ಮತ್ತೆ ವಸಂತ: ಶ್ರೇಯ ಕೆ ಎಂ

ಸ್ಮಿತಾ ಹಾಗೆಯೇ ಚೇರ್ ಗೆ ಒರಗಿದ್ದಾಳೆ. ಕಣ್ಣಂಚಲ್ಲಿ ನೀರಾಡಿದೆ. ಹಾಗೇ ಹಿಂದಿನ ನೆನಪುಗಳತ್ತ ಜಾರುತ್ತಿದೆ ಮನಸು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸ್ಮಿತಾ ಓದಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಎಲ್ಲದರಲ್ಲೂ ಮುಂದು. ಮನೆಯಲ್ಲಿ ಮುದ್ದಿನ ಮಗಳು. ಒಡಹುಟ್ಟಿದವರೊಂದಿಗೆ ಬೆಳೆದ ಸ್ಮಿತಾ ಮನೆಯವರೆಲ್ಲರ ಪಾಲಿನ ಅಚ್ಚುಮೆಚ್ಚು. ಮಧ್ಯಮವರ್ಗದ ಕುಟುಂಬವಾದರೂ ಇದ್ದುದರಲ್ಲಿಯೇ ಸುಖವಾಗಿದ್ದ ಸಂಸಾರ. ಪದವಿ ಓದಿನ ಜೊತೆಗೆ ಹಲವಾರು ಕಲೆಗಳನ್ನು ಕಲಿತವಳು. ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ಒಮ್ಮೆ ಅದೆಲ್ಲಿಂದಾನೋ ಒಂದು ಗಂಡಾಂತರ ಬಂದು ಸ್ಮಿತಾಳ ಬಾಳೇ ಛಿದ್ರವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಯಲಾಗದ ಬಣ್ಣ: ಅನುರವಿಮಂಜು

ಶೋಭಿತಾಳ ಗಂಡ ತೀರಿಕೊಂಡು ವರ್ಷ ಕಳೆದಿದೆ, ಅವಳೀಗ ಒಂಟಿ ಜೀವನ ನಡೆಸುತ್ತಿದ್ದಾಳೆ. ನಿನ್ನ ಅಂದಿನ ಪ್ರೀತಿ ಇನ್ನು ಜೀವಂತ ಇರುವುದಾದರೆ ಅವಳನ್ನು ಮದುವೆಯಾಗಿ ಹೊಸ ಬದುಕನ್ನು ನೀಡು. ಆಕಸ್ಮಿಕವಾಗಿ ಭೇಟಿಯಾದ ಆತ್ಮೀಯ ಗೆಳೆಯ ಗೌತಮ್ ಆಚ್ಚರಿಯ ಸಂಗತಿ ತಿಳಿಸಿ ಸಲಹೆ ನೀಡಿದ. ಆತನ ಮಾತು ಕೇಳಿ ನನ್ನೊಳಗಿದ ಸೂಕ್ತ ಬಯಕೆಗಳು ಗರಿಗೆದರಿದವು. ಒಂದು ನಿರ್ಧಾರಕ್ಕೆ ಸಿದ್ದನಾದೆ, ಶೋಭಿತಾಳೊಂದಿಗೆ ಉತ್ತಮ ಸ್ನೇಹ ಸಂಬಂಧ ವಿರಿಸಿದ್ದರಿಂದ ನನ್ನ ಮಾತನ್ನು ತಿರಸ್ಕರಿಸಲಾರಳೆಂಬ ನಂಬಿಕೆ ಇತ್ತು. ಒಂಟಿ ಜೀವನ ಅವಳಿಗೂ ಬೇಸರ ತಂದಿರಬಹುದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ) ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ, ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ ೧

ಕಾಲ ಬದಲಿಸಿದ ಬದುಕು ತಂಗಳು ತಡಿಯ ತಿಂದುಅರೆಬೆಂದದ್ದು ಬುತ್ತಿಹೊತ್ತುಕೊಂಡು ಓಡುತ್ತಿತ್ತು ಜೀವಸಮಯದ ಜೊತೆಗೆಪೈಸೆ, ಪೈಸೆಯೂ ಕೂಡಿಟ್ಟುಜೋಪಾನ ಮಾಡಿತ್ತು ಭಾವ,ವಾಸ್ತವದಲ್ಲಿ ನಿಲುಕದ ಬಣ್ಣದ ಕನಸುಗಳ ಭವಿಷ್ಯದ ಜೊತೆಗೆ! ಕಣ್ಣಿಗೆ ಕಾಣದ ಜೀವಿಯತಲ್ಲಣಕೆ ಬದುಕು ಬೀದಿಗೆ ಬಿತ್ತುವರ್ತಮಾನವೇ ಬುಡಮೇಲಾಯಿತುಕೈಗಳಿಗೆ ಕೆಲಸವಿಲ್ಲ ,ಕಾಲುಗಳಿಗೆ ಹೋಗಲುದಾರಿಯೇ ಇಲ್ಲ !ಹಗಲಿನಲ್ಲೂ ಮನೆಯಲ್ಲೇ ಕೊಳೆತವುದೇಹಗಳು,ಆಂತಕದಿಂದ ದಿನ ದೂಡಿದವುಮನಸುಗಳು ಕೆಲವರು ಊರು ಬಿಟ್ಟರುಹಲವರು ಜಗತ್ತೇ…… ಬಿಟ್ಟರುವಲಸೆ ಯುಗ ಪ್ರವಾಹದಂತೆಹರಿಯಿತು ಗಡಿಗಡಿಗಳ ದಾಟಿಸ್ತಬ್ದವಾದವು ಮಹಾನಗರಗಳುಅಮ್ಮನಾಗಿ, ಮಗಳಾಗಿ, ಅರ್ಧಾಂಗಿಯಾಗಿಹೆಣ್ತನ ನಡೆಯಿತು ದಾರಿಗೆ ಊರುಗೋಲಾಗಿವಲಸೆ ಭಾರತದ ಭಾಗವಾಗಿ. ಮಾತು ಮೌನ ವಾಯಿತುಮುಖಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಹಕ್ಕೂ ಮನಕ್ಕೂ ಬೆಳಕ ಸುರಿವ ದೀಪಾವಳಿ: ಗೌರಿ.ಚಂದ್ರಕೇಸರಿ, ಶಿವಮೊಗ್ಗ

ಜಗದ ಕತ್ತಲೆಯನ್ನೆಲ್ಲ ಹೊಡೆದೋಡಿಸುವ ಬೆಳಕು ಯಾರಿಗೆ ತಾನೆ ಇಷ್ಟವಿಲ್ಲ? ಝಗಮಗಿಸುವ ದೀಪಗಳ ಹಬ್ಬವಾದ ದೀಪಾವಳಿ ಎಂದರೆ ಬಾಲ್ಯದಿಂದಲೂ ಏನೋ ಒಂದು ಆಕರ್ಷಣೆ. ಕಳೆದು ಹೋದ ಅದೆಷ್ಟೋ ದೀಪಾವಳಿಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಈಗಿನ ತರಾವರಿ ಬಣ್ಣದ ಬಲ್ಬುಗಳ ದೀಪಗಳು ಹಿಂದಿನ ಮಣ್ಣಿನ ಹಣತೆಗಳ ಮುಂದೆ ಮಸುಕಾಗಿ ಬಿಡುತ್ತವೆ. ದೀಪಾವಳಿ ಇನ್ನೂ ತಿಂಗಳಿರುವಾಗಲೇ ಮನೆಯಲ್ಲಿ ಸಡಗರ ಪ್ರಾರಂಭವಾಗುತ್ತಿತ್ತು. ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ ಉದ್ದವಾದ ಕೋಲೊಂದಕ್ಕೆ ಹಳೆಯ ಬಟ್ಟೆಯನ್ನು ಕಟ್ಟಿ ಜೇಡರ ಬಲೆಗಳನ್ನೆಲ್ಲ ಅವ್ವ ತೆಗೆಯುತ್ತಿದ್ದಳು. ನಂತರ ಅದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..: ವಿನಾಯಕ ಅರಳಸುರಳಿ

ದೀಪಾವಳಿ ಮರಳಿ ಬಂದಿದೆ. ಆಫೀಸಿನ ಬಾಸಿನ ಟೇಬಲ್ ಮೇಲೀಗ ರಜೆಯ ಅರ್ಜಿಗಳೆಲ್ಲ ನಾ ಮೊದಲು, ತಾ ಮೊದಲು ಎಂದು ತಳ್ಳಾಡುತ್ತಾ ಸಾಲಾಗಿ ನಿಂತಿವೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂದು ಯೋಚಿಸುತ್ತಿರುವಾಗಲೇ ಅವರ ಹೆಂಡತಿ ಕಾಲ್ ಮಾಡಿದ್ದಾರೆ. ‘ಹಬ್ಬಕ್ಕೆ ಊರಿಗೆ ಹೋಗಲಿಕ್ಕಿದೆ. ಟಿಕೇಟು ಬುಕ್ ಮಾಡೋದು ಮರೀಬೇಡಿ!” ಎಂದು ನೆನಪಿಸಿದ್ದಾಳೆ. ಹೀಗೆ ಬಾಸೆಂಬ ಬಾಸೇ ರಜೆ ಹಾಕಿ ಹೋದ ಆಫೀಸಿನಲ್ಲಿ ಕೆಲವರಿಗಷ್ಟೇ ರಜೆ ಮಂಜೂರಾಗಿದೆ. ಅವರೆಲ್ಲ ಸಂಭ್ರಮದಲ್ಲಿ ಊರಿನ ಬಸ್ಸು ಹತ್ತುತ್ತಿದ್ದರೆ ರಜೆ ಸಿಗದ ಹತಾಷರು ಹೊರಟವರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೇನು ಮುಟ್ಟಿ ತುಟಿ ಕಚ್ಚಿಸಿಕೊಂಡಂತೆ: ಪಿ.ಎಸ್. ಅಮರದೀಪ್.

ಗಡಿನಾಡ ಊರುಗಳಲ್ಲಿರುವ ಒಂದು ಉಪಯೋಗವೆಂದರೆ, ಅದು ಒಂದಕ್ಕಿಂತ ಹೆಚ್ಚು ಭಾಷಾ ಕಲಿಕೆ ಮತ್ತು ಸರಾಗವಾಗಿ ಮಾತಾಡುವ ರೂಢಿಯಾಗುವುದು. ಕನ್ನಡ – ತೆಲುಗು, ಕನ್ನಡ-ತಮಿಳು, ಕನ್ನಡ-ತುಳು, ಕನ್ನಡ- ಮರಾಠಿ, ಹೀಗೆ. ಅದಲ್ಲದೇ ಹಿಂದಿ ಉರ್ದು ಕೂಡ. ಚೂರು ಇಂಗ್ಲೀಷು ಬೆರೆತರಂತೂ ಬಹುಭಾಷಾ ವಿದ್ಯೆ. ಅಂಥದೊಂದು ಸೌಕರ್ಯ ನಮ್ಮ ಭಾಗದಲ್ಲೂ ಇದೆ. ಬಳ್ಳಾರಿ ರಾಯಚೂರು ಆಂಧ್ರ ಸೀಮೆಯ ಅಂಚಿನಲ್ಲಿರುವುದರಿಂದಲೂ ಜೊತೆಗೆ ತಮಿಳುನಾಡು ಆಂಧ್ರದಿಂದ ತುಂಗಭದ್ರ ಆಣೆಕಟ್ಟು ನಿರ್ಮಾಣ ಹಂತದಲ್ಲಿಂದ ಬಂದು ಸೆಟ್ಲ್ ಆದಂಥ ತಮಿಳಿಗರು, ತೆಲುಗರು ಇಲ್ಲೇ ನೆಲೆ ಊರಿರುವುದರಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿನ್ನಮ್ಮನ ಲಗ್ನದ ಪರಿಚಯ: ಡಾ. ಹೆಚ್ಚೆನ್ ಮಂಜುರಾಜ್

ಪುಸ್ತಕದ ಹೆಸರು: ಚಿನ್ನಮ್ಮನ ಲಗ್ನ-1893(ಮಲೆಗಳಲ್ಲಿ ಮದುಮಗಳು ಕುರಿತ ಟಿಪ್ಪಣಿಗಳು)ಲೇಖಕರು: ಕೆ ಸತ್ಯನಾರಾಯಣ, ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರುಮೊದಲ ಮುದ್ರಣ: 2020, ₹ 170, ಡೆಮಿ 1/8, ಪುಟಗಳು: 176 ಕೆ ಸತ್ಯನಾರಾಯಣ ಅವರು ನಮ್ಮ ಕನ್ನಡದ ಹೆಮ್ಮೆಯ, ಮಹತ್ವದ ಹಾಗೂ ಸುಸಂವೇದನಾಶೀಲ, ಸೃಜನಶೀಲ ಬರೆಹಗಾರರು. ಅವರ ಕತೆಗಳು ಮತ್ತು ಪ್ರಬಂಧಗಳು ನಮ್ಮ ಭಾಷೆ-ಸಮಾಜ ಮತ್ತು ಸಂಸ್ಕೃತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಾ ಅದರ ಪರಿಧಿಯನ್ನು ವಿಸ್ತರಿಸಿವೆ, ಪುನಾರಚಿಸಿವೆ ಮತ್ತು ಆಪ್ಯಾಯಮಾನವಾಗಿ ನಿರ್ವಚಿಸಿವೆ. ಅವರ ಕತೆಗಳು ಮತ್ತು ಪ್ರಬಂಧಗಳ ಶೈಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವರ್ಕ್ ಫ್ರಂ ಹೋಂ ಮತ್ತದರ ಸಮಸ್ಯೆಗಳು: ಪ್ರಶಸ್ತಿ ಪಿ.

ಪೇಟೆಯಲ್ಲಿನ ಸಾಫ್ಟವೇರ್ ಕಂಪೆನಿಗಳಲ್ಲಿ ಕೆಲಸ ಮಾಡ್ತಿದ್ದ ಹುಡುಗರೆಲ್ಲಾ ಈಗ ಹಳ್ಳಿ ಸೇರಿದ್ದಾರೆ. ಮನೇಲೇ ಕೂತ್ಕೊಂಡು ಅದೇನೋ ವರ್ಕ್ ಫ್ರಂ ಹೋಂ ಮಾಡ್ತಿದ್ದಾರೆ ಅನ್ನೋ ಮಾತನ್ನ ಸುಮಾರು ಕಡೆ ಕೇಳಿರ್ತೀರ . ಮುಂಚೆಯೆಲ್ಲಾ ಆಫೀಸಿಗೆ ಅಂತ ಬೆಂಗಳೂರಿಗೆ ಹೋಗ್ತಿದ್ದೆ. ಈಗ ಇಲ್ಲೇ ಇದ್ದೀಯಲ್ಲ. ರಜೆಯೇನಪ್ಪ ನಿಂಗೆ ಅಂತಾರೆ ನಮ್ಮಜ್ಜಿ. ಇಲ್ಲಜ್ಜಿ ಮನೆಯಿಂದ್ಲೇ ಕೆಲಸ ಮಾಡ್ಬೋದು ಲ್ಯಾಪ್ಟಾಪಲ್ಲಿ, ಕಂಪ್ಯೂಟರಲ್ಲಿ ಅಂದ್ರೆ ಏನ್ಮಾಡ್ತೀಯ ಅದ್ರಲ್ಲಿ ? ಲೆಕ್ಕ ಮಾಡೋದಿರುತ್ತಾ ಅಂತಾರೆ. ನಾವು ಏನ್ಮಾಡ್ತೀವಿ ಅಂತ ಹೊರಗೆ ಹೇಳದ ಹಾಗೆ ನಮ್ಮ ಅನ್ನದಾತರಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಬೆಳಕಿನ ಬೆರಗು ನೀನು”: ಮಹಾಂತೇಶ್ ಯರಗಟ್ಟಿ

ಹಾಯ್ ಹೇಗಿದ್ದೀಯಾ…? ಇವತ್ತು ನಿನ್ನದೇ ಇಷ್ಟದ ಹಬ್ಬ ದೀಪಾವಳಿ. ಪ್ರತಿ ದೀಪಾವಳಿಗೊಮ್ಮೆ ಮನದ ಮನೆಯ ದೀಪ ಬೆಳಗಿ ಇಷ್ಟದ ಮಾತುಗಳ ಜೊತೆಗೆ ಕಷ್ಟದ ಕರ್ಮಗಳನ್ನು ತೊರೆದು ನನ್ನ ಮನಸ್ಸನ್ನ ಗಟ್ಟಿ ಮಾಡುತ್ತಿದ್ದೀಯ ನೀನು. ನೀನಿಲ್ಲದ ಮೇಲು ಈಗಲೂ ಹಾಗೆ ಇದ್ದೇನೆ. ದೇವರ ನೆನೆಯೋದನ್ನ ಬಿಟ್ಟು ಸುಮಾರು ವರ್ಷಗಳಾಯಿತು, ಬದಲಿಗೆ ನೀನು ನೆನಪಾಗುತಿ. ಆಸರೆಯ ಅಡಿಪಾಯ ಮುರಿದು ಬಿದ್ದಮೇಲೆ ಶವದ ರೂಪ ತಾಳಿದೆ ಈಗ ಈ ಹೃದಯ. ವರ್ಷದ ಹಬ್ಬಕ್ಕೆ ದೀಪ ಹಿಡಿದು ಶುಭಾಶಯ ಕೋರುವ ನಿನ್ನದೊಂದು ಪುಟ್ಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ ೨

‘ಮಂಗಳಮುಖಿ’ ನಮ್ಮೊಳಗೇ ನಾವೇ ಪರಿಚಿತರುಕೇಳಿ ಜಗದ ಮುಮ್ಮುಖಲಿಂಗಮೌನಿಗಳೇ…ರಕ್ಕಸರಸೋಮನದ ದಿಬ್ಬಣಗಳಗೂಡಿಹೊರಳಾಡುವ ನಿಮ್ಮ ಅಪರಿಚಯನಮ್ಮೊಡನೆ ವಿಧಿಯಿರಬಹುದೇ..?ನಮ್ಮೊಳಗೆ ನಾವೇಸಂಚಯ ಕೇಳಿರಿ ಒಮ್ಮುಖ ದನಿಗಳೆ..ನಿಮ್ಮ ಅಸಹಿಷ್ಣುತೆಗೆಸ್ವಕಲ್ಪಿತ ಚಕ್ರದೊಳಗೇಲುಪ್ತಮೋಹದುನ್ನತಿಯೆಡೆಗೆನಡೆದು ನೆಡೆದು ನಿಮ್ಮ ವಿರಚಿತವಸಾಹತು ಬಿಂಧುವೊಂದಕೆಕಟ್ಟಿಹಾಕುವ ದಟ್ಟ ದನಿಯೂನಿಮ್ಮದೇ ಅಲ್ಲವೇ:ತೃಪ್ತ ತೆರಪು ನಮಗಿಲ್ಲವೇನಿಮ್ಮ ಸ್ಥಾಪಿತ ಗಡಿಯೊಳಗೆ?ಅತೃಪ್ತ ತನವ ಎಲ್ಲಿಗೆ ದೂಕಲಿ ನಾವು?…ನಿಮ್ಮವಿಕೃತಿ ಹೂರಣದಲಿಹುದುಗಿ ಹುದುಗಿ ಆನಂದಾಕೃತಿಒಡಮೂಡುವುದೇ ನಮ್ಮಲಿ?…ನಮ್ಮುಖವ ಕಂಡು ಒಬ್ಬೊಬ್ಬರಲ್ಲೂಮುಖಗಂಟು ಎಂಟಾಗಿದೆನೋಡಿಕೊಳ್ಳಿ ನಮ್ಮ ಭಿನ್ನಕಣ್ಣಕನ್ನಡಿಯಲ್ಲಿ ;ನಲಿವೆಲ್ಲ ಅಂಗಾತವಾಗಿ ಮಸಣದಿಬ್ಬಣಹೊರಟಾಗಿದೆ ದಿನ ದಿನವೂ,ಗರ್ಭದುಃಖವು ಕೋಡಿಯೊಡೆದುನಿಮ್ಮ ಅಸಹ್ಯದ ಭಾವಬುವಿಯೊಳಗೆನಿಂತು ನಲಿವಿನ ಬುಗ್ಗೆಯಾಗಿದೆ;ಮನದಬೊಗಸೆಯಲಿ ಹಿಡಿದು ಕುಡಿಯಿರಿಅಪಾರದರ್ಶಕ ಲಿಂಗಿಗಳೇ.–ಚಿಕ್ಕಜಾಜೂರು ಸತೀಶ ಸತ್ಯ…ಅಷ್ಟೇ..!! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾಸಗಳ ವೈಶಿಷ್ಟ್ಯ: ಗೀತಾ ಜಿ ಹೆಗಡೆ ಕಲ್ಮನೆ.

ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರಿವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಹರೆಯದ ವಸಂತ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ.  ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು.  ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸ್ತಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ.  ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ.  ಬಣ್ಣ ಬಣ್ಣದ ಓಕುಳಿಯ ಸಿಂಪಡಿಕೆ.  ಹರೆಯದ ಕನಸುಗಳು ನೂರೆಂಟು.  ಅದು ಮಾತಿನಲ್ಲಿ ಅಥವಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣೇ ನಿನ್ನ ಅಂತರಾಳದಲ್ಲಿ ನಿತ್ಯವೂ ಸತ್ಯದ ಹುಡುಕಾಟ…..!?: ದೀಪಾ ಜಿ.ಎಸ್.‌

 ಈಗಿನ ಸ್ವತಂತ್ರದ ಬದುಕಿನಲ್ಲಿ ಒಂದು ಹೆಣ್ಣನ್ನ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಅವಳಿಗೆ ಕಾನೂನಿನ ಚೌಕಟ್ಟನ್ನ ನಿರ್ಮಿಸಿ ಅವಳ ಜೀವನವನ್ನ ಕತ್ತಲಿನ ಕೋಣೆಗೆ ತಳ್ಳಿ. ಅವಳಿಗೆ ಜೀವನ ಅಂದರೆ ಏನು ಅನ್ನೋದು ಅವಳಿಗೆ ತಿಳಿಯದ ಹಾಗೆ ಅವಳ ಭಾವನೆಗಳನ್ನ ಹೊಸಕಿ ಹಾಕಿ ಸಂಸಾರದ ಸಾಗರದಲ್ಲಿ ಜವಾಬ್ದಾರಿ ಅನ್ನುವ ಗುಂಡಿಗೆ ತಳ್ಳಿ, ಅಲ್ಲೂ ಅವಳನ್ನ ಎಲ್ಲಾ ತರದಲ್ಲು ಮೂರ್ಖಳನ್ನಾಗಿ ಮಾಡಿ ಅವಳ ಕನಸುಗಳನ್ನ ನುಚ್ಚು ನೂರು ಮಾಡಿ ವ್ಯಂಗ್ಯ ಮಾಡುವ ಈ ಸಮಾಜದಲ್ಲಿ ದೈರ್ಯದಿಂದ ಬದುಕಿ ಬಾಳಿ ತೋರಿಸುವಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚುಟುಕಗಳು: ಮಾಂತೇಶ್ ಗೂಳಪ್ಪ ಅಕ್ಕೂರ

೧. ನವ ಪ್ರೇಮಿಗಳ ಪಜೀತಿ ಪ್ರಶ್ನೆ: ಉತ್ತರ ಗೊತ್ತಿದ್ದರು ಇಬ್ಬರೂ ಹೇಳ್ಲಿಲ್ಲಉತ್ತರ: ಪ್ರಶ್ನೆಯನ್ನು ಒಬ್ಬರಿಗೊಬ್ಬರು ಕೇಳಿ ಕೊಳ್ಳಲೆ ಇಲ್ಲಾ .. ೨. ಬದುಕಿನ ಹಾದಿ ಯೌವನದ ಹಾದಿ ಒಂದು ಪಾಚಿ ರಸ್ತೆಹಿಡಿತ ತಪ್ಪಿ ಜಾರಿ ಬಿದ್ದ ಜೋಡಿಗಳೆಷ್ಟೋಗೃಹಸ್ಥನ ಹಾದಿ ಒಂದು ಸುವ್ಯವಸ್ಥೆಹಿಡಿದ ಕೈ ತಪ್ಪದ ಹಾಗೆ ನೋಡಿಕೊಳ್ಳಬೇಕು ಆದಷ್ಟು… ೩. ಲೇಬಲಿಂಗ್ (ಹಣೆಬರಹಕ್ಕೆ ಹೊಣೆ ಯಾರು) ಲೈಫ ಬಾಯ್, ಬರಿ ಕೈ ತೊಳೆದರೆಲಕ್ಸ್ , ಕತ್ರಿನಾಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟಿತುಕರ್ಮ ಚರ್ಮ ಬೇರೆ ಬೇರೆ ಯಾದರೂಅವೆರಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಯಾಗದಲ್ಲೊಂದು ಸಂಜೆ: ಕೃಷ್ಣವೇಣಿ ಕಿದೂರ್.

ಪ್ರವಾಸದ ನಿಮಿತ್ತ ಅಲಹಾಬಾದಿಗೆ ಬಂದಿದ್ದೆವು. ಇಲ್ಲಿನ ಸುಪ್ರಸಿದ್ಧ ಪ್ರಯಾಗಕ್ಕೆ ಭೇಟಿ ಕೊಟ್ಟಾಗ ನದಿಯಲ್ಲಿ ತ್ರಿವೇಣಿ ಸಂಗಮ , ಪ್ರಯಾಗ ನೋಡಲು ಉತ್ಸುಕರಾಗಿದ್ದೆವು. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದ ಪವಿತ್ರ ಸ್ಥಳ ಅದು. ಸಂಜೆಯ ಆರೂವರೆಯ ಸುಮಾರಿಗೆ ತಲುಪಿದೆವು. ಅಲ್ಲಿದ್ದದ್ದು ಒಂದೋ, ಎರಡೋ ದೋಣಿಗಳು. ಅವರಲ್ಲಿ ವಿಚಾರಿಸಿದಾಗ ಒಬ್ಬರು ಬರಲು ಒಪ್ಪಿದರು. ನದೀ ದಡ ನಿರ್ಜನ. ನಾವಿದ್ದ ದೋಣಿ ನೀರಿನಲ್ಲಿ ಸಾಗುವಾಗ ಬಿಳಿಯ ಸೈಬೀರಿಯನ್ ಹಕ್ಕಿಗಳು ಜೊತೆ ಜೊತೆಗೆ ಬರತೊಡಗಿದವು. ಅವಕ್ಕೆ ಬಿಸ್ಕತ್ತು, ಹಣ್ಣು ಕೊಡುವ ಅಭ್ಯಾಸವಾಗಿತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಂಗ್-ಚಾಂಗ್-ಚೂ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಮನುಷ್ಯ ಹುಟ್ಟಿನಿಂದಲೇ ಹಲವಾರು ನಾಮಧೇಯಗಳಿಂದ ಕರೆಯಲ್ಪಡುತ್ತಾನೆ, ಮಗುವಾಗಿದ್ದಾಗ ಒಂದು ತರಹದ ಪ್ರೀತಿಯ ಹೆಸರುಗಳು ಮುಗ್ಧ ನಗುವಿಗೆ ಅಲಂಕಾರದಂತೆ ಕಂಡರೂ ಕೆಲವು ಸಲ ಅದೇ ಹೆಸರುಗಳು ಬೆಳೆದು ದೊಡ್ಡವರಾಗಿ ಮುದುಕರಾಗುವವರೆಗೂ ಅವರ ಬೆನ್ನಿಗೆ ಹಾಗೇ ಅಂಟಿಕೊಂಡೇ ಇರುತ್ತವೆ, ಕೆಲವು ಸಲ ಸತ್ತ ನಂತರವೂ ಆತನ,/ಆಕೆಯ ಮನೆಯವರನ್ನು ಗುರುತಿಸುವುದೂ ಸಹ ಅದೇ ಅಡ್ಡಹೆಸರಿನಿಂದಲೇ, ಈ ಅಡ್ಡ ಹೆಸರಿನ ಪರಿಣಾಮ ಎಷ್ಡು ಪ್ರಭಾವಯುತವಾಗಿರುತ್ತದೆಂದರೆ ಅವರ ಅಸಲಿ ಹೆಸರೇ ಮರೆತು ಹೋಗುವಷ್ಟು, ನಮ್ಮ ಸಂಬಂದಿಕರಲ್ಲೇ ಒಬ್ಬರಿದ್ದರು ಅವರು ಸದಾ ಎಲೆ ಅಡಕೆ ಜಗಿಯುತ್ತಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳು ಕತೆಗಳು: ಸಿಂಧು ಭಾರ್ಗವ್

ಅದೃಷ್ಟದ ಪಾರಿವಾಳ ಮಹದೇವಪುರ ಎಂಬ ಒಂದು ಸುಂದರವಾದ ಹಳ್ಳಿ. ದಟ್ಟ ಅರಣ್ಯದಿಂದ ಕೂಡಿದ ಹಳ್ಳಿಯದು. ಎಲ್ಲರೂ ಕೃಷಿಕರು, ರೈತರಾಗಿದ್ದರು. ಸುಂದರ ಮತ್ತು ರಮೇಶ ಇಬ್ಬರು ಅಣ್ಣತಮ್ಮಂದಿರು. ಅಣ್ಣ ಶ್ರಮಜೀವಿ. ಹೊಲದಲ್ಲಿ ಪ್ರತಿದಿನ ಕೆಲಸ‌ ಮಾಡುತ್ತಿದ್ದನು. ಅವನಿಗೆ ಹೆಂಡತಿ ಮಾಲಾ ಕೂಡ ಸಹಾಯ ಮಾಡುತ್ತಿದ್ದಳು. ದವಸಧಾನ್ಯಗಳನ್ನು ಮಾರಿ ಬಂದ ಹಣದಿಂದ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಅವನಿಗೆ ಹಣಕಾಸಿಗೆ ಏನೂ ಸಮಸ್ಯೆ ಇರಲಿಲ್ಲ. ಊರಿಗೆ ಶ್ರೀಮಂತ ರೈತನಾಗಿದ್ದ. ಆದರೆ ತಮ್ಮ ರಮೇಶ ಆಲಸ್ಯದ ಮನುಷ್ಯ ‌. ಅಣ್ಣನ ದುಡಿಮೆಯಲ್ಲಿಯೇ ಬದುಕುತ್ತಿದ್ದ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

Sean O’ Casey ನ “Juno and Paycock”-ಯುದ್ಧ ಜಗತ್ತಿನಲ್ಲಿ ಸಾಮಾಜಿಕ ಏರಿಳಿತ: ನಾಗರೇಖಾ ಗಾಂವಕರ

ಅದು Dublinನ ಎರಡು ಕೋಣೆಗಳ ಬಾಡಿಗೆ ಮನೆ. ಜೂನೋ ಆ ಮನೆಯ ಒಡತಿ. ಮಕ್ಕಳಾದ Jonny Boyle ಮತ್ತು Mary Boyle ಅಲ್ಲಿದ್ದಾರೆ. Jonny ಬೆಂಕಿ ಕಾಯಿಸಿಕೊಳ್ಳುತ್ತಿದ್ಧಾನೆ. ಮೇರಿ ದಿನಪತ್ರಿಕೆಯಲ್ಲಿಯ ಆ ದಿನ ವಿಶೇಷ ಸುದ್ದಿ ಓದುತ್ತಿದ್ದಾಳೆ. ಅವರ ನೆರೆಮನೆಯ ಹುಡುಗನೊಬ್ಬ ದುರಂತವಾಗಿ ಹತ್ಯೆಗೀಡಾಗಿದ್ದಾನೆ. ಅದೂ ಐರಿಶ್ ಸೈನಿಕರ ಕೈಯಲ್ಲಿ. ಈ ವಿಚಾರ ತಿಳಿಯುತ್ತಲೇ ಜಾನಿ ಬೆವರಿ ಹೋಗುತ್ತಾನೆ ಅಷ್ಟೊತ್ತಿಗೆ ಅಲ್ಲಿಗೆ ಬರುವ ತಾಯಿ ಜುನೋ ತಂದೆ Jonny Boyle ಕುರಿತು ವಿಚಾರಿಸುತ್ತಾಳೆ. Jonny ತಂದೆಯ ವರ್ತನೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಳೆದು ಹೋಗುವ ಸುಖ (ಕೊನೆಯ ಭಾಗ): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಭಯವೇ ಭಕ್ತಿಯ ಮೂಲ; ಆದರೆ ಅದು ವ್ಯಕ್ತಿಯನ್ನು ಸಂಸ್ಕರಿಸಿ, ತನ್ನ ಜೀವಿತವನ್ನು ಸಾರ್ಥಕವಾಗಿಸಿಕೊಳ್ಳಲು ಪ್ರೇರಿಸಬೇಕು. ಪರಮಾತ್ಮನನ್ನು ಯಾವಾಗಲೂ ಶಿಕ್ಷಿಸುವ ದಂಡಾಧಿಕಾರಿಯೆಂದೇ ನೋಡಬಾರದು; ತನ್ನನ್ನು ಹೆತ್ತು, ಸಾಕಿದ ಪ್ರೇಮಮಯೀ ತಾಯಿಯಂತೆ, ಆತ್ಮೀಯವಾಗಿ ಕಂಡು, ತಪ್ಪುಗಳನ್ನು ತಿದ್ದುವ ಸ್ನೇಹಿತನಂತೆ ಕಾಣಬೇಕು. ಇವೆಲ್ಲವನ್ನೂ ಮಹಾಭಾರತದಲ್ಲಿ ಸರಳವಾಗಿ, ‘ಪರೋಪಕಾರಃ ಪುಣ್ಯಾಯ; ಪಾಪಾಯ ಪರಪೀಡನಂ’ ಎಂದು ತಿಳಿಸಲಾಗಿದೆ. ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತೂ ಇದೆ. ದೀನದುರ್ಬಲರ ಮತ್ತು ದರಿದ್ರರ ಸೇವೆಯಲ್ಲಿ ಪರಮಾತ್ಮನನ್ನು ಕಾಣು ಎಂದ ಸ್ವಾಮಿ ವಿವೇಕಾನಂದರ ಈ ಎಲ್ಲ ಮಾತುಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 53 & 54): ಎಂ. ಜವರಾಜ್

-೫೩-ಮದ್ಯಾನ ಕಳಿತಾ ಕಳಿತಾ ಬಿಸ್ಲು ಇಳಿತಿತ್ತು ತಾಲ್ಲೊಕ್ಕಚೇರಿ ಕಾಂಪೋಡೊತ್ಲಿಚೆಲ್ಲಿಚಪ್ರ ಮರ್ದಲ್ಲಿಹೂವು ಕೆಂಪ್ ಕೆಂಪ್ಗ ತ್ವನ್ಯಾಡ್ತಿತ್ತುಮರುದ್ ಸುತ್ತ ನೆಳ್ಳು ಚೆಲ್ಕಂಡಿತ್ತು.ಮದ್ವ ಮನಲಿ ಚಪ್ರ ಹಾಕ್ಬುಟ್ಟುಚೆಲ್ಲಿಚಪ್ರ ಹೂವ್ನ ಕಟ್ಬುಟ್ಟುನಾಕ್ಮೂಲ್ಗು ಬಾಳಕಂಬ ಕಟ್ಬುಟ್ರಐಕ ಕುಣಿತ ಇರದ ನೋಡಕೆ ಚೆಂದ. ಈ ಅಯ್ನೋರುಆ ಆಳುಇಬ್ರೂ ಬಂದುಒಂದ್ ಒಂದೂವರ ಗಂಟ್ಯಾಗಿತ್ತುಚೆಲ್ಲಿಚಪ್ರ ಮರುದ್ ನೆಳ್ಳಿಇಬ್ರೂ ಕುಂತಿದ್ರು ಆಗ ಸುತ್ಮುತ್ನಹುಣ್ಸೂರು ಕಿರುಗ್ಸೂರು ಆಲ್ಗೂಡ್ನಊರ್ ಮುಂದಾಳ್ಗಳು ಬಂದ್ರುಪೋಲಿಸ್ ವ್ಯಾನ್ಗಳು ಜೀಪ್ಗಳುಎಲಕ್ಷನ್ನು ಅನ್ತ ಊರೂರ್ ಕಡಬರ್ಗುಟ್ಕಂಡು ಹೋಗವು ಹೋಯ್ತಿದ್ದು ಈ ಅಯ್ನೋರು ಎಲ್ರುನು ಬನ್ನಿ ಬನ್ನಿ ಅನ್ತನಗ್ತ ಕರುದು ಕುಂಡ್ರುಂಸ್ಕಂಡುಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ನಿನ್ನೆ ನಾಳೆಯ ನಡುವೆ” ಪಾಂಡುರಂಗ ಯಲಿಗಾರ: ವೈ. ಬಿ. ಕಡಕೋಳ

2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಮುನವಳ್ಳಿಯ ನಾಟಕವೊಂದು ಮೈಸೂರು ದಸರಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಬಗ್ಗೆ ಮಾಹಿತಿ ಬೇಕಾಗಿತ್ತು. ಗೆಳೆಯ ಜಯದೇವ ಅಷ್ಠಗಿಮಠ ಈ ವಿಚಾರ ಪಾಂಡುರಂಗ ಯಲಿಗಾರ ಅವರನ್ನು ಕೇಳಬೇಕು. ಅವರು ಬೆಳಗಾವಿಯಲ್ಲಿ ಇರುವರು. ರವಿವಾರ ಮುನವಳ್ಳಿಗೆ ಬರುತ್ತಾರೆ ನೀನು ಅವರನ್ನು ಭೇಟಿಯಾಗಬೇಕು. ನಾನು ಹೇಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಲಾಗದ ಮದುವೆ (ಭಾಗ 15): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ಹೇಗಾದರೂ ಮದುವೆ ಪೂರೈಸಬೇಕೆಂದು ಗಟ್ಟಿಮನಸ್ಸಿನಿಂದ ಭಾವನೆಗಳನ್ನು ನಿಗ್ರಹಿಸಿಕೊಂಡಿದ್ದ ಅಯ್ಯರ್ ಕುಟುಂಬವರ್ಗದವರಿಗೆ ಮದುವೆ ಮುಗಿದೊಡನೆ ಮನೆಯೊಡಯನ ಅನುಪಸ್ಥಿತಿಯಲ್ಲಿ ಮದುವೆ ನಡೆಸಿದ ಬಗ್ಗೆ ಪಾಪ ಪ್ರಜ್ಞೆ ಕಾಡತೊಡಗಿತು. ಆವರೆಗೂ ಮಡುಗಟ್ಟಿದ್ದ ಸಂಕಟದ ಕಟ್ಟೆಯೊಡೆದು ಒಂದಿಬ್ಬರು ಮೆಲ್ಲನೆ ಬಿಕ್ಕತೊಡಗಿದರು. ಮದುವೆ ನಡೆದ ಗ್ರೌಂಡ್ ಫ್ಲೋರಿನ ಹಾಲಿನಲ್ಲಿ ಮದುವೆಗೆ ಬಂದಿದ್ದ ಅನೇಕ ಅತಿಥಿಗಳು ಇನ್ನೂ ಕುಳಿತಿದ್ದನ್ನು ಗಮನಿಸಿದ ಮರಳಿಯವರಿಗೆ ಅವರೆದುರು ಮುಜುಗರ ಉಂಟಾಗುವುದು ಬೇಡವಿತ್ತು. ಮದುವೆ ಮಂಟಪದೆದುರು ಹಾಗೆ ಹೆಂಗಸರು ಕುಳಿತು ಅಳುವುದು ವಿವಾಹಿತ ವಧೂವರರಿಗೆ ಶ್ರೇಯಸ್ಸಲ್ಲವೆಂದು ಹೇಳಿ ಎಲ್ಲರನ್ನೂ ಮೂರನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೀಪಾವಳಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಸಹೃದಯಿಗಳೇ, ಈ ವರ್ಷದ ದೀಪಾವಳಿ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ನವೆಂಬರ್ 13 ರ ಸಂಜೆಯೊಳಗೆ ತಲುಪಲಿ… ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ… ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿಪಂಜು ಬಳಗhttps://panjumagazine.com/ ನಮ್ಮ ಇ ಮೇಲ್‌ ವಿಳಾಸ: editor.panju@gmail.com, smnattu@gmail.com ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ. ಕನ್ನಡದ ಬರಹಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎ.ಟಿ.ಎಂ. ನಲ್ಲೊಂದು ದಿನ……: ಪಿ.ಎಸ್. ಅಮರದೀಪ್

“ಥೋ…….. ನಮ್ದೇನ್ ಕರ್ಮನಪ್ಪ… ಎಸೆಲ್ಸಿ ಕಂಡೋರ್ ಕೈಲಿ ಪರೀಕ್ಷೆ ಬರೆಸಿ ಪಾಸಾಗಿ ಅವರಪ್ಪನ ನೌಕ್ರೀನ ಅಯ್ಯೋ ಪಾಪ ಅಂತ ಅನುಕಂಪದ ಆಧಾರದ ಮೇಲೆ ತಗಂಡಿದ್ದೇ ಬಂತು… ಒಂದ್ ಸೆಂಟೆನ್ಸ್ ಇಂಗ್ಲೀಷು, ಒಂದ್ ಸೆಂಟೆನ್ಸ್ ಕನ್ನಡಾನ ಒಂದು ಸ್ಪೆಲಿಂಗ್ ಮಿಸ್ಟೇಕ್ ಇಲ್ದೇ ಒಂದಕ್ಷರ ತಪ್ಪಿಲ್ದೇ ಬರೆಯೋಕ್ ಯೋಗ್ತೆ ಇಲ್ದಂತವರಿಗೆ ಎಲ್ಡೆಲ್ಡ್ ಪ್ರಮೋಷನ್ನೂ, ದೊಡ್ಡ ಹುದ್ದೆ ಬೇರೆ ಕೇಡು.. ಅಂತ ಹೆಬ್ಬೆಟ್ಟು “ಎಲ್ಲಪ್ಪ”ನಿಗೆ ನಾವು ಕೊಳ್ಳಿಗೊಂದ್ ಹಾರ ಹಾಕಬೇಕು… ಸ್ವೀಟು, ಖಾರ ತಂದು ಪುಗಸಟ್ಟೆ ಬಹುಪರಾಕ್ ಹೇಳಿ, ಚಪ್ಪಾಳೆ ತಟ್ಟಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಲಾಗದ ಮದುವೆ (ಭಾಗ 14): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ತಿಂಡಿ ಮುಗಿಸಿ ಸುಬ್ಬು, ಮುರಳಿ, ಸೀತಮ್ಮನವರು, ಮೋಹನ ಮತ್ತು ಕೃಷ್ಣಯ್ಯರ್ ಸ್ವಾಮಿ ಸರ್ವೋತ್ತಮಾನಂದರ ಆಶ್ರಮಕ್ಕೆ ಕಾರಿನಲ್ಲಿ ಹೊರಟರು. ಸುಮಾರು ಹದಿನೈದು ಮೈಲು ದೂರದ ಆಶ್ರಮವನ್ನು ತಲುಪಲು ಅರ್ಧ ಘಂಟೆಯಾಗಬಹುದೆಂದು ಡ್ರೈವ್ ಮಾಡುತ್ತಿದ್ದ ಮೋಹನ ಹೇಳಿದ. ಸ್ವಾಮೀಜಿಯೊಂದಿಗೆ ಸಮಾಲೋಚಿಸಿ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುರಳಿಯವರ ನಿರ್ಧಾರ ಸುಬ್ಬುವಿಗೆ ಸಮಾಧಾನ ತಂದಿರಲಿಲ್ಲ. ಆದರೆ ಸಾಧುಸಂತರ ಬಗ್ಗೆ ತನ್ನ ತಾಯಿಗಿದ್ದ ಅಪಾರ ಶ್ರದ್ಧಾಭಕ್ತಿಯ ಅರಿವಿದ್ದುದರಿಂದ ಈ ವಿಚಾರದಲ್ಲಿ ತನಗೆ ಅಮ್ಮನ ಬೆಂಬಲ ಸಿಕ್ಕುವ ನಂಬಿಕೆಯಿರಲಿಲ್ಲ. ಇನ್ನು ಮುರಳಿ ಚಿಕ್ಕಪ್ಪನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನೊಳಗಿನವಳು ಅವಳು: ಮಸಿಯಣ್ಣ ಆರನಕಟ್ಟೆ.

ಕೂಡ್ಲಹಳ್ಳಿಯಲ್ಲಿ ಸಂಗಮೇಶ್ವರನ ಜಾತ್ರೆ ಸಾಗಿತ್ತು. ಕರೋನ ಅಬ್ಬರದಿಂದ ಜನ ಸೇರಿರಲಿಲ್ಲ. ಜಾತ್ರೆ ಎಂದರೆ ತಪ್ಪಾಗಬಹುದೇನೋ! ಒಂದು ದೇವಸಂತೆ ಎಂದರೆ ಸಮಂಜಸ ಅನ್ನಬಹುದು.ಆದ್ರೂ ಸಹ ಪೂಜೆ ಪುನಸ್ಕಾರಗಳೆಲ್ಲಾ ವಿಧಿವಿಧಾನದಂತೆ ಯತವತ್ತಾಗಿ ನಡೆಯುತ್ತಿದ್ದವು.ನಾನು ಹೋಗಿದ್ದೆ.ಸಾಮಾಜಿಕ ಅಂತರ ಕಾಯ್ದುಕೊಂಡೆ ಅಂದುಕೊಳ್ತಿನಿ ಕಾರಣ ನನಗೆ ಕರೋನ ಸಂಬಂಧ ಯಾವುದೇ ಪಾಸಿಟೀವ್ ತಂಟೆ ತಕರಾರೆದ್ದಿಲ್ಲ. ದರ್ಶನ ಆಯ್ತು, ಅವ್ವ ರೊಟ್ಟಿ ಕಟ್ಟಿ ಕೊಟ್ಟಿದ್ಲು . ಕಜ್ಜಾಯ ಸಹ ಮಾಡಿ ಕೊಟ್ಟಿದ್ಲು. ದೇವಸ್ಥಾನ ಬಿಟ್ಟು ಹತ್ತತ್ರ ೧ ಮೈಲಿ ನಡೆದರೆ ಅಜ್ಜಯ್ಯನ ಆಲದಮರದ ತೋಪು ಸಿಗುತ್ತೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಊದ್ಗಳಿ ಕವನ ಸಂಕಲ: ನಂದಾದೀಪ, ಮಂಡ್ಯ

ಉದ್ಗಳಿ ಕವನ ಸಂಕಲನ ಪುಸ್ತಕದ ಹೆಸರೇ ವಿಭಿನ್ನ ಎನಿಸಿತು.. ಆ ಹೆಸರೇ ಕೇಳಿಲ್ಲ ಹಾಗಂದರೆ ಅರ್ಥ ಏನು ಎನ್ನುವ ಕುತೂಹಲದಲ್ಲೆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಮೊದಲು ಪುಸ್ತಕದ ಮುಖಪುಟದಲ್ಲಿದ್ದ ಅಗ್ಗಿಷ್ಟಿಕೆ, ಕೊಳವೆ ನೋಡಿ ಇದಕ್ಕೂ ಹೆಸರಿಗೂ ಏನು ಸಂಬಂಧ ಎಂದು ಮುನ್ನುಡಿ ಓದಿದಾಗಲೇ ತಿಳಿದಿದ್ದು ‘ಊದ್ಗಳಿ’ ಎಂದರೆ ಒಲೆಯ ಊದುವ ಪುಟ್ಟದಾದ ಒಂದು ಕೊಳವೆ ಎಂದು..(ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಹಾಗಾಗಿ ಹೊಸ ಪದ ಎನಿಸಿದ್ದು) ನಿಜಕ್ಕೂ ಒಬ್ಬ ಹೆಣ್ಣು ಮಗಳು ಪುಟ್ಟ ಗ್ರಾಮದಲ್ಲಿ ಹುಟ್ಟಿ ಶಿಕ್ಷಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 51 & 52): ಎಂ. ಜವರಾಜ್

-೫೧-ಕಣ್ಬುಟ್ಟಾಗ ತ್ವಾಟುದ್ತುಂಬಜನ ಜಗನ್ಜಾತ್ರ್ಯಾಗಿ ಕಾಣ್ತುಬರೋರು ಬತ್ತನೇ ಅವ್ರಇಡಿ ಊರೇ ಇತ್ತುಈ ಊರೇನುಅಕ್ಕಪಕ್ದ ಊರೋರ್ ಜನಾನು ಕಂಡ್ರು ಆ ಆಳುಆ ಜನ್ಗಳ ಸಂದಿಲಿಅತ್ತಗು ಇತ್ತಗು ಓಡಾಡ್ತ ಇದ್ನ‘ಮಗ ಮಾಡ್ದ ತಪ್ಗ ಅಪ್ಪುನ್ಗ ಶಿಕ್ಷ..’‘ಅಯ್ನೋರೇನ ಅನ್ತ ಈಗ್ಲಾರುಗೊತ್ತಿರ್ಬೇಕು ಪೋಲೀಸ್ರುಗ’‘ಆದ್ರ ಊರಾಳ್ದಂವ್ರು ಅವ್ಮಾನ ಅಲ್ವ’‘ಎಲ್ಯ ನಾ ವಸಿ ನೋಡ್ತಿನಿ ಅಯ್ನೋರಾರಾತ್ರ್ಯಲ್ಲ ಟೇಸನಲ್ಲೆ ಇರುಸ್ಕಂಡಿದ್ರಂತಅಂವ ಶಂಕ್ರ ಇನ್ನು ಸಿಕ್ಕಿಲ್ವಂತನೋಡಕ ಮಂಗ್ಯಾಗಿದ್ನನೋಡು ಎನ್ತ ಕೆಲ್ಸ ಮಾಡನಹೋಗಿ ಹೋಗಿ ಕುಲ್ಗೆಟ್ಟವ್ಳ ಮದ್ವ ಆದ್ನಆಗ್ಲು ಅಯ್ನೋರು ಸಯಿಸ್ಕಂಡ್ರುಕೇರಿನೇ ತಲ ತಗ್ಸ ತರ ಮಾಡುದ್ನಆಗ ಅಯ್ನೋರುಹೆಂಗ್ ನ್ಯಡ್ಕಂಡ್ರು ಅನ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ