ಮಗು, ನೀ ನಗು (ಭಾಗ 5): ಸೂರಿ ಹಾರ್ದಳ್ಳಿ

ಗಾದೆಯೇ ಇದೆಯಲ್ಲ, ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಅದೇನೋ ಚಿಂತೆ, ಮೊಮ್ಮಗಳಿಗೆ ಕಜ್ಜಾಯ ಚಿಂತೆ, ಎಂದು! ಮೊದಲನೆಯದಂತೂ ಸತ್ಯಸ್ಯ ಸತ್ಯ ಎಂಬುದು ನನಗೆ ಈಗ ಅರಿವಾಗಿದೆ. ಈ ಮಗುವಿನ ಸೇವೆಗೆ ಎಷ್ಟೊಂದು ಬಟ್ಟೆ ಬೇಕಲ್ಲ, ಕಾಲಿಗೆ ಸಾಕ್ಸ್ಗಳು, ಕೈಗೆ ಗವಸುಗಳು, ತಲೆಗೆ ಟೊಪಿ, ಅಂಗಿ, ಸ್ವೆಟರ್, ಡಯಪರ್‌ಗಳು, ಹೀಗೆ ವಿವಿಧ ಗಾತ್ರದವುಗಳು. ದಿನಕ್ಕೆ ಆರೇಳು ಬಾರಿ ಅವನ್ನು ಬದಲಿಸಬೇಕು. ಹೀಗಾಗಿ ಡಜನ್ ಡಜನ್ ಬಟ್ಟೆಗಳು. ಉಚ್ಚೆ ಮಾಡಿದಾಗಲೆಲ್ಲಾ ಅವನ್ನು ತೊಳೆದು ಒಣಗಿಸಬೇಕು. ಹಳೆಯ ಪಂಚೆಗಳನ್ನೆಲ್ಲಾ ಕತ್ತರಿಸಿ ಇಟ್ಟುಕೊಂಡಿದ್ದೇನೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ”: ರೋಹಿತ್ ವಿಜಯ್ ಜಿರೋಬೆ

ಮಾನವ ಜೀವನ, ಪ್ರಾಣಿ ಜೀವನ ಹಾಗೂ ಭೂಮಿಯ ಪರಿಸರ ವ್ಯವಸ್ಥೆಯ ಮೂಲವೇ ಸಸ್ಯಗಳು. ಸಸ್ಯವಿಲ್ಲದೆ ಜೀವವೇ ಅಸಾಧ್ಯ ಎಂಬ ಮಾತು ಅತಿಶಯೋಕ್ತಿಯಲ್ಲ. ಏಕೆಂದರೆ ಸಸ್ಯಗಳು ಆಹಾರ, ಆಮ್ಲಜನಕ, ಔಷಧಿ, ವಸ್ತ್ರ, ವಾಸಸ್ಥಾನ ಮತ್ತು ನೂರಾರು ನೈಸರ್ಗಿಕ ಸಂಪತ್ತುಗಳನ್ನು ಒದಗಿಸುತ್ತವೆ. ಈ ಸಸ್ಯಗಳ ಜೀವನ, ರಚನೆ, ವಿಕಾಸ, ಕ್ರಿಯಾಶೀಲತೆ ಹಾಗೂ ಅವುಗಳ ಪರಿಸರ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಸಸ್ಯಶಾಸ್ತ್ರ ಅಥವಾ ಬೋಟನಿ (Botany) ಎಂದು ಕರೆಯಲಾಗುತ್ತದೆ. “ಬೋಟನಿ” ಎಂಬ ಪದವು ಗ್ರೀಕ್ ಭಾಷೆಯ Botane ಎಂಬ ಪದದಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಿಗ್ ಆರ್ಥಿಕತೆ ಹಾಗೂ ನಿರುದ್ಯೋಗ ನಿವಾರಣೆಗೆ ನವ ದಾರಿ: ನಿಂಗಪ್ಪ ಹುತಗಣ್ಣವರ

ಇಂದಿನ ಜಗತ್ತಿನಲ್ಲಿ ಉದ್ಯೋಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ. ಹಿಂದಿನ ದಿನಗಳಲ್ಲಿ ಜನರು ಒಂದು ಸಂಸ್ಥೆಯಲ್ಲಿ ದೀರ್ಘಕಾಲ ಸ್ಥಿರ ಉದ್ಯೋಗ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ತಂತ್ರಜ್ಞಾನ ಕ್ರಾಂತಿ, ಡಿಜಿಟಲ್ ಪ್ಲಾಟ್ಫಾರ್ಮ್ಗಳ ವಿಸ್ತರಣೆ ಮತ್ತು ಆನ್ಲೈನ್ ಜಗತ್ತಿನ ಪ್ರಭಾವದಿಂದ ಉದ್ಯೋಗದ ಮಾದರಿ ಸಂಪೂರ್ಣವಾಗಿ ಬದಲಾಗಿದೆ. ಈ ಹೊಸ ಉದ್ಯೋಗ ಮಾದರಿಯನ್ನು ಗಿಗ್ ಆರ್ಥಿಕತೆ ಎಂದು ಕರೆಯಲಾಗುತ್ತದೆ. “Gig” ಎಂಬ ಪದವು ಸಂಗೀತ ಕ್ಷೇತ್ರದಲ್ಲಿ ತಾತ್ಕಾಲಿಕ ಪ್ರದರ್ಶನವನ್ನು ಸೂಚಿಸಲು ಬಳಸಲಾಗುತ್ತಿತ್ತು. ಈಗ ಅದನ್ನು ತಾತ್ಕಾಲಿಕ, ಪ್ರಾಜೆಕ್ಟ್ ಆಧಾರಿತ ಅಥವಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಭಾವರಿ (ಭಾಗ 4): ವರದೇಂದ್ರ ಕೆ ಮಸ್ಕಿ

ಅನುಪಮಾಳ ಅನುರಾಗದಲೆಯಲ್ಲಿ ತೇಜಸ್ ಅನುಪಮಾ ಮಾಧವನ ಒಬ್ಬಳೇ ಮುದ್ದಿನ ತಂಗಿ. ವರ್ಣನಾತೀತ ರೂಪ, ಬೆಳ್ಳನೆಯ ಚರ್ಮ ಇಲ್ಲದೆ ತುಸು ಕಪ್ಪಾದ ಮೈ ಬಣ್ಣ ಹೊಂದಿದ ಕೃಷ್ಣ ಸುಂದರಿ. ಆ ಕಣ್ಣುಗಳನ್ನು ನೋಡುತ್ತಿದ್ದರೆ ನವಿಲೇ ನಾಚಬೇಕು, ತುಂಬಿಕೊ ಂಡ ಗಲ್ಲಗಳನ್ನು ಸ್ಪರ್ಶಿಸಿದರೆ ಕೈಯಲ್ಲಿ ಹೂ ಹಿಡಿದ ಅನುಭವ. ಸುಂದರ ರೂಪಲಾವಣ್ಯದ ಜೊತೆಗೆ ಗುಣವಂತೆ, ಸಂಸ್ಕಾರವ ಂತೆ, ಸಹೃದಯ ಮನಸಿನ ಭಾವನಾತ್ಮಕ ಜೀವಿ, ಒಬ್ಬಳನ್ನು ಪ್ರೇಮಿಸಿ ಅವಳಿಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅವಳಿಂದ ಮೋಸಹೋಗಿ ಕುಗ್ಗಿಹೋದವನನ್ನು ಮದುವೆ ಆಗಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು, ನೀ ನಗು (ಭಾಗ 4): ಸೂರಿ ಹಾರ್ದಳ್ಳಿ

ಬಂದವರಾರಾದರೂ ಮುಖಕ್ಕೆ ಸೆಂಟೋ, ಪೌಡರೋ ಹಾಕಿದರೆ ಮಗು ಅವರ ಕೈಯಲ್ಲಿ ಇದ್ದರೂ ಇತ್ತ ಮುಖ ತಿರುಗಿಸುತ್ತದೆ. ಅದರೆದುರು ನಾವು ಪರಿಮಳದ ವೆಜೆಟೇಬಲ್ ಪಲಾವೋ, ಬಿರ್ಯಾನಿಯೋ ತಿನ್ನುವಾಗ ಅದು ನಮ್ಮತ್ತ ನೋಡಿದರೆ ನಾವು ಅದಕ್ಕೆ ಕೊಡದೇ ಮೋಸ ಮಾಡುತ್ತಿದ್ದೇವೆ, ಎಂದು ದುಃಖವಾಗುತ್ತದೆ. ‘ನೀನು ದೊಡ್ಡವಳಾಗು ಪುಟ್ಟಿ, ನಂತರ ನಿನಗೆ ಪಲಾವ್, ಪಿಜ್ಜಾ, ಪಾಸ್ತಾ, ಏನು ಬೇಕೋ ಕೊಡಿಸುತ್ತೇವೆ,’ ಎಂದು ಮಾತು ಕೊಡುತ್ತೇನೆ. ನನ್ನ ಗಂಡ ಮಾತ್ರ ಮಗುವಿಗೆ ಈ ಗೊಬ್ಬರಗಳನ್ನೆಲ್ಲಾ ಕೊಡಬೇಡ, ಅವು ಜಂಕ್ ಫುಡ್‌ಗಳು. ಅವೆಲ್ಲಾ ಮೈದಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 5): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಗೆ ಜ್ಯೋತಿಯ ಗೆಳೆತನ, ಜ್ಯೋತಿಯ ಮೂಲಕ ಲಲಿತಳ ಗೆಳೆತನ ಸಿಕ್ಕು ಬದುಕು ಒಂದು ರೀತಿ ನೆಮ್ಮದಿ ಕಾಣತೊಡಗಿತ್ತು. ಆಗಾಗ್ಗೇ ಮೂರು ಜನರು ಕೂಡಿ ಮಾತು ಹರಟೆ ಹೊಡೆಯುತ್ತಿದ್ದರು. ಜ್ಯೋತಿಗೆ ಅಜ್ಜಿ ಇದ್ದಾಳೆ. ಅನುಶ್ರೀಗೆ ತಂದೆ ಇದ್ದಾನೆ. ಲಲಿತಳಿಗೆ ಇದ್ದಾರೆ ಎಂದರೆ ಉಂಟು ಇಲ್ಲ ಅಂದರೆ ಯಾರೂ ಇಲ್ಲ. ಕದಂಪುರದ ಕರುಣೆಯ ಮನೆಯೊಂದರಲ್ಲಿ ಬೆಳೆದು, ತನ್ನ ಹದಿನಾರನೆ ವಯಸ್ಸಿನಲ್ಲೇ ಆಶ್ರಯ ಹುಡುಕಿಕೊಂಡು ಬೆಂಗಳೂರಿಗೆ ಬಂದು ನಿಂತವಳು. ಕೈತುಂಬ ಸಂಪಾದಿಸುವ ಹೊತ್ತಿಗಷ್ಟೇ ಮಲತಾಯಿಗೆ ಬೇಕಾದ ಮಗಳು. ಕೆಲಸ ಸಿಕ್ಕ ಮೇಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆರಿದ ದೀಪ: ಎಲ್.ಚಿನ್ನಪ್ಪ, ಬೆಂಗಳೂರು

“ಸ್ಮಿತಾ ಹಸ್ಬೆಂಡ್ ಯಾರು ಎನ್ನುತ್ತ, ಡಾಕ್ಟರ್ ಐಸಿಯು ವಾರ್ಡ್ನಿಂದ ಹೊರಕ್ಕೆ ಬಂರರು. “ನಾನೇ ಡಾಕ್ಟರ್” ಎನ್ನುತ್ತ ಮೋಹನ್, ಸೀನಿಯರ್ ಡಾಕ್ಟರ್ ಸೀತಾರಾಂರವರ ಕಂಚಿನ ಕಂಟದ ಕರೆಗೆ ಅವರ ಹತ್ತಿರಕ್ಕೆ ಹೋದ. ಎದುರಿಗೆ ಬಂದು ನಿಂತ ಮೋಹನ್ನ ಮುಖ ನೋಡಿದ ಡಾಕ್ಟರ್, “ನೋಡಿ ಮಿಸ್ಟರ್ ಮೋಹನ್, ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಿಮ್ಮ ಪತ್ನಿಗೆ ಕೊಡಬೇಕಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ, ಮುಂದಿನದು ದೈವೇಚ್ಚೆ. ನಿಮ್ಮ ಪತ್ನಿ ಈಗ ಆಕ್ಸಿಜನ್ನಿಂದ ಉಸಿರಾಡುತ್ತಿದ್ದಾರೆ. ಆಕೆಯ ನಾಡಿ ಮಿಡಿತ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತಿದೆ. ಇನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಎದೆ ತುಂಬಿ ಹಾಡಿದ ಕವಿ ಜಿ. ಎಸ್ ಶಿವರುದ್ರಪ್ಪ’: ಡಾ. ಸುಶ್ಮಿತಾ. ವೈ.

ನವೋದಯ ಕವಿ ದಿಗ್ಗಜರುಗಳ ಸಾಲಿನಲ್ಲಿ ‘ಬೆಳಕಿನ ಮನೆಯ ಕವಿ’ ಜಿ.ಎಸ್.ಎಸ್ ಅವರದ್ದೂ ಮಹತ್ವದ ಹೆಸರು. ಇವರು ತಮ್ಮ ಹೈಸ್ಕೂಲಿನ ದಿನಗಳಿಂದಲೇ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆಯುತಿದ್ದರು. ಆನಂತರದಲ್ಲಿ ಗಳಗನಾಥ, ವೆಂಕಟಾಚಾರ್ಯ, ಕುವೆಂಪು, ಅನಕೃ, ಶಿವರಾಮ ಕಾರಂತರ ಬರಹಗಳು ಸಾಹಿತ್ಯದ ಬಗೆಗೆ ಅವರಲ್ಲಿ ಪ್ರೀತಿ, ಆಸಕ್ತಿಯನ್ನು ಹುಟ್ಟಿಸಲು ಕಾರಣವಾದವು. ಅವರು ಕಾಲೇಜಿನ ದಿನಗಳಲ್ಲಿ ಅನುವಾದಿಸಿದ ‘ಥಾಮಸ್ ಗ್ರೇ’ ಕವಿಯ ಕವಿತೆಗೆ ಅಧ್ಯಾಪಕರಾಗಿದ್ದ ಜಿ.ಪಿ ರಾಜರತ್ನಂ ಅವರಿಂದ ಪ್ರಶಂಸೆಯೂ ದೊರಕಿತ್ತು. ಅದು ಪ್ರಕಟವಾಗಿ ಕಾವ್ಯ ರಚನೆಗೆ ಹೊಸ ಹುಮ್ಮಸ್ಸು ದೊರೆಯಿತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಳೆಯ ಜೋಕಾಲಿಯಲಿ ಜೋಗದಲಿ…..: ಬಿ.ಕೆ.ಮೀನಾಕ್ಷಿ, ಮೈಸೂರು.

ಜೋಗ್ನಲ್ಲಿ ಫಾಗ್ ನೋಡಬೇಕೆಂದು ಆಸೆಯಾಗಿ, ಆ ಆಸೆಯನ್ನು ದಮನಿಸಲಾಗದೆ ಮೈಸೂರಿನಿಂದ ಹೊರಟೇ ಬಿಟ್ಟೆವು. ತಾಳಗುಪ್ಪ ರೈಲು ಹತ್ತಿ ಹೊರಟಿದ್ದು. ರಾತ್ರಿ ಹೊತ್ತು, ಸ್ಲೀಪರ್ ಕೋಚು. ಬೇಜಾರು. ಹೊರಗಡೇದೇನೂ ನೋಡೋದಕ್ಕಾಗಲ್ಲ, ಕಣ್ತುಂಬಿಕೊಳ್ಳೋಕಾಗಲ್ಲ! ಅಲ್ಲಾರೀ ನನಗೇನನಿಸುತ್ತದೆ ಅಂದ್ರೆ ಈ ಜನ, ಕಿಟಕಿಯಿಂದ ಆಚೆ ನೋಡುತ್ತಾ ಕೂರದೆ ಅದು ಹೇಗಾದರೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಾರೆ ಅಂತ?! ನಿಮಗೂ ಈ ತರ ಯೋಚನೆ ಬರುತ್ತದೆ ತಾನೇ? ಹ್ಞಾಂ! ಸರಿಯಾಗಿ ಯೋಚಿಸಿದ್ದೀರಿ. ಸುತ್ತ ಇರೋರೆಲ್ಲ ಗೊರಕೆ ಆಸಾಮಿಗಳೇ. ನಾನಿನ್ನೇನು ಮಾಡಲಿ? ನಾನೂ ಹಾಗೇ ಮುದುಡಿಕೊಂಡೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೂಕುನುಗ್ಗಲು – ಕಾಲ್ತುಳಿತ: ಚಂದಕಚರ್ಲ ರಮೇಶ ಬಾಬು

ಜೂನ್ ೩ ತಾರೀಕಿನ ರಾತ್ರಿ ೧೧ ಗಂಟೆ. ಬೆಂಗಳೂರಿನ ಕ್ರಿಕೆಟ್ ತಂಡವೆನಿಸಿದ ರಾಯಲ್ ಛಾಲೆಂಜರ್ಸ್ ಮತ್ತು ದೆಹಲಿಯ ಡಿಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಫೈನಲ್ಸ್ ಪಂದ್ಯದ ಆಖರಿ ಕ್ಷಣಗಳು. ಅಹಮದಾಬಾದಿನಲ್ಲಿ ಕೂತ ಸುಮಾರು ೯೧ ಸಾವಿರ ಪ್ರೇಕ್ಷಕರು, ಟಿವಿ ತೆರೆಗಳಿಗ ಅಂಟಿಕೊಂಡು ಕೂತು ಕಾಯುತ್ತಿದ್ದ ಲಕ್ಷಗಟ್ಟಲೆ ವೀಕ್ಷಕರು ಕಾತರದಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಅಲ್ಲಿಯವರೆಗೆ ಮೂರು ಬಾರಿ ಫೈನಲ್ಸ್ ಗೆ ಬಂದರೂ ಟ್ರೋಫಿ ಗೆಲ್ಲದ ಬೆಂಗಳೂರಿನ ತಂಡ ಕೊನೆಗೂ ಐಪಿಲ್ ಟ್ರೋಫಿಯನ್ನು ಕೈ ವಶಮಾಡಿಕೊಂಡಿತು. ಕೆಲ ಆಟಗಾರರ ಆನಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಕತಾಳೀಯಗಳ ಸರಣಿಯಲ್ಲೇ ಸ್ತ್ರೀ ಪೀಡನೆಗೆ ಮದ್ದು ಅರೆದ ಸು ಫ್ರಂ ಸೋ: ಡಾ. ಅಭಿಲಾಷ ಹೆಚ್ ಕೆ

ಬಹಳ ದಿನಕ್ಕೆ‌ ಒಂದೊಳ್ಳೆ‌ ಫಿಲ್ಮ್ ನೋಡ್ದೆ, ತುಂಬಾ‌ ಕಾಮಿಡಿ‌ ಇದೆ‌ ನಕ್ಕು‌ನಕ್ಕು ಸಾಕಾಯ್ತು ಅಂದ್ರು ಕೆಲವರು. ನಿಜ ನೋಡ್ಲೇಬೇಕಾದ ಸಿನೆಮಾ‌ ನೋಡು‌ ಅಭಿ‌ ಅಂತ ಹಕ್ಕೊತ್ತಾಯ ಮಾಡಿದರು ಗೆಳೆಯರು. ಆದರೆ ಇವರ್ಯಾರು ಸಿನೆಮಾದ ಕಥೆಯ ಸಣ್ಣ ಎಳೆಯನ್ನೂ ಬಿಟ್ಟುಕೊಡಲಿಲ್ಲ. ಫೈನಲಿ‌ ನಾನೂ ಸಿನೆಮಾ ನೋಡಿದೆ. ಸಿನೆಮಾದ ತಾಂತ್ರಿಕ ಮಿತಿಗಳನ್ನು ಕುರಿತು ಹೇಳೋದು ನನ್ನ ಉದ್ದೇಶ ಅಲ್ಲ. ಆ ಕೆಲಸ ಸಿನೆಮಾ ಕ್ಷೇತ್ರದ ಪರಿಣಿತರಿಗೆ ಬಿಟ್ಟದ್ದು. ಒಬ್ಬ ಸಾಮಾನ್ಯ ಸಹೃದಯ ಪ್ರೇಕ್ಷಕಳಾಗಿ ‘ಸು ಫ್ರಂ ಸೋ’ ಸಿನೆಮಾ ನನ್ನಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಹಕ್ಕುಗಳ ಗ್ರಂಥಾಲಯ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ: ವಾಣಿ ಚೈತನ್ಯ

ಗ್ರಂಥಾಲಯ ಎಂದರೇನೆಂದು ಕೇಳಿದ್ದೇವೆ, ಮಕ್ಕಳ ಹಕ್ಕುಗಳ ಗ್ರಂಥಾಲಯವೆಂದರೆ ಏನು ಎಂದು ಎಲ್ಲರೂ ಯೋಚಿಸಬಹುದು. ವಿಶ್ವಸಂಸ್ಥೆ ರಚಿಸಿ, ಭಾರತವು ಸಹಿ ಮಾಡಿದ ಮಕ್ಕಳ ಹಕ್ಕುಗಳು ಇರುವುದೇ ಎಲ್ಲರಿಗೂ ಗೊತ್ತಿಲ್ಲದೇ ಇರುವಾಗ, ಮಕ್ಕಳ ಹಕ್ಕುಗಳ ಗ್ರಂಥಾಲಯ ಬಗ್ಗೆ ಸಾರ್ವತ್ರಿಕ ತಿಳುವಳಿಕೆ ಇನ್ನೊಂದು ಹೊಸ ಸವಾಲು. ಸಾಮಾನ್ಯವಾಗಿ ಗ್ರಂಥಾಲಯವೆಂದರೆ, ಪುಸ್ತಕಗಳನ್ನು ಸಂಗ್ರಹಿಸಿ ಇಡುವ ಮನೆ. ಪುರಾತನ ಕಾಲದಿಂದ, ಮಾನವರು ಅನುಭವಿಸಿ ಕಲಿತ, ವಿಜ್ಞಾನಿಗಳು ಪ್ರಯೋಗಗಳಿಂದ ಕಂಡುಕೊಂಡ ಜ್ಞಾನ ಭಂಡಾರಗಳ, ಮಾಹಿತಿಗಳ ಮೂಲ. ಶಾಲೆಗೆ ದಾಖಲಾಗಿ ಪಠ್ಯ ಪುಸ್ತಕಗಳನ್ನು ಓದುವುದೇ ದುಸ್ತರವಾಗಿದ್ದ ಕಾಲದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಾಥ ಭಗವಂತ ನೀ ಅವ್ಯಕ್ತನಾಗು: ನಾಗಸಿಂಹ ಜಿ ರಾವ್

ಸಿಂಹಾವಲೋಕನ 4 ವೇಣುಜೀ ಅವರಿಂದ ರಚಿತವಾದ “ಅನಾಥ ಭಗವಂತ ನೀ ಅವ್ಯಕ್ತನಾಗು” ನಾಟಕವು ಕೇವಲ ಒಂದು ನಾಟಕವಲ್ಲ, ಒಂದು ಸಾಮಾಜಿಕ ಕನ್ನಡಿಯಾಗಿದೆ. ಈ ನಾಟಕವು ಸುಳ್ಳು ಭಕ್ತಿಯನ್ನು, ದೇವರ ಹೆಸರಿನಲ್ಲಿ ವಂಚನೆ ಮಾಡುವವರನ್ನು ಬಯಲಿಗೆ ಎಳೆಯುವ ಗುರಿಯನ್ನು ಹೊಂದಿದ್ದು, ಭಗವಂತನೇ ಭೂಮಿಗೆ ಬಂದರೆ ಎಂಥ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಥಾಹಂದರದ ಮೂಲಕ ಸಮಾಜದ ಕೊಳಕು ಮುಖವನ್ನು ತೆರೆದಿಡುತ್ತದೆ. ನಾಟಕದ ಕೇಂದ್ರ ಬಿಂದುವಾಗಿರುವ ಭಗವಂತ (ಧೀರನಾಥ -ವಿಷ್ಣು, ನಾಗಭೂಷಣ – ನಾರದ ), ದೀರ್ಘ ನಿದ್ದೆಯಿಂದ ಎದ್ದಾಗ ತನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೆಂಕಟೇಶ್ ಸಲೂನ್: ಮಕ್ಕಳ ಹಕ್ಕುಗಳ ಕೋಟೆ !!!!!!: ನಾಗಸಿಂಹ ಜಿ ರಾವ್

ಲಿಂಗರಾಜಪುರಂ ಬಸ್‌ನಿಲ್ದಾಣದ ಬಳಿ ಗದ್ದಲದ ರಸ್ತೆಯೊಂದಿಗೆ, ಒಂದು ಸಣ್ಣ ಹೇರ್ ಕಟಿಂಗ್ ಸಲೂನ್ ಇದೆ. ವೆಂಕಟೇಶ್ವರ ಸಲೂನ್—ಚಿಕ್ಕದಾದರೂ, ಲಿಂಗರಾಜಪುರಂ ಹೃದಯದಲ್ಲಿದೆ. ಅದರ ಮಾಲೀಕ ವೆಂಕಟೇಶ್‌ರವರ ಮುಗುಳುನಗೆ, ಗ್ರಾಹಕರಿಗೆ ಕೇವಲ ಕೂದಲು ಕತ್ತರಿಸುವುದು ಮಾತ್ರವಲ್ಲ ಅದರ ಜೊತೆಗೆ ಸಣ್ಣ ಮಾತುಕತೆಯ ಸಂತೋಷವನ್ನೂ ಒದಗಿಸುತ್ತಿತ್ತು. ಆದರೆ ಈ ಸಲೂನ್‌ ಮುಂದೆ ಕೇವಲ ಕೂದಲು ಕತ್ತರಿಸುವ ಜಾಗವಾಗಿ ಉಳಿಯಲಿಲ್ಲ ; ಇದು ಮಕ್ಕಳ ಹಕ್ಕುಗಳಿಗಾಗಿ, ಮಕ್ಕಳ ರಕ್ಷಣೆಗಾಗಿ ಪ್ರಚಾರ ಮಾಡುವ ಒಂದು ಕಿರು ಕ್ರಾಂತಿಯ ಕೇಂದ್ರ ವಾಯಿತು.ಆಗ ನಾನು, ಚೈಲ್ಡ್ ರೈಟ್ಸ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಂತಾರದ ಭೂತ ಬಿಡಿಸಿದ ʼ ಸು ಫ್ರಂ ಸೋʼ: ಎಂ ನಾಗರಾಜ ಶೆಟ್ಟಿ

ಎಂತಾ ಮಳೆ ಅಂದ್ರೆ ಮನೆಯೊಳಗೆ ಕುಳಿತುಕೊಳ್ಳುವುದಕ್ಕೆ ಆಗುವುದೇ ಇಲ್ಲ. ಹೊರಗೆ ಹೋದರೆ ಸುಟ್ಟು ಹೋದ ಹಾಗೆ ಆಗುತ್ತದೆ, ಒಂದು ಸಲ ಮಳೆ ಬಂದರೆ ಸಾಕಾಗಿದೆ ಎಂದು ಹೇಳುತ್ತಿದ್ದ ಕರಾವಳಿಯವರು ಮೇ ತಿಂಗಳ ನಂತರ ಬಿಡದೆ ಸುರಿಯುತ್ತಿರುವ ಮಳೆಗೆ ಇಷ್ಟು ವರ್ಷದಿಂದ ಇಂತಹ ಮಳೆ ನೋಡೇ ಇಲ್ಲ ಎಂದು ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಸ್ಥಿತಿಯೂ ಹೆಚ್ಚು ಕಮ್ಮಿ ಹೀಗೇ ಆಗಿತ್ತು. ಒಂದೆರಡು ಕಪ್ಪು ಮೋಡಗಳು ಕಾಣಿಸಿಕೊಂಡು ಮರೆಯಾಗುವಂತೆ ಹೊಸ ಚಿತ್ರಗಳಿಗೆ ಜನ ಬರುತ್ತಾರೆ ಎನ್ನುವಾಗಲೇ ಸಿನಿಮಾ ಚಿತ್ರಮಂದಿರಗಳಿಂದ ಹೊರಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬುದ್ಧನ ಕಥೆಯಲ್ಲಿ ‘ಸ್ತ್ರೀ’: ಡಾ. ಎಚ್.ಎಸ್. ಸತ್ಯನಾರಾಯಣ

ಮನುಕುಲದ ಮಹಾವ್ಯಕ್ತಿಗಳಲ್ಲಿ ಗೌತಮಬುದ್ಧನ ಸ್ಥಾನ ಅತ್ಯಂತ ಎತ್ತರದ್ದು, ಹಿರಿದಾದುದು. ಅವನ ಉನ್ನತ ವ್ಯಕ್ತಿತ್ವವು ಯಾವ ಹಂತಕ್ಕೇರಿದೆಯೆಂದರೆ ಆತ ಅವತಾರ ಪುರುಷನೆಂದು ಬಲವಾಗಿ ನಂಬುವಷ್ಟರಮಟ್ಟಿಗೆ! ಈಗಲೂ ಅನೇಕರಲ್ಲಿ ದಶಾವತಾರಗಳಲ್ಲಿ ಬುದ್ಧಾವತಾರವೂ ಒಂದೆಂಬ ನಂಬುಗೆ ಬಲವಾಗಿ ನೆಲೆಯೂರಿದೆ. ಆದರೂ ಬುದ್ಧನನ್ನು ಒಳಗೊಂಡು ರಚಿತವಾದ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ತೀರಾ ಕಡಿಮೆ. ಲೆಕ್ಕಮಾಡಿದರೆ ಸುಮಾರು ಮುವತ್ತೈದು ಪ್ರಕಟಣೆಗಳ ಶೀರ್ಷಿಕೆಯನ್ನು ಪಟ್ಟಿ ಮಾಡಬಹುದೇ ಹೊರತು ಓದುಗರ ನೆನಪಿನಲ್ಲುಳಿಯುವ ಗಟ್ಟಿ ಕೃತಿಗಳು ಕೆಲವು ಮಾತ್ರ! ಅದರಲ್ಲಿಯೂ ಬುದ್ಧನಿಗೆ ಸಂಬಂಧಿಸಿದ ವೈಚಾರಿಕ ಕೃತಿಗಳೂ, ಅನುವಾದಗಳೂ ಪಾಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು”: ಡಾ. ವೀಣಾಕುಮಾರಿ ಎ. ಎನ್.‌,

ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಪರಸ್ಪರ ಹರಡುವ ರೋಗಗಳಾಗಿವೆ. ʼಝುನೋಸಿಸ್ʼ ಎಂಬ ಪದವು ರುಡಾಲ್ಫ್ ವಿರ್ಚೊ (Rudolph Virchow) ಎಂಬಾತನಿಂದ 1880ರಲ್ಲಿ ಪರಿಚಯಿಸಲ್ಪಟ್ಟಿದೆ. ʼಝೂನೋಸಿಸ್ʼ ಎಂಬ ಪದವು ಮೂಲತಃ ಗ್ರೀಕ್ ಭಾಷೆಯ ಪದವಾಗಿದ್ದು, ʼಝೂನೋʼ ಎಂದರೆ ʼಪ್ರಾಣಿʼ ಹಾಗೂ ʼನೊಸೆಸ್ʼ ಎಂದರೆ ʼಅನಾರೋಗ್ಯʼ ಎಂದರ್ಥ. ಇವುಗಳು ವೈರಸ್ ಗಳು (ರೇಬೀಸ್‌, ಆರ್ಬೋವೈರಸ್‌ ಸೋಂಕುಗಳು, ಕ್ಯಾಸನೂರ್‌ ಫಾರಸ್ಟ್‌ ಡಿಸೀಸ್/ಮಂಗನ ಕಾಯಿಲೆ, ಹಳದಿ ಜ್ವರ, ಇನ್ ಫ್ಲುಯೆಂಜಾ), ಬ್ಯಾಕ್ಟೀರಿಯಾಗಳು (ಉದಾಹರಣೆ: ಆಂಥ್ರಾಕ್ಸ್‌, ಬ್ರುಸೆಲ್ಲೋಸಿಸ್‌, ಪ್ಮೇಗ್‌, ಲೆಪ್ಟೋಸ್ಪೈರೋಸಿಸ್‌, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಣ್ಣ-ತಂಗಿ: ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.

ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್‌ ಸೂರಜ್‌ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್‌ ಸ್ಕೂಟಿ ಸ್ಟಾರ್ಟ ಮಾಡಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಾ ಬಾ ಓ ಬೆಳಕೇ…..: ಚಂದಕಚರ್ಲ ರಮೇಶ ಬಾಬು

ಚರಿತ್ರೆ ಪುನರಾವೃತಗೊಳ್ಳುತ್ತದೆಂದು ಓದಿ ತಿಳಿದಿದ್ದರೂ, ಹೇಳಿದವರಿಂದ ಕೇಳಿದ್ದರೂ ಅದು ಇಷ್ಟುಬೇಗ ತನ್ನ ಆವರಿಸುತ್ತದೆ ಎಂದು ಮತ್ತು ಅದರ ಮಿಕ ತಾನಾಗಬೇಕಾಗುತ್ತದೆ ಎನ್ನುವ ಸತ್ಯ ಜಯತೀರ್ಥನಿಗೆ ಕಹಿಯೂಟವಾಗಿತ್ತು.ಮೊನ್ನೆ ವರೆಗೂ ತನ್ನ ಸಂಪತ್ತೇನು, ಮೆರೆದಾಟವೇನು, ಕಂಡ ಕನಸುಗಳೇನು ? ಒಂದೇ ಎರಡೇ? ಜೀವನವಿಡೀ ಕಾಮನಬಿಲ್ಲಿನ ಕನಸಿನಲ್ಲೇ ಕಳೆದುಹೋಗುತ್ತದೆ ಎಂದೆಣಿಸಿ, ಸೊಕ್ಕಿನಲ್ಲಿ ಮುಕ್ಕುತ್ತಿದ್ದ ಅವನಿಗೆ ಆರ್ಥಿಕ ಮುಗ್ಗಟ್ಟು ಲಕ್ವದ ತರ ಬಂದೆರಗಿತ್ತು. ಇಂಥ ಮುಗ್ಗಟ್ಟು ಶುರುವಾಗಿ ಒಂದು ವರ್ಷವಾಗಿದ್ದರೂ ಅವನು ಮತ್ತು ಅವನ ಹೆಂಡತಿ ಅದಕ್ಕೆ ಹೊರತಾಗೇ ಉಳಿದಿದ್ದರು. ಶುರುವಾದ ವರ್ಷಗಳಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಿರೀಕ್ಷಿತ ಬದಲಾವಣೆಗಳ ಬೆನ್ನು ಏರಿ..: ವಿಜಯ್ ಕುಮಾರ್ ಕೆ. ಎಂ.

ಬದಲಾವಣೆಗಳು ಅನಿರೀಕ್ಷಿತ, ಇನ್ನಷ್ಟು ಬದಲಾವಣೆಗಳು ನಿರೀಕ್ಷಿತ. ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳಲ್ಲಿ ಹೆಚ್ಚು ದೀರ್ಘಾವಧಿ ಆಯಸ್ಸು ಬಯಸಲು ಕಷ್ಟವಾಗಬಹುದು ಆದರೆ ನಿರೀಕ್ಷಿತ ಬದಲಾವಣೆಗೆ ಒಂದಷ್ಟು ಆಯಸ್ಸು ಹೆಚ್ಚು ಇರುತ್ತದೆ. ರಾತ್ರೋರಾತ್ರಿ ಸಿಕ್ಕ ಲಾಟರಿಯ ಜಯ, ತಾನು ಕಂಡು ಕೇಳರಿಯದಷ್ಟು ಸಿಕ್ಕ ಹಣ ಮತ್ತು ಒಡವೆ, ನಿರೀಕ್ಷೆಯಿಲ್ಲದೆ ದೊರೆತ ಗೆಲುವು, ಬಯಸದೆ ಸಿಕ್ಕ ಮೆಚ್ಚುಗೆ ಇದೆಲ್ಲವೂ ಮನಸ್ಸಿನಲ್ಲಿ ಇನ್ನಿಲ್ಲದ ಸಂತೋಷ ನೀಡಿತಾದರೂ ಅದರ ಹಿಂದೆ ಬರುವ ಒಂದಷ್ಟು ಜವಾಬ್ದಾರಿ, ಪ್ರಾಮಾಣಿಕತೆ, ನಿರಂತರ ಪರಿಶ್ರಮ ಇದೆಲ್ಲವೂ ಬಹು ಮುಖ್ಯವಾಗುವುದರಲ್ಲಿ ಸಂಶಯವಿಲ್ಲ. ಪ್ರೌಢಾವಸ್ಥೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ