ಜಸ್ಟ್ ಮಿಸ್ಸೋ…………: ಗುಂಡುರಾವ್ ದೇಸಾಯಿ

ಇಡೀ ಭೂಮಂಡಲದಲ್ಲಿ ಅತಿ ಪ್ರಾಮಾಣಿಕನಾಗಿ, ಅನ್ಯಾಯ, ಹಿಂಸೆ, ಅಸೂಯೆ, ದ್ವೇಷ, ಮುನಿಸು, ಹೊಗಳಿಕೆ, ತೆಗಳಿಕೆ ಮೊದಲಾದ ರಾಗಗಳತ್ತ ಮುಖವೂ ಮಾಡದೆ ಮರಣವನ್ನಪ್ಪಿದ ಪದ್ದು ಯಮನ ಆಸ್ಥಾನಕ್ಕೆ ಬಂದ. ನಕ್ಕೋತ ಹರಿ ಧ್ಯಾನ ಮಾಡುತ್ತ ಬಂದದ್ದನ್ನು ನೋಡಿ ಯಮನಿಗೆ ಗಾಭರಿ ಮತ್ತು ಆಶ್ಚರ್ಯ ಎರಡು ಆತು. ನನ್ನತ್ರ ಬರೊಷ್ಟಿಗೆ ಕಾಲಿಗೆ ಬಿದ್ದು ‘ನನ್ನನ್ನ ದಯವಿಟ್ಟು ಸ್ವರ್ಗ ಕಳಿಸು ಹಾಂಗೆ ಹಿಂಗೆ ನಿನಗ ಅದೂ ಕೊಡುತಿ ಇದು ಕೊಡಸ್ತಿನಿ, ಭೂಲೋಕಕ್ಕೆ ಹೋದ್ರೆ ನನ್ನ ಬಂಗ್ಲೇಲಿ ಇಳಿಯೊಕೆ ವ್ಯವಸ್ಥ ಮಾಡಸ್ತಿನಿ’ ಅನ್ನೊರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.

ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಾಸ್ಟೆಲ್ ಎಳೆಗಳನ್ನು ಬಿಡಿಸುತ್ತ..!: ಶೀಲಾ ಗೌಡರ.

“ಅಪ್ಪಾಜಿ ನನ್ನ ಹಾಸ್ಟೆಲ್ ಗೆ ಸೇರ್ಸು. ನನ್ನ ಗೆಳೆಯರು ಬಹಳಾ ಮಂದಿ ಹಾಸ್ಟೆಲ್ ನಿಂದ ಶಾಲೆಗೆ ಬರ್ತಾರಾ..“ ಇದು ಎರಡು ವರ್ಷದಿಂದ ನನ್ನ ಮಗನ ಗೋಳು. ಹಾಗಂತ ಆತನೇನು ದೊಡ್ಡ ತರಗತಿಯಲ್ಲಿ ಓದುತ್ತಿಲ್ಲ. ಈ ಸಾರಿ ನಾಲ್ಕನೇ ತರಗತಿ. ಅಜ್ಜಿಯ ಊರಿಗೆ ಹೋದಾಗಲೆಲ್ಲ ಅವಳ ಸಂದಕವನ್ನು ತೆಗೆದು “ಅಜ್ಜಿ ನಾ ಮುಂದಿನ ವರ್ಷ ಹಾಸ್ಟೆಲ್ ಹೋಗ್ತೇನಿ. ನೀ ನನಗ ಈ ಸಂದಕ ಕೊಡಬೇಕು ನೋಡು. ಕಿಲಿ ಹಾಕಾಕ ಬರ್ತೇತಿ ಹೌದಿಲ್ಲ. ನಾ ಕಿಲಿಹಾಕಿ ನನ್ನ ಉಡದಾರಕ್ಕ ಹಾಕ್ಕೊಂತೆನಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಲೆನಾಡಿನ ದೀಪಾವಳಿ: ವೇದಾವತಿ ಹೆಚ್. ಎಸ್.

“ಮಲೆನಾಡು”ಎಂದರೆ ಅದೊಂದು ಸುಂದರವಾದ ವನಸಿರಿಗಳ ನಡುವೆ ಕಂಗೋಳಿಸುವ ಊರೆಂದರೆ ತಪ್ಪಾಗಲಾರದು. ಒಂದೊಂದು ಮನೆಯೂ ಅವರವರ ಜಮೀನುಗಳ ಮಧ್ಯದಲ್ಲಿ ಸುಂದರವಾಗಿ ಕಟ್ಟಿಕೊಂಡು, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಜೀವನ ನೆಡೆಸಿಕೊಂಡು ಬಂದಿರುತ್ತಾರೆ. ಅವರಿಗೆ ಅವರದೇ ಆದ ಸಂಪ್ರದಾಯಗಳು ಹಳೆಯ ತಲೆಮಾರಿನಿಂದಲೂ ಬಳುವಳಿಯಾಗಿ ಬಂದಿರುತ್ತದೆ. ದೀಪಾವಳಿ ಹಬ್ಬವನ್ನು ನಮ್ಮ ಮಲೆನಾಡಿನ ಜನರು ಐದು ದಿನಗಳ ಕಾಲ ಸಂಭ್ರಮದಿಂದ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ತಲೆಮಾರಿನ ಜನರು ನಡೆಸಿದಷ್ಟು ಆಚರಣೆಗಳು ಇಂದು ಕಡಿಮೆಯಾಗಿದ್ದರೂ, ಅದನ್ನು ಸ್ಪಲ್ಪ ಮಟ್ಟಿಗೆಯಾದರೂ ಇಂದಿನ ತಲೆಮಾರಿನ ಜನರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಜ಼ಲ್: ಡಾ. ಗೋವಿಂದ ಹೆಗಡೆ, ಲಕ್ಷ್ಮಿಕಾಂತ ನೇತಾಜಿ ಮಿರಜಕರ

ಗಜ಼ಲ್-೧ ಎಂಥ ಸೋಗುಗಳಲ್ಲಿ ಬದುಕಿದ್ದೇನೆ ಯಾರ ಖುಷಿಗೋ ನುಡಿಯುತ್ತ ಎಂಥ ನೋವಿನಲಿ ಮುಳುಗಿದ್ದೇನೆ ನನ್ನೊಡಲ ನಾನೇ ಬಗೆಯುತ್ತ ಬಂದ ದಾರಿಯಲಿ ಸುರಿದ ಮಂಜು ಮುಂದಕ್ಕೂ ಚಾಚಿ ಮಬ್ಬು ಯಾರಿಗೆ ದೂರು ಹೇಳಿದ್ದೇನೆ ಒಡಕು ತಮಟೆಯ ಬಡಿಯುತ್ತ ಖಚಿತ ಚಹರೆಗಳೇ ಇಲ್ಲದೆ ಹೇಗೋ ಬರೆದಿದ್ದೇನೆ ಚಿತ್ರ ಮುಖ ಮೀಸೆ ಬರಿದೆ ಮೆತ್ತಿದ್ದೇನೆ ಗೆರೆಯ ಎಳೆಯಲು ಸೋಲುತ್ತ ಎಲ್ಲದು ಅಗಣಿತ ಸಂದಣಿಯಲ್ಲಿ ಕಳೆಯಿತು ಒಂಟಿದನಿ ಬರಿದೇ ಸಂತೆ ತಿರುಗಿದ್ದೇನೆ ನನ್ನನೇ ನಾನು ಹುಡುಕುತ್ತ ಕೈ ಕೈ ಹಿಡಿದು ಒಟ್ಟಿಗೆ ನಡೆದೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ

ಸರಸ್ವತಿ ಮನೆಗೆ ಬಂದಾಗ ಏಳೂವರೆ. ಮುಂದಿನ ಹಾಲ್ ನಲ್ಲಿಯೇ ಲಕ್ಷ್ಮಿ ತನ್ನ ತಮ್ಮನನ್ನು ಓದಿಸುತ್ತಿದ್ದಳು. ಅಮ್ಮ ಬಂದಿದ್ದು ಕಂಡೊಡನೇ ಕಾಫಿ ಮಾಡಲು ಎದ್ದಳು. ಸರಸ್ವತಿ ಹತ್ತಿರದಲ್ಲೇ ಇರುವ ಹೆಸರಾಂತ ನರ್ಸಿಂಗ್ ಹೋಂ ಒಂದರಲ್ಲಿ ಹೆಡ್ ನರ್ಸ. ಮೈ ತುಂಬಾ ಕೆಲಸ. ಮನೆಗೆ ಬಂದರೆ ಸಾಕೋ ಸಾಕು ಎನಿಸುತ್ತಿರುತ್ತದೆ. ಈಗ ಮಗಳು ಲಕ್ಷ್ಮಿ ಮನೆಯಲ್ಲೇ ಇರುವುದರಿಂದ ಅವಳಿಗೆ ಮನೆ ಕೆಲಸದಲ್ಲಿ ಸಂಪೂರ್ಣ ವಿನಾಯಿತಿ. ಮಧ್ಯಮ ವರ್ಗದ ಮನೆಯಲ್ಲಿ ಬೇಡಿ ಬಯಸುವಂತಹ ಮಗಳು. ಪಿ ಯು ಸಿ ಯಲ್ಲಿ ಅತ್ಯುತ್ತಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ ೨

ಅಮ್ಮ ಎಂದರೆ……. ೧ ನಡೆದ ದಾರಿಯಲಿ ಎಷ್ಟೊಂದು ಹೆಜ್ಜೆಗಳು ಅಲ್ಲೆಲ್ಲೋ ದೂರದಲ್ಲಿ ಸಣ್ಣ- ದೊಡ್ಡ ಹೆಜ್ಜೆಗಳಿವೆ; ಒಂದು ನನ್ನದು ಮತ್ತೊಂದು ಈಗ ಮೃದುಪಾದವೂರುವ ನನ್ನಮ್ಮನದು! ೨ ಅಮ್ಮ ರೊಟ್ಟಿ ಬಡಿವಾಗ ಒಲೆ ಉರಿಯ ಝಳದ ಮುಂದೆ ಲೆಕ್ಕವಿಲ್ಲದಷ್ಟು ತಿನ್ನುತ್ತಿದ್ದೆವು ಈಗ ರೊಟ್ಟ ಬಡಿಲಾರದ ಅಮ್ಮನಿಗೆ ಶೆಟ್ಟರಂಗಡಿಯಿಂದ ಲೆಕ್ಕ ಮಾಡಿ ರೊಟ್ಟಿ ತಂದಿತ್ತರೆ ಮಾತಾಡದ ಅಮ್ಮ ನಗುತ್ತಿದ್ದಾಳೆ! ೩ ಉಡಿಸಿ ಉಣಿಸಿ ಖುಷಿ ಪಟ್ಟ ಅಮ್ಮ ಇದೀಗ ಕೈ ತುತ್ತಿಗೆ ಬಾಯ್ತೆರೆಯುತ್ತಿದ್ದಾಳೆ! ೪ ಕೈ ಹಿಡಿದು ನಡೆ- ನುಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಪಾಲಿನ ಮತ್ತೊಂದು ಮಾತೃರೂಪ: ಎಂ.ಎಲ್.ನರಸಿಂಹಮೂರ್ತಿ

ಪ್ರತಿ ಹಬ್ಬಕ್ಕೂ ನಮ್ಮ ಹೊಸ್ತಿಲಲ್ಲಿ ಕೂತು ಅವರ ಹೊಸ್ತಿಲ ಕಡೆ ನೋಡುವುದು ರೂಢಿಯಾಗಿಬಿಟ್ಟಿತ್ತು ನಾನು ಸಹಜವಾಗಿವೇ ತೊದಲು ನುಡಿಗಳನ್ನು ಆರಂಭಿಸಿದಾಗನಿಂದ ಇಲ್ಲಿಯ ವರೆಗೆ ಸೋಮು ಒಮ್ಮೊಮ್ಮೆ ಮಾತ್ರಕ್ಕೆ ನರಸಿಂಹ ಎಂದು ತಾಯ ಪ್ರೀತಿ ಹಂಚಿ ತಾಯಿಯಷ್ಟೆ ಅಕ್ಕರೆಯಿಂದ ನೋಡುಕೊಳ್ಳುವ ಮತ್ತೊಂದು ಮಾತೃಹೃದಯ ನಮ್ಮೂರಲ್ಲಿ ಇದಾರೆ. ನನಗೆ ಎರಡು ವರ್ಷ ವಯಸ್ಸಾಗಿದ್ದಾಗ ಬಾಲ ವ್ಯಾಧಿಯಿಂದಾಗಿ ಸತ್ತು ಹೋಗುತ್ತಿದ್ದನಂತೆ. ಆಗ ನಮ್ಮ ಅಪ್ಪ ಅಮ್ಮ, ಅಜ್ಜ ಅಜ್ಜಿ ಹೇಳಿದ ಜಾಗ, ಕೇಳಿದ ವೈದ್ಯರ ಬಳಿಗೆ , ಸೂಚಿಸಿದ ಮಂತ್ರಗಾರರ ಬಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಂಗಿ: ಗೀತಾ ಜಿ. ಹೆಗಡೆ, ಕಲ್ಮನೆ

“ಅಮ್ಮಾ ಅಮ್ಮಾ ” ಯಾರಿದು? ಒಂದೆ ಸಮ ಕಿಟಕಿ ಸಂಧಿಯಲ್ಲಿ ಮೂತಿ ಇಟ್ಕಂಡು ಕರೆಯುತ್ತಿರೋದು? ಓಹ್! ಮಾದೇವಿ. ಈ ದಿನ ಬೆಳಗ್ಗೆಯೇ ಬಂದು ಮನೆ ಕೆಲಸ ಮಾಡಿ ಹೋದಳಲ್ಲಾ? ಇನ್ನೂ ಮಧ್ಯಾಹ್ನ ಎರಡೂವರೆಯಷ್ಟೆ. ಈಗ್ಯಾಕೆ ಬಂದ್ಲಪ್ಪಾ ಇವಳು? ಇನ್ನೇನು ರಾಮಾಯಣವೊ ಏನೊ? ಇವಳ ಗೋಳು ಯಾವತ್ತು ಮುಗಿಯುತ್ತೊ? ಸದಾ ಒಂದಲ್ಲಾ ಒಂದು ಗಲಾಟೆ ಕುಡುಕ ಗಂಡನನ್ನು ಕಟ್ಟಿಕೊಂಡು. ಇದ್ದ ಒಬ್ಬ ಮಗನ ಪಾಲನೆ,ಪೋಷಣೆಯ ಜವಾಬ್ದಾರಿಗೆ ನಿಯತ್ತಾಗಿ ಮೂಕ ಎತ್ತಿನಂತೆ ದುಡಿಯುವ ಹೆಣ್ಣು. ಏನು ಹೇಳಿದರೂ ಇಲ್ಲಾ ಅನ್ನದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಸ್ಪೀಟು ರಾಣಿ: ಜೆ.ವಿ.ಕಾರ್ಲೊ.

ರಶ್ಯನ್ ಮೂಲ: ಅಲೆಕ್ಸಾಂಡರ್ ಪುಷ್ಕಿನ್ ಇಂಗ್ಲಿಷಿನಿಂದ: ಜೆ.ವಿ.ಕಾರ್ಲೊ. ಅಶ್ವದಳದ ಸೇನಾಧಿಪತಿ ನರುಮೋವನ ವಸತಿ ಗೃಹದಲ್ಲಿ ಇಸ್ಟೀಟ್ ಆಟ ಬಹಳ ಜೋರಾಗಿ ನಡೆದಿತ್ತು. ಚಳಿಗಾಲದ ಆ ರಾತ್ರಿ ಹೇಗೆ ಕಳೆಯಿತೆಂದು ಯಾರಿಗೂ ಅರಿವಾಗಲಿಲ್ಲ. ಅವರೆಲ್ಲಾ ಊಟಕ್ಕೆಂದು ಎದ್ದಾಗ ಬೆಳಗಿನ ಜಾವ ಐದಾಗಿತ್ತು! ಗೆದ್ದವರಿಗೆ ಊಟ ರುಚಿಕರವಾಗಿದ್ದರೆ, ಸೋತವರಿಗೆ ಅದೊಂದು ಯಾಂತ್ರಿಕ ಕರ್ಮವಾಯಿತು. ಕೊನೆಗೂ ಶಾಂಫೇನಿನ ಬಾಟಲಿ ಕೈ ಬದಲಾಯಿಸಿದಾಗ ಅವರಲ್ಲಿ ಹೊಸ ಹುರುಪು ತುಂಬಿ ಬಂದಿತು. “ಸುರಿನ್? ಏನಪ್ಪ ನಿನ್ನ ಕತೆ?” ಮನೆಯ ಯಜಮಾನ ನರುಮೊವ್ ಕೇಳಿದ. “ಅಯ್ಯೋ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಡಿಯಾರ ರಿಪೇರಿ: ಗುಂಡೇನಟ್ಟಿ ಮಧುಕರ

ನಾನು ಚಿಕ್ಕವನಿದ್ದಾಗ ಅಪ್ಪನಿಂದ ಹಣವನ್ನಿಸಿದುಕೊಂಡು ಗಡಿಯಾರ ರಿಪೇರಿಯನ್ನು ಮಾಡಿಸಿಕೊಂಡು ಬಂದ ಪ್ರಸಂಗವನ್ನು ನಿಮ್ಮ ಮುಂದೆ ಹೇಳಬೇಕಿದೆ. ನನ್ನ ಹಾಗೂ ಗಡಿಯಾರದ ನಡುವೆ ಅನ್ಯೋನ್ಯತೆ ಅದು ಹೇಗೆ ಬೆಸೆದುಕೊಂಡಿತ್ತೊ ಏನೋ, ನಾನು ಚಿಕ್ಕವನಿದ್ದಾಗ ನಮ್ಮೂರಿನಿಂದ ಸಮೀಪದ ಊರಾದ ಬೈಲೂರಿಗೆ ಬಸವಣ್ಣನ ಜಾತ್ರೆಗೆಂದು ಅಪ್ಪನ ಭುಜವನ್ನೇರಿ ಎರಡೂ ಕಾಲುಗಳನ್ನು ಜೋತು ಬಿಟ್ಟು ಅಪ್ಪನ ತಲೆಯನ್ನು ಹಿಡಿದುಕೊಂಡು ಕುಳಿತು ಜಾತ್ರೆಗೆ ಹೋಗಿದ್ದೆ. ಅಂದರೆ ಅಪ್ಪನ ಸವಾರಿ ಮಾಡಿದ್ದೆ. ಆ ಜಾತ್ರೆಗೆ ಹೋದಾಗ ಆಸೆ ಪಟ್ಟು ಅಪ್ಪನಿಂದ ಕೊಡಿಸಿಕೊಂಡದ್ದು ಪುಟ್ಟ ವಾಚನ್ನು. ಅಪ್ಪ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ: ನಾಗರೇಖಾ ಗಾಂವಕರ

ನನ್ನ ಅಪ್ಪನ ಬಗ್ಗೆ ಬರೆಯಲೇನಿದೆ? ಬದುಕಿನ ಹಾಳೆಯಲ್ಲಿ ಮಕ್ಕಳ ಮುಖದಲ್ಲಿಯ ನಗುವಿಗೋಸ್ಕರ ತೇಯ್ದ ಜೀವನದ ಹಾದಿಯಲ್ಲಿ ಕಂಡುಂಡಿದ್ದು ಸಂಕಟಗಳೇ. ಅದೆಷ್ಟು ಆಪ್ತವಾಗಿತ್ತು ಕೆಲವೊಮ್ಮೆ ಅವರ ಮಾತು, ಪ್ರೀತಿ ತುಂಬಿದ ನೋಟ,ಬಾಲ್ಯದ ಬಿಂಬಗಳು ಜೀವ ರಸವೂಡುವ ಪ್ರತಿಮೆಗಳು. ತಂದೆ ತಾಯಿಯೆಂದರೆ ಭಯಮಿಶ್ರಿತ ಪ್ರೀತಿ. ಅಪ್ಪನೆದುರು ಎದೆ ಸೆಟೆಸಿ ಮಗುವಾಗಿದ್ದಾಗ ಹಠಮಾಡಿ ಕಾಡುತ್ತಿದ್ದ ಅದೇ ನಾನು ಕಿಶೋರಾವಸ್ಥೆಗೆ ಬಂದಂತೆ ಬಾಲ್ಯದ ಹುಡುಗಾಟ ಅಲ್ಪಸ್ವಲ್ಪವೇ ಕಣ್ಮರೆಯಾಗಿತ್ತು. ತಂದೆಯೆದುರು ತಲೆ ಎತ್ತಿ ಮಾತನಾಡಲು ಆಗದ ಸಂಕೋಚ ತಾನೆ ತಾನಾಗಿ ಹುಡುಗಿಯರಲ್ಲಿ ಮೂಡುತ್ತದೆ. ಅದಕ್ಕೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಪ್ಪೆ ಉಚ್ಚೆಯೂ ಬೆಳ್ಳಿ ಕಪ್ಪೆಯೂ. . . : ರಮೇಶ್ ನೆಲ್ಲಿಸರ. ತೀರ್ಥಹಳ್ಳಿ

ಮೀನುಶಿಕಾರಿಯಾಗದೆ ಹದಿನೈದು ದಿನಗಳೇ ಆಗಿ ಹೋಗಿದ್ದವು, ಸಿಕ್ಕ ಒಂದೆರಡು ಸೋಸಲು ಸಾಂಬಾರಿಗೆ ಸರಿಯಾಗಿ, ಅಲ್ಲಿ ಇಲ್ಲಿ ಕೂಲಿಮಾಡಿಕೊಂಡು ರಾಮಯ್ಯ ಹೇಗೋ ಬಿಕನಾಸಿ ಜೀವನದ ಗಾಲಿಯಿರದ ಚಕ್ಕಡಿಯನ್ನು ನೂಕುತ್ತಿದ್ದ ಅಥವಾ ಅದೇ ಇವನನ್ನು ದಿಕ್ಕುದಸೆಯಿಲ್ಲದೆ ಎಳೆಯುತ್ತಿತ್ತು. ನಲವತ್ತು ವರ್ಷದ ಹೆಂಡತಿಗೆ ಮತ್ತು ಐವತ್ತು ವರ್ಷದ ಆತನಿಗೆ ಜನಿಸಿದ ನಾಗನೆಂಬ ಮಗ ಹೇಗೋ ಹುಟ್ಟಿದರಾಯಿತೆಂದು ಹುಟ್ಟಿದಂತಾಗಿ ಐದು ವರ್ಷ ಸರಿದರೂ ನಾಲ್ಕೋ ಐದೋ ಕೆಜಿ ಮಾಂಸವನ್ನು ಎಲುಬು ಚಕ್ಕಳದ ದೇಹದಲ್ಲಿ ಅಲ್ಲಲ್ಲಿ ಅಡಗಿಸಿಟ್ಟುಕೊಂಡು ಒಂದು ಜೀವವಿರಬಹುದೇನೋ ಎಂದು ಅನಿಮಾನಿಸುವಂತೆ ಬದುಕಿದ್ದ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಥನ ಕವಿತೆ: ಫಕೀರ

    ಕಲಾಕುಂಜದ ಸಂತೆಯಲ್ಲಿ ಅಕ್ಕಪಕ್ಕ ಕಲಾಚಿತ್ರಗಳು ವರ್ಣಭಿತ್ತಿಗಳು ಎಣಿಕೆಗೆ ಸಿಗದಷ್ಟು ಹಾದಿಗುಂಟ ಮೈಲಿಗಟ್ಟಲೇ ಲಕ್ಷಲಕ್ಷ ಜನವೋ ಜನ ಸಾವಿರಾರು ಚಿತ್ರಕಲಾವಿದರು ತಮ್ಮ ತಮ್ಮ ಕಲ್ಪನೆಯ ಕನಸುಗಳೊಂದಿಗೆ ನಿಂತಿಹರು ಚಿತ್ರಪಟದ ಎದುರು -1- ಬಣ್ಣಗಳು ಅಂದು ಮಾತನಾಡುತ್ತಿವೆ ಚಿತ್ರಪಟಗಳು ಅತ್ತಿಂದತ್ತ ಓಡಾಡುತ್ತಿವೆ ಕಲಾರಸಿಕರ ಮನದೊಳಗೆ ಕಲಾವಿದನ ಕಲ್ಪನೆಯ ಚಿತ್ರಗಳು ಅಂದು ಮಾರಾಟಕ್ಕಿವೆ ಲಕ್ಷೋಪಲಕ್ಷ ಕಂಗಳ ಚಿತ್ತ ಅಕ್ಕಪಕ್ಕದಲಿ ನಿಂತ ಚಿತ್ರಪಟಗಳತ್ತ ಅರಸುತಿವೆ ಎಡಬಿಡದೆ ಕಣ್ಣುಗಳನು ಮಿಟುಕಿಸುತಿವೆ ತಮ್ಮನು ಕೊಳ್ಳುವ ರಸಿಕರತ್ತ ಆಸೆ ಕಂಗಳದಿ ಬೆರಗು ಹುಟ್ಟಿಸುವಂತೆ ಕಲಾವಿದನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡ ಭಾಷೆಯ ಅಳಿವು ಉಳಿವು: ಎಂ.ಎಚ್. ಮೊಕಾಶಿ. 

ಕನ್ನಡಿಗರೆಲ್ಲರೂ ಒಂದು ಭೌಗೋಳಿಕ ವ್ಯಾಪ್ತಿಗೆ ಒಳಪಟ್ಟ ಸಂದರ್ಭಕ್ಕೆ ಈಗ 64 ವರ್ಷಗಳ ಸಂಭ್ರಮ. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುದಿನ. ಒಂದು ಭಾಷೆ ಸಮಾಜ ಮುಕ್ತವಾಗಿ ಅರಳಬೇಕು. ಪ್ರತಿಯೊಂದು ಜನರ ಅಭಿವೃದ್ದಿಯೇ 1956 ರಲ್ಲಾದ ಭಾಷಾವಾರು ಪ್ರಾಂತದ ರಚನೆಯೇ ಮೂಲ ಉದ್ದೇಶವಾಗಿತ್ತು. ಇಂದು ಹೊಸ ಬದುಕಿಗೆ ಕಾಲಿಡುತ್ತಿರುವ ನಾವು ಈ 64 ವರ್ಷಗಳಲ್ಲಿ ಸಾಧಿಸಿದ್ದೇನು? ಸಾಧಿಸಬೇಕಾದದ್ದೇನು? ಎಂದು ತಿಳಿಯಲು ಇದು ಸಕಾಲವಾಗಿದೆ. 64 ವರ್ಷಗಳ ಹೊಸ್ತಿಲಲ್ಲಿ ನಿಂತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೋವಿನ ಹಾಡು: ಆಶಾ ಜಗದೀಶ್..

ಪಕ್ಕದ ಮನೆಯ ಹಸು ಉಸ್ಸು ಬುಸ್ಸು ಎಂದು ನಿಟ್ಟುಸಿರಿಡುತ್ತಾ ಅಲ್ಲಿಯವರೆಗೂ ಮೇಯ್ದದ್ದನ್ನು ಕೂತು ಮೆಲುಕು ಹಾಕುತ್ತಿತ್ತು. ಅತ್ತಲಿಂದ ಬಂದ ಹಸೀನ, ಇಮ್ತಿಯಾಜ಼್ ಆಂಟಿಗೆ ಹಸುವನ್ನು ತೋರಿಸುತ್ತಾ “ಪಾಪ ನೋವು ತಿಂತಾ ಇದೆ… ನಾವು ಮನುಷ್ಯರಾದ್ರೆ ಇಷ್ಟೊತ್ತಿಗೆ ಆಸ್ಪತ್ರೆ ಆ್ಯಂಬುಲೆನ್ಸು ಅಂತ ಓಡ್ತಿದ್ವಿ… ಆದ್ರೆ ಪಾಪ ಮೂಕ ಪ್ರಾಣಿಗಳಿಗೆ ಅದೆಲ್ಲ ಏನೂ ಇಲ್ಲ…” ಅಂದಳು. ಅಲ್ಲಿಯವರೆಗೂ ದಿನನಿತ್ಯ ನೋಡುತ್ತಿದ್ದ ಆ ಹಸು ಗಬ್ಬಾಗಿದೆ ಎಂದು ನನಗೆ ತಿಳಿದಿರಲೇ ಇಲ್ಲ! ಸೋ ಕಾಲ್ಡ್ ನಗರಗಳಲ್ಲಿ ಹುಟ್ಟಿ ಬೆಳೆದ ನಮ್ಮಂಥವರಿಗೆ ಇಂತವೆಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀವನವೊಂದು ಮುರಳಿ- ಸುಖ ಸಂತೋಷ ತರಲಿ: ಎಂ.ಎನ್.ಸುಂದರ ರಾಜ್

ದೀಪಾವಳಿ ಅಂದರೆ ಸಾಕು, ಮಕ್ಕಳು ಪುಳಕಿತಗೊಳ್ಳುತ್ತಾರೆ, ಹಿರಿಯರು ಸಂಭ್ರಮಿಸುತ್ತಾರೆ. ಏಕೆಂದರೆ, ಇದೊಂದು ಬೆಳಕಿನ ಹಬ್ಬ, ಅಜ್ಞಾನವೆಂಬ ಕತ್ತಲನ್ನು ಪರಿಹರಿಸಿ, ಜ್ಞಾನದ ಬೆಳಕನ್ನು ನೀಡುವ ದಿವ್ಯ ಸಂದೇಶವೇ ದೀಪಾವಳಿ. ಈ ಹಬ್ಬದ ವಿಶೇಷತೆಯೇನು ಎಂಬುದನ್ನು ತಿಳಿಯುವುದು ಅವಶ್ಯಕ. ಶ್ರೀ ರಾಂಜಿ ಜೈನ್ ಎಂಬ ಆಧ್ಯಾತ್ಮಿಕ ಗುರುಗಳು ದೀಪಾವಲಿಯ ಸಂದರ್ಭದಲ್ಲಿ ಒಂದೆಡೆ ಮಾತನಾಡುತ್ತಾ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ಅತ್ಯಂತ ಸೊಗಸಾಗಿ ವಿವರಿಸಿದ್ದಾರೆ. ಜೀವನ ಹೂವಿನ ಹಾಸಿಗೆಯಲ್ಲ, ಅದೊಂದು ಸಮಸ್ಯೆಯ ಗೂಡು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಜೀವನದ ಎಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಗದ್ವಂದ್ಯ ಭಾರತಂ ಪುಸ್ತಕ ವಿಮರ್ಶೆ: ಅಶ್ಫಾಕ್ ಪೀರಜಾದೆ

ಜಗದ್ವಂದ್ಯ ಭಾರತಂ {ಕಾದಂಬರಿ} ಲೇಖಕರು- ರಾಜಶೇಖರ ಮಠಪತಿ [ರಾಗಂ] “ದೇಶವೆಂದರೆ ದೇವರಿಗೂ ಮಿಗಿಲು, ನಮ್ಮ ಕಲ್ಪನೆಯಲ್ಲಿ ಹುಟ್ಟುವ ದೇವರಗಳು ಕೋಟಿ ಕೋಟಿ. ಅವರ ರೂಪ ಅವತಾರಗಳು ಸಾವಿರ ಸಾವಿರ. ಆದರೆ ದೇಶ ಹಾಗಲ್ಲ.ಅದು ನಾವು ನೆಲಸಿದ ನೆಲೆಯಾಗಿ ನೆಲವಷ್ಟೆ ಅಲ್ಲ. ನಮ್ಮ ಅನ್ನ, ಅಸ್ತಿತ್ವ, ಸ್ವಾತಂತ್ರ್ಯಗಳ ಭರವಸೆ. ನಾವು ಕಂಡು ಮುಟ್ಟಿ ಅನುಭವಿಸಬಹುದಾದ ವಾಸ್ತವ. ದೇಶ ಭದ್ರವಾಗಿದ್ದರೆ ನಾವೂ ಭದ್ರ. ನಮ್ಮ ನಾಳೆಗಳೂ ಭದ್ರ. ದೇಶದ ಗೌರವಕ್ಕೆ ಧಕ್ಕೆಯಾಗದಂತೆ ಬದುಕುಬೇಕು” ಇದು ಮುಸ್ಲಿಂ ಕುಟುಂಬವೊಂದರ ಆದರ್ಶ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕಥೆ : ಅರಮನೆಯ ಅರಗಿಣಿ: -ಸಿಂಧು ಭಾರ್ಗವ್

ಒಂದು ಅರಮನೆಯಲ್ಲಿ ರಾಜ, ರಾಣಿ ತಮ್ಮ ಮಕ್ಕಳ ಜೊತೆಗೆ ಸುಖವಾಗಿದ್ದರು. ಐದು ಜನ ಮಕ್ಕಳಲ್ಲಿ ಕೊನೆಯವಳೇ ಹೆಣ್ಣುಮಗಳು. ಒಬ್ಬಳೆ ಹಾಗೂ ಕೊನೆಯ ಮಗಳಾದ ಕಾರಣ ಮುದ್ದಿನಿಂದ ಸಾಕಿ ಬೆಳೆಸುತ್ತಿದ್ದರು. ಹೆಸರು ಕನಕಕಲ್ಯಾಣಿ. ಊಟ-ನಿದಿರೆ ಎಲ್ಲವೂ ಅವಳ ಅಂತಃಪುರದೊಳಗೇ ನಡೆಯುತ್ತಿತ್ತು. ನೆಲದಲ್ಲಿ ಕಾಲಿಡಲೂ ಬಿಡುತ್ತಿರಲಿಲ್ಲ. ಪ್ರತಿಯೊಂದಕ್ಕೂ ಒಬ್ಬ ಕೆಲಸದಾಕೆ ಇದ್ದಳು. ಯುವರಾಣಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೊರಗಿನ ಆಗುಹೋಗುಗಳನ್ನು ತಿಳಿಸಲು ತಂತಿಯಾಗಿದ್ದಳು. ಅವಳ ಕೋಣೆಯೊಳಗೆ ಕೇಳಿದ್ದೆಲ್ಲವೂ ಬರುತ್ತಿತ್ತು. ಹಾಗಾಗಿ ಯುವರಾಣಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಳೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮೆಲ್ಲರ ಸಿಪಿಕೆ- ಎಂಬತ್ತರ ಮೊಹಬತ್ತು!: ಡಾ. ಹೆಚ್ ಎನ್ ಮಂಜುರಾಜ್

ಸಿಪಿಕೆ ಮತ್ತು ಅವರ ಕಾವ್ಯ ಕುರಿತ ಬರಹ ಅಪ್ರತಿಮ ವಿದ್ವತ್ತು; ಮಾತೋ ವಿದ್ಯುತ್ತು ! ಸಿಪಿಕೆಯವರನ್ನು ಬಲ್ಲ ಯಾರಿಗೂ ಅನಿಸುವ ಸತ್ಯವಿದು. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಸಿ ಪಿ ಕೃಷ್ಣಕುಮಾರ್ ಅವರು ಕನ್ನಡ ಸಾಹಿತ್ಯದ ಹೆಮ್ಮೆಯ ಆಸ್ತಿ. ಹಳೆಯ ಮೈಸೂರು ಪ್ರಾಂತ್ಯದ ಸತ್ತ್ವ ಮತ್ತು ಸ್ವತ್ವ. ಇವರು ತಮ್ಮೆಲ್ಲ ಚೈತನ್ಯವನ್ನು ಸಾಹಿತ್ಯ ಕೃಷಿಗೆ ಮುಡಿಪಿಟ್ಟವರು. ಕನ್ನಡ ಸಾಹಿತ್ಯ ಸೇವೆಯೇ ಅವರ ಮತ್ತೊಂದು ಹೆಸರು; ಬರೆವಣಿಗೆ ಅವರ ಉಸಿರು. ಕನ್ನಡ, ಇಂಗ್ಲಿಷ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ