ಕೊಠಡಿ ಮೇಲ್ವಿಚಾರಣೆ ಎಂಬ ಗುಮ್ಮ…!: ಶೀಲಾ. ಗೌಡರ. ಬದಾಮಿ.

ಶೈಕ್ಷಣಿಕ ವರ್ಷ ಪ್ರಾರಂಭವಾದೊಡನೆ ಮೊದಲ ಸಭೆಯಲ್ಲೇ ಮುಖ್ಯಸ್ಥರು,”ಕಳೆದ ವರ್ಷ ಆದದ್ದಾಯ್ತು. ಈ ವರ್ಷ ಮಾತ್ರ ನಾವು 100/ ರಿಸಲ್ಟ ಮಾಡಬೇಕು.ಅದಕ್ಕಾಗಿ ಪರೀಕ್ಷೆ ಬಂದಾಗ ಗಡಿಬಿಡಿ ಮಾಡುವುದಕ್ಕಿಂತ ಈಗಿನಿಂದಲೇ ಗುರಿ ಸಾಧನೆಗೆ ಕಂಕಣಬದ್ದರಾಗಬೇಕು. “ ಎಂದು ಎಚ್ಚರಿಸುತ್ತಾರೆ. ಆಗಿನಿಂದಲೇ ಎಲ್ಲ ಶಿಕ್ಷಕರ, ಉಪನ್ಯಾಸಕರ ಎದೆ ಢವ….ಢವ…..ವಾರ್ಷಿಕ ಅಂದಾಜು,ಕ್ರಿಯಾಯೋಜನೆ ಸಿದ್ದಪಡಿಸಿ, ಡಿಸೆಂಬರ್ ಅಂತ್ಯಕ್ಕೆ ಸಿಲ್ಯಾಬಸ್ ಮುಗಿಸಿ, ಎರಡು ತಿಂಗಳು ರಿವಿಜನ್ ಮಾಡಬೇಕು ಎಂದು ಜೂನ್ ಒಂದರಿಂದಲೇ ಆನ್ ಯುವರ್ ಮಾರ್ಕ, ಗೆಟ್ ಸೆಟ್,ಗೋ……ಎಂದು ನಮ್ಮನ್ನು ರೇಸಿಗೆ ಬಿಟ್ಟು ಬಿಡುತ್ತಾರೆ. ಅದು … Read more

20ನೇ ಶತಮಾನ ಕಂಡ ಸಂತ ಶ್ರೇಷ್ಠ- ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್: ಶ್ರೀವಲ್ಲಭ ರಾ. ಕುಲಕರ್ಣಿ

ಭಾರತೀಯ ಸಮಾಜದ ರೂಢ ಮೂಲ ನಂಬಿಕೆಗಳ ಮೂಲ ಸ್ವರೂಪವನ್ನು ಪ್ರಶ್ನಿಸಿದ, ಅಲುಗಾಡಿಸಿದ ತೀಕ್ಷ್ಣ ವಿಚಾರವಾದಿ, 20ನೇ ಶತಮಾನದ ಭಾರತೀಯ ಮಹಾನ್ ಚಿಂತಕ ದ್ರಾವಿಡ ನಾಡಿನ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್ 1879 ಸೆಪ್ಟೆಂಬರ್ 17ರಂದು ಮದ್ರಾಸ್ ರಾಜ್ಯದ ಕೊಯಿಮತ್ತೂರ್ ಜಿಲ್ಲೆಯ ಈರೋಡು ಎಂಬಲ್ಲಿ ಹುಟ್ಟಿದರು, ತಮ್ಮ ವಿಚಾರಗಳಿಗೆ ಚಳುವಳಿಯ ಸ್ಪರ್ಶ ನೀಡಿದ ಅವರ ಬದುಕು ಮತ್ತು ಚಿಂತನೆಗಳು ದ್ರಾವಿಡ ಅಸ್ಮಿತೆಯೊಂದನ್ನು ಹುಟ್ಟು ಹಾಕಿ, ತಮಿಳು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಪಸರಿಸುವಂತೆ ಮಾಡಿದ್ದು ಇತಿಹಾಸ. ಪೆರಿಯಾರ್ ರಾಮಸ್ವಾಮಿಯವರ … Read more

ಯಾವುದೇ ಗುಣಾಕಾರ 5 ಸೆಕೆಂಡಿನಲ್ಲಿ ಮಾಡಿ: ಪ್ರವೀಣ್‌ ಕೆ.

https://www.youtube.com/watch?v=Y0frHVjYAEo  ಈ ವಿಡಿಯೋದಲ್ಲಿ ಮನಸ್ಸಿನಲ್ಲಿಯೇ ಹೇಗೆ ಗುಣಾಕಾರಗಳನ್ನು ಮಾಡಬಹುದು ಎಂಬುದನ್ನು ತಿಳಿಸಲಾಗಿದೆ. ಇದನ್ನು ಪ್ರತಿಯೊಂದೂ ಲೆಕ್ಕದಲ್ಲಿ ಉಪಯೋಗಿಸಿದರೆ ನಿಮ್ಮ ಗಣಿತದ ವೇಗ ಹೆಚ್ಚುತ್ತದೆ. ಪ್ರಾಕ್ಟೀಸ್ ಮಾಡಲು ಇಲ್ಲಿ ಒತ್ತಿ : Practice Question 1  

ಅಂತರ ರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಮಹೇಶ್: ಎಂ.ಎನ್.ಸುಂದರ ರಾಜ್

ಪ್ರಕೃತಿ ಛಾಯಾಚಿತ್ರಗಳು ಕೇವಲ ಬಣ್ಣಬಣ್ಣದ ಚಿತ್ರಗಳಲ್ಲ, ಪ್ರಕೃತಿಯಲ್ಲಿ ಮೂಡಿಬಂದ ಸುಂದರ ಕಲಾಕೃತಿಗಳು. ಅವುಗಳನ್ನು ಕೆಮರಾದಲ್ಲಿ ಸೆರೆಹಿಡಿದು ಕಣ್ಮನಗಳಿಗೆ ಮುದನೀಡುವಂತೆ ಸಮಾಜಕ್ಕೆ ನೀಡಿರುವುದರ ಹಿಂದೆ, ಅಪಾರ ಪರಿಶ್ರಮ ಮತ್ತು ತನ್ಮಯತೆಯಿದೆ. ಅದೊಂದು ತಪಸ್ಸು. ನಾವು ಆ ಚಿತ್ರಗಳನ್ನು ನೋಡಿ ಚೆನ್ನಾಗಿದೆ ಎಂದು ಒಂದೇ ಮಾತಿನಲ್ಲಿ ಹೇಳುತ್ತೇವೆ. ಆದರೆ ಅಂತಹ ಫೋಟೋ ತೆಗೆಯಲು ಪಟ್ಟ ಪಾಡು, ತಿರುಗಿದ ಕಾಡು ಮೇಡುಗಳು, ಜೀವದ ಹಂಗು ತೊರೆದು ವನ್ಯ ಜೀವಿಗಳ ಅಪಾಯವನ್ನೂ ಲೆಕ್ಕಿಸದೆ ಒಂದು ಉತ್ತಮ ಚಿತ್ರಕ್ಕೆ ದಿನಗಟ್ಟಲೆ ಆಹಾರ ನಿದ್ರೆಯಿಲ್ಲದೆ ಕಾದು … Read more

ಕೃಷ್ಣಂ ವಂದೇ ಜಗದ್ಗುರುಂ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ರಾಮಾಯಣ ಮಹಾಭಾರತಗಳು ಭಾರತ ದೇಶದ ಮಹಾಕಾವ್ಯಗಳು, ಹಾಗೇ ಅವು ಇತಿಹಾಸ ಅಂತನೂ ಸಾಕ್ಷಸಮೇತ ಇತಿಹಾಸಕಾರರು ಹೇಳುತ್ತಿದ್ದಾರೆ. ‘ಮಹಾಭಾರತ’ ಪ್ರಪಂಚದಲ್ಲೇ ಅತಿ ದೊಡ್ಡ ಮಹಾಕಾವ್ಯ. ಇದರ ಕತೃ ವ್ಯಾಸ. ಮಹಾಭಾರತದಲ್ಲಿ ಭೀಷ್ಮ ಪರ್ವ ಬಹಳ ಮುಖ್ಯವಾದುದು. ಏಕೆಂದರೆ ಭೀಷ್ಮಪರ್ವದಲ್ಲೇ ಕುರುಕ್ಷೇತ್ರ ಯುದ್ದ ಆರಂಭವಾಗುವ ಕಥನವಿರುವುದು, ಕೃಷ್ಣಾರ್ಜುನರ ಸಂವಾದ ರೂಪದಲ್ಲಿರುವ ಭಗವದ್ಗೀತೆ ಇರುವುದು. ಅರ್ಜುನನ ವಿಷಾದ ಭಾವದಿಂದ ಆರಂಭವಾಗುವ ಭಗವದ್ಗೀತೆ ಶ್ರೀಕೃಷ್ಣ ಅರ್ಜುನನಿಗೆ ಅನುಗ್ರಹಿಸುವ ಪ್ರಸಾದದೊಂದಿಗೆ ಮುಗಿಯುತ್ತದೆ. ವೇದಗಳ ಸಾರ ಉಪನಿಷತ್ತುಗಳು, ಉಪನಿಷತ್ತುಗಳ ಸಾರಸರ್ವಸ್ವ ಭಗವದ್ಗೀತೆ ಅಂತ ಹೇಳುವರು. ಮಹಾಭಾರತದಲ್ಲಿ … Read more

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ … Read more

ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ. ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ … Read more

ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, … Read more

ಗುಲಾಮಿ: ಗಿರೀಶ ಜಕಾಪುರೆ

ಮೂಲ : ಖಲೀಲ ಜಿಬ್ರಾನ್ ಕನ್ನಡಕ್ಕೆ : ಗಿರೀಶ ಜಕಾಪುರೆ ಮಾನವರು ಬದುಕಿನ ಗುಲಾಮರು. ಜೀವನದ ಜೀತದಾಳುಗಳು. ಈ ಬದುಕು ಅವರ ಹಗಲುಗಳಲ್ಲಿ ದುಃಖ ಮತ್ತು ಕ್ಲೇಶದ ಬಿರುಗಾಳಿಯಾಗಿ ಬೀಸುತ್ತದೆ, ರಾತ್ರಿಗಳಲ್ಲಿ ಕಣ್ಣೀರು ಮತ್ತು ಸಂತಾಪದ ಮಹಾಪೂರವಾಗಿ ನುಗ್ಗುತ್ತದೆ. ಏಳು ಸಾವಿರ ವರ್ಷಗಳಾದವು ನಾನು ಜನಿಸಿ. ಅಂದಿನಿಂದಲೂ ನಾನು ತಮ್ಮ ಕೈಕಾಲುಗಳಿಗೆ ಸುತ್ತಿದ ಭಾರದ ಬೇಡಿಗಳನ್ನು ಎಳೆಯುತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಗುಲಾಮರನ್ನು ಕಾಣುತ್ತಿದ್ದೇನೆ. ನಾನು ಭೂಮಿಯ ಪೂರ್ವಪಶ್ಚಿಮಗಳಲ್ಲಿ ಸುತ್ತಾಡಿದ್ದೇನೆ, ಜೀವನದ ನೆರಳು ಬೆಳಕುಗಳಲ್ಲಿ ದಿಕ್ಕೇಡಿಯಾಗಿ ಅಲೆದಿದ್ದೇನೆ. … Read more

ಬದಲಾಗುವ ಬಣ್ಣಗಳು (ಭಾಗ 2): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ  – 3 – ತಿಂಗಳ ಬಳಿಕ ಪ್ರೇಮಾ ಮರಳಿ ಬಂದ ಸುದ್ದಿ ಕತ್ತಲೆ ಕವಿದ ಚೇತನನ ಮನಸ್ಸಿಗೆ ಸುರ್ಯೋದಯವಾಗಿತ್ತು. ತಿಂಗಳಿಂದ ಶೇವ್ ಕಾಣದ ಮುಖದ ತುಂಬ ಗಡ್ಡ ಮೀಸೆ… ಬಾಚನಿಗೆ ಕಾಣದ ತಲೆ… ಕೆದರಿದ ಕೂದಲು… ಮೈಮೇಲೆ ಕೊಳೆಯಾದ ಬಟ್ಟೆಗಳು… ಹಳ್ಳಿ ಹುಂಬನಂತೆ ಹುಚ್ಚನಂತೆ ತೋರುತ್ತಿದ್ದ. ಹಾಗೇ ಸೀದಾ ಪ್ರೇಮಾಳ ಮನೆಯತ್ತ ಹೆಜ್ಜೆ ಹಾಕಿದ್ದ. ಡೋರ ಮುಂದೆ ನಿಂತು ಬೆಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೇಮಾಳ ತಂದೆ ಬಾಗಿಲು ತೆರೆದು ಚೇತನನ ಸ್ಥಿತಿ ನೋಡಿ ಸ್ವಲ್ಪ ಗಾಬರಿಯಾದರು. ಏಕೆಂದರೆ ಮೊದಲಿನಿಂದಲೂ ಚೇತನ ಪ್ರೇಮಾಳ … Read more

ನಾನು ಮತ್ತೆ ನಾನಾದದ್ದು….!: ಶೀಲಾ. ಗೌಡರ

ಆಹಾ….! ನಾನೂ ಸಾಮಾನ್ಯ ಗೃಹಿಣಿಯರಂತೆ ಸುಮ್ನೆ ಮನೆ ನಿಭಾಯಿಸಿಕೊಂಡು, ಮನೇಲಿ ಹಾಯಾಗಿ ಇರಬಹುದಿತ್ತು, ಅಂತ ಎಷ್ಟೋಸಲ ಅನಿಸಿದ್ದುಂಟು. ಕೆಲಸ ಬೇಡ ಅಂತ ಬಿಡುವಂತಿಲ್ಲ…! ಸರಕಾರಿ ಕೆಲಸ…! ಮೇಲಾಗಿ ಶಿಕ್ಷಕ ವೃತ್ತಿ…. ಎಷ್ಟೊಂದು ಸುರಕ್ಷಿತ, ನೆಮ್ಮದಿ. ಆದರೆ ಕೆಲವೊಮ್ಮೆ ಮನೆ, ಶಾಲೆ ಎರಡನ್ನೂ ನಿಭಾಯಿಸುವಾಗ ಉಶ್ಯಪ್ಪ ಅಂತ ಬಸವಳಿದು, ಕಾಲಿಗೆ ಗಾಲಿ ಕಟ್ಟಿ ಇಪ್ಪತ್ತು ವರ್ಷಗಳಿಂದಲೂ ಬಸ್ಸಿನ ಹಿಂದೆ ಓಡುವಾಗ, ಏನೋ ಟೆನ್ ಶನ್ ನಲ್ಲಿ ಮನೆಯವರ ಹತ್ರ ಬಯ್ಸಿಕೊಡಾಗ, ಮಕ್ಕಳ ಓದಿನ ಬಗ್ಗೆ-ಊಟದ ಬಗ್ಗೆ-ಆರೋಗ್ಯದ ಬಗ್ಗೆ ಸಮಸ್ಯೆ … Read more

ಈ ಕ್ಷಣದಿಂದಲೇ ನೆಪಗಳಿಗೆಲ್ಲ ಗುಡ್ ಬೈ. . . . : ಆಶಾ ಹೆಗಡೆ

ಇನ್ನೂ ನೆನಪಿದೆ ನನ್ನ ಬಗ್ಗೆ ಗೆಳೆಯ ಗೆಳತಿಯರು ಆಡುತ್ತಿದ್ದ ಮಾತುಗಳು. . . ”ಹೇ, ಎಷ್ಟು ಚೆನ್ನಾಗಿ ಕತೆ, ಕವನ ಬರೀತಿಯಾ” “ಓ drawing ಕೂಡ ಮಾಡ್ತಿಯಾ?” “ಅರೆ ಎಷ್ಟು ಚೆನ್ನಾಗಿ ಹಾಡು ಹೇಳತೀಯಾ”, ”ಇವತ್ತಿನ speech ಎಷ್ಟು ಚೆನ್ನಾಗಿತ್ತು”, ”ನೀನ್ ಬಿಡು all rounder “,,, ಇವತ್ತಿಗೆ ಈ ಹೊಗಳಿಕೆ ಬರೀ ಹಿತವಾಗಿ ನೋಯಿಸುವ ನೆನಪುಗಳು ಮಾತ್ರ. ಹವ್ಯಾಸಕ್ಕೆ ಒರೆ ಹಚ್ಚಿ, ಅದ ಪ್ರತಿಭೆಯಾಗಿ ಪರಿವರ್ತಿಸಿ ಎಡಬಿಡದೆ ಅದೇ ದಾರಿಯಲಿ ಮುನ್ನಡೆದು ಏನಾದರೊಂದು ಸಾದಿಸಿದ್ದು ಮಾತ್ರ … Read more

ಒಂದು ಹಳ್ಳಿ ಜನರ ಉಳಿವಿನ ಹೋರಾಟ ಜಗದ್ವಿಖ್ಯಾತ ಪರಿಸರದ ಹೋರಾಟವಾಯಿತೆ ..!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಗಿಡ ಮರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ತನ್ನಂತೆ ಪ್ರಕೃತಿಯ ಮಮತೆಯ ಮಕ್ಕಳು ಅವುಗಳಿಗೂ ಮಾನವನಂತೆ ಬದುಕುವ ಹಕ್ಕೂ, ಸ್ವಾತಂತ್ರ್ಯವೂ ಇದೆ ಎಂದು ಮಾನವ ಭಾವಿಸದೆ ಅವುಗಳನ್ನು ಮನಬಂದಂತೆ ತನಗೆ ಅನುಕೂಲವಾಗುವಂತೆ ದುಡಿಸಿಕೊಳ್ಳುತ್ತಲು ಹಿಂಸಿಸುತ್ತಲು ಕೊಲ್ಲುತ್ತಲೂ ಇದ್ದಾನೆ. ಇದು ಸರಿಯಲ್ಲ! ಇತ್ತೀಚೆಗೆ ಪ್ರಕೃತಿಯ ಉಳಿವಿನಲ್ಲಿ, ಬದುಕಿನಲ್ಲಿ, ನಲಿವಿನಲ್ಲಿ ಮಾನವನ ನಗು ಅಡಗಿದೆ! ಪ್ರಕೃತಿಯ ಗಿಡ ಮರ ಪ್ರಾಣಿ ಪಕ್ಷಿ ಜಲಚರಗಳನ್ನೂ ಮಾನವನ ಬದುಕು ಅವಲಂಬಿಸಿದೆ! ಅದರ ನಾಶ ಮಾನವನ ಸರ್ವನಾಶ! ಎಂದು ತಿಳಿದಾಗಿನಿಂದ ಪ್ರಕೃತಿಯನ್ನು ಅದನ್ನು ಆಶ್ರಯಿಸಿರುವ … Read more

ಪರಿವರ್ತನೆ ನನ್ನಿಂದಲೇ . . . . .: ಜಯಲಕ್ಷ್ಮಿ ಕೆ. , ಮಡಿಕೇರಿ

” ನಿನ್ನ ಮಗನಿಗೆ ಎಷ್ಟು ಪರ್ಸೆಂಟು ಬಂತೂ . . ? 89% ?? ಅಯ್ಯೋ . . . ಇನ್ನು ಸ್ವಲ್ಪ ಓದಿದ್ದಿದ್ದರೆ 9ಂ% ಬರುತ್ತಿತ್ತು , ಹೋಗ್ಲಿ ಬಿಡು . . . ಇನ್ನೇನ್ ಮಾಡೋಕಾಗುತ್ತೆ . ನನ್ ಮಗಳಿಗೆ ಓದಿಸಿ ಓದಿಸಿ 98% ತೆಗೆಸೋ ಹೊತ್ತಿಗೆ ನಂಗೆ ಸಾಕಾಗಿ ಹೋಗಿತ್ತು. ಅಂದ ಹಾಗೆ ನಿನ್ನ ತಂಗಿ ಮಗಳೂ ಪಿ ಯು ಸಿ . . ಅಲ್ವಾ ? ಅವಳೆಷ್ಟು ಮಾರ್ಕ್ಸ್ ತಕೊಂಡಳು ??” … Read more

ಹಂಪೆಯ ಪಳುಯುಳಿಕೆಗಳು, ಪ್ರೇಯಸಿ ಮತ್ತು ನನ್ನ ಹೆಂಡತಿ: ಧೀರೇಂದ್ರ ನಾಗರಹಳ್ಳಿ

ಹಲೋ ಹನಿ , ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ ‘ಅಕ್ಷರಗಳು ‘ ಅಂತ ಆಶ್ಚರ್ಯ ಆಗಬಹುದು. ಈ ಮೇಲಿಗೆ ಒಂದು ಕಾರಣವಿದೆ. ಈ ವಾರಾಂತ್ಯದಲ್ಲಿ ಬಿ. ಬಿ. ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು ನೋಡಿದೆ. ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು. ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ ಹಂಪೆಯ ವಿವರವನ್ನು ಕೊಡಲಾಯಿತು. ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ – ನಾನು ನಿಜವಾಗಿಯೂ ಸತ್ತೆ ಹೋದೆ. ಆ ಸಾಲು ಸಾಲು ಮುರಿದು ಹೋದ … Read more

ಪರೀಕ್ಷೆಯಲ್ಲಿ ಪಾಸಾದವರೊಂದಿಗೆ ಫೇಲಾದವರೂ ಉತ್ತಮ ಸಾಧಕರು…: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಪರೀಕ್ಷೆಯ ಫಲಿತಾಂಶ ಬಂದ ತಕ್ಷಣ ಅದೇಷ್ಟೋ ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂತು/ ಫೇಲಾದೆ ಎಂಬ ಕಾರಣಕ್ಕೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಪಾಸಾದವರು, ರ್ಯಾಂಕ್ ಪಡೆದವರಷ್ಟೇ ಪ್ರತಿಭಾವಂತರಲ್ಲ. ನೆನಪಿರಲಿ ಫೇಲಾದವರೂ ಜೀವನದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನೆನಪಿಸಿಕೊಂಡು, ಮುಂದಿನ ಗುರಿ-ಛಲದೊಂದಿಗೆ ಮುನ್ನುಗ್ಗಬೇಕು. ಜೀವನ ಮತ್ತು ಸಾಧನೆಗೆ ಶಿಕ್ಷಣವೊಂದೇ ಮುಖ್ಯವಲ್ಲ. ಕನಿಷ್ಠ ಓದು ಬರಹ ಕಲಿತವರೆಷ್ಟೋ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಉತ್ತಮ ಬರಹಗಾರರಾಗಿ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದಾರೆ. ಸಾಮಾಜಿಕ ಚಿಂತಕರಾಗಿ, ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಹೋರಾಟಗಾರರಾಗಿ ಒಳ್ಳೆಯ … Read more

ಶಿಶು ಗೀತೆ: ದೇವರಾಜ್ ನಿಸರ್ಗತನಯ, ನಾಗರಾಜನಾಯಕ ಡಿ.ಡೊಳ್ಳಿನ

ರಜೆಯ ಮಜ… ಬೇಸಿಗೆ ರಜೆಯಲು ಪಾಠವಂತೆ ಯಾರಿಗೆ ಬೇಕಮ್ಮಾ ? ಅಜ್ಜಿಯ ಮನೆಯಲಿ ಆಡಿ ನಲಿವೆ ಊರಿಗೆ ಕಳಿಸಮ್ಮಾ..!! ಹತ್ತು ತಿಂಗಳು ಶಾಲೆಯ ಕಾಟ ಸಾಲದು ಏನಮ್ಮಾ ? ಎರಡು ತಿಂಗಳು ನಮ್ಮಯ ಆಟ ಆಡಲು ಬಿಡಿರಮ್ಮಾ..!! ಗೆಳೆಯರ ಜೊತೆಗೆ ಜೋಕಾಲಿಯಾಟ ಆಡುವೆ ಕಾಣಮ್ಮಾ ! ಹೊಂಗೆಯ ನೆರಳಲಿ ದುಂಬಿಯ ನಾನು ನೋಡಿ ನಲಿವೆನಮ್ಮಾ..!! ದನಕರುಗಳಾ ಜೊತೆ ಕಾಡು ಮೇಡನು ಅಲೆದು ಬರುವೆನಮ್ಮಾ ! ಹಳ್ಳಿಯ ಸೊಭಗ ಪ್ರಕೃತಿ ಸವಿಯ ಸವಿದು ಬರುವೆನಮ್ಮಾ..!! ಅಜ್ಜಿಯ ಜೊತೆಗೆ ಪ್ಯಾಟೆಯ … Read more

ಸಾಂಸ್ಕೃತಿಕ ವೀರ ಮೈಲಾರಲಿಂಗ ಪುಸ್ತಕ ವಿಮರ್ಶೆ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪುಸ್ತಕ ವಿಮರ್ಶೆ ಪುಸ್ತಕದ ಶೀರ್ಷಿಕೆ;- ಸಾಂಸ್ಕೃತಿಕ ವೀರ ಮೈಲಾರಲಿಂಗ ಲೇಖಕರು:- ಡಾ.ಚಿಕ್ಕಣ್ಣ ಯಣ್ಣೆಕಟ್ಟೆ. ಪ್ರಕಾಶನ:- ಗಡಿನಾಡ ಜಾನಪದ ಸಂಪರ್ಕಾಧ್ಯಯನ ಕೇಂದ್ರ ಪ್ರತಿಷ್ಠಾನ. ಕಾಳಿದಾಸ ನಗರ. ಸಿರಾ. ತುಮಕೂರು ಜಿಲ್ಲೆ. ಬೆಲೆ:- 150ರೂ ಪ್ರಥಮ ಮುದ್ರಣ: 2019 ಪುಟಗಳು: 214 ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವಿರಚಿತ ಸಾಂಸ್ಕೃತಿಕ ವೀರ ಮೈಲಾರಲಿಂಗ ಕೃತಿಯು ಕ್ಷೇತ್ರ ಕಾರ್ಯಾಧಾರಿತ ಅಧ್ಯಯನದಿಂದ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿಯಾಧಾರಿತ ಮಾಹಿತಿಗಳನ್ನೊಳಗೊಂಡ ರಚನೆಯಾಗಿದ್ದು ನಾಡಿನ ಸಾಂಸ್ಕೃತಿಕ ಹಾಗೂ ಜನಪದ ದೈವ ಮೈಲಾರಲಿಂಗಪ್ಪನ ಐತಿಹ್ಯ ಕುರಿತಾದ ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ … Read more

ಪಂಜು ಕಾವ್ಯಧಾರೆ

ಇನ್ನಾದರೂ ತುಸು ಹೊತ್ತು ಖುಷಿಯಿಂದ ಉಳಿದುಬಿಡುತ್ತೇನೆ ಬದುಕಿಗೆ ಬೇಸರ ಬರುವಷ್ಟು .. ಈ ಬದುಕು ಸುರುವಿದ ಅಸಂಖ್ಯ ಅವಕಾಶಗಳ ಎಣಿಸುತ್ತಾ ಕೂತು ಕಳೆದಿದ್ದೇನೆ ಹೀಗೆ ಬಳಸಿಕೊಳ್ಳೋದ ಮರೆತು ಪ್ರತಿ ಖುಷಿಯ ಹಿಂದೊಂದು ಮುಗಿಯದ ಖಾಲಿತನವನ್ನು ಸುಮ್ಮನೇ ಉಳಿಸಿಕೊಂಡಿದ್ದೇನೆ ನನ್ನಂಥ ಕಡುಮೌನಿಯೂ ನಿನ್ನ ಮಾತಿಗೆ ಹಪಹಪಿಸಲು ಶುರುವಿಡುವ ಈ ಹೊತ್ತು ಇಲ್ಲೇ ಸ್ತಬ್ಧವಾಗಲಿ ಬಿಡು ಮಾತು ಮೀರಿದ ಘಳಿಗೆ ಎದುರಿಗಿದ್ದಾಗ … ಬೆರಳ್ಹಿಡಿದು ನಡೆಸಿದ ಕಾಲುಹಾದಿಯ ಬದುಕು ಜಾರಿಸಲು ಶುರುವಿಟ್ಟು ನಗುತಾ ನಿಂತ ಸಮಯ ಬೇಕೆನಿಸಿದೆ ನಿನ್ನ ಸಾಂಗತ್ಯ … Read more

ಪ್ರಬುದ್ಧ ಸಾಹಿತಿ –ಡಾ.ಸರಜೂ ಕಾಟ್ಕರ್: ನಾಗರೇಖಾ ಗಾಂವಕರ

ಪತ್ರಕರ್ತನೊಬ್ಬನ ವೃತ್ತಿ ಬದುಕಿನ ಹಾದಿ ಸಂಘರ್ಷಗಳ ಕಲ್ಲುಚಪ್ಪಡಿ ಎಂಬುದನ್ನು ಯಾರೂ ಅಲ್ಲಗಳಿಯುವಂತಿಲ್ಲ. ಎಡತಾಕುವ ವಿಘ್ನಗಳು ಹತ್ತು ಹಲವು. ಬೆದರಿಕೆಗಳ ಹೊದಿಕೆಯೊಳಗೆ ಜೀವವನ್ನು ಕೈಲಿಟ್ಟುಕೊಂಡೇ ಲೋಕದ ಡೊಂಕನ್ನು ಜಗತ್ತಿನ ಕಣ್ಣುಗಳಿಗೆ ರವಾನಿಸಬೇಕಾದ ಅದರಲ್ಲೂ ಸತ್ಯದ ಸೂಡಿ ಹಿಡಿದೇ ನಡೆಯಬೇಕಾದ ಅನಿವಾರ್ಯತೆ ಆತನದು. ಆತನ ವೃತ್ತಿಕ್ಷಮತೆ ಪ್ರಾಮಾಣಿಕವಾಗಿದ್ದಷ್ಟೂ ಆತನ ವೃತ್ತಿ ಶತ್ರುಗಳು, ಹಿತ ಶತ್ರುಗಳು ಹುಟ್ಟಿಕೊಳ್ಳುತ್ತಲೇ ಇರುವರು. ಅಂತಹ ಸಂದಿಗ್ಧ ಜಗತ್ತಿನಲ್ಲಿ ದಿಟ್ಟತನಕ್ಕೆ ಹೆಸರಾದ, ಆಮಿಷಗಳಿಗೆ ಬಲಿಯಾಗದೇ, ಬೆದರಿಕೆಗಳಿಗೆ ಅಂಜದೇ ಕಾರ್ಯನಿರ್ವಹಿಸಿದ ಪತ್ರಕರ್ತ ಡಾ. ಸರಜೂ ಕಾಟ್ಕರ್. ಒಬ್ಬ ಪತ್ರಕರ್ತನಲ್ಲಿ … Read more

ಜೈನಾಬಿ, ರೋಸ್ ಮೇರಿ, ಮತ್ತು ಮಾಯಾ ಬಾರ್:  ವಸುಧಾ ಪ್ರಭು

ಟಕ್-ಟಕ್-ಟಕ್ ಮಾಯಾ ಬಾರಿನ ಮೇಲೆ ನಿನ್ನೆ ಮುನ್ಸಿಪಾಲಿಟಿಯವರು ಮಾಡಿದ ದಾಳಿಯಿಂದಾಗಿ ಎಂದಿಗಿಂತ ಒಂದೂವರೆ ಗಂಟೆಯ ಮೊದಲೇ ಫ್ಲ್ಯಾಟಿಗೆ ಬಂದರೆ, ನೆರೆಯ ಫ್ಲ್ಯಾಟ್ ನಲ್ಲಿರುವ ಅಮ್ಮಿ ಬಾಗಿಲು ಬಡಿದಾಗಲೇ ಜೈನಾಬಿಗೆ ಎಚ್ಚರವಾಯಿತು. ಕಣ್ಣು ಸರಿಯಾಗಿ ಬಿಡುತಿದ್ದಂತೆಯೇ ಎದ್ದು ಮೊದಲು ಬಚ್ಚಲಿಗೆ ಧಾವಿಸಿದಳು. ಒಂದರ ಮೇಲೊಂದು ಬಾಲ್ದಿ ಇಟ್ಟಂತೆ ಬಾಲ್ದಿಯನ್ನು ನಲ್ಲಿ ಕೆಳಗೆ ನೀರು ತುಂಬಲು ಇಟ್ಟು ಟೂತ್ ಪೇಸ್ಟ್ ಬ್ರಶ್ ಹಿಡಿದು ಹಲ್ಲುಜ್ಜತೊಡಗಿದಳು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಾಲ್ಕನೇ ಅಂತಸ್ತಿನಲ್ಲಿರುವ ಇರುವ ಇವಳ  ಮನೆಯ ನಲ್ಲಿಯಲ್ಲಿ ಸಪೂರವಾಗಿ ಕೇವಲ … Read more

ಬದಲಾಗುವ ಬಣ್ಣಗಳು (ಭಾಗ 1): ಅಶ್ಫಾಕ್ ಪೀರಜಾದೆ

– 1 – ಡಿಶಂಬರ್ – 25, ಕ್ರಿಸಮಸ್ ಹಬ್ಬ. ಯೇಸು ಈಗಲೂ ಆ ಗೋಡೆಯ ಮೇಲೆ ನೇತಾಡುತ್ತಿದ್ದ. ಪ್ರತಿ ಹೊಸ ವರ್ಷದಂದು ಯೇಸು ಚಿತ್ರವಿರುವ ದಿನದರ್ಶಿಕೆ ತಂದು ಪವಿತ್ರ ತನ್ನ ಮನೆಯಲ್ಲಿ ನಿತ್ಯ ಆರಾಧನೆ ಸಲ್ಲಿಸುವದನ್ನು ರೂಡಿಸಿಕೊಂಡಿದ್ದಳು. ಮನುಕುಲವನ್ನೇ ಉದ್ಧರಿಸಿದ ಯೇಸುತನ್ನನ್ನು ಕೂಡ ಒಂದಿಲ್ಲ ಒಂದು ದಿನ ಉದ್ಧರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಅವಳದು. ಆ ಕ್ಯಾಲೆಂಡರದಲ್ಲಿ ಡಿಶೆಂಬರ 1980 ಎಂದು ಅಚ್ಚಾದ ಕೊನೆ ತಿಂಗಳ ಪುಟದ ಬಣ್ಣವೆಲ್ಲ ಮಾಸಹೋಗಿ ಹೊಗೆ ಹಿಡದವರಂತೆ ಬಣ್ಣ ಬದಲಾಗಿ ಸ್ಪಷ್ಟವಾಗಿ ಕಾಣದ ದಿನಾಂಕಗಳ … Read more

ಟ್ರೇನ್ ಪ್ರಯಾಣ: ಆಶಾಜಗದೀಶ್

ನನಗೆ ಪ್ರಯಾಣವೆಂದರೆ ಬಹಳ ಇಷ್ಟ. ಬಸ್ ಟ್ರೇನ್ ಕಾರ್ ಬೈಕ್… ಯಾವ್ದಾದ್ರೂ ಸರಿ ಹತ್ತಿ ಹೊರಟುಬಿಟ್ಟರೆ ಮುಗೀತು. ಯಾಕೆ ಅಂತ ಗೊತ್ತಿಲ್ಲ. ಅದರೆ ನನಗೆ ಬೀಸುವ ಗಾಳಿ ಅಂದ್ರೆ ಇಷ್ಟ, ತೊಟ್ಟಿಲ ಹಾಗೆ ತೂಗುವ ವಾಹನ ಇಷ್ಟ, ಪ್ರಯಾಣದ ನಿದ್ದೆ ಇಷ್ಟ, ನಾನಾ ಥರದ ಜನಗಳನ್ನು ನೋಡುವುದು ಇಷ್ಟ, ಹಿಂದಕ್ಕೆ ಜೋರಾಗಿ ಓಡುವ ಮರಗಳು ಇಷ್ಟ, ನಾನಾ ಥರದ ಪರಿಸರದ ಚಿತ್ರಣವನ್ನು ಕಣ್ತುಂಬಿಕೊಳ್ಳುವುದು ಇಷ್ಟ….. ಹೀಗೆ ಇಷ್ಟಗಳ ಸಾಲೇ ಇದೆ. ಅದರೊಂದಿಗೆ ಅಪರೂಪದ ಅನುಭವಗಳೂ ಸಿಗುತ್ತವೆ. ಇಂತಹ … Read more

ಶಿಶಿರನ ಅಂತ್ಯ ವಸಂತನ ಆದಿಯೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

ಒಂದರ ಅಂತ್ಯ ಇನ್ನೊಂದರ ಆರಂಭ! ಹಗಲಿನ ಅಂತ್ಯ ರಾತ್ರಿಯ ಆರಂಭ! ರಾತ್ರಿಯ ಅಂತ್ಯ ಹಗಲಿನ ಆರಂಭ! ಕಷ್ಟಗಳ ಅಂತ್ಯ ಸುಖದ ಆರಂಭ! ಸುಖದ ಅಂತ್ಯ ಕಷ್ಟದ ಆರಂಭ! ಜೀವನ ಸುಖದ ಸುಪ್ಪತ್ತಿಗೆಯಲ್ಲ, ಕಷ್ಟ ಸುಖಗಳ ಹಾಸು! ಪುರಾಣಗಳು ಘನಘೋರ ಕಷ್ಟಗಳ ಅಂತ್ಯ ಸುಖದ ಸೂಚಕ ಎಂದು ಸಾರಿವೆ! ಭಗವಂತ ಕಷ್ಟಗಳ ಮಳೆಗರೆದು ಭಕ್ತರನ್ನು ಪರೀಕ್ಷಿಸಿ ಕೊನೆಗೆ ಅಪರಿಮಿತ ಸುಖ ನೀಡುತ್ತಾನೆ ಎಂದು ಪುರಾಣಗಳಲ್ಲಿ ಕಥೆಗಳಿವೆ. ಇದಕ್ಕೆ ಸತ್ಯಹರಿಶ್ಚಂದ್ರನ ಕಥೆ ಉತ್ತಮ ಉದಾಹರಣೆಯಾಗಿದೆ. ಹೀಗೆ ಜೀವನದಲ್ಲಿ ಏಳು ಬೀಳಿಗೆ, … Read more

‘ಗೀರು’ ನನ್ನ ಮನಸ್ಸಲ್ಲಿ ಗೀಚಿದ್ದು – ಗೀರು ಕಥಾಸಂಕಲನ ವಿಮರ್ಶೆ: ಕೊಟ್ರೇಶ್ ಕೊಟ್ಟೂರು

ಕನ್ನಡ ಕಥಾ ಪರಂಪರೆಯಲ್ಲಿ ಮಹಿಳಾಪರ ಕಥೆಗಳು ಬರುವುದು ತುಂಬಾ ಮುಖ್ಯವಾಗಿದೆ. ಕನ್ನಡ ಕಥೆಗಳಲ್ಲಿ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಕಥೆಗಳು ಇತ್ತೀಚಿಗೆ ಅಪರೂಪವಾಗಿದೆ. ಮತ್ತು ನನಗದು ಸ್ವಲ್ಪ ಸಮಾಧಾನವಿದೆ ಅಂತಹ ಸಮಾಧಾನ ತರುವಲ್ಲಿ ದೀಪ್ತಿ ಭದ್ರಾವತಿ ಅವರ ಗೀರು ಕಥಾಸಂಕಲನ ಯಶಸ್ವಿಯಾಗಿದೆ. ಬಹುಶಃ ಇದರಲ್ಲಿನ ಎಲ್ಲಾ ಕಥೆಗಳಲ್ಲೂ ಮಹಿಳೆ ಮುಖ್ಯಪಾತ್ರವಹಿಸಿ, ಬದುಕಿನ ಕಾಲಘಟ್ಟದಲ್ಲಿ ಅವಳ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಈ ಕಥೆಗಳಲ್ಲಿನ ಮಹಿಳೆ ತಾನು ಅನುಭವಿಸುವ ಕಷ್ಟಗಳನ್ನು ನೋಡಿದರೆ ಕರುಳು ಕಿತ್ತು … Read more

ತಾಯಿಯ ಗರ್ಭವೆಂಬ ಪುಟ್ಟ ಪ್ರಪಂಚದಲ್ಲಿ: ಸಿಂಧು ಭಾರ್ಗವ್

ಒಂದು ಮಗುವಿನ ಜನನ ಯಾವ ತಾಯಿಯ ಗರ್ಭದಲ್ಲಿ ಆಗುತ್ತದೆ ಎಂಬುದು ಹೇಳಬರದು. ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಜನಿಸಿದ ಮೇಲೆ ಹಡೆದ ಜನನಿಯ ಮುಖ ದರುಷನವಾಗುವುದು. ಅವಳು ನಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಅವಳ ತ್ಯಾಗ ಸಹನೆಗೆ ನಾವು ಎಂದಿಗೂ ಋಣಿಗಳಾಗಿರಬೇಕು. ಒಬ್ಬ ತಾಯಿ ತಾನು ಗರ್ಭವತಿ ಎಂದು ತಿಳಿದ ತತ್ಕ್ಷಣದಿಂದ ಮುಂದೆ ಜನಿಸುವ ಮಗುವಿನ ಬಗೆಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಜೊತೆಗೆ ತಂದೆಯಾಗುವವನೂ ಕೂಡ ಆ ಮಗುವಿನ ಬಗೆಗೆ ಸಾಕಷ್ಟು ಕನಸುಗಳನ್ನು ಹೆಣೆಯುತ್ತಾನೆ. ತಮ್ಮ … Read more

ಪುಟ್ಟಿಯ ಬೆಂಗಳೂರು: ನಾಗರಾಜನಾಯಕ ಡಿ.ಡೊಳ್ಳಿನ

ಬೆಂಗಳೂರು ಅಂದರೆ ಚಿಕ್ಕಂದಿನಿಂದಲೂ ನಮಗೆ ಆಕರ್ಷಣೆ. ಅಲ್ಲಿನ ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಉದ್ಯೋಗಸೌಧ, ಹೈಕೋರ್ಟು, ಕಬ್ಬನ ಉದ್ಯಾನವನದಲ್ಲಿನ ಗ್ರಂಥಾಲಯ, ಲಾಲಬಾಗ್, ಬನ್ನೇರುಘಟ್ಟ, ನೆಹರು ತಾರಾಲಯ, ರವೀಂದ್ರ ಕಲಾಕ್ಷೇತ್ರ ಹೀಗೆ ಒಂದೇ ಎರಡೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಚಿಕ್ಕವನಿದ್ದಾಗ ಬೆಂಗಳೂರು ಕಾಡಿದ್ದು ಸುಳ್ಳಲ್ಲ. ಅಪ್ಪ ಬೆಂಗಳೂರಿಗೆ ಹೋದಾಗಲೆಲ್ಲ ನಮಗಾಗಿ ಚೆಂದನೆಯ ಆಟಿಕೆ, ಶಾಲಾ ಬ್ಯಾಗಗಳನ್ನು ತರುತ್ತಿದ್ದರಿಂದಲೋ ಏನೋ ನಮಗೆ ಬೆಂಗಳೂರಿನ ಬಣ್ಣ ಬಣ್ಣದ ಕಲ್ಪನೆಗಳು ಮೂಡುವಂತೆ ಮಾಡಿದ್ದು. ಆದರೆ ಆ ಕಲ್ಪನೆಗಳು ನಾವು ಪ್ರೌಢಾವಸ್ಥೆಗೆ ತಲುಪಿ … Read more

ಜಾಣಸುದ್ದಿ 21: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಮೂಕ ಕಹಳೆ: ಗಿರಿಜಾ ಜ್ಞಾನಸುಂದರ್

ಕೈಯಲ್ಲಿ ಮಿಠಾಯಿ ಡಬ್ಬಿ ಹಿಡಿದು ಅಮ್ಮನ ಬಳಿ ಓಡಿ ಬಂದಳು ಆರತಿ, “ಅಮ್ಮ, ನಾನು     ಎಸ್ಎಸ್ಎಲ್ಸೀ ಪಾಸ್ ಆದೆ, ಫಸ್ಟ್ ಕ್ಲಾಸ್” ಎಂದು ಹೇಳುತ್ತಾ ಅಮ್ಮನ ಬಾಯಿಗೆ ಸಿಹಿಯನ್ನು ತುರುಕಿದ್ದಳು. ಅಮ್ಮನ ಖುಷಿಯನ್ನು ಅಮ್ಮ ತನ್ನ ಮುಗುಳ್ನಗೆಯಲ್ಲಿ ತಿಳಿಸಿದಳು. ಮನೆಯಲ್ಲಿ ಸಂಭ್ರಮ. ಒಂದು ವಾರವಾಗಿತ್ತು. ಯಾವ ಕಾಲೇಜು ಸೇರುವುದು, ಯಾವ ವಿಷಯ ಓದುವುದು ಎಂದು ಚರ್ಚೆ ನಡೆಯುತ್ತಿತ್ತು. ಆರತಿಯ ಅಜ್ಜಿ ಮನೆಗೆ ಬಂದರು. ಅಜ್ಜಿಗೂ ಸಿಹಿ ಕೊಟ್ಟದಾಯಿತು, ಸಂತೋಷ ಹಂಚಿದ್ದಾಯಿತು. ಆದರೂ ಅಜ್ಜಿ ಯಾಕೋ ಸಂತೋಷದಲ್ಲಿದ್ದಂತಿರಲಿಲ್ಲ. ಆರತಿಯ … Read more