ಮರೆಯಾಗುತ್ತಿರುವ ಮದುವೆಮನೆಯ ಸಂಭ್ರಮಗಳು: ಸುಮನ್ ದೇಸಾಯಿ

ಮೊನ್ನೆ ಸಂಜಿಮುಂದ ಮನಿ ಹತ್ರ ಇರೊ ವೇಂಕಪ್ಪನ ಗುಡಿಗೆ ಹೋಗಿದ್ವಿ. ಅಲ್ಲೆ ಇದ್ದ ಕಲ್ಯಾಣಮಂಟಪದಾಗ ಮದುವಿ ಇತ್ತಂತ ಕಾಣಸ್ತದ. ಬ್ಯಾಂಡ ಭಂಜಂತ್ರಿಯವರು ಮಸ್ತ ಯಾವದೊ ಒಂದ ಸಿನೇಮಾ ಹಾಡಿನ ಬಾಜಾ ಬಾರಿಸ್ಲಿಕತ್ತಿದ್ರು. ಈಗೆಲ್ಲಾ ಕಡೆ ಒಂದ ಹೊಸಾ ಪಧ್ಧತಿ ಎದ್ದದ ಎನಂದ್ರ ಈ ಉತ್ತರಭಾರತದ ಕಡೆ ಮದುವಿಗೊಳೊಳನ್ಯಾಗ ಹೆಂಗ ವರನ್ನ ಕುದರಿಮ್ಯಾಲೆ ಕೂಡಿಸಿಕೊಂಢ ಬ್ಯಾಂಡ ಬಾಜಾ ಬಾರಿಸ್ಕೊತ, ಡ್ಯಾನ್ಸ ಮಾಡ್ಕೊತ ಕರ್ಕೊಂಡ ಬರತಾರ ಹಂಗ ಇಲ್ಲೆನು ವೇಂಕಪ್ಪನ ಗುಡಿಯಿಂದ ಕುದರಿಮ್ಯಾಲ ವರನ್ನ ಕುಡಿಸಿ ಬ್ಯಾಂಡ ಬಾಜಾ ಬಾರಿಸ್ಕೋತ,ಸಣ್ಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯ ಭಾವನೆಗಳನ್ನ ಬದಿಗೊತ್ತಿ ಸ್ನೇಹಕ್ಕೆ ಕೈ ಚಾಚುತ್ತಿರುವೆ: ಶುಭ ಆರ್.

  ನನ್ನ ಆತ್ಮೀಯ ಹುಡುಗನಿಗೆ,  ಮರೆಯಲಾಗದು ನಿನ್ನೊಡನೆ ಕಳೆದ ಆ ಸುಂದರ ದಿನಗಳು. ಮನದ ತುಂಬಾ ಮೂಡಿದ  ನೂರಾರು ಕನಸಿನ ಚಿತ್ತಾರಗಳು. ಖಾಲಿಯಿದ್ದ ನಮ್ಮ ಪಕ್ಕದ ಮನೆಗೆ ಬಂದ  ಹುಡುಗ ನೀನು. ಅಪರಿಚನಾಗಿದ್ದವನು ಸ್ವಲ್ಪ ದಿನಗಳ ಬಳಿಕ ಪರಿಚಯವಾಗಿ ಆತ್ಮೀಯ ಒಡನಾಟ ಬೆಳೆಯಿತು. ನಿನ್ನ ಮುದ್ದಾದ ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ನಿನ್ನ ಸುಂದರ ನೋಟದಲ್ಲೇ ನನ್ನ ಸೆರೆ ಹಿಡಿದ. ಸುಮಧುರ ಮಾತುಗಳಲ್ಲೇ ನನ್ನ ಹೃದಯವನ್ನೇ ಗೆದ್ದ. ಒಟ್ಟಿನಲ್ಲಿ ಗುಣದಲ್ಲಿ ಅಪರಂಜಿಯಂತಹ  ಹುಡುಗ, ನಿನ್ನ ಚೆಲುವಿಗೆ ನಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಸ್ಮಯಭರಿತ ವಿರಾಟ ವಿಶ್ವ (ಭಾಗ 1): ನಾರಾಯಣ ಎಂ.ಎಸ್.

ನಿಮಗೆ ನೆನಪಿರಬಹುದೇನೋ? ಇಲ್ಲ, ಖಂಡಿತವಾಗಿಯೂ ನೆನಪಿದ್ದೇ ಇರುತ್ತದೆ. ಏಕೆಂದರೆ, ಬಾಲ್ಯದ ಉತ್ಕಟ ಅನುಭವಗಳ ನೆನಪು ಎಲ್ಲಕ್ಕಿಂತ ಸ್ಪಷ್ಟ ಮತ್ತು ನಿಚ್ಚಳವಾಗಿರುತ್ತದಂತೆ. ನಮ್ಮ ಕೈ ಸೋಕಿದೊಡನೆ ನಾಚಿ ಮುದುಡುವ ಆ ಮುಟ್ಟಿದರೆ ಮುನಿ ಗಿಡ, ಕತ್ತಲಲ್ಲಿ ಮಿಂಚುವ ಆ ಮಿಣಿಕೆ ಹುಳ, ಆ ಬಣ್ಣದ ಚಿತ್ತಾರದ ಪಾತರಗಿತ್ತಿ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಆ ಊಸರವಳ್ಳಿ, ಕಾರ್ಮುಗಿಲಿನಲ್ಲಿ ಕಂಡ ಆ ಬೆಳ್ಳಿ ಮಿಂಚು ಮತ್ತು ಆಗಸದಲ್ಲಿನ ರಂಗು ರಂಗಾದ ಮಳೆಬಿಲ್ಲು ಇತ್ಯಾದಿಗಳನ್ನು ನಾವು ನಮ್ಮ ಬೆರಗು ಕಣ್ಗಳಿಂದ ಮನದಣಿಯೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಅಕುವ, ಕೃಷ್ಣಮೂರ್ತಿ ನಾಯಕ್, ಶ್ರೀವಲ್ಲಭ ಕುಲಕರ್ಣಿ.

          ದಾನಿಗಳೇ…..   ಇಲ್ಲಿ ಎಲ್ಲರೂ ದಾನಿಗಳು ಹಲವರು ಅಲ್ಪದಾನಿಗಳು ಕೆಲವರು ಮಹಾದಾನಿಗಳು ಮತ್ತುಳಿದವರು ಅಗ್ರಮಾನ್ಯರು ಆದರೂ ಯಾರೂ ಕರ್ಣನಾಗಲ್ಲಿಲ್ಲ ಶಿಬಿಯ ಮೀರಲಿಲ್ಲ !!   ದೇವರ ಹೆಸರೆತ್ತಿದ್ದರೆ ಹೇಸದೆ ಕೊಡುವರು ಸಾರ್ಥಕತೆಯ ಮಂಕಿಗೆ ಬೆರಗಾಗಿರುವರು ದಟ್ಟನೆ ಸಭೆಯಲಿ ಸಾಲು ಹೊದಿಯುವರು ಬೆನ್ನಲ್ಲಿಯೇ ಮೆತ್ತನೆ ವಾಪಾಸು ಕೇಳುವರು !!   ನನ್ನೂರ ಹಾದಿಯ ಇಕ್ಕೆಲ್ಲದಲಿ ಬಸ್ಸು ತಂಗುದಾಣಗಳು ದೇಗುಲದ ರಸ್ತೆಗೆ ಮೇಲೆದ್ದ ಸ್ವಾಗತ ಗೋಪುರಗಳು ಬುಡದಲ್ಲಿ ಕೆತ್ತಿದ ದಾನಿಗಳ ನಾಮ ಫಲಕಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಿಡುವು: ಪ್ರಶಸ್ತಿ ಪಿ.ಸಾಗರ

ದಿನಾ ಆಫೀಸಿಂದ ಲೇಟಾಗಿ ಮನೆಗೆ ಬರುವವನಿಗೆ ಒಂದು ದಿನ ಬೇಗ ಮನೆಗೆ ಬಂದು ಬಿಟ್ರೆ ಎಲ್ಲಿಲ್ಲದ ಚಡಪಡಿಕೆ. ಮನೆಯಲ್ಲಿರುವರ ಮಾತಾಡಿಸುವಿಕೆಗಿಂತ ಆಫೀಸಿನದೇ ಚಿಂತೆ. ಅಲ್ಲಿ ಕೆಲಸವಿದ್ದುದ್ದನ್ನು ಬಿಟ್ಟು ಬಂದುದಕಲ್ಲ, ಏನೂ ಕೆಲಸವಿಲ್ಲದಿದ್ದರೂ ಇದೇ ತರ. ಸಮಸ್ಯೆ ಕೆಲಸದ್ದಲ್ಲ. ಅದಿಲ್ಲದಿದ್ದಾಗ ಇರೋ ಬಿಡುವಿನದು. ದಿನಾ ಶಾಲೆ. ಟ್ಯೂಷನ್ನು, ಹೋಂವರ್ಕು ಅಂತ ಓದಿನಲ್ಲೇ ಮುಳುಗಿ ಹೋಗಿ ಮನೆಗೆ ಬಂದವರನ್ನು ಮಾತಾಡಿಸಲೂ ಬಿಡುವಿಲ್ಲದ ಮಗನಿಗೆ ಓದಿನ ಒಂದು ಹಂತ ದಾಟಿದ ನಂತರ ತೀರಾ ಕಸಿವಿಸಿ. ಮುಂದಿನ ಹಂತ ಏನೆಂದು ನಿರ್ಧರಿತವಾಗಿದ್ದರೂ ಅಲ್ಲಿಯವರೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಐದು ಫೇವರಿಟ್ ದೃಶ್ಯಗಳು: ವಾಸುಕಿ ರಾಘವನ್ ಅಂಕಣ

ರಿಕ್ವೀಮ್ ಫಾರ್ ಅ ಡ್ರೀಮ್  ಈ ಚಿತ್ರ ಮಾದಕ ವ್ಯಸನಕ್ಕೆ ಸಿಲುಕಿ ಛಿದ್ರಗೊಳ್ಳುವ ನಾಲ್ಕು ಜನರ ಜೀವನದ ಕಥಾನಕ. ಈ ಚಿತ್ರದ ಕೊನೆಯಲ್ಲಿ ಬರುವ ದೃಶ್ಯ ಬಹಳ ಶಕ್ತಿಶಾಲಿಯಾಗಿದೆ. ಆ ನಾಲ್ಕೂ ಜನರ ಬದುಕು ಹೇಗೆ ನರಕಸದೃಶವಾಯಿತು ಅಂತ ಒಬ್ಬೊಬ್ಬರ ಶಾಟ್ ಗಳನ್ನು ಒಂದಾದಮೇಲೊಂದು ಜೋಡಿಸಿ ತೋರಿಸಿದ್ದಾರೆ ನಿರ್ದೇಶಕ ಆರೋನಾಫ್ಸ್ಕಿ. ನಿಧಾನಗತಿಯಲ್ಲಿ ಸಾಗುವ ದೃಶ್ಯಗಳ ಜೊತೆಯಲ್ಲೇ ವಿಷಾದಭಾವದ ಸಂಗೀತ. ಬರಬರುತ್ತಾ ಸಂಕಲನ ವೇಗ ಪಡೆದುಕೊಳ್ಳುತ್ತದೆ, ಸಂಗೀತ ತಾರಕಕ್ಕೇರುತ್ತದೆ. ಅಷ್ಟೇ ಪರಿಣಾಮಕಾರಿಯಾಗಿ ಮೂಡಿರುವುದು ಇದರ ನಂತರದ ದೃಶ್ಯ. ಒಬ್ಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 10): ಮಹಾಂತೇಶ್ ಯರಗಟ್ಟಿ

೧.    ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೨.    ಸಿಖ್ಖರ ಪವಿತ್ರ ಗ್ರಂಥ ಯಾವುದು? ೩.    ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಯಾವ ವರ್ಷದಲ್ಲಿ ಇಳಿಸಲಾಯಿತು? ೪.    ಮರಾಠಾ ಒಕ್ಕೂಟಕದ ಸ್ಥಾಪಕ ಯಾರು? ೫.    ವಿಶ್ವವನ್ನು ಸುತ್ತಿ ಬಂದ ಭಾರತೀಯ ನೌಕೆಯ ಹೆಸರೇನು? ೬.    ಗ್ರಾಮ್ ಸ್ವರಾಜ್ ಎಂಬ ವಿಚಾರವನ್ನು ಪ್ರತಿಪಾದಿಸಿದವರು ಯಾರು? ೭.    ಮದರ್ ತೆರೆಸ್ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ? ೮.    ’ಪೆನಾಲ್ಟಿ ಕಾರ್ನರ್’ ಯಾವ ಕ್ರೀಡೆಗೆ ಸಂಬಂಧಿಸಿದ್ದು? ೯.    ಪೋಲಿಯೋ ಕಾಯಿಲೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೇನು-ಸವಿಜೇನು: ಅಖಿಲೇಶ್ ಚಿಪ್ಪಳಿ ಅಂಕಣ

ಹಿರಿಯ ಪರ್ತಕರ್ತ ಸ್ನೇಹಿತರಾದ ಅ.ರಾ.ಶ್ರೀನಿವಾಸ್ ಫೋನ್ ಮಾಡಿದ್ದರು. ಸಮಸ್ಯೆಯೆಂದರೆ ಅವರ ಪುಟ್ಟ ತೋಟದಲ್ಲಿರುವ ಹೈಬ್ರೀಡ್ ನೆಲ್ಲಿ ಮರದಲ್ಲಿ ಹೂವಿದ್ದರೂ ಕಾಯಿಗಟ್ಟುತ್ತಿರಲಿಲ್ಲ. ಜೇನಿನ ಅಭಾವವೇ ಈ ಸಮಸ್ಯೆಗೆ ಕಾರಣವೆಂದು ಮನಗಂಡು, ತಮ್ಮಲ್ಲಿರುವ ಹಳೇ ಜೇನುಪೆಟ್ಟಿಗೆಯಲ್ಲಿ ಜೇನು ಸಾಕಬೇಕೆಂಬ ತೀರ್ಮಾನ ಮಾಡಿದ್ದರು. ಅದಕ್ಕಾಗಿ ಜೇನು ತುಂಬಿ ಕೊಡಲು ಸಾಧ್ಯವೆ? ಎಂದು ಕೇಳಿದರು. ವಿನೋಬ ನಗರದಲ್ಲಿ ದೊಡ್ಡದೊಂದು ದೂರವಾಣಿ ಕೇಬಲ್ ಸುತ್ತಿಡುವ ಪ್ಲೈವುಡ್‌ನಿಂದ ತಯಾರಿಸಿದ ಉರುಟಾದ ಗಾಲಿಯೊಂದಿತ್ತು. ಅದರ ಮಧ್ಯಭಾಗದಲ್ಲಿ ೬ ಇಂಚು ಅಗಲದ ದುಂಡನೆಯ ರಂಧ್ರ. ಒಮ್ಮೆ ಅತ್ತ ಗಮನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು: ಸಂತೋಷ್ ಗುರುರಾಜ್

          ಮೊನ್ನೆ ನನ್ನ ಫೇಸ್ ಬುಕ್ ಅಕೌಂಟ್ ನ ಗೋಡೆಯ ಮೇಲೆ ಒಂದು ಸ್ಟೇಟಸ್ ಬಂದಿತ್ತು ,ಆ ಸ್ಟೇಟಸ್ ನೋಡಿ ನನಗೂ ತಕ್ಷಣ ಮನಸ್ಸಿಗೆ ಒಂದು ತರಹದ ಕುತೂಹಲ ಉಂಟಾಯಿತು . ಮತ್ತೆ ಬೇರೆ ಯಾವುದೇ ಸ್ಟೇಟಸ್ ಸಹ ಅಷ್ಟೊಂದು ಮನಸ್ಸಿಗೆ ಹಿಡಿಸಿದ್ದಿಲ್ಲ.ಮತ್ತು ಆ ಸ್ಟೇಟಸ್ ನೋಡಿದಾಗಿನಿಂದ ನಾನು ಅದನ್ನು ಅನುಸರಿಸಬೇಕು ಎಂದು ಅನಿಸತೊಡಗಿತು ಆ ಸ್ಟೇಟಸ್ ಹೀಗಿದೆ ನೋಡಿ  "ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು" ಇದರಲ್ಲಿ ಬಹಳಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾರ್ಟೂನ್ ಕಾರ್ನರ್

‘ಅಕ್ಷಯ’ ಬೆಳ್ಳಿಹಬ್ಬ ಸಾಹಿತ್ಯ ಸ್ಪರ್ಧೆಯ ವ್ಯಂಗ್ಯಚಿತ್ರ ವಿಭಾಗದಲ್ಲಿ ಸಿದ್ದಾಪುರದ ರಂಗನಾಥ ವಿ.ಶೇಟ್‌ರವರ ‘ಅಡುಗೆ ಅನಿಲ ಮಹತ್ವ’ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಪಂಜುವಿಗಾಗಿ ನಿರಂತರವಾಗಿ ತಮ್ಮ ವ್ಯಂಗ್ಯಚಿತ್ರಗಳನ್ನು ಕಳುಹಿಸಿಕೊಡುವ ರಂಗನಾಥರವರಿಗೆ ಪಂಜು ಬಳಗ ಅಭಿನಂದನೆಗಳನ್ನು ಸಲ್ಲಿಸುತ್ತದೆ.  ******   ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನೆಯ ಮೂಲೆ: ಅನಿತಾ ನರೇಶ್ ಮಂಚಿ

  ಕೋಣೆ ಅನ್ನುವುದು ಹೆಚ್ಚಿನೆಲ್ಲಾ ಮನೆಗಳಲ್ಲಿ ಚೌಕವೋ ಆಯತವೋ ಇರುವುದರಿಂದ ಒಂದು ಕೋಣೆಗೆ ನಾಲ್ಕು ಮೂಲೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಒಂದೆರಡು ಹೊರ ಜಗತ್ತಿಗೆ ತೆರೆದಿದ್ದರೆ ಮತ್ತುಳಿದವು ತಮ್ಮನ್ನು ಮಂಚವೋ, ಮೇಜೋ, ಕುರ್ಚಿಯೋ ಹೀಗೇ ಯಾವುದಾದರೂ ವಸ್ತುಗಳಿಂದ ಆವರಿಸಿಕೊಂಡಿರುತ್ತವೆ. ಇವುಗಳೇ ಮನೆಯ ಅತ್ಯದ್ಭುತ ಸ್ಥಳ ಎಂದು ನನ್ನ ಅಭಿಪ್ರಾಯ. ಇವುಗಳು ಮುಚ್ಚಿಟ್ಟುಕೊಂಡಿರುವ ರಹಸ್ಯಗಳೇ ಹಾಗಿರುತ್ತವೆ.   ಪಕ್ಕನೆ ಮನೆ ಒಳಗೆ ನುಗ್ಗಿದವರಿಗೆ ಕಾಣಬಾರದ, ಕಸ,  ಕಸಬರಿಕೆ, ಬಿಸುಡಲು ಮನಸ್ಸಿಲ್ಲದ ಹಳೆಯ ಬಟ್ಟೆಯ ಗಂಟು, ಮುರಿದ ಪಾತ್ರೆ ಪಡಗಗಳು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಾಮಂದ್ರ: ಹರಿ ಪ್ರಸಾದ್

ರಾಮಮಂದಿರ ಅಂದರೆ ಏನೇನೋ ಚಿತ್ರಗಳು ಮೂಡುವ ಈ ಕಾಲದಲ್ಲಿ, ನನಗಂತೂ ನಮ್ಮ ಸೋದರತ್ತ್ತೆ  ಊರಿನ ಮಧ್ಯದಲ್ಲಿದ್ದ ರಾಮಮಂದಿರವೇ ಕಣ್ಮುಂದೆ ಬರುತ್ತದೆ. ಸುಮಾರು ನೂರೈವತ್ತು ಮನೆಗಳ ಪುಟ್ಟ ಊರದು. ನನ್ನ ಬಾಲ್ಯ ಬಹುಪಾಲು ಕಳೆದಿದ್ದು ಆ ಊರಿನಲ್ಲೆ. ನನ್ನ ಬಾಲ್ಯದ ಅನೇಕ ಚಟುವಟಿಕೆಗಳು ಅದರ ಸುತ್ತಮುತ್ತ ಹರಡಿಹೋಗಿವೆ. ಆದ್ದರಿಂದ ಆ ಚಿತ್ರ ಮನಸಿನಿಂದ ಹೋಗಲೊಲ್ಲದು. ಕೆಮ್ಮಣ್ಣು ಗೋಡೆಯ ಅದರ ಒಳಭಾಗದಲ್ಲಿ ಇಪ್ಪತ್ತು ಜನ ಕೂರುವಷ್ಟು ಜಾಗ. ಈಚೆ ಪಡಸಾಲೆಯಲ್ಲಿ ಒಳಕ್ಕಿಂತ ತುಸು ಚಿಕ್ಕದಾದ ಜಾಗ. ಬೀದಿಭಾಗಕ್ಕೆ ಮರ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಾದಿಗಳಿಲ್ಲದ ಬದುಕು: ರೇಷ್ಮಾ ಎ.ಎಸ್.

ಆಕೆ ನನ್ನ ಸಹೋದ್ಯೋಗಿ ಮಾತ್ರವಲ್ಲದೆ ನನ್ನ ಆತ್ಮೀಯ ಗೆಳತಿಯೂ ಆಗಿದ್ದಾಕೆ. ವಯಸ್ಸಿನಲ್ಲಿ ನನಗಿಂತ ಸಾಕಷ್ಟು ಹಿರಿಯಳಾಗಿದ್ದರೂ ಸ್ನೇಹಕ್ಕೇನೂ ಕೊರತೆ ಇರಲಿಲ್ಲ. ತಂದೆಯನ್ನು ಕಳೆದುಕೊಂಡು ವಯಸ್ಸಾದ ತಾಯಿ, ಚಿಕ್ಕ ತಂಗಿಯೊಡನಿರುತ್ತಿದ್ದ ಆಕೆ ಸಾಧಾರಣ ರೂಪವಂತೆಯಾಗಿದ್ದರೂ ಉದ್ಯೋಗಸ್ಥಳಾದ್ದರಿಂದ ಮದುವೆಯಾಗಲು ಮುಂಬರುತ್ತಿದ್ದ ಗಂಡುಗಳಿಗೇನೂ ಕೊರತೆ ಇರಲಿಲ್ಲ. ಎಲ್ಲ ಸರಿ ಇದೆಯಲ್ಲ ಎಂದು ಉಳಿದವರಿಗೆಲ್ಲ ಅನಿಸುತ್ತಿದ್ದರೂ ಆಕೆ ಕೊನೆಯಲ್ಲಿ ಏನಾದರೂ ಒಂದು ಕಾರಣ ನೀಡಿ ಮದುವೆ ನಿರಾಕರಿಸಿ ಬಿಡುತ್ತಿದ್ದಳು. ಒಬ್ಬ ವರನಂತೂ ನಮಗೆಲ್ಲ ತುಂಬಾ ಸೂಕ್ತನಾದವನು ಎಂದೆನಿಸಿದ್ದು ಆಕೆ ಏನೋ ನೆವ ತೆಗೆದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪವನ್ ಒಡೆಯರ್ ಸಂದರ್ಶನ ಲೇಖನ: ಗುಂಡೇನಟ್ಟಿ ಮಧುಕರ

ಇತ್ತೀಚೆಗೆ ಬೆಳಗಾವಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ’ಪ್ರೀತಿ ಗೀತಿ ಇತ್ಯಾದಿ’  ಚಿತ್ರದ ಚಿತ್ರಕರಣ ನಡೆದಿತ್ತು. ಈ ಚಿತ್ರದ ನಾಯಕ ಪ್ಯಾರೆ ಆಗಬಿಟ್ಟೈತೆ ಪವನ ಒಡೆಯರ. ಗೋವಿಂದಾಯ ನಮಃ ಚಿತ್ರದಲ್ಲಿಯ ಆ ಉರ್ದು ಮಿಶ್ರಿತ ಹಾಡು ನನಗೆ ಮತ್ತೆ ಮತ್ತೆ ಕೇಳುವಂತೆ ಮಾಡಿತ್ತು. ಅದನ್ನು ಬರೆದಿರುವವರು ಪವನ ಒಡೆಯರ ಎಂದು ತಿಳಿದಾಗ ಅಚ್ಚರಿಪಟ್ಟಿದ್ದೆ. ಇಷ್ಟೊಂದು ಕಿರುವಯಸ್ಸಿನಲ್ಲಿ ಇಂತಹ ಒಂದು ಒಳ್ಳೆಯ ಸಾಹಿತ್ಯವನ್ನು ನೀಡಿರುವ ಪವನನ್ನನ್ನು ಭೇಟಿಯಾಗಿ ಮಾತನಾಡಬೇಕೆಂದು ಅಂದೇ ಅಂದುಕೊಂಡಿದ್ದೆ. ಅನಂತರ ಹಲವಾರು ಬಾರಿ ಸಂದರ್ಶನ ಮಾಡುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 9): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ’ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು? ೨.    ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು? ೩.    ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು? ೪.    ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು? ೫.    ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು? ೬.    ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ? ೭.    ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು? ೮.    ಭಾರತದಲ್ಲಿ ಶಹನಾಯಿ ವಾದ್ಯಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಸ ವರುಷ ಹರುಷವೇ!?: ಅಖಿಲೇಶ್ ಚಿಪ್ಪಳಿ ಅಂಕಣ

ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷ ಪ್ರಾರಂಭವಾಗಿದೆ. ಜನವರಿ ೨೦೧೪. ಕಾಲಚಕ್ರದಡಿಯಲ್ಲಿ ಸುತ್ತಿ ಮತ್ತೊಮ್ಮೆ ಹೊಸವರುಷದ ಹರುಷದಲ್ಲಿ ಮಿಂದೆದ್ದು, ಹೊಸ ಸವಾಲುಗಳಿಗೆ, ಹೊಸ ಸಾಧನೆಗಳಿಗೆ ನಿಧಾನವಾಗಿ ಜಗತ್ತು ತೆರೆದುಕೊಳ್ಳುತ್ತಿದೆ. ಪ್ರತಿದೇಶವೂ ತಾನು ಮುಂದುವರೆದ ರಾಷ್ಟ್ರವಾಗಬೇಕು ಎಂದು ಹಂಬಲಿಸುತ್ತದೆ. ಈ ಹಂಬಲಿಕೆಯನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸಿಕೊಂಡು, ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡುತ್ತವೆ. ಹಿಂದಿನ ವರ್ಷದ ವೈಫಲ್ಯಗಳೇನು ಎಂಬುದನ್ನು ಪಟ್ಟಿ ಮಾಡಿ ಪ್ರಚುರಪಡಿಸಲು ವಿವಿಧ ಕ್ಷೇತ್ರಗಳಲ್ಲಿ ತಜ್ಞರ ಪಡೆಯೇ ಇದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಲು ಆಯಾ ಕ್ಷೇತ್ರದ ವಿಜ್ಞಾನಿಗಳು ತಮ್ಮ ಶ್ರಮವನ್ನು ಧಾರೆಯರೆಯುತ್ತಾರೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಅನುಪಮಾ ಎಸ್. ಗೌಡ, ಆಶಾದೀಪ, ಪವಿತ್ರ ಸತೀಶ್ ಕುಮಾರ್

ಬರೆಯುತ್ತೇನೆ ನಾನು  ಹೆತ್ತವರ ಕಂಬನಿಯ  ನೋವನು ಕುರಿತು   ಅತ್ಮಸಾಕ್ಷಿ ಇಲ್ಲದವರ ಮೇಲೆ  ಮಣ್ಣಿಗಾಗಿ ಬಡಿದಾಡುವ  ಬಂಧುಗಳ ಕುರಿತು ಬರೆಯುತ್ತೇನೆ ನಾನು  ಸನ್ಯಾಸತ್ವ ಪಡೆದವರ ಮೇಲೆ  ವ್ಯಾಮೋಹ ಬಿದಡಿರುವುದನು ಕುರಿತು  ಅವರಲ್ಲಿರುವ ಕ್ರೋದ  ನಯವಂಚನೆಯ ಕುರಿತು  ಬರೆಯುತ್ತೇನೆ ನಾನು  ಆತ್ಮನಾನು ಪರಮಾತ್ಮತಂದೆ   ಅನ್ನುವವರ ಮೇಲೆ  ತನ್ನದಲ್ಲದನ್ನು ತನ್ನದೆಂದು  ವಾದಿಸುವವರ ಕುರಿತು  ಮಣ್ಣಾಗುವಾಗ ಬಿಡಿಗಾಸಿರದೆ  ಬರಿಗೈಯಲ್ಲಿ ಹೋಗುವ  ಪ್ರತಿಯೊಬ್ಬರ ಎಣಿಸಿ -ನಗೆಮಲ್ಲಿಗೆ  ಅನುಪಮ ಎಸ್  ಗೌಡ            ನಿರೀಕ್ಷೆ ಕೊಡವದಿರಿ ನನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಟ್ಟೆ!:ಪ್ರಶಸ್ತಿ ಪಿ.ಸಾಗರ

                  "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ.." ಅನ್ನೋ ಪುರಂದರದಾಸರ ಕೀರ್ತನೆ ನೆನಪಾಗುತ್ತಿತ್ತು. ಇದಕ್ಕೆ ಕಾರಣ ನಿನ್ನೆ ರಾತ್ರೆ ಗೆಳೆಯನ ಮನೆಗೆ ಹೋಗಿ ಅವನ ಅನಿರೀಕ್ಷಿತ ಒತ್ತಾಯಕ್ಕೆ ಮಣಿದು ಹತ್ತಿದ ನಳಪಾಕಕ್ಕೂ ಬಯ್ಯಲಾರದೇ ಹೋದ ಅರ್ಧ ತುಂಬಿದ ಹೊಟ್ಟೆಯೋ ಇಂದು ಬೆಳಗ್ಗೆಯ ಗಡಿಬಿಡಿಯ ತಿಂಡಿಯೋ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ದಕ್ಕಿದ ಅರೆಹೊಟ್ಟೆ ಮೊಸರನ್ನವೋ ಗೊತ್ತಿಲ್ಲ. ಮಧ್ಯಾಹ್ನ ಹನ್ನೆರಡಾಗೋವಷ್ಟರಲ್ಲೇ ತನ್ನ ಇರುವ ಸಾರುತ್ತಿದ್ದ ಹೊಟ್ಟೆ ಟ್ರಿಪ್ಪು ಟ್ರಿಪ್ಪೆಂದು ಹುಚ್ಚನಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಛೂಕು ಭೂಕು ರೈಲು: ಸುಮನ್ ದೇಸಾಯಿ

ಮಧ್ಯಾಹ್ನ ೧.೩೦ ಆಗಿತ್ತು, ಮಂತ್ರಾಲಯದ ರೇಲ್ವೆ ಸ್ಟೆಷನ್ನ್ಯಾಗ ಗುಲಬರ್ಗಾಕ್ಕ ಹೋಗೊ ಟ್ರೇನಿನ ಸಲುವಾಗಿ ಕಾಯಕೊತ ನಿಂತಿದ್ವಿ. ಮಂತ್ರಾಲಯದಾಗ ರಾಯರ ಸನ್ನಿಧಿಯೊಳಗ ಹೆಂಗ ಮೂರ ದಿನಾ ಕಳದ್ವು ಗೊತ್ತಾಗಲೆಯಿಲ್ಲಾ. ರಾಯರ ಸನ್ನಿಧಿ ಅಂದ್ರ ಅಮ್ಮನ ಮಡಿಲಿನ್ಯಾಗ ಮಲ್ಕೊಂಡಷ್ಟ ಹಿತಾ ಇರತದ.ಮನಸ್ಸು ಪ್ರಶಾಂತ ಇರತದ. ವಾಪಸ ಊರಿಗೆ ಹೋಗ್ಲಿಕ್ಕೆ ಮನಸಾಗಲಾರದ ಒಲ್ಲದ ಮನಿಸಿನಿಂದ ಸ್ಟೇಷನ್ನಿಗೆ ಬಂದ ನಿಂತಿದ್ವಿ. ಮುಂಬೈಕ್ಕ ಹೋಗೊ ಟ್ರೇನ್ ಬಂತು ನಾವು ಲೇಡಿಸ್ ಬೋಗಿಯೊಳಗ ಹತ್ತಿದ್ವಿ. ಬೋಗಿ ಪೂರ್ತಿ ಖಾಲಿನ ಇತ್ತು. ನಮ್ಮ ಫ್ಯಾಮಿಲಿಯವರ ಮಾತ್ರ ಇದ್ವಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ