ಕಲ್ಲಂಗಡಿ ಹಣ್ಣು!: ಎಸ್.ಜಿ.ಶಿವಶಂಕರ್

ಅನಂತಯ್ಯ ಬಾಗಿಲು ತೆಗೆದು ಮನೆಯೊಳಗೆ ಕಾಲಿಟ್ಟಾಗ ಮೌನ ಸ್ವಾಗತಿಸಿತು. ಅನಂತಯ್ಯನವರಿಗೆ ಹಿತವೆನಿಸಲಿಲ್ಲ. ಒಂದು ತಿಂಗಳು ಜನರಿಂದ ಗಿಜಿಗುಟ್ಟುತ್ತಿದ್ದ ಮನೆ ಖಾಲಿಖಾಲಿಯಾಗಿ ಕಂಡಿತು. ಇಪ್ಪತ್ತೈದು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಮೊದಲ ಬಾರಿಗೆ ನೋಡುತ್ತಿರುವವರಂತೆ ಅನಂತಯ್ಯ ಮನೆಯನ್ನು ನೋಡಿದರು. ಮನೆಯಲ್ಲಿನ ವಸ್ತುಗಳನ್ನು ನೋಡುವಾಗ ಅದನ್ನು ಉಪಯೋಗಿಸಿದವರ ಚಿತ್ರ ಮನಸ್ಸಿಗೆ ಬರುತ್ತಿತ್ತು. ಅನಂತಯ್ಯ  ಡ್ರಾಯಿಂಗ್ ರೂಮಿಗೆ ಬಂದರು. ಅಸ್ಥವ್ಯಸ್ಥವಾಗಿದ್ದ ದಿವಾನದ ಹಾಸುಗಳು ಕಂಡವು. ಮೊಮ್ಮಕ್ಕಳು ಅದರ ಮೇಲೆ ಹತ್ತಿ, ಇಳಿದು, ಕುಣಿದಾಡಿದ್ದು ಕಣ್ಮುಂದೆ ಬಂತು. ವರಾಂಡಕ್ಕೆ ಬಂದರೆ, ಅದರ ತುಂಬ ತುಂಬಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಳುಗುತ್ತಿರುವ ಕುತುಬ್‍ದಿಯಾ!: ಅಖಿಲೇಶ್ ಚಿಪ್ಪಳಿ

ಜರ್ಮನಿಯ ಹಿಟ್ಲರ್ ಹೆಸರು ಯಾರಿಗೆ ಗೊತ್ತಿಲ್ಲ? ಖೈದಿಗಳನ್ನು ಕೊಲ್ಲಲು ವಿಷದ ಅನಿಲದ ಕೊಠಡಿಯನ್ನೇ ನಿರ್ಮಿಸಿದ್ದ ಕುಖ್ಯಾತಿ ಒಳಗಾಗಿದ್ದವ. ಹಿಂಸೆಯ ಪ್ರತಿರೂಪ! ಲಕ್ಷಾಂತರ ಯಹೂದಿಗಳು ಈ ಸರ್ವಾಧಿಕಾರಿಯ ಹಿಂಸೆಗೆ, ಕ್ರೂರತ್ವಕ್ಕೆ ಬಲಿಯಾದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸವೆಂದರೆ ಒಳಿತು-ಕೆಡುಕುಗಳ ಸಮಗ್ರ ಮಾಹಿತಿ. ಇದರಲ್ಲಿ ಒಳಿತನ್ನೂ ನೋಡಬಹುದು, ಕೆಡುಕನ್ನು ಕಾಣಬಹುದು. ಪ್ರಸ್ತುತ ವಿದ್ಯಮಾನಗಳು ಮುಂದೊಂದು ದಿನ ಇತಿಹಾಸದ ಪುಟದಲ್ಲಿ ಸೇರುತ್ತವೆ. ಆಧುನಿಕ ಅಭಿವೃದ್ಧಿ, ಐಷಾರಾಮಿತನಗಳು ಇಡೀ ವಿಶ್ವವನ್ನೇ ಹಿಟ್ಲರ್‍ನ ವಿಷಕಾರಕ ಕೊಠಡಿಯನ್ನಾಗಿ ಮಾಡುತ್ತಿವೆ. ಇದರಲ್ಲಿ ಮೊದಲಿಗೆ ಬಲಿಯಾಗುವವರು ಮಾತ್ರ ಬಡದೇಶದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅಭಿಮಾನಿ ದೇವರುಗಳ ಲೀಲೆಗಳು”: ಪ್ರಸಾದ್ ಕೆ.

“ಭಯ್ಯಾ… ನನ್ನ ಭಾಯಿಯ ಸಿನೆಮಾ ಬರುತ್ತಿದೆ'', ಎಂದು ಕುಣಿಯುತ್ತಾ ಹೇಳಿದ್ದ ಆತ.  ಹೀಗೆ ಉತ್ಸಾಹದಿಂದ ನನ್ನ ಜೊತೆ ಮಾತನಾಡುತ್ತಿದ್ದಿದ್ದು ದೆಹಲಿಯ ಮಯೂರ್ ವಿಹಾರ್ ನಿವಾಸಿಯೂ, ನನ್ನ ತಮ್ಮನಂತಿದ್ದ ಮಿತ್ರನೂ ಆಗಿದ್ದ ಸೋನು. ಇಲ್ಲಿ ತನ್ನ “ಭಾಯಿ'' ಎಂದು ಭುಜಕುಣಿಸುತ್ತಾ ಸೋನು ಕರೆಯುತ್ತಿದ್ದಿದ್ದು ನಟ ರಣಬೀರ್ ಕಪೂರ್ ನನ್ನು. ಸೋನು ರಣಬೀರ್ ಕಪೂರ್ ನ ಡೈ-ಹಾರ್ಡ್ ಅಭಿಮಾನಿ. ಅತ್ತ ನಟ ರಣಬೀರ್ ಕಪೂರ್ ಕೆಮ್ಮಿದರೆ ಇತ್ತ ಎದೆ ನೋವಾಗುತ್ತಿದ್ದಿದ್ದು ಸೋನುವಿಗೆ. ನಟ ರಣಬೀರ್ ಕಪೂರ್ ನ ನೆಲಕಚ್ಚಿದ ಚಿತ್ರಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಶಿ (ಭಾಗ 1): ಗುರುರಾಜ ಕೊಡ್ಕಣಿ

                                                     ’ಟಿಟಿಟಿಟೀಟ್, ಟಿಟಿಟಿಟೀಟ್’ಎನ್ನುವ ಅಲಾರಾಮಿನ ಅತ್ಯಂತ ಕರ್ಕಶ ಶಬ್ದ ನನ್ನ ನಿದ್ದೆಯನ್ನು ಹಾಳುಗೆಡವಿತ್ತು. ಮಲಗಿದ್ದಲ್ಲಿಂದಲೇ ಮಂಚದ ಪಕ್ಕದ ಮೇಜಿನ ಮೇಲಿದ್ದ ಅಲಾರಾಮಿನ ತಲೆಗೊಂದು ಮೊಟಕಿ ಅದರ ಬಾಯಿ ಮುಚ್ಚಿಸಿ ಮತ್ತೆ ಮಲಗಲು ಪ್ರಯತ್ನಿಸಿದೇನಾದರೂ ನಿದ್ರೆ ಬರಲಿಲ್ಲ. ಎದ್ದು ಕುಳಿತರೆ ತಲೆಯೊಳಗೊಂದು ಸಣ್ಣ ಜೋಂಪು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ ?: ಕೆ ಟಿ ಸೋಮಶೇಖರ, ಹೊಳಲ್ಕೆರೆ.

       ಸಮಸ್ಯೆಗಳು ಇಲ್ಲದ ಮನೆ, ಕುಟುಂಬ, ಜೀವನ ಇರಲು ಸಾಧ್ಯವಿಲ್ಲ! ಇದನ್ನು ಅರಿಯದೆ ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೇ ಪರಿಹಾರ ಎಂದು ಜಗತ್ತು ಭಾವಿಸಿದಂತಿದೆ. ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳಲು ಜಗತ್ತು ತುದಿಗಾಲಲಿ ನಿಂತಂತೆ ತೋರುತ್ತಿದೆ. ತಂದೆಯೋ ತಾಯಿಯೋ ಶಿಕ್ಷಕರೋ ಬುದ್ದಿ ಹೇಳಿದುದನ್ನು ಅವಮಾನವೆಂದು ಭಾವಿಸಿ, ಉತ್ತಮ ಅಂಕ ಗಳಿಸಲಿಲ್ಲವೆಂದು, ಬಯಸಿದ ವಸ್ತು ಕೊಡಿಸಲಿಲ್ಲವೆಂದು, ಇಷ್ಟವಾದವಳು ಪ್ರೀತಿಸಲಿಲ್ಲವೆಂದು  ಇನ್ನೂ ಅನೇಕ ಚಿಕ್ಕ ಚಿಕ್ಕ ಕಾರಣಗಳಿಂದ ಚಿಕ್ಕವರು, ಯುವಕರು ಅತ್ಯಮೂಲ್ಯ ಆತ್ಮವ ಹತ್ಯೆ ಮಾಡಿಕೊಂಡರೆ, ವ್ಯಪಾರಿಗಳು, ರೈತರು, ಅಧಿಕಾರಿವರ್ಗ, ಪೋಲಿಸರು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಾದೆಗಳು- ರೂಪದಲ್ಲಿ ವಾಮನ, ಅರ್ಥದಲ್ಲಿ ತ್ರಿವಿಕ್ರಮ: ಹೊರಾ.ಪರಮೇಶ್ ಹೊಡೇನೂರು

         ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜನಪದ ಸಾಹಿತ್ಯವೂ ಪ್ರಮುಖವಾದುದಾಗಿದೆ. ಜನಪದರ ಅನುಭವ ಜನ್ಯವಾಗಿ ಉದಯಿಸಿದ ಈ ಸಾಹಿತ್ಯ ಪ್ರಕಾರದಲ್ಲಿ "ಗಾದೆಗಳು" ವಿಶೇಷವಾಗಿ ಗಮನ ಸೆಳೆಯುತ್ತವೆ. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಜನಜನಿತವಾದ ಗಾದೆಯೆ ಗಾದೆಗಳ ಮಹತ್ವ, ಅರ್ಥವಂತಿಕೆಯನ್ನು ಎತ್ತಿ ತೋರಿಸುತ್ತದೆ.          ಗಾದೆಗಳು ಜನಸಾಮಾನ್ಯರ ಪ್ರತ್ಯಕ್ಷ ಅನುಭವಗಳ ಮೂಸೆಯಿಂದ ರೂಪುಗೊಂಡಿರುವುದರಿಂದ ಅವುಗಳ ಅರ್ಥ ಸುಲಭವಾಗಿ ತಿಳಿಯುವುದರ ಜೊತೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡುತ್ತವೆ. ದೈನಂದಿನ ಸಂದರ್ಭಗಳಲ್ಲಿ ಇಕ್ಕಟ್ಟುಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಪಾಣೀಗ್ರಹಣ ಎಲ್ಲೂ ಅವಳಿಗೊಂದು ಹೊಚ್ಚ ಹೊಸ ಸವಿಯಿರುವ ವರ ಸಿಗುತ್ತಿಲ್ಲ ದೇವಾನುದೇವತೆಗಳ ವರಗಳ ಸ್ಟಾಕ್ ಖಾಲಿಯಾಗಿದೆ…… ಹಣ್ಣು ರುಚಿಕಟ್ಟನ್ನು ಕಳೆದುಕೊಳ್ಳುತ್ತಾ ರಾಶಿ ಬಿದ್ದಿರುವ ವಸಂತಗಳ ಎಣಿಸುತ್ತಿದೆ ಮತ್ತೊಂದು ವಸಂತಕ್ಕೆ ಕಾದಿರುವ ಬೂರಗ ಸತ್ತಂತೆ ನಿಂತಿದೆ ತಪೋನಿರತತೆಯಲ್ಲಿ ವಸಂತ ಕಟ್ಟಲು ಬೇಕಿರುವ ಮತ್ತೆರೆಡು ಜತೆ ಕೈಗಳು ಇಲ್ಲೆ ಎಲ್ಲೋ ಅಡಗಿರಬಹುದೆಂದು ಉಳಿ ಸುತ್ತಿಗೆ ತೆಗೆದು ಕಟೆಕಟೆದು ನೋಡುತ್ತಿದ್ದಾಳೆ  ನಿರರ್ಥಕವಾಗಿ ಮನದ ಮಾದರಿ ಮಸಕಾಗುತ್ತಿರುವ ಹೊತ್ತಲ್ಲಿ ಅದು ತನ್ನದೇ ಚಿತ್ರ ! ನಿರಾಶೆಯ ಮಡುವು ಸಂತೋಷದ ಚಿಲುಮೆ ಒಟ್ಟೊಟ್ಟಿಗೆ ಕಣ್ಣಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಕ್ಷೇಪ: ಸಾತ್ವಿಕ್ ಹ೦ದೆ

ಮತ್ತದೇ ಕನಸು, ದೂರದೂರದವರೆಗೂ ಚಾಚಿದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳಿರಲಿ ಒ೦ದು ಹುಲ್ಲುಕಡ್ಡಿಯೂ ಇಲ್ಲ. ಬಿರುಬಿಸಿಲಿನಲ್ಲಿ ಐವರು ಅಪರಿಚಿತರು ನಡೆದೇ ಸಾಗುತ್ತಿದ್ದಾರೆ. ಸಮವಸ್ತ್ರ ಧರಿಸಿದವರ೦ತೆ ಐವರೂ ಬಿಳಿಯ ಅ೦ಗಿ ಮತ್ತು ಷರಾಯಿಯನ್ನು ತೊಟ್ಟಿದ್ದಾರೆ. ಅ೦ಗಿಯ ಮೇಲೆಲ್ಲಾ ರಕ್ತದ ಕಲೆಗಳು. ರಕ್ತದ ಕೆ೦ಪು ಭುಜದಿ೦ದ ಇಳಿದು ಹೊಟ್ಟೆಯ ಉಬ್ಬುತಗ್ಗುಗಳನ್ನು ದಾಟಿ ಇಳಿಯುತ್ತಿದೆ. ಐವರಲ್ಲೊಬ್ಬರಿಗೂ ಅದರ ಅರಿವೇ ಇದ್ದ೦ತಿಲ್ಲ. ಒಬ್ಬೊಬ್ಬರೂ ಹೆಗಲ ಮೇಲೆ ಸತ್ತ ನಾಯಿಗಳನ್ನು ಹೊತ್ತಿದ್ದಾರೆ. ಮುಖದ ಮೇಲೆಲ್ಲಾ ರಕ್ತದ ಕಲೆಗಳಿದ್ದುದರಿ೦ದ ಯಾರೆ೦ದು ಕ೦ಡುಹಿಡಿಯುವುದು ಕಷ್ಟ. ಆ ಐವರಲ್ಲೊಬ್ಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಲ: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಎದ್ದದ್ದು ತಡವಾಗಿತ್ತು. ಇನ್ನು ಆಲಸ್ಯ. ಇವತ್ತು ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲ. ಆದರೆ ರಜೆ ಇಲ್ಲದ ಕಾರಣ ಸೂರ್ಯ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿ ಕೆಲಸಕ್ಕೆ ಹೊರಟ. ಸೂರ್ಯ ತನ್ನ ಊರನ್ನು ಬಿಟ್ಟು ಬಂದು ೮ ತಿಂಗಳು ಆಗಿತ್ತು. ಅಪ್ಪ ಅಮ್ಮನ ಹತ್ತಿರ ದುಡ್ಡಿಗಾಗಿ ಬೇಡುವುದು ಅವನಿಗೆ ಹಿಂಸೆ ಅನ್ನಿಸುತ್ತಿತ್ತು. ಮೊದಲೆಲ್ಲ ಹೀಗೆ ಆಡುತ್ತಿರಲಿಲ್ಲ ಅವರು. ಕೇಳುವುದಕ್ಕೆ ಮುಂಚೆಯೇ ಸೂರ್ಯನಿಗೆ ದೊಡ್ದು ಕೊಡುವುದು, ಬಟ್ಟೆ ಕೊಡಿಸುವುದು, ತಿಂಡಿ ತಿನಿಸು ಹೀಗೆ ಹಲವಾರು ವಿಷಯಗಳಲ್ಲಿ ಸೂರ್ಯನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮ ನಡುವಿನ ಗೋಮುಖವ್ಯಾಘ್ರರು: ಪ್ರಸಾದ್ ಕೆ.

“ಹೌದು, ಕಳೆದ ಕೆಲ ವರ್ಷಗಳಿಂದ ಈ ಕೃತ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಅವುಗಳೆಲ್ಲಾ ಹತ್ತರಿಂದ ಹದಿನೈದು ವರ್ಷದ ಮಕ್ಕಳು''  ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಹೇಳುತ್ತಾ ಹೋಗುತ್ತಿದ್ದ ಆತನನ್ನು ನೋಡಿ ನನಗೆ ದಿಗಿಲಾಗಿದ್ದು ಸತ್ಯ. ಈಗಷ್ಟೇ ಹತ್ತನೇ ತರಗತಿಯ ಕ್ಲಾಸಿನಿಂದ ಬಂಕ್ ಮಾಡಿಕೊಂಡು ಬಂದವನೇನೋ ಎಂಬಂತಿದ್ದ, ಇವನಿಗೇನಾದರೂ ಪೋಲೀಸರು ಎರಡೇಟು ಬಿಟ್ಟರೆ ಸತ್ತೇಹೋಗುವನೇನೋ ಎಂಬಂತಿದ್ದ ಈ ನರಪೇತಲನನ್ನು ನೋಡಿ ನಾನು ಒಂದು ಕ್ಷಣ ನಕ್ಕೂ ಬಿಟ್ಟಿದ್ದೆ. ವಿಪಯರ್ಾಸವೆಂದರೆ ಈತನ ಕೃತ್ಯಗಳನ್ನು ಟೆಲಿವಿಷನ್ ವರದಿಯಲ್ಲಿ ನೋಡಿದ ನಂತರ ನಾನು ನಗುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತ್ಯಾಜ್ಯ-ಮಾಲಿನ್ಯ-ತ್ಯಾಜ್ಯ: ಅಖಿಲೇಶ್ ಚಿಪ್ಪಳಿ

ಪ್ರೇಮಿಗಳ ದಿನದಂದೇ ಸಾಗರದಲ್ಲಿ ಮಾರಿಜಾತ್ರೆಯೂ ಶುರುವಾಗಿದೆ. ಮಾರಿಗೆ ಉಡಿ ತುಂಬಲು ಜನ ಬೆಳಗಿನ ಜಾವದಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಯುವಪ್ರೇಮಿಗಳೆಲ್ಲಾ ಬಹುಷ: ಫೇಸ್‍ಬುಕ್ ಅಥವಾ ವ್ಯಾಟ್ಸಪ್‍ಗಳಲ್ಲೇ ಸಂದೇಶ ರವಾನಿಸುತ್ತಲೇ ದಿನವನ್ನು ಕಳೆದರೇನೋ? ಪ್ರೇಮಿಗಳ ದಿನಾಚರಣೆ ವಿರುದ್ಧ ಮಾರಲ್ ಪೋಲೀಸ್‍ಗಿರಿ ಮಾಡಿದ್ದು ವರದಿಯಾಗಲಿಲ್ಲ. ಜನದಟ್ಟಣೆ ಹೆಚ್ಚು ಇರುವಲ್ಲಿ ಕೊಳಕೂ ಹೆಚ್ಚಿರುತ್ತದೆ. ಮಾರಿಜಾತ್ರೆಯಲ್ಲಿ ಜನಸಂದಣಿ ಹೆಚ್ಚು ಇರುವುದರಿಂದ ತ್ಯಾಜ್ಯಗಳ ಬಳಕೆಯೂ ಹೆಚ್ಚಿರುತ್ತದೆ ಹಾಗೂ ಅದರ ವಿಲೇವಾರಿ ಸಮರ್ಪಕವಾಗಿ ಆಗುವುದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ತ್ಯಾಜ್ಯ ವಿಲೇವಾರಿ ಮಾಡುವುದು ಸ್ಥಳೀಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

 ಹಬ್ಬಗಳ ಆಚರಣೆ – ಆರೋಗ್ಯ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಹಬ್ಬ ಹರಿದಿನಗಳ ಆಚರಣೆಗೆ ತಂದಿರುವುದು ಬಹಳ ಔಚಿತ್ಯಪೂರ್ಣವೂ, ಆರೋಗ್ಯಪೂರ್ಣವೂ ಆಗಿದೆ. ಜತೆಗೆ ಆಚರಣೆ ವಿಧಾನಗಳು, ರೀತಿ ನೀತಿಗಳು ಅಷ್ಟೇ ಮಹತ್ವ ಪಡೆದಿವೆ. ಈ ದೃಷ್ಟಿಯಿಂದ ನಮ್ಮ ಪೂರ್ವಜರ ಮೆಚ್ಚಬೇಕಾದದ್ದೇ! ಅವು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಭಾಗವಾಗಿವೆ! ಹಬ್ಬಗಳ ನೆಪದಲ್ಲಿಯಾದರೂ ಆಗಾಗ ಮನೆ ಧೂಳು ತೆಗೆದು, ಸುಣ್ಣ, ಬಣ್ಣ ಬಳಿಸಿ ಶುಚಿಗೊಳಿಸುತ್ತೇವೆ. ಇದರಿಂದ ಕ್ರಿಮಿ, ಕೀಟಗಳು, ರೋಗಾಣುಗಳು ನಾಶವಾಗುತ್ತವೆ. ಇದರಿಂದ ರೋಗಗಳು ಹರಡದಂತೆ, ಅವು ಬರದನ್ನು ತಡೆಗಟ್ಟಿದಂತೆ ಆಗುತ್ತದೆ. ಮನೆ ಸ್ವಚ್ಛ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಮರೆಯಾದ ಜೀವಾ”: ಪಿ ಕೆ…? ನವಲಗುಂದ

ಹಂಗೆ ಸುಮ್ಮನೆ ಕೆಲಸವಿರಲಿಲ್ಲ ಹರಟೆ ಹೊಡೆಯುತ್ತಾ ಕುಂತಿದ್ದೆ ಆ ಕಡೆ ನನ್ನ ಆತ್ಮೀಯ ಮಿತ್ರನ ಕರೆ ಬಂತು. ಆ ಕಡೆಯಿಂದ ಎಲ್ಲಿದ್ದೀಯಾ?  ನಾನು. ಮಾರ್ಕೆಟ್ ನಲ್ಲಿ .  ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಬಾ. ಯಾಕೋ.? ಬಾರೋ ಮಾರಾಯ ಆಯ್ತು ಬಂದೆ. ಗೆಳೆಯನ ಬೈಕು ತೆಗೆದುಕೊಂಡು ಹೊರಟೆ ಆದರೆ ಮನಸ್ಸುನಲ್ಲಿ ಏನೋ ತಳಮಳ ಏನಾಗಿರಬೇಕು? ಅನ್ನುವ ವಿಚಾರದಲ್ಲಿಯೇ ಆಸ್ಪತ್ರೆ ಹತ್ತಿರವೇ ಬಂದೆ  ಗೆಳೆಯ ಮುಖದಲ್ಲಿ ಕೊಂಚು ನೋವು ಕೊಂಚು ಸಂತಸ . ಇತ್ತ ತಂದೆಯಾಗುವ ಸಂತಸ ಒಂದಾದರೆ ಇತ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಿಲ್ ರೇವೂರ ಅವರ ಪಂಚಾವರಂ: ನಟರಾಜು ಎಸ್. ಎಂ.

ಇಸವಿ 2014 ರಲ್ಲಿ ಮಹದೇವಣ್ಣನ ಆಹ್ವಾನ ಸ್ವೀಕರಿಸಿ ಸಂಸ ಬಯಲು ರಂಗಮಂದಿರದಲ್ಲಿ ಗೆಳೆಯ ಹನುಮಂತ ಹಾಲಗೇರಿ ವಿರಚಿತ "ಊರ ಸುಟ್ಟರೂ ಹನುಮಪ್ಪ ಹೊರಗೆ" ನಾಟಕ ನೋಡಿ ಬೆರಗಾಗಿದ್ದೆ. ಆ ದಿನ ಮಹದೇವಣ್ಣ (ಮಹಾದೇವ ಹಡಪದ) ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಅನಿಲ್ ರೇವೂರ ಅವರ ಪರಿಚಯ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಎಫ್ ಬಿ ಯಲ್ಲಿ ಅನಿಲ್ ಗೆಳೆಯರಾದರು. ಇಸವಿ ಎರಡು ಸಾವಿರದ ಹದಿನಾರರಲ್ಲಿ ಅನಿಲ್ ನಿರ್ದೇಶನದ ನಾಟಕಕ್ಕೆ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಚಿನ್ನದ ಪದಕ ಸಿಕ್ಕಿದೆ ಎಂಬ ಸುದ್ದಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

"ಶಬ್ದಾರ್ಥ ಶಿಲ್ಪ" ಕಾವ್ಯವೆನುವುದು ಒಂದು ಶಬ್ದಾರ್ಥ ಶಿಲ್ಪ ಕವಿಯ ಕೈಯಲಿ ನುಡಿಗೆ ಕಾಯಕಲ್ಪ      ಸಾಹಿತ್ಯ ಸಂಸ್ಕೃತಿಯ ಶೃತಿನಾದ  ಹಿಮ್ಮೇಳ      ಲಯಬದ್ದ ಪ್ರಾಸವಿಹ ರಸ ಭಾವಗಳ ಮೇಳ ಸಕಲ ಕಲೆಗಳ ಮೂಲ ವೈವಿಧ್ಯತೆಯ ವರ್ಣಜಾಲ    ನವರಸಗಳು ಕೂಡಿ ಆದ ಪದ ವಾಕ್ಯಗಳ ಮೋಡಿ      ಜಗದ ಜನ ಜೀವನದ ನಲಿವು ನೋವಿನ ಕಥನ      ನಾಕ ನರಕದ ಸೃಷ್ಟಿ ವ್ಯಕ್ತಿ-ಸಮಷ್ಠಿಗೆ ಪುಷ್ಟಿ ರವಿ ಕಾಣದೆಡೆಯಲ್ಲು ಕಂಡ ಕವಿಗಳ ಕಾಣ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಿಯರ್ ಹಸ್ಬೆಂಡ್: ಅಮರ್ ದೀಪ್ ಪಿ.ಎಸ್.

ಮೈ ಡಿಯರ್, ಯಾಕಿಷ್ಟು ತೊಂದರೆ ಅನುಭವಿಸ್ತಾ ಇದೀಯಾ?  ಕೂಲ್……  ನೀನು ಒಂದು ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದಿಯಾ. ನಿನ್ನ ಕೆಳಗೆ ಸಾಕಷ್ಟು ಜನ ಕೆಲಸ ಮಾಡ್ತಿದಾರೆ. ಐದು ಬೆರಳೂ ಸಮಾ ಇರಲ್ಲ.  ಹಾಗಂತ ಐದೂ ಬೆರಳಿಗೂ ನಿಯತ್ತಿರುವುದಿಲ್ಲ.  ಒಂದೊಂದು ಬೆರಳಿಗೂ ಒಂದೊಂದು ಇಶಾರೆ. ಹಾಗೇನೇ ಎಲ್ರನ್ನೂ ಪ್ಲೀಸ್ ಮಾಡೋಕಾಗಲ್ಲ. ಎಲ್ರತ್ರಾನೂ ಪ್ರೀತಿ, ವಿಶ್ವಾಸದಿಂದ ಕೆಲಸ ತೆಗೀತೀನಿ ಅಂತಂದ್ರೆ ಸಾಧ್ಯಾನೂ ಆಗಲ್ಲ. ನಿನ್ನ ಮುಂದೆ ನಗ್ತಾ “ನೀವೇ ಗುರುಗಳೂ” ಅಂದವರು ನಿನ್ನಿಂದೆ “ಇವ್ನಂಥ ದರಿದ್ರದವನು ಎಲ್ಲೂ ಇಲ್ಲ” ಅಂತೆಲ್ಲಾ ಹೇಳೋದಿಲ್ಲಾಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೃದ್ಧಾಪ್ಯದ ಕಥೆ-ವ್ಯಥೆ: ಈಶ್ವರ. ಜಿ. ಸಂಪಗಾವಿ, ಕಕ್ಕೇರಿ. 

                        ಕರುಳ ಬಳ್ಳಿ ಚಿಗುರಬೇಕೆಂಬುದು ಎಲ್ಲ ಜೀವಿಗಳ ಸಹಜ ಬಯಕೆ. ಅದರಂತೆ ಮನುಷ್ಯನು ಮಕ್ಕಳಿಂದ ತನ್ನ ವಂಶದ ಬಳ್ಳಿ ಚಿಗುರಲಿ ಎಂದು ಹಂಬಲಿಸುತ್ತಾನೆ. ಮಕ್ಕಳಾಗದೇ ಇದ್ದಾಗ ಹತ್ತು ಹನ್ನೆರಡು ದೇವರುಗಳಿಗೆ ಹರಕೆ ಹೊತ್ತು ಸುಸ್ತಾಗುತ್ತಾನೆ. ಛಲದಂಕಮಲ್ಲನಂತೆ ಎಡೆಬಿಡದೆ ಅನೇಕ ಡಾಕ್ಟರಗಳನ್ನು ಸಂಪರ್ಕಿಸುತ್ತಾನೆ.  ಮಕ್ಕಳಾಗುವ ಮುನ್ಸೂಚನೆ ಅವನನ್ನು ಪುಲಕಿತಗೊಳಿಸುತ್ತದೆ. ಹೆತ್ತ ಮಕ್ಕಳನ್ನು ಚನ್ನಾಗಿ ಬೆಳೆಸಿ, ವಿದ್ಯಾವಂತರನ್ನಾಗಿಸಲು ಹಗಲಿರುಳು ತನ್ನ ಜೀವ ಸವೆಸುತ್ತಾನೆ. ಜೀವಮಾನದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕದ ತಟ್ಟಿದ ಕನಸು ಪುಸ್ತಕ ವಿಮರ್ಶೆ: ಪಿ ಕೆ…? ನವಲಗುಂದ

ಕೃತಿ-ಕದ ತಟ್ಟಿದ ಕನಸು ಕವಿ- ಭೀಮಪ್ಪ ಮುಗಳಿ  ಪ್ರಕಾಶಕರು-ಸಹಜ ಪ್ರಕಾಶನ  ವಿದೇಶದಲ್ಲಿ ಇದ್ದು ಕನ್ನಡದ ಹಣತೆ ಹಚ್ಚಿ ಮೂರು ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಭೀಮಪ್ಪ ಮುಗಳಿಯವರಿಗೆ ಮೊದಲ ಅಭಿನಂದನೆಗಳು ತಿಳಿಸುತ್ತೇನೆ. ಮೈತುಂಬ ಕೆಲಸ ಹೊಟ್ಟೆ ತುಂಬಾ ಊಟ ಕಣ್ಣು ತುಂಬಾ ನಿದ್ದೆಯಿದ್ದರೆ ಊಹೆಗೆ ಮೀರಿದ್ದ ಕನಸುಗಳು ಮೂಡುತ್ತವೆ. ಆ ಕನಸುಗಳು ಕೆಟ್ಟದ್ದು ಆಗಿದೆಯೋ? ಒಳ್ಳೆಯದು ಆಗಿದೆಯೋ? ಅನ್ನೋದು ಎರೆಡನೇ ವಿಚಾರ ಆದರೆ ಕನಸುಗಳು ಸುತ್ತ ಹೆಣೆದಿರುವ ಕವನ ಸಂಕಲನವೇ.  "ಕದ ತಟ್ಟಿದ ಕನಸು"  … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ