ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-4: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ … Read more

ಹೀಗೊಂದು ಶುಭಾಷಯ: ಚೈತ್ರಾ ಎಸ್.ಪಿ.

ನಿಜ, ನೀನಂದ್ರೆ ನನಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಯಾವಾಗ್ಲೂ ಮನೆಗೆ ಬಂದಾಗ ನನ್ನನ್ನ ಅಳಿಸ್ತಾ ಇದ್ದೆ ನೀನು. ನನ್ನ ಉದ್ದವಾದ ಜೆಡೆಯನ್ನ ಹಿಡಿದು ಕುದುರೆ ಓಡಿಸ್ತಾ ಇದ್ದೆ. ಗುಂಡಗಿನ ಕೆನ್ನೆನ ನೋವು ಬರೋ ಹಾಗೆ ಹಿಂಡ್ತಾ ಇದ್ದೆ. ಕಣ್ಣಲ್ಲಿ ನೀರಿಳಿಸೋ ಹಾಗೆ ಕಾಡಿಸ್ತಾ ಇದ್ದೆ. ಮನೆಯೆಲ್ಲಾ ಕೇಳಿಸೋ ಹಾಗೆ ಕಿರಿಚಾಡಿಸ್ತಾ ಇದ್ದೆ. ನೆನಪಿದ್ಯಾ ನಿಂಗೆ ? ನಿನ್ನ ಹೊಡಿಯೋಕೆ ಅಂತ ಸೌದೆಯನ್ನ ಕೈಯಲ್ಲಿ ಹಿಡಿದು ಮನೆಯೆಲ್ಲಾ ಓಡಾಡಿಸಿದ್ದೆ, ನನ್ನ ಕೈಗೆ ಆಗಲೂ ಸಿಗಲಿಲ್ಲ ನೀನು ಹಾಗೇ ಈಗಲೂ…… … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವ್ಯಾಧಿಗ್ರಸ್ತ ರಾಜನ ಕತೆ ರಾಜನೊಬ್ಬ ಭೀಕರ ಕಾಯಿಲೆಯಿಂದ ನರಳುತ್ತಿದ್ದ. ನಿರ್ದಿಷ್ಟ ಲಕಷ್ಣಗಳುಳ್ಳ ವ್ಯಕ್ತಿಯೊಬ್ಬನ ಪಿತ್ತಕೋಶವನ್ನು ಬಿಟ್ಟರೆ ರಾಜ ಅನುಭವಿಸುತ್ತಿದ್ದ ನೋವಿಗೆ ಪರಿಹಾರವೇ ಇಲ್ಲವೆಂಬುದಾಗಿ ವೈದ್ಯರ ತಂಡವೊಂದು ತೀರ್ಮಾನಿಸಿತು. ಅಂಥ ವ್ಯಕ್ತಿಯನ್ನು ಹುಡುಕುವಂತೆ ರಾಜ ತನ್ನ ಸೇವಕರಿಗೆ ಆಜ್ಞಾಪಿಸಿದ. ಪಕ್ಕದ ಹಳ್ಳಿಯಲ್ಲಿಯೇ ಅಗತ್ಯವಾದ ಎಲ್ಲ ಲಕ್ಷಣಗಳೂ ಇದ್ದ ಆದಿಲ್‌ ಎಂಬ ಹುಡುಗನನ್ನು ಅವರು ಪತ್ತೆಹಚ್ಚಿದರು. ರಾಜನು ಅವನ ತಂದೆತಾಯಿಯರನ್ನು ಬರಹೇಳಿ ಅವರನ್ನು ಸಂತೋಷಪಡಿಸಬಲ್ಲ ಅನೇಕ ಉಡುಗೊರೆಗಳನ್ನು ನೀಡಿದ. ಬಲು ಉನ್ನತ ಶ್ರೇಣಿಯ ನ್ಯಾಯಾಧೀಶನೊಬ್ಬ ರಾಜನ ಪ್ರಾಣ ಉಳಿಸಲೋಸುಗ … Read more

ನಾನು, ಅವ್ವ ಮತ್ತು ಸೀರೆ: ಸಾವಿತ್ರಿ ವಿ. ಹಟ್ಟಿ

ಓಂ ಶ್ರೀ ಗಣೇಶಾಯ ನಮಃ ಅವ್ವನ ಹೊಟ್ಯಾಗ ನಾನು ಮೂಡು ಮೂಡುತ್ತಿದ್ದಂತೆನೇ ಆಕೀ ಕಳ್ಳಿಗೂ ನನಗೂ ಎಂಥಾ ಬಿಡಿಸಲಾರದಂಥಾ ಸಂಬಂಧ ಬೆಳೀತು ನೋಡ್ರಿ! ಅದರಂಗ ಅವ್ವನ ಸೀರಿಗೂ ನನಗೂ ಅವತ್ತಿಂದಾನಾ ಬಿಡಿಸಲಾಗದ ಬಂಧ ಬೆಳ್ಕೊಂತ ಬಂತು…  ಅವ್ವ ನನಗ ಎಂಥಾ ಲಂಗಾ ಪೋಲಕಾ ಹೊಲಿಸಿದ್ರೂನು ಹಟ ಮಾಡದಾ ಒಮ್ಮೆಯಾದ್ರೂ ಉಟ್ಟಾಕಿನಾ ಅಲ್ಲ ನಾನು. ಅದು ಯಾಕೇನಾ ನನಗೂ ಗೊತ್ತಿಲ್ಲ. ಆಕಿ ತಂದಿದ್ದ ಹೊಸ ದಿರಿಸು ಮನಸ್ಸಿನ್ಯಾಗ ಭಾಳ ಅಂದ್ರ ಭಾಳ ಭೇಷಿ ಅನ್ಸಿರುತ್ತ. ಆದ್ರೂ ಒಂಚೂರು ರಗಳಿ … Read more

ಮದುವೆಗೆ ಬರತೆನಲೇ ತಮ್ಮಾ….: ಗುಂಡುರಾವ್ ದೇಸಾಯಿ

  `ಮದುವಿಗೆ ಬರತೆನಲೇ ತಮ್ಮಾ'ಅಂದ್ರ ಸಾಕು ಚಡ್ಡಿಯನ್ನ ತೊಯ್ಸಿಕೊಳ್ಳುವಂತಹ ದಿನಗಳು ನನ್ನ ಪಾಲಿಗೆ ಎದುರಾಗಿದ್ದವು. ಒಮ್ಮೆ ಸಿನ್ನೂರಿಗೆ ನೆಂಟರ ಮದುವಿಗೆ ಅಂತ ಹೋದಾಗ ಕಿತ್ತಲಿ ತುಂಬ ಇಟ್ಟಿದ್ದ ಚಹಾ ರುಚಿಯಾಗಿತ್ತು,ಅಲ್ಲದೆ ಅಂತಹ ಚಹವನ್ನ ಎಂದೂ ಕುಡಿದಿಲ್ಲವಾದರಿಂದ,ಆಸೆ ಎಂಬುದು ಕೆಟ್ಟ ಖೋಡಿ ನೋಡಿ, ಬರೊಬ್ಬರಿ ಒಂದೊಂದ ಗ್ಲಾಸಿನಂಗ  ತಂಬಿಗಿಕಿನ ಜಾಸ್ತಿ  ಕುಡಿದೆ ಅನಸ್ತೆ, ಮನೆಯಲ್ಲಿ ಇಷ್ಟು ಸಿಗಲ್ಲಂತ,ಆಗೆನು ಆಗಲಿಲ್ಲವಾದರೂ ರಾತ್ರಿ ಸವ ಹೊತ್ತಿನಲ್ಲಿ ಹೊಟ್ಟಿಯಲ್ಲಿ ನಾನಾ ನಮುನಿ ಚಡಪಡಿಕೆ ಆರಂಭ ಆತು. ಅವ್ವನ್ನ ಎಬ್ಬಿಸಿ ಹೊರ ಬಂದ್ರೆ ತಿಪ್ಪೆ … Read more

ಕದಡಿಹೋದ ಮನವ ಹಿಡಿದು: ಲಹರಿ

ಸಂದು ಹೋದವಲ್ಲೇ ಗೆಳತೀ.. ಬದುಕಲ್ಲಿಷ್ಟು ದಿನಗಳು! ಸದ್ದು-ಗದ್ದಲವ ಮಾಡದಂತೆ.. 'ನೀ ಮಾತು ಮರೆತು ಮೌನಕ್ಕೆ ಜಾರಿದಾಗೆಲ್ಲಾ ಹುಡುಕಲು ಹೊರಡುತ್ತೇನೆ ನಾ ನಿನ್ನೊಳಗಿನ ಆ ನನ್ನ ವ್ಯಕ್ತಿತ್ವದ ಛಾಯೆಯನ್ನು' ಎಂದು ಬರೆದಿದ್ದೆ ನಾ ಅಂದು, ನಕ್ಕು ಸುಮ್ಮನಾಗಿದ್ದೆ ನೀ! ನನ್ನ ಈ ವ್ಯಕ್ತಿತ್ವ ನಿನ್ನೊಳಗೆ ಇಳಿದಿದ್ದೇ ಸುಳ್ಳಾ ಎಂದೆನಿಸಲಾರಂಭಿಸಿದೆ ಇಂದು. ತಿಂಗಳಾಯ್ತಲ್ಲೆ ಹುಡುಗಿ ನಾವಿಬ್ಬರೂ ಮಾತು ಮರೆತು , ನಮ್ಮಿಬ್ಬರ ಮನಸು ಮುರಿದು.. 'ದೃಷ್ಟಿಯಾಗತ್ತೆ ಕಣೇ ನಿಮ್ಮಿಬ್ಬರ ಗೆಳೆತನಕ್ಕೆ' ಎನ್ನುತ್ತಿದ್ದ ಗೆಳತಿಯೂ ನೀವ್ಯಾಕೆ ದೂರ ಸರಿಯುತ್ತಿದ್ದೀರ ಎಂದು ಬಿಕ್ಕಲಾರಂಭಿಸಿದ್ದಾಳೆ … Read more

ಎಪ್ಪತ್ತೇಳು ಮಲೆಯ ಸುಂದರ ಪ್ರವಾಸಿ ತಾಣ ಮಲೆಯ ಮಹದೇಶ್ವರ ಬೆಟ್ಟ: ವಸಂತ ಬಿ ಈಶ್ವರಗೆರೆ

ಅಮೂಲ್ಯ ಸಸ್ಯರಾಶಿ, ಜೀವರಾಶಿಗಳಿಂದ ತುಂಬಿದಂತ ಪ್ರದೇಶ, ಬಿಸಿಲಿನ ಕಿರಣಗಳು ಭುವಿಗೆ ಸೋಂಕದಂತಿರುವ ದಟ್ಟ ಕಾನನ, ಒಂದಾನೊಂದು ಕಾಲದಲ್ಲಿ ಕುಖ್ಯಾತ ನರಹಂತಕ ಕಾಡುಗಳ್ಳ ವೀರಪ್ಪನ್ ಆಶ್ರಯ ತಾಣವೂ ಆಗಿದ್ದ ಪ್ರವಾಸಿ ತಾಣವೇ, ಮಲೆಯ ಮಹದೇಶ್ವರ ಬೆಟ್ಟ. ಒಂದು ಕಾಲದಲ್ಲಿ ವೀರಪ್ಪನ್ ಅಡಗುತಾಣವಾಗಿದ್ದಾಗ, ಮಲೆಯಮಹದೇಶ್ವರ ಬೆಟ್ಟಕ್ಕೆ ಬರೋದಕ್ಕೆ ಜನರು ಭಯ ಪಡುತ್ತಿದ್ದರು. ಸಂಜೆ 6 ಗಂಟೆಯ ನಂತ್ರ ಕೊಳ್ಳೆಗಾಲದಿಂದ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗವ ಮಾರ್ಗವನ್ನ ಮುಚ್ಚಲಾಗುತ್ತಿತ್ತು. ಆದರೇ ಆ ಕಾಲ ಹಿಂದೆ ಸರಿಸು, ನರಹಂತಕ ವೀರಪ್ಪನ್ ಇತಿಹಾಸದ ಪುಟಗಳಲ್ಲಿ … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ಪ್ರವೀಣ ಕಾಗಾಲ, ಅಭಿಸಾರಿಕೆ

ನಾನೊಬ್ಬ ಮನುಷ್ಯ ಜಾತಿಯೆಂಬ ಅಡ್ಡಗೋಡೆ ಕಟ್ಟಿ ನನ್ನೆದೆಯೊಳಗಿನ ಜೇನಗೂಡಿಗೆ ಬೆಂಕಿ ಸೂಡಿದ ಬಿರುಸಿಗೆ ಕನಸಿನ ಹಕ್ಕಿ ಸತ್ತೇ ಹೋಯಿತು ನನ್ನದೆನ್ನುವ ಸ್ವಾರ್ಥಕೆ ರೆಕ್ಕೆ ಬಂದು ಪುರ್ರೆಂದು ಹಾರಿತು. ಆದರೂ ಕಾದೆ ತಡೆಯಲಾರದೆ ಸುಮಾರು ದಿನ. ಮತ್ತೆ ಎದೆಯ ಗೂಡೊಳಗೆ ಜೇನಗೂಡ ಕಟ್ಟುತ ನೀನೆ ಬಿಟ್ಟೋಗಿದ್ದ ನೆನಪ ಕೈಲಿಡಿದು ನೋಡುತ ಅದನ್ನೆ. ಬಿರುಸ ಬೆಳದಿಂಗಳಿಗು ಹೇಳಿದೆ ಮನಸು ಕತ್ತಲಾಗಿದೆ ಕೆತ್ತಬೇಕು ಬೆಳದಿಂಗಳ ತುಣಿಕಿನಿಂದ ಒಂದು ಹಣತೆ. ಕೊಡುವುದಾದರೆ ಸಾಲ ಕೊಡು ಬರುವ ಪ್ರೀತಿಯ ಕಣ್ಣಿಗೆ ಕತ್ತಲಾಗುವುದು ಬೇಡ ನನ್ನದೆಯ … Read more

ಹಬ್ಬವೆಲ್ಲಿದೆ?: ಪ್ರಶಸ್ತಿ

ಮೊನ್ನೆ ವಾಟ್ಸಾಪು, ಫೇಸ್ಬುಕ್ಕುಗಳಲ್ಲಿ ನಾಗರಪಂಚಮಿ ಶುಭಾಶಯಗಳು ಅಂತ ನೋಡಿದ್ಮೇಲೇ ಇವತ್ತು ನಾಗರಪಂಚಮಿ ಅಂತ ನೆನಪಾಗಿದ್ದು. ಊರಲ್ಲಿದ್ದಾಗ ನಾಗರಪಂಚಮಿಯೆಂದ್ರೆ ಅದೆಷ್ಟು ಖುಷಿ. ಅಮ್ಮ ಮಾಡೋ ಮಂಡಕ್ಕಿ ಉಂಡೆಯ ರುಚಿಗಾಗಿ ಕಾಯೋದೇನು, ಪೂಜೆಗಾಗಿ ಹಿಂದಿನ ದಿನವೇ ನಾಗರಬನವನ್ನೆಲ್ಲಾ ಚೊಕ್ಕ ಮಾಡಿ, ಅದಕ್ಕೆ ಹೋಗೋ ದಾರಿಯಲ್ಲಿದ್ದ ಹುಲ್ಲನ್ನೆಲ್ಲಾ ಒಂದಿಷ್ಟು ಸವರಿ ಇಡೋ ಉಮೇದೇನು, ಶಾಲೆಗೊಂದಿನ ರಜೆಯೆಂಬ ಖುಷಿಯೇನು. ಇದರೊಂದಿಗೇ ಹಬ್ಬಗಳ ಸಾಲು ಶುರುವಾಗುತ್ತೆಂಬ ನಿರೀಕ್ಷೆಯೇನು. ಆಹಾ. ಒಂದು ಕಿರುಬೆರಳ ಉಗುರಿಗಾದ್ರೂ ಮದರಂಗಿ ಹಚ್ಚಿಕೊಳ್ಳಬೇಕೆಂಬ ಅಲಿಖಿತ ನಿಯಮದಿಂದಾಗಿ ಹುಡುಗರಾದ ನಮ್ಮ ಬೆರಳುಗಳೂ ಮದರಂಗಿಯ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ (ಭಾಗ-3): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ … Read more

ಮರೆಯದ ಮಾಣಿಕ್ಯ ನನ್ನಜ್ಜ: ಸಿದ್ರಾಮ ತಳವಾರ

ನಮ್ಮದು ಉತ್ತರ ಕರ್ನಾಟಕವಾದ್ದರಿಂದ ತಂದೆಯ ತಂದೆಗೆ ನಾವು ಅಜ್ಜ ಅಂತಾ ಕರೆಯುವುದು ವಾಡಿಕೆ. ನನ್ನಜ್ಜ ಮರೆಯಾಗಿ ದಶಕಗಳು ಕಳೆಯುತ್ತ ಬಂದರೂ ನನ್ನಜ್ಜನೊಂದಿಗೆ ಕಳೆದ ಕ್ಷಣಗಳು ಮಾತ್ರ ನನ್ನಿಂದ ಮರೆಯಾಗದೇ ಮನದ ಮೂಲೆಯಲ್ಲಿ ಅಚ್ಚೊತ್ತಿದಂತೆ ಚಿರಸ್ಥಾಯಿಯಾಗಿ ಉಳಿದುಬಿಟ್ಟಿದೆ. ಊರಲ್ಲಿ ತಳವಾರಕೀ ಮಾಡುತ್ತಿದ್ದ ನನ್ನಜ್ಜ ಅತೀವ ಬಲಶಾಲಿಯಾದ್ದರಿಂದ ಊರಲ್ಲಿ ಸಲಗನೆಂದೇ (ಗಂಡಾನೆ) ಎಲ್ಲರೂ ಕರೆಯುತ್ತಿದ್ದುದು ವಾಡಿಕೆಯಾಗಿತ್ತು. (ಯಾವಾಗಲೋ ಒಂದು ಸಾರಿ ಈ ಕುರಿತು ನನ್ನಜ್ಜನನ್ನೇ ಕೇಳಿ ತಿಳಿದುಕೊಂಡಿದ್ದು) ಅನಕ್ಷರಸ್ಥನಾದ ನನ್ನಜ್ಜ ಅಕ್ಷರ ಲೋಕವೊಂದನ್ನು ಬಿಟ್ಟು ಮಿಕ್ಕೆಲ್ಲದರಲ್ಲೂ ಎತ್ತಿದ ಕೈ ಎಂದೇ … Read more

ಸ್ವಾನುಕಂಪ ಇರದಿದ್ದರಷ್ಟೇ ಸಾಕು: ಅಮರ್ ದೀಪ್ ಪಿ.ಎಸ್.

ಮನೆಯಲ್ಲಿ ಕೇಬಲ್ ಕನೆಕ್ಷನ್ ಇಲ್ಲ. ಪುಟ್ಟಿ ಇದೆ. ಅದಕ್ಕೆ ತಿಂಗಳಿಗೊಮ್ಮೆ ಹಸಿವು. ಎರಡು ತಿಂಗಳಿಂದ ಉಪವಾಸ ಹಾಕಿದ್ದೇನೆ.  ಮನೆ ಮಾಳಿಗೆಯಿಂದ ಹೊರ ಕಳಿಸಲು ಯೋಚಿಸುತ್ತಿದ್ದೇನೆ.  ದಿನ ಬೆಳಗಾದರೆ ಒಂದಲ್ಲಾ ಒಂದು ಚಾನಲ್ ತಿರುವುತ್ತಾ ಸುದ್ದಿಗಳಿಂದ ಸುದ್ದಿಗೆ ಹಾರುತ್ತಾ ಮಕ್ಕಳ ಶಾಲೆಗೆ, ನನ್ನ ಕಛೇರಿಗೆ ಸಮಯವಾಗುವ ಹತ್ತಿರಕ್ಕೆ ದಿಗಿದಿಗಿ ಟೀವಿ ಬಿಟ್ಟು ಏಳುವುದು, ಸ್ನಾನ, ತಿಂಡಿಯಾಗಿ, ಬೈಕ್ ಕೀ, ಚಾಳೀಸು ಎತ್ತಿಕೊಂಡು ಹೊರಟರೆ ಅವತ್ತಿನ ಮನೆಯ ಬೆಳಗಿನ ದಿನಚರಿ ಸಮಾಪ್ತಿ.  ಅದಕ್ಕೂ ಮುಂಚೆ ಐದುವರೆ ಆರಕ್ಕೆಲ್ಲಾ ಎದ್ದು, ಡಿ.ಸಿ. … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಂಗಗಳೂ ಟೊಪ್ಪಿಗಳೂ ಒಂದಾನೊಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಊರಿಂದೂರಿಗೆ ತಿರುಗುತ್ತಾ  ಟೊಪ್ಪಿಗಳನ್ನು ಮಾರುತ್ತಿದ್ದ ಔರಂಗಝೇಬ್‌ ಎಂಬ ಯುವಕನಿದ್ದ. ಬೇಸಿಗೆಯ ಒಂದು ಅಪರಾಹ್ನ ವಿಶಾಲವಾದ ಬಯಲಿನಲ್ಲಿ ಪಯಣಿಸಿ ಸುಸ್ತಾಗಿದ್ದ ಔರಂಗಝೇಬನು ಯಾವುದಾದರೂ ತಂಪಾದ ಸ್ಥಳದಲ್ಲಿ ವಿರಮಿಸಿ ಒಂದು ಕಿರುನಿದ್ದೆ ಮಾಡುವ ಆಲೋಚನೆ ಮಾಡಿದ. ಸಮೀಪದಲ್ಲಿಯೇ ಇದ್ದ ಮಾವಿನ ಮರವೊಂದರ ಬುಡದಲ್ಲಿ ತನ್ನ ಚೀಲವನ್ನಿಟ್ಟು ಮಲಗಿ ನಿದ್ದೆ ಮಾಡಿದ. ಕೆಲವೇ ಕ್ಷಣಗಳಲ್ಲಿ ಗಾಢ ನಿದ್ದೆಗೆ ಜಾರಿದ. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ನೋಡುವಾಗ ಚೀಲದಲ್ಲಿ ಇದ್ದ ಟೊಪ್ಪಿಗಳೆಲ್ಲವೂ ಮಾಯವಾಗಿದ್ದವು. “ಛೇ, … Read more

ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ

ನಮ್ಮನ್ನಗಲಿದ ತುಳು-ಕನ್ನಡಿಗರ ಹೆಮ್ಮೆಯ ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ ದುಡಿತವೇ ನನ್ನ ದೇವರು, ಲೋಕ ದೇವಕುಲ ಬೆವರೆ ಹೂ ಹಣ್ಣು ಕಾಯ್, ಕಣ್ಣೀರ ತೀರ್ಥಂ ಎಮ್ಮೊಂದಿಗರ ಬಾಳ ಸಾವು ನೋವಿನ ಗೋಳ ಉಂದಿಹೆನು ಸಮಪಾಲ-ನನಗದುವೆ ಮೋಕ್ಷಂ ದುಡಿತಕ್ಕೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ ಕಾಯಕವೇ ಕೈಲಾಸಂ ಎಂ¨ ಬಸವಣ್ಣನವರ ಸತ್ಪಥದಲ್ಲಿ ಸಾಗಿ ಅದರಂತೆ ಬಾಳಿದವರು ಹಿರಿಯ ಧೀಮಂತ ಚೇತನ, ಕನ್ನಡಾಂಬೆಯ ಪುತ್ರರತ್ನ ಹಿರಿಯ ಚೇತನ ಕೈಯ್ಯಾರ ಕಿಞ್ಞಣ್ಣ ರೈ. ಕಾಸರಗೋಡಿನ ಕನ್ನಡ ಪರ ಹೋರಾಟದಲ್ಲಿ ಕೇಳಿ ಬರುವ … Read more

ಒಂದು ದಿನ ಆರು ಸುತ್ತಾಣ: ವಸಂತ ಬಿ ಈಶ್ವರಗೆರೆ

ಸೂರ್ಯ ಪುತ್ರರಾಗಿ ಬಿಟ್ಟಿರುವ ನಮಗೆಲ್ಲ, ಸಿಗೋದು ಒಂದೇ ಒಂದು ದಿನ ವಾರಾಂತ್ಯ ರಜೆ. ಆ ರಜೆಯನ್ನೇ ಹೊಂದಿಸಿಕೊಂಡ ಪ್ರವಾಸಕ್ಕೆ ಸಿದ್ದವಾದರೇ, ಖಂಡಿತ ಒಂದೇ ದಿನದಲ್ಲಿ ಆರು ಸುತ್ತಾಣಗಳನ್ನ ಬೆಂಗಳೂರಿಗೆ 75 ಕಿಲೋ ಮೀಟರ್ ದೂರದ ಚಿನ್ನದ ನಾಡು ಕೋಲಾರ ಜಿಲ್ಲೆಯ ಸುತ್ತಮುತ್ತಲಿನಲ್ಲಿ ನೋಡಬಹುದು. ಧಾರ್ಮಿಕ ಸ್ಥಳಗಳಾದ ಈ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟು, ಭಕ್ತಿಯ ಭಾವನೆಯನ್ನ ಮನದಲ್ಲಿ ತುಂಬಿಕೊಳ್ಳುತ್ತಾ, ಸಂಭ್ರಮದಲ್ಲಿ ಒಂದೇ ಒಂದು ರಜೆಯ ಮಜೆಯನ್ನ ಅನುಭವಿಸಬಹುದು.  ಜಾಲೀ ರೈಡ್ ಮಾಡೋ ಪ್ರವಾಸ ಹೊರಟರೂ, ಸಂಸಾರ ಸಮೇತರಾಗಿ ಹೊರಟರೂ, … Read more

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು: ಪ್ರಶಸ್ತಿ

ಇಂದು ಆಗಸ್ಟ್ ಹದಿನೈದು. ಭಾರತಕ್ಕೆ ಸ್ವಾತಂತ್ರ್ಯ ಬಂದು ೬೮ ವರ್ಷ ತುಂಬಿದ ಅಥವಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ೬೯ ನೇ ದಿನ. ರಜೆಯೆಂದು ಹೊದ್ದು ಮಲಗೋ ಬದಲು ಬೆಳಗಾಗೆದ್ದು ಟಿ.ವಿಯ ಮುಂದೆ ಪ್ರತ್ಯಕ್ಷನಾಗಿ ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ  ತ್ರಿವರ್ಣ ಧ್ವಜ ರಾರಾಜಿಸುವ ಗಳಿಗೆಗಾಗಿ ಕಾಯೋದು ಈ ದೇಶದ ಅದೆಷ್ಟೋ ಕೋಟಿ ಜನರಲ್ಲೊಬ್ಬ ನಾನು. ಬಿಳಿಬಿಳಿಯ ಸಮವಸ್ತ್ರ ತೊಟ್ಟು ಕೈಗೊಂದು ತ್ರಿವರ್ಣದ ಬ್ಯಾಂಡೋ ಜೇಬಿಗೊಂದು ತ್ರಿವರ್ಣದ ಪಿನ್ನೋ ಚುಚ್ಚಿಕೊಂಡು ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಶಾಲಾ … Read more

ಇಲ್ಲಗಳ ನಡುವೆ..: ಅನಿತಾ ನರೇಶ್ ಮಂಚಿ

ಎರಡೂ ಕೈಯಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಹಿಡಿದು ಬ್ಯಾಲೆನ್ಸ್ ಮಾಡ್ತಾ ಕಾರು ಪಾರ್ಕ್ ಮಾಡಿದ ಜಾಗಕ್ಕೆ ನಡೆದುಕೊಂಡು ಬರ್ತಾ ಇದ್ದೆ. ಒಂದು ಕೈಯ ಅವಸ್ಥೆ ಹೇಳತೀರದಾಗಿತ್ತು.ಅದರ  ಎಲ್ಲಾ ಬೆರಳುಗಳೂ ಒಂದೊಂದು ಚೀಲವನ್ನು ಹಿಡಿದುಕೊಂಡಿತ್ತು. ಕಾರು ತಲುಪುವಷ್ಟರಲ್ಲಿ ಕೈ ಬೆರಳುಗಳು ಮುರಿದೇ ಹೋಗಬಹುದೇನೋ ಎನ್ನುವ ಹೆದರಿಕೆಯಲ್ಲಿ ಹೆಜ್ಜೆಗಳು ಓಡಿದಂತೆ ಸಾಗುತ್ತಿತ್ತು. ಇನ್ನೇನು ಕಾರು ತಲುಪಲು ಒಂದು ನೂರು ಹೆಜ್ಜೆಗಳು ಇದೆ ಎನ್ನುವಾಗ ಹಿಂದಿನಿಂದ ಪರಿಚಿತ ಸ್ವರವೊಂದು ನನ್ನನ್ನು ಹಿಡಿದು ನಿಲ್ಲಿಸಿತು. “ಹಬ್ಬದ ಶಾಪಿಂಗಾ?”  ಹೌದೆಂದು ತಲೆಯಾಡಿಸುತ್ತಾ ಅವರೊಡನೆಯೂ ಪ್ರಶ್ನೆ … Read more

‘ಜಾಲದಲ್ಲಿ ಸಮಾನತೆ’ (ಕೊನೆಯ ಭಾಗ): ಜೈಕುಮಾರ್.ಹೆಚ್.ಎಸ್

ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ: ಸ್ಪರ್ಧಾತ್ಮಕ ವ್ಯವಹಾರ ಆಯೋಗವು ಜಾಲದಲ್ಲಿ ಸಮಾನತೆಯನ್ನು ಭಾರತೀಯ ಟೆಲಿಕಾಂ ಆಪರೇಟರ್ ಗಳು ಉಲ್ಲಂಘಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿತ್ತು. ಅದೇ ಸಮಯದಲ್ಲಿ ದುರದೃಷ್ಟವಶಾತ್, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್ ನೆಟ್ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ … Read more