ಎಲೆಕ್ಷನ್ನು: ಸಿದ್ದರಾಮ ತಳವಾರ, ದಾಸ್ತಿಕೊಪ್ಪ

ಕೇರಿಯ ಜನ ಕಂಗಾಲಾಗಿದ್ದರು. ಗೋಡೆಯಲ್ಲಿದ್ದ ಗೂಟ ಸುಮ್ಮನೆ ತೆಗೆದು ಅದೆಲ್ಗೋ ಬಡ್ಕೊಂಡ್ರು ಅನ್ನೋ ಹಾಗೆ ಇದೆಲ್ಲಾ ನಮ್ಗೆ ಬೇಕಿತ್ತಾ ಅಂತ ಕೇರಿಯ ಹೆಣ್ಣು ಮಕ್ಕಳೆಲ್ಲಾ ಗುಸು ಗುಸು ಪಿಸು ಪಿಸು ಮಾತಾಡಲು ಶುರು ಮಾಡಿದ್ದರು. ಇರೋದಕ್ಕೆ ಸರಿಯಾದ ಸೂರಿಲ್ಲಾ ಕುಡಿಯೋದಕ್ಕೆ ನೀರಿದ್ರೂ ಕೇರಿಯಾಚೆ ಹೋಗಿ ಹಿಡ್ಕೊಂಡ ಬರೋ ಧೈರ್ಯ ಇಲ್ಲಾ. ಮನೇಲಿರೋ ಮುಟಗಿ ಹಿಟ್ಟು ಖಾಲಿ ಆಗಿರೋದ್ರಿಂದ ಮೂರು ದಿನದ ತಂಗಳ ರೊಟ್ಟಿಯನ್ನೇ ನೆನೆಸಿಕೊಂಡು ತಿನ್ನೋ ಟೈಮ್ ಬಂದೈತಿ. ಕೂಸುಗಳಿಗೆ ಹಾಲು ಕುಡಿದೇವಂದ್ರೂ ನಮ್ಮ ಹೊಟ್ಟೆಗ್ ಹಿಟ್ಟಿದ್ರೇ ತಾನೇ … Read more

ಉಬ್ಬಿಯ ಸ್ವಗತ……..: ಅಮರ್ ದೀಪ್ ಪಿ.ಎಸ್.

ಗೆಳೆಯ, ಮೇರೆ ಬಾತೋ ಮೇ ತೇರಿ ಫಿಕರ್ ಸದಾ…………………. ಮೇರೆ ಯಾದೋಂ ಮೇ ತೇರಿ ಫಿಕರ್ ಸದಾ………………..   ಖುಷಿಯಾಗಬೇಡ, ನಿನ್ನ ನೆನಸ್ಕೊಂಡು ಈ ಹಾಡು ಗುನುಗುತ್ತಿಲ್ಲ.  ತುಂಬಾ ಹಾಯಾಗಿದ್ದೆ ಕಣೋ ನಾನು, ಸ್ವಾಭಿಮಾನಿ.  ಚಿಕ್ಕಂದಿನಲ್ಲಿ ನನ್ನಿಬ್ಬರು ಗೆಳತಿಯರೊಡನೆ ಹರಟುತ್ತಾ, ನಗುತ್ತಾ ಶಾಲೆಗೆ, ಕಾಲೇಜಿಗೆ ಹೋಗುವುದು ಓದು ಕಲಿಯಲು ಎನ್ನುವುದನ್ನೇ ಮರೆತು ತುಂಬಾ ನಲಿಯುತ್ತಿದ್ದೆ. ಕಾಲೇಜಿನಲ್ಲಿ ಚೂಡಿ ಹಾಕಿದರೆ ವೇಲ್ ಹಾಕದೇ ಹೊರಟರೆ, ಇದ್ದರೂ ಕೊರಳಿಗಷ್ಟೇ ಸುತ್ತಿಕೊಂಡು ತಿರುಗುವುದನ್ನು ನೋಡಿ ಫ್ಯಾಮಿಲಿ ಫ್ರೆಂಡ್ಸ್ ಥರವಿದ್ದ ಹುಡುಗನೊಬ್ಬ ಗದರಿಸಿ … Read more

ಜಾತ್ಯಾಗೇನೈತಿ ಸುಡಗಾಡ: ತಿರುಪತಿ ಭಂಗಿ

       ಅಂವ ಉಳಿಯೋದ ಗ್ಯಾರಂಟಿ ಇಲ್ಲ. ನಾಂವ sಮಾಡಬೇಕಾದ ಪ್ರಯತ್ನಾ ಎಲ್ಲಾ ಮಾಡಾಕ ಹತ್ತೀವಿ. ಮಿಕ್ಕಿದ್ದ ಆ ದೇವ್ರಿಗೆ ಬಿಟ್ಟದ್ದ ಅನಕೋತ ಕೈಯಾಗ ಒಂದ ದೇಹಾ ಚಕ್ಕಮಾಡುವ ಮಶಿನ್ ಹಿಡಕೊಂಡ ಮಾತಾಡಕೋತ ಮಾತಾಡಕೋತ ಕಂಚಿ ಡಾಕ್ಟರ್ ಆಫ್ರೇಶನ್ ಥೇಟರ್ಗೆ ಹೊಂಟ. ಬಿಳಿ ಸೀರಿ,ಬಿಳಿ ಜಂಪರ್ ತೊಟ್ಟ, ಮೂಗಿಗೆ ಎತ್ತಗೊಳಿಗೆ ಹಾಕಿದಂಗ ಒಂದ ಬಾಯಿಬುಟ್ಟಿ ಹಕ್ಕೊಂಡ, ಮನಿ ಕಳ್ಳತನಾ ಮಾಡಾಕ ಬಂದ ಕಳ್ಳರಂತೆ ವೇಷಧಾರಿ ನರಸಬಾಯಿಗೋಳು ಡಾಕ್ಟರ್ ಹಿಂದ ಮುಂದ ಪಾದರಸದ ಹಂಗ ಆ ಕಡೆಯಿಂದ ಈ … Read more

ಮೂಕ ಪ್ರಾಣಿಯ ಪ್ರೀತಿ: ಪ್ರವೀಣ ಕಾಗಾಲ.ಕುಮಟಾ.

                 ಅದೊಂದು ಪುಟ್ಟ ಊರು.  ಆ ಊರಿನಲ್ಲಿ ಸೊಮೇಗೌಡ ಎಂಬ ಮಧ್ಯಮವರ್ಗದ ವ್ಯಕ್ತಿಯು ತನ್ನ ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಬಾಳ್ವೆ ನಡೆಸುತ್ತಿದ್ದನು. ಸೊಮೆಗೌಡನು ಇತರರಿಗೆ ಯಾವಾಗಲೂ ಸಹಾಯ ಮಾಡುತ್ತ ತನ್ನ ಎರಡು ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಲು ಇವರು ಶ್ರಮಿಸುತ್ತಿದ್ದರು. ಸೊಮೇಗೌಡನ ಮಗನ ಹೆಸರು ನಿಖಿಲ್. ಹತ್ತನೆಯ ತರಗತಿಯಲ್ಲಿ ಓದುತ್ತಿದ್ದನು. ಮಗಳ ಹೆಸರು ರೂಪಾ. ಇವಳು ನಿಖಿಲ್ ಗಿಂತ ಎರಡು ವರ್ಷ ದೊಡ್ಡವಳಾಗಿದ್ದಳು. ನಗರದ ಕಾಲೇಜಿನಲ್ಲಿ ಪಿ. ಯು. ಸಿ. … Read more

ರಾಜ್ಯೋತ್ಸವ: ಪಾರ್ಥಸಾರಥಿ ಎನ್

ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು, " ಕನ್ನಡ ನಾಡು ನುಡಿ ಜಲ ಭೂಮಿಗಾಗಿ, ನನ್ನ ಈ ಜನ್ಮವನ್ನು ಮೀಸಲಾಗಿಡುವೆ.  ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ  ಅನ್ನ ತಿನ್ನುತ್ತಿರುವೆ, ನಿಮ್ಮ ನಡುವೆ ಒಬ್ಬ ನೆಚ್ಚಿನ ನಟನಾಗಿ ನಿಂತಿರುವೆ ಎನ್ನುವದಾದರೆ ಅದಕ್ಕೆ ಈ ನಾಡಿನ ಸಮಸ್ತ ತಾಯಿಯರ ಪ್ರೀತಿ, ಅಕ್ಕ ತಂಗಿಯರ ವಾತ್ಸಲ್ಯ ಕಾರಣ. ಸ್ವಂತ ಅಣ್ಣ ತಮ್ಮಂದಿರು ನನ್ನ  ಜೊತೆ ಇರಲಿಲ್ಲ, ಆದರೆ ನೀವು ನನ್ನ ಕೈ ಬಿಡಲಿಲ್ಲ, ನನಗೆ ಅಣ್ಣನಂತೆ … Read more

ಆಗಂತುಕ: ಪಾರ್ಥಸಾರಥಿ ಎನ್

ಬಾಗಿಲಲ್ಲಿ ನಿಂತ ಕುಮುದಳಿಗೆ  ಮನೆಯ ಎದುರಿಗೆ  , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು.  ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ ಜೋತುಬಿದ್ದ ಬಟ್ಟೆಯ ಜೋಳಿಗೆ. ಹಾಗೆ ಕೈಯಲ್ಲಿ  ಆಸರೆಗೆ ಹಿಡಿದು ನಡೆಯುವಂತ ಉದ್ದನೆಯ ನಯಮಾಡಿದ ಕೋಲು.  ಸಾಕಷ್ಟು ಉದ್ದ ಎನ್ನಬಹುದಾದ ಬಿಳಿ ಕರಿ ಬಣ್ಣ ಮಿಶ್ರಿತ ಗಡ್ಡ ಅವಳ ಗಮನ ಸೆಳೆಯಿತು.   ಶಂಕರ ಆಗುವದಿಲ್ಲ  ಅನ್ನುವಂತೆ ತಲೆ ಅಡ್ಡಡ್ಡ ಆಡಿಸುತ್ತಿದ್ದ. ಕುಮುದ ಹೊರಗೆ ಬಂದು ನಿಂತಿದ್ದು … Read more

 ಅಕ್ಷರ, ಅನ್ನ, ಕುಬೇರ: ಸೋಮಶೇಖರ ಬಿದರೆ

                                      ಬೆಳಗಿನ ಸೂರ್ಯ ಆಗಲೇ ತೇಲಿ ಬಂದು ೩ನೇಅಂತಸ್ತಿನಲ್ಲಿರೊ ಅವನ ಮನೆಯ ಕಿಟಕಿಯಲ್ಲಿ ಇಣುಕುತ್ತಿದ್ದ, ಹೆಂಡತಿ ಮಗ ಇನ್ನೂ ಸುಖ ನಿದ್ರೆಯಲ್ಲಿದ್ರು. ಬ್ರಾಹ್ಮೀ ಮಹೂರ್ತದಲ್ಲಿ ಏಳಬೇಕಂದು ಎಷ್ಟೋ ಸಲ ಅನ್ನಿಸಿದರೂ ಸಾಧ್ಯವಾಗಿಲ್ಲ. ತಿಂಗಳದ ಮೊದಲ ವಾರವಾದ್ದರಿಂದ ಖುಷಿಯಾಗಿದ್ದ. ರೂಡಿಯಂತೆ ತನ್ನ ಮೊಬೈಲಿನ ಸ್ಕ್ರೀನ್ ಆನ್ ಮಾಡಿದ ಸಾಲು ಸಾಲಾಗಿ ಸಂದೇಶಗಳು ಬಂದಿದ್ವು … Read more

 ಬೆಳಕು ಕಂಡ ಕಣ್ಣು: ಅನಂತ ರಮೇಶ್

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.  "ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ !   ಈ ಥರ ಹಸಿರು ನಾನು ನೋಡೆ ಇಲ್ಲ " "ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ" … Read more

ಜೋಗದ ಜಾಲ: ಪ್ರಶಸ್ತಿ

ಮಳೆಗಾಲದಲ್ಲಿನ ಮಲೆನಾಡು ಅಂದ್ರೆ ಎಲ್ಲೆಡೆ ಹಚ್ಚ ಹಸಿರು. ಬಿಟ್ಟೂ ಬಿಡದೇ ಸುರಿಯೋ ಮಳೆಗೆ ಕಗ್ಗಲ್ಲುಗಳ ನಡುವೆ ಬೈತಲೆ ತೆಗೆದಂತಹ ಜಲಪಾತಗಳು, ಹಸಿರು ಹೊದ್ದ ಕಾನನಗಳು. ಇವುಗಳನ್ನು ಕಣ್ತುಂಬಿಕೊಳ್ಳೋಕೆ ಎಲ್ಲೆಡೆಯಿಂದ ಬರ್ತಿರೋ ಪ್ರವಾಸಿಗರಿಗೆ ರೆಕ್ಕೆಬಿಚ್ಚಿದ ನವಿಲುಗಳ, ಇಂಪು ಕಂಠದ ಕೋಗಿಲೆಗಳ ಸ್ವಾಗತ. ಮಳೆ ಹೆಚ್ಚಾದಂತೆಲ್ಲಾ ಹೆಚ್ಚಾಗೋ ಜಲಪಾತಗಳ ಭೋರ್ಗರೆತಕ್ಕೆ ಸುತ್ತಲಿನ ಜಾಗದಲ್ಲೆಲ್ಲಾ ಮಂಜು ಮುಸುಕಿ ಜಲಪಾತದ ನೋಟವೇ ಮುಚ್ಚಿಹೋಗೋದೂ ಉಂಟು. ಅಂತಹ ಸಂದರ್ಭದಲ್ಲೆಲ್ಲಾ ಬೀಸೋ ಗಾಳಿಯ ಜೊತೆ ತೆರೆತೆರೆಯಾಗಿ ಸರಿವ ಮಂಜ ಪರದೆಯ ಹಿಂದಿನ ಜಲಪಾತವನ್ನು ಕಣ್ತುಂಬಿಕೊಳ್ಳೋ ಅನುಭವವೇ … Read more

ಅನುರಣಿಸಿದ ಅಲೆಗಳು: ಸಾತ್ವಿಕ್ ಹ೦ದೆ

ಭರವಸೆಗಳೆಲ್ಲಾ ಬತ್ತಿ ಹೋಗಿದ್ದವು. ಇರುವಿಕೆಗೆ ಹೊಸ ಅರ್ಥಗಳನ್ನು ಹುಡುಕಿಕೊ೦ಡು ಬದುಕಬೇಕಾಗಿದೆಯೋ ಏನೋ ಎನಿಸುವಷ್ಟು ಖಿನ್ನತೆ. ರೌರವ ಮೌನದ ನಡುವೆ ಅಲೆಗಳ ಆರ್ಭಟ. ತನ್ನದೇ ಪ್ರಶ್ನೋತ್ತರಗಳಲ್ಲಿ ಸಮುದ್ರದ ಅಲೆಗಳು ಮಗ್ನವಾಗಿದ್ದವು. ಸಮುದ್ರ ತೀರದಲ್ಲಿ ಸಾಕಷ್ಟು ಮೀನುಗಳು ಸತ್ತುಬಿದ್ದಿದ್ದವು.  ಕಾಗೆಗಳು ನಾ ಮು೦ದು ತಾ ಮು೦ದು ಎ೦ಬ೦ತೆ ಹಿ೦ಡು ಹಿ೦ಡಾಗಿ ಬ೦ದು ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೇರೆ ಪಕ್ಷಿಗಳ೦ತೆ ತನ್ನ ಆಹಾರವನ್ನು  ಬೇರೆಡೆಗೆ  ಕೊ೦ಡೊಯ್ದು ತಿನ್ನದ ಕಾಗೆಗಳು ಸ್ವಲ್ಪ ರುಚಿನೋಡಿ ಹಾರಿ ಹೋಗುತ್ತಿದ್ದವು. ಇಡೀ ಸಮುದ್ರತೀರ ಸ್ಮಶಾಣವಾಗಿ ಮಾರ್ಪಾಡಾಗಿತ್ತು. ಸ೦ಸ್ಕಾರವೇ … Read more

ಕೋಟಿಗೊಬ್ಬ!!: ಎಸ್.ಜಿ.ಶಿವಶಂಕರ್

ಪ್ರೇಕ್ಷಕರು ಉಸಿರು ಬಿಗಿಹಿಡಿದು ಕೂತಿದ್ದರು!! ಟಿವಿ ಸ್ಟುಡಿಯೋದಿಂದ 'ಕೋಟಿ ಲೂಟಿ' ಕಾರ್ಯಕ್ರಮ ನೇರ ಪ್ರಸಾರವಾಗುತ್ತಿತ್ತು. ಸ್ಟುಡಿಯೋದ ಪ್ರೇಕ್ಷಕರ ಜೊತೆಗೆ ಮನೆಗಳಲ್ಲಿ ಟಿವಿ ನೋಡುತ್ತಿದ್ದವರೂ ಸಹ ಉಸಿರು ಬಿಗಿಹಿಡಿದು ಕೂತಿದ್ದರು!! ಆತ ಅದ್ವಿತೀಯನೆನಿಸಿದ್ದ! ಒಂದಿಷ್ಟೂ ತಿಣುಕದೆ ಸರಾಗವಾಗಿ, ಒಂದು ಕ್ಷಣವೂ ಯೋಚಿಸದೆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದ! ಇದುವರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರಿಗೂ ಆ ರೀತಿಯಲ್ಲಿ ಉತ್ತರಿಸಲು ಸಾಧ್ಯವಾಗಿರಲಿಲ್ಲ!  ಕಾರ್ಯಕ್ರಮವನ್ನು ಪ್ರಾರಂಭದಿಂದಲೂ ವೀಕ್ಷಿಸುತ್ತಿದ್ದವರಿಗೆ ಆಶ್ಚರ್ಯ! ಯಾರೀತ? ಇಲ್ಲಿಯವರೆಗೂ ಯಾರ ಗಮನಕ್ಕೂ ಬಾರದೆ ಎಲ್ಲಿ ಅಡಗಿದ್ದ? ಜ್ಞಾನಭಂಡಾರದ ಬಾಗಿಲನ್ನೇ … Read more

ಅರೆಘಳಿಗೆಯ ಕತ್ತಲು: ಫಕೀರ

ಕಪ್ಪು ಬೆಳಕಿನ ಆ ಕಂದಕದ ಬೆಳಕಿನಲ್ಲಿ ಸಾಗಿದ್ದ ನಮ್ಮ ಮಾತುಕತೆ ಏಲ್ಲೋ ಒಂದು ಕಡೆ ತನ್ನ ಹಾದಿಯನ್ನು ತಪ್ಪಿತ್ತು. ಅವಳನ್ನು ನಾನು ಭೇಟಿಯಾದೆ ಅನ್ನುವ ವಿಚಾರ ನನಗೆ ಆಗಲೇ ಮರೆತುಹೋಗಿತ್ತು. ಸುಂದರ ಮೊಗದ, ಆಕರ್ಷಕ ನಗುವಿನ ಆ ಹುಡುಗಿಯ ಮಾತುಗಳನ್ನು ಕೇಳುತ್ತಾ ಅವಳ ಜೊತೆ ನಾನು ಅನುಸರಿಸಿ ಒಡನಾಡುತ್ತಾ ಅವಳ ಮನಸ್ಸಿಗೆ ಹತ್ತಿರವಾಗಿದ್ದು ಮಾತ್ರ ತುಂಬಾ ಅನಿರೀಕ್ಷಿತ. ಇಷ್ಟು ವರ್ಷದವರೆಗೆ ಹುಡುಗಿಯರ ಅಂತರಂಗವನ್ನು ಹೆಚ್ಚು ಕೆದಕದ ನನಗೆ ಅದೊಂದು ಹೊಸ ಅನುಭವವಾಗಿತ್ತು. ಹೆಣ್ಣಿನ ಸುಂದರ ಮನೆಯೊಳಗೊಮ್ಮೆ ಹೋಗಿ … Read more

ಗೋಡೆಗಳ ದಾಟುತ್ತ…: ಉಮೇಶ್ ದೇಸಾಯಿ

               ಅಂದು ಬೆಳಿಗ್ಗೆಯೇ ದತ್ತಣ್ಣಿ ತನ್ನ ಗೆಳೆಯ ದಸ್ತಗೀರನಿಗೆ ಫೋನು ಮಾಡಲು ಎರಡು ಕಾರಣಗಳಿದ್ದವು. ಅಂದು ದಸ್ತಗೀರನ ಹುಟ್ಟಿದಹಬ್ಬ ಅಂತೆಯೇ ನಿನ್ನೆ ಎಲ್ಲ ಟಿವಿ ಚಾನಲಗಳಲ್ಲಿ ಬಂದ ದಸ್ತಗೀರನ ಸಂದರ್ಶನ. ಗೆಳೆಯನ ಉತ್ತರಕ್ಕೂ ಕಾಯದೇ ಭೆಟ್ಟಿಯಾಗಲು ಬರುವುದಾಗಿ ಹೇಳಿ ಫೋನು ಇಟ್ಟ. ಕೇವಲ ಅಸೀೀಪನ ತಂದೆ ಆಗಿದ್ದಕ್ಕಾಗಿ ಅವ ಕೇಳಬಾರದ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿತ್ತು,ಮಾತ್ರವಲ್ಲ ಮಗ ಹೀಗೆ ಮಾಡಿದ ಅದಕ್ಕೆ ನನಗೇಕೆ ಈ ಶಿಕ್ಷೆ ಎಂಬ ಅವನ ಅಳಲು ಮೂಕರೋದನವಾಗಿತ್ತು. … Read more

ವಿಶ್ವಾಮಿತ್ರ!!: ಎಸ್.ಜಿ.ಶಿವಶಂಕರ್

ಅರಳೀಕಟ್ಟೆಯಲ್ಲಿ ಕೂತಿದ್ದ ಶತಾಯುಶಿ ಹನುಮಜ್ಜ ತನ್ನಷ್ಟೇ ವಯಸ್ಸಾದಂತೆ ಕಾಣುತ್ತಿದ್ದ ಕನ್ನಡಕವನ್ನು ಸರಿಪಡಿಸಿಕೊಂಡು ತನ್ನ ಮುಂದೆ ಧೂಳೆಬ್ಬಿಸುತ್ತಾ ಹೋದ ಕಾರು ನೋಡಿದ. ಇದು ಎಷ್ಟನೆಯ ಕಾರು ಎಂದು ಅಚ್ಚರಿಪಟ್ಟ. ಸುಮಾರು ಅರ್ಧ ಗಂಟೆಯಿಂದ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಕಾರುಗಳು ಅವನು ಕೂತಿದ್ದ ಆರಳೀಕಟ್ಟೆಗೆ ಧೂಳಿನ ಅಭಿಷೇಕ ಮಾಡಿದ್ದವು.  "ಇವತ್ತೇನು ನಡೀತೈತೆ ಆ ಫಾರಮ್ಮಿನಾಗೆ..?" ಹನುಮಜ್ಜ ಗೊಗ್ಗರು ದನಿಯಲ್ಲಿ ತನಗೆ ತಾನೇ ಎಂಬಂತೆ ಹೇಳಿಕೊಂಡ. "ಏನು ನಡದ್ರೆ ನಮಗೇನು..? ನಾವು ಹೊಲಗೈಯಾದು ತಪ್ಪತೈತ..?" ಹನುಮಜ್ಜನಿಗಿಂತ ಹತ್ತು ವರ್ಷ ಕಿರಿಯ ಭರಮಜ್ಜ … Read more

ಹೊಸ ಸ್ನೇಹ: ಅನಂತ ರಮೇಶ್

ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ,  ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ.  ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, " ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು" ಅನ್ನುತ್ತಾಳೆ ಅಮ್ಮ. ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ … Read more

ಮರಳಿ ಬಂದನೆ ದೀಪು: ನಾಗರತ್ನಾ ಗೋವಿಂದನ್ನವರ.

ಮುಸ್ಸಂಜೆಯ ಸಮಯ ಕಡಲಿನ ಅಲೆಗಳು ಜೋರಾಗಿ ದಂಡೆಗೆ ಅಪ್ಪಳಿಸುತ್ತಾ ಇದ್ದರೂ ಅವುಗಳ ಕಡೆ ಗಮನ ಕೊಡದೆ ತನ್ನ ಇರುವನ್ನೆ ಮರೆತು ಮರಳಿನಲ್ಲಿ ಏನೆನೊ ಚಿತ್ತಾರಗಳನ್ನು ಬರೆಯುವುದರಲ್ಲಿ ಮಗ್ನಳಾಗಿದ್ದಳು ಸರೋಜಾ. ಅದೆಷ್ಟು ಹೊತ್ತು ಹಾಗೆ ಬರೆಯುತ್ತಿದ್ದಳೊ ತಕ್ಷಣ ಏನೊ ನೆನಪಾದವಳಂತೆ ಮೆಲಕ್ಕೆದ್ದು ವೇಗವಾಗಿ ನಡೆಯುತ್ತಾ ಲಾಡ್ಜ್‍ನ್ನು ತಲುಪಿದಳು. ಎದುರಿಗೆ ಬರುತ್ತಿದ್ದ ಸರೋಜಾಳನ್ನು ನೋಡಿದ ಕಿರಣಗೆ ವಿಪರೀತ ಕೋಪಬಂದು ಎಲ್ಲಿ ಹೋಗಿದ್ದೆ ನಿನಗಾಗಿ ಅದೆಷ್ಟೊತ್ತು ಅಂತ ಕಾಯೋದು. ಎಲ್ಲಿಯೂ ಹೋಗಿಲ್ಲಾ ನಡಿರಿ ಎನ್ನುತ್ತಾ ಅವನೊಡನೆ ಹೆಜ್ಜೆ ಹಾಕಿ ರೂಮಿನೊಳಗೆ ಹೋದಳು. … Read more

ಆಹಾ..ಬೆಂಗಳೂರು!!: ಎಸ್.ಜಿ.ಶಿವಶಂಕರ್,

ಪದೇಪದೇ ನಿಟ್ಟುಸಿರುಬಿಡುತ್ತಿದ್ದ್ದ್ದೆ! ಏನೋ ಒಂದು ರೀತಿಯ ಅಧೀರತೆ! ದುಗುಡ! ಯಾವ ಕೆಲಸವನ್ನೂ ಮಾಡಲಾರದೆ ಟಿವಿಯತ್ತ ನೋಡುತ್ತಿದ್ದೆ. ಜನಪ್ರಿಯ ಸೀರಿಯಲ್ಲಿನ ನಾಲ್ಕುನೂರ ಇಪ್ಪತ್ತನೆಯ ಎಪಿಸೋಡು ಬಿತ್ತರವಗುತ್ತಿತ್ತು! ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮೂಲ ಕತೆ ಹಳ್ಳ ಹಿಡಿದಿದೆ ಎನ್ನುವುದು ಗೊತ್ತಿದ್ದರೂ ರಬ್ಬರಿನಂತೆ ಎಳೆಯುತ್ತಿದ್ದರು! ನನ್ನವಳು ಹುರಿಳಿಕಾಯಯನ್ನು ಚಟಚಟನೆ ಮುರಿಯುತ್ತಾ, ತುಟುಪಿಟಿಕ್ಕನ್ನದೆ ಸೀರಿಯಲ್ಲಿನಲ್ಲಿ ಕಣ್ಣು ನೆಟ್ಟಿದ್ದಳು. ನಾಲ್ಕು ನಿಮಿಷ ಸೀರಿಯಲ್ಲಿನ ನಂತರ ಐದು ನಿಮಿಷದ ಜಾಹೀರಾತು! ಮತ್ತೆ ನಾಲ್ಕು ನಿಮಿಷ ಸೀರಿಯಲ್ಲು ಹೀಗೆ ಸಾಗಿತ್ತು ಸೀ..ರಿ..ಯಲ್ಲು! ದೀರ್ಘ ಜಾಹೀರಾತಿನ ನಡುವೆ ಮನೆಯವಳು … Read more

ಕೊಲೆ: ಪ್ರಸಾದ್ ಕೆ.

ಅವನು ಮಾತಿಲ್ಲದೆ ಒಳಬಂದ. ನನ್ನಷ್ಟಕ್ಕೆ ನಾನು ರೇಜರ್ ಬ್ಲೇಡನ್ನು ಹಿಂದಕ್ಕೂ ಮುಂದಕ್ಕೂ ಉಜ್ಜುತ್ತಾ ಹರಿತಗೊಳಿಸುತ್ತಿದ್ದೆ. ಅವನ ಗುರುತು ಹಿಡಿದಾಕ್ಷಣ ನಾನು ನನಗರಿವಿಲ್ಲದಂತೆಯೇ ಸಣ್ಣಗೆ ನಡುಗಿದೆ. ನನ್ನ ಪುಣ್ಯಕ್ಕೆ ಅದನ್ನವನು ಗಮನಿಸಲಿಲ್ಲ. ನಾನು ನನ್ನ ಭಯವನ್ನು ತೋರಗೊಡದೆ ಬ್ಲೇಡನ್ನು ಹರಿತಗೊಳಿಸುವುದನ್ನು ಮುಂದುವರಿಸಿದೆ. ರೇಜರ್ ಬ್ಲೇಡನ್ನು ಹೆಬ್ಬೆರಳಿಗೆ ಕೊಂಚ ಒತ್ತಿ ಹಿಡಿದು, ಬೆಳಕಿಗೂ ಹಿಡಿದು ಪರೀಕ್ಷಿಸುತ್ತಾ ಸಾಕಷ್ಟು ಹರಿತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡೆ. ಅತ್ತ ಅವನೂ ಮಾತನಾಡುವ ಗೋಜಿಗೆ ಹೋಗದೆ ತನ್ನ ಸೊಂಟಕ್ಕೆ ಬಿಗಿದುಕೊಂಡಿದ್ದ, ಬಂದೂಕಿನ ಬುಲೆಟ್ಟುಗಳನ್ನು ಉದ್ದಕ್ಕೂ ಜೋಡಿಸಿದ್ದ ಬೆಲ್ಟ್ … Read more

ಬದುಕಿನ ಸುಳಿಯಲ್ಲಿ: ಪ್ರಕಾಶ ತದಡಿಕರ

  “ಹುಚ್ಚಿ… ಹುಚ್ಚಿ”  ಎಂದು ಹಿಯಾಳಿಸುತ್ತ  ಕೇಕೆ ಹಾಕುವ ಮಕ್ಕಳ ಗುಂಪು ನನ್ನನ್ನು ಅಟ್ಟಿಸಿ ಕುಷಿಪಡುತ್ತಿತ್ತು. ರಸ್ತೆ ಬದಿಯಲ್ಲಿ ಅಸ್ತವ್ಯಸ್ತವಾಗಿ ನಿಂತ ನಾನು ಮಕ್ಕಳೆಸೆಯುವ ಕಲ್ಲಿನ ಪೆಟ್ಟು ಸಹಿಸದೇ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಯುವಕರು, ಹಿರಿಯರೂ ಎನ್ನದೇ  ಎಲ್ಲರೂ ನನ್ನ ಅವಸ್ಥೆ ಕಂಡು ನಗುತ್ತಿದ್ದರು. ಹಸಿವಾದಾಗ ಊರಿನ ಖಾನವಳಿಯ ಮುಂದೆ ನಿಲ್ಲುವ ನನ್ನ ಗೋಳು ಪ್ರತಿ ನಿತ್ಯ ಪೇಟೆಯ ರಸ್ತೆಯಲ್ಲಿ ಕಾಣಬಹುದಾದ ದೃಶ್ಯ. ಕೆದರಿದ ತಲೆಗೂದಲು, ಕೊಳಕು ದೇಹ , ಆ ದೇಹವನ್ನು ಮುಚ್ಚಲು ಹೆಣಗುವ  ಹಳೆಯ … Read more

ಕರಿಯ ಮತ್ತು ಕೆಂದಿಯ ಕಥೆ: ನವೀನ್ ಮಧುಗಿರಿ

ಮಲ್ಲಿಗೆಪುರದ ಗಾಳೇರ ಓಣಿಯಲ್ಲಿ ಹನುಮಂತಪ್ಪನ ಮನೆ. ಹನುಮಂತಪ್ಪ ಒಂದು ಕಪ್ಪು ಬಣ್ಣದ ನಾಯಿ ಸಾಕಿದ್ದ. ತುಂಬಾ ದಷ್ಟಪುಷ್ಟ ಹಾಗೂ ನಂಬಿಕಸ್ಥ ನಾಯಿ ಅದು. ಹನುಮಂತಪ್ಪ ಅದನ್ನ ಕರಿಯ ಅಂತ ಕರೆಯುತ್ತಿದ್ದ. ಅಪ್ಪಿತಪ್ಪಿ ಅವನೆದುರು ಯಾರಾದರೂ ಅದನ್ನ ನಾಯಿ ಅಂದರೆ, "ಅದುಕ್ಕೆ ಹೆಸರಿಲ್ವಾ? ನಾಯಿ ಅಂತ್ಯಾಕಂತೀರ? ಕರಿಯ ಅಂತ ಕರೀರಿ" ಎಂದು ದಬಾಯಿಸುತ್ತಿದ್ದ. ಆ ಕರಿಯನ ದೆಸೆಯಿಂದಾಗಿ ಹನುಮಂತಪ್ಪನ ಮನೆಯಂಗಳದ ಮೇಲೆ  ಹೆಜ್ಜೆಯಿಡಲು ಜನ ಹೆದರುತ್ತಿದ್ದರು. ಕರಿಯ ಮನೆಯ ಹಜಾರದಲ್ಲಿ ಮಲಗುತ್ತಿದ್ದ. ಹಾಕಿದ ಊಟ ತಿನ್ನುತ್ತಿದ್ದ. ಯಾರಾದರೂ ಮನೆಯ … Read more