ಹನಿ ನೀರಿಗೆ ಸಮುದ್ರದಷ್ಟು ಪ್ರೀತಿ ..: ಅನಿತಾ ನರೇಶ್ ಮಂಚಿ

 ಇಡೀ ಮಳೆಗಾಲ  ಇವರು ಬಾರದೇ ಇದ್ದಾಗ ಸಿಟ್ಟು ಉಕ್ಕೇರುತ್ತಿತ್ತು. ಅಲ್ಲಾ.. ದೂರದಲ್ಲಿ ಕಂಡರೂ ಗುರುತಿಲ್ಲದವರಂತೆ ಕತ್ತು ಕೊಂಕಿಸಿ, ಮುಖ ಕುಣಿಸಿ ಮಾಯವಾಗುತ್ತಿದ್ದರಲ್ಲದೇ ಮನೆ ಕಡೆಗೆ ಸುಳಿಯುತ್ತಿರಲಿಲ್ಲ.. ಎಷ್ಟು ಸೊಕ್ಕು ಅಂದುಕೊಂಡರೂ ಹಾಗೇನಿರಲಾರದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಲೂ ಇದ್ದೆ. ಅಯ್ಯೋ.. ನಿಮಗೆ ಇವರು ಯಾರು ಅಂತ ಮೊದಲು ಪರಿಚಯ ಮಾಡಿಕೊಡದೆ ನನ್ನ ಗೋಳು ತೋಡ್ಕೊಳ್ತಾ ಇದ್ದೀನಲ್ಲಾ.. ಇವರು ಅಂದರೆ ಹಕ್ಕಿಗಳು ಸ್ವಾಮೀ.. ಮಳೆಗಾಲದಲ್ಲಿ ಹೊರಗೆ ನೀರಿನ ಲಭ್ಯತೆ ಇರುವ ಕಾರಣ ಇವರ ಹಾರಾಟ ಕೂಗಾಟವೆಲ್ಲಾ ದೂರದಲ್ಲೇ … Read more

ಕಣ್ಣರಿಯದ ವಿಜ್ಞಾನ, ಈ ನ್ಯಾನೋ ತಂತ್ರಜ್ಞಾನ: ರೋಹಿತ್ ವಿ. ಸಾಗರ್

ಆಟೋ ರಿಕ್ಷಾಗಳ ರೀತಿ ಸದ್ದು ಮಾಡುತ್ತಾ, ಹಳ್ಳಿಯಿಂದ ದಿಲ್ಲಿವರೆಗಿನ ರಸ್ತೆಗಳಲ್ಲಿ ಇಲಿಮರಿಗಳಂತೆ ಓಡಾಡುತ್ತಿರುವ, ಹೆದ್ದಾರಿಗಳಲ್ಲಿ ಇನ್ನೇನು ಲಾರಿಗಳ ಅಡಿಯಲ್ಲೇ ದಾಟಿ ಬಿಡುತ್ತವೇನೋ ಎಂಬ ಕಲ್ಪನೆಗಳನ್ನ ಹುಟ್ಟುಹಾಕಿದ ನ್ಯಾನೋ ಎಂಬ ಕಾರುಗಳ ಬಗ್ಗೆ ಖಂಡಿತವಾಗ್ಯೂ ಕೇಳಿಯೇ ಇರುತ್ತೀರಿ. ಆ ಕಾರಿನ ಆಕಾರ ಕುಬ್ಜ ರೀತಿಯದ್ದು ಎಂಬುದನ್ನು ಸಾರಿ ಹೇಳಲಿಕ್ಕೆ ನ್ಯಾನೋ ಎಂಬ ಹೆಸರನ್ನು ಟಾಟಾ ಕಂಪನಿ ಬಳಸಿಕೊಂಡಿತು. ಗ್ರೀಕ್ ಬಾಷೆಯ ಪದವಾಗಿರುವ ಈ ’ನ್ಯಾನೊ’ದ ಅರ್ಥ ’ಕುಬ್ಜ’ ಎಂದು, ಆದರೆ ನಮ್ಮ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ … Read more

ಮೋವ: ಅಖಿಲೇಶ್ ಚಿಪ್ಪಳಿ

    ಆಕಾಶದಿಂದ ೮೦ ಕಿ.ಮಿ. ವೇಗದಲ್ಲಿ ಇಳಿದು ತನ್ನ ಬಲಿಷ್ಟವಾದ ಕೊಕ್ಕಿನಿಂದ ಹದಿನೈದಡಿ ಎತ್ತರದ ಗಿಡದ ಎಲೆಗಳನ್ನು ಮೇಯುತ್ತಿದ್ದ ೧೨ ಅಡಿ ಎತ್ತರದ ದೈತ್ಯ ಪಕ್ಷಿಯ ಹಿಂಭಾಗಕ್ಕೆ ಬಲವಾಗಿ ಕುಕ್ಕುತ್ತದೆ. ೮ನೇ ಮಹಡಿಯಿಂದ ಬೀಳುವ ಬೂದಿಯ ಇಟ್ಟಿಗೆಯಷ್ಟು ವೇಗವಾಗಿ ಅಪ್ಪಳಿಸಿದ ಹೊಡೆದಕ್ಕೆ ದೈತ್ಯ ಪಕ್ಷಿ ಧರಾಶಾಯಿಯಾಗುತ್ತದೆ. ಮಾರಣಾಂತಿಕವಾದ ಗಾಯದಿಂದ ರಕ್ತ ಬಸಿದು, ಬಲಿ ಅಸುನೀಗುತ್ತದೆ. ಬಲಿಗಿಂತ ಸುಮಾರು ೧೫-೨೦ ಪಟ್ಟು ಚಿಕ್ಕದಿರುವ ಹಾಸ್ತಸ್ ಎಂಬ ಹೆಸರಿನ ಗಿಡುಗಕ್ಕೆ ಮುಂದಿನ ಒಂದು ವಾರ ಬೇರೆ ಬೇಟೆ ಬೇಕಿಲ್ಲ. … Read more

ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ.. ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.   “ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು.  ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ … Read more

ಆರಭಿ: ಅಭಿಲಾಷ್ ಟಿ.ಬಿ.

         ಉರಿ ಬಿಸಿಲು, ಬೇಸಿಗೆ ರಜ, ಮೇ ತಿಂಗಳ ಮೊದಲ ವಾರದಲ್ಲೇ ಸೂರ್ಯ ತನ್ನ ದರ್ಪವನ್ನು ತೋರುಸುತ್ತಿದ್ದಾನೆ. ಬೆಳ್ಳಿಗ್ಗೆ ಒ೦ಭತ್ತುಮುಕ್ಕಾಲು ಘ೦ಟೆ, ಲಕ್ಷ್ಮೀ ಆ೦ಟಿ ಆಫೀಸ್ಗೆ ಹೊರಡುವ ಸಮಯ. ಬಿಸಿಲು ಹೆಚ್ಚು ತಾಕದಿರಲಿ ಎ೦ದು ನೀಲಿ ಬಣ್ಣದ ಛತ್ರಿಯನ್ನು ಹಿಡಿದು ಗೇಟ್ ಬಾಗಿಲಿಗೆ ಬೀಗ ಹಾಕುತ್ತಿದ್ದರು. ಮಹಡಿ ಮೇಲಿನ ಗ್ರಿಲ್ ಸ೦ಧಿಯಿ೦ದ ಇಣುಕಿ, "ಅಮ್ಮ, ಬರ್ತಾ ಸಾಯ೦ಕಾಲ ಬಾಲ್ ಐಸ್ ಕ್ರೀಮ್ ತರುತ್ತೀಯಾ" ಎ೦ದು ಒಂದು ಮಗು ಮುದ್ದಾಗಿ ಕೇಳಿತು. ಮುಖದಲ್ಲಿ ಆತುರದ ಭಾವನೆ … Read more

ಮೂವರ ಕವಿತೆಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ, ಕು.ಸ.ಮಧುಸೂದನ್

ಕೊಳದ ದಡ ಬೇಟೆ ಸಲುವಾಗಿ ಧ್ಯಾನಸ್ಥ ಕೊಕ್ಕರೆ ಬುದ್ಧನಲ್ಲ ~•~ ತಂಗಾಳಿಯ ಹಾದಿ ಚಲಿಸಿದೆ ಪರಿಮಳ ಹಾರಿತು ಚಿಟ್ಟೆ ಉದುರಿದವು ಹಣ್ಣೆಲೆಯ ~•~ ಪಶ್ಚಿಮ ಶಿಖರದ ಮೇಲೆ ನೇಸರನ ಜಾರುಬಂಡಿ ಮುಂಜಾಗ್ರತೆಗೆ ಮಡಿಲು ತೆರೆದಳು ಇಳೆ ~•~ ಆಷಾಡದ ಗಾಳಿ ತರಗೆಲೆಗೆ ಕಲಿಸಿದೆ ಓಟ ~•~ ಜೇಡದ ಮನೆ ಮುರಿಯಲು ಹೋಗಿ ನೊಣ ಬಲೆಯೊಳಗೆ ಬಲಿ ~•~ ಮಲಗಿರುವ ಸೂರ್ಯನಿಗೆ ಮುಂಜಾನೆ ಸುಪ್ರಭಾತ ಕೊಕ್ ಕೊಕ್ ಕೋ ~•~ ಬೆತ್ತಲೆ ಚಂದಿರ ಬೆತ್ತಲೆ ಮರ ಕತ್ತಲ ಉಡುಗೆ … Read more

ಶನಿ-ಮನ್ಮಥ ಯೋಗ: ಎಸ್.ಜಿ. ಸೀತಾರಾಮ್

ಮನ್ಮಥ ಮತ್ತು ಶನಿ ಎಂಬ ಎರಡು ಅತ್ಯುಜ್ವಲ ಶಕ್ತಿಗಳು ಡಿಕ್ಕಿ ಹೊಡೆದಿರುವುದರಿಂದಾಗಿ, ಪ್ರಸಕ್ತ ಶಾಲೀವಾಹನ ಶಕೆ ೧೯೩೮ರಲ್ಲಿ, ಅತಿವಿರಳ ಶನಿ-ಮನ್ಮಥಯೋಗ ಒದಗಿಬಂದಿದೆ. ಇದರಿಂದಾಗಿ ಕೆಲವು ವಿಲಕ್ಷಣ ಬೆಳವಣಿಗೆಗಳಾಗಲಿದ್ದು, ಅತ್ಯಾಶಾವಾದಿಗಳಿಂದಾಗಿ ಉಗಾದಿಯು ’ಉಗ್ರಾದಿ’ಯೇ ಆಗಿ ಬಿಡಬಹುದು ಎಂದು ಕೆಲವು ಆಶಂಕವಾದಿಗಳು ನುಡಿಯತೊಡಗಿದ್ದಾರೆ. ಇದನ್ನು ಕೇಳಿ, ಮೊದಲೇ ಬೇಸಿಗೆಯ ಬೇಗೆಯಿಂದ ಬೇಸತ್ತು ಬೆವರುತ್ತಿರುವ ಪ್ರಜೆಗಳ ಬೇನೆಬೇಗುದಿಗಳು ಮತ್ತಷ್ಟು ಹೆಚ್ಚಾಗಿವೆ. ಹಾಗಾಗಿ, ಇಂದಿನ ಉಷ್ಣಾವರಣದಿಂದ ಪ್ರಜೆಗಳಿಗೆ ಒಂದಿನಿತು ಇನಿದಂಪು ನೀಡಬೇಕೆಂದು, ಶನಿ-ಮನ್ಮಥಯೋಗ ಕುರಿತಂತೆ ಇಲ್ಲೊಂದು  ಕಾಕದೃಷ್ಟಿಯನ್ನೀಯಲಾಗಿದೆ. ಈ ಸಂವತ್ಸರದ ಸ್ವಾರಸ್ಯಗಳಲ್ಲಿ, ಮನ್ಮಥ … Read more

ಹೂವ ತೋಟದ ಕತೆ: ಪ್ರಶಸ್ತಿ ಪಿ.

ಭಾವಗಳ ತೋಟದಲ್ಲೊಂದು ಹೂವ ಬಯಸಿದ ಮನಕೆ ಆ ಹೂವೊಂದು ಮಾಲೆ ಸೇರಿದ ದಿನ ಬಹಳ ಬೇಸರ. ಹೂವಾಗೋ ಸಮಯದಲ್ಲಿ ಮೊಗ್ಗಾಗುತ್ತಿದ್ದ ಭಾವಗಳೆಲ್ಲಾ ಯಾವಾಗ ನವಿರಾಗಿ ಹೂವಾದವೋ ಗೊತ್ತೇ ಆಗದಂತೆ ಕಳೆದುಹೋಗಿತ್ತಲ್ಲ ಕಾಲ. ಮೊಗ್ಗಾಗಿದ್ದ ಜೀವಗಳೆಲ್ಲಾ ಹೂವಾಗಿ ಒಂದೊಂದಾಗಿ ತೋಟದಿಂದ ಖಾಲಿಯಾಗುತ್ತಿದ್ದರೂ ಮಾಲೆಯಾದರೆ ಆ ಹೂವೊಂದಿಗೇ ಆಗಬೇಕೆಂಬ ಕನಸು ಬೇಸಿಗೆಯ ಬೆವರಂತೆ ಹೆಚ್ಚಾಗುತ್ತಲೇ ಇತ್ತು.ಇನ್ನೊಂದು ಹೊಸ ಮಾಲೆ, ಎನ್ನೆಷ್ಟು ಸಮಯದಲ್ಲಿ ನನ್ನದಿರಬಹುದೆನ್ನುತ್ತಾ ಸುಮ್ಮನೇ ದಿಟ್ಟಿಸಿದವನಿಗೊಮ್ಮೆ ದಿಗ್ರ್ಭಾಂತಿ. ಬಯಕೆ ಬೇಸಿಗೆಯಲ್ಯಾವ ಮಾಯೆಯಲ್ಲಿ ಮಳೆ ಬಂತೋ, ಗೊತ್ತೇ ಆಗದಂತೆ ಕನಸಿನಾಕೃತಿ ಕರಗಿಸಿದ … Read more

ಗುರುರಾಯರು ತಪವ ಗೈದ ಪಂಚಮುಖಿ ಸುಕ್ಷೇತ್ರ: ಹೊರಾ. ಪರಮೇಶ್ ಹೊಡೇನೂರು

ಪವಿತ್ರ ಗಂಗೆ ತುಂಗಭದ್ರಾ ನದಿ   ತೀರದಲ್ಲಿ ಶ್ರೀ ಗುರು ಸಾರ್ವಭೌಮರು ಮಂತ್ರಾಲಯದಲ್ಲಿ ಐಕ್ಯಗೊಂಡ ನಂತರ ಆ ಪುಣ್ಯ ಬೃಂದಾವನ ನಾಡಿನಾದ್ಯಂತ ದೈವಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿ ಬೆಳೆದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಗಾಣಧಾಳ ಗ್ರಾಮದ ಹೊರ ಭಾಗದಲ್ಲಿ ಅದೇ ಗುರುರಾಯರು 16ನೇ ಶತಮಾನದಲ್ಲಿ ಸುಮಾರು 12 ವರ್ಷಗಳ ಸುದೀರ್ಘ ತಪಸ್ಸು ಮಾಡಿ ಪಂಚಮುಖಿ ಆಂಜನೇಯ ಸ್ವಾಮಿಗಳ ದರ್ಶನ ಭಾಗ್ಯ ಪಡೆದ ಪವಿತ್ರ ಭೂಮಿಯು ಇಂದು 'ಪಂಚಮುಖಿ ಪ್ರಾಣದೇವರ ಗುಡಿ' ಎಂದೇ ಖ್ಯಾತಿ … Read more

ಥ್ರೀರೋಜಸ್ ಕಥೆ (ಕೊನೆಯ ಭಾಗ): ಸಾವಿತ್ರಿ ವಿ. ಹಟ್ಟಿ

ಇಲ್ಲಿಯವರೆಗೆ ಇದಾದ ನಂತರ ಮತ್ತೊಮ್ಮೆ ಅವರ ಕಾಲೇಜಿನ ಹತ್ತಿರ ಹೋಗಲು ನಾವು ಸಮಯ ಹೊಂಚುತ್ತಿದ್ದೆವು. ಬನ್ನಿಹಬ್ಬದ ದಿನ ಭೆಟ್ಟಿ ಮಾಡಬೇಕೆಂದುಕೊಂಡರೂ ಸರಿ ಅನ್ನಿಸಲಿಲ್ಲ. ಏಕೆಂದರೆ ಅಂದು ಬಾನುವಾರ. ಝಡ್ ಪಿಯ ಸಲಹೆಯ ಮೇರೆಗೆ ಶನಿವಾರ, ಅವರ ವಿರಾಮದ ಅವಧಿಯಲ್ಲಿ ಅವರನ್ನು ಭೆಟ್ಟಿ ಮಾಡಿದ್ದೆವು. ಪರಸ್ಪರರು ಬನ್ನಿ ಹಂಚಿಕೊಂಡು ಖುಷಿಯಾಗಿ ಹರಟಿದೆವು. ಪಿ.ಯು ದಿನಗಳನ್ನು ಸ್ಮರಿಸಿಕೊಂಡು ನಕ್ಕೆವು. ಮಾತಿನ ಮಧ್ಯೆ ಮದುವೆ ವಿಷಯಕ್ಕೆ ಬಂದಾಗ ವಂದನಾ ಓದು, ನೌಕರಿ ಆದ ನಂತರವೇ ಮದುವೆ ಆಗುವುದಾಗಿಯೂ, ತನ್ನ ತಂದೆ ತಾಯಿಗೂ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅತೀ ಪ್ರೀತಿ ಸುದೀರ್ಘಕಾಲ ಕ್ರಿಯಾಶೀಲ ಜೀವನ ನಡೆಸಿದ್ದ ವಯಸ್ಸಾದ ಸನ್ಯಾಸಿಯೊಬ್ಬನನ್ನು ಬಾಲಕಿಯರ ಶಿಕ್ಷಣ ಕೇಂದ್ರದಲ್ಲಿ ಪ್ರಾರ್ಥನಾ ಮಂದಿರದ ಪಾದ್ರಿಯಾಗಿ ನೇಮಿಸಲಾಯಿತು. ಚರ್ಚಾಗೋಷ್ಟಿಗಳಲ್ಲಿ ಆಗಾಗ್ಗೆ ಪ್ರೀತಿ, ಪ್ರೇಮ ಪ್ರಮುಖ ವಿಷಯವಾಗಿರುತ್ತಿದ್ದದ್ದನ್ನು ಆತ ಗಮನಿಸಿದ. ಯುವತಿಯರಿಗೆ ಈ ಕುರಿತಾದ ಅವನ ಎಚ್ಚರಿಕೆ ಇಂತಿತ್ತು: “ನಿಮ್ಮ ಜೀವನದಲ್ಲಿ ಯಾವುದೇ ಆಗಿರಲಿ ಅತಿಯಾಗುವುದರ ಅಪಾಯವನ್ನು ತಿಳಿಯಿರಿ. ಅತಿಯಾದ ಕೋಪ ಕಾಳಗದಲ್ಲಿ ಭಂಡಧೈರ್ಯಕ್ಕೆ ಕಾರಣವಾಗಿ ಸಾವಿನಲ್ಲಿ ಅಂತ್ಯಗೊಳ್ಳಬಹುದು. ಮತೀಯ ನಂಬಿಕೆಗಳಲ್ಲಿ ಅತಿಯಾದ ವಿಶ್ವಾಸ ಮುಚ್ಚಿದ ಮನಸ್ಸು ಮತ್ತು ಕಿರುಕುಳ ಕೊಡುವಿಕೆಗೆ ಕಾರಣವಾಗಬಹುದು. ಅತಿಯಾದ … Read more

ಸಾಮಾನ್ಯ ಜ್ಞಾನ (ವಾರ 71): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ನಿರ್ದೇಶಕರು ಯಾರು? ೨.    ಟೆಲ್ಕೊ (TELCO) ನ ವಿಸ್ತೃತ ರೂಪವೇನು? ೩.    ಕೋಟಿ ವಿದ್ಯೆಗಳಲ್ಲಿ ಮೇಟಿ ವಿಧ್ಯೆಯೇ ಮೇಲು ಎಂದು ಹೇಳಿದವರು ಯಾರು? ೪.    ಬಂಕಲೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ? ೫.    ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದವರು ಯಾರು? ೬.    ಸಮೀಪ ದೃಷ್ಟಿದೋಶವನ್ನು ನಿವಾರಿಸಲು ಬಳಸುವ ಮಸೂರ ಯಾವುದು? ೭.    ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ದಾರ ಯಾವುದು? ೮.    ಮದ್ದೂರು ವಡೆಗೆ ಪ್ರಸಿದ್ಧವಾದರೆ ಧಾರವಾಡ ಯಾವುದಕ್ಕೆ … Read more

ಅನ್ನದಾತನೊಬ್ಬನ ಜೊತೆ ಇಡೀ ದಿನ..: ನಟರಾಜು ಎಸ್. ಎಂ.

 ಚಳಿಯ ಕಾರಣಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಅನ್ನು ಅಕ್ಷರಶಃ ನಿಲ್ಲಿಸಿಬಿಟ್ಟಿದ್ದ ನಾನು ಇತ್ತೀಚೆಗೆ ಶಿವರಾತ್ರಿಯ ತರುವಾತ ಚಳಿ ಕಡಿಮೆ ಆದ ಕಾರಣ ಬೆಳಿಗ್ಗೆ ಅಥವಾ ಸಂಜೆ ಮತ್ತೆ ವಾಕ್ ಶುರು ಮಾಡಿದ್ದೆ. ಆಫೀಸಿನ ದಿನಗಳಾದರೆ ಸಂಜೆ ಐದೂವರೆ ಆರು ಗಂಟೆ ಆಗುತ್ತಿದ್ದಂತೆ ಆಫೀಸಿನಿಂದಲೇ ಸೀದಾ ತೀಸ್ತಾ ನದಿಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಒಂದೂ ಒಂದೂವರೆ ಗಂಟೆ ತಪ್ಪದೆ ವಾಕ್ ಮಾಡುತ್ತೇನೆ. ಇವತ್ತು ಭಾನುವಾರ ರಜೆ ಇದ್ದುದರಿಂದ ಬೆಳಿಗ್ಗೆ ಬೇಗನೆ ಎದ್ದವನು ರೆಡಿಯಾಗಿ ಮಾರ್ನಿಂಗ್ ವಾಕ್ ಗೆಂದು ತೀಸ್ತಾ ನದಿಯ … Read more

ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ: ರೋಹಿತ್ ವಿ. ಸಾಗರ್

ಕರೆಂಟ್ ಅಥವಾ ವಿದ್ಯುತ್ ಎಂಬ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ತರಹೇವಾರಿ ವಿಧಗಳಲ್ಲಿ ನಾವು ಅವಲಂಬಿಸಿರುವ, ಅದಿಲ್ಲದ ಜೀವನವನ್ನು ಊಹಿಸಲೂ ಹೆದರಬೇಕಾಗಿರುವಂತಹ ಅಪೂರ್ವ ಶಕ್ತಿಯ ಆಕರವೇ ಈ ’ವಿದ್ಯುತ್’ ಅಥವಾ ’ಕರೆಂಟ್’.    ಹಗಲು ರಾತ್ರಿಗಳೆನ್ನದೆ ಸೂರ್ಯ ಚಂದ್ರರನ್ನೂ ನಾಚಿಸುವ ಬೆಳಕಿನ ದೀಪಗಳು, ಬೆಳಗ್ಗೆ ಎದ್ದಕೂಡಲೇ ಸುಪ್ರಭಾತ ಹಾಡುವ ರೇಡಿಯೋ, ಎಫ್.ಎಮ್ ಗಳು, ಮುಂದೆ ಕೂತವರ ಕಾಲವನ್ನೇ ಕರಗಿಸಬಲ್ಲ ಮೂರ್ಖರ ಪೆಟ್ಟಿಗೆ ಎಂದೇ ಖ್ಯಾತಿ ಪಡೆದ ಟಿ.ವಿ.ಗಳು, ಜಾಣರ ಪೆಟ್ಟಿಗೆಯಂತಿರುವ ನಮ್ಮ … Read more

ಕರಿಯನ ಕತೆ: ಅಖಿಲೇಶ್ ಚಿಪ್ಪಳಿ

ಊರಿನಲ್ಲಿ ಹೊಸ ಮನೆ ಕಟ್ಟಿಕೊಂಡು, ಬೇಕಾದಷ್ಟು ತರಕಾರಿ ಬೆಳೆದುಕೊಂಡು, ಸೊಂಪಾಗಿ ತಿನ್ನಬಹುದು ಎಂದು ಕನಸು ಕಾಣುತ್ತಿದ್ದವನಿಗೆ, ಎರವಾಗಿದ್ದು ಮಂಗಗಳು, ಏನೇ ಬೆಳೆದರೂ ಅದ್ಯಾವುದೋ ಹೊತ್ತಿನಲ್ಲಿ ಬಂದು ತಿಂದು, ಗಿಡಗಳನ್ನು ಹಾಳು ಮಾಡಿ, ಇಡೀ ಶ್ರಮವನ್ನು ವ್ಯರ್ಥಮಾಡಿ ಹೋಗುತ್ತಿದ್ದವು, ಮಂಗಗಳ ಅಸಹಾಯಕತೆ ಗೊತ್ತಿದ್ದರೂ, ಅದೇಕೋ ಅವುಗಳ ಮೇಲೆ ಸ್ವಲ್ಪ ಕೋಪವೂ ಬರುತ್ತಿತ್ತು. ತರಕಾರಿಗಳನ್ನು ತಿನ್ನುವುದಲ್ಲದೇ, ಗಿಡಗಳನ್ನು ಹಾಳು ಮಾಡುವ ಪರಿಗೆ ಕೆಲವೊಂದು ಬಾರಿ ಖಿನ್ನತೆಯೂ ಆವರಿಸುತ್ತಿತ್ತೇನೋ ಎಂಬ ಅನುಮಾನವೂ ಕಾಡುತ್ತಿತ್ತು. ಇದಕ್ಕೊಂದು ಉಪಾಯವೆಂದರೆ, ನಾಯಿಯೊಂದನ್ನು ತಂದು ಸಾಕುವುದು, ನಾಯಿ … Read more

ಮಗುವಿನ ಆರೈಕೆ: ಮಹಿಮಾ ಸಂಜೀವ್

ನಾನು ನಾಲ್ಕು ವರ್ಷದ ಮಗುವಿನ ತಾಯಿ..ಅಂದರೆ ನನಗು ನಾಲ್ಕೇ ವರ್ಷ!! ಹೌದು ಒಂದು ಮಗುವಿನೊಂದಿಗೆ ತಾಯಿಯೂ ಹುಟ್ಟುತ್ತಾಳೆ .. ನನ್ನ ತಾಯ್ತನದ ಜನನವು ಹಾಗೆ ಆದದ್ದು .. ಮಗು ಬೆಳೆಸುವದೇನು  ಸಹಜದ ಕಲೆಯಲ್ಲ…ಆದರೆ ಅದರ ತಯಾರಿಯನ್ನ ಬಹಳ ಮುಂಚಿನಿಂದ  ಮಾಡಬೇಕಾಗುತ್ತೆ ..ಒಂದು ಮಾನಸಿಕ ತಯಾರಿಯದ್ದು ಮತ್ತೊಂದು ದೈಹಿಕ ತಯಾರಿಯದ್ದು  ಮಾನಸಿಕವಾಗಿ ಹೆಣ್ಣು ತಾಯ್ತನಕ್ಕೆ ಬಹಳ ಬೇಗ ಸಜ್ಜುಗೊಳ್ಳುತ್ತಾಳೆ  ಅನ್ನೋ ನಂಬಿಕೆ ಇದೆ..ನಾನು ಹೇಳುತ್ತೇನೆ ಅದು ಸುಳ್ಳು, ಆಕೆಗೂ ಸಮಯ ಬೇಕು..ಅಲ್ಪ ಸಲ್ಪದ ತರಬೇತಿಯು ಬೇಕು..ಮನೆಯಲ್ಲಿ ಹಿರಿಯರಿದ್ದಾರೆ ಸರಿ, … Read more

ಕನ್ನಡಿಗಳು: ಪ್ರಸಾದ್ ಕೆ.

ಕಳೆದ ಒಂದೆರಡು ತಿಂಗಳಿನಿಂದ ಇದು ತುಂಬಾ ಕಷ್ಟವಾಗಿಬಿಟ್ಟಿದ್ದರೂ ಅಭ್ಯಾಸವಾಗಿ ಹೋಗಿದೆ.  ನನ್ನ ಸಮಸ್ಯೆಯೇನೆಂದರೆ ನಾನು ನೋಡುತ್ತಿರುವ ದೃಶ್ಯಗಳೆಲ್ಲಾ ತಿರುಗುಮುರುಗಾಗಿ ಕಾಣಿಸುತ್ತಿವೆ. ಮಿರರ್ ಇಮೇಜ್ ಅಂತೀವಲ್ಲಾ, ಆ ಥರಾನೇ. ಪುಸ್ತಕದಲ್ಲಿರುವ ಅಕ್ಷರಗಳು, ಬೀದಿಯ ಸೈನ್ ಬೋರ್ಡುಗಳು, ಕಟ್ಟಡಗಳಿಗೆ ಜೋತುಬಿದ್ದಿರುವ ಫಲಕಗಳು ಹೀಗೆ ಎಲ್ಲವೂ, ಎಲ್ಲೆಲ್ಲೂ ಕನ್ನಡಿಯಿಂದ ನೋಡಿದಂತೆ ಕಾಣುತ್ತಿವೆ. ಮಗುವೊಂದು ಮೊಟ್ಟಮೊದಲ ಬಾರಿಗೆ ನಡೆದಾಡಲು ಆರಂಭಿಸಿದಾಗ ಜಗತ್ತನ್ನು ಹೇಗೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತದೆಯೋ ಹಾಗೇ ನನಗೂ ಅನುಭವವಾಗುತ್ತಿದೆ. ಎಲ್ಲವೂ ನಿಗೂಢ, ಎಲ್ಲವೂ ವಿಚಿತ್ರ. ಮೊದಲೊಮ್ಮೆ ಭಯಭೀತನಾಗಿದ್ದರೂ ಈಗ ಸಾಮಾನ್ಯವಾಗಿ … Read more

ಪರಶುವಿನ ದೇವರು (ಕೊನೆ ಭಾಗ): ಶಾಂತಿ ಕೆ. ಅಪ್ಪಣ್ಣ

ಇಲ್ಲಿಯವರೆಗೆ… "ಅವ್ವ, ಚಡ್ಡಿ ಹಾಕ್ಕೊಡು" ಮಗು ಕೈ ಜಗ್ಗಿದಾಗ ಅದರ ಬೆನ್ನಿಗೆ ಗುದ್ದಿದಳು ಸುಜಾತ. "ಏ ಮುಂಡೇದೇ,  ಎಷ್ಟು ಸಲ ಹೇಳಿಲ್ಲ, ಮಮ್ಮಿ ಅನ್ಬೇಕು ಅಂತ, ಇನ್ನೊಂದ್ಸಲ ಅವ್ವ ಪವ್ವ ಅಂದ್ರೇ ಹೂತಾಕ್ಬುಟ್ಟೇನು" ಮಾತೇನೋ ಆಡಿ ಮುಗಿಸಿದಳು. . ಆದರೆ ಅವಳಿಗೆ ತನ್ನದೇ ವರಸೆಯ ಬಗೆ ನಾಚಿಕೆಯೆನಿಸಿತು. ಅಪರೂಪಕ್ಕೂ ಅವಳಲ್ಲಿ ಇಂಥ ಬಯ್ಗುಳಗಳು ಹೊರಬಿದ್ದದ್ದಿಲ್ಲ ಆದರೆ ಇಲ್ಲಿಗೆ ಬಂದ ಮೇಲೆ ತನಗೆ ಇವೆಲ್ಲ ಸಲೀಸಾಗಿ ಬರುತ್ತಿದೆ. ಏಟು ತಂದು ಮಗು ಅಳುವುದಕ್ಕೂ ಕೆಳಗಿನಿಂದ ಪಾಪಯ್ಯನ ಹೆಂಡತಿ ಅವಳನ್ನು … Read more

ಥ್ರೀರೋಜಸ್ ಕಥೆ (ಭಾಗ 2): ಸಾವಿತ್ರಿ ವಿ. ಹಟ್ಟಿ

  ಇಲ್ಲಿಯವರೆಗೆ… ಮೊದಲನೇ ಕಿರು ಪರೀಕ್ಷೆಗಳು ಮುಗಿದಿದ್ದವು. ಅವತ್ತು ಶನಿವಾರ. ಕೊನೆಯಲ್ಲಿ ಆಟದ ಅವಧಿ ಇತ್ತು. ಏಕೋ ಆಟದಲ್ಲಿ ತೊಡಗಿಕೊಳ್ಳಲು ಮನಸ್ಸು ಬರಲಿಲ್ಲ. ನನ್ನ ವಾಸದ ಕೋಣೆಗೆ ಹೋಗಿ ಅಕ್ಕಿ ತೊಳೆದು, ಒಲೆ ಹೊತ್ತಿಸಿಟ್ಟೆ. ಅನ್ನ ಬೇಯುವಷ್ಟರಲ್ಲಿ ರವೀಂದ್ರ ಕಲ್ಲಯ್ಯಜ್ಜನವರ ಖಾನಾವಳಿಯಿಂದ ಕೆಟ್ಟ ಖಾರದ ರುಚಿಯಾದ ಸಾರು ತಂದಿರಿಸಿದ್ದ. ಊಟದ ನಂತರ, ಸಾಕಷ್ಟು ಸಮಯವಿದ್ದುದರಿಂದ ಒಂದೆರಡು ತಾಸು ಚೆಂದಗೆ ನಿದ್ದೆ ಮಾಡಿಬಿಟ್ಟೆ. ಎಚ್ಚರವಾದಾಗ ಕೋಣೆಯಲ್ಲಿ ರವೀ ಇರಲಿಲ್ಲ. ಅವನು ಸಮಯ ಸಿಕ್ಕಾಗೆಲ್ಲ ಗೆಳೆಯರನ್ನು ಹುಡುಕಿಕೊಂಡು ಹೋಗುವವನು. ಎಲ್ಲಿದ್ದಾನೆಂದು … Read more

ಕಿರಿ ಕಿರಿ ಕೆಟ್ಟು: ಪ್ರಶಸ್ತಿ ಪಿ.

ಓದುಗ ಮಿತ್ರರಿಗೆಲ್ಲಾ ಯುಗಾದಿ ಶುಭಾಶಯಗಳು ಎನ್ನುತ್ತಾ ಮನ್ಮಥನಾಮ ಸಂವತ್ಸರದಲ್ಲಿ ಹೊಸದೇನು ಬರೆಯೋದು ಅಂತ ಯೋಚಸ್ತಿರುವಾಗ್ಲೇ ಹೋ ಅಂತ ಪಕ್ಕದ ಪೀಜಿ ಹುಡುಗ್ರೆಲ್ಲಾ ಕೂಗಿದ ಸದ್ದು. ಓ ಇನ್ನೊಂದು ವಿಕೆಟ್ ಬಿತ್ತು ಅನ್ಸತ್ತೆ ಅಂತ ಹಾಸಿಗೆಯಿಂದ ತಟ್ಟನೆದ್ದ ರೂಂಮೇಟು ಟೀವಿ ರಿಮೇಟ್ ಹುಡುಕಹತ್ತಿದ್ದ. ನಿನ್ನೆಯಷ್ಟೇ ಒರಿಜಿನಲ್ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಡೂಪ್ಲಿಕೇಟ್ ಆಧಾರ್ ಕಾರ್ಡ್ ಹೊಂದಿರೋರ ನಡುವಿನ ಕದನ ಅಂತಲೇ ಬಿಂಬಿತವಾಗಿದ್ದ ಚೆಂಡುದಾಂಡಿನಾಟದಲ್ಲಿ ಮುಳುಗಿದ್ದ ನನಗೆ ಇವತ್ತು ಮತ್ತೊಂದು ಪಂದ್ಯವಿದೆಯೆನ್ನೋದೇ ಮರೆತು ಹೋಗಿತ್ತು. ಟೀವಿ ಹಾಕುತ್ತಲೇ ಮತ್ತೆ … Read more

ಕೆಲಸಕೆ ಚಕ್ಕರ್… ಊಟಕೆ ಹಾಜರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ… ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ … Read more

ಮೂವರ ಕವನಗಳು: ನವೀನ್ ಮಧುಗಿರಿ, ಶ್ರೀಮಂತ್ ಎಮ್. ಯನಗುಂಟಿ, ಯದುನಂದನ್ ಗೌಡ ಎ.ಟಿ

ನಾವು ಪ್ರೀತಿಯೆಂದರೆ ನಂಬಿಕೆ ನೀನು ನನ್ನೆಷ್ಟು ನಂಬುವೆ? ನಿನ್ನಷ್ಟೇ ನಾನೇಕೆ ನಿನಗಿಷ್ಟವಾದೆ? ಗೊತ್ತಿಲ್ಲ. ಪ್ಲೀಸ್ ನಿಜ ಹೇಳು ಕಾರಣ ಹುಡುಕುವುದು ಕಷ್ಟ ನಾನು ನಿನ್ನೆಷ್ಟು ಪ್ರೀತಿಸಲಿ? ಅದು ನಿನ್ನಿಷ್ಟ ನಿಲ್ಲು ಏನು? ಪದೇ ಪದೇ ನೀನು ನಾನು ಅನ್ನುವುದು ನಿಲ್ಲಿಸು ಮತ್ತೇನನ್ನಲಿ? ನಾವು ಅಂತನ್ನುವುದು ಒಳ್ಳೆಯದು ಯಾಕೆ? ನೀನೆಂದರೆ ನಾನು ನಾನೆಂದರೆ ನೀನು ~•~ ಬೆವರು ನಮ್ಮಪ್ಪ ಕವಿತೆಗಳ ಬರೆಯಲಿಲ್ಲ ಭತ್ತ, ರಾಗಿ, ಜೋಳ ಬೆಳೆದ ಅಕ್ಷರಗಳ ಸ್ಖಲಿಸಿಕೊಂಡ ಕವಿಗೆ ಹಸಿವಾಯ್ತು ಅಪ್ಪನ ಬೆವರು ತಿಂದ ~•~ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅಂಟಿಕೊಳ್ಳದಿರುವಿಕೆ (Non-attachment) ಐಹೈ ದೇವಾಲಯದ ಅಧಿಪತಿ ಕಿಟಾನೋ ಗೆಂಪೊ ೧೯೩೩ ರಲ್ಲಿ ವಿಧಿವಶನಾದಾಗ ೯೨ ವರ್ಷ ವಯಸ್ಸು ಆಗಿತ್ತು. ಯಾವುದಕ್ಕೂ ಅಂಟಿಕೊಳ್ಳದಿರಲು ತನ್ನ ಜೀವನದುದ್ದಕ್ಕೂ ಆತ ಪ್ರಯತ್ನಿಸಿದ್ದ. ೨೦ ವರ್ಷ ವಯಸ್ಸಿನ ಅಲೆಮಾರಿ ಬೈರಾಗಿಯಾಗಿದ್ದಾಗ ತಂಬಾಕಿನ ಧೂಮಪಾನ ಮಾಡುತ್ತಿದ್ದ ಯಾತ್ರಿಕನೊಬ್ಬನನ್ನು ಸಂಧಿಸಿದ್ದ. ಒಂದು ಪರ್ವತಮಾರ್ಗದಲ್ಲಿ ಅವರೀರ್ವರೂ ಜೊತೆಯಾಗಿ ಕೆಳಕ್ಕೆ ಇಳಿಯುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲೋಸುಗ ಒಂದು ಮರದ ಕೆಳಗೆ ಕುಳಿತರು. ಯಾತ್ರಿಕ ಧೂಮಪಾನ ಮಢಲೋಸುಗ ತಂಬಾಕನ್ನು ಕಿಟಾನೋಗೆ ನೀಡಿದ. ಆ ಸಮಯದಲ್ಲಿ ತುಂಬಾ ಹಸಿದಿದ್ದ ಕಿಟಾನೋ ಅದನ್ನು … Read more

ಹೆಗ್ಣಾಮೆಷಿನ್!: ಎಸ್.ಜಿ.ಶಿವಶಂಕರ್

    ವಿಚಿತ್ರವೆನ್ನಿಸಬಹುದು! ವಾಷಿಂಗ್ ಮೆಷಿನ್, ಸ್ಯೂಯಿಂಗ್ ಮೆಷಿನ್, ಗ್ರೈಡಿಂಗ್ ಮೆಷಿನ್ ಎಲ್ಲಾ ಕೇಳಿರ್ತೀರಿ. ಆದರೆ ’ಹೆಗ್ಣಾಮೆಷಿನ್’ ? ಅಂದ್ರೆ…ಇದೆಂತಾ ಹೆಸರು..? ಇದೆಂತಾ ಮೆಷಿನ್ನು? ಇದು ಹೇಗೆ ಕೆಲಸ ಮಾಡುತ್ತೆ? ಏನು ಕೆಲಸ ಮಾಡುತ್ತೆ?  ಹೆಗ್ಗಣ ಹಿಡಿಯುವ  ಇಲ್ಲಾ ಹೆಗ್ಗಣ ಸಾಯಿಸುವ ಮೆಷಿನ್ ಇರಬಹುದೆ..? ಇಲ್ಲಾ…ಈ ಲೇಖಕ ಇಲಿಬೋನನ್ನೇ ಹೆಗ್ಣಾಮೆಷಿನ್ ಎಂದು ಹೇಳಿ ಲೇವಡಿ ಮಾಡುತ್ತಿರಬಹುದೆ..? ಈ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ತುಂಬಿರಲು ಸಾಧ್ಯ!     ‘ದೊಡ್ಡಪ್ಪ, ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’     ‘ಮಿಲಿ’ ಎಂಬ … Read more

ಪರಶುವಿನ ದೇವರು: ಶಾಂತಿ ಕೆ. ಅಪ್ಪಣ್ಣ

ಪರಶುವಿಗೆ ದೇವರು ಬಂದಾಗ ಡೊಳ್ಳನ ಕೇರಿಯ ಜನ ಅದಿನ್ನೂ ತಂತಮ್ಮ ಕೆಲಸಗಳಿಂದ ಮರಳಿ ದಣಿವಾರಿಸಿಕೊಳ್ಳುತ್ತ,  ಅಲ್ಲಲ್ಲೆ ಜಗುಲಿ ಕಟ್ಟೆಯ ಮೇಲೆ ಕುಳಿತು ಗಂಡಸರು ಬೀಡಿಯ ಝುರುಕಿ ಎಳೆದು ಕೊಳ್ಳುತ್ತಿದ್ದರೆ, ಹೆಂಗಸರು ಒಂದು ಬಾಯಿ ಕಾಫಿ ಕುಡಿಯುವ ಆತುರಕ್ಕೆ ಒಳಗೆ ಒಲೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರು. ಮೊದಲಿನಂತೆ ಚೂರುಪಾರು ಸೌದೆ ತಂದು ಪ್ರಯಾಸದಿಂದ ಒಲೆ ಹಚ್ಚುವ ಕೆಲಸವೇನೂ ಈಗಿರಲಿಲ್ಲ, ಊರು ನಾಡು ಕಾಣುತ್ತಿದ್ದ ಬದಲಾವಣೆಯ ಗಾಳಿ ಯಾವುದೇ ತಕರಾರು ಮಾಡದೆ ಕೇರಿಯೊಳಗೂ ನುಸುಳಿ ಅಲ್ಲೂ ಅಲ್ಪಸ್ವಲ್ಪ ಬದಲಿಕೆ ತರತೊಡಗಿತ್ತು. … Read more

ಟ್ಯೂನು, ಲೈನು ಮತ್ತು ನಾನು: ಹೃದಯಶಿವ

ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಪರಮೇಶ್ವರ ಹೆಗಡೆಯವರು ಸಂಗೀತ ನೀಡುತ್ತಿರುವ ಆಲ್ಬಮ್ ನಲ್ಲಿ ನಾಲ್ಕು ಹಾಡು ಬರೆಯುತ್ತಿದ್ದೇನೆ ಅಂತ ಹಿಂದೊಮ್ಮೆ ಹೇಳಿದ್ದೆ. ಪರಮೇಶ್ವರ ಹೆಗಡೆಯವರ ಮಾತಿನಂತೆ ಮೊದಲೇ ಸಾಹಿತ್ಯ ಬರೆದುಕೊಡುವಂತೆ, ಆಮೇಲೆ ಆ ಸಾಹಿತ್ಯಕ್ಕೆ ಅವರು ಟ್ಯೂನ್ಸ್ ಹಾಕುವುದಾಗಿ ಹೇಳಿದ್ದರು. ಅದರಂತೆ ನನ್ನ ಆರು ಭಾವಗೀತೆಗಳನ್ನು ಅವರಿಗೆ ಕಳುಹಿಸಿಕೊಟ್ಟೆ. ಆ ಆರರ ಪೈಕಿ ನಿಮಗೆ ಬೇಕಾದ ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ ಅಂತಲೂ ಹೇಳಿದೆ. ಅವರು ಆಯ್ತು ಅಂದು ಅದರಂತೆ ಆ ಆರರ ಪೈಕಿ ಒಂದಕ್ಕೆ ಟ್ಯೂನ್ ಕೂಡ … Read more

ಭಾಷಣದ ಗಮ್ಮತ್ತು: ಅನಿತಾ ನರೇಶ್ ಮಂಚಿ

 ಭಾಷಣ ಎಂಬುದೊಂದು ಕಲೆ. ಕೆಲವರಿಗೆ ಭಾಷಣ ಮಾಡುವುದು ಎಂದರೆ ನೀರು ಕುಡಿದಂತೆ. ಮೈಕ್ ಕಂಡರೆ ಅದೇನೋ ಪ್ರೀತಿ. ಬಹು ಜನ್ಮದಾ ಅನುಬಂಧವೇನೋ ಎಂಬಂತೆ ಹಿಡಿದುಕೊಂಡದ್ದನ್ನು  ಬಿಡಲೇ ಒಲ್ಲರು. ಸಾಧಾರಣವಾಗಿ ರಾಜಕಾರಿಣಿಗಳಿಗೆ ಈ ರೋಗ ಇರುವುದು. ಯಾಕೆಂದರೆ ಅವರು ತಮ್ಮ ಕಾರ್ಯಗಳಿಂದ ಹೆಚ್ಚಾಗಿ ಮಾತಿನ ಬಲದಲ್ಲೇ ಮಂತ್ರಿಗಳಾಗುವಂತಹವರು. ಯಾವುದೇ ಮಾನದಂಡದ ಮುಲಾಜಿಗೂ ಸಿಕ್ಕದೇ ಪದವಿಯನ್ನಾಗಲೀ, ಪದಕಗಳನ್ನಾಗಲೀ,ಪ್ರಶಸ್ತಿಗಳನ್ನಾಗಲೀ ಮಾತಿನ ಬಲದಲ್ಲೇ ಪಡೆಯುವಂತಹವರು. ಅಂತವರು ಮಾತು ನಿಲ್ಲಿಸುವುದಾದರೂ ಹೇಗೆ ಅಲ್ಲವೇ?   ಇವರಷ್ಟೇ ಮೈಕ್ ಪ್ರೀತಿಸುವ ಇನ್ನೊಂದು ಪಂಗಡದ ಜನ ಯಾರೆಂದರೆ  ಕಾರ್ಯಕ್ರಮವನ್ನು … Read more