ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಮಾರ್ಗ ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾ. ಕಾ.. ಕಾಗೆ. . . ನೀ ಏಕೆ ಹೀಗೆ?: ಅಖಿಲೇಶ್ ಚಿಪ್ಪಳಿ

ನೆನಪಿದೆಯೇ? ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈಸೋಫನ ಕಾಗೆ ನೀರು ಕುಡಿದ ಕತೆ. ಹೂಜಿಯ ತಳಭಾಗದಲ್ಲಿದ್ದ ನೀರು ಕಾಗೆಗೆ ಎಟಕುತ್ತಿರಲಿಲ್ಲ. ಬುದ್ಧಿವಂತ ಕಾಗೆ ಅಕ್ಕ-ಪಕ್ಕದಲ್ಲಿರುವ ಕಲ್ಲುಗಳನ್ನು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ನೀರನ್ನು ಕುಡಿದು ಬಾಯಾರಿಸಿಕೊಂಡಿತು. ಕಾಗೆಯ ಬುದ್ಧಿಮತ್ತೆಯನ್ನು ಹೊಗಳಲು ಈ ಕತೆಯನ್ನು ಸೃಷ್ಟಿ ಮಾಡಿರಬೇಕು ಎಂದು ಕೊಂಡರೆ ತಪ್ಪು, ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತಿಕೆ ಕಾಗೆಗಳಿಗೆ ಇದೆ.  ವಿಜ್ಞಾನಿಗಳು ಯಾವುದೆಲ್ಲಾ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತಾರೆ. ಭೂಮಿಯ ಮೇಲೆ ಇರುವ ಚರಾಚರಗಳನ್ನೆಲ್ಲಾ, ಹುಡುಕಿ, ಹೆರಕಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ: ಪದ್ಮಾ ಭಟ್

                            ಪ್ರೀತಿಯ ಅಮ್ಮ.. ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ  ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು..  ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು. ನಿನ್ನ ಪತ್ರವು ಕೇವಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 69): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು? ೨.    ಬಿಸಿಸಿಐ (BCCI) ನ ವಿಸ್ತೃತ ರೂಪವೇನು? ೩.    ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು? ೪.    ಕಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ? ೫.    ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು? ೬.    ಅಂತರರಾಷ್ರ್ಟೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು? ೭.    ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? ೮.    ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬ್ಲಾಕ್ ಎಂಡ್ ಲೈಪ್ ಕಲರ್ ಫುಲ್ ಕನಸು ಕಾಣುತ್ತದೆ: ಅಜ್ಜೀಮನೆ ಗಣೇಶ

“Holi is the day to express love with colors. It is a time to show affection. All the colors that are on you are of love!” ಬಣ್ಣಗಳಲ್ಲೂ ಒಲವಿನ ಒಲುಮೆಯನ್ನೆ ಕಾಣುತ್ತಾನೆ ಕ್ರೇಜಿ ಗುರು ಓಶೋ… ಹೋಳಿ ಬಗ್ಗೆ ಏನಾದ್ರು ಬರೆಯಿರಿ, ಅಂತ ಪಂಜುವಿನ ನಟರಾಜು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ಸಹ ಮತ್ತದೆ ..ಓಶೋ..ಕಾರಣ ಸಿಂಪಲ್.. ಕೈಲಿರೋ ಹಿಡಿ ಬಣ್ಣವನ್ನು ಎದುರಿದ್ದವರ ಮುಖಕ್ಕೆ ಎರಚಿ, ಅವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಕು ಮತ್ತು ಅದರೊಂದಿಗೆ ಜೀವನದ ತಳುಕು: ರೋಹಿತ್ ವಿ. ಸಾಗರ್

ಬಹಳ ಹಿಂದಿನಿಂದಲೂ ಮಾನವನ ಕುತೂಹಲವನ್ನು ಅತಿಯಾಗಿ ಕೆರಳಿಸುತ್ತಿರುವ ವಿಷಯಗಳಲ್ಲಿ ಬೆಳಕು ಸಹ ಒಂದು. ನಮ್ಮ ಜೀವನದಲ್ಲಿ  ವಿವಿಧ ಮಜಲುಗಳಲ್ಲಿ ವಿವಿಧ ರೀತಿ-ನೀತಿಗಳಲ್ಲಿ ಬೆಳಕು ನಮ್ಮೊಂದಿಗೆ ಬೆರೆತು ಹೋಗಿದೆ. ಜೊತೆಗೆ ಅವೆಲ್ಲವಕ್ಕೂ ಸಂಬಂಧಪಟ್ಟ ವಿವಿಧ ಪ್ರಶ್ನೆಗಳನ್ನೂ ನಮ್ಮಲ್ಲಿ ಹುಟ್ಟು ಹಾಕುತ್ತಿದೆ. ಬೆಳಕಿನಲ್ಲಿ ಹಸಿರಾದ ಎಲೆ ಹಸಿರಾಗಿಯೇ ಏಕೆ ಕಾಣುತ್ತದೆ ? ಆಕಾಶ ಹಗಲಿನಲ್ಲಿ ನೀಲಿಯಾಗಿ ಬೆಳಗ್ಗೆ ಮತ್ತು ಸಂಜೆ ಕೆಂಪಾಗಿ ಹಾಗೂ ರಾತ್ರಿಯಲ್ಲಿ ಕಪ್ಪಾಗಿ ಕಾಣುವುದೇಕೆ ? ಎಂಬ ಎಷ್ಟೋ ಪ್ರಶ್ನೆಗಳು ನಮ್ಮ ನಿಮ್ಮೆಲ್ಲರ ಮನಗಳಲ್ಲಿ ಹುಟ್ಟುತ್ತವೆಯಾದರೂ, ಉತ್ತರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆವವಳೂ: ಅನಿತಾ ನರೇಶ್ ಮಂಚಿ

ಹೆಸರು ಕೇಳಿ ಮಾರ್ಚ್ ಎಂಟು ಬಂದೇ ಬಿಡ್ತಲ್ಲಾ ಅಂದುಕೊಳ್ಳಬೇಡಿ. ನಾನಂತೂ ಮಹಿಳೆಯರ ದಿನಾಚರಣೆಯನ್ನು ಒಂದು ದಿನಕ್ಕೆ ಆಚರಿಸುವವಳಲ್ಲ. ಎಲ್ಲಾ ದಿನವೂ ನಮ್ಮದೇ ಅಂದ ಮೇಲೆ ಆಚರಣೆಯ ಮಾತೇಕೆ?  ಸಮಯವೇ ಇಲ್ಲದಷ್ಟು ಗಡಿಬಿಡಿಯಲ್ಲಿರುವಾಗ  ಪ್ರೀತಿ ತುಂಬಿದ ಮಾತುಗಳನ್ನು ಕೇಳಿ ಯಾವಾಗೆಲ್ಲ ಮನಸ್ಸು ಉಲ್ಲಾಸವಾಗುತ್ತೋ ಆ ಎಲ್ಲಾ ದಿನಗಳು ನನ್ನವೇ ಅಂದುಕೊಂಡಿದ್ದೇನೆ. ಈಗ ಮೈನ್ ಮುದ್ದಾ ಕ್ಕೆ ಬರೋಣ. ಸುಮ್ಮನೆ ಅಲ್ಲಿಲ್ಲಿ ಅಲೆಯುವಾಟ ಯಾಕೆ ಬೇಕು?  ತಿಂಡಿಗೆ ಏನು ಮಾಡೋದು?  ಇದೊಂದು ಎಲ್ಲಾ ಮನೆಯ ಗೃಹಿಣಿಯರಿಗೆ ಕಾಡುವ ಮಿಲಿಯನ್ ಡಾಲರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಹೋಳಿ ಕಾವ್ಯ ಧಾರೆ

ಹಿಗ್ಗಿನ ಹೋಳಿ ಶೋಭಿಸುತಿದ್ದವು ಮೊಗಗಳು ಬಣ್ಣಗಳ ಸಮ್ಮಿಲನದಿಂದ, ಬೆಳಗುತಿದ್ದವು ಕಣ್ಣುಗಳು ಅಂತರಾಳದಲ್ಲಿರುವ ಆನಂದದಿಂದ, ಥಳಿಥಳಿಸುತಿದ್ದವು ತೊಯ್ದ ಉಡುಪುಗಳು ರಂಗುರಂಗಿನ  ಲೇಪನದಿಂದ. ಎಲ್ಲಾ ದಿನಗಳಲ್ಲಿದ್ದಂತೆ ಆತುರವಿರಲಿಲ್ಲ, ಮಕ್ಕಳಿಗೆ ಶಾಲೆಯ ಗೋಜಿರಲಿಲ್ಲ, ವಯಸ್ಕರಿಗೆ ವೃತ್ತಿಯ ಲಕ್ಷ್ಯವಿರಲಿಲ್ಲ, ವೃದ್ಧರಿಗೆ ಸಂಕೋಚವಿರಲಿಲ್ಲ, ಮಕ್ಕಳಾಗಿದ್ದರು ಎಲ್ಲಾ ಪ್ರಕೃತಿಯ, ಎರಚುತ್ತಾ ರಂಗುರಂಗಿನ ಓಕುಳಿಯ. ಭೇದವಿರಲಿಲ್ಲ ಜಾತಿ, ಮತ, ವರ್ಗಗಳ, ಸುಳಿವಿರಲಿಲ್ಲ ಕಷ್ಟ ಕಾರ್ಪಣ್ಯಗಳ, ಎಲ್ಲರೂ ಭಾಗ್ಯವಂತರು ಅಲ್ಲಿ, ಹಿಗ್ಗಿನ ಸುಗ್ಗಿಯ ಸೊಬಗಿರುವಲ್ಲಿ, ಹಂಚುತಿದ್ದರು ಸಿಹಿ ಸಂತೋಷಗಳ, ಹಚ್ಚುತ್ತಾ ರಂಗುರಂಗಿನ ಬಣ್ಣಗಳ. ಉರಿಸಲಾಗಿತ್ತು ಅಗ್ನಿ ಈಗಾಗಲೇ, ಚಂದಿರನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಂಗ್ ರಂಗಿನ ಹೋಳಿಹಬ್ಬದ ಹಿನ್ನೆಲೆ : ಶುಭರಾಣಿ. ಆರ್

ನಮ್ಮ ಭಾರತ ದೇಶದಾದ್ಯಂತ  ಸಡಗರದಿಂದ   ಆಚರಿಸಲ್ಪಡುವ  ರಂಗು ರಂಗಿನ ಹಬ್ಬ  ಹೋಳಿಹಬ್ಬ. ಮಾಘ -ಫಾಲ್ಗುಣ ಮಾಸಗಳ ಶಶಿರ ಋತು  ಮುಗಿದು ಚೈತ್ರ ಮಾಸ ವಸಂತ ಋತು  ಕಾಲಿಡುವಾಗ ಹೊಸಚಿಗುರು ಮೂಡಿ,ಹೂಗಳು  ಅರಳಿನಿಂತು  ನಲಿಯುವಾಗ ನಾವುಗಳು  ಸಂತಸದಿಂದ  ರಂಗಿನಾಟವನ್ನು  ಆಡಲು ತೊಡಗುತ್ತೇವೆ. ಪಾಲ್ಗುಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ  ದಿನದಂದು ಹೋಳಿಹಬ್ಬವನ್ನು  ಆಚರಿಸಲಾಗುತ್ತದೆ.  ಈ ಹಬ್ಬವನ್ನು  ಒಂದೊಂದು ರಾಜ್ಯದಲ್ಲೂ  ಅದರದೆಯಾದ  ನಾಮಾವಳಿಗಳಿಂದ ಆಚರಿಸುವರು. ನಮ್ಮಲ್ಲಿ  "ಹೋಳಿಹಬ್ಬ, ಕಾಮನ ಹಬ್ಬ  ಅಥವಾ ಕಾಮದಹನ ,ರಂಗಿನ ಹಬ್ಬ(ಬಣ್ಣಗಳ ಹಬ್ಬ ) "ಎನ್ನುತ್ತೇವೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಮಣ್ಣನ ಮಕ್ಕಳು: ಆದರ್ಶ ಸದಾನ೦ದ ಅರ್ಕಸಾಲಿ

ಎ೦.ಬಿ.ಬಿ.ಎಸ್ ನ ಎರಡನೆಯ ಪರ್ವಕ್ಕೆ(phase) ಕಾಲಿಟ್ಟ ಕಾಲ. ಒಟ್ಟು ಒ೦ದೂವರೆ ವರ್ಷದ ಮೂರು ಪರ್ವಗಳಿರುತ್ತವೆ. ಮೊದಲನೆಯ ಪರ್ವದಲ್ಲಿ ಹೊಸ ವಾತಾವರಣಕ್ಕೆ ಹೊ೦ದಿಕೊ೦ಡು, ಹೊಸ-ಹೊಸ ವಿಷಯಗಳನ್ನು ಅರಿತು ತಿಳಿದುಕೊಳ್ಳುವ ಸಾಹಸದಲ್ಲಿ ಸವೆದರೆ, ಎರಡನೆಯ ಪರ್ವ ಇದರ ತದ್ವಿರುದ್ದವಾಗಿ ಮಜಾ ಮತ್ತು ಉಡಾಳತನದಲ್ಲಿ ಕಳೆಯುತ್ತದೆ. ಇದು ತಲೆಮಾರುಗಳಿ೦ದ ಬ೦ದ ಕಟ್ಟುನಿಟ್ಟಾದ ಪದ್ದತಿ. ಮೊದಲನೆಯ ಪರ್ವದಲ್ಲಿ ಅನುಭವಿಸಿದ ಹಿ೦ಸಾಜನಕ ಸ್ಥಿತಿಗಳನ್ನು ( ಸೀನಿಯರ್ ಗಳ ರಾಗಿ೦ಗ್ ನಿ೦ದ ಹಿಡಿದು ವೈವಾ(viva)ದಲ್ಲಿ ಸರ್ ಗಳ ರಾಗಿ೦ಗ್ ) ಮರೆಯಲು, ಅದಾಗಲೇ ದೇಹದಲ್ಲಿ ತಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ: ಸಚಿನ್ ಎಂ. ಆರ್.

ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೋಳಿ ಹಬ್ಬದಲ್ಲಿ ‘ಹಾಲಕ್ಕಿ ಗೌಡರ ಸುಗ್ಗಿ ರಂಗು’: ಎಸ್. ಎಸ್. ಶರ್ಮಾ

ಉತ್ತರ ಕನ್ನಡ ಜಿಲ್ಲೆಯ ಜಾನಪದ ಮತ್ತು ಪಾರಂಪರಿಕ ವಿಶೇಷತೆ ಕರ್ನಾಟಕ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣನೀಯ ಜನಸಂಖ್ಯೆಯಲ್ಲಿರುವ ಹಾಲಕ್ಕಿ ಜನಾಂಗದವರು ಆಚರಿಸುವ ಹೋಳಿಯಲ್ಲಿ ಕಲೆ, ಜಾನಪದ, ಸಂಸ್ಕೃತಿಯ ಜೊತೆಗೆ ಪರಂಪರೆಯ ಸೊಗಡು ವಿಜ್ರಂಭಿಸುವುದನ್ನು ಇಂದಿಗೂ ನೋಡಬಹುದು. ಹೋಳಿಯನ್ನು ಸುಗ್ಗಿ ಸಂಭ್ರಮವಾಗಿ ಊರಿಂದೂರಿಗೆ ಕುಣಿದು ಕುಪ್ಪಳಿಸಿ ರಂಗಾಗುವ 'ರಂಗುರಂಗಿನ' ಹಾಲಕ್ಕಿ ಗೌಡರುಗಳು ಇಲ್ಲಿನ ಬದುಕಿನಲ್ಲಿ ಅಚ್ಚೊತ್ತಿದ ಹೆಜ್ಜೆಗಳ ಕಿರು ಪರಿಚಯ ಇಲ್ಲಿದೆ.  ಕರಾವಳಿ, ಬಯಲುಸೀಮೆ ಹಾಗೂ ಮಲೆನಾಡು ಈ ಮೂರೂ ನಿಸರ್ಗ ಸಹಜ ಲಕ್ಷಣಗಳನ್ನು ಒಳಗೊಂಡಿರುವ ಉತ್ತರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾನವ ಮತ್ತು ಪ್ರಕೃತಿಯ ಅವಿನಾಭಾವ ಆಚರಣೆ ಹೋಳಿ ಹುಣ್ಣಿಮೆ: ಬೆಳ್ಳಾಲ ಗೋಪಿನಾಥ ರಾವ್

ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳಲ್ಲಿ ಹಬ್ಬ ಹರಿದಿನಗಳು ಮಾನವತೆ ಸ್ನೇಹ ಸೌಹಾರ್ದತೆಯ ಪ್ರತೀಕ. ಅಂತಹ ಸೌಹಾರ್ದತೆಯ ಹಬ್ಬ ಈ ಹೋಳಿ ಹುಣ್ಣಿಮೆ. ಶಿಶಿರದ ಚಳಿಗಾಲ ಮುಗಿದು ಚಿಗುರ ಚೈತ್ರದ ವಸಂತ ಋತು ಆರಂಭವಾಗುವ ಕಾಲ. ಸಕಲ ಜೀವ ರಾಶಿಗಳಲ್ಲಿ ಚೈತನ್ಯ ಚಿಲುಮೆ ಉಕ್ಕಿಸೋ ಮಾಸವಿದು. ಮಾಮರ ಚಿಗುರೊಡೆದು ಕೋಗಿಲೆಯ ದನಿ ಮೂಡುವ ಪವಿತ್ರ ಕಾಲದಲ್ಲೇ ಈ ಹೋಳಿ ಅಥವ ಹೋಲಿ ಹಬ್ಬ ಆಚರಿಸಲ್ಪಡುತ್ತದೆ. ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ವಿಭಿನ್ನ ಚಿತ್ರ ವಿಚಿತ್ರವಾಗಿ ಆಚರಿಸೋ ಹಬ್ಬವಿದು. ನಮ್ಮಲ್ಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವಳೊಡನೆ ಕೊನೇ ಹೋಳಿ…: ಸಖ್ಯಮೇಧ

ಅವಳ ಕೆನ್ನೆಯ ಗುಳಿ ತುಂಬಾ ಬಣ್ಣ ಬಳಿದ ಆ ಕೊನೇ ಹೋಳಿ ನೆನೆದರೇ ಮನದಲ್ಲಿ ವಿಷಾದದ ಗಾಳಿ ಏಳುತ್ತದೆ. ಏಕೆಂದರೆ ಅದೇ ಕೊನೆ, ಬಣ್ಣದ ಹೋಳಿಯೂ ಅವಳೊಡನೆ ದೂರಾಯಿತು….ಹೋಳಿಯ ತಲೆಬುಡ ತಿಳಿದಿರದಿದ್ದರೂ ಅದೊಂದು ನಿರೀಕ್ಷೆಯ ಹಬ್ಬ. ಬಟ್ಟಲುಕಂಗಳ ಆ ಹುಡುಗಿಯ ನುಂಪು ಕೆನ್ನೆಗಳಿಗೆ ಮೃದುವಾಗಿ ಬಣ್ಣ ಸವರಿ ಕಂಗಳಲ್ಲಿ ಮೂಡುವ ಬೆಳಕು ಕಾಣಲೆಂದು ಕಾತರಿಸಿದ ಹಬ್ಬ. ಜೊತೆಗೆ ಓರಗೆಯವರ ಜತೆಗೂಡಿ ಬಣ್ಣದ ಲೋಕದಲ್ಲಾಡುತ್ತಾ ಕಳೆದು ಹೋಗುವ ಸಂತಸ … ಅಪ್ಪನ ಕಿಸೆಯಿಂದ ಎಗರಿಸುವುದಲ್ಲದೇ ಶಾಲೆಗೆ ನಡೆದುಕೊಂಡೇ ಹೋಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಲೈಕು ಕಾಮೆಂಟುಗಳಲ್ಲಿ ಮರೆಯಾದ ಲೈಫು: ಪ್ರಶಸ್ತಿ ಪಿ.

ಮೊನ್ನೆ ವಾಟ್ಸಾಪಲ್ಲೊಂದು ವೀಡಿಯೋ ನೋಡ್ತಿದ್ದ್ರೆ. ಒಬ್ಬ ಸಮುದ್ರದಲ್ಲಿ ಮುಳುಗೋಕೆ ಅಂತ ಕಡಲಮಧ್ಯದಲ್ಲಿ ತಯಾರಾಗಿ ಕೂತಿರ್ತಾನೆ. ಮೀನುಗಳು ಅವನ ಕಡಲ ವಸ್ತ್ರ ತೊಟ್ಟ ಕಾಲಿಗೆ ಮುತ್ತಿಕ್ಕುತಿರುತ್ವೆ. ಆದ್ರೆ ಅವ ತನ್ನ ಸ್ಮಾರ್ಟ್ ಫೋನಲ್ಲಿ ಏನೋ ಮಾಡೋದ್ರಲ್ಲಿ ಬಿಸಿ ! ಇನ್ನೊಬ್ಬ ಟಾಯ್ಲೆಟ್ಟಲ್ಲಿ ತಾನು ಬಂದ ಕೆಲಸವನ್ನೇ ಮರೆತು ಸ್ಮಾರ್ಟ್ ಫೋನಲ್ಲಿ ಮುಳುಗಿ ಅದನ್ನಲ್ಲಿ ಬೀಳಿಸಿಕೊಳ್ತಾನೆ. ಮತ್ತೊಬ್ಬಳು ಆಯಿಲ್ ಮಸಾಜ್ ಮಾಡಿಸ್ಕೊಳ್ಳೋಕೆ ಅಂತ ಬಂದ ಪೇಷಂಟನ್ನೂ ಮರೆತು ತನ್ನ ಸ್ಮಾರ್ಟ್ ಫೋನಲ್ಲಿ ಮುಳುಗಿರ್ತಾಳೆ. ಉದಾಹರಣೆಗಳು ಹೀಗೇ ಮುಂದುವರೆದು ಇಷ್ಟೆಲ್ಲಾ ಹಚ್ಚಿಕೊಳ್ಳುವಿಕೆ(addiction) … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾಪ್ರಭುವಿನ ಮಕ್ಕಳು ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ. ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು. ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು. “ಹೊಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಣ್ಣದ ಸಂಜೆ: ಪ್ರಸಾದ್ ಕೆ.

ಬಾನಿನಲ್ಲಿ ಬಣ್ಣಗಳು ಮಾತಾಡತೊಡಗಿದ್ದವು.  ಹೋಳಿ ಹಬ್ಬದ ಸಂಜೆ. ಅವನು ಒಂದರ ಹಿಂದೊಂದು ಸಿಗರೇಟುಗಳನ್ನು ಸುಡುತ್ತಾ ಸುಮ್ಮನೆ ಸಮುದ್ರವನ್ನು ದಿಟ್ಟಿಸುತ್ತಿದ್ದ. ಮಾತನಾಡುವುದಕ್ಕೇನೂ ಇಲ್ಲವೆಂಬಂತೆ ಅವಳೂ ತುಟಿ ಬಿಚ್ಚಲಿಲ್ಲ. ಹನ್ನೊಂದು ವರ್ಷಗಳ ಸುದೀರ್ಘ ಅವಧಿಯ ನಂತರ ಇಬ್ಬರೂ ಆಕಸ್ಮಿಕವಾಗಿ ಪಣಂಬೂರಿನ ಸಮುದ್ರತಟದಲ್ಲಿ ಎದುರುಬದುರಾಗಿದ್ದರು. ಅವನು ಸರಕಾರಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಅವಳು ನಗರದಲ್ಲಿ ತಳವೂರುತ್ತಿರುವ ದಂತ ವೈದ್ಯೆ. ಅಂದಹಾಗೆ ಇಬ್ಬರೂ ಒಂದಾನೊಂದು ಕಾಲದಲ್ಲಿ ಪ್ರೇಮಿಗಳು.  ಎಷ್ಟು ಚೆನ್ನಾಗಿದ್ದ ಇವ ಥೇಟು ಶಾರೂಖನಂತೆ, ಚಾಕ್ಲೇಟು ಬಾಯ್ ಇಮೇಜ್ ಇದ್ದ ಹುಡುಗ. ಒಣಕಲಾಗಿ ಹೋಗಿದ್ದಾನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭರವಸೆಯ ಬಣ್ಣದ ಬದುಕು: ಸೀಮಾ ಶಾಸ್ತ್ರಿ

ಧೂಳಿನಿಂದ ಹಳೆಯದಾಗಿದ್ದ ಬೀದಿ ದೀಪವು ಅದರ ಕೆಳಗೆ ಕುಳಿತಿದ್ದ ಆ ಯುವ ಗುಂಪಿನ ಮನದಂತೆ ಮಬ್ಬಾಗಿತ್ತು… ಕತ್ತಲೆಯಲ್ಲಿ ಎಲ್ಲವೂ ಅಸ್ಪಷ್ಟ… ಅಲ್ಲಿದ್ದ ಗೆಳೆಯ ಗೆಳತಿಯರ ಗುಂಪು ಮನದಲ್ಲಿದ್ದ ದುಗುಡವನ್ನು ಹಂಚಿಕೊಳ್ಳುತ್ತಿದ್ದರು. ಊರಿನಲ್ಲಿದ್ದ ಸಾಮಾಜಿಕ ಅನಿಷ್ಟವಾದ ಕೋಮು ಜಗಳದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತಿದ್ದರು. "ಶಿವನೂ ದೇವರೇ, ಅಲ್ಲನೂ ದೆವರೇ ಅಲ್ಲವೇ?  ಅವರೇನು ವೈರಿಗಳಲ್ಲವಲ್ಲ… ಆದರೆ ಅವರನ್ನು ಅನುಸರಿಸೋ ಈ ಹುಲುಮಾನವರಲ್ಲಿ ಯಾಕೆ ಈ ರೀತಿ ?" ಸಲ್ಮಾನ್ ಹೇಳಿದ.  " ನನ್ನ ಪ್ರಕಾರ ಹೇಳೊದಾದ್ರೆ… ಯಾರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೧೦): ಅಖಿಲೇಶ್ ಚಿಪ್ಪಳಿ

(ಕೊನೆಯ ಕಂತು) ಈ ಲೇಖನ ಮಾಲೆಯಲ್ಲಿ ಎರಡೂ ವರದಿಯ ಹಲವು ವಿಚಾರಗಳನ್ನು ವಿವರವಾಗಿ ನೋಡಲಾಗಿದೆ. ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರಿಗೆ ವರದಿಯ ಪ್ರಾಮಾಣಿಕ ನೋಟ ಬೇಕಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು, ಹೂಡಿಕೆದಾರರು ಹಾಗೂ ರಾಜಕಾರಣಿಗಳು ಸೇರಿಕೊಂಡು ವರದಿಯನ್ನು ತಿರುಚಿ ಜನರನ್ನು ತಪ್ಪ ದಾರಿಗೆ ಎಳೆಯುತ್ತಿದ್ದಾರೆ. ದೂರದೃಷ್ಟಿಯಿಂದ ಯೋಚಿಸುವುದಾದರೆ, ಮಾಧವ ಗಾಡ್ಗಿಳ್ ವರದಿಯು ಹೆಚ್ಚು ಜನಸ್ನೇಹಿ ಹಾಗೂ ಪರಿಸರಸ್ನೇಹಿಯಾಗಿದೆ. ಮಾಧವ ಗಾಡ್ಗಿಳ್ ವರದಿಗೆ ವ್ಯಾಪಕ ವಿರೋಧ ಎದುರಾಗಿದ್ದರಿಂದ, ಈ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಜನಸ್ನೇಹಿ ಹಾಗೂ ಪರಿಸರಸ್ನೇಹಿಗೊಳಿಸುವ ಅಂಶಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ