ಫಸ್ಟ್ ಟ್ರೈ: ಸಿ೦ಧು ಭಾರ್ಗವ್

ಹೊಸ ಖಾದ್ಯ ತಯಾರಿಸುವಾಗ ಆದ ಅನುಭವ. ಗಾ೦ಧಿ ಜಯ೦ತಿ ಪ್ರಯುಕ್ತ ರಜೆ ಇದ್ದ ಕಾರಣ ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ. ಅಪರೂಪಕ್ಕೆ ಕರೆ ಮಾಡುವ ಮಾವನಿಗೆ ನನ್ನ ನೆನಪಾಗಿ ಮಾತನಾಡುವ ಮನಸಾಯಿತು. ಕರೆ ಸ್ವೀಕರಿಸಿ ಮಾತನಾಡಿಡಲು ಶುರು ಮಾಡಿದೆ. ಯೋಗ ಕ್ಷೇಮವನ್ನೆಲ್ಲಾ ವಿಚಾರಿಸಿದ ಮೇಲೆ , ಇ೦ದು ಎಲ್ಲಿಗೂ ಹೊರಗಡೆ ಹೋಗಲಿಲ್ಲವೇ..? ಎ೦ದು ಕೇಳಿದೆ. ಇಲ್ಲ ಇವತ್ತು ಅಡುಗೆ ಮನೆಯಲ್ಲೇ ಬಿಸಿ ಎ೦ದರು. ನಳಮಹಾರಾಜರು ಸೌಟು ಹಿಡಿದು ಏನು ಮಾಡುತ್ತಿದ್ದೀರಿ..? ಹಾಗಾದರೆ ಇ೦ದು ಅತ್ತೆಗೆ ಆರಾಮವಾಯ್ತು ಬಿಡಿ ಎ೦ದೆ. … Read more

‘ನಿರ್ಧಾರ’: ರಮೇಶ್ ನೆಲ್ಲಿಸರ

'ನಂಗೊತ್ತಿತ್ತು ಒಂದ್ ದಿನ ನೀನು ಬಂದೇ ಬರ್ತೀಯ ಅಂತ' ಎಲ್ಲ ಸಂಬಂಧಗಳ ಬಂಧನವನ್ನು ಕಳಚಿ ಬಹುದೂರ ಸಾಗಿಬಂದ ಜಾಹ್ನವಿ,ರಾಘವ್ ತನ್ನನ್ನು ಏಂದಾದರೂ ಹುಡುಕಿಕೊಂಡು ಬಂದೇಬರುವನೆಂಬ ಆಸೆಯನ್ನು ಮನದ ಗರ್ಭದಲಿ ಸುಪ್ತ ಶಿಲಾಪಾಕದಂತೆ ಕಾಯ್ದಿಟ್ಟುಕೊಂಡಿದ್ದಳು. ಕಳೆದ ಹತ್ತು ವರ್ಷಗಳಿಂದ ಅನಾಥ ಮಕ್ಕಳ ಸೇವಾಸಂಸ್ಥೆ ನಡೆಸುತ್ತಿ‌ದ ಜಾಹ್ನವಿ ಮೊದಲ ಬಾರಿಗೆ ತನಗಾಗಿ ಇಷ್ಟೊಂದು ಖುಷಿಪಟ್ಟಿದ್ದಳು. ರಾಘವ್ ನ ಮುಖವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ,ಹಿಂದೆ ಎಂದೋ ಕೀಲಿಹಾಕಿ ಭದ್ರಪಡಿಸಿ‌ದ್ದ ನೆನಪಿನ ಬಾಗಿಲು ತಂತಾನೆ ತೆರೆದುಕೊಂಡಿತು. ““““““““` ರಾಘವ್ ಹಾಗೂ ಜಾಹ್ನವಿ ಒಂದೇ ಕಾಲೇಜಿನಲ್ಲಿ ಕಲಿತದ್ದು,ರಾಘವ್ … Read more

ಕಾವ್ಯಧಾರೆ: ಜಯಶ್ರೀ ದೇಶಪಾಂಡೆ, ವಲ್ಲಿ ಕ್ವಾಡ್ರಸ್, ಸಂತೆಬೆನ್ನೂರು ಫೈಜ್ನಟ್ರಾಜ್

ಜ್ಯೋತಿಯೆದುರು ನತಮಸ್ತಕ. 'ಸತ್ಯಮೇವ ಜಯತೇ' ಪರ೦ಪರೆಗಳಿ೦ದ ಬಿ೦ಬಿತ… ಅಲ್ಲಗಳೆದು ನಕ್ಕಿದೆ ವಾಸ್ತವ , ಹುಚ್ಚು ಅದಕ್ಕೆ?!  ನೂರು ಅಪರಾಧಿಗಳಳಿದರೂ  ಒಬ್ಬ ನಿರಪರಾಧಿ  ಅಳಿವುದು ಬೇಡ .. ವರ್ತಮಾನದ ಸತ್ಯವೇ ಮಿಥ್ಯವೇ ? ಉರಿಬಿಸಿಲ ಸೂರ್ಯನ ಕಣ್ಣೆದುರು   ಜೀವಜಾಲದ ಕಡುಗೊಲೆ, ಸಾಕ್ಷಿಗಳಿಲ್ಲ..ನೋಡಿದವರಿಲ್ಲ, ಆರೋಪಿಗಿದೆ  ಅನುಮಾನದ ಭಾಗ್ಯ..ಬೆನೆಫಿಟ್ ಆಫ್ ಡೌಟ್! ಸಿರಿವ೦ತರಿಗೆ ಮಾತ್ರ-ಯಾರಿಗೂ ಹೇಳಬೇಡಿ! ಅಪ್ಪಿತಪ್ಪಿ ಗಲ್ಲೇ? ಅದಕೂ ದಾರಿ ನೂರೆ೦ಟು. ಕಪ್ಪುಕೋಟಿನ ಅಸ್ಖಲಿತ ಮೊಳಕೆಯ ಮಿದುಳುಗಳಿರುವುವುದೇಕೆ?  ಸರ್ವೇ ಗುಣ: ಕಾ೦ಚನಮಾಶ್ರಯ೦ತಿ.  ಅವನ ಶಿಕ್ಷೆ ಇವನ ಪ್ರಸಾದ! ಮಕ್ಕಳು … Read more

ವಿಕಟ ವಿನಾಯಕ (ಭಾಗ-2): ಎಸ್. ಜಿ. ಸೀತಾರಾಮ್, ಮೈಸೂರು.

ಚೆಲುಗನ್ನಡದಲ್ಲಿ ಚೆನ್‍ಗಣೇಶ ಕೆಳಕಾಣುವ “ಕನ್ನಡಗಣೇಶ ಏಕವಿಂಶತಿ ನಾಮಾವಳಿ” ಪಾಠದಲ್ಲಿ “ಓ” ಮತ್ತು “ಕೈಮುಗಿದೆ” ಎಂದು ಪ್ರತಿ ಹೆಸರಿಗೂ ಹಿಂದೆ-ಮುಂದೆ (ಓ ಬೆನಕ! ಕೈಮುಗಿದೆ…ಓ ಆನೆಮೊಗ! ಕೈಮುಗಿದೆ ಎಂಬಂತೆ) ಸೇರಿಸಿಕೊಂಡು ಜಪಿಸಿದವರಿಗೆ ವಿಘ್ನಪತಿಯು ಅಪವಿಘ್ನದ ಅಭಯವನ್ನೀವನು. ಕನ್ನಡರಕ್ತವನ್ನು ಉಕ್ಕೇರಿಸಿ, ಅಂಥವರನ್ನು “ಕನ್ನಡ ಚೆನ್ನೈದಿಲು” ಮಾಡುವನು ಎಂದು “ಬೆನಕ ಬಲ್ಮೆ” ಎಂಬ ಹವಳಗನ್ನಡ ಕೃತಿಯು ವಿಶಿಷ್ಟವಾಗಿ ವಿಶದಪಡಿಸಿದೆ. ಬೆನಕ= ವಿನಾಯಕ ಪಿಳ್ಳಾರಿ (ಪಿಳ್ಳೆ)= ಬಾಲಗಣಪತಿ  ಆನೆಮೊಗ= ಆನೆಯ ಮುಖದವನು  ಸುಂಡಿಲಮೊಗ= ಸೊಂಡಿಲ ಮುಖದವನು ಇಲಿದೇರ= ಇಲಿಯನ್ನು ತೇರಾಗಿ ಚಲಿಸುವನು ಬಿಂಕಣಗಿವಿಯ … Read more

ತಸ್ಮೈ ಶ್ರೀ ಗುರು ಏನ್ ಮಹಾ?: ಅನಿರುದ್ಧ ಕುಲಕರ್ಣಿ

ನಮ್ಮ ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಒಂದು ವಿಶೇಷ ಸ್ಥಾನವಿದೆ, ಉಪನಿಷತ್ತಿನ ಪ್ರಕಾರ ಗುರು ಶಬ್ದಕ್ಕೆ ಗು ಎಂದರೆ ಅಂಧಕಾರ ಮತ್ತು ರು ಎಂದರೆ ದೂರ ಮಾಡುವವನು ಅಥವಾ ಅಜ್ಞಾನದ ಅಂಧಕಾರವನ್ನ ನಿವಾರಿಸಿ ಜ್ಞಾನ ಮಾರ್ಗವನ್ನು ತೋರಿಸುವವ,  ಸಂಸ್ಕೃತದಲ್ಲಿ ಗುರು ಎಂಬ ಶಬ್ದಕ್ಕೆ  ಭಾರವಾದ ಎನ್ನುವ ಅರ್ಥವೂ ಇದೆ, ಯಾರು ಜ್ಞಾನದಿಂದ ಭಾರವಾಗಿರುತ್ತಾರೋ ಅವನೇ ಗುರು , . ಈ ಗುರುವಿನ ಕುರಿತು ಪುರಂದರ ದಾಸರು ಗುರುವಿನ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು … Read more

ನೇಮಿನಾಥ ತಪಕೀರೆ ಫೋಟೋಗ್ರಾಫಿ

1)    ‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು’ ಗಿಳಿಗಳೆರಡು ಮುತ್ತಿಕ್ಕುವ ದೃಶ್ಯ. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು. ದಿ: 19/06/2014ರಂದು   2)    ‘ನನ್ನಂಥ ಚೆಲುವ ಚೆನ್ನಿಗ ಇನ್ನಾರು?’ ಕನ್ನಡಿಯಲ್ಲಿ ತನ್ನ ಒರತಿಬಿಂಬ ನೋಡಿಕೊಳ್ಳುತ್ತಿರುವ ‘ಸನ್‍ಬರ್ಡ್’. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು. ದಿ: 30/08/2014   3)    ‘ಚಂದ್ರ’ ಚಂದ್ರನ ಮೇಲಿರುವ ಕುಳಿಗಳು ಸ್ಪಷ್ಟವಾಗಿ ಗೋಚರವಾಗಿದೆ. ದಿ: 22/08/2015     4)    ‘ಆಹಾ ಭೂರಿ ಭೋಜನವಿದು’ ಜೋಳದ ದಂಟಿನ ತುದಿಯಲ್ಲಿರುವ ತೆನೆಯ ಕಾಳುಗಳನ್ನು ಮೆಲ್ಲುತ್ತಿರುವ ಅಳಿಲು. ಚಿಕ್ಕೋಡಿ ತಾಲೂಕು … Read more

ಸಾಮಾನ್ಯ ಜ್ಞಾನ (ವಾರ 77): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಇತ್ತೀಚಿಗೆ ವಿವಾದಕ್ಕೆ ಒಳಗಾದ ಮ್ಯಾಗಿ ನೂಡಲ್ಸ್ ಯಾವ ಕಂಪೆನಿಯದು? 2.    HUDCO(ಹುಡ್ಕೊ)ನ ವಿಸ್ತೃತ ರೂಪವೇನು? 3.    ಹಣ್ಣು ಮತ್ತು ಹಣ್ಣಿನ ತೋಟದ ಬಗೆಗಿನ ಅಧ್ಯಯನ ಶಾಸ್ತ್ರಕ್ಕೆ ಎನೆನ್ನುತ್ತಾರೆ? 4.    ಮೇಲ್ಗಾಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? 5.    ಯುವ ಜನರಲ್ಲಿ ಥೈರಾಕ್ಸಿನ್ ಕೊರತೆಯಿಂದ ಬರುವ ವ್ಯಾದಿ ಯಾವುದು? 6.    ಕನ್ನಡದ ಪ್ರಥಮ ಖಾಸಗಿ ಟಿ.ವಿ.ಚಾನಲ್ ಯಾವುದು? 7.    ಭಾರತದ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾದ ವರ್ಷ ಯಾವುದು? 8.    ಭಾರತದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ … Read more

ಹಲ್ಲು ಕೆಟ್ಟ ಕಥೆ!: ಗುರುಪ್ರಸಾದ್ ಕುರ್ತಕೋಟಿ

ಎಲ್ಲ ತೊಂದರೆಗಳು ಶುರುವಾಗುವುದು ರಾತ್ರಿನೇ! ಅಥವಾ ಹಾಗೆ ರಾತ್ರಿ ಶುರುವಾದ ತೊಂದರೆಗಳು ಮಾತ್ರ ನೆನಪಿನಲ್ಲಿ ಉಳಿಯುವುದಕ್ಕೆ ಹಾಗೆ ಅನ್ನಿಸುತ್ತದೆಯೋ? ಎಂದು ಪುಟ್ಯಾ ತಲೆಕೆರೆಯುತ್ತ ಯೋಚಿಸುತ್ತಿದ್ದ. ಅವನ ಮಕ್ಕಳ ಜ್ವರವೇ ಇರಲಿ, ತನ್ನ ಹೊಟ್ಟೆ ನೋವಿರಲಿ ಅಥವಾ ತಲೀನ ಇಲ್ಲ ನೋಡ್ ಲೇ ನಿನಗ ಅಂತ ಬೈಸಿಕೊಳ್ಳುವ ಅವನ ಹೆಂಡತಿ ಪಾರಿಯ ತಲೆ ನೋವಿರಲಿ… ಇವೆಲ್ಲ ಉದ್ಭವಿಸುವುದು ರಾತ್ರಿಯೇ. ಇನ್ನೇನು ಮಲಕೊಬೇಕು ಅನ್ನುತ್ತಿರುವಾಗಲೇ ಇಂಥದ್ದೇನೋ ಬಂದು ನಿದ್ದೆ ಕೆಡಿಸಿ ಕಂಗಾಲು ಮಾಡುತ್ತದೆ.  ಇಂತಹದೇ ಒಂದು ಕರಾಳ ರಾತ್ರಿ ಇವನ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6

ಪತ್ರಕರ್ತೆಯೊಂದಿಗೆ ಫ್ಲಾಪಿಬಾಯ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಒಂದು ಹಳ್ಳಿಯಲ್ಲಿ ಜನೋಪಕಾರಿಯಾಗಿ ಅತ್ಯುತ್ತಮ ಸಲಹೆ ನೀಡುತ್ತಾ, ಬಡ ಜನರ ಸೇವೆ ಮಾಡುತ್ತಿದ್ದರೂ- ತಮ್ಮಷ್ಟಕ್ಕೆ ತಾವು ಆಶ್ರಮ ಕಟ್ಟಿಕೊಂಡು ಒಂದೆಡೆ ಇದ್ದರು. ಇಂತಹ ಅಪರೂಪದ ಜನ ನಮ್ಮ ಸಮಾಜದಲ್ಲಿ ಪ್ರಚಾರಕ್ಕೆ ಬರುವುದು ಅಪರೂಪ. ಅದೇನು ವಿಧಿ ಲಿಖಿತವೋ, ಇವರ ಒಳ್ಳೆಯತನ ಗುರುತಿಸುವ ಶಕ್ತಿ ಸತ್ತ ಪ್ರಜೆಗಳಿಗೆ ಜಾಗೃತೆಯಾಗಿ ಸತ್ಪ್ರಜೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ವ್ಯಾಪಕ ಪ್ರಚಾರವಂತೂ ಜನರ ಬಾಯಿಮಾತಿನಿಂದಲೇ ಹೆಚ್ಚೆಚ್ಚು ದೊರಕಿತ್ತು. ಆಗ ತಾನೆ ಕೆಲಸಕ್ಕೆ ಸೇರಿದ್ದ ಟಿವಿ ರಿಪೋರ್ಟರ್ … Read more

ಶಾಲಿನಿ: ಶ್ರೀ, ಧಾರವಾಡ.

  ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ … Read more

ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು: ಪ್ರಶಸ್ತಿ

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ … Read more

ಶಿವಯ್ಯ ಎಂಬ ಒಗಟು: ಎಚ್.ಕೆ.ಶರತ್

ಅವನೆಂದರೆ ನಮ್ಮೊಳಗಿದ್ದೂ ನಮ್ಮಂತಾಗದ ವಿಸ್ಮಯ. ನಮ್ಮ ಟೀಕೆ, ಅಪಹಾಸ್ಯ, ಚುಚ್ಚು ಮಾತುಗಳಿಗೆ ಎಂದೂ ಪ್ರತಿಕ್ರಿಯಿಸಿದವನಲ್ಲ. ತನ್ನ ಪಾಡಿಗೆ ತಾನು, ತನ್ನ ಜಗತ್ತಿನೊಂದಿಗೆ ಮಾತ್ರ ಬೆರೆತು ತನ್ನತನ ಉಳಿಸಿಕೊಂಡ, ನಿಟ್ಟುಸಿರು ಗಳಿಸಿಕೊಂಡ ಮನುಷ್ಯ ಜೀವಿ. ಶಿವಯ್ಯ, ಅವನಿಗೆ ಅವನದಲ್ಲದ ಜಗತ್ತು ಅರ್ಥಾಥ್ ನಾವು ಇಟ್ಟ ಹೆಸರು. ಅಪ್ಪ-ಅಮ್ಮ ಹುಟ್ಟಿದ ದಿನ, ನಕ್ಷತ್ರ, ಹಾಳುಮೂಳು ನೋಡಿ ಇಟ್ಟ ಹೆಸರು ಬೇರೆ ಇತ್ತು. ಆದರದು ದಾಖಲೆಗಳಲ್ಲಿ, ಅವನ ಸ್ವಂತದ ಜಗತ್ತಿನಲ್ಲಿ ಮಾತ್ರ ಚಾಲ್ತಿಯಲ್ಲಿತ್ತು. ಪಲ್ಸರ್ರು, ಕರಿಷ್ಮಾ, ಝಡ್‍ಎಂಆರ್ ಬಂದ ಮೇಲೂ ಅವುಗಳ … Read more

ಕಪ್ಪುಸುಂದರಿಯ ಕಿರಿಗೂಡು!!: ಅಖಿಲೇಶ್ ಚಿಪ್ಪಳಿ

ಅನಿವಾರ್ಯ ಕಾರಣಗಳಿಂದಾಗಿ ಮನೆಯಿಂದ ಹೊರಗೆ ಕಾಲಿಡದೇ ವಾರದ ಮೇಲಾಗಿತ್ತು. ಮನೆಯಲ್ಲಿ ಇದ್ದ-ಬದ್ದ ಪುಸ್ತಕಗಳೆಲ್ಲಾ ಓದಿ ಮುಗಿದವು. ಈಡಿಯಟ್ ಪೆಟ್ಟಿಗೆ ವೀಕ್ಷಿಸಲು ವಿದ್ಯುಚ್ಛಕ್ತಿ ಭಾಗ್ಯವಿಲ್ಲವಾಗಿತ್ತು. ಮಳೆಯಿಲ್ಲದ ಮಳೆಗಾಲದಲ್ಲೆ ಬಿರುಬೇಸಿಗೆಗಿಂತ ಸುಡುವ ಬಿಸಿಲು. ಆಕಾಶ, ಗಾಳಿ, ನೆಲವೆಲ್ಲಾ ಬಿಸಿಯ ಝಳದಿಂದ ಕಾದು ಬೆಂದು ಹೋಗಿದ್ದವು. ಮಾಡಲು ಕೆಲಸವಿಲ್ಲದಿದ್ದಾಗ ಸಮಯದ ಸೆಕೆಂಡಿನ ಮುಳ್ಳು ನಿಧಾನಕ್ಕೇ ಚಲಿಸುತ್ತದೆ. ಅದರಲ್ಲೂ ಈ ತರಹದ ವ್ಯತಿರಿಕ್ತ ವಾತಾವರಣ ಮಾನಸಿಕ ಆರೋಗ್ಯವನ್ನೇ ತಿಂದು ಬಿಡುತ್ತದೆ. ಲವಲವಿಕೆಯಿಲ್ಲದೇ ಮರದ ಕೊರಡಿನಂತೆ ಬಿದ್ದುಕೊಂಡಿದ್ದವನಿಗೆ, ಕಾಲಬುಡದಲ್ಲೊಂದು ಹೆಜ್ಜೇನಿಗಿಂತ ಕೊಂಚ ದೊಡ್ಡದಾದ ಕರೀ … Read more

ವಿಕಟ ವಿನಾಯಕ: ಎಸ್. ಜಿ. ಸೀತಾರಾಮ್, ಮೈಸೂರು.

      ವಿಚಿತ್ರ ಮೈಸಿರಿ-ಮೈಮೆಗಳಿಂದ, ಆಕೃತಿ-ಅಲಂಕಾರಗಳಿಂದ, “ವಿಕಟಾಯ ನಮಃ” ಎಂದೇ ಆರಾಧಿಸಲ್ಪಡುವ ವಿನಾಯಕನ ವಿಕಟಬಿಂಬವೊಂದನ್ನು ಸೆರೆಹಿಡಿಯಲು ಈ ಅಕ್ಷರಬಂಧದಲ್ಲಿ ಯತ್ನಿಸಲಾಗಿದೆ. ಇದರಲ್ಲಿ “ಅಕಟವಿಕಟ ನುಡಿಕಟ್ಟು”, “ಘನೇಶ ಭವಿಷ್ಯೋತ್ತರ ಪ್ರಲಾಪವು”, “ಚೆಲುಗನ್ನಡದಲ್ಲಿ ಚೆನ್‍ಗಣೇಶ”, “ವಿಶೇಷ ವಿಘ್ನೇಶ” ಮತ್ತು “ವಿನಾಯಕನ ವಿನಿಕೆಗಾಗಿ” ಎಂಬೆನಿಸುವ ಪಂಚಖಂಡಗಳು ಒಳಗೂಡಿವೆ.   ಅಕಟವಿಕಟ ನುಡಿಕಟ್ಟು      ಗಣೇಶವಿಚಾರವನ್ನು ಕುರಿತಂತೆ ‘ಕೃಷ್ಣಶಕ ಹದಿನೂರನೇ’ ಶತಮಾನದ ಕೆಲವು ಸೊಟ್ಟಸೊಲ್ಲುಗಳು ಇಲ್ಲಿವೆ. “ಇವುಗಳನ್ನು ಯುಕ್ತಿಯಿಂದ ನೋಡಿದಲ್ಲಿ, ಬುದ್ಧಿನಾಥನು ಪ್ರಸನ್ನವದನನಾಗಿ ಒಂದೊಂದನ್ನು ನೋಡಿದಾಗಲೂ ಒಂದೊಂದು ವಿಘ್ನವನ್ನು ಉಪಶಾಂತಿಗೊಳಿಸುತ್ತಾ … Read more

ಕಾವ್ಯಧಾರೆ: ಶೀತಲ್, ಸಿಪಿಲೆನಂದಿನಿ, ಶಿವಕುಮಾರ ಚನ್ನಪ್ಪನವರ, ಕು.ಸ.ಮಧುಸೂದನ್

ಸ್ವಾತಂತ್ರ ನಿನ್ನ ಖೈದಿ  ನಾ  ಬೇಡ ನನಗೆ ನೀ ಕೊಡುವ ಬಿಡುಗಡೆ …..  ನಿನ್ನ ಗುಲಾಮ  ನಾ   ಕೊಡಬೇಡ ನೀ ನನಗೆ ಯಾವುದೇ  ಸಂಭಾವನೆ ….  ನಿನ್ನ ಅಗಲಿ ನಾ ಬದುಕಲು  ಅರ್ಥವಿಲ್ಲದ ಕವನವದು …..  ನೀನಿಲ್ಲದ ಜೀವನವೇಕೆ ಹೇಳು  ನೆತ್ತರಿಲ್ಲದ ನರವದು ……  ಇದ್ದಾಗ ನೀ   ಗಾಳಿಗೂ ಅಸೂಯೆ ಹುಟ್ಟಿಸುವೆ ನಾ…  ಕೈಬಿಟ್ಟಾಗ ನೀ  ಪ್ರತೀ ಉಸಿರಿಗೂ ಭಿಕ್ಷೆ ಬೇಡುವ ಭಿಕಾರಿ ನಾ….  (ನೀ ಎಂಬುದು ಈ ಕವನದಲ್ಲಿ ಸ್ವಾತಂತ್ರ) -ಶೀತಲ್        … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೂರಿ ಬೆ ಎಂಬಾತನ ಪುರಾತನ ಪೆಠಾರಿ ಚಿಂತನಶೀಲ ನೂರಿ ಬೆ ಅಲ್ಬೇನಿಯಾದ ಒಬ್ಬ ಗೌರವಾನ್ವಿತ ನಿವಾಸಿ. ತನಗಿಂತ ಬಹಳಷ್ಟು ಚಿಕ್ಕವಳಾಗಿದ್ದವಳೊಬ್ಬಳನ್ನು ಅವನು ಮದುವೆಯಾಗಿದ್ದ. ಒಂದು ದಿನ ಅವನು ಮಾಮೂಲಿಗಿಂತ ಬೇಗನೆ ಮನೆಗೆ ಹಿಂದಿರುಗಿದಾಗ ಅವನ ಅತ್ಯಂತ ವಿಧೇಯ ಸೇವಕನೊಬ್ಬ ಓಡಿ ಬಂದು ಹೇಳಿದ, “ನಿಮ್ಮ ಹೆಂಡತಿ, ಅರ್ಥಾತ್ ನಮ್ಮ ಯಜಮಾನಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಅವರ ಕೊಠಡಿಯಲ್ಲಿ ಒಬ್ಬ ಮನುಷ್ಯ ಹಿಡಿಸಬಹುದಾದಷ್ಟು ದೊಡ್ಡ ಪೆಠಾರಿಯೊಂದಿದೆ. ಅದು ನಿಮ್ಮ ಅಜ್ಜಿಯದ್ದು. ನಿಜವಾಗಿ ಅದರಲ್ಲಿ ಕಸೂತಿ ಕೆಲಸ ಮಾಡಿದ ಪುರಾತನ … Read more

ಸಾಮಾನ್ಯ ಜ್ಞಾನ (ವಾರ 76): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಪರ್ಪಂಚ್ ಇರೋತನಕ ಕನ್ನಡ ಪದಗೋಳನುಗ್ಗಿ ಎಂದು ನುಡಿದವರು ಯಾರು? 2.    ಐ.ಐ.ಟಿ (IIT) ಯ ವಿಸ್ತೃತ ರೂಪವೇನು? 3.    ಸ್ನಿಗ್ಧತೆಯನ್ನು ಅಳತೆ ಮಾಡುವ ಸಾಧನ ಯಾವುದು? 4.    ನಾಲ್ ಸರೋವರ ಪಕ್ಷಿಧಾಮ ಎಲ್ಲಿದೆ? 5.    ಬಾವೂಲ್ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಕಲೆಯಾಗಿದೆ? 6.    2011 ರ ಪ್ರಾಥಮಿಕ ಜನಗಣತಿ ಅಂಕಿ ಸಂಖ್ಯೆಗಳ ಪ್ರಕಾರ ಕರ್ನಾಟಕದ ಸಾಕ್ಷಾರತಾ ಪ್ರಮಾಣ ಎಷ್ಟು? 7.    ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ ಎಲ್ಲಿದೆ? … Read more