ನೂರರ ಕಸಾಪ ತೊಡಬೇಕಾಗಿರುವ ರೂಪ: ಪ್ರದೀಪ್ ಮಾಲ್ಗುಡಿ

ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಯ ಉದ್ದೇಶದಿಂದ ೦೫/೦೫/೧೯೧೫ರಂದು  ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದಿಗೆ ಕಸಾಪಗೆ ೯೯ ವರ್ಷಗಳು ತುಂಬಲಿವೆ. ಅಂದಿನ ಉದ್ದೇಶಗಳೆಲ್ಲ ಇಂದಿಗಾದರೂ ಈಡೇರಿದೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಈ ಸಮಯದಲ್ಲಿ ೨೩ ಅಧ್ಯಕ್ಷರ ಅವಧಿ ಮುಗಿದು, ೨೪ನೆಯವರು ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆಯನ್ನು ಹೊರತು ಪಡಿಸಿದರೆ … Read more

ನಾರಾಣಾಚಾರಿ ಕಾಂಪೌಂಡಿನ ಅತೃಪ್ತ ಆತ್ಮ ಮತ್ತು ನಾನು: ಅಮರ್ ದೀಪ್ ಪಿ.ಎಸ್.

ನಿಮ್ ಹೆಸರೇನ್ ಸರ?  ಯಾವ್ ಊರು? ಈ ಊರಿಗೆ  ಬಂದ್ ಎಷ್ಟ್ ವರ್ಸಾತು? … ಮದ್ವೆ ಆಗೇದೋ? ಎಷ್ಟು ಮಕ್ಳು ?  ಹೀಗೆ ಒಬ್ಬ ಮುದುಕ ಎನ್ಕ್ವೈರಿ ಮಾಡುತ್ತಿದ್ದ.  ಯಜ್ಮಾನ, ನಾನ್ ಪರೀಕ್ಷೆಗೆ ಕುಂತಿಲ್ಲೋ ಯಪ್ಪಾ, ಒಂದೊಂದ್ ಪ್ರಶ್ನೆ ಕೇಳು ಅಂದೆ.   "ಆತು ಹೇಳಪಾ" ಅಂದ.   ಆ ವಯಸ್ಸಾದ ಮುದುಕ ಬರೀ ಒಂದು ಪಂಜೆ, ಮೇಲೊಂದು  ಬನೀನು ಹೆಗಲ ಮೇಲೊಂದು ಟವೆಲ್ ಹಾಕಿ ಕೊಂಡು ಬಸವಣ್ಣ ಸರ್ಕಲ್ ಬಳಿಯ ಸೈಕಲ್ ಶಾಪ್ ಕಟ್ಟೆಗೆ ಕೂತು ವಿಚಾರಿಸುತ್ತಿದ್ದ.  ನೋಡುತ್ತಿದ್ದಂತೆಯೇ … Read more

ಬಾಳೇಕಾಯಿ ರಂಗಪ್ಪನ ಕತೆಗಳು: ಪ್ರಶಸ್ತಿ ಪಿ.

ಬಾಳೇ ಹಣ್, ಬಾಳೇ ಹಣ್.. ನೇಂದ್ರ ಬಾಳೆ, ಮೈಸೂರ್ ಬಾಳೆ, ಪುಟ್ ಬಾಳೆ, ಏಲಕ್ಕಿ ಬಾಳೆ, ವಾಟ್ ಬಾಳೆ.ಬಾಳೆ ಹಣ್.. ಬಾಳೇ ಹಣ್.. ಬೀದಿ ಬೀದಿ ಕೂಗಿ ಕೂಗಿ ರಂಗಪ್ಪನ ಬಾಳೇ ಹಣ್ಣಾಗಿಹೋಗಿತ್ತು. ಈ ಬಾಳೇ ಹಣ್ಣಿನ ಕೂಗು ಸಂಜೆ ಹೊತ್ತಿಗೆ ಬರ್ತಾ ಇದ್ರೆ ಬೀದಿ ಹುಡುಗ್ರೆಲ್ಲಾ ಆ ಗಾಡಿಗೆ ಮುತ್ತಾ ಇದ್ರು. ರಂಗಪ್ಪನ ಮನೆಯೂ ಈ ಬೀದಿಯ ಹತ್ರವೇ ಇದ್ದಿದ್ರಿಂದಲೋ, ಆ ಬೀದಿಯ ಚಿಳ್ಳೆ ಪಿಳ್ಳೆ ಹುಡುಗ್ರ ಜೊತೆ ಮಾತಾಡೋದ್ರಲ್ಲಿ ಸಿಗೋ ಅದಮ್ಯ ಸುಖಕ್ಕೋಸ್ಕರವೋ ಗೊತ್ತಿಲ್ಲ … Read more

ವಿಚಿತ್ರಗಳು-ವಿಕೃತಿಗಳು: ಅಖಿಲೇಶ್ ಚಿಪ್ಪಳಿ

ಈ ಮನುಷ್ಯರಲ್ಲಿ ಜಾತಿಯನ್ನು ಯಾರು ಹುಟ್ಟು ಹಾಕಿದರೋ? ಎಲ್ಲರೂ ಉಸಿರಾಡುವುದು ಗಾಳಿಯನ್ನೇ! ತಿನ್ನುವುದು ಅನ್ನ, ಕುಡಿಯುವುದು ನೀರು. ಆದರೂ ಜಾತಿ-ತಾರತಮ್ಯ, ಮೇಲು-ಕೀಳು ಎಲ್ಲಾ ಹೊಲಸುತನದ ಪರಮಾವಧಿ. ಸರ್ಕಾರಗಳೂ ತಮ್ಮ ಲಾಭಕ್ಕೋಸ್ಕರ ಜಾತಿಯನ್ನು ಪೋಷಿಸುವ ವ್ಯವಸ್ಥಿತ ಕಾರ್ಯವನ್ನು ಮಾಡುತ್ತವೆ. ಶಾಲೆಗೆ ಸೇರಿಸುವಾಗಲೇ ಜಾತಿಯನ್ನು ನಮೂದಿಸಬೇಕು ಕಡ್ಡಾಯವಾಗಿ. ಇರಲಿ, ಮನುಷ್ಯ ಸಮಾಜದ ವಿಕೃತಿಗಳು ಕಾಲಕ್ರಮೇಣದಲ್ಲಿ ಸುಧಾರಿಸಬಹುದು ಎಂಬ ಆಶಾವಾದವನ್ನು ಇಟ್ಟುಕೊಳ್ಳೋಣ. ಪ್ರಾಣಿ-ಪಕ್ಷಿ ಪ್ರಪಂಚದಲ್ಲೂ ಕೋಟಿಗಟ್ಟಲೆ ಪ್ರಭೇದಗಳಿವೆ. ಹಲವು ಪ್ರಭೇದಗಳು ಪರಿಸರಕ್ಕೆ, ಸಮಾಜಕ್ಕೆ ಉಪಕಾರವನ್ನು ಮಾಡಿದರೆ, ಕೆಲವು ಪ್ರಭೇದಗಳು ಹಾನಿಯನ್ನುಂಟು ಮಾಡುತ್ತವೆ. … Read more

ಕ್ಲಬ್: ಎಚ್.ಕೆ.ಶರತ್

ಅದೊಂದು ಸಾದಸೀದಾ ಬಿಲ್ಡಿಂಗು. ಹಗಲಲ್ಲಿ ಹಾಗೆ ಸುಮ್ಮನಿರುತ್ತೆ. ಬೆಳಕು ತೆರೆಮರೆಗೆ ಸರಿದು ಕತ್ತಲ ಕಾರುಬಾರು ಶುರುವಾದರೆ, ಅದು ವಿಶಿಷ್ಟ ಬಣ್ಣ ಬಳಿದುಕೊಂಡು ಬಿಡುತ್ತೆ. ಆ ಬಣ್ಣ ಹಗಲಿಗೆ ಅಪರಿಚಿತ. ಆ ಬಿಲ್ಡಿಂಗಿನ ಕಾಂಪೌಂಡಿನೊಳಕ್ಕೆ ಕತ್ತಲು ಕವಿದಂತೆಲ್ಲಾ ವಾಹನಗಳು ಬಂದು ನಿಲ್ಲುತ್ತವೆ. ವಯಸ್ಸಾದರೂ ಮನೆಯಲ್ಲಿ ಮುದುರಿಕೊಂಡು ಕೂರಲು ಬಯಸದ ಅಥವಾ ಹಾಗೆ ತೆಪ್ಪಗಿರುವುದು ತಮ್ಮ ಜಾಯಮಾನಕ್ಕೆ ಒಗ್ಗುವುದಿಲ್ಲ ಎಂದು ತೀರ್ಮಾನಿಸಿದ ವಯೋವೃದ್ಧರು ವಾಹನಗಳ ಮೇಲೇರಿ ಅಲ್ಲಿಗೆ ಬರುತ್ತಾರೆ. ತುಂಬಾ ಗೌರವಾನ್ವಿತರಂತೆ ಕಾಣುವ ದಿರಿಸು ತೊಟ್ಟುಕೊಂಡು ಬಂದಿರುವ ಅವರು, ಹೊರಜಗತ್ತಿಗೆ … Read more

ಸಾಮಾನ್ಯ ಜ್ಞಾನ (ವಾರ 27): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು? ೨.    ನವದೆಹಲಿಯಲ್ಲಿ ನಡೆದ ಐವತ್ತೆನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು? ೩.    ೧೯೭೧ರಲ್ಲಿ ರಾಜಸ್ಥಾನ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು? ೪.    ಖ್ಯಾತ ಸಂಗೀತ ವಿದ್ವಾನ್ ಡಾ|| ಬಾಲ ಮುರಳಿ ಕೃಷ್ಣ ಅವರು ಮೊದಲ ಬಾರಿಗೆ ಕರ್ನಾಟಕದಲ್ಲಿ ಸಂಗೀತ ಕಛೇರಿ ನೀಡಿದ್ದು ಎಲ್ಲಿ? ೫.    ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು? ೬.    ಭಾರತದಲ್ಲಿಯೇ ಮೊದಲ ಬಾರಿಗೆ … Read more

ಫೋಟೋಗ್ರಾಫಿ: ಸೀಮಾ ಶಾಸ್ತ್ರಿ

                      ಸೀಮಾ ಶಾಸ್ತ್ರಿಯವರು ಉತ್ತರ ಕನ್ನಡ ಜಿಲ್ಲೆಯ ಸಿರಸಿಯವರು. ಸದ್ಯಕ್ಕೆ ಆಂಧ್ರಪ್ರದೇಶದ ಮದನಪಲ್ಲಿಯ ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯುರಿಟಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೋಟೋಗ್ರಾಫಿ ಇವರ ನೆಚ್ಚಿನ ಹವ್ಯಾಸ…   

ಖಾಜಾ ಪಾಷಾನ ನಸೀಬು ಮತ್ತು ಗುಡ್ಡದ ಮೇಲಿನ ಗೆಸ್ಟ್ ಹೌಸ್: ಅಮರ್ ದೀಪ್ ಪಿ.ಎಸ್.

ಅಂಗೈ ನೋಡಿಕೊಂಡೆ.  ವಾಹ್ ಮೇರೆ ನಸೀಬ್?  ಇದೇ ಡಿಶ್ ಕೇಬಲ್ ನನ್ನ ಜೀವನದ ಹೈಸಿಯತ್  ಬದಲಾಯಿಸಿಬಿಡುತ್ತಾ ? ಈಗ ನನ್ನ ಕೈಯಲ್ಲಿ ಹರಿದಾಡುತ್ತಿರುವ ದುಡ್ಡು ನೋಡಿದರೆ ಹಾಗೆ ಅನ್ನಿಸುತ್ತೆ. ಮುಂದೆ ಗೊತ್ತಿಲ್ಲ.  ಆದರೆ ಇದೇ ಸ್ಪೀಡಲ್ಲಿ ನಾನೇನಾದರೂ ದುಡ್ಡು ಮಾಡಿದರೆ ಒಂದಿನ ನಾನು ನನ್ನ ಸ್ವಂತಕ್ಕೆ ಮಕಾನ್ ಮಾಡ್ಕೊಬೋದು, ಮತ್ತು  ಜೀರ್ಣವಾಗಿಸಿ ಹೂ….. ಮತ್ತೇನಿದೆ ನಿನ್ನ ತಾಕತ್ತಿಗೆ ನನ್ನ ಚೀಲ ತುಂಬಿಸಲು ಎನ್ನುವಂತೆ ಸವುಂಡೆ ಮಾಡದೇ ಸಂಕಟ ನೀಡುವ ಪೇಟ್ ಕಾ ಸವಾಲ್ ಹಮೇಶಾ  ಇದ್ದೇ ಇರುತ್ತೆ.  … Read more

ಹೀಗೊಂದು ಗೆಳೆಯರ ಬಳಗ!: ಗುರುಪ್ರಸಾದ ಕುರ್ತಕೋಟಿ

ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!  "ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… … Read more

ಆ ಅವಳು..: ಸುಧಾ ಚಿದಾನಂದಗೌಡ

“ಇಲ್ರೀ, ಇದೊಂದ್ ವಿಷ್ಯದಾಗ ತಲಿ ಹಾಕಬ್ಯಾಡ್ರೀ..” “ಸರಿಯವ್ವಾ, ನಿನ್ನ ಬಂಧುಬಳಗ, ಕುಲಸ್ಥರು, ದೈವಸ್ಥರು ಹೇಳಿದ್ದಕ್ಕೇ ನೀ ಒಪ್ಪಿಲ್ಲ. ಇನ್ನು ನನ್ನ ಮಾತಿಗೆ ಒಪ್ಪಿಕ್ಯಂತೀ ಅಂತ ನಾ ಏನೂ ಅನ್ಕಂಡಿಲ್ಲ. ಆದ್ರ ದುರ್ಗಾಶಕ್ತಿ ಅಂತ ಒಬ್ಬಾಕಿ ಅದಾಳ ನೋಡು, ಆಕೀದು ಅಭಿಪ್ರಾಯ ಕೇಳಬೇಕಲ್ಲಾ..” “ಅಂದ್ರ, ದುರುಗಮ್ಮನ ಗುಡೀಮುಂದ, ಪೂಜಾರಪ್ಪನೆದುರಿಗೆ ಹಾರ ಹಿಡ್ಕೊಂಡು ನಿಂದ್ರು ಅಂತ ಹೇಳಾಕ್ಹತ್ತೀರಿ ಹೌದಿಲ್ಲೋ..? ಆತು ಬಿಡ್ರೀ..ನಂಗೇನ್ ಅಭ್ಯಂತರ ಇಲ್ಲ. ನೋಡು ಪೂಜಾರಣ್ಣ, ಇದಾ ಮಂಗಳವಾರ ಹೂವಿನಹಾರ ತಗೊಂಡು ಗುಡಿ ಮುಂದ ಶರಣಾಗ್ತೀನಿ. ಅದೇನ್ ಮಾತು … Read more

ಗುಡುಗುಮ್ಮ ಬಂದಾ: ಅಖಿಲೇಶ್ ಚಿಪ್ಪಳಿ

ಗುಡುಗುಮ್ಮ ಬಂದ ಹೆಡಿಗೆ ತಂದಾ ಅಕ್ಕಿ ಬ್ಯಾಡಂತೆ ಭತ್ತ ಬ್ಯಾಡಂತೆ ನೀನೇ ಬೇಕಂತೆ!!! ಇಂತದೊಂದು ದಾಟಿಯನ್ನು ಹೇಳಿ ಅಳುವ ಮಕ್ಕಳನ್ನು ಸಂತೈಸುವ ಪ್ರಯತ್ನವನ್ನು ಮಲೆನಾಡಿನ ಹಳ್ಳಿಗಾಡುಗಳಲ್ಲಿ ಕಾಣಬಹುದಿತ್ತು. ನಮಗೂ ಈ ಹಾಡನ್ನು ಹೇಳಿ ಹೆದರಿಸಿ ಸಂತೈಸುತ್ತಿದ್ದದು ನೆನಪು. ಬೇಸಿಗೆ ಬೇಗೆಯಲ್ಲಿ ಬೇಯುತ್ತಾ ಸೂರ್ಯನಿಗೆ ಶಾಪ ಹಾಕುತ್ತಾ, ತಣ್ಣನೆಯ ಪಾನೀಯಗಳನ್ನು ಹೀರುತ್ತಾ, ಮೈಯೆಲ್ಲಾ ಬೆವರು, ನೀರಿದ್ದವರು ಎರೆಡೆರೆಡು ಸ್ನಾನ ಮಾಡುತ್ತಾ, ಮತ್ತೆ ಬೆವರುವ ಪರಿ, ಮಳೆಯಾದರೂ ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸುವ ಕೋಟ್ಯಾಂತರ ಮನಸ್ಸುಗಳ ಆರ್ತ ಕೇಳಿ ಮೇಲೇರಿದ … Read more

ಕಾತರಿಸುವ ನಿರೀಕ್ಷೆಗಳಲಿ ಬದುಕಿನ ಮೆಟ್ಟಿಲು: ಪದ್ಮಾ ಭಟ್.

       ಎಸ್.ಎಸ್.ಎಲ್.ಸಿ, ಹಾಗೂ ಪಿ.ಯೂಸಿ ಪರೀಕ್ಷೆಗಳೆಲ್ಲಾ ಮುಗಿದು, ಸಿ.ಇ.ಟಿ ಯೂ ಮುಗಿಯಿತು.. ರಜೆಯೆಲ್ಲಾ ಅರ್ಧ ಖಾಲಿಯಾಗುತ್ತಾ ಬಂತು. ಕಾತರಿಯಿಂದ ಕಾಯುತ್ತಿದ್ದ ಮನಸುಗಳಿಗೆ ಇನ್ನೇನು ರಿಸಲ್ಟಿನ ಭಯ. ಒಂದು ಕಡೆ ತಾನೇ ಇಡೀ ಶಾಲೆಗೆ, ಕಾಲೇಜಿಗೆ ಮೊದಲ ರ್‍ಯಾಂಕ್ ಬಂದೇ ಬರುತ್ತೇನೆಂಬ ಭರವಸೆಯ ಮನಸ್ಸುಗಳಿದ್ದರೆ, ಇನ್ನೊಂದು ಕಡೆ ಅಯ್ಯೋ ದೇವರೆ ಇದೊಂದು ಸಲ ಪಾಸ್ ಮಾಡಪ್ಪ ಎಂದು ಬೇಡಿಕೊಳ್ಳುವ ಮನಸುಗಳು.. ಬದುಕಿನ ಒಂದೊಂದು ಮೆಟ್ಟಿಲುಗಳನ್ನೇ ಹತ್ತುತ್ತಾ ಹತ್ತುತ್ತಾ ಗುರಿಮುಟ್ಟುವ ತವಕದಲ್ಲಿ ಯುವಜನತೆಯು ದಾರಿಯನ್ನು ಹುಡುಕುತ್ತಿದೆ.. ಆಯ್ಕೆ … Read more

ಮೂರು ಕವಿತೆಗಳು: ಶಿವಕುಮಾರ ಸಿ., ಕುಸುಮ ಆಯರಹಳ್ಳಿ, ನೇಮಿನಾಥ ತಪಕೀರೆ

ನಾ ಕಟ್ಟುವದಿಲ್ಲ ನಾ ಕಟ್ಟುವದಿಲ್ಲ….. ತಾಜ್ ಮಹಲ ನಿನ್ನ ಜಾತ್ರೆಯಲ್ಲಿ ತೂಗುವ ತೊಟ್ಟಿಲು ಹರಿದಾಡುವ ಬೊ೦ಬೆ  ಸದ್ದು, ಸಿಳ್ಳೆಗಳೆಲ್ಲಾ ನಾನಾಗಿದ್ದರೂ.. ಬದುಕ ಕಚ್ಚೆ ಸಿಗದ ತಿರುಕ ನಾ ಕಟ್ಟುವದಿಲ್ಲ….. ಚಾರ್ ಮಿನಾರ್ ಮನಕೆ ಕ೦ಬದ ಕೊರತೆ ಕೆಸರು ಹಾದಿ ಕಲ್ಲು ಮುಳ್ಳು ಬೆಚ್ಚಿ ಬಿದ್ದಾಗಲೊಮ್ಮೆ ಪ್ರೇರಣೆಯ ಹಣತೆ ನೀನು ದಾರಿಹೋಕ ನಾನು ನಾ ಕಟ್ಟುವದಿಲ್ಲ ಕವಿತೆ ಕೊಸರಾಡುವ ಕಲ್ಪನೆ ಹೆಸರಿಗೂ ಸಿಗದ ನಗು ಉಸಿರಾಟಕ್ಕು ಬಿಗಿದ ನೋವು ಕಟ್ಟಿದ್ದೇನೆ…… ಅಲ್ಲೊ೦ದು ಗೂಡ ನಿನ್ನ ಹೆಸರಿಗೊ೦ದು ನಗು ಕೊಸರಿಗೊ೦ದು … Read more

ವಾರದ ಸಿನಿಮಾ ಟೂ ಸ್ಟೇಟ್ಸ್: ಪ್ರಶಸ್ತಿ ಪಿ.

ಕಾದಂಬರಿಯಾಧಾರಿತ ಚಿತ್ರಗಳೆಂದ್ರೆ ಅವೆಲ್ಲಾ ಕಲಾತ್ಮಕ ಚಿತ್ರಗಳು. ನಿರ್ಮಾಪಕನ ರೊಕ್ಕ ಖಾಲಿ ಮಾಡಿ ನಿರ್ದೇಶಕನಿಗೊಂದು ಅವಾರ್ಡ್ ತರಬಹುದೇ ಹೊರತು ಪ್ರೇಕ್ಷಕರ ಮನಗೆಲ್ಲೋ ಮಾತಿಲ್ಲ ಅನ್ನೋದು ಸಾಮಾನ್ಯ ಜನರ ಮಾತು. ಕನ್ನಡದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ಹಿಂದಿಯಲ್ಲಿ ಪಹೇಲಿಯಂತಹ ಸಿನಿಮಾಗಳು ಸೋತಿದ್ರೂ ಆಗೋಂದೀಗೊಂದು ಕಾದಂಬರಿಯಾಧಾರಿತ ಚಿತ್ರಗಳು ಸಖತ್ ಹಿಟ್ಟಾಗುತ್ತವೆ. ಆ ಸಾಲಲ್ಲಿ ಇಂಗ್ಲೀಷಿನಲ್ಲಿ ನೆನಪಾಗೋದು ಡಾನ್ ಬ್ರೌನಿನ ಐದು ಕಾದಂಬರಿಯಾಧಾರಿತ ಸಿನಿಮಾಗಳು. ಹಿಂದಿಯಲ್ಲಿ ಚೇತನ್ ಭಗತ್. ಅಮೀರ್ ಖಾನಿನ ತ್ರೀ ಈಡಿಯಟ್ಸೆಂಬ ಸಿನಿಮಾ ಬಂದಾಗ ಆ ಸಿನಿಮಾ ಚೇತನ್ ಭಗತ್ತಿನ … Read more

ಸಾಮಾನ್ಯ ಜ್ಞಾನ (ವಾರ 26): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:- ೧.    ಜವಹರ್‌ಲಾಲ್ ನೆಹರು ಅವರು ರಾಜಸ್ಥಾನದ ನಾಗೂರ್‌ನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು? ೨.    ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು? ೩.    ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು? ೪.    ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು? ೫.    ರಾಜ್ಯ ವಿಧಾನ ಸಭೆಯಲ್ಲಿ ೧೯೮೦-೮೧ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು? ೬.    ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಎರಡನೇಯ ರಾಜ್ಯ … Read more

ತರಾವರೀ ತರ್ಕ ಮತ್ತು ಹಾಸ್ಯ (ಕೊನೆಯ ಭಾಗ): ಎಂ.ಎಸ್.ನಾರಾಯಣ.

ಇಲ್ಲಿಯವರೆಗೆ ಚಕ್ರ ತರ್ಕದ ಉದಾಹರಣೆಗಳು ನಿಜಕ್ಕೂ ಬಹಳ ಸ್ವಾರಸ್ಯಕರವಾಗಿರುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ. ೧. ನನ್ನ ಮನೆಯಲ್ಲಿ ನಾನೇ ಯಜಮಾನ, ಹಾಗೆ ಹೇಳಲು ನನಗೆ ನನ್ನ ಹೆಂಡತಿಯ ಅನುಮತಿಯಿದೆ. ೨. ಬೈಬಲ್ಲಿನಲ್ಲಿರುವುದೆಲ್ಲಾ ಸತ್ಯ. ಹಾಗಂತ ಬೈಬಲ್ಲಿನಲ್ಲೇ ಹೇಳಿದೆ.                   ೩. ಈ ಮುಂದಿನ ಹೇಳಿಕೆ ಸುಳ್ಳು. ಹಿಂದಿನ ಹೇಳಿಕೆ ನಿಜ. ೪. ಸಿಗರೇಟು ಬಿಡುವುದು ಬಲು ಸುಲಭ, ನಾನು ಹಲವಾರು ಬಾರಿ ಬಿಟ್ಟಿದ್ದೇನೆ.  ೫. ವೆಂಕನಿಗೆ … Read more

ಗಯೆಯೊ-ಮಾಯೆಯೊ: ಸುಮನ್ ದೇಸಾಯಿ

ಮೊನ್ನೆ ಕಾಶಿಯಾತ್ರೆಗೆ ಹೋದಾಗ, ಪಿತೃಕಾರ್ಯ ಮಾಡಿಸಲಿಕ್ಕಂತ ’ಗಯಾ’ ಕ್ಷೇತ್ರಕ್ಕ ಹೋದ್ವಿ. ಅಲ್ಲೆ ದೂರ ದೂರದಿಂದ ಬಂದ ಜನರನ್ನ ನೋಡಿ ಆಶ್ಚರ್ಯ ಆಗಿತ್ತು. ’ಗಯಾ ತೀರ್ಥ’ ಅಂತ ಕರೆಸಿಕೊಳ್ಳೊ ಈ ಕ್ಷೇತ್ರದೊಳಗ ಪಿತೃಗಳನ್ನುದ್ದೇಶಿಸಿ ಶ್ರಾದ್ಧ ದಾನಾದಿಗಳನ್ನ ಮಾಡೊದರಿಂದ ಪಿತೃದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತಿ ಆಗ್ತದ, ಮತ್ತ ಅವರು ಸಂತುಷ್ಟರಾಗಿ ಆಯುರಾರೋಗ್ಯ, ಐಶ್ವರ್ಯಾದಿಗಳನ್ನ ಕೊಡ್ತಾರಂತ ಪ್ರತೀತಿ ಅದ.        ಉರಿಯೊ ಬಿಸಿಲೊಳಗ, ’ಗಯೆಯ’ ಆ ಮಹಾಸ್ಮಶಾನದೊಳಗ ಸುತ್ತಲು ಸುಡುವ ಚಿತೆಗಳ ನಡುವ ಕಾಲುರಿ ಸಹಿಸಿಕೊಳ್ತಾ, ಶ್ರಾದ್ಧಾದಿಕರ್ಮಗಳನ್ನ ಮಾಡಲಿಕ್ಕಂತ … Read more

ಈ ಪ್ರೀತಿಯ ಬಗ್ಗೆ ಒಂದಿಷ್ಟು,,,,,,,,!: ಶಿದ್ರಾಮ ತಳವಾರ

ಈ ಪ್ರೀತಿ ಅನ್ನೋದೆ ಹೀಗೆ ರಾಮಾಯಣದಲ್ಲಿ ಸೀತೆಗೆ ಮಾಯಾ ಜಿಂಕೆಯಾಗಿ ತತ್ ಕ್ಷಣದಲಿ ಸೀತೆ ಅದರಂದಕೆ ಸೋತು ಅದನ್ನು ಪಡೆದೇ ತೀರಬೇಕೆಂಬ ಹುಚ್ಚು ಆಸೆ ಹುಟ್ಟಿದ್ದರಿಂದ ದೊಡ್ಡ ರಾಮಾಯಣವೇ ನಡೆದು ಹೋಯಿತು ಎನ್ನಬಹುದು.  ಇಲ್ಲಿ ಮಾಯಾ ಜಿಂಕೆಯ ವಿಷಯ ಯಾಕೆ ಬಂತು ಅಂದರೆ ಈ ಪ್ರೀತಿಯೂ ಒಂದು ಮಾಯೆ ಇದ್ದಂತೆ. ಯಾವ ಸಂದರ್ಭದಲ್ಲಿ ಯಾರ ಜೊತೆ ಈ ಪ್ರೀತಿ ಅಂಕುರಿಸುವುದೋ ಹೇಳಲಾಗುವುದಿಲ್ಲ. ಸಹಜವಾಗಿ ಪ್ರೀತಿ ಹೆಣ್ಣು ಮತ್ತು ಗಂಡು ಈ ಎರಡು ಜೀವಗಳಲ್ಲಿ ಅಂಕುರಿಸುವುದು ಸಾಮಾನ್ಯ. ಮೊದ … Read more