ದಪ್ಪಗಿದ್ದರೆ ಏನು ಜೀವ?: ಕೊಡೀಹಳ್ಳಿ ಮುರಳೀಮೋಹನ್

ಭೂಮಾತಾ ನಗರದ ರಸ್ತೆ ಸಂಖ್ಯೆ 10ರಲ್ಲಿರುವ ‘ಸೌಧ ಎಲ್-ಕ್ಯಾಸಲ್’ ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್, ಜಿ-1ರಲ್ಲಿ ವಾಸಿಸುವ ಜೀವನ್ ಮತ್ತು ಡಿ ಬ್ಲಾಕ್, ಎಫ್-2ರಲ್ಲಿರುವ ಸುಧೀರ್ ಬಾಲ್ಯದ ಗೆಳೆಯರು. ಚಿಕ್ಕಂದಿನಲ್ಲಿ ಅವರ ಸ್ವಂತ ಊರಿನಲ್ಲಿ ಇಬ್ಬರ ಮನೆಗಳೂ ಪಕ್ಕ ಪಕ್ಕವೇ ಇದ್ದವು. ಜೀವನ್ ಅವರ ತಾತ ಇಬ್ಬರಿಗೂ ಪದ್ಯಗಳು, ಶತಕಗಳನ್ನು ಕಲಿಸುತ್ತಿದ್ದರು. ಕಥೆಗಳನ್ನು ಹೇಳುತ್ತಿದ್ದರು. ಅವರು ಜೀವನನ್ನು ‘ಜೀವ’ ಎಂದೂ, ಸುಧೀರನನ್ನು ‘ಧೀರ’ ಎಂದೂ ಕರೆಯುತ್ತಿದ್ದರು. ಶಾಲೆಯಲ್ಲಿ, ಕಾಲೇಜಿನಲ್ಲಿ ಒಟ್ಟಿಗೆ ಓದಿದರು. ನಂತರ ಇಬ್ಬರಿಗೂ ಒಂದೇ ಊರಿನಲ್ಲಿ ಉದ್ಯೋಗಗಳು … Read more

“ಯುದ್ದಕ್ಕೂ ಸಿದ್ದ ಶಾಂತಿಗೂ ಬದ್ದ”: ಚಲುವೇಗೌಡ ಡಿ ಎಸ್

ನಾವು ಭಾರತೀಯರು, ಭಾರತಾಂಬೆಯ ಮಡಿಲಲಿ ಜೀವಿಸುತ್ತಿರುವ ಮಕ್ಕಳು, ಶಾಂತಿ, ಸೌಹಾರ್ದತೆ, ತ್ಯಾಗ, ಕರುಣೆ, ಮಮತೆ, ಏಕತೆ, ಧರ್ಮ ಸಹಿಷ್ಣುತೆ ಹಾಗೂ ಪರಸ್ಪರ ಸಹಕಾರ ಮನೋಭಾವನೆ ಪ್ರಜೆಗಳುಳ್ಳ ಬೃಹತ್ ರಾಷ್ಟ್ರ ನಮ್ಮದು. ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ, ಅರಸಿ ಬಂದವರಿಗೆ ಆಶ್ರಯ ನೀಡುವ, ಮಾನವೀಯ ಗುಣಗಳನ್ನು ಹೊಂದಿರುವ ಶಾಂತಿಪ್ರಿಯವಾದ ರಾಷ್ಟ್ರ ನಮ್ಮದು. ನಾವು ನಮ್ಮ ಪಾಡಿಗೆ ಯಾವ ರಾಷ್ಟ್ರದ ತಂಟೆಗೂ ಹೋಗದೆ ಶಾಂತಿಯಿಂದ ಬದುಕು ಸಾಗಿಸುತ್ತಿದ್ದೆವು ಆದರೂ ನಮ್ಮ ಭಾರತಾಂಬೆಯ ನೆಲಕ್ಕೆ ಕಾಲಿಟ್ಟ ಉಗ್ರರಕ್ಕಸರು ಭಾರತಮಾತೆಯ ಪುತ್ರರ ಕೊಂದು … Read more

ಎಕ್ಸ್ಪೀರಿಯೆನ್ಸ್ ಅಂದ್ರೆ ಸುಮ್ನೆ ಅಲ್ಲ: ಮಧುಕರ್ ಬಳ್ಕೂರು

“ಬಿಡು, ಇದೆಲ್ಲ ಕಾಮನ್, ಒಂದ್ ಎಕ್ಸ್ಪೀರಿಯೆನ್ಸ್ ಅಷ್ಟೇ. ಇದರಲ್ಲೇನು ಹೋದಂಗಾಯಿತು..?” “ಸುಮ್ಮನೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತ ಮಾಡ್ತಿದೀನಿ ಮತ್ತಿನ್ನೇನಿಲ್ಲ. ಇದರಲ್ಲೇನು ಹೋಗೋದಿದೆ..?” ಒಂದ್ ನಿಮಿಷ… ಎಕ್ಸ್ಪೀರಿಯೆನ್ಸ್ ಅನ್ನೋದೆ ಒಂದ್ ದೊಡ್ಡ ವಿಚಾರ. ಇದನ್ನೇನು ಬಿಡು ಕಾಮನ್ ಅಂತ ಹೇಳೋದು..? ಎಕ್ಸ್ಪೀರಿಯೆನ್ಸ್ ಅನ್ನೋದೆ ಪ್ರಾಕ್ಟಿಕಲ್ ಜ್ಞಾನ. ಇನ್ನು ಅದರಲ್ಲೇನು ಹೋದಂಗಾಯಿತು ಅನ್ನೋದು..? ಏನೇ ಮಾಡಿದ್ರು ಎಕ್ಸ್ಪೀರಿಯೆನ್ಸ್ ಸಿಗ್ತದೆ ಅಂದ ಮೇಲೆ ಎಕ್ಸ್ಪೀರಿಯೆನ್ಸ್ ಗೆ ಅಂತಾನೇ ಮಾಡ್ತಿದೀನಿ ಅನ್ನೋದರಲ್ಲಿ ಅರ್ಥ ಇದೆಯಾ..? ಇಲ್ಲಾ ಅಲ್ವಾ.. ಹಾಗಿದ್ರೆ ಯಾಕೆ ಇಂತಹ … Read more

ಪಂಜು ಕಾವ್ಯಧಾರೆ

ಚೆಲುವೆಮಬ್ಬುಗವಿದ ಮುಸ್ಸಂಜೆಆಡು-ಹಸು-ಕುರಿ ಮರಳಿ ಬರುವಾಗಕೆಂಧೂಳು ಮೇಲೆದ್ದು ತಂಗಾಳಿಯು ಸೋಕಿದಂಗೆನೀ ನನ್ನ ಸನಿಹ ಬರಲು ಮೈ ಜುಮ್ಮೆಂದಿತುಓ ನನ್ನ ಒಲವೇ ಜಗವೆಲ್ಲಾ ನಾವೇಕೆಮ್ಮುಗಿಲು ನಕ್ಕು ಸೂರಪ್ಪ ನಾಚಿದಕದರಪ್ಪನ ಗುಡ್ಡವು ಕೆಂಪೇರಿತಾಗಕೆಂದಾವರೆಯಂತಹ ನಿನ್ನ ಕೆನ್ನೆ ಮನಸೆಳೆಯಿತುಇಳಿಜಾರಿನ ಕಲ್ಲು ಮುಳ್ಳು ನಗೆಬೀರಿಬೇಲಿ ಮೇಗಳ ಹೂ ಘಮ್ಮೆನ್ನೋ ಸುವಾಸನೆಯುನಿನ್ನ ಬೆವರಿನ ಸೌಗಂಧ ತಂದಾಗಮನದಲ್ಲೇನೋ ಆನಂದಮೊದಲ ಮಳೆ ಹನಿ ನೆಲವನ್ನು ಮುತ್ತಿಟ್ಟುಗಾಳಿ ಗಂಧವಾಗಿ ಬಯಲೆದೆ ಮೇಲೆ ನಿನ್ನ ಹೆಸರುನಾ ಬಯಸಿದೆ ನಿನ್ನ ಸಂಗನಾನಾಗ ಅಲೆದಲೆದು ಬಳಲಿದೆಮೊದಲ ಚುಂಬನಕ್ಕೆ ನರನಾಡಿ ರೋಮಾಂಚನಉಸಿರು ಉಸಿರಲ್ಲಿ ಬೆರೆಯಲು ಎಂಥಾ … Read more

ಮಗು, ನೀ ನಗು (ಭಾಗ 3): ಸೂರಿ ಹಾರ್ದಳ್ಳಿ

ಹಾಗೊಂದು ಕಾಲವಿತ್ತು, ನಾನು ದಿನಕ್ಕೆ ಎಂಟು ಗಂಟೆಗಳ ಕಾಲ ಗಾಢವಾಗಿ ನಿದ್ರಿಸುತ್ತಿದ್ದೆ. ನಿದ್ರೆಯ ಸುಖಕ್ಕೆ ನಿದ್ರೆಯೇ ಸಾಟಿ. ಈಗ ಮಗುವಿನ ಎಚ್ಚರದ ಸಮಯಕ್ಕೆ ಹೊಂದಿಕೊಳ್ಳಬೇಕಿದೆ. ಮಗು ಎಷ್ಟು ಗಂಟೆಗೆ ಮಲಗಿತು, ಎಷ್ಟಕ್ಕೆ ಎದ್ದಿತು, ನಿನ್ನೆ ಎಷ್ಟು ಹೊತ್ತು ನಿದ್ರೆ ಮಾಡಿತು, ಹಾಲು ಕುಡಿದು ಎಷ್ಟು ಹೊತ್ತಾಯಿತು, ಶೌಚ-ಮೂತ್ರ ಮಾಡಿಕೊಂಡಿತೋ ಇಲ್ಲವೋ, ಎಂದೆಲ್ಲಾ ರೆಕಾರ್ಡ್ ಇಟ್ಟಿರಕೊಂಡಿರಬೇಕು ಈಗ. ಅದು ಎಚ್ಚರವಾಗಿ ಕೊಸ, ಕೊಸ ಎಂದು ಸದ್ದು ಮಾಡಿದರೆ ತಕ್ಷಣವೇ ಎದ್ದು ಅದರ ಉಪಚಾರ ಮಾಡಬೇಕು. ನಾವು ಸ್ನಾನ ಮಾಡುತ್ತಿರಲಿ, … Read more

ವಿಭಾವರಿ (ಭಾಗ 3): ವರದೇಂದ್ರ ಕೆ ಮಸ್ಕಿ

ಹೇಮಂತ್ನ ಮನದರಸಿ ಆಗಿ ಮಹಾರಾಣಿಯಂತೆ ಇರಬೇಕೆಂದಿದ್ದ ವಿಭಾ ಮನಸಲ್ಲಿ ತನ್ನ ತಾಯಿ, ತಂದೆ ಮಾಡಿದ ಕುತಂತ್ರದ ಬಗೆಗೆ ಹೇಸಿಗೆ ಅನಿಸತೊಡಗಿತು. ನಿಷ್ಕಲ್ಮಶ ಹೃದಯಿ, ತನ್ನ ಪ್ರೇಯಸಿಗಾಗಿ ತನ್ನ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸಿಕೊಂಡ ತೇಜುವಿನ ನೆನಪು ಬಂದು ಮೈ ಬೆವರುತ್ತಿದೆ, ಈಗ ಏನು ಮಾಡಲಿ, ಏನು ಮಾಡಲಿ. ವಿಲಿ ವಿಲಿಯಾಗಿ ವಿಭಾಳ ಮನಸು ಒದ್ದಾಡುತ್ತಿದೆ. ತನಗರಿವಿಲ್ಲದೇ ತನ್ನ ನಿಶ್ಚಿತಾರ್ಥದ ಉಂಗುರವನ್ನು ತಿರುವುತ್ತಿದ್ದಾಳೆ. ತಕ್ಷಣ ಉಂಗುರದ ಸ್ಪರ್ಶ ಗಮನಕ್ಕೆ ಬಂದು ನೋಡುತ್ತಾಳೆ. ಊಗಿ ಎಂದು ಅಚ್ಚು ಹಾಕಿಸಿದ … Read more

ಸಮಕಾಲೀನ ಘಟನೆಯ ಪ್ರತಿರೂಪ: ‘ಹೆಬ್ಬುಲಿ ಕಟ್‌ʼ: ಎಂ ನಾಗರಾಜ ಶೆಟ್ಟಿ

ʼನಾವೆಲ್ಲ ಒಂದು ʼ ಎಂದು ಹೇಳಿಕೊಳ್ಳುವ ಘೋಷಣೆಗಳು ಎಷ್ಟು ಪೊಳ್ಳು ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುವ ಘಟನೆಗಳು ಆಗಾಗ್ಗೆ, ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಘಟನೆಗಳು ನಡೆದಾಗ ಮನಸ್ಸು ಕುಸಿಯುತ್ತದೆ; ಪ್ರತಿಭಟನೆಯ ಸೊಲ್ಲೂ ಕೇಳುತ್ತದೆ. ಸೃಜನಶೀಲ ಮನಸ್ಸುಗಳು ಇವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇವು ಸಾಹಿತ್ಯದಲ್ಲಿ, ಸಿನಿಮಾದಲ್ಲಿ ಕೆಲವೊಮ್ಮೆ ಪರಿಣಾಮಕಾರಿಯಾಗಿ ರೂಪುಗೊಂಡರೆ ವರದಿ ಅಥವಾ ಸಾಕ್ಷ್ಯ ಚಿತ್ರವಾಗಿ ತೆಳುವಾಗುವ ಸಂದರ್ಭಗಳೂ ಇಲ್ಲದಿಲ್ಲ. ಭೀಮರಾವ್‌ ಪಿ ತಮ್ಮ ಮೊದಲ ಪ್ರಯತ್ನದಲ್ಲಿ ಇಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲಲ್ಲಿ ದಲಿತರಿಗೆ … Read more

ಮಗು, ನೀ ನಗು (ಭಾಗ ೨): ಸೂರಿ ಹಾರ್ದಳ್ಳಿ

ಅಲ್ಲಿಯೇ ಇದ್ದ ಮಗಳು, ‘ವಾಟ್? ನೋ, ನೆವರ್. ಇನ್ನೊಂದಾ? ಇದೊಂದಕ್ಕೇ ಸಾಕು ಸಾಕಾಗಿದೆ,’ ಎಂದು ಉತ್ತರಿಸಿದಳು. ಆ ಮಹಿಳೆ ರೇಗಿದಳು, ‘ಏನೇ? ಒಂದೇನಾ? ಹೀಗಾದರೆ ನಮ್ಮ ಧರ್ಮದ ಜನ ಹೆಚ್ಚೋದು ಹೇಗೆ? ಆ ಕಮ್ಯುನಿಟಿಯವರು ನೋಡು, ನಾಲ್ಕು ನಾಲ್ಕು ಮದುವೆಯಾಗಿ, ಹತ್ತೋ, ಹದಿನೈದೋ ಮಕ್ಕಳನ್ನು ಹಡೆದು, ಸರಕಾರದವರು ಕೊಡುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಪಡೆದುಕೊಂಡು, ತಮ್ಮ ಧರ್ಮದ ಜನರ ಸಂಖ್ಯೆಯನ್ನು ಹೇಗೆ ಬೆಳೆಸುತ್ತಿದ್ದಾರೆ ಅಂತ? ನೀವು ಒಂದೇ ಸಾಕು ಎನ್ನುತ್ತೀರಿ,’ ಎಂದು ಆಪಾದಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ … Read more

ವೀರೇಶ ಬ. ಕುರಿ ಸೋಂಪೂರ ಅವರ “ದುಡ್ಡಿನ ಮರ”: ಎನ್. ಶೈಲಜಾ ಹಾಸನ

ಕವಿ ವೀರೇಶ ಬ. ಕುರಿ ಸೋಂಪೂರ ಅವರು ಈಗಾಗಲೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ವತಹ ಶಿಕ್ಷಕರಾಗಿರುವ ವೀರೇಶ್ ಅವರು ಸದಾ ಮಕ್ಕಳೊಂದಿಗೆ ಇದ್ದು, ಮಕ್ಕಳಿಗೆ ಬೇಕಾಗಿರುವಂತಹ, ಆಸಕ್ತಿದಾಯಕವಾಗಿರುವಂತಹ ಸಾಹಿತ್ಯವನ್ನು ನೀಡುತ್ತಾ, ಇದೀಗ ದುಡ್ಡಿನ ಮರ ಎಂಬ ಮಕ್ಕಳ ಕವನ ಸಂಕಲವನ್ನು ಹೊರತಂದಿದ್ದಾರೆ. ಇಲ್ಲಿನ ಹಲವಾರು ಕವಿತೆಗಳು ಹಲವಾರು ವಿಚಾರಗಳಿಂದ ಕೂಡಿದ್ದು, ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಮಕ್ಕಳ ಮನಸ್ಸು ಹೇಗೆ ಓಡುತ್ತದೆ, ಆ ಮಕ್ಕಳ ಮನಸ್ಸಿಗೆ ಏನು ಬೇಕು ಎಂಬುದನ್ನು ಬಹಳ ಚೆನ್ನಾಗಿ … Read more

ಪಂಜು ಕಾವ್ಯಧಾರೆ

ನೆನಪುಗಳೊಂದಿಗೆ ಮೌನ ಮೆರವಣಿಗೆ ನಡೆದಿದೆರಥೋತ್ಸವದಲ್ಲಿರಂಗುರಂಗಿನ ಕನಸುಗಳ ಹೊತ್ತುನೆನಪುಗಳ ಅನಾವರಣಕಹಿ ಮರೆವಿನ ಪಲಾಯನ ! ಉಳಿದು ಹೋಗಿದೆ ನೆನಪುಗಳುಎಂದೆಂದಿಗೂ ಕರಗದಂತೆ” ತಿಮ್ಮಪ್ಪನ ” ಐಶ್ವರ್ಯದಂತೆಬಳಸಿದಷ್ಟೊ ……ಕರಗಿಸಿದಷ್ಟೊ ……ಎಂದೆಂದಿಗೂ ಮುಗಿಯದಂತೆ….. ನೆನಪಿನ ಹನಿಗಳು ಜಾರುತಿದೆಬಿಸಿಬಿಸಿಯಾಗಿ ಕೆನ್ನೆಗಳ ಮೇಲೆಜಾರಿದರೂ ಉಳಿಸಿ ಹೋಗಿವೆನೆನಪಿನ ಚಿತ್ತಾರವನ್ನುನೆನಪುಗಳೇ ಹಾಗೆಮರೆಯಬೇಕೆಂದರೂ ,ಮರೆಯಲಾಗದ , ಹಳೆಯದಾದಷ್ಟೊನೆನಪುಗಳು ಮತ್ತೆ ಮತ್ತೆ ಕಾಡುತ್ತವೆ ಜೀವದೊಡನೆ ಬೆಸೆದಿರುವಆತ್ಮದಂತೆ ಹೃದಯದೊಳಗೇಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು …..ಆದರೂ,ನನಗೆ ಭಯರೆಕ್ಕೆ ಪುಕ್ಕ ಬಲಿತೊಡನೆಗೂಡುಬಿಟ್ಟು ಹಾರಿಹೋಗುವಪುಟ್ಟ ಹಕ್ಕಿಯಂತಾದರೆ ……?! –ಪ್ರಭಾಕರ ತಾಮ್ರಗೌರಿ ಹಾರುವ ಹಕ್ಕಿ ಒಂಟಿತನ ಬಹಳಸೊಗಸಿನ ಜೀವ-ನ! … Read more

ಚುಂಬಕ ಚಂದ್ರಮನೊಂದಿಗೆ ಚಲಿಸುತ್ತಾ….: ಶೋಭಾ ಶಂಕರಾನಂದ

ಪ್ರತಿನಿತ್ಯ ನಾವು ನೋಡಬಹುದಾದ ಪ್ರತ್ಯಕ್ಷ ದೈವಗಳಾದ ಸೂರ್ಯ ಮತ್ತು ಚಂದ್ರ ನಮ್ಮ ಬದುಕಿನಲ್ಲಿ ಅಗಾಧ ಪ್ರಭಾವವನ್ನು ಬೀರುತ್ತವೆ. ಅದರಲ್ಲೂ ಚಂದ್ರನಿಗೆ ವೇದಗಳಲ್ಲಿ ಅಧಿಕ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಆತನನ್ನು ವೇದಗಳಲ್ಲಿ ‘ಸೋಮದೇವ’ ಎಂದು ಕರೆದಿದ್ದಾರೆ. ಪವಮಾನ ಸೂಕ್ತದಲ್ಲಿ ಅದರ ಹೆಚ್ಚಿನ ಮಾಹಿತಿ ನೋಡಬಹುದು. “ಚಂದ್ರಮಾ ಮನಸೋ ಜಾತಃ” ಎಂದು ಒಂದು ಉಲ್ಲೇಖವಿದೆ. ಚಂದ್ರ ನಮ್ಮ ಮನಸ್ಸಿಗೆ ಅಧಿಪತಿ ಎಂದು ಇದರ ಅರ್ಥ. ನಮ್ಮ ಮನಸ್ಸು ನೆಮ್ಮದಿಯಿಂದ ಇಲ್ಲವೆಂದಾದರೆ, ಚಂದ್ರನ ಧ್ಯಾನ ಮಾಡಬೇಕು. ಏಕೆಂದರೆ ಭೂಮಿಗೂ ಚಂದ್ರನಿಗೂ ನಡುವೆ ಒಂದು … Read more

ಪಾರ್ಟ್-ಪಲ್ಯಾ: ಸಿದ್ಧರಾಮ ಹಿಪ್ಪರಗಿ (ಸಿಹಿ)

ಅದ್ಯಾವುದೋ ರಂಗಾಸಕ್ತರ ವೇದಿಕೆಯವರು ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಹಿರಿಯನೆಂಬ ಕಾಲ್ಪನಿಕ ಗೌರವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನ್ನ ಸಂಗ್ರಹದ ಪುಸ್ತಕ-ಮಸ್ತಕಗಳ ರಾಶಿಯೊಳಗಿಂದ ರಂಗಭೂಮಿಯ ನೆನಪುಗಳನ್ನು ಹೆಕ್ಕಿಕೊಂಡು ಮಾತಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ನನ್ನ ಹೆಸರಿಡಿದು ಯಾರೋ ಕೂಗಿದರು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಯಾರೂ ಹಾಗೇ ಕೂಗಿರಲಿಲ್ಲ. ನಮ್ಮ ಅವ್ವನ ಸಮಕಾಲೀನರು ಹಾಗೆ ಕರೆಯುತ್ತಿದ್ದರು. ತಿರುಗಿ ನೋಡಿದೆ. ಥೇಟ್‌ ಅವ್ವನ ಜಮಾನಾದ ಸೀರೆ-ಕುಪ್ಪಸ ತೊಟ್ಟರೂ ಆಧುನಿಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು “ಚಲೋತ್ನಾಗ ಮಾತಾಡಿದಿರಿ ಸರ್. ಕಂಪನಿ ನಾಟಕದ ಮಾಲೀಕಳು … Read more

ವಿಭಾವರಿ (ಭಾಗ 2): ವರದೇಂದ್ರ ಕೆ ಮಸ್ಕಿ

ಇದೇ ಸಂದರ್ಭದಲ್ಲಿ ಒಮ್ಮೆ ಹೇಮಂತ್ ತನ್ನ ಮನೆಗೆ ವಿಭಾಳನ್ನು ಕರೆದೊಯ್ದ. ಹೇಮಂತನ ತಂದೆ ತಾಯಿ ಎಲ್ಲರೂ ಅತ್ಯಂತ ಪ್ರೀತಿಯಿಂದ ವಿಭಾಳೊಂದಿಗೆ ಕಾಲ ಕಳೆದರು. ಆ ಬಂಗಲೆಯೋ ರಾಜನ ಅರಮನೆಯಂತಿತ್ತು. ಮನೆ ತುಂಬ ಆಳುಗಳು. ಖ್ಯಾತ ವೈದ್ಯ ದಂಪತಿಗಳ ಏಕೈಕ ಸುಪುತ್ರ ಹೇಮಂತ ಹುಟ್ಟುತ್ತಲೇ ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ಅನಿಸುವಷ್ಟು ಶ್ರೀಮಂತಿಕೆ. ಜೊತೆಗೆ ಒಬ್ಬಳೇ ತಂಗಿ ವಿಮಲಾ. ತುಂಬಾ ಚೂಟಿ, ಹಾಗೆಯೇ ಮಾತನಾಡುತ್ತ ವಿಮಲಾ, “ನೀವು ನನ್ನ ಅಣ್ಣನನ್ನು ಮದುವೆ ಆಗ್ತೀರಾ?” ಅಂತ ನೇರವಾಗಿ ಕೇಳಿಯೇ ಬಿಟ್ಟಳು, … Read more

293K CRC: ನಾಗಸಿಂಹ ಜಿ ರಾವ್

ನನ್ನ ಮನೆಯಿಂದ ಕಚೇರಿಗೆ 32 ಕಿಮೀ ದೂರ, 41 ಸ್ಟಾಪ್‌ಗಳು, 7:30ರ ಬಸ್‌ನಲ್ಲಿ ದಿನವೂ ಶಾಲಾ ಮಕ್ಕಳ ಜೊತೆಗಿನ ಪ್ರಯಾಣ. ಆರಂಭದಲ್ಲಿ, ಜನಜಂಗುಳಿಯಿಂದಾಗಿ ಬಸ್‌ನಲ್ಲಿ ಸೀಟು ಸಿಗದೆ ನಿಂತೇ ಪ್ರಯಾಣಿಸಬೇಕಿತ್ತು. ಕಚೇರಿಗೆ ತಲುಪುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಆದರೆ, ಈ ಸವಾಲನ್ನು ಒಂದು ಅವಕಾಶವಾಗಿ ನಾನು ಪರಿವರ್ತಿಸಿಕೊಂಡ ಪ್ರಕರಣವೇ 293K CRCಯ ಜನನ. ಬಸ್‌ನಲ್ಲಿ ಪ್ರತಿದಿನ ಮಕ್ಕಳ ಗಲಾಟೆ, ನಾನು ಕೆಲವು ಮಕ್ಕಳನ್ನು ಅವರ ಶಾಲೆಯ ಬಗ್ಗೆ. ಆಟದ ಬಗ್ಗೆ ಪಾಠದ ಬಗ್ಗೆ ಚರ್ಚೆಗಳಿಂದ ಅವರ ಪರಿಚಯ ಸಂಪಾದಿಸಿದೆ. ಪ್ರತಿದಿನ … Read more

ದಿಕ್ಕುಗಳು (ಭಾಗ 3): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀ ತಂದೆಯೊಂದಿಗೆ ಪಟ್ಟಣಕ್ಕೆ ಬಂದಳು. ರೈಲು ನಿಂತಲ್ಲೆಲ್ಲಾ ಎಲ್ಲಿ ಇಳಿದರೆ ಒಳ್ಳೇದು ಅಂತ ಯೋಚಿಸುತ್ತಿದ್ದ ಶಿವಪ್ಪ. “ಎಪ್ಪಾ ಗೊತ್ತು ಕೂನ ಇಲ್ಲದಾರ ಹತ್ರ ಏನೂ ಕೇಳ್ ಬ್ಯಾಡಪ್ಪ ಸುಮ್ಕಿರು” ಎಂದಳು ಅನುಶ್ರಿ. ತಂದೆ, “ಸೈ ಬಿಡವ್ವಾ ಹಂಗಂದ್ರ ನಮಗ ಗೊತ್ತಿರೂ ಮಂದಿ ಅದಾರೇನಬೇ ಇಲ್ಲೀ” ಎಂದಾಗ ಅನುಶ್ರೀ ಪೆದ್ದಳಂತೆ ಕುಳಿತಳು. ಪಕ್ಕದಲ್ಲಿ ಕುಳಿತಿದ್ದ ವೃದ್ಧರೊಬ್ಬರು, “ನೀವು ಎಲ್ಲಿ ಇಳಿಯಬೇಕಿದೆ” ಎಂದು ಕೇಳಿದರು. ಶಿವಪ್ಪ ಅವರಿಗೆ ಉತ್ತರಿಸದೇ ಮಗಳ ಮುಖ ನೋಡಿದನು. ಆಗ ಅನುಶ್ರೀಯೇ, “ಅಜ್ಜಾರ ಬೆಂಗಳೂರು ಇನ್ನೂ … Read more

ಪಂಜು ಕಾವ್ಯಧಾರೆ

ವಿಮರ್ಶೆ.. ಚರಂಡಿ ಜಿಗಿದವನನ್ನು ಸಮುದ್ರ ದಾಟಿದನೆಂದು ಬಿಂಬಿಸುವುದೇ? ಅಂಬೆಗಾಲಿಡುವವನ್ನು ನಟರಾಜನೆನ್ನುವುದೇ? ಕಾಡಿನ ತೊರೆಯ ಬದಿಯಲ್ಲಿ ಪುಕ್ಕ ತರಿದು ಕೊಂಡಕೆಂಬೂತವನ್ನು ನವಿಲೆಂದು ವರ್ಣಿಸುವುದೇ?. ಮಣ್ಣು ತಿನ್ನುವ ಮುಕ್ಕಾವನ್ನುಕಾಳಿಂಗಕ್ಕೆ ಹೋಲಿಸುವುದೇ? ತರವಲ್ಲ.! ತರವಲ್ಲ.! ಬೇವು, ಬೇಲ ಎರಡೂ ಬೆಳೆದಿವೆಈ ಕಾಡಿನಲ್ಲಿ.!ಹಾಲುಗುಂಬಳ, ಹಾಗಲಎರಡೂ ಒಂದೇ ಮರಕೆ ಹಬ್ಬಿದಬೇರೆ ಬೇರೆ ಬಳ್ಳಿ.! ಆಳುದ್ದ ಹೊಂಡಕ್ಕೂ,ಆಳ ತಿಳಿಯದ ಸಮುದ್ರಕ್ಕೂ ವಿವರಣೆ ಬೇಕೆ? ಮರುಭೂಮಿಯ ಕುರುಚಲಿಗೂಸಹ್ಯಾದ್ರಿ ಕಾಡಿಗೂ ಹೋಲಿಕೆ ಏಕೆ? ಆಗದು ನನ್ನಿಂದಾಗದು.ಬೇರೆ ಯಾರನ್ನಾದರೂ ಹುಡುಕಿಕೋ.!ಬಣ್ಣದ ಕಲ್ಲನ್ನು ವಜ್ರವೆನ್ನಲು.!ಹುಲ್ಲಿನ ಬೆಂಕಿಯನ್ನು ಕಲ್ಲಿದ್ದಲ ಕಾವೆನ್ನಲು.! ಬಾ, ಇಲ್ಲಿ … Read more

ನಾಟಕ “ಪುಲಪೇಡಿ”: ನಾಗಸಿಂಹ ಜಿ ರಾವ್

ಸಿಂಹಾವಲೋಕನ ೨ ‘ಪುಲಪೇಡಿ’ ನಾಟಕವು ಕೇವಲ ಒಂದು ರಂಗ ಪ್ರದರ್ಶನವಾಗಿರದೆ, ಕೇರಳದ ಒಂದು ಕಾಲದ ಅನಿಷ್ಟ ಸಾಮಾಜಿಕ ಪದ್ಧತಿಯಾದ ‘ಪುಲಪೇಡಿ’ಯನ್ನು ತೆರೆದಿಡುವ ಸಾಮಾಜಿಕ ಕನ್ನಡಿಯಾಗಿದೆ. ಈ ನಾಟಕವು ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸುವ ಜೊತೆಗೆ, ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿಯಾಗಿ ಎದ್ದು ಕಾಣುತ್ತದೆ. ಲಿಂಗದೇವರು ಹಳೆಮನೆಯವರ ರಚನೆಯಾದ ಈ ಕೃತಿಯನ್ನು ರಮೇಶ್‌ರವರ ನಿರ್ದೇಶನದಲ್ಲಿ ರಂಗದ ಮೇಲೆ ತರುವಾಗ, ನಾನು ಶೋಷಿತ ವರ್ಗದ ಯುವಕನ ಪಾತ್ರವನ್ನು ನಿರ್ವಹಿಸಿದ ಅನುಭವವು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿ ಉಳಿದಿದೆ. … Read more

ಬಾರಿನಲ್ಲಿ ‘ಬುದ್ಧ’: ಡಾ. ಸುಶ್ಮಿತಾ ವೈ.

ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ ಎನಿಸುತ್ತಿತ್ತು. ಗಡಿಬಿಡಿಯ ಗಾಡಿಗಳು ನಿಂತ ನೀರಿನ ಮೇಲೆ ಚಕ್ರ ಹರಿಸಿ ಎಳ್ಳಮಾವಾಸ್ಯೆಯ ತೀರ್ಥಸ್ನಾನ ಈಗಲೇ ಆಗಬಹುದೆಂಬ ಭಯದಲ್ಲಿ ಸುತ್ತ-ಮುತ್ತ ಕಣ್ಣರಳಿಸಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಎಡಕ್ಕೆ ತಿರುಗಿ ಇನ್ನೊಂದು ರಸ್ತೆಗೆ ಕಾಲಿಡುವಾಗ ರಸ್ತೆ ಪಕ್ಕದ ‘ಬಾರ್’ನ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ‘ರಿಸಪ್ಯನಿಸ್ಟ್’ನಂತೆ ಮಂದಸ್ಮಿತನಾಗಿ ಕುಳಿತಿದ್ದ ‘ಬುದ್ಧಮೂರ್ತಿ’ಯ ದರ್ಶನವಾಯಿತು. ಒಮ್ಮೆಲೆ ನನ್ನಲ್ಲಿ ನಗು, ಬೇಸರ, ಪ್ರಶ್ನೆ, … Read more

ಅಂಗವಿಕಲತೆ: ಸಮಾಜದಲ್ಲಿ ಮುಂದುವರಿದ ಊಹಾಪೋಹಗಳ ಓರೆಹೊರೆ: ರಶ್ಮಿ ಎಂ. ಟಿ.

ಅಂಗವಿಕಲತೆ ಎಂಬುದು ಕೇವಲ ವೈದ್ಯಕೀಯ ಅಥವಾ ಶಾರೀರಿಕ ಪರಿಸ್ಥಿತಿಯಲ್ಲ, ಅದು ಹಲವಾರು ಸಾಮಾಜಿಕ ಮೂಡನಂಬಿಕೆಗಳು, ತಪ್ಪು ತಿಳುವಳಿಕೆಗಳು ಮತ್ತು ಅನಾವಶ್ಯಕ ಊಹಾಪೋಹಗಳಿಂದ ಕೂಡಿರುವ ಒಂದು ಸಾಂಸ್ಕೃತಿಕ ಅನುಭವವೂ ಹೌದು. ಈ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಅಭಿವೃದ್ಧಿಯಾಗಿದ್ದರೂ, ಅಂಗವಿಕಲತೆಯನ್ನು ಇಂದು ಕೂಡ ಕೆಲವು ಮಂದಿ “ಪೂರ್ವ ಜನ್ಮದ ಶಾಪ”, “ತಾಯಿ-ತಂದೆ ಮಾಡಿದ ಕರ್ಮ”, ಅಥವಾ “ಗಾಳಿ ಸೋಕು” ಎಂಬ ನಂಬಿಕೆಗಳ ಮೂಲಕ ನೋಡುತ್ತಿದ್ದಾರೆ. ಇವುಗಳೆಲ್ಲ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಕುಂದಿದ ನಂಬಿಕೆಗಳು. ಒಂದು ಕಾಲದಲ್ಲಿ ಹೆಣ್ಣು ಮಗು … Read more

ಅಳಬೇಡ ಕಂದ ಅಳಬೇಡ: ನಾಗಸಿಂಹ ಜಿ ರಾವ್

ಕೊಳ್ಳೇಗಾಲದಲ್ಲಿ ಎರಡು ದಿನಗಳ ಕಾಲ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡಿದ ನಂತರ, ನಾನು ಮೈಸೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್‌ನಲ್ಲಿ ಜನಸಂದಣಿ ಇರಲಿಲ್ಲ; ಕೆಲವೇ ಪ್ರಯಾಣಿಕರು ಚದುರಿದಂತೆ ಕುಳಿತಿದ್ದರು. ನನ್ನ ಸೀಟಿನ ಮುಂದೆ ಒಬ್ಬ ಯುವತಿ, ಸುಮಾರು ೨೫-೨೬ ವರ್ಷದವಳು, ಒಂದು ವರ್ಷದ ಮಗುವಿನೊಂದಿಗೆ ಕುಳಿತಿದ್ದಳು. ಮಗುವಿನ ಮುಗ್ಧ ಮುಖ, ಆದರೆ ಸ್ವಲ್ಪ ದುರ್ಬಲವಾಗಿ ಕಾಣುವ ದೇಹ, ನನ್ನ ಗಮನ ಸೆಳೆಯಿತು. ಬಸ್ ಹೊರಟ ಕೆಲವೇ ಕ್ಷಣಗಳಲ್ಲಿ, ಮಗು ಜೋರಾಗಿ ಅಳಲು ಆರಂಭಿಸಿತು. ಆ ತಾಯಿ … Read more