬೆನ್ನೇರಿ ಬಂತು: ಅನಿತಾ ನರೇಶ್ ಮಂಚಿ

’ಹತ್ತು ಗಂಟೆಗೆ ರೆಡಿಯಾಗಬೇಕು ದಾರಿಯಲ್ಲಿ ಹೋಗ್ತಾ ಕೇಶು ಮಾಮಾನನ್ನು ಕರೆದುಕೊಂಡು  ಮದುವೆ ಮನೆಗೆ ಹೋಗೋದು.. ನೀನಿನ್ನು ನಿಧಾನ ಮಾಡ್ಬೇಡ’ ಅನ್ನುವ ಮಾತನ್ನು ನೂರು ಸಲ ಕೇಳಿ ಆಗಿತ್ತು ಇವರ  ಬಾಯಲ್ಲಿ. ಸರಿ ಇನ್ನು ನನ್ನಿಂದ ತಡ ಆಯ್ತು ಅನ್ನೋದು ಬೇಡ ಅನ್ನುವ ಸಿಟ್ಟಿನಲ್ಲಿ ಸ್ವಲ್ಪ ಬೇಗವೇ ಹೊರಟು ಬಿಟ್ಟಿದ್ದೆ.  ’ಹೇಗೂ ಹೊರಟಾಗಿದೆಯಲ್ಲ.. ಇನ್ನು ಮನೆಯೊಳಗೆ ಕೂತೇನು ಮಾಡುವುದು. ಹೋಗಿ ಕೇಶು ಮಾಮ ಬರ್ತೇನೆ ಅಂತ ಹೇಳಿದ ಜಾಗದಲ್ಲೊ ಕಾಯೋಣ’ ಅಂದರಿವರು. ನನಗೂ ಅದೇ ಸರಿ ಅನ್ನಿಸಿ ಕಾರೇರಿದೆ.  … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಯಿ ಪಾಡು: ಗುಂಡುರಾವ್ ದೇಸಾಯಿ

ವಾರದಿಂದ ತಲೆ ಸಿಡದು ಹೋದಂಗಾಗಕತಿತು. ಕ್ಷಣ ಕ್ಷಣಕ್ಕೂ ಭಯ ಆತಂಕ ಸುರುವಾಗಕತಿತು, ಶಾಲೆಯಲ್ಲಿ ಪಾಠ ಮಾಡುವಾಗಲು ಮನೆ ವಾತಾವರಣ ನೆನಸಿಕೊಂಡ ಕೂಡಲೆ ಸ್ಥಬ್ಧನಾಗಿ ನಿಂತುಬಿಡುತ್ತಿದ್ದೆ.  ಮಕ್ಕಳು ’ಸಾರ್, ಮುಂದು ಹೇಳ್ರೀ ಯಾಕ ಹಾಂಗ ನಿಂತ್ರಿ’ ಎಂದು ಎಚ್ಚರಿಸಿದಾಗಲೇ ವಾಸ್ತವಕ್ಕೆ ಬರೋದು. ಸಹುದ್ಯೋಗಿಗಳು ’ಯಾಕ ಹಿಂಗಾಗ್ಯಾರ? ಏನು ತಾಪತ್ರಯನೋ ಏನೋ? ಅಥವಾ ಮನೆಯಲ್ಲಿ ಮನೆಯವರ ಜೊತೆಗೆ ಮನಸ್ತಾಪನೋ?’ ಎಂದು ಹಲವು ಬಾರಿ ಕೆದುಕಲೆತ್ನಿಸಿದರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ನಿಮಗೂ ಏನೇನೋ ಕಲ್ಪನೆಗಳು ನನ್ನ ಬಗ್ಗೆ ಮೂಡಿರಬೇಕಲ್ಲ. ಅದು ಹೇಳುವ ವಿಷಯವೇನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಮಿಲಿ ಎಂಬ ಅಮಲು: ಮಹೇಂದ್ರ ಎಂ. ನವೋದಯ

೧೯ನೇ ಶತಮಾನದ ಇಂಗ್ಲೀಷ್ ಸಾಹಿತ್ಯದಲ್ಲಿನ ಮಹಿಳಾ ಲೇಖಕಿಯರಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ಎಮಿಲಿ ಬ್ರಾಂಟೆ ಕೂಡ ಒಬ್ಬರು. ಜುಲೈ ೩೦, ೧೮೧೮ ರಂದು ಜನಿಸಿ, ತೀರಾ ಸಂಕ್ಷಿಪ್ತವಾಗಿ ೩೦ ವರ್ಷಗಳ ಕಾಲ ಬದುಕಿದರೂ ಅವರ ಸಾಹಿತ್ಯ ಕೊಡುಗೆ ಅನನ್ಯ ಮತ್ತು ಅಜರಾಮರ. ಎಮಿಲಿ ಬೆಳೆದದ್ದು ದೂರದ ಇಂಗ್ಲೆಂಡ್, ಬರೆದದ್ದು ಇಂಗ್ಲೀಷ್ ನಲ್ಲಿ, ಎಮಿಲಿ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ಕಠಿಣ ಸ್ವಭಾವದ ನೆಂಟನಬ್ಬೊಳ ಮನೆಯಲ್ಲಿ ಬೆಳೆದಳು. ಹೆಚ್ಚು ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ಆಕೆ ಯಾರೊಂದಿಗೂ ಬೆರೆತವಳಲ್ಲ, ಒಂಟಿತನವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌನವೊಂದು ಸಾಗುತಿಹುದು ಬದುಕು ಬಿಟ್ಟು: ಸಚೇತನ

  ವಿಶಾಲ ಮರುಭೂಮಿಯ ಮರಳಿನ ಮೇಲೆ ಬಿಸಿಲು ಚೆಲ್ಲುತ್ತ ನಿಂತ ನೀಲ ಆಕಾಶಕ್ಕೆ ಒಂದೇ ಬಣ್ಣ, ಕಪ್ಪು, ಬಿಳಿ, ಕಡು ನೀಲ, ಕಡುಗಪ್ಪು, ಬಂಗಾರ, ಹಳದಿ ಯಾವುದೇ ಬಣ್ಣಗಳಿಲ್ಲದ ಮೋಡಗಳ ಅಡಿಯಲ್ಲಿರುವವರ ಬದುಕು ಕೂಡ, ಬಣ್ಣಗಳಿಲ್ಲದ ಬದುಕು. ಈ ನೀಲ ಆಕಾಶದ ಕೆಳಗೆ  ಇರಾಕ್ ಮತ್ತು ಟರ್ಕಿ ನಡುವಿನ ಮರುಭೂಮಿಯಂತ ಪ್ರದೇಶದಲ್ಲಿ ಕುರ್ದಿಶ್ ಎನ್ನುವ ನಿರಾಶ್ರಿತರ ಕ್ಯಾಂಪ್ ಇದೆ. ಇರಾಕ್ ಮತ್ತು ಅಮೇರಿಕಾದ ಯುದ್ಧೋನ್ಮಾದದ ಹರಿತ ಧೂಳು ಎಲ್ಲೆಲ್ಲು ತುಂಬಿದೆ. ಯುದ್ಧವೆಂದರೆ ಸೈನಿಕರ ಬಡಿದಾಟವಲ್ಲ, ಬಂದೂಕುಗಳ ಶಬ್ದಗಳಲ್ಲ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಕತೆಗಳು: ನವೀನ್ ಮಧುಗಿರಿ, ಮುಕುಂದ್ ಎಸ್.

ಚಪ್ಪಾಳೆ ಇಡೀ ಶಾಲೆಗೇ ವರ್ಷದ ಉತ್ತಮ ಪ್ರತಿಭಾವಂತ ವಿದ್ಯಾರ್ಥಿ ಎಂದು ಮಗ ವೇದಿಕೆಯ ಮೇಲೆ ಪ್ರಶಸ್ತಿಯನ್ನು ಪಡೆವಾಗಯುವಾಗ, ಪೋಷಕರ ಸಾಲಿನಲ್ಲಿ ಕುಳಿತ ಅವನ ಕುರುಡು ತಂದೆ ಸಂತಸದಿಂದ ಎಲ್ಲರೊಟ್ಟಿಗೆ ಚಪ್ಪಾಳೆ ತಟ್ಟಿದರು. *** ನಾಯಿ ಆ ಮನೆಯಲ್ಲಿ ಅದು ಊಟದ ಸಮಯ. ಗಂಡ ಊಟಕ್ಕೆ ಕುಳಿತಿದ್ದ, ಹೆಂಡತಿ ಬಡಿಸುತ್ತಿದ್ದಳು. ಎರಡು ತುತ್ತು ತಿನ್ನುವಾಗ ಗಂಡ ತನ್ನ ಮಾಮೂಲಿ ಗೊಣಗಾಟವನ್ನ ಶುರು ಮಾಡಿದ. ಅನ್ನ ಯಾಕಿಷ್ಟು ಮೆತ್ತಗೆ ಮಾಡಿದ್ದೀಯ?  ಸಾರಿಗೆ ಉಪ್ಪು ಕಡಿಮೆ. ಪಲ್ಯ ತುಂಬಾ ಖಾರ ಖಾರ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಧ್ವನಿ ಕೇಳೋ ಆಸೆಯೂ, ರೆಕಾರ್ಡಿಂಗ್ ನೆನಪೋಲೆಯು: ಪ್ರಶಸ್ತಿ ಪಿ.

ಶಾಲಾ ದಿನಗಳಲ್ಲಿ ಆಕಾಶವಾಣಿಯಲ್ಲಿ ಶನಿವಾರ ಬರ್ತಿದ್ದ ಗಾಂಧಿ ಸ್ಮೃತಿ, ಭಾನುವಾರದ ರೇಡಿಯೋ ಸಿನಿಮಾ(ಧ್ವನಿಯಲ್ಲೇ ಸಿನಿಮಾದ ಕಲ್ಪನೆಗಳ ಕಟ್ಟೋ ಅದ್ಬುತ ಅನುಭವ ಕೇಳೇ ಸವಿಬೇಕು), ಪ್ರತಿದಿನ ಸಂಸ್ಕೃತ ವಾರ್ತೆಯ ಬಲದೇವಾನಂದ ಶರ್ಮ,  ಏಳೂ ಮೂವತ್ತೈದರ ವಾರ್ತೆ, ಎಂಟರ ಹಿಂದಿ, ಇಂಗ್ಲೀಷ್ ವಾರ್ತೆಗಳು, ನಂತರದ ರೇಡಿಯೋ ಡಾಕ್ಟರಗಳನ್ನು ಕೇಳೇ ದೊಡ್ಡವರಾದ ನಮಗೆ  ರಾತ್ರಿ ಎಂಟು ಘಂಟೆಗೆ ಬರೋ "ಯುವವಾಣಿ" ಅಚ್ಚುಮೆಚ್ಚಾಗಿತ್ತು. ಅದರಲ್ಲಿ ಬರ್ತಿದ್ದ ಕಾಲೇಜು, ಶಾಲಾ ವಿದ್ಯಾರ್ಥಿಗಳು ಮತ್ತು ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಕೇಳುತ್ತಿದ್ದ ನನಗೆ ನಾನೂ ಒಮ್ಮೆ ರೇಡಿಯೋದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಿರುಗುಬಾಣ: ಬಸವರಾಜ ಎಂ.

ಆಫೀಸ್ ಗೆ ತಡವಾಗುತ್ತಿತ್ತು. ಇಸ್ತ್ರಿ ಮಾಡಿದ ಬಟ್ಟೆ  ಬೇರೆ ಇರಲಿಲ್ಲ. ಮಗನಿಗೆ ಹೇಳೋಣವೆಂದುಕೊಳ್ಳುವ ಹೊತ್ತಿಗೆ ಗಾದೆ ನೆನಪಿಗೆ ಬಂತು. "ಅಪ್ಪ ಮಾಡಿದ್ದು ಉತ್ತಮ,  ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಆಳು" ಅಂತ. ಮನೆಯಲ್ಲಿ ಆಳು ಇಡಲಂತೂ ಸಾಧ್ಯವಾಗಿಲ್ಲ ಹೋಗಲಿ ನಾನೆ ಮಾಡೋಣ ಎಂದುಕೊಂಡರೆ ನನಗೊಂದು ಜಿಜ್ಞಾಸೆ. ಅದೇನೆಂದರೆ ನನ್ನ ಅಪ್ಪನನ್ನು  ಪರಿಗಣಿಸಿದರೆ ನಾನು ಮಾಡಿದ್ದು ಮಧ್ಯಮವಾಗುತ್ತದೆ. ಮಗನಿಗೆ  ಹೇಳೋಣವೆಂದರೆ ಮತ್ತೆ ಮಧ್ಯಮದ ವಿಚಾರ ಬಂತು. ಈಗ ನನ್ನ ಕೋಪ ತಿರುಗಿದ್ದು ನನ್ನ ಅಂಗಿಯ ಇಸ್ತ್ರಿಯ ಮಾಡದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಉರ್ಬಾನ್ ಡಿಸೋಜ, ಅಕುವ, ಶಿವಕುಮಾರ ಸಿ.

ಹುಡುಕಾಟ ನಾನು ನನ್ನ ಬದುಕನ್ನು ಹೀಗೆಯೇ ಸುಮ್ಮನೆ ನೋಡಿದೆ, ಆಗ೦ತುಕ, ಆಗ೦ತುಕನನ್ನು ಭೇಟಿಯಾದ೦ತಾಯ್ತು. ಇದು ನನ್ನ ಬದುಕೇ? ಉತ್ತರ ಹುಡುಕಾಡಿದೆ. ಒಳ್ಳೇದೇ ಮಾಡಿದೆ,  ಕೋಟಿ ದೇವರನ್ನ ಬೇಡಿದೆ, ಆದರೂ ನನ್ನ ಬದುಕನ್ನು ನಾನೇ ಅರಿಯದಾದೆ. ಇತರ ಚಿ೦ತನೆ, ಮಾತುಗಳೇ ನಾನೆ೦ದುಕೊ೦ಡೆ. ಕಡಿದವನ, ಕುಡಿದವನ, ಅತ್ಯಾಚಾರಿಯ, ಲ೦ಚವಾದಿಯ ಬದುಕು ಯಾವ ರೀತಿಯದು ಎಂದು ನೆನೆದು ನಡುಗಿದೆ. ಸತ್ತ ನ೦ತರದ ಬದುಕನ್ನು ನೆನೆದು ಈಗಿನ ಬದುಕ ಮರೆತೆ? ಹೂವನ್ನೇ ಬಯಸಿದ ಬದುಕಿನೊಳಗೆ ಹರಿತ ಚಾಕುವೇ ತಿವಿಯಿತು. ಬದುಕೇ, ನೀನು ಮತ್ತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೪): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕಾದರೆ ಈ ಕೆಳಗಿನ ಕೆಲ ಅಂಕಿ-ಅಂಶಗಳನ್ನು ಗಮನಿಸಬೇಕು. ಭಾರತಾದ್ಯಂತ ಕಂಡು ಬರುವ ೪೦೦೦ ಜಾತಿಯ ಪುಷ್ಪವೈವಿಧ್ಯದಲ್ಲಿ ೧೦೮೦ ಜಾತಿಗಳು ಈ ಘಟ್ಟಪ್ರದೇಶದಲ್ಲಿವೆ. ದೇಶದಲ್ಲಿರುವ ೬೪೫ ನಿತ್ಯಹರಿಧ್ವರಣ ಜಾತಿಯ ಮರಗಳಲ್ಲಿ ೩೬೨ ಜಾತಿಯ ಮರಗಳು ಇಲ್ಲಿವೆ. ೧೦೦೦ ಜಾತಿಯ ನೆಲಮಟ್ಟದ ಪೊದೆ-ಬಳ್ಳಿಗಳ ಪ್ರಬೇಧಗಳಲ್ಲಿ ೬೮೨ ಪ್ರಭೇದಗಳು ಘಟ್ಟಗಳಲ್ಲಿವೆ ಹಾಗೂ ಇದರಲ್ಲಿ ೨೮೦ ಪ್ರಬೇಧಗಳು ಪಶ್ಚಿಮಘಟ್ಟಗಳಲ್ಲಿ ಮಾತ್ರ ಲಭ್ಯವಿದೆ. ಅಕಶೇರುಕ ಪ್ರಬೇಧಗಳ ಒಟ್ಟು ೩೫೦ರಲ್ಲಿ ೭೦ ಪ್ರಬೇಧಗಳು ಪ್ರಪಂಚದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಮಕ್ಕಳ ಸುರಕ್ಷತೆಗಿರಲಿ ಮೊದಲ ಆದ್ಯತೆ” : ಹೊರಾ.ಪರಮೇಶ್ ಹೊಡೇನೂರು

"ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಹೊಣೆ" ಎಂಬ ಸಾಮಾಜಿಕ ಕಾಳಜಿಯ ಘೋಷವಾಕ್ಯ ಇಂದಿನ ದಿನಮಾನಗಳಲ್ಲಿ ತುಂಬಾ ಚಾಲ್ತಿಯಲ್ಲಿದೆ. ಏಕೆಂದರೆ, ಭವಿಷ್ಯದ ನಾಗರೀಕರಾಗಿರುವ ಮಕ್ಕಳ ಬಾಲ್ಯವು ತುಂಬಾ ಆಯಕಟ್ಟಿನದ್ದಾಗಿದ್ದು, ತಮ್ಮ ಮನೆಯ, ಶಾಲೆಯ ಮತ್ತು ಸಮುದಾಯದ ನಡುವೆ ಸಹಜ ತುಂಟಾಟ, ತರಲೆ, ಚೇಷ್ಟೆ, ಹುಡುಗಾಟಿಕೆಗಳಿಂದ ಕೂಡಿರುತ್ತದೆ ಮತ್ತು ಈ ಸಂದರ್ಭಗಳಲ್ಲಿ ಅಕಾಸ್ಮಾತ್ ಆಗಿ ಅಚಾತುರ್ಯಗಳು ಉಂಟಾದಾಗ ಅನಾಹುತಗಳೇ  ಜರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಕೆಲವು ಸಂದರ್ಭಗಳು, ಸಾಧ್ಯತೆಗಳ ಬಗೆಗೆ ಒಂದಿಷ್ಟು ಮೆಲುಕು ಹಾಕುತ್ತಾ, ಮಕ್ಕಳ ಸುರಕ್ಷತೆಗೆ ಹೇಗೆ ಹೊಣೆಗಾರಿಕೆ ನಿಭಾಯಿಸಬೇಕೆಂಬುದನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 62): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೨.    ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? ೩.    ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು? ೪.    ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ? ೫.    ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು? ೬.    ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು? ೭.    ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ? ೮.    ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು? ೯.    ಶಿವಪ್ಪ ನಾಯಕನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾವಿರದ ನೋಟು: ಗಣೇಶ್ ಖರೆ

ಬೆಂಗಳೂರಿನ ರಸ್ತೆಯ ಮೂಲೆಯಲ್ಲಿ ಡೊಂಬರಾಟದವರು ತಮ್ಮ ಕಸರತ್ತು ತೋರಿಸುವಲ್ಲಿ ನಿರತರಾಗಿದ್ದರು. ನೋಡಿದರೆ ಯಾವುದೋ ಹಳ್ಳಿಯ ಮೂಲೆಯಿಂದ ಬಂದವರಂತೆ ಅವರ ವೇಶ ಭೂಶಣವಿತ್ತು. ಹಗ್ಗದ ಮೇಲೆ ನಡೆಯುವುದು, ಗೋಲಕದೊಳಗೆ  ತಮ್ಮ ಮೈಯ್ಯನ್ನು ತೂರಿಸುವುದು, ತಲೆ ಕೆಳಗಾಗಿ ಕೈಯ್ಯ ಮೇಲೆ ನಡೆಯುವುದು ಹೀಗೆ ಕಸರತ್ತು ಸಾಗಿತ್ತು. ಸಿಗುವ ಬಿಡಿ ಕಾಸಿಗಾಗಿ ಜೀವವನ್ನು ಪಣಕ್ಕಿಟ್ಟು ಮಾಡುವ ಕಸರತ್ತು ಜನರನ್ನು ಅವರತ್ತ ಆಕರ್ಷಿಸುತ್ತಿತ್ತು. ಡೊಂಬರಾಟದ ಗುಂಪಲ್ಲಿ ಇದ್ದದ್ದು ಮೂರು ಜನ, ಎಲ್ಲರೂ ಹೆಂಗಸರೇ. ಒಬ್ಬಳಿಗೆ ಸುಮಾರು ಮೂರರಿಂದ ನಾಲ್ಕು ವಯಸ್ಸಿರರಬಹುದು, ನೋಡೊಕೆ ಮುಗ್ಧ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ವಗತ: ತ್ರಿವೇಣಿ ಟಿ.ಸಿ.

ನಿನ್ನ ಬಾಳನ್ನು ಬೆಳಗೋಕ್ ಬಂದ ಹುಡುಗಿ ಇನ್ನೊಂದು ಹೆಣ್ಣಿನ ಬಾಳನ್ನು ಕತ್ತಲೆ ಮಾಡಿದ್ದು ನಿಜವಲ್ವೆ. ಕನಸುಗಳ ಬಿತ್ತಿ ನೀರು ಸುರಿಸದೆ ಸುರುಟಿದೆ ನನ್ನ ಕನಸು.  ೨೦೧೦ ರ ಒಂದು ಮಧ್ಯಾನ್ಹ ಬಂದ ಇ-ಮೇಲ್,  ೨೦೦೯ ರಲ್ಲಿ ಯಾವುದೋ ಹಳೆ ಪೇಮೆಂಟ್ ಕೊಟ್ ಬಿಡಿ ಅಂತ ಮೆಸ್ಸೇಜು…  ಅವತ್ತಿಗೆ ರಿಪ್ಲೈ ಆಯ್ತು, ಕೊಡೋಣ ತಡ್ಕೊಳಪ್ಪ ……  ಮತ್ತೆ ಮೂರನೇ ದಿವಸಕ್ಕೆ ಒಂದು ರಿಮೈನ್ಡರ್  ಕೊಡ್ತೀರೋ ಇಲ್ಲವೋ.. ಫೋನೆತ್ತಿ ಮಾತಾಡಿ ತಡೆದುಕೊಳ್ ಪುಣ್ಯಾತ್ಮ ನಿನ್ನ ಚೆಕ್ಕುಗೆ ರೆಕ್ವಿಸಿಶನ್ ಹಾಕಿದೀನಿ ಡೆಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಕಲಾಂಗರಿಗೆ ಆಸರೆಯಾಗುತ್ತಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಸಂಸ್ಥೆ: ದಿಗಂಬರ ಎಂ.ಪೂಜಾರ

  ಲಕ್ಷ್ಮೇಶ್ವರ-ದಲ್ಲಿ ಕಿವುಡು ಮಕ್ಕಳ ಬಗ್ಗೆ. ನಮಗೆ ತಿಳಿದ ಹಾಗೆ ಸಮಾಜದಲ್ಲಿ ವಿಕಲಚೇತನರಿಗೆ ಸಮಾನತೆ ಹಾಗು ಸೌಲಭ್ಯಗಳ ಕಾನೂನಿನ ಮೂಲಕ ಸಿಕ್ಕಿರಬಹುದು. ಆದರೆ ನಿಜವಾಗಿಯೂ ಅವು ನಿಜವಾದ ಫಲಾನುಭವಿಗಳಿಗೆ ಸಿಗದೇ ಬೇರೆಯವರ ಪಾಲಾಗುತ್ತಿವೆ. ಇಂತಹ ದಿನಮಾನಗಳಲ್ಲಿಯೂ ತಮ್ಮ ಬೆನ್ನು ಮೂಳೆ ಮುರಿಯುವಂತೆ ಕೆಲಸ ಮಾಡುತ್ತಿರುವುದು ಕೆಲವು ಸಂಸ್ಥೆಗಳು ಮಾತ್ರ. ಅಂತಹ ಸಂಸ್ಥೆಗಳ ಸಾಲಿಗೆ ಸೇರುವ ಸಂಸ್ಥೆಗಳಲ್ಲಿ ಗದಗ ಜಿಲ್ಲೆಯ ಐತಿಹಾಸಿಕ ನಗರವಾಗಿರುವ  ಲಕ್ಷ್ಮೇಶ್ವರದಲ್ಲಿರುವ ಬಿ.ಡಿ. ತಟ್ಟಿ(ಅಣ್ಣಾವರು) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ ಕೂಡಾ ಒಂದು.  ಸುಮಾರು ೧೮ ವರ್ಷಗಳಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ