ಪವನ್ ಒಡೆಯರ್ ಸಂದರ್ಶನ ಲೇಖನ: ಗುಂಡೇನಟ್ಟಿ ಮಧುಕರ

ಇತ್ತೀಚೆಗೆ ಬೆಳಗಾವಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ’ಪ್ರೀತಿ ಗೀತಿ ಇತ್ಯಾದಿ’  ಚಿತ್ರದ ಚಿತ್ರಕರಣ ನಡೆದಿತ್ತು. ಈ ಚಿತ್ರದ ನಾಯಕ ಪ್ಯಾರೆ ಆಗಬಿಟ್ಟೈತೆ ಪವನ ಒಡೆಯರ. ಗೋವಿಂದಾಯ ನಮಃ ಚಿತ್ರದಲ್ಲಿಯ ಆ ಉರ್ದು ಮಿಶ್ರಿತ ಹಾಡು ನನಗೆ ಮತ್ತೆ ಮತ್ತೆ ಕೇಳುವಂತೆ ಮಾಡಿತ್ತು. ಅದನ್ನು ಬರೆದಿರುವವರು ಪವನ ಒಡೆಯರ ಎಂದು ತಿಳಿದಾಗ ಅಚ್ಚರಿಪಟ್ಟಿದ್ದೆ. ಇಷ್ಟೊಂದು ಕಿರುವಯಸ್ಸಿನಲ್ಲಿ ಇಂತಹ ಒಂದು ಒಳ್ಳೆಯ ಸಾಹಿತ್ಯವನ್ನು ನೀಡಿರುವ ಪವನನ್ನನ್ನು ಭೇಟಿಯಾಗಿ ಮಾತನಾಡಬೇಕೆಂದು ಅಂದೇ ಅಂದುಕೊಂಡಿದ್ದೆ. ಅನಂತರ ಹಲವಾರು ಬಾರಿ ಸಂದರ್ಶನ ಮಾಡುವ … Read more

ಸಾಮಾನ್ಯ ಜ್ಞಾನ (ವಾರ 9): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ’ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು? ೨.    ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು? ೩.    ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು? ೪.    ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು? ೫.    ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು? ೬.    ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ? ೭.    ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು? ೮.    ಭಾರತದಲ್ಲಿ ಶಹನಾಯಿ ವಾದ್ಯಕ್ಕೆ … Read more

ಹೊಸ ವರುಷ ಹರುಷವೇ!?: ಅಖಿಲೇಶ್ ಚಿಪ್ಪಳಿ ಅಂಕಣ

ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷ ಪ್ರಾರಂಭವಾಗಿದೆ. ಜನವರಿ ೨೦೧೪. ಕಾಲಚಕ್ರದಡಿಯಲ್ಲಿ ಸುತ್ತಿ ಮತ್ತೊಮ್ಮೆ ಹೊಸವರುಷದ ಹರುಷದಲ್ಲಿ ಮಿಂದೆದ್ದು, ಹೊಸ ಸವಾಲುಗಳಿಗೆ, ಹೊಸ ಸಾಧನೆಗಳಿಗೆ ನಿಧಾನವಾಗಿ ಜಗತ್ತು ತೆರೆದುಕೊಳ್ಳುತ್ತಿದೆ. ಪ್ರತಿದೇಶವೂ ತಾನು ಮುಂದುವರೆದ ರಾಷ್ಟ್ರವಾಗಬೇಕು ಎಂದು ಹಂಬಲಿಸುತ್ತದೆ. ಈ ಹಂಬಲಿಕೆಯನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸಿಕೊಂಡು, ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡುತ್ತವೆ. ಹಿಂದಿನ ವರ್ಷದ ವೈಫಲ್ಯಗಳೇನು ಎಂಬುದನ್ನು ಪಟ್ಟಿ ಮಾಡಿ ಪ್ರಚುರಪಡಿಸಲು ವಿವಿಧ ಕ್ಷೇತ್ರಗಳಲ್ಲಿ ತಜ್ಞರ ಪಡೆಯೇ ಇದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಲು ಆಯಾ ಕ್ಷೇತ್ರದ ವಿಜ್ಞಾನಿಗಳು ತಮ್ಮ ಶ್ರಮವನ್ನು ಧಾರೆಯರೆಯುತ್ತಾರೆ. … Read more

ಮೂವರ ಕವಿತೆಗಳು: ಅನುಪಮಾ ಎಸ್. ಗೌಡ, ಆಶಾದೀಪ, ಪವಿತ್ರ ಸತೀಶ್ ಕುಮಾರ್

ಬರೆಯುತ್ತೇನೆ ನಾನು  ಹೆತ್ತವರ ಕಂಬನಿಯ  ನೋವನು ಕುರಿತು   ಅತ್ಮಸಾಕ್ಷಿ ಇಲ್ಲದವರ ಮೇಲೆ  ಮಣ್ಣಿಗಾಗಿ ಬಡಿದಾಡುವ  ಬಂಧುಗಳ ಕುರಿತು ಬರೆಯುತ್ತೇನೆ ನಾನು  ಸನ್ಯಾಸತ್ವ ಪಡೆದವರ ಮೇಲೆ  ವ್ಯಾಮೋಹ ಬಿದಡಿರುವುದನು ಕುರಿತು  ಅವರಲ್ಲಿರುವ ಕ್ರೋದ  ನಯವಂಚನೆಯ ಕುರಿತು  ಬರೆಯುತ್ತೇನೆ ನಾನು  ಆತ್ಮನಾನು ಪರಮಾತ್ಮತಂದೆ   ಅನ್ನುವವರ ಮೇಲೆ  ತನ್ನದಲ್ಲದನ್ನು ತನ್ನದೆಂದು  ವಾದಿಸುವವರ ಕುರಿತು  ಮಣ್ಣಾಗುವಾಗ ಬಿಡಿಗಾಸಿರದೆ  ಬರಿಗೈಯಲ್ಲಿ ಹೋಗುವ  ಪ್ರತಿಯೊಬ್ಬರ ಎಣಿಸಿ -ನಗೆಮಲ್ಲಿಗೆ  ಅನುಪಮ ಎಸ್  ಗೌಡ            ನಿರೀಕ್ಷೆ ಕೊಡವದಿರಿ ನನ್ನ … Read more

ಹೊಟ್ಟೆ!:ಪ್ರಶಸ್ತಿ ಪಿ.ಸಾಗರ

                  "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ.." ಅನ್ನೋ ಪುರಂದರದಾಸರ ಕೀರ್ತನೆ ನೆನಪಾಗುತ್ತಿತ್ತು. ಇದಕ್ಕೆ ಕಾರಣ ನಿನ್ನೆ ರಾತ್ರೆ ಗೆಳೆಯನ ಮನೆಗೆ ಹೋಗಿ ಅವನ ಅನಿರೀಕ್ಷಿತ ಒತ್ತಾಯಕ್ಕೆ ಮಣಿದು ಹತ್ತಿದ ನಳಪಾಕಕ್ಕೂ ಬಯ್ಯಲಾರದೇ ಹೋದ ಅರ್ಧ ತುಂಬಿದ ಹೊಟ್ಟೆಯೋ ಇಂದು ಬೆಳಗ್ಗೆಯ ಗಡಿಬಿಡಿಯ ತಿಂಡಿಯೋ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ದಕ್ಕಿದ ಅರೆಹೊಟ್ಟೆ ಮೊಸರನ್ನವೋ ಗೊತ್ತಿಲ್ಲ. ಮಧ್ಯಾಹ್ನ ಹನ್ನೆರಡಾಗೋವಷ್ಟರಲ್ಲೇ ತನ್ನ ಇರುವ ಸಾರುತ್ತಿದ್ದ ಹೊಟ್ಟೆ ಟ್ರಿಪ್ಪು ಟ್ರಿಪ್ಪೆಂದು ಹುಚ್ಚನಂತೆ … Read more

ಛೂಕು ಭೂಕು ರೈಲು: ಸುಮನ್ ದೇಸಾಯಿ

ಮಧ್ಯಾಹ್ನ ೧.೩೦ ಆಗಿತ್ತು, ಮಂತ್ರಾಲಯದ ರೇಲ್ವೆ ಸ್ಟೆಷನ್ನ್ಯಾಗ ಗುಲಬರ್ಗಾಕ್ಕ ಹೋಗೊ ಟ್ರೇನಿನ ಸಲುವಾಗಿ ಕಾಯಕೊತ ನಿಂತಿದ್ವಿ. ಮಂತ್ರಾಲಯದಾಗ ರಾಯರ ಸನ್ನಿಧಿಯೊಳಗ ಹೆಂಗ ಮೂರ ದಿನಾ ಕಳದ್ವು ಗೊತ್ತಾಗಲೆಯಿಲ್ಲಾ. ರಾಯರ ಸನ್ನಿಧಿ ಅಂದ್ರ ಅಮ್ಮನ ಮಡಿಲಿನ್ಯಾಗ ಮಲ್ಕೊಂಡಷ್ಟ ಹಿತಾ ಇರತದ.ಮನಸ್ಸು ಪ್ರಶಾಂತ ಇರತದ. ವಾಪಸ ಊರಿಗೆ ಹೋಗ್ಲಿಕ್ಕೆ ಮನಸಾಗಲಾರದ ಒಲ್ಲದ ಮನಿಸಿನಿಂದ ಸ್ಟೇಷನ್ನಿಗೆ ಬಂದ ನಿಂತಿದ್ವಿ. ಮುಂಬೈಕ್ಕ ಹೋಗೊ ಟ್ರೇನ್ ಬಂತು ನಾವು ಲೇಡಿಸ್ ಬೋಗಿಯೊಳಗ ಹತ್ತಿದ್ವಿ. ಬೋಗಿ ಪೂರ್ತಿ ಖಾಲಿನ ಇತ್ತು. ನಮ್ಮ ಫ್ಯಾಮಿಲಿಯವರ ಮಾತ್ರ ಇದ್ವಿ. … Read more

ಬಾಲ್ಯದ ಮೆಚ್ಚಿನ ಚಿತ್ರಗಳು: ವಾಸುಕಿ ರಾಘವನ್ ಅಂಕಣ

ನಿಮಗೆ ಬಾಲ್ಯದಲ್ಲಿ ತುಂಬಾ ಇಷ್ಟವಾಗಿದ್ದ ಸಿನಿಮಾಗಳನ್ನ ಜ್ಞಾಪಿಸಿಕೊಳ್ಳಿ. ಈಗ ನಿಮಗೆ ಅವು ಅಂಥ ವಿಶೇಷವೇನಲ್ಲ ಅನ್ನಿಸಬಹುದು, ಆದರೂ ಅವು ಮನಸ್ಸಿಗೆ ಬಹಳ ಹತ್ತಿರವಾಗಿರುತ್ತವೆ. ಅವು ಶ್ರೇಷ್ಠ ಕಲಾಕೃತಿಗಳೇ ಆಗಬೇಕೆಂದಿಲ್ಲ. ನೋಡಿದಾಗಿನ ನಮ್ಮ ಮನಸ್ಥಿತಿಯೋ, ಜೊತೆಗಿದ್ದ ಗೆಳೆಯರೋ, ಇನ್ಯಾವುದೋ ಕಾರಣಗಳಿಂದಲೋ ಅವು ಸ್ಮರಣೀಯವಾಗಿರುತ್ತವೆ. ನನ್ನ ಬಾಲ್ಯದ ಮೆಚ್ಚಿನ ಹತ್ತು ಚಿತ್ರಗಳನ್ನು ಪಟ್ಟಿಮಾಡಲು ಪ್ರಯತ್ನಿಸಿದ್ದೇನೆ. ಇವೇ ಹತ್ತು ಅತ್ಯಂತ ಪ್ರಮುಖ ಚಿತ್ರಗಳಾ ಗೊತ್ತಿಲ್ಲ, ಈ ಕ್ಷಣದಲ್ಲಿ ಜ್ಞಾಪಕ ಬಂದ ಹತ್ತು ಚಿತ್ರಗಳು ಇವು.  ಧ್ರುವತಾರೆ ನನಗೆ ನೆನಪಿರುವಂತೆ ನಾನು ನೋಡಿದ … Read more

ಜೀವನ ದರ್ಶನ (ಕೊನೆಯ ಭಾಗ): ಪಾರ್ಥಸಾರಥಿ. ಎನ್.

          (ಇಲ್ಲಿಯವರೆಗೆ…) ಮನುಷ್ಯನ ಮನವೇ ಹಾಗೇ ಧರ್ಮ , ಹಣ , ಅಧಿಕಾರ ಇವುಗಳನ್ನೆಲ್ಲ ಕಂಡರೆ ವಿಭ್ರಮೆಗೆ ಒಳಗಾಗುತ್ತೆ. "ಇಲ್ಲಿ ಮಾತು ಬೇಡ , ಸರಿಯಾಗಲ್ಲ, ಹೀಗೆ ನಡೆಯುತ್ತ ಹೋದರೆ ನಮ್ಮ ತೋಟ ಸಿಗುತ್ತೆ ಬಾ ಅಲ್ಲಿ ಹೋಗೋಣ" ಎನ್ನುತ್ತ ಹೊರಟ. ರಸ್ತೆಯ ಅಕ್ಕಪಕ್ಕ ಅಂಗಡಿಗಳು ಇದ್ದವು,  ಅವುಗಳಲ್ಲೆಲ್ಲ ತೆಂಗಿನಕಾಯಿ, ಎಳ್ಳೆಣೆಯ ಪೊಟ್ಟಣಗಳು, ಕಪ್ಪುವಸ್ತ್ರ, ದೀಪಗಳು, ವಿವಿದ ಪುಸ್ತಕಗಳು, ತುಳಸಿಹಾರದ ಅಂಗಡಿಗಳು ಇಂತಹುವುಗಳೆ, ಎಲ್ಲ ಕಡೆ ತುಂಬಿರುವ ಜನ. ಅಂಗಡಿಯಲ್ಲಿರುವ ಕೆಲವರು … Read more

ಸ್ನೇಹ ಭಾಂದವ್ಯ (ಕೊನೆಯ ಭಾಗ): ನಾಗರತ್ನಾ ಗೋವಿಂದನ್ನವರ

        (ಇಲ್ಲಿಯವರೆಗೆ…) ರಾಜೇಶ ಇನ್ನು ಮನೆಗೆ ಬಂದಿರಲಿಲ್ಲ. ಆಗ ಪದ್ಮಮ್ಮ ರೇಖಾಳಿಗೆ ಬಾರಮ್ಮ ಬಾ ನಿನ್ನಿಂದ ಒಂದು ಉಪಕಾರ ಆಗಬೇಕಾಗಿದೆ ಎಂದಳು. ನಮ್ಮ ರಾಜೇಶ ಸುಧಾಳ ನೆನಪಲ್ಲೆ ಹುಚ್ಚನ ಹಾಗಾಗಿದ್ದಾನೆ. ನಿನ್ನ ಮಾತಿಗೆ ಆತ ಗೌರವ ಕೊಡುತ್ತಾನೆ ದಯವಿಟ್ಟು ಅವನಿಗೆ ಮೊದಲಿನ ರಾಜೇಶ ಅಗೋಕೆ ಹೇಳಮ್ಮ. ಇದ್ದ ಒಂದು ವಂಶದ ಕುಡಿನು ದ್ವೇಷಿಸೋಕೆ ಕಲಿತಿದ್ದಾನೆ. ಏನು ಮಾಡಬೇಕು ಅಂತ ತಿಳಿತಿಲ್ಲಾ ಎಂದರು ಪದ್ಮಮ್ಮ. ಆದರೆ ಅಂದು ಎಷ್ಟು ಹೊತ್ತಾದರು ರಾಜೇಶ ಬಾರದಿರುವುದನ್ನ ಕಂಡು … Read more

ಕಲೆಯನಲ್ಲದೆ ಶಿಲ್ಪಿ ಶಿಲಯನೇಂ ಸೃಷ್ಟಿಪನೆ?: ಡಾ. ಬಿ.ಆರ್.ಸತ್ಯನಾರಾಯಣ

          ತುಂಬಾ ಹಿಂದೆ ಒಬ್ಬ ದರೋಡೆಕಾರನಿದ್ದ. ದಾರಿಯಲ್ಲಿ ಬಂದವರನ್ನು ಅಡ್ಡಗಟ್ಟಿ ಅವರನ್ನು ಕೊಂದು ಅವರಲ್ಲಿದ್ದುದದ್ದನ್ನು ದೋಚಿ, ಅದರಲ್ಲಿಯೇ ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ಸಾಕಿಕೊಂಡಿದ್ದನಂತೆ! ಒಂದು ದಿನ ನಾರದನೇ ಆ ದುಷ್ಟನ ಕೈಗೆ ಸಿಕ್ಕಿಹಾಕಿಕೊಂಡುಬಿಡುತ್ತಾನೆ. ಇನ್ನೇನು ಕೊಲ್ಲಬೇಕು ಅನ್ನುವಷ್ಟರಲ್ಲಿ ನಾರದ ’ಅಯ್ಯಾ ಕೊಲ್ಲುವುದು ಹೇಗಿದ್ದರೂ ಕೊಂದುಬಿಡುತ್ತೀಯಾ. ಅದಕ್ಕೂ ಮೊದಲು ನನ್ನದೊಂದು ಪ್ರಶ್ನೆಗೆ ಉತ್ತರ ಕೊಟ್ಟುಬಿಡು. ಹೀಗೆ ಸಿಕ್ಕಸಿಕ್ಕವರನ್ನೆಲ್ಲಾ ಕೊಲ್ಲುವುದು ಪಾಪವಲ್ಲವೆ? ಈ ನಿನ್ನ ಪಾಪಕ್ಕೆ ಪಾಲುದಾರರು ಯರ್‍ಯಾರು?’ ಎಂದು ಪ್ರಶ್ನಿಸಿದ. ಆಗ … Read more

ಸ್ಪಿರಿಟ್ಟು, ಲಾವಾರಸ ಮತ್ತು ಮದುವೆ: ಅಮರ್ ದೀಪ್ ಪಿ. ಎಸ್.

                ಮೊನ್ನೆ ಶ್ರೀವಲ್ಲಭ ಆರ್ . ಕುಲಕರ್ಣಿ  ಇವರ "ಹೀಗೊಂದು ವಧು ಪರೀಕ್ಷೆ" ಲಲಿತ ಪ್ರಬಂಧ ಓದುತ್ತಿದ್ದೆ… ಹೌದೌದು ಅನ್ನಿಸಿಬಿಟ್ಟಿತ್ತು.  ನನಗೀಗ ಅಪಘಾತವಾಗಿ ಕ್ಷಮಿಸಿ  ಮದುವೆಯಾಗಿ ೧೧ ವರ್ಷ.. ಹನ್ನೊಂದು ವರ್ಷದ ಹಿಂದೆ ನಾನು ವಧು ಪರೀಕ್ಷೆಗೆ ಹೋದದ್ದು… ಒಂದಲ್ಲ ಅಂತ ಒಂಬತ್ತು. ಒಮ್ಮೆ ಗದಗ ಜಿಲ್ಲೆಯ ಯಾವುದೋ ಊರಿಗೆ ಕನ್ಯಾ ನೋಡಲು ಹೋಗಿದ್ದೆವು. ದಾರಿಯಲ್ಲಿ ಹೋಗುತ್ತಾ ಜವಳಿ ಅಂಗಡಿ ಕಿರಾಣಿ ಅಂಗಡಿ ಎಲ್ಲಾ ನೋಡಿದೆ… "ವೈನ … Read more

ಯಾರ ಜೊತೆ ಯಾವಾಗ ಎಲ್ಲಿ ಎಷ್ಟು ಕುಡೀಬೇಕು ಅಥವಾ ಕುಡಿಯಬಾರದು ಎನ್ನುವುದು ತಿಳಿದರೆ: ನಟರಾಜು ಎಸ್ ಎಂ

ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಬೆಂಗಳೂರಿಗೆ ಕಾಲಿಟ್ಟ ಹೊಸತು. ನಮ್ಮೂರಿನ ಒಂದಷ್ಟು ಗೆಳೆಯರು ಎಂ.ಜಿ. ರೋಡಿನ ಹತ್ತಿರವಿರುವ ಹಾಸ್ಟೆಲ್ ನಲ್ಲಿದ್ದರು. ಆ ಗೆಳೆಯರಲ್ಲಿ ಒಂದಷ್ಟು ಜನ ಹಾಸ್ಟೆಲ್ ಗೆ ಸೇರಿದ್ದು ಡಿಗ್ರಿ ಓದಲಿಕ್ಕಾದರೂ ಹೊಟ್ಟೆಪಾಡಿಗಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದರು. ಊರಿನಿಂದ ಯಾರಾದರು ಹುಡುಗರು ಸ್ಕೂಲನ್ನೋ ಕಾಲೇಜನ್ನೋ ಅರ್ಧಕ್ಕೆ ಬಿಟ್ಟು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದರೆ ಅವರು ಮೊದಲು ಬಂದಿಳಿಯುತ್ತಿದ್ದ ಜಾಗ ಅದೇ ಆ ಎಂ.ಜಿ. ರೋಡಿನ ಹಾಸ್ಟೆಲ್ ಆಗಿತ್ತು. ಹಾಗೆ ಬಂದಿಳಿದ ಹುಡುಗರಿಗೆ ಊಟ ತಿಂಡಿ ಮಲಗಲಿಕ್ಕೆ ಜಾಗವನ್ನು … Read more

ನಗೀ ನವಿಲು ಆಡುತ್ತಿತ್ತ: ರೇಷ್ಮಾ ಎ.ಎಸ್.

ಕೊಪ್ಪದಿಂದ ಬಾಳೆಹೊನ್ನೂರಿಗೆ ಜಯಪುರದ ಮೇಲಿನ ಮಾರ್ಗವಲ್ಲದೇ ಇನ್ನೊಂದು ಮಾರ್ಗವೂ ಇದೆ. ಅದು ಮೇಲ್ಪಾಲು ರಸ್ತೆ. ಇದು ಎರೆಡು ಕಿ.ಮೀ. ಕಡಿಮೆ ಇದ್ದು ಟಿಕೆಟ್ ದರ ಒಂದು ರೂ. ಕಡಿಮೆ ಇದ್ದರೂ ಜಯಪುರ ರಸ್ತೆ ಬಿಟ್ಟು ಈ ರಸ್ತೆಯಲ್ಲಿ ಪಯಣಿಸುವವರು ಕಡಿಮೆ. ಬೇರೆ ಬಸ್ ಸಿಗದಿದ್ದಾಗ, ಇಲ್ಲವೇ ಈ ಮಾರ್ಗದಲ್ಲಿಯೇ ಮನೆಗಳಿದ್ದವರು, ಈ ಮಾರ್ಗದಲ್ಲಿರುವ ಊರುಗಳಿಗೆ ಹೋಗಬೇಕಾದವರು ಮಾತ್ರ ಇತ್ತ ಕಡೆ ಪಯಣಿಸುತ್ತಾರೆ. ಕಾರಣ ತುಂಬ ಹಾಳಾದ ರಸ್ತೆ. ಆಮೆ ನಡಿಗೆಯಲ್ಲಿ ತಿರುವು ರಸ್ತೆಯಲ್ಲಿ ಸಾಗುತ್ತಾ ಮಧ್ಯ ಮಧ್ಯ … Read more

ಭೂತಪ್ಪನ ಲೇವಾದೇವಿ: ಅಖಿಲೇಶ್ ಚಿಪ್ಪಳಿ ಅಂಕಣ

ಸಾಗರದಿಂದ ವರದಾಮೂಲಕ್ಕೆ ಹೋಗುವ ದಾರಿಯಲ್ಲಿ ಮಧ್ಯೆ ಓತಿಗೋಡು-ಶೆಡ್ತಿಕೆರೆ ಹೋಗುವ ಒಂದು ದಾರಿಯಿದೆ. ಇಷ್ಟು ವರ್ಷ ಮಣ್ಣು ದಾರಿಯಾಗಿತ್ತು, ಅಭಿವೃದ್ಧಿಯಾಗಿ ಅಲ್ಲಿ ಈಗ ಕಿತ್ತುಹೋದ ಟಾರು ರಸ್ತೆಯ ಅವಶೇಷಗಳನ್ನು ಕಾಣಬಹುದು. ಅಲ್ಲಿದ್ದ ಸುಮಾರು ಮುನ್ನೂರು ಎಕರೆಯಷ್ಟು ಜಾಗಕ್ಕೆ ಧೂಪದ ಸಾಲು ಎನ್ನುವ ಹೆಸರಿದೆ. ನೈಸರ್ಗಿಕವಾಗಿ ವಿಂಗಡನೆಗೊಂಡ ಸಾಲುಧೂಪದ ಮರಗಳು ಎಣಿಕೆಗೆ ನಿಲುಕದಷ್ಟು ಇದ್ದವು. ಈಗೊಂದು ೨೦ ವರ್ಷಗಳ ಹಿಂದೆ ಸರ್ಕಾರದವರು ಪೇಪರ್ ಮಿಲ್‌ಗಳಿಗೆ ಸರಬರಾಜು ಮಾಡಲು ದಟ್ಟವಾದ ನಿತ್ಯಹರಿದ್ವರಣ ಮರಗಳ ನೈಸರ್ಗಿಕ ತೋಪನ್ನು ಹಿಟಾಚಿ-ಬುಲ್ಡೋಜರ್ ಹಚ್ಚಿ ನೆಲಸಮ ಮಾಡಿ … Read more

ಬಾಲ ಕಾರ್ಮಿಕ: ಫ್ಲಾಪೀಬಾಯ್

ಅಣ್ಣಾ, ಅಣ್ಣಾ ಏನಾದ್ರೂ ಕೊಡಣ್ಣಾ.. ಅಂತ ದೈನ್ಯತೆಯ ದ್ವನಿಯೊಂದು ಅವನ ಹಿಂದಿನಿಂದ ಕೇಳಿ ಬಂತು. ಹಿಂತಿರುಗಿ ನೋಡಿದಾಗ ಕಾಣಿಸಿದ್ದು, ಎಣ್ಣೆಯೇ ಕಾಣದಿದ್ದ ಕೆದರಿದ ಕೂದಲು, ಕಳೆಗುಂದಿದ್ದ ಬೆಂಗಳೂರಿನ ಡಾಂಬರು ರಸ್ತೆಯಂತಾಗಿದ್ದ ಕಣ್ಣು, ಹೊರಗೆ ಮಾಸಿದ ಹರಕಲು ಬಟೆ, ಬಟ್ಟೆಯೊಳಗೆ ಹೊರಗಿಂದಲೇ ಗೋಚರಿಸುವ ಹಸಿದ ಹೊಟ್ಟೆ. ಆ ಹೊಟ್ಟೆಯ ಒಡೆಯ ಸುಮಾರು ೧೦-೧೧ ಪ್ರಾಯದ ಒಬ್ಬ ಹುಡುಗ. ಅವನನ್ನು ನೋಡುತ್ತಲೇ ಈತ ತನ್ನ ಫ್ಲಾಶ್‌ಬ್ಯಾಕ್‌ಗೆ ಜಾರಿದ..! ಬಹಳ ವರ್ಷಗಳ ಹಿಂದೆ ಈತ ಕೊಳ್ಳೆಗಾಲದಿಂದ ಬೆಂಗಳೂರಿಗೆ ಬಂದಾಗ ಈತನಿಗೂ ಹತ್ತು … Read more

ಆ ಕಾಲಾ ಹಂಗ ರೀ.. ಈ ಕಾಲಾ ಹಿಂಗ ರೀ.. ಯಾವ ಕಾಲಾ ಛಂದ ರೀ…..?: ಸುಮನ್ ದೇಸಾಯಿ

ಮನ್ನೆ ಮಧ್ಯಾನ್ಹಾ ಆಫೀಸನ್ಯಾಗ ಹಿಂಗ ಸುಮ್ನ ಕೂತಿದ್ವಿ. ಅಂಥಾದ್ದೇನು ಕೆಲಸಾ ಇದ್ದಿದ್ದಿಲ್ಲಾ. ನಮ್ಮ ಜೋಡಿ ಕೆಲಸಾ ಮಾಡೊ ಹುಡಗಿ ಸವಿತಾ ಇಂಟರನೇಟ್ ನ್ಯಾಗ ಇ-ಪೇಪರ ಓದ್ಲಿಕತ್ತಿದ್ಲು. ಹಂಗ ಓದಕೊತ, ” ಮೆಡಮ್ಮ ರಿ ಬಂಗಾರದ ರೇಟ್ ಮೂವತ್ತೆರಡು ಸಾವಿರದಾ ಐದುನೂರಾ ಚಿಲ್ಲರ ಆಗೇತಂತ  ನೋಡ್ರಿ. ಹಿಂಗಾದ್ರ ಎನ ಬಂಗಾರದ ಸಾಮಾನ ಮಾಡಿಸ್ಕೊಳ್ಳಾಕ ಆಕ್ಕೇತರಿ. ಹಿಂದಕಿನ ಮಂದಿ ತಲ್ಯಾಗ ಬಂಗಾರದ ಹೂವಿನ ಚಕ್ಕರ  ಮತ್ತ ಭಂಗಾರದ ಕ್ಯಾದಗಿ, ಹೆರಳಮಾಲಿ ಮಾಡಿಸಿಕೊಂಡ ಹಾಕ್ಕೊತ್ತಿದ್ರಂತ ರಿ, ಈಗ ನಮಗ ಲಗೂಮಾಡಿ ಕಿವ್ಯಾಗ … Read more

“ಪುನರ್ಜನ್ಮ” ದ ಕಥೆಯ ಸಿನೆಮಾ ಮತ್ತು ಅಪಘಾತ: ಅಮರ್ ದೀಪ್ ಪಿ. ಎಸ್.

            ಮದುವೆಯನ್ನೂ ಸಹ ಲಘು ದುಃಖ ಬಲು ಹರ್ಷದಿಂದ “ಅಪಘಾತ ” ವೆಂದು ಬಣ್ಣಿಸುವವರೂ ಇದ್ದಾರೆ.. ಆದರೆ, ನಿಜವಾದ ಅಪಘಾತಗಳನ್ನು ಕಣ್ಣಾರೆ ಕಂಡಿದ್ದೇ ಆದಲ್ಲಿ ಅಥವಾ ಅನುಭವಿಸಿದಲ್ಲಿ ಈ ಮಾತನ್ನು ನಾನಾದರೂ ಹಿಂತೆಗೆದುಕೊಳ್ಳುತ್ತೇನೆ.  ನನಗೆ ನೆನಪಿದ್ದಂತೆ ನಾನು ಕನಿಷ್ಠ ಮೂರರಿಂದ ನಾಲ್ಕು ಬಾರಿ ಅಪಘಾತವನ್ನು ಸ್ವತಃ ಅನುಭವಿಸಿದ್ದೇನೆ.. ಮತ್ತು ಕಣ್ಣಾರೆ ನೋಡಿದ್ದಂತೂ ಹಲವು… ಅದಿನ್ನು ಓದು “ಸುತ್ತುತ್ತಿದ್ದ ” ಕಾಲ.. ಮತ್ತು ಸಹಜವಾಗಿ ದುಡುಕು ಹಾಗೂ ಹುಡುಗು ಬುದ್ಧಿ. ಹದಿನಾರರಿಂದ … Read more

ಇಟ್ಸ್ ಅ ವಂಡರ್ಫುಲ್ ಲೈಫ್: ವಾಸುಕಿ ರಾಘವನ್ ಅಂಕಣ

ನನ್ನ ಕಲ್ಪನಾಲೋಕದಲ್ಲಿ ಹಬ್ಬಗಳಿಗೂ ಚಲನಚಿತ್ರಗಳಿಗೂ ಬಿಡಿಸಲಾಗದ ನಂಟಿದೆ. ಯುಗಾದಿ ಹಬ್ಬದ ದಿನ ಚಿತ್ರಮಂಜರಿಯಲ್ಲಿ ತಪ್ಪದೇ ಪ್ರತಿ ವರ್ಷ ಬರುತ್ತಿದ್ದ ಲೀಲಾವತಿ ಅಭಿನಯದ “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಹಾಡು ನೆನಪಿಗೆ ಬರುತ್ತದೆ. ಗಣಪತಿ ಹಬ್ಬ ಅಂದಾಕ್ಷಣ ಚಿತ್ರಹಾರ್ ನ “ದೇವಾದಿ ದೇವಾ ಗಣಪತಿ ದೇವ” ಹಾಡು ಜ್ಞಾಪಕಕ್ಕೆ ಬರುತ್ತದೆ. ಕ್ರಿಸ್ಮಸ್ ಬಂತೆಂದರೆ ಬಿಟ್ಟೂಬಿಡದೆ ಕಾಡುವ ಚಿತ್ರ “ಇಟ್ಸ್ ಅ ವಂಡರ್ಫುಲ್ ಲೈಫ್”! ಇದು 1946ರಲ್ಲಿ ಫ್ರಾಂಕ್ ಕ್ಯಾಪ್ರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ದೇವರಿಗೆ ನೂರಾರು ಜನರಿಂದ … Read more