ಸಾಹಸ-ಸಾವುಗಳ ನಡುವಣ ಚಾರಣ..: ಪ್ರಶಸ್ತಿ ಅಂಕಣ

  ನೀರಿದ್ದಲ್ಲೆಲ್ಲಾ ಹೋಗದಾದ್ರೆ ಹೋಗ್ಲೇಬೇಡ ಅನ್ನೋ ಅಮ್ಮ, ಹುಡುಗ್ರು.. ಏನೋ ಆಸೆ ಪಟ್ತಿದಾರೆ ಸೇಫಾಗಿ ಹೋಗ್ಬರ್ಲಿ ಬಿಡು ಅನ್ನೋ ಅಪ್ಪ, ಹುಚ್ಚುಕೋಡಿ ಮನಸು.. ಇದು ಹದಿನಾರರ ವಯಸು ಎಂಬೋ ಕವಿವಾಣಿಯ ತರಹದ ಹುಚ್ಚು ಮನಸಿನ ಸ್ವಲ್ಪ ಹೆಚ್ಚೇ ಧೈರ್ಯದ , ರೋಚಕ ಕನಸುಗಳ ಹುಡುಗರು… ಯಾವುದೇ ಚಾರಣ ಅಂದಾಗ ಈ ಮೂರು ಚಿತ್ರಗಳು ಮನಸ್ಸಿಗೆ ಬಂದೇ ಬರುತ್ತೆ. ಚಾರಣದಲ್ಲಿ ಸಾಹಸ ಮತ್ತು ಸಾವುಗಳ ನಡುವೆ ಕೂದಲೆಳೆಯ, ಕೆಲವಕ್ಷರಗಳ ವ್ಯತ್ಯಾಸವಷ್ಟೇ. ಕುಮಾರಪರ್ವತದಿಂದ ಕೊಡಚಾದ್ರಿಯವರೆಗಿನ ಚಾರಣಗಳಲ್ಲಿ, ಜಲಪಾತದ ಜಾರುಗಳಲ್ಲಿ, ನೀರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾತಿ! :ಡಾ. ಗವಿ ಸ್ವಾಮಿ

  ನಾಗರಹೊಳೆ ಮತ್ತು ಬಂಡಿಪುರ ರಾಷ್ಟ್ರೀಯ ಉದ್ಯಾನವನಗಳ ನಡುವೆ ಓಂಕಾರ್ ರೇಂಜ್ ಎಂಬ ಅರಣ್ಯ ಇದೆ. ಅದರ ಸೆರಗಿನಲ್ಲಿ ಶಿವಕುಮಾರಪುರ ಎಂಬ ಗ್ರಾಮ ಇದೆ. ಆ ಗ್ರಾಮದ ಜನರಿಗೆ ನಿತ್ಯವೂ ಕಾಡುಪ್ರಾಣಿಗಳೊಂದಿಗೆ ಸಂಘರ್ಷ ನಡೆಸಬೇಕಾದ ಪರಿಸ್ಥಿತಿ . ಇಂಡೋ-ಪಾಕ್ ಗಡಿಗಿಂತ ಒಂದು ಕೈ ಹೆಚ್ಚು ಉದ್ವಿಗ್ನತೆಯನ್ನು ಇಲ್ಲಿ ಕಾಣಬಹುದು. ಕಾಡು ಪ್ರಾಣಿಗಳೇ ಇಲ್ಲಿ ರೈತರ ಪಾಲಿನ terrorist ಗಳು! ರೈತರಿಗೂ ಫಾರೆಸ್ಟಿನವರಿಗೂ ಇಲ್ಲಿ ನಿರಂತರ ತಿಕ್ಕಾಟ. ನಮ್ಮ ದನಗಳನ್ನು ಫಾರೆಸ್ಟಿನ  ಬೌಂಡರಿ ದಾಟಲು ಬಿಡುವುದಿಲ್ಲ; ಹಿಂದೆಲ್ಲಾ ಸಣ್ಣ ಪುಟ್ಟ ಕಟ್ಟಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡಿಗರ ಬೇಜವಾಬ್ದಾರಿಯಿಂದಲ್ಲವೆ ಕನ್ನಡನಾಡು ಪರಭಾಷಿಕರಿಂದ ತುಂಬುತ್ತಿರುವುದು….? : ನಿಶಾಂತ್ ಜಿ.ಕೆ

      ಮೊನ್ನೆ ಧಾರವಾಡದಿಂದ ಬೆಂಗಳೂರಿಗೆ ಹೋಗಿದ್ದೆ ಹಾಗೆ ಕಾರ್ಯ ನಿಮಿತ್ತ ಹೋದವನು ಅಲ್ಲೆ ರಾಜರಾಜೇಶ್ವರಿ ನಗರದಲ್ಲಿರುವ ಅಕ್ಕನ ಮನೆಗೆ ಭೇಟಿ ಇತ್ತೆ, ಹೋದ ಕೂಡ್ಲೆ ಎಲ್ಲಿಲ್ಲದ ಖುಷಿಯಿಂದ ಓಡಿ ಬಂದ ಪುಟ್ಟ ಪ್ರಾರ್ಥನ ಕೈ ಹಿಡಿದು ಒಳಗೆ ಎಳೆದೊಯ್ದು ತನ್ನ ಹೊಸ ಆಟಿಕೆಗಳನ್ನ ತೋರಿಸೋಕೆ ಶುರು ಮಾಡಿದ್ಲು, ಸ್ವಲ್ಪ ಸಮಯ ವಿಶ್ರಾಂತಿ ಬಳಿಕ ಮತ್ತೆ ಅವರು ಕಟ್ಟಿಸುತ್ತಿರುವ ಹೊಸ ಮನೆ ತೋರಿಸೋಕೆ ಇಲ್ಲೆ ವಾಕಿಂಗ್ ಹೋಗೋಣ ಬಾ ಮಾಮ ಅಂತ ಕರೆದುಕೊಂಡ್ ಹೋದ್ಲು. ಹೋದ ಸ್ವಲ್ಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರ್ಥವಾಗದವರು:ಉಮೇಶ್ ದೇಸಾಯಿ

  ವಾಸುದೇವ ಸುಳ್ಳದ ಗಲಿಬಿಲಿಗೊಂಡಿದ್ದ ಅವನ ಸ್ಥಿತಿಗೆ ಕಾರಣ ಬೆಂಗಳೂರಿನ ಗಿಜಿಗುಡುವ ಟ್ರಾಫಿಕ್ ಮಾತ್ರ ಕಾರಣವಾಗಿರದೇ ಅಂದು ಮುಂಜಾನೇ ಅವ್ವ ಮಾಡಿದ ಫೋನೂ ಕಾರಣವಾಗಿತ್ತು. ಅವ್ವ ಫೋನು ಮಾಡಿ ಅಂದು ಸಂಜೆ ಕಲ್ಯಾಣ ಕಾಕಾನಿಗೆ ಭೇಟಿಯಾಗಬೇಕೆಂದೂ ಹೆಚ್ಚಿನ ವಿಷಯ ಅವನಿಂದಲೇ ತಿಳಿಯುವುದಾಗಿ ಹೇಳಿದ್ದಳು. ವಾಸು ಕೆದಕಿ ಕೇಳಿದರೂ ಅವ್ವ ಬಾಯಿ ಬಿಟ್ಟಿರಲಿಲ್ಲ. ಮಧ್ಯಾಹ್ನ ಲಂಚ ನಲ್ಲಿ ಕಲ್ಯಾಣಕಾಕಾನ ಫೋನು ಬಂದಾಗ ವಾಸು ಅಂದಿನ ಸಂಜೆ ಭೇಟಿಯಾಗುವುದಾಗಿ ಹೇಳಿದ್ದ. ಆ ಕಾರ್ಯಕ್ರಮದ ಅನ್ವಯವೇ ಆಫೀಸಿನಿಂದ ಬೇಗನೆ ಹೊರಟವ ಕಾರ್ಪೊರೇಷನ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು

  ಅಮ್ಮ ಲಾಲಿ ಜೋ  ಅಮ್ಮ ನೀನೆ ಬಂದು ನೋಡು  ಬರೆದ ನಾನು ನಿನ್ನ ಮೊಗವ  ನಾ ನಿನಗೆ ತೋರುವ ಮುನ್ನಾ  ಯಾಕೆ ಅಮ್ಮ ದೂರವಾದೆ ಇನ್ನಾ  ಪುಟ್ಟ ಕಂಗಳು ಸುತ್ತ ನೋಡಿ  ಕೇಳುತಿಹವು ನನ್ನಾ … ನೀ ಬಂದು ಲಾಲಿ ಹಾಡೆ  ಅಮ್ಮ  ಲಾಲಿ ಲಾಲಿ ಜೋ ಲಾಲಿ ಹಾಡೆ  ಅಮ್ಮ  ಲಾಲಿ ಲಾಲಿ ಜೋ ಲಾಲಿ ಹಾಡೆ  ಅಮ್ಮ    ಕಣ್ಣೆ ಇರದ ಶಿವನೆ ನೋಡು  ಕರುಳ ಬಳ್ಳಿ ಕತ್ತರಿಸಿ ಕೊಟ್ಟ ಅವಳ  ಎದೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂಕ ಪ್ರೇಮ: ಮಹಾಂತೇಶ್ ಯರಗಟ್ಟಿ

  ಕೌಸಲ್ಯ ರಾಮ ಪೂಜಾ ಸಂಧ್ಯಾ ಪ್ರವ. . . . .! ಎಂದೂ ಸುಪ್ರಭಾತ ಕಿವಿಗೆ ಕೇಳುತ್ತಲೇ ಕಣ್ಣುತೆರೆದು ಗಡಿಯಾರ ಕೈಗೆತ್ತಿಕೊಂಡು ನೋಡಿದರೆ ಬೆಳಿಗ್ಗೆ ೬.೩೦ರ ಸಮಯ ಹೊದ್ದ ಹಾಸಿಗೆಯಲ್ಲ ಬದಿಗೆ ಸರಿಸಿ ಎದ್ದು ಲೈಟ್ ಆನ್ ಮಾಡಿದರೆ ಕರೆಂಟೇ ಇಲ್ಲಾ. ರಾಜ್ಯಧಾನಿಗೂ ತಗುಲಿದ ವಿದ್ಯುತ್ ಶಾಕ್ ಹಳ್ಳಿಗಳಿಗೆ ಒಂಭತ್ತು ಘಂಟೆಗಳ ಕಾಲ ಮಾತ್ರ ವಿದ್ಯುತ್ ಎಲ್ಲೋ ದಿನ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು ಇದ್ಯಾರಪ್ಪ ಟೇಪರೆಕಾರ್ಡ್‌ರು ಅಂತಾ ಬಾಗಿಲು ತೆರೆದು ನೋಡಿದರೆ – ಗುಳಿಕೆನ್ನೆ ಹುಡುಗಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮಲು ಮೋಜಿನ ಜೀವನದಲ್ಲಿ ಬದುಕಿಗೊಂದು ಸಂಕಲ್ಪ ಬೇಕು: ಪ್ರವೀಣ್ ದಾನಗೌಡ

    ಅರೆ ಉಪದೇಶಿಸುತ್ತಿರುವೆ ಎಂದುಕೊಂಡ್ರಾ, ಇಲ್ಲ ಉಪದೇಶವಲ್ಲಾ ಇದು ಒಂದು ಮಸ್ತಿ ಮಜದ ಘಟನೆ !  ಇದಕ್ಕೆ ನೀವು ಒಪ್ಪುತ್ತಿರೊ ಇಲ್ಲವೋ , ಈ ಜಗತ್ತು ಇಂದ್ರ ಲೋಕವನ್ನು ಮೀರಿದ ಸುಖ ಹಾಗೂ ಸೌಂದರ್ಯವನ್ನು ಹೊಂದಿದ ಜಗತ್ತು. ಇಲ್ಲಿ ರಂಬೆ ,ಊರ್ವಶಿ, ಮೇನಕೆಯರನ್ನು ಮೀರಿದ ರೂಪಶಿಯರು ಉಂಟು ಎಂದ ಮೇಲೆ ಈ ಜಗತ್ತು ಅಲ್ಲಿಗಿಂತಲು ಸೌಂದರ್ಯ ಪೂರಿತ ಜಗತ್ತೆ ಸರಿ, ಇನ್ನು ಅಮಲಿಗೆ ಮೋಜಿಗೆ ಸುಖಕ್ಕೆ ಇಂದ್ರನೇ ಇಲ್ಲಿಯ ಅಲ್ಕೋ ಹಾಲ್ ಬ್ರ್ಯಾಂಡ್ ಗಳನ್ನು ಆಮದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಿಳಿಯ ಮರ್ಸಿಡೀಸ್ ಬೆಂಝ್: ಉಪೇಂದ್ರ ಪ್ರಭು

  ’ಏನ್ ಬಾಬಾ ನೀನು, ಯಾವಾಗ ನೋಡಿದ್ರೂ ಬರೇ ಕನ್ನಡ ಕಥೆಗಳನ್ನೇ ಬರೀತೀಯಾ. ಇಂಗ್ಲಿಷ್‌ನಲ್ಲಿ ಬರೆದ್ರೆ ನಾವೂ ಓದ್‌ಬಹುದಲ್ವಾ’ ಕಂಪ್ಯೂಟರ್ ಎದುರು ಕೂತು ಟೈಪ್ ಮಾಡುವಲ್ಲಿ ಮಗ್ನನಾಗಿದ್ದ ನನ್ನನ್ನು ರೇಗಿಸುತ್ತಾಳೆ ಹದಿಹರೆಯಕ್ಕೆ ಕಾಲಿಡುತ್ತಿರುವ ದ್ವಿತೀಯ ಸುಪುತ್ರಿ ಸ್ವಾತಿ. ’ಏ ಹುಡ್ಗಿ, ಕಥೆಗಳಲ್ಲಿ ಕನ್ನಡ ಕಥೆ ಇಂಗ್ಲಿಷ್ ಕಥೆ ಎಂದೇನೂ ಇಲ್ಲ. ಕನ್ನಡ ಕಥೆಗಳನ್ನೇ ಬರೀತೀಯಾ ಅನ್ನುವ ಬದಲು ಕನ್ನಡದಲ್ಲೇ ಕಥೆಗಳನ್ನು ಬರೀತೀಯಾ ಅನ್ನೋದು ವ್ಯಾಕರಣಬದ್ಧವಾಗುತ್ತದೆ’- ನನ್ನ ಕನ್ನಡ ಪಾಂಡಿತ್ಯವನ್ನು ಕನ್ನಡ ಓದಲು ಬರೆಯಲು ಬಾರದ ನನ್ನ ಹೆಂಡತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ರಾಘವೇಂದ್ರ ಭಟ್ ರವರ ಚುಟುಕಗಳು

  ಕವಿತೆ ಹುಟ್ಟಿದ್ದು : ಭಾವಗಳು ಬತ್ತಿ ಹೋದಾವೆಂದು ಪದೇ ಪದೇ ನಿನ್ನೆದುರಲ್ಲೇ ಕುಳಿತೆ.| ನೀನು ಕಣ್ಣು ಮಿಟುಕಿಸಿ ಆಶ್ಚರ್ಯ ತೋರಿದಾಗಲೆಲ್ಲ ರೂಪುಗೊಂಡಿದ್ದೇ ಈ ಕವಿತೆ ||   ತಾಯಿ : ನಿನ್ನ ಮನದ ಹರಹು ಕಂಡದ್ದು ವಿಶಾಲ ಸಾಗರದೊಡಲಲ್ಲಿ | ವಿಶಾಲ ಸಾಗರದಷ್ಟು ಪ್ರೀತಿ ಉಂಡಿದ್ದು ತಾಯೇ ನಿನ್ನಯ ಮಡಿಲಲ್ಲಿ ||   ನೀ ಹೋಗುವಾಗ.. ಮರಳ ದಂಡೆಯಲಿ ಗೆಜ್ಜೆ ಪಾದಗಳ ಹೆಜ್ಜೆ ಗುರುತುಗಳ ಅಳಿಸಿದೆ | ಎನ್ನ ಹೃದಯದಲಿ ಹಚ್ಚೆ ಮೂಡಿಸಿ ಏಕೆ ಪ್ರೀತಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತ್ತರಿ ಕೈಗಳ ಕಲಾವಿದ:ವಾಸುಕಿ ರಾಘವನ್

  ಈ ವಾರ ಬೇರೇನೋ ಬರೆಯೋಣ ಅಂತ ಯೋಚನೆ ಮಾಡ್ತಾ ಇದ್ದೆ. ಆದರೆ ಈ ಸಿನಿಮಾ ನೋಡಿದೆ ನೋಡಿ, ಇದರ ಬಗ್ಗೆ ಬರೀದೇ ಇರಕ್ಕೆ ಆಗೋದೇ ಇಲ್ಲ ಅನ್ನಿಸಿಬಿಡ್ತು. ಆ ಚಿತ್ರ ಟಿಮ್ ಬರ್ಟನ್ ನಿರ್ದೇಶನದ ಜಾನಿ ಡೆಪ್ ಅಭಿನಯದ “ಎಡ್ವರ್ಡ್ ಸಿಜರ್ ಹ್ಯಾಂಡ್ಸ್”. “ಏವಾನ್” ಸೌಂದರ್ಯವರ್ಧಕ ಕಂಪನಿಯ ಸೇಲ್ಸ್ ವುಮನ್ ಪೆಗ್, ಗ್ರಾಹಕರನ್ನು ಹುಡುಕುತ್ತಾ ಹೊರಟಿರುವಾಗ ಪಾಳು ಬಿದ್ದ ಒಂದು ಮಹಲಿಗೆ ಬರುತ್ತಾಳೆ.  ಅಲ್ಲಿ ಅವಳಿಗೆ ಎಡ್ವರ್ಡ್ ಭೇಟಿ ಆಗುತ್ತೆ. ಮನುಷ್ಯರ ಒಡನಾಟವೇ ಇಲ್ಲದ ಎಡ್ವರ್ಡ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನಿಲ್ಲದೆ ನನಗೇನಿದೆ … : ಟಿ . ಜಿ. ನಂದೀಶ್

  ಜೀವದ ಗೆಳತಿ , ಆ ದಿನಗಳು, ಆ ಕ್ಷಣಗಳು ನನ್ನ ಪಾಲಿಗೆ ಸದಾ ಹಸಿರು. ಯಾಕಂದ್ರೆ ನನ್ನ ಉಸಿರು ನಿನ್ನ ತಾಕುವಷ್ಟು ಹತ್ತಿರದಲ್ಲಿದ್ದೆ ನೀನು, ನನ್ನುಸಿರು ನಿನ್ನ ಹೆಸರನ್ನೇ ಉಸಿರಾಗಿಸಿಕೊಂಡು ಉಸಿರಾಡುತ್ತಿದ್ದ ದಿನಗಳವು. ನಿನ್ನ ಮುದ್ದು ಮುಖ ನೋಡದೆ ಹತ್ತಿರತ್ತಿರ ಎರಡು ವರುಷಗಳೇ ಸರಿದು ಹೋದವು . ಕಾಲಗಳು ಬದಲಾದವು , ವ್ಯಕ್ತಿಗಳು ಬದಲಾದರೂ , ಕೊಂಚ ಮಟ್ಟಿಗೆ ಬದುಕು ಬದಲಾಯಿತಾದರೂ , ನಿನ್ನ ಮೇಲಿನ ನನ್ನ ಪ್ರೀತಿ ಒಂದಿನಿತು ಬದಲಾಗಲಿಲ್ಲ, ಬಡವಾಗಲಿಲ್ಲ , ಅದರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತೆ – ಚಿತ್ರಕತೆ – ನಿರ್ದೇಶಕ..:ಮಹದೇವ ಹಡಪದ್

  ಒಂದು ಕೃತಿಯ ಜೀವಾಳವೆಂದರೆ ಸಾರ್ವತ್ರಿಕ ಕಾಲವನ್ನು ಹಿಡಿದಿಡುವ ಶಕ್ತಿಯನ್ನು ಹೊಂದಿರುವಂಥದ್ದು. ಆಳವಾದ ಅನುಭವ, ಜ್ಞಾನದ ಅನುಭಾವ, ಸಂತೃಪ್ತ ಭಾವಗಳು ಎಲ್ಲಿ ಮೇಳೈಸಿಕೊಂಡಿರುತ್ತವೋ ಅಲ್ಲಿ ಪ್ರದರ್ಶನಕ್ಕಿಂತ ಪರಾಮರ್ಶನಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಕಲಾಕಾರರು ತಮ್ಮ ಅನುಭವ ಮತ್ತು ಜೀವನದ ವಿರೋಧಾವಿರೋಧಗಳನ್ನೆಲ್ಲ ಕೃತಿಯಾಗಿಸುವ ನಿಟ್ಟಿನಲ್ಲಿಯೇ ಉತ್ಸುಕರಾಗಿರುತ್ತಾರೆ. ಅಭಿವ್ಯಕ್ತಿ ಅನ್ನುವುದು ಕೂಡ ಕಲಾದೃಷ್ಟಿಯ ಅಂತಃಪಠ್ಯವಾಗಿ ಸತ್ಯಶೋಧನೆ  ಹುಡುಕಾಟದಲ್ಲಿ ತೊಡಗಿರುತ್ತದೆ. ವಾಸ್ತವವನ್ನು ಗ್ರಹಿಸುವುದೇ ಸಿನೆಮಾ ಮಾರ್ಗದಲ್ಲಿ ಮೂಲ ಪಠ್ಯವಾಗಿರುತ್ತದೆ. ಲೂಮಿಯೇರ್ ಸಹೋದರರು ತಮ್ಮ ಮೊದಲ ಚಿತ್ರಗಳನ್ನು ಇಂಥ ವಾಸ್ತವಿಕ ಅಂಶಗಳನ್ನು ಸೆರೆಹಿಡಿಯುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮದುವೆಯೆಂಬುದೊಂದು ಖಾಸಗಿ ಸಂಗತಿ (ಮೂಲ: ಚಿನುವ ಅಚಿಬೆ, ಅನುವಾದ: ಮೋಹನ್ ವಿ ಕೊಳ್ಳೇಗಾಲ)

  ಅಪರಾಹ್ನದ ಹೊತ್ತಿನಲ್ಲಿ ಲಾಗೋಸ್ ಪಟ್ಟಣದ ಕಸಂಗ ಬೀದಿಯ ತನ್ನ ಕೊಠಡಿಯಲ್ಲಿ ಪಕ್ಕ ಕುಳಿತಿದ್ದ ನಾಮೇಕಾನಿಗೆ ನೇನೆ ಕೇಳಿದಳು – ‘ನಿಮ್ಮ ತಂದೆಗೆ ಇನ್ನೂ ಪತ್ರ ಬರೆದಿಲ್ಲವೇ?’ ‘ಇಲ್ಲ, ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ರಜೆಗೆಂದು ಊರಿಗೆ ಹೋದಾಗ ಹೇಳುವುದು ಸರಿ ಎನಿಸುತ್ತಿದೆ’ ‘ಯಾಕೆ? ನಿನ್ನ ರಜೆಗೆ ಇನ್ನೂ ಆರು ವಾರಗಳು ಬೇಕು. ಈ ಖುಷಿಯ ವಿಚಾರ ನಿಮ್ಮ ತಂದೆಗೆ ಬೇಗ ಗೊತ್ತಾಗಲಿ’ ಕೆಲ ಕ್ಷಣ ಮೌನವಾದ ನಾಮೇಕಾ ಪದಗಳಿಗೆ ತಡಕಾಡುವವನಂತೆ ಮಾಡಿ ಮಾತನಾಡಿದ – ‘ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಪೀಸು: ದಿವ್ಯ ಆಂಜನಪ್ಪ

  ಹೊಸ ದಿಗಂತದೆಡೆಗೆ ಎಂಬ ತಲೆಬರಹದಡಿಯಲ್ಲಿ ಲೇಖಕರು ನವ್ಯ ಸಾಹಿತ್ಯದೆಡೆಗೆ ಅಸಮಧಾನಗೊಳ್ಳುತ್ತ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ, ಎಂದು ಖಂಡಿಸುತ್ತ, ಅದಕ್ಕೆ ಅವರು ಮೂರು ಕಾರಣಗಳನ್ನು ಹೀಗೆ ನೀಡುತ್ತಾರೆ.  ಮೊದಲನೇಯದಾಗಿ, ಯಾಂತ್ರಿಕವಾಗಿರುವ ಸಾಹಿತ್ಯದ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು ಎರಡನೇಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತ್ಯ ವರ್ಗ ಮೂರನೇಯದಾಗಿ ಸಾಹಿತ್ಯದ ಮಟ್ಟಿಗೆ ಶ್ರೀಮಿತಹೊಂದಿರುವ ಅದರ ಕ್ರಾಂತಿಕಾರಕತನ.  ಈ ಮೂರು ಕಾರಣಗಳಿಂದ ನವ್ಯ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ.  ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಇದರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಶಸ್ತಿ ಬರೆವ ಅಂಕಣ: ಪತ್ರಿಕಾ ಸಾಹಿತ್ಯ ಮತ್ತು ನಾವು

  ಹಿಂಗೇ ಸುಮ್ನೆ ಬರ್ಯೋ ಹವ್ಯಾಸದ ಒಬ್ಬ. ಬರಹಗಾರ, ಸಾಹಿತಿ ಅಂತ ಖ್ಯಾತಿ ಪಡೋದೊದ್ರೂ ಚನಾಗ್ ಬರಿತೀಯ ಕಣಲೇ ಅಂತ ತನ್ನ ಗೆಳೆಯರತ್ರ ಅನೇಕ ಸಲ ಶಬಾಷ್ಗಿರಿ ಪಡೆದವ. ಪೇಪರಲ್ಲಿ ಬರೋ ಬಣ್ಣಬಣ್ಣದ ಲೇಖನಗಳ್ನ ದಿನಾ ಓದೋ ಆ ಹುಡುಗನಿಗೆ  ತಾನೂ ಯಾಕೆ ಒಮ್ಮೆ ಪತ್ರಿಕೆಗೆ ಕಳಿಸ್ಬಾರ್ದು ಅನ್ನೋ ಭಾವ. ಪಕ್ಕದ್ಮನೆ ಹುಡ್ಗ ಯಾವಾಗ್ಲೂ ಹೊಡ್ಯೋ ಸೈಕಲ್ ನೋಡಿ ತಾನೂ ಒಮ್ಮೆ ಸೈಕಲ್ ಹೊಡಿಬೇಕು ಅಂತ ಮೂಡೋ ಭಾವದ ತರ.  ಸರಿ, ಲೇಖನದ ಕೆಳಗೆ ನಿಮ್ಮ ಲೇಖನಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-2): ಹಿಪ್ಪರಗಿ ಸಿದ್ದರಾಮ್

  ಕುವೆಂಪುರವರ ನಾಟಕ(ರಂಗಕೃತಿ)ಗಳು :  ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ರಂಗಭೂಮಿಗಾಗಿ ಕುವೆಂಪುರವರು ಸರಿಸುಮಾರು ಹದಿನಾಲ್ಕು ನಾಟಕ(ರಂಗಕೃತಿ)ಗಳನ್ನು ರಚಿಸಿದ್ದಾರೆ. ಪ್ರತಿಯೊಂದರಲ್ಲಿಯ ವಸ್ತುವೈವಿಧ್ಯತೆಗಳನ್ನು ಆಯ್ಕೆ ಮಾಡಿಕೊಂಡಿರುವುದು ನಾವು ಗಮನಿಸಿದರೆ ಕನ್ನಡ ರಂಗಸಾಹಿತ್ಯದ ಬೆಳವಣಿಗೆಯ ಆಯಾ ಕಾಲಘಟ್ಟವನ್ನು ಪರಿಚಯಿಸಿಕೊಂಡ ಅನುಭವವಾಗುತ್ತದೆ. ತಮ್ಮ ಸೃಜಶೀಲತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ರಂಗಭೂಮಿಯನ್ನು ಬಳಸಿಕೊಂಡಿರುವುದು ಮಹಾಕವಿಗಳ ಶ್ರೇಷ್ಟತೆಯನ್ನು ತೋರಿಸುತ್ತದೆ. ಪಾತ್ರ ಪೋಷಣೆ, ಸಂಭಾಷಣೆಯ ತಂತ್ರ, ದೃಶ್ಯಗಳ ಜೋಡಣೆ, ಹಳೆಗನ್ನಡ/ನಡುಗನ್ನಡ ಶೈಲಿಯ ಛಂದಸ್ಸಿನ ಶೈಲಿಯ ಸರಳ ರಗಳೆಯಂತಿರುವ ಸಂಭಾಷಣೆ ಹಾಗೂ ಹಾಡುಗಳಂತಹ ಸಾಹಿತ್ಯದ ಹಲವಾರು ಪ್ರಕಾರಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಪ್ರೀತಿಗೆ ಹೃದಯ ಮಾರಿದವನು: ರಾಜು ಬಾಡಗಿ

  ಬಸ್  ಸ್ಟಾಫಿ ನಲ್ಲಿ ನಿನ್ನ ನೋಡಿದಾಗ ಹುಟ್ಟಿದ ಪ್ರೀತಿ ಇಂದೂ ಮುಂದುವರೆದಿದೆ. ಅದಕ್ಕೆ ಯವುದೂ ಇಂಟೆರ್ವಲ್ ಇಲ್ಲ. ಅದರೆ ಈ ಪ್ರೀತಿಗೆ ಇನ್ನೂ ಯಾವ ಭಾಷೆಯೂ ಗೊತ್ತಿಲ್ಲ. ಕಲಿಯುವ ಯಾವ ಬಯಕೆಯೂ ಬರ್ತಾ ಇಲ್ಲ. ಈ ಮೌನದಲ್ಲೂ  ಎಂಥಹ ಪ್ರೀತಿ ಇದೆ …ಅಲ್ವಾ….???  ಈ ಪ್ರೀತಿಗೆ ನಾನು ಏನಾದರೂ ಹೆಸರು ಇಡಬೇಕು ಅಂತ ಅಂದರೆ ನಾನು ’ಮೌನದ ಮಾತು" ಅಂತ ಇಡುತ್ತೇನೆ. ಕಾಡುವ ನಿನ್ನ ಕನಸುಗಳು, ಕನ್ನಡಿ ಮುಂದೆ ನಿಂತಾಗ ಕಾಣುವ ನಿನ್ನ ರೂಪ, ಹಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೊಕ್ಕಿನ ಕೋಗಿಲೆ: ಚೇತನ್ ಕೆ ಹೊನ್ನವಿಲೆ

  ಅವಳು ಇದ್ದದ್ದು ಹಾಗೆ!! ಸೊಕ್ಕಿನ ಕೋಗಿಲೆ ಹಾಗೆ!! ಆ ಕೋಗಿಲೆಯ ಕಂಠಕ್ಕೆ ತೂಗದ ತಲೆಗಳಿಲ್ಲ, ಮಣಿಯದ ಮನಗಳಿಲ್ಲ.   ಹೆಸರು ಪೂರ್ವಿ!!  ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು.  ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ!! ತೊಯ್ದ ಆತ್ಮಗಳನ್ನ!! ಆ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು ಹಾತೊರೆಯುವರು. ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ , ಹೃದಯ ಕಿತ್ತು ಬಂದಂತೆ. ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ. ಕೊರಳಿನ ಮಾಧುರ್ಯ!! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ವರ ಕವಿತೆಗಳು

  ಬಣ್ಣದ ಬದುಕು ಕಣ್ಣ ಕನ್ನಡಿಯಲ್ಲಿ ಇಂದು ಕಾಣುತಿಹುದು ನಿನ್ನ ಬಿಂಬ ಏರಬೇಕು ಮಲ್ಲಗಂಬ ಸಲ್ಲದೆಂದೂ ನಾನು ನನ್ನದೆಂಬ ಜಂಬ.   ಅವನೇ ಜಗದ ಸೂತ್ರಧಾರಿ ನೀನು ಇಲ್ಲಿ ಪಾತ್ರಧಾರಿ ಪ್ರಾಯ ಹೋಗೋ ಮುನ್ನ ಜಾರಿ ಬೆಳೆಯಬೇಕು ಎಲ್ಲ ಮೀರಿ ..!!   ಇದ್ದರೇನು ಪ್ರಾಯ ಸಣ್ಣ ಎಲ್ಲ ಹಚ್ಚ ಬೇಕು ಬಣ್ಣ ನಾವು ಹೆಜ್ಜೆ ಹಾಕಬೇಕು ತುತ್ತ ಚೀಲ ತುಂಬಬೇಕು.   ಕೆಂಪಾದರೇನು ಕಪ್ಪಾದರೇನು? ಹೆಚ್ಚಬೇಕು ಪಾತ್ರದಂದ ಬಣ್ಣಕಿಂತ ನಗುವೇ ಚಂದ ನಗುವು ಮಾಸದಿರಲಿ ಕಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಶರತ್ ಚಕ್ರವರ್ತಿ ಚುಟುಕಗಳು

  1. ಕಣ್ಣುಗಳು ನೂರಾರು ತಾರೆಗಳು ಉಲ್ಕೆಗಳಾಗಿ ಉದುರಿದವು ನಿನ್ನ ಕಣ್ ಹೊಳಪಿಗೆ ಸೋತು. 2. ಮಿಂಚು ಬೆಳಕಾಗಿ ಬಾ, ಬೆಳದಿಂಗಳಾಗಿ ಬಾ ಎಂದಾಡಿರೇ.. ಮಿಂಚಾಗಿ ಬಂದಳು ದೃಷ್ಟಿಯನೆ ಹೊತ್ತೊಯ್ದಳು. 3. ಚಳಿ ನವಂಬರ್ ಚಳಿ, ಭಾರವಾದ ಕಂಬಳಿ ಹೊದೆಯಲು ಇಚ್ಚಿಸಿರಲು ನಿನ್ನ ನೆನಪುಗಳು ಬೆಚ್ಚನೆ ಭಿಗಿದಪ್ಪಿದವು. 4. ಹಣತೆ-ಪತಂಗ ಸುಟ್ಟು ಬೂದಿಯಾಗುವೆ ಎಂಬ ಅರಿವಿದ್ದರೂ ಏಕೆ ಎನ್ನನೇ ಸುತ್ತಿ ಸುತ್ತಿ ಬರುತಿರುವೆ.. ನಿನ್ನ ಕೋಮಲ ರೆಕ್ಕೆಗಳ ಸುಡುವ ಮನಸ್ಸಿಲ್ಲದೇ ಇಗೋ.. ನಾನೇ ನಂದಿಹೋಗುತಿರುವೆ. 5. ನೀ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಣ್ಣುಗಳನ್ನು ನೋಡಿದೆ ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು: ಡಾ. ಗವಿ ಸ್ವಾಮಿ

  ಮೊನ್ನೆ ಒಬ್ಬ ರೈತ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದ. ಎತ್ತುಗಳು ಕುಂಟುತ್ತಿದ್ದವು. ಕಾಲುಗಳಲ್ಲಿ ಗಾಯಗಳಾಗಿದ್ದವು. ಏನಪ್ಪಾ ಆಯ್ತು.. ಇಷ್ಟೊಂದು ಗಾಯಗಳಾಗಿವೆಯಲ್ಲ ಅಂದೆ. ''ಯಾನೇಳ್ಳಿ ಸೊಮಿ ಎಲ್ಲಾ ನಮ್ ಹಣಬರ'' ಅಂದು ಹಣೆ ಕುಟ್ಟಿಕೊಂಡ. ಅದೇನ್ ಸ್ಪಷ್ಟವಾಗಿ ಹೇಳಪ್ಪ ಅಂದೆ. '' ಓದುಡ ಓದುಡ ಅಂತ್ ಬಡ್ಕಂಡಿ… ಬಡ್ಡಿಕೂಸು ಕಿಂವಿಗೇ ಹಾಕನಿಲ್ಲ… ಎಸ್ಸೆಲ್ಸಿ ಪೈಲ್ ಮಾಡ್ಕತು. ನಿನ್ ಹಣಾಲ್ ಬರದಾಗಾಬುಡು ನಡ ಆರಂಬನ್ಯಾರು ಕಲ್ತಗ ಅಂತ ಆರಂಬ ಕಲಸ್ದಿ'' '' ಬಡ್ಡಿಕೂಸು ಇವತ್ಯಾನ್ ಮಾಡ್ತು ಅಂದ್ರ.. ಕಟ್ಟಿರ ಏರ್ನೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…: ಎಂ. ಆರ್. ಸಚಿನ್

ಗುರುಭ್ಯೋ ನಮಃ ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ರೂರ ಪ್ರಪಂಚದಲ್ಲಿ ನಾವೂ, ಮಕ್ಕಳೂ:ವಾಸುಕಿ ರಾಘವನ್

ಕಳೆದ ಡಿಸೆಂಬರ್ ಅಲ್ಲಿ ನಡೆದ “ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ಕ್ಕೆ ಹೋಗಿದ್ದು ಒಂದು ಅದ್ಭುತ ಅನುಭವ. ಒಂದು ಚಿತ್ರ ನೋಡಿ ಬಂದು, ಇನ್ನೊಂದು ಚಿತ್ರಕ್ಕೆ ಕ್ಯೂನಲ್ಲಿ ನಿಂತುಕೊಳ್ಳೋದು, ನಿಂತಲ್ಲೇ ಒಂದು ಸ್ಯಾಂಡ್ವಿಚ್ಚೋ ವ್ರಾಪೋ ಗಬಗಬ ತಿನ್ನೋದು. ಬೇರೆಯವರಿಗೆ ಹುಚ್ಚಾಟ ಅನ್ನಿಸಬಹುದಾದ ಈ ವರ್ತನೆ ಚಿತ್ರಪ್ರೇಮಿಗಳಿಗೆ ಸರ್ವೇಸಾಮಾನ್ಯ ಆಗಿತ್ತು. ಗೆಳೆಯ ಪವನ್ ಕುಂಚ್ ಜೊತೆ ಎರಡು ದಿನದಲ್ಲಿ ಎಂಟು ಚಿತ್ರ ನೋಡಿದ್ದು ಮರೆಯಲಾಗದ ನೆನಪು!    ಶನಿವಾರ ಸಂಜೆ ಸಿನಿಮಾ ಹಾಲಲ್ಲಿ ಕೂರುವ ಹೊತ್ತಿಗೆ ಏನೋ ಒಂಥರಾ ಸುಸ್ತು. “ಫಿಲಂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಶಸ್ತಿ ಬರೆವ ಅಂಕಣ: ‘ಪೇಪರ್ ಪೇಪರ್’

ಸಣ್ಣವನಿದ್ದಾಗ ದೂರದರ್ಶನದಲ್ಲಿ ಬೆಳಗ್ಗೆ ಹತ್ತರಿಂದ ಹನ್ನೊಂದರವರೆಗೆ ಬರುತ್ತಿದ್ದ "ಗ್ಯಾನ್ ದರ್ಶನ್" ರಜಾವೇಳೆಯ ಅಚ್ಚುಮೆಚ್ಚಿನ ಕಾರ್ಯಕ್ರಮ ಆಗಿತ್ತು. ಅದರಲ್ಲಿ ಒಮ್ಮೆ ನೋಡಿದ್ದ ರದ್ದಿ ಪೇಪರ್ ಅಂತ ಎಸೆಯೋ ಬದಲು ನಾವು ಮನೆಯಲ್ಲೇ ಅದ್ನ ಹೇಗೆ ಪುನರ್ಬಳಕೆ ಮಾಡ್ಬೋದು, ರದ್ದಿ ಪೇಪರ್ಗಳನ್ನ ಹೇಗೆ ರೀಸೈಕಲ್ ಮಾಡ್ತಾರೆ ಅಂತ ತೋರ್ಸಿದ್ದರು. ವಿಜ್ಞಾನ, ಮುಂದುವರಿದ ಜನ ನಾವು ಅಂತ ರೀಚಾರ್ಚ್ ಕಾರ್ಡಿಂದ ಹಿಡ್ದು ಎಟಿಎಮ್ನಲ್ಲಿ ತೆಗ್ದ ಪ್ರತೀ ನೂರಕ್ಕೂ ಪಡ್ದ ಹರ್ದೆಸೆದ ಪೇಪರ್ನಿಂದ ಎಟಿಎಮ್ನಲ್ಲಿ ದಿನಾ ಬೀಳೋ ಕಸದ ರಾಶಿ, ಫ್ಯಾಷನ್ನಾಗಿರೋ ಪೇಪರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೊದಲ ಸೂರ್ಯೋದಯ: ಪ್ರಜ್ವಲ್ ಕುಮಾರ್

  ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ ಹೋಗುವ ದಾರಿಯಲ್ಲಿರುವ ಈ ಜಾಗವನ್ನು ನಮ್ಮ ಗುಂಪಲ್ಲಿ ಒಬ್ಬನನ್ನು ಬಿಟ್ಟರೆ ಬೇರೆ ಯಾರೂ ನೋಡಿರ್ಲಿಲ್ಲ. ಚಂದಗಿರಿಯ ತುದಿಯಲ್ಲಿ ಸೂರ್ಯೋದಯ ತುಂಬಾ ಚೆನ್ನಾಗಿ ಕಾಣುತ್ತೆ ಅನ್ನೋದನ್ನ ಕೇಳಿದ್ದ ನಾವು ಈ ಸಲ ಆ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದೆವು. ಸೂರ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸರ್ವತ್ರ:’ಪ್ರೀತೀಶ’

ಚಲಂ ನನ್ನ ಬೆನ್ನು ಹತ್ತಿಬಿಟ್ಟಿತ್ತು.  ಯಾವತ್ತೂ ನನ್ನ ಮಾತು ಮೀರದ ಚಲಂ ಇಂದು ಬೇಡಬೇಡವೆಂದರೂ, ನಾನು ಕೋರ್ಟಿಗೆ ಹೋಗುತ್ತಿದ್ದೇನೆ, ಅಲ್ಲಿ ನೀನು ಬರಬಾರದು ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ದಾರಿಯಲ್ಲಿ ಒಂದೆರಡು ಬಾರಿ ಸಿಟ್ಟಿಗೂ ಬಂದೆ.  ನನ್ನ ಸಿಟ್ಟಿಗೆ ಹೆದರಿ ಕಾಲು ಉದ್ದಕ್ಕೆ ಬಿಟ್ಟು ದಾರಿಯಲ್ಲಿ ಕುಳಿತುಕೊಂಡಿತು.  ಹಾಳಾಗಿ ಹೋಗಲಿ, ಮನೆ ದಾರಿ ಅದಕ್ಕೆ ಗೊತ್ತು, ಯಾವಾಗಲಾದರೂ ಮನೆಗೆ ಹೋಗಲಿ ಎಂದು ನಾನು ಬಿರಬಿರನೆ ನಡೆದುಬಿಟ್ಟೆ.  ಮೊದಲೇ ಅದರ ಹಟದಿಂದಾಗಿ ಆಫೀಸಿಗೆ ಹೋಗುವುದು ತಡವಾಗಿತ್ತು. ಕೋರ್ಟಿನ ಗೇಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ