ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ – 6: ಅಖಿಲೇಶ್ ಚಿಪ್ಪಳಿ

ಸರ್ಕಾರಗಳು ಏನು ಮಾಡುತ್ತಿವೆ? ಹೃದಯಾಘಾತಗೊಂಡ ಮನುಷ್ಯ, ನಾಳೆಯಿಂದ ನಾನು ನನ್ನ ಬಿರ್ಯಾನಿಯಲ್ಲಿ ಕಡಿಮೆ ಎಣ್ಣೆ ಉಪಯೋಗಿಸುತ್ತೇನೆ ಎಂಬಂತ ಮಾತುಗಳನ್ನು ಭಾರತ ಸರ್ಕಾರ ಆಡುತ್ತಿದೆ. ವಾತಾವರಣಕ್ಕೆ ಸೇರುವ ಸಿತ್ಯಾಜ್ಯದ ತಲಾವಾರು ಪ್ರಮಾಣವನ್ನು 2020ರ ವೇಳೆಗೆ ಶೇ.25% ತಗ್ಗಿಸುತ್ತೇವೆ (ಮಿಟಿಗೇಶನ್) ಎಂಬುದು ಭಾರತದ ಹೇಳಿಕೆಯಾಗಿದೆ. ಆದಾಗ್ಯೂ ಹವಾಗುಣ ವೈಪರೀತ್ಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅನೇಕ ಸಂW-ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಇವೆಲ್ಲವೂ ಶೈಕ್ಷಣಿಕ ಸಂಬಂಧಿ ವಾರ್ಷಿಕವಾದ ಫಲಿತಾಂಶದ ಹಂತದಲ್ಲೇ ಇವೆ. ಕಾಣಬಹುದಾದ ತಳಮಟ್ಟದ ಕೆಲವು ಕೆಲಸಗಳೆಂದರೆ, ಗ್ರಾಮೀಣ ಪ್ರದೇಶದ ಸಣ್ಣ ರೈತರ … Read more

ಗಣಪನ ವಿಸರ್ಜನೆಯ ‘ವಿಘ್ನ’ಗಳು: ಸಂಗಮೇಶ ಡಿಗ್ಗಿ

ಅವಾಗ ನಾವು ಚಡ್ಡಿ ಹರಿದು ಅಂಡು ಕಾಣುತ್ತಿದ್ದರೂ ತೆಲೆಕೆಡಿಸಿಕೊಳ್ಳದ ವಯಸ್ಸಿನ ಹುಡುಗರು. ಮನೆಗೆ ದಿನಾ ಡಜನ್‍ಗಟ್ಟಲೆ ಜಗಳ ತಂದು ವರದಿ ಒಪ್ಪಿಸುತ್ತಿದ್ದೆವು. ನಮ್ಮ ಗುಂಪಿನಲ್ಲಿ ನಾನೇ ಲೀಡರ್. ಯಾಕೆಂದರೇ ಎಲ್ಲರಿಗಿಂತಲೂ ನಾನು ತುಂಬಾ ಕೆಂಪು. ಹಾಗಾಗಿ ಅವರೆಲ್ಲರೂ ನನ್ನನ್ನು ‘ ಕೆಂಪೇಗೌಡ’ ಎಂದು ಕರೆಯುತ್ತಿದ್ದರು. ಲೇ ಕೆಂಪೇಗೌಡ ಮುಂದಿನ ವಾರ ಗಣಪತಿ ಹಬ್ಬ ಆದಂತ ಗೆಳೆಯ ಒಂದೇ ಉಸಿರಿಗೆ ವರದಿ ಒಪ್ಪಿಸಿದ. ನಾನು ಸರಿ ಅಂತ ನಮ್ ಹೈಕಳಿಗೆ ಹೇಳಿ ಒಂದು ಮೀಟಿಂಗ್ ಮಾಡೋಣ ಅಂತ ನಿರ್ಧರಿಸಿ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೂವರು ಯಾತ್ರಿಕರ ಕತೆ ಸುದೀರ್ಘವೂ ದಣಿಸಬಲ್ಲದ್ದೂ ಆದ ಯಾತ್ರೆಯ ಅವಧಿಯಲ್ಲಿ ಮೂವರು ಅಪರಿಚಿತರು ಸಂಗಾತಿಗಳಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಸುಖದುಃಖಗಳನ್ನು ಹಂಚಿಕೊಂಡು ಪಯಣಿಸುತ್ತಿದ್ದರು. ಅನೇಕ ದಿನಗಳು ಪಯಣಿಸಿದ ನಂತರ ಒಂದು ದಿನ ತಮ್ಮ ಹತ್ತಿರ ಒಂದು ತುಣುಕು ಬ್ರೆಡ್‌ ಮತ್ತು ಒಂದು ಗುಟುಕು ನೀರು ಮಾತ್ರ ಉಳಿದಿರುವ ಸಂಗತಿ ಅವರ ಗಮನಕ್ಕೆ ಬಂದಿತು. ಈ ಆಹಾರ ಮೂವರ ಪೈಕಿ ಯಾರಿಗೆ ಸೇರಬೇಕೆಂಬುದರ ಕುರಿತು ಅವರು ಜಗಳವಾಡಲು ಆರಂಭಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಉಳಿದಿದ್ದ ಬ್ರೆಡ್‌ ಹಾಗು … Read more

ಆರದಿರಲಿ ಬೆಳಕು: ಎಸ್. ಜಿ. ಸೀತಾರಾಮ್, ಮೈಸೂರು.

ಭಾರತ ರಾಷ್ಟ್ರೀಯ ನೇತ್ರದಾನ ಪಾಕ್ಷಿಕೋತ್ಸವ (ಆಗಸ್ಟ್ 25-ಸೆಪ್ಟೆಂಬರ್ 8, 2015) ಮತ್ತು ವಿಶ್ವ ದೃಷ್ಟಿ ದಿನ (8 ಅಕ್ಟೋಬರ್ 2015) ಸಂದರ್ಭಕ್ಕೊಂದು ನುಡಿಕಾಣಿಕೆ ಮಣ್ಣುಪಾಲಾಗುತ್ತಿರುವ ಕಣ್ಣುರಾಶಿ                                                                          … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-5: ಅಖಿಲೇಶ್ ಚಿಪ್ಪಳಿ

[ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು … Read more

ಒಂದು ಸಂಜೆ ತಂಪಿಗೆ “ಹುರಿಗಾಳು”: ಅಮರ್ ದೀಪ್ ಪಿ.ಎಸ್.

ಮಳೆಗಾಲ ಸಂಜೆಗೆ ಹೊರಗೆ ಕಾಲಿಡೋಣವೆಂದರೆ, ಅಚಾನಕ್ಕಾಗಿ ಮೋಡಗಳು ಕವಿದು ಸುರಿವ ಮಳೆ, ನಿಲ್ಲುವವರೆಗೆ ಮನೆಯಲ್ಲಿ ಮುದುರಿ ಕುಳಿತು ನಮ್ಮ ಭಾಗದ ಫೇವರಿಟ್ ಬೆಚ್ಚಗಿನ ಮಂಡಾಳು, ಮೇಲೊಂದಿಷ್ಟು ಚುರುಕ್ಕೆನಿಸುವ ಖಾರ, ಈರುಳ್ಳಿ ಓಳು ಮೆಲ್ಲುತ್ತಾ ಕೂಡುವುದು ಜಾಯಮಾನ.   ಅದು ಟೈಂಪಾಸ್ ಗಾಗಿ.  ಹಾಗೇನೇ ಅದು ಬಿಟ್ಟು ಹುರಿಗಡಲೆ, ಕಾಳು, ಇತ್ಯಾದಿ ಖಯಾಲಿಯವರು  ಖಾಲಿ ಮಾಡುವವರಿದ್ದಾರೆ.  ಖಾಲಿಯಾಗುತ್ತಲೇ ಕೈ ಕೊಡವಿ ಮೇಲೆದ್ದು ಮಳೆ ನಿಂತಿತಾ? ಇಲ್ಲವಾ? ಅನ್ನುವುದರ ಕಡೆ ಲಕ್ಷ್ಯ ಹೊರಳುತ್ತದೆ.   ಆದರೆ, ಕೊಪ್ಪಳದಲ್ಲೊಬ್ಬ ನನ್ನ ಸ್ನೇಹಿತರು, … Read more

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-2: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಅಡಿಗೆ ಮನೆಯಲ್ಲಿ ಫ್ಲಾಪಿಬಾಯ್ ಅಡಿಗೆ ಮನೆಯಲ್ಲಿ ಹೊಸರುಚಿ ಕಂಡು ಹಿಡಿಯಲು ಪ್ರಯೋಗ ನಿರತನಾಗಿದ್ದ. ಲಗೋರಿಬಾಬಾ ಚುಟ್ಟಾ ಹೊಡಿತಾ ಇವ ಮಾಡೋದನ್ನ ನೋಡ್ತಾ ಇದ್ದ. ಆಗ ಫ್ಲಾಪಿಬಾಯ್ “ಬಾಬಾ ಲೈಫಲ್ಲಿ ಹೆಂಗಿರ್ಬೇಕು ಅಂತಾನೇ ಗೊತ್ತಾಗ್ತಿಲ್ಲ ನಂಗೆ! ಹಂಗಿದ್ರೆ ಹಿಂಗಿರು ಅಂತಾರೆ, ಹಿಂಗಿದ್ರೆ ಹಂಗಿರು ಅಂತಾರೆ! ಏನ್ ಮಾಡೋದಂತಾನೇ ತಿಳಿತಿಲ್ಲ ಥತ್!!” ಅಂದ ನಿರಾಸಕ್ತಿಯಿಂದ. “ಸಿಂಪಲ್ಲು ಕಣೋ, ಅದೇನು? ಅಂದ ಲಗೋರಿಬಾಬಾ ಕೈತೋರಿಸ್ತಾ. “ಕ್ಯಾರೆಟ್ಟು” ಅಂದ ಫ್ಲಾಪಿಬಾಯ್.  “ಮತ್ತೆ ಅದು?”- “ಅಷ್ಟೂ ಗೊತ್ತಿಲ್ವಾ ಮೊಟ್ಟೆ, ಎಗ್ … Read more

ಕನ್ನಡವೇ ಇಲ್ಲದ ಆ ವಠಾರದಲ್ಲಿ: ಬಂದೇಸಾಬ ಮೇಗೇರಿ

ಅಲ್ಲಿದ್ದದ್ದು ಈತ 58 ದಿನ ಮಾತ್ರ. ಅದು ಸ್ವಲ್ಪ ಹೆಚ್ಚು ಕಡಿಮೆ ವಿಹ್ವಲ ಮನಸಿನ ಗೂಡಾಗಿತ್ತು ಆ ವಠಾರ. ಅಫ್‍ಕೊರ್ಸ್ ವಾತಾವರಣ ಸಂಪೂರ್ಣ ಗೊಂದಲಮಯ. ಅರೇಬಿಕ್, ಉರ್ದು ಭಾಷೆಗಳಿಂದ ಅದು ಕೂಡಿ ಹೋಗಿತ್ತು. ಅಷ್ಟಕ್ಕೂ ಅದು ಅವನದೇ ಕೋಮಿನ ವಠಾರ. ಅಲ್ಲಿ ಕನ್ನಡದ ಪರಿಮಳ ಸೂಸುತ್ತಿದ್ದರೂ ಅದರ ಗೊಡವೆಗೆ ಹೋಗುವವರು ತುಂಬಾ ವಿರಳ. ಸಲಾಮ್ ಅಲೈಕುಮ್ ಜೀ ಅಂದರೆ ಅವರು ಸ್ವಾಗತಿಸುವ, ನಮಸ್ತೆ ಎನ್ನುವ ಮಾತಿಗೂ ವ್ಯತ್ಯಾಸ ಮಾತ್ರ ತುಂಬಾನೇ ಇತ್ತು. ಪರಿಚಯಸ್ತರಿಂದ ಸಿಕ್ಕ ಆ ರೂಮು … Read more

ಮೂವರ ಕವನಗಳು: ಸಾವಿತ್ರಿ ವಿ. ಹಟ್ಟಿ, ಚಾರುಶ್ರೀ ಕೆ ಎಸ್, ಸಿದ್ರಾಮ ತಳವಾರ

ಕನಸಿಗೊಂದು ವಿನಂತಿ ನಿದ್ದಿ ಬರವಲ್ದವ್ವ ಕನಸು ಕಳೆದೀತೆಂದು ಕಣ್ಣಿಂದ ಜಾರಿ ಬಿದ್ದು ಹೋದೀತೆಂದು ಕಣ್ಣು ಬಡಿಯದೆ ಕುಂತೀನೆ ಕನಸ ಕನವರಿಸುತಲೆ! ಯಾವಾಗನೊ ಮಲಗಿ ಬಿಟ್ಟೆ  ಎಚ್ಚರವಾದಾಗ ಮನಹೊಕ್ಕು ನೋಡಿದೆನು ಎಲ್ಲೂ ಹೋಗದೆ ಕನಸು ಮನದಾಗ ನಿಂತೈತೆ ಮತ್ತಷ್ಟು ರಂಗು ರಂಗಾಗೇತಿ ನೋಡವ್ವ ಕಣ್ತುಂಬ ತುಂಬೇತಿ ಉಲ್ಲಾಸದ ಹೊಳಪು! ಕನಸೆಂಬ ಕುದುರೆಯ ಮ್ಯಾಲೆ ಸವಾರಿ ಹೊಂಟೀನಿ ನಾನು ಬ್ಯಾಸರಿಕೆ ಇಲ್ಲ ಬಾಯಾರಿಕೆ ಇಲ್ಲವ್ವ ಓಡುತೋಡುತ ಇದರ ಓಟ ಹೆಚ್ಚಾಗೇತಿ ಬದುಕಿನ ಹಾಡಿಗೆ ಅಚ್ಚು ಮೆಚ್ಚಾಗೇತಿ! ಏ ಕನಸೇ ನೋಡಾ … Read more

ಬ್ಯಾಕರವಳ್ಳಿ ಬಸವೇಶ್ವರ ಹೋಟೆಲ್ಲೂ ಮತ್ತು ಮೂರು ಪಂಕ್ಚರ್ರುಗಳ ಕತೆ: ಪ್ರಶಸ್ತಿ

ಹಾಸನಕ್ಕಿಂತ ೪ ಕಿ.ಮೀ ಮೊದಲು ಎಡಕ್ಕೆ ತಿರುಗಿ, ೧೪ ಕಿ.ಮೀ ಸಾಗಿ ನಂತರ ಬಲಕ್ಕೆ ಸಾಗಿ ಹಾಸನ ಗೊರೂರು/ಹಾಸನ ಪೆರಿಯಾಪಟ್ಟಣ ರಸ್ತೆಯಲ್ಲಿ ಸಾಗಿದ್ರೆ ಕೊಟ್ಟಾಯಕ್ಕಿಂತ ಮುಂದೆ ಸಾಗುವಾಗ ಶೆಟ್ಟಿಹಳ್ಳಿ ಸಿಗುತ್ತೆ. ಶೆಟ್ಟಿಹಳ್ಳಿಯ ಚರ್ಚಲ್ಲೊಂದು ಫೋಟೋ ಸೆಷನ್ನು ,ಬೆಳಬೆಳಗ್ಗೆಯೇ ಹೊಳೆದ ಒಂದಿಷ್ಟು ಯೋಗಾಸನಗಳ, ಜಂಪಿಂಗು, ಕ್ಲೈಂಬಿಂಗುಗಳ ಪೂರೈಸುವಾಗ ಹೊಟ್ಟೆ ಚುರುಗೊಟ್ಟಿದ, ಪ್ರಕೃತಿಯು ಕರೆದ ಅನುಭವ. ಬೇಗ ಹಾಸನಕ್ಕೆ ಹೋಗೋಣವೆಂದ್ರೆ ಹೊರಟ ಟಿ.ಟಿ ಎರಡನೇ ಬಾರಿ ಪಂಚರ್ರಾಗಿತ್ತು. ರಾತ್ರಿ ಟೋಲ್ ಗೇಟ್ ಬಳಿಯೇ ಪಂಚರ್ರಾದ ಹಿಂದಿನಿಂದ ಎಡಗಡೆಯ ಟೈರೇ ಈಗ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಡಂಗಿ ಒಬ್ಬಾತ ಮನೋವೈದ್ಯರನ್ನು ಭೇಟಿ ಮಾಡಿ ಹೇಳಿದ, “ ಡಾಕ್ಟರೇ, ನಾನು ಯಾವಾಗಲೂ ಮಂಕಾಗಿರುತ್ತೇನೆ. ನಾನೇನೇ ಮಾಡಿದರೂ ಮಂಕಾಗಿಯೇ ಇರುತ್ತೇನೆ. ಇದಕ್ಕೇನು ಪರಿಹಾರ ಎಂಬುದೇ ತಿಳಿಯುತ್ತಿಲ್ಲ.” ಮನೋವೈದ್ಯರು ಅವನನ್ನು ನೇರವಾಗಿ ನೋಡುತ್ತಾ ಹೇಳಿದರು, “ನನ್ನ ಜೊತೆಯಲ್ಲಿ ಕಿಟಕಿಯ ಹತ್ತಿರ ಬಾ.” ಇಬ್ಬರೂ ಕಿಟಕಿಯನ್ನು ಸಮೀಪಿಸಿದಾಗ ಮನೋವೈದ್ಯರು ಹೊರಗೆ ಒಂದು ದಿಕ್ಕಿನತ್ತ ತೋರಿಸುತ್ತಾ ಹೇಳಿದರು, “ಅಲ್ಲೊಂದು ಡೇರೆ ಕಾಣುತ್ತಿದೆಯಲ್ಲವೇ?. ಅದೊಂದು ಸರ್ಕಸ್ಸಿನ ಡೇರೆ. ಆ ಸರ್ಕಸ್‌ ನಿಜವಾಗಿಯೂ ಬಲು ಚೆನ್ನಾಗಿದೆ. ಅದರಲ್ಲೊಬ್ಬ ನಿಜವಾಗಿಯೂ ಜನಗಳನ್ನು ನಗಿಸಬಲ್ಲ ಕೋಡಂಗಿಯೊಬ್ಬನಿದ್ದಾನೆ. … Read more

ಮೂಲ ವಿಜ್ಞಾನ ಮತ್ತು ಐ.ಟಿ: ಸ್ಮಿತಾ ಮಿಥುನ್

ಹೀಗೆ ನೆನ್ನೆ ಮೊನ್ನೆ ಪತ್ರಿಕೆ ಮತ್ತು ಫ಼ೇಸ್ ಬುಕ್ ತಿರಿವು ಹಾಕ್ತ ಇದ್ದಾಗ ಸ೦ಶೋಧನೆ ಯಲ್ಲಿ ನಮ್ಮ ದೇಶ  ಏನು  ಸಾದಿಸಿಲ್ಲ ಅ೦ತ  Infosys ಸ್ತಾಪಕ ನಾರಾಯಣ ಮೂರ್ತಿಯವರು ಅಭಿಪ್ರಾಯಪಟ್ಟಿರುವುದನ್ನ ಓದಿ ಮನಸ್ಸಿಗೆ ಬೇಸರವಾಯ್ತು. ನಾನು ಪ್ರಗತಿ ವಿರೋಧಿ ಅಲ್ಲ ಮೊಬೈಲ್, ಸ್ಮಾರ್ಟ್ ಫ಼ೋನ್ ಇಲ್ಲದೆ ಇವತ್ತು ಏನು ಆಗಲ್ಲ. ನಮ್ಮ ಬೆ೦ಗಳೂರು ಐ.ಟಿ. ಹಬ್ ಆಗಿದ್ದು ಖುಶಿಯ ವಿಷಯವೆ. ಮಧ್ಯಮ ವರ್ಗಕ್ಕೆ ಅವಕಾಶಗಳ  ಬಾಗಿಲು ತೆಗೆದ,  ನಮ್ಮನ್ನ ದಿಡೀರ್  ಅ೦ತ ಶ್ರೀಮ೦ತರನ್ನಾಗಿಸಿದ  ಐ.ಟಿ. ಕೆಲವು  ಅಡ್ಡ … Read more

ಪಾಚತ್ತೆ ಪರಪಂಚ: ಅನಿತಾ ನರೇಶ್ ಮಂಚಿ

 ನಮ್ಮ ಪಾಚತ್ತೆ ಗೊತ್ತಲ್ವಾ.. ಅದೇ..ಯಾವತ್ತೂ ನಮ್ಮನೆಗೆ ಬರ್ತಾರಲ್ವಾ ಅವ್ರೇ.. ಗೊತ್ತಾಗ್ಲಿಲ್ವಾ.. ಬಿಡಿ ನಾನು ಅವರ ಬಗ್ಗೆ ವಿಷಯ ಹೇಳ್ತಾ ಹೋದಂತೆ ನಿಮ್ಗೆ ಗೊತ್ತಾಗೇ ಆಗುತ್ತೆ.  ಎಂದಿನಂತೆ ನಾನು ನಮ್ಮ ನಾಯಿ ಟೈಗರ್ ಜೊತೆ ವಾಕ್ ಅಂಡ್ ಟಾಕ್ ಮಾಡ್ತಾ ಇದ್ದೆ. ಅಂದ್ರೆ ಅದು ವಾಕಿಂಗ್ ಮಾಡ್ತಾ ಇತ್ತು. ನಾನು ಟಾಕಿಂಗ್ ಮಾಡ್ತಾ ಇದ್ದೆ ಮೊಬೈಲಿನಲ್ಲಿ.. ಅದೇ ಹೊತ್ತಿಗೆ ಪಾಚತ್ತೆ ಬಂದು ನಮ್ಮನೆಯ ಮುಖಮಂಟಪದ ಮೆಟ್ಟಿಲಮೇಲೆ ಸೂತಕದ ಮುಖ ಹೊತ್ತು ಕುಳಿತುಬಿಟ್ಟರು.ನನಗೂ ಕುಳಿತುಕೊಳ್ಳಲು ಒಂದು ನೆವ ಬೇಕಿತ್ತು. ನಾನು … Read more

ಬ್ರೇಕಿಂಗ್ ನ್ಯೂಸ್ !!: ಜಯಶ್ರೀ ದೇಶಪಾಂಡೆ

ಮುಸ್ಸ೦ಜೆಯ ಮುಗಿಲು ಸೂರ್ಯನನ್ನು ಬೀಳ್ಕೊಟ್ಟು  ದಣಿವಾರಿಸಿಕೊಳ್ಲುವ ಹೊತ್ತಿನಲ್ಲಿ ಬಹುಶ: ದಾರಿ ತಪ್ಪಿರಬೇಕೆನಿಸಿ  ಮೇಲೆ ಒಮ್ಮೆ ದೃಷ್ಟಿ  ಹಾಯಿಸಿದ್ದಕ್ಕೂ  ಯಾರೋ ಪಿಸುದನಿಯಲ್ಲಿ ಮಾತಾಡಿದರೆ೦ಬ ಆಭಾಸವಾದದ್ದಕ್ಕೂ  ತಾಳೆಯಾಗಿತ್ತು. .ಯಾರಿರಬೇಕು ? ಅಥವಾ ಅದೊ೦ದು ಭ್ರಮೆಯೇ. . . ?              " ನಿಮ್ಮ ಧೈರ್ಯ ದೊಡ್ಡದು ಸ್ವಾಮಿ. . " ಅಚ್ಚರಿಯನ್ನು ಹೆಚ್ಚಿಸುತ್ತ ಸ್ವರ ಮು೦ದುವರಿಯಿತು, "ನಿಮಗೇ  ಸ್ವಾಮೀ ಹೇಳುತ್ತಿರುವುದು. . ನೀವು ಯಾರೆ೦ದು ನಾ ಕೇಳುವುದಿಲ್ಲ, ಆದರೆ ನೀವು ನೇರವಾಗಿ ಇಲ್ಲಿಗೇ … Read more

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-1: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಬ್ಯಾಂಕ್ ಅಕೌಂಟು ಫ್ಲಾಪಿ ಬಾಯ್ ಕೆರೆಬದಿ ಕುಂತು ಆಕಾಶದಲ್ಲಿ ಹಾರೋ ಕಾಗೆ ನೋಡ್ತಾ ಇದ್ದ. ಅದೇ ಟೇಮಿಗೆ ನಮ್ ಲಗೋರಿಬಾಬಾ ಕೆರೆ ಕಡೆ ಕೆಲ್ಸ ಮುಗಿಸ್ಕಂಡ್ ಬಂದ. “ಏನ್ಲಾ ಮಾಡ್ತಿದ್ದಿ ಪ್ಲಾಪಿ? ತಂತ್ರಜ್ಞಾನಿ ಬ್ರಹ್ಮಚಾರಿ ಅಂತ ಊರಲ್ಲೆಲ್ಲಾ ಹೇಳ್ಕಂಡ್ ತಿರುಗ್ತಿ ಇತ್ತೀಚೆಗೆ ಏನೂ ಕಂಡು ಹಿಡಿದಿಲ್ವಾ?” ಅಂತ ಕೇಳ್ದ. ಪಾಪ ನಮ್ ಫ್ಲಾಪಿ ಬಾಯ್ ಗೆ ಲಗೋರಿಬಾಬಾನ ನೋಡ್ತಾ ಇದ್ದಂಗೆ ದುಃಖ ಕಿತ್ಗಂಡ್ ಕಿತ್ಗಂಡ್ ಬಂತು. ಅಳುಅಳುತ್ತಾ ಅಂದ, “ಲಗೋರಿಬಾಬಾ, ಲೈಫಲ್ಲಿ ತುಂಬಾ … Read more

ಬೆಂದಕಾಳೂರ ಟ್ರಾಫಿಕ್ಕೂ, ಗುಂಡಣ್ಣನ ಲಾಜಿಕ್ಕು: ಪ್ರಶಸ್ತಿ

ನಮ್ಮ ಗುಂಡಣ್ಣಂಗೆ ಬಗೆಹರಿಯದ ಸಮಸ್ಯೆಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ.  ನಾಲ್ಕು ಜನ ಯಾವುದಾದ್ರೂ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂದ್ರೆ ಇವರನ್ನ ಕರೆಯದೇ ಹೋದ್ರೂ ಅಲ್ಲಿಗೊಂದು ಎಂಟ್ರಿ ಕೊಟ್ಟು ಅವ್ರು ಯಾವ ಗಹನವಾದ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂತ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸ್ಲಿಲ್ಲ ಅಂದ್ರೆ ಗುಂಡಣ್ಣಂಗೆ ಅವತ್ತು ತಿಂದ ಅನ್ನ ಜೀರ್ಣವಾಗೋಲ್ಲ. ಹೀಗೇ ಎಲ್ಲರೂ ಗುಂಡಣ್ಣನ ಬಗ್ಗೆ ಹೇಳೋದನ್ನ ಕೇಳಿ ಕೇಳೀ, ಸಂಜೆಯವರೆಗೂ ಯಾವ ಸಮಸ್ಯೆಗೂ ಪರಿಹಾರ ಸೂಚಿಸದ ದಿನ ತನಗೇನಾದ್ರೂ ಅಜೀರ್ಣವಾಗಿಬಿಡುತ್ತಾ ಎಂಬ … Read more

ಮೂವರ ಕವನಗಳು: ಸಿಪಿಲೆ ನಂದಿನಿ, ಎಸ್.ಜಿ. ಸೀತಾರಾಮ್, ಶ್ರೀಶೈಲ ಮಗದುಮ್ಮ

ನಿರಾಶ್ರಿತರ ಸ್ವಾತಂತ್ರ್ಯ ಗೂಡ ಕಳೆದ ಜೀವಗಳ ಕಸಿವಿಸಿ ಯಾವುದೋ ಬರಗಾಲ ದೈತ್ಯ ಮಾರುತ ಹೊಡೆತಕೆ ಸಿಲುಕಿ ನಲುಗಿತೊ ಭೂಕಂಪನ ಆರ್ತನ ಅನಾಥವಾದವೋ ಕಳಚಿ ಬಿದ್ದ ಕಾಲ ಮರೆತ ವರ್ತಮಾನ ಮೈದಾನದಲಿ ಬದುಕ ಕಟ್ಟಿತೊ.  ಎಷ್ಟೋ ಸೂರ್ಯೋದಯ ಉದಯಿಸಿದರೂ ಬೆಳಕುಮಾತ್ರ ಬೆಳಗದೆ ಸುಡುತ್ತಿತ್ತು. ಆದರೂ ಇಲ್ಲಿ ಯಾರ  ಹಂಗು ಇಲ್ಲ ಬಂಧನ ಬೇಲಿ ಇಕ್ಕೆಲಲಿ ತಂಪು ತಂಗಾಳಿ ಸಾಲುಮರಗಳು ಇಲ್ಲಿ ಕತ್ತಲಾದರೆ ಅದೇ ಕಾಡುವ  ನೆಲದ ಮಣ್ಣಿನ ಋಣ ಆಕಾಶ ಹೊದಿಕೆ ಮಲಗಿದರೆ ಜೋಪಡಿ ಎದುರಾದ ಚಂದ್ರ  ಬೆಳಕು … Read more

ನಮ್ಮ ಬದುಕು ನಮ್ ಕಯ್ಯಾಗೈತಿ: ಗಾಯತ್ರಿ ಬಡಿಗೇರ

        ಆಗ ನಾನಿನ್ನು ಪಿಯುಸಿ ಮೊದಲಿನ ವರ್ಷದಾಗ ಓದತಿದ್ಯಾ. ಚೊಕ್ಕ ಹೆಣ್ಮಕ್ಳಿದ್ದ ಕಾಲೇಜ್ಗೆ ನಮ್ಮಪ್ಪ ಹಚ್ಚಿ ಬಂದಿದ್ದ. ಮಂಜಾನೆ ಒಂಬತ್ತಕ್ಕ ಬಸ್ ಹಿಡದ ಹೊಂಟ್ವಿ ಅಂದ್ರ ತಿರ್ಗಿ ಮನಿ ಹತ್ತೊದ್ರಾಗ ಹೊತ್ತ ಮುಳಗತ್ತಿತ್ತ. ದಿನಾ ಹಿಂಗ ನಡಿತಿತ್ತ. ಕ್ಲಾಸ್ ಟೀಚರ್ಸ ಬಗ್ಗೆ ಎರಡ ಮಾತಿಲ್ಲ ಹಂಗ ಹೇಳೋರು. ಹೀಂಗ ಒಂದಿನ ಬ್ಯಾರೆ ಕಾಲೇಜಿಗೆ ಹೋಗತ್ತಿದ್ದ ನನ್ನ ಜೀವದ ಗೆಳತಿ ನೆನಪಿಗೆ ಬಂದ್ಲು, ಅಕಿ ಕೊಟ್ಟ ನಂಬರ್‍ಗ ಪೋನ್ ಮಾದಿದ್ಯಾ, ಬಾಳ ಖುಷಿಯಿಂದ ಮಾತಾಡಿ ನಮ್ಮ … Read more