ಇಲ್ಲಿಯವರೆಗೆ ಪಂಜುವಿಗಾಗಿ ಬರೆದವರ ಪಟ್ಟಿ
ಸಹೃದಯಿಗಳೇ, ಮುಂದಿನ ಜನವರಿ ತಿಂಗಳು 21ನೇ ತಾರೀಖು ಬಂದರೆ ಪಂಜು ಶುರುವಾಗಿ ಐದು ವರ್ಷವಾಗುತ್ತದೆ. ಈ ಐದು ವರ್ಷಗಳಲ್ಲಿ ಪಂಜು ತನ್ನದೇ ಆದ ದೊಡ್ಡ ಓದುಗ ಬಳಗವನ್ನೇ ಹೊಂದಿದೆ. ಹಾಗೆಯೇ ಇಲ್ಲಿಯವರೆಗೂ 680 ಲೇಖಕರು ವಿವಿಧ ಲೇಖನಗಳನ್ನು ಪಂಜುವಿಗಾಗಿ ಬರೆದಿದ್ದಾರೆ. ಆ ಅಷ್ಟು ಲೇಖಕರ ಲಿಸ್ಟ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮೆಲ್ಲರ ಪ್ರೀತಿಯಿಂದ ಪಂಜುವಿನ ಪುಟಗಳ ಹಿಟ್ಸ್ ಇಲ್ಲಿಯವರೆಗೆ 33 ಲಕ್ಷಕ್ಕೂ ಅಧಿಕವಾಗಿದೆ. ಪಂಜುವಿನ ಮೇಲಿನ ನಿಮ್ಮ ಪ್ರೀತಿ ಹೀಗೆಯೇ ಇರಲಿ. “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ … Read more
ಪಂಜು ಕಾವ್ಯಧಾರೆ
ಹಲ್ಕಾ ಸಾಲುಗಳು ತೆರೆದ ದಾರಿಯ "ಸ್ವಾತಿ" ಮಳೆಯಲ್ಲಿ ಮೊದಲು ಮುತ್ತಿಡುವಾಗ ನೀಲಾಕಾಶದಲಿ ಮಂಕಾಗಿರುವ ನಕ್ಷತ್ರ ನೋಡುವ ಕಣ್ಗಳು…! ಭುವಿಯ ನೋಡಿ ಹೆಣ್ತನದ ವಸಂತದ ಒಲುಮೆಯ ಮೇಲೆ ಒಂದಾದೆವು…! ಬಾನಂಗಳದಿ ಒಂಟಿಯಂತಿರುವ ಚಂದ್ರನು ನಗುತ್ತಿದ್ದಾನೆ ನಮ್ಮಯ ಒಲುಮೆಯ ಪರಿ ಕಂಡು…! ಬಾಡಿದ ಹಸಿರೆಲೆಗಳೂ ನಮಗಷ್ಟಲ್ಲದೆ ಅವಕ್ಕೆಲ್ಲ ಈಗ ವಸಂತ ಕಾಲ ಒಂದಕ್ಕಿಂಥ ಒಂದು ಚಿಗುರೊಡೆಯುವ ತವಕ…! ಮೋಡದ ಬಸಿರು ಹೆಚ್ಚಾಗಿ ಹನಿಗಳು ಹುಟ್ಟುತ್ತಿವೆ ನಾ ಮುಂದು ತಾ ಮುಂದೆಂದು ಜೋಡಿಯ ಸ್ಪರ್ಶಕ್ಕೆ…! ಆದಾವ ಹನಿ ಹಣೆಯ ಮೇಲೆ ಬಿತ್ತೊ … Read more
ಜಾಣಸುದ್ದಿ: ಕೊಳ್ಳೇಗಾಲ ಶರ್ಮ
ವಿ.ಸೂ.: ವಿಜ್ಞಾನ, ವಿಸ್ಮಯ, ವಿಚಾರಗಳನ್ನು ಜನರಿಗೆ ಅದರಲ್ಲೂ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ಕೊಳ್ಳೇಗಾಲ ಶರ್ಮರವರು ಈ ಜಾಣಸುದ್ದಿ ಧ್ವನಿಮುದ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಕನ್ನಡದ ಕೆಲವೇ ಕೆಲವು ವಿಜ್ಞಾನ ಬರಹಗಾರರಲ್ಲಿ ಶರ್ಮರವರು ಒಬ್ಬರು. ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ … Read more
ಬಲ್ಲವನೇ ಬಲ್ಲ ರಂಗದ ರುಚಿ: ಮಲ್ಲಮ್ಮ ಯಾಟಗಲ್, ದೇವದುರ್ಗ
ರಂಗಭೂಮಿ ಎಂದರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿರುವ ಪಾಲಕರಿಗೆ ಮನವರಿಕೆ ಮಾಡುವವರು ಯಾರು ? ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ರಂಗಭೂಮಿಯ ರುಚಿಯನ್ನು ನೀಡಬೇಕೆಂದು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ನಾಟಕ ಮಾಡಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಧಾರವಾಡದಲ್ಲಿ ನಡೆದ ವಿಭಾಗೀಯ ಮಟ್ಟಕ್ಕೆ ಅಯ್ಕೆಯಾದ ಸಂದರ್ಭದಲ್ಲಿ ನನಗೇನು ರಂಗಭೂಮಿಯ ಬಗ್ಗೆ ಅಷ್ಟೊಂದು ಆಸಕ್ತಿ ಉಳಿದಿರಲಿಲ್ಲ. ಯಾಕೆಂದರೆ ಪಾಲಕರು ತಿಳಿದುಕೊಂಡ ನಾಟಕ ನಮ್ಮದಾಗಿರಲಿಲ್ಲ. ಅಂದು ಸಂಜೆ ಧಾರವಾಡದಲ್ಲಿ ಶೋ ಇತ್ತು. … Read more
ಬಲ್ಲಾಳರ ಬಂಡಾಯ: ಪ್ರೇಮಾ ಟಿ ಎಮ್ ಆರ್
ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ 'ನನ್ನ ಪುಟ'ದಲ್ಲಿ? ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ 'ಬಂಡಾಯ'. ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ ಹಿರಿಯ ಸಾಹಿತಿ ವ್ಯಾಸರಾಯ … Read more
ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ: ನಾಗರೇಖಾ ಗಾಂವಕರ
ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/ ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ ಗೋಲದ ಮೇಲೆ/ ಬಾತ್ ರೂಮು ಕ್ಲೀನಾಗಿ ನಳನಳಿಸುತ್ತಿರಬೇಕು……….. ಆಗ ಮಾತ್ರ ನಾನು/ ಹೊಚ್ಚಗೆ ಮಿಂದು ಬಂದು/ ರುಚಿ ಅಡುಗೆಯ ಮಾಡಿ/ತಿನ್ನಿಸಬಲ್ಲೇ ನಿನಗೆ ಮುದ್ದು ಮಾಡುತ್ತ. ಎನ್ನುತ್ತಾರೆ ಯುವ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ತಮ್ಮ “ಜೀನ್ಸ್ ತೊಟ್ಟ ದೇವರು” ಎಂಬ ಕವನ ಸಂಕಲನದ ಒಂದು ಕವನ. ಆಧುನಿಕತೆಯಲ್ಲಿ … Read more
ನ್ಯಾನೋ ಕಥೆಗಳು: ಪ್ರೇಮ್ (ಪ್ರೇಮ ಉದಯಕುಮಾರ್)
ಹಣೆಬರಹ ಬೆಳಗೆದ್ದು ಮಾವನ ಮನೆಗೆ ಹೋಗಬೇಕಿತ್ತು. ಟಿ.ವಿ. ಹಾಕಿದ ರಾಕೇಶ್. ಸ್ವಾಮೀಜಿಯೊಬ್ಬರು ಭವಿಷ್ಯ ಹೇಳುತ್ತಿದ್ದರು. ಅವನ ಕುಂಭ ರಾಶಿ ಬರುವವರೆಗೆ ಕಾದ. ಈ ರಾಶಿಯವರು ಪ್ರಯಾಣವನ್ನು ಮುಂದೂಡಿ ಎಂದರು. ಸೌಖ್ಯವಿಲ್ಲದ ಮಾವನನ್ನು ನೋಡಲು ನಾಳೆ ಹೋಗೋಣ ಎಂದು ಸುಮ್ಮನಾದ. ಮರುದಿನ ಹೊರಟ ಬಸ್ಸು ಬ್ರೇಕ್ ಫೈಲ್ಯೂರ್ ಆಗಿ ನುಜ್ಜುಗುಜ್ಜಾಯಿತು. ಜಿಪುಣತನ ರಾಮಣ್ಣ ಹಲ್ಲು ನೋವಿನಿಂದ ಬಳಲುತ್ತಿದ್ದರು. ಯಾವತ್ತೂ ಡಾಕ್ಟರ್ ಬಳಿ ಹೋಗುತ್ತಿರಲಿಲ್ಲ.ಡಾಕ್ಟರ್ ಎಂದರೆ ಭಯ. ಅವರಿವರ ಪುಕ್ಕಟೆ ಸಲಹೆ ಪಡೆಯುತ್ತಿದ್ದರು. ಯಾರೋ ಮಾತ್ರೆ ಇಡಲು ಹೇಳಿದರೆ, ಮತ್ತೊಬ್ಬರು … Read more
ಹಿಮಾಲಯವೆಂಬ ಸ್ವರ್ಗ (ಭಾಗ 8): ವೃಂದಾ ಸಂಗಮ್
ಇಲ್ಲಿಯವರೆಗೆ ರಾತ್ರಿ ಹರಿದ್ವಾರದಲ್ಲಿ ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು, ಬಡೇ ಹನುಮಾನ ಮಂದಿರದಲ್ಲಿ, ನಮಗಿಂತ ಮೊದಲೇ. ಅವರೆಲ್ಲ ಬದರಿಯ ವಿಷಯ ಮಾತಾಡುತ್ತಿದ್ದರು. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವಳು, ಎದುರಿಗೆ ಇದ್ದವಳಿಗೆ ಆ ದಿನ ನಡೆದ ಘಟನೆಯ ಬಗ್ಗೆ ತನ್ನ ಗಂಡನ ಪ್ರಶಂಸೆ ಮಾಡುತ್ತಿದ್ದಳು. ನನಗೆ ಬದರಿ ದೇವಸ್ಥಾನದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂದಿತ್ತು. ಆದರೆ ಆತ ಬೇಡ ಎಂದು ಬಿಟ್ಟ. ನನಗೆ ತುಂಬಾ ಬೇಜಾರಾಯಿತು. ಆಮೇಲೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದು ನೋಡಿ, ಬಾ ನಾವೂ ತೆಗೆಸಿಕೊಳ್ಳೋಣ … Read more
ಬದಲಾದ ಗಣೇಶೋತ್ಸವದ ಸ್ವರೂಪ!: ಹೊರಾ.ಪರಮೇಶ್ ಹೊಡೇನೂರು
ನಮ್ಮ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವಿಶೇಷ ಸ್ಥಾನ ಪಡೆದಿವೆ. ಅದರಲ್ಲೂ ಹಿಂದೂ ಪಂಚಾಂಗದ ಹೊಸ ವರ್ಷದ ದಿನವೆಂದೇ ಸಂಭ್ರಮಪಡುವ ಚಾಂದ್ರಮಾನ ಯುಗಾದಿಯಿಂದ ಹಿಡಿದು ನಾಗರ ಪಂಚಮಿ, ರಕ್ಷಾ ಬಂಧನ, ವರಲಕ್ಷ್ಮೀ ವ್ರತ, ಗೌರೀ ಗಣೇಶ ಚತುರ್ಥಿ, ನಾಡ ಹಬ್ಬ ದಸರಾ, ನರಕ ಚತುರ್ದಶಿ, ಬಲಿಪಾಡ್ಯಮಿ, ಸಂಕ್ರಾಂತಿ ಮುಂತಾದ ಹಬ್ಬಗಳ ಜೊತೆಗೆ ವಿವಿಧ ಹರಿದಿನಗಳನ್ನೂ ಆಚರಿಸುವ ಮೂಲಕ ಸಂಭ್ರಪಡುತ್ತೇವೆ. ಈ ಎಲ್ಲಾ ಹಬ್ಬಗಳು ಒಂದೊಂದು ಪೌರಾಣಿಕ ಹಿನ್ನೆಲೆಯಲ್ಲಿ, ಆಯಾ ಋತುಮಾನಗಳ ಹೊಂದಿಕೆಗೆ … Read more
ವ್ಯಕ್ತಿತ್ವದ ವಿಕಸನ: ಕೆ ಟಿ ಸೋಮಶೇಖರ ಹೊಳಲ್ಕೆರೆ.
ಹೂವು ಅರಳುವುದನ್ನು ' ವಿಕಸನ ' ಎನ್ನುತ್ತೇವೆ. ಹೂವು ಪೂರ್ಣವಾಗಿ ಅರಳಿದಾಗ ಅದರ ನಿಜವಾದ ಬಣ್ಣ, ಆಕಾರ ಪಡೆದು ಪೂರ್ಣ ಸೌಂದರ್ಯ ಹೊರಹೊಮ್ಮಿ ಸುಂದರವಾಗಿ ಕಾಣುತ್ತದೆ. ಪೂರ್ಣವಾಗಿ ವಿಕಸಿಸಿದಾಗ ಪರಿಮಳ ಹೊಮ್ಮುತ್ತದೆ. ಸುತ್ತಣ ಪರಿಸರವನ್ನು ಪರಿಮಳದಲ್ಲಿ ಮುಳುಗಿಸಿ ಸುವಾಸನೆ ಸೂಸಿ ಕ್ರಿಮಿ, ಕೀಟ, ಜೀವಿಗಳ ಆಕರ್ಷಿಸುತ್ತದೆ. ಮಧುಪಾತ್ರೆ ತೆರೆದು ದುಂಬಿಗೆ ಹಬ್ಬ ಉಂಟು ಮಾಡುತ್ತದೆ. ದುಂಬಿಯ ಝೇಂಕಾರ ಎಲ್ಲೆಡೆ ಮೊಳಗಲು ಕಾರಣವಾಗುತ್ತದೆ. ಮೊಗ್ಗು ಹಿಗ್ಗಿ ತಾನು ಸುಂದರವಾಗಿ ಕಾಣುವುದಲ್ಲದೆ ಗಿಡದ ಸೌಂದರ್ಯವನ್ನು … Read more
ಗುಡವಿ ಪಕ್ಷಿಧಾಮ: ವಸಂತ ಬಿ ಈಶ್ವರಗೆರೆ
ಹಸಿರ ಹಾದಿಯ ಪಯಣ, ಮನ ತಣಿಸುವ ಕಾನನ. ಸವಿಯುತ್ತಾ ಸವಿಯುತ್ತಾ ಮುಂದೆ ಸಾಗಿದರೇ ಮಲೆನಾಡ ಹಬ್ಬಾಗಿಲಿನಲ್ಲಿ ಕೈ ಬೀಡಿ ಕರೆಯುವುದೇ ಗುಡವಿ ಎಂಬ ಪಕ್ಷಿಗಳ ಲೋಕ. ಈ ಪ್ರವಾಸಿ ತಾಣಕ್ಕೆ ಕಾಡಿನ ಮಧ್ಯದ ಹಾದಿಯ ಮೂಲಕ ಸಾಗುತ್ತಾ ಹೋದ ಹಾಗೆ, ಪ್ರವಾಸಿಗರ ಮನ ಮಿಡಿಯುತ್ತದೆ. ತಂಪಾದ ಹಾದಿಯ ಪಯಣ ನಿಮಗೆ ಮುಗಗೊಳಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಸುಮಾರು 23 ಬಗೆಯ ಹಕ್ಕಿಗಳ ಕಲರವದ ತಾಣ ಗುಡವಿ ಪಕ್ಷಿಧಾಮ. 1986 ರಲ್ಲಿ ಜೆ.ಎಚ್.ಪಟೇಲ್ … Read more
ಪಂಜು ಕಾವ್ಯಧಾರೆ
ಪಯಣದಂತ್ಯದೊಳಗೆ !!! ಅಕಸ್ಮಾತ್ತಾಗಿ ನಾನೂ ಏರಿ ಬಿಟ್ಟೆ ಈ ಬಸ್ಸು ಅಯ್ಯೋ.. ಎಷ್ಟು ರಶ್ಶು! ಮೊದಲೆ ಇಷ್ಟೊಂದು ಜನ ತುಂಬಿ ತುಳುಕುತ್ತಾ ಇದ್ದಾರೆ ..!! ಇಳಿಯೋಣವೇ …?? ಇದೇನಿದು.? ಹೆದ್ದಾರಿಯಲಿ ಓಟ ಶುರುವಾಗಿ ಬಿಟ್ಟಿದೆ ಬರೀ ಕತ್ತಲು ಬೆಳಕುಗಳಷ್ಟೆ…. ಯಾವುದೇ ಪರಿಧಿ ಗೋಚರಿಸುತ್ತಿಲ್ಲ ಆದರೂ ನಡುವೆ ಗೋಡೆಯಿದೆಯಂತೆ.! ಮಿಸುಕಾಡಿ ,ತಡಕಾಡಿ ಸರಿಸಿ ,ತುಳಿದು ಮುಂದೆ ಬಂದೆ… ಹ ಹ್ಹ ಹ…ಇಲ್ಲಿಯೂ ಸೀಟುಗಳ ಮೀಸಲಾತಿ ..ಆದರೆ ಕುಳಿತುಕೊಂಡವರು ಯಾರ್ಯಾರೊ..!!!? ಆದರೂ ಈ ರಶ್ಶಲ್ಲಿ ಏನೋ ಸುಖವಿದೆ ,ಮನಕಾನಂದವಿದೆ ಉಪ್ಪಿನಕಾಯಂತೆ … Read more
ಆಯಾಮಗಳು: ಗಿರಿಜಾ ಜ್ಞಾನಸುಂದರ್
ಬೆಳಿಗ್ಗೆ ಸ್ನಾನ ಮುಗಿಸಿ ಬಂದ ಕುಮುದ ಪೂಜೆ ಮಾಡುತ್ತಿದ್ದಳು. ತನ್ನ ಮದುವೆಯ ಮೂರನೇ ವಾರ್ಷಿಕೋತ್ಸವವಾಗಿದ್ದರಿಂದ ಸ್ವಲ್ಪ ವಿಶೇಷವಾದ ಪೂಜೆ ನಡೆಯುತ್ತಿತ್ತು. ಆದ್ರರೇ ಮನಸ್ಸಿನಲ್ಲಿ ಇನ್ನು ಅಡಿಗೆಮನೆಯ ಕೆಲಸ ಮುಗಿಸಿಲ್ಲವಲ್ಲ ಅನ್ನೋ ಯೋಚನೆ ಇತ್ತು. ಚಪಾತಿ ಹಿಟ್ಟು ಕಲಸಿಟ್ಟಿದ್ದೇನೆ. ತರಕಾರಿ ಪಲ್ಯ ಹಾಗು ಚಟ್ನಿ ಮಾಡಿದ್ದಾಗಿದೆ. ಗಂಡನಿಗೆ ಡಬ್ಬಿಗೆ ಹಾಕಿಕೊಡುವ ಕೆಲಸ ತನ್ನದಾದ್ದರಿಂದ, ಮನಸ್ಸು ಪೂಜೆಯಲ್ಲಿ ಪೂರ್ತಿ ಇರಲಿಲ್ಲ. ಜೊತೆಯಲ್ಲಿ ಮಗು ಎದ್ದರೆ ಹೇಗೆ ಸಂಭಾಳಿಸುವುದು ಅನ್ನೋ ಯೋಚನೆ ಬೇರೆ. ಹಾಗಾಗಿ ಪೂಜೆ ಹೆಂಗೋ ಹಂಗೆ ಮಾಡಿ ಸಮಾಧಾನ … Read more
ಮುಟ್ಟು ಮುಟ್ಟಬೇಡಿ: ಪ್ರೇಮಾ ಟಿ ಎಮ್ ಆರ್
ಚಿನಕುರುಳಿಯಂತೆ ಕಚಗುಳಿಯಿಡುವ ಮುಗ್ಧ ಸ್ನೇಹದ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ ಹೊಸ ಕವನ ಸಂಕಲನ 'ಕೋಳ್ಗಂಬ' ಕೈಯಲ್ಲಿ ಹಿಡಿದು ಕಿಟಕಿಯಲ್ಲಿ ತೂರಿಬರುವ ಮಳೆಹನಿಗಳಿಗೆ ಮುಖವೊಡ್ಡಿ ಕೂತಿದ್ದೆ. ಬಾಲ್ಯದ ಗೆಳತಿ ಸುಮಾ ಕರೆಮಾಡಿದಳು. ಕುಶಲೋಪರಿಯ ಸಾಂಪ್ರದಾಯಿಕತೆಯನ್ನೂ ಮರೆತು ನೇರವಾಗಿ ವಿಷಯಕ್ಕೆ ಬಂದಳು. ಮೀಡಿಯಾಗಳಲ್ಲೆಲ್ಲ ಮುಟ್ಟಿಗುಡುವ ಸೆನಿಟರಿ ಪ್ಯಾಡ್ ಗಳ ಮೇಲೆ ಹೇರಿದ ಜಿ ಎಸ್ ಟಿ ಯ ಕುರಿತು ಪರ ವೈರುಧ್ಯ ಅಭಿಪ್ರಾಯಗಳು ವ್ಯಕ್ತವಾಗ್ತಾ ಇದ್ಯಲ್ಲೇ ಅಂದ್ಲು. ಹೂಂ ಅಂದೆ. ಅವಳು ಮುಂದೇನೂ ಮಾತನಾಡದೇ ಮೌನ ಸಾಧಿಸಿದಳು. ಏನಿದೆ … Read more
ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ: ವೈ.ಬಿ.ಕಡಕೋಳ
ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ ಜನಪ್ರೀಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯಿತ್ತವರು, ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ 1509 ರಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ಎಂಬ ಕುರುಬ ಜಾತಿಗೆ ಸೇರಿದ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸು ತಿಮ್ಮಪ್ಪ. ತಣದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ … Read more
ಸುಸಂಸ್ಕೃತ ಭಾರತ ಮತ್ತು ಹೆಣ್ಣು ಭ್ರೂಣ ಹತ್ಯೆ: ನಾಗರೇಖಾ ಗಾಂವಕರ
“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ ಕಂಡಿಲ್ಲ ನಾನಿನ್ನೂ ಬದುಕಿನಾಗಸದ ನೀಲ ಪಚ್ಚೆಯಂಥ ನೆಲ, ಗಾಳಿಯ ಮೃದು ಸ್ಪರ್ಶ ನಾ ಬರಿ ಭ್ರೂಣವಲ್ಲ. ” ಇದು ಹೆಣ್ಣು ಭ್ರೂಣವೊಂದು ತನ್ನ ಒಡಲಲ್ಲಿ ಹೊತ್ತ ತಾಯಿಯೊಂದಿಗೆ ನಡೆಸುವ ಸಂವಾದ. ಖ್ಯಾತ ಕವಯತ್ರಿ ಮಾಲತಿ ಪಟ್ಟಣ ಶೆಟ್ಟಿಯವರ “ಅವ್ವಾ … Read more
ಮೆರಾ ಕುಚ್ ಸಾಮಾನ್ ತುಮ್ಹಾರೇ ಪಾಸ್ ಪಡಾ ಹೈ: ಅನುರಾಧ ಪಿ. ಸಾಮಗ
ನಿನ್ನೂರಿಂದ ನನ್ನೂರ ನಡುವೆ ಹೊತ್ತಿಗೆ ಅವನೂರಲೆರಡು ಹೆಜ್ಜೆಯೂರುವ ಮನಸಾದಾಗ ಮುಸ್ಸಂಜೆಯಿನ್ನೂ ಹುಟ್ಟುತ್ತಿತ್ತು. ಹಸಿರುದಿಬ್ಬ ಬಳಸಿ ಮೇಲೇರುತಿದ್ದ ಕೆಮ್ಮಣ್ಣ ಸಣ್ಣ ಕಾಲ್ದಾರಿಯೊಂದು ಹೊಂಬಣ್ಣದಲಿ ಮುಳುಗೆದ್ದು ಥೇಟ್ ಅವನ ಮುಳುಮುಳು ನಗುವಲಿ ಮಿಂದ ಪರಮದ ಚರಮಕೊಯ್ಯುವ ಕಾಲದೊಂದು ಮಾಯಕದ ತುಂಡಿನಂತೆ ಕಾಣಿಸುತಿತ್ತು.ಆವರೆಗೆ ಪಚ್ಚೆಯೆಂಬುದು ಗೊತ್ತಿತ್ತು; ಸುಮ್ಮನೆ ತೃಪ್ತಿಯುತ್ತುಂಗದಲಿ ಮೈ ಚಾಚಿದವಳ ಹಾಗಿನ, ಎಂಥವರನ್ನೂ ಸೆಳೆದು ಆಮಿಷವೊಡ್ಡುವ ಸುಖದ ಹಸಿಚಿತ್ರದ ಹಾಗಿನ ಅಚ್ಚಪಚ್ಚೆ ಅಲ್ಲೇ ಹಾದಿಯಿಕ್ಕೆಲದಲ್ಲಿ ಕಂಡದ್ದು. ಹೇಳಿಕೇಳಿ ಬೆಟ್ಟಕಣಿವೆಗಳ ಊರದು, ಅದೇ ಹಾದಿ ತುದಿಯಲಿದ್ದಿರಬಹದಾದ ಗುಡಿಯ ಗಂಟೆ ನುಡಿಯುತಿತ್ತು. ಸಾವದೇವನಿಗೊಂದು … Read more
ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ
ನಯನಮನೋಹರಿಯಾದ ಅವಳ ಅಂದ ಚಂದ ನೋಡಿದರೆ ನೋಡುತಲೇ ಇರಬೇಕು ಎನ್ನುವಷ್ಟು ಆಕರ್ಷಕ ಮೊಗದವಳು. ತಲೆಯ ಮದ್ಯಕ್ಕೆ ಬೈತಲೆ ತೆಗೆದ ಮಾರುದ್ದ ಜಡೆಯವಳು.ಕತ್ತು ಆಡಿಸುತ್ತ ಮುತ್ತಿನಂತ ಮಾತುಗಳ ಹಾಡುತಿದ್ದರೆ ಕಿವಿಯ ಓಲೆಗಳು ನರ್ತಿಸುತಲಿರುತ್ತವೆ. ಆ ನರ್ತನ ಕಾಣಲು ನಿಜಕ್ಕೂ ಕಣ್ಗಳ ಪುಣ್ಯವೆ ಸರಿ. ಕಪ್ಪು ಕಾಡಿಗೆ ಬಳಿದ ಆ ಕಣ್ಣುಗಳ ನೋಟದಲ್ಲೂ ಒಂದು ಆಕರ್ಷಣೆ. ನಕ್ಕರೆ ನಾಜೂಕು ಕೆನ್ನೆಯ ಮೇಲೆ ಗುಳಿಯೊಂದು ಮೂಡಿ ಅವಳ ಅಂದವನು ಹೆಚ್ಚಿಸಿ ಎತ್ತಿ ತೋರಿತಲಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಹೊಳೆವ ಹುಣ್ಣಿಮೆಯ ಪೂರ್ಣಚಂದಿರನಂತೆ ಇರುತಿತ್ತು … Read more
ಹಿಮಾಲಯವೆಂಬ ಸ್ವರ್ಗ (ಭಾಗ 7): ವೃಂದಾ ಸಂಗಮ್
ಇಲ್ಲಿಯವರೆಗೆ ಬದರೀಕ್ಷೇತ್ರವು ಉತ್ತರ ಪ್ರದೇಶದ (ಈಗ ಉತ್ತರಾಂಚಲ್) ಚಮೋಲಿ ಜಿಲ್ಲೆಯ ಗಡ್ವಾಲ್ ಪ್ರದೇಶದಲ್ಲಿ ಅಲಕ್ನಂದಾ ನದಿಯ ತೀರದಲ್ಲಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಸುಮಾರು 103೦೦ ಅಡಿ ಎತ್ತರದಲ್ಲಿದ್ದು, ಊರು ಹಾಗೂ ದೇವಾಲಯದವರೆಗೂ ವಾಹನ ಚಲಿಸುವ ರಸ್ತೆಯಿದೆ. ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳು ಈ ಕಣಿವೆ ಪ್ರದೇಶದ ಕಾವಲುಗಾರರಂತೆ ನಿಂತಿವೆ. ಹಿನ್ನೆಲೆಯಲ್ಲಿ 215೦೦ ಅಡಿ ಎತ್ತರದ ಘನ ಗಾಂಭೀರ್ಯ ನೀಲಕಂಠ ಪರ್ವತ ತನ್ನ ತಲೆ ಮೋಡಗಳಲ್ಲಿ ಮುಚ್ಚಿಕೊಂಡು ನಿಂತಿದೆ. ದೇವಾಲಯದ ಮುಂದೆ ಕೊರೆಯುವ ಅಲಕ್ನಂದ … Read more
ಬಂಡಾಯದ ಪ್ರತಿಬಿಂಬದಂತಿರುವ “ಶಬರಿಯರು” ಕೃತಿ: ದಂಡಿನಶಿವರ ಮಂಜುನಾಥ್
ಕವಿ, ಕಥೆಗಾರ, ನಾಟಕಕಾರ ಹಡವನಹಳ್ಳಿ ವೀರಣ್ಣಗೌಡರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತರು. ಇವರ ಹೊಸಸೃಷ್ಟಿ ‘ಶಬರಿಯರು’ ಕವನ ಸಂಕಲನದ ಬಗ್ಗೆ ಹೇಳಬೇಕೆಂದರೆ ಇಲ್ಲಿನ ಕವಿತೆಗಳಲ್ಲಿ ಕವಿಯು ವರ್ತಮಾನದ ಜಟಿಲತೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ಸಾಲುಗಳು ಸರಳವಾಗಿದ್ದರೂ ಕವಿತೆಗಳು ಹತ್ತು ಹಲವು ಭಾವಗಳನ್ನ ಧ್ವನಿಸುತ್ತವೆ. ಸಂಕಲನದಲ್ಲಿರುವ ಕವಿತೆ, ಕಥನಕಾವ್ಯ ಮತ್ತು ವಚನ ಪ್ರಾಕಾರಗಳಲ್ಲಿ ಒಂದು ವಿಭಿನ್ನತೆಯನ್ನು ಗುರುತಿಸಬಹುದಾಗಿದೆ. ‘ಶಬರಿಯರು’ ಸಂಕಲನದಲ್ಲಿರುವ ಕೆಲವು ಕವಿತೆಗಳು ಸಾಮಾಜಿಕ ನ್ಯಾಯದ ಹಕ್ಕೊತ್ತಾಯದ ಜೊತೆಗೆ ದಲಿತ-ಬಂಡಾಯದ ಪ್ರತಿಬಿಂಬಗಳಂತೆ ಗೋಚರಿಸುತ್ತವೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ … Read more
ಮೇರು ವಿಮರ್ಶಕ- ರಾಷ್ಟ್ರಕವಿ ಕುವೆಂಪು ಮತ್ತು ಅವರ ವಿಮರ್ಶಾ ವೈಶಿಷ್ಟ್ಯತೆ: ಡಾ. ಹನಿಯೂರು ಚಂದ್ರೇಗೌಡ
ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವದಲ್ಲಿ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ, ಅಧ್ಯಾತ್ಮ ಜ್ಯೋತಿಯ ವಿಷಯದಲ್ಲಿ ಅಚಲಶ್ರದ್ಧೆ, ವಿಭೂತಿಪೂಜೆಯಲ್ಲಿ ನಿಷ್ಠೆ, ಸಾಹಿತ್ಯದ ಪರಮಪ್ರಯೋಜನದಲ್ಲಿ ಪೂರ್ಣವಿಶ್ವಾಸ, ಪ್ರಕೃತಿಯ ಬಹುಮುಖ ವಿನ್ಯಾಸದಲ್ಲಿ ಒಂದು ಆತ್ಮೀಯತೆ, ಭವ್ಯತೆಯ ಅನುಭವದಲ್ಲಿ ಭಕ್ತಿ, ಜೀವನದಲ್ಲಿ ಧರ್ಮದ ಮೂಲಭೂತ ಅಗತ್ಯವನ್ನು ಒಪ್ಪುವ ಮನೋಧರ್ಮ, ಜನತೆಯ ಉದ್ಧಾರಕ್ಕಾಗಿ ಹಂಬಲಿಸುವ ಚೇತನ, ಆತ್ಮಸಾಕ್ಷಾತ್ಕಾರದ ಲಕ್ಷ್ಯ-ಇವೆಲ್ಲವೂ ಒಂದು ಸುಂದರ ಪಾಕದಲ್ಲಿ ಸಮರಸವಾಗಿ ಏಕತ್ರಗೊಂಡಿವೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಟ್ಯಾಗೋರ್, ಶ್ರೀಅರವಿಂದ, ರಮಣಮಹರ್ಷಿ, ಗಾಂಧೀಜಿ-ಇನ್ನಿತರೆ ಭಾರತೀಯ ಮಹಾತ್ಮರ ವಿಚಾರಗಳಿಂದ ಭಾವಿತವೂ ಪ್ರಭಾವಿತವೂ … Read more
ಮುಖವಾಡ ಕಳಚಿದಾಗ: ಅಮುಭಾವಜೀವಿ
ವ್ಯಕ್ತಿ ಹಾಗೂ ವ್ಯಕ್ತಿತ್ವದ ಮುಖವಾಡಗಳು ಕಳಚುವ ಕಾಲದ ನಂಬಿಕೆಯ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿರುತ್ತದೆ. ನಾವು ನಮಗಿಂತಲೂ ಹೆಚ್ಚು ನಂಬಿಕೆಯಿಟ್ಟ ಮನುಷ್ಯ ನಮ್ಮ ನಂಬಿಕೆಗೆ ಅರ್ಹನಲ್ಲ ಎಂದು ತಿಳಿದಾಗ ನಮ್ಮ ಮೇಲೆ ನಮಗೆ ಜಿಗುಪ್ಸೆಯಾಗುತ್ತದೆ. ಮಾನವ ಸಂಘಜೀವಿ .ಇಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇನ್ನೊಬ್ಬರ ಅವಶ್ಯಕತೆ ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಒಂಟಿ ಬದುಕು ಅಷ್ಟು ಸುಲಭವಲ್ಲ. ನೀರು ಆಹಾರ ಬಟ್ಟೆ ಮೈಥುನ ಸುಖದುಃಖ ನೋವುನಲಿವುಗಳನ್ನು ಹಂಚಿಕೊಳ್ಳಲು ಇನ್ನೊಬ್ಬರ ಸಹಾಯವನ್ನು ನಾವು ಯಾಚಿಸಲೇಬೇಕು. ನೀರು ಸ್ವಾಭಾವಿಕ ಆದರೂ ಅದನ್ನು ತಂದುಕೊಡಲು … Read more
ಒಳ್ಳೆಯ ಚಿಂತನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ.
" ಒಳ್ಳೆಯತನವೇ ಸಂಸ್ಕೃತಿಯ ಸಾರ " ಶ್ರೀನವರತ್ನ ರಾಮರಾವ್. ಒಳ್ಳೆಯ ವಿಚಾರಗಳು ಎಂದರೆ ಯಾವ ಜೀವಿಗಳಿಗೂ ತೊಂದರೆ ಮಾಡದೆ ಆದಷ್ಟು ಅನುಕೂಲ, ಸಹಾಯ ಮಾಡುವ ವಿಚಾರಗಳು, ಚಿಂತನೆಗಳು, ನಡೆಗಳು. ಏನನ್ನು ಚಿಂತಿಸುತ್ತೇವೋ ಅದನ್ನು ಮಾಡಲು ಮುಂದಾಗುತ್ತೇವೆ. ಒಳ್ಳೆಯ ಚಿಂತನೆಗಳು, ವಿಚಾರಗಳು ಒಳಿತನ್ನುಂಟು ಮಾಡಿಸುತ್ತವೆ. ಕೀರ್ತಿ ತರುತ್ತವೆ. ಕೆಟ್ಟ ವಿಚಾರಗಳು, ಚಿಂತನೆಗಳು ಕೆಡುಕನ್ನುಂಟು ಮಾಡಿಸುತ್ತವೆ. ಅಪಕೀರ್ತಿಯನ್ನು ಹರಡುತ್ತವೆ. ಆದ್ದರಿಂದ ಏನನ್ನು ನುಡಿಯಬೇಕು ಹೇಗೆ ನಡೆಯಬೇಕು ಯಾವ ಕೀರ್ತಿ ಸಂಪಾದಿಸಬೇಕು ಎಂಬುದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿರುತ್ತದೆ. ಅವರವರ ವ್ಯಕ್ತಿತ್ವವನ್ನು ಅವರವರ … Read more
ಪಂಜು ಕಾವ್ಯಧಾರೆ
ಕಾಗದದ ನಾವೆ ತೇಲಿ ಬಿಟ್ಟಿವೆ ದೋಣಿಗಳ ಪುಟ್ಟ ಕನಸು ಕೈಗಳು ತೇಲಿ ಸಾಗಿದಷ್ಟೂ ಹರುಷ ಕಂಗಳಲಿ ಪ್ರತಿಫಲಿಸುವ ತಿಳಿನೀರು ಗಾಳಿಗೆ ಹೊಯ್ದಾಡುತ್ತ ಸಾಗುತಿವೆ ಕಾಗದದ ನಾವೆಗಳು ಅರಿಯದ ಗುರಿಯೆಡೆಗೆ ಹೊಳೆಯ ಹರಿವಿನೆಡೆ ಮೌನ ಪಯಣ ಅಂದು ನಾನೂ ಕಳಿಸಿದ್ದೆ ದೋಣಿಗಳ ಹೊಳೆಗುಂಟ ಸಾಗಿ ಅದರ ಹಿಂದಿಂದೆ ಕಲ್ಲುಗಳ ತಡವಿ ಗಿಡಗಂಟಿಗಳ ದಾಟಿ ದೂರ ದೂರ ಯಾನ ಕೆಲವು ಮುಳುಗಿ ಕೆಲವು ತೇಲಿ ಕಣ್ ಹಾಯ್ದಷ್ಟು ದೂರ ನೋಡಿ ಮತ್ತಷ್ಟು ದೋಣಿಗಳು ಹೆಗಲ ಚೀಲದಲ್ಲಿ ನಾಳೆಯ ಪಯಣಕೆ ಸಜ್ಜಾಗಿ … Read more
ನಿರ್ಧಾರ!: ಎಸ್.ಜಿ.ಶಿವಶಂಕರ್
ಕೊನೆಗೂ ಸದಾನಂದರು ನಿರ್ಧಾರ ತೆಗೆದುಕೊಂಡುಬಿಟ್ಟಿದ್ದರು. ಯಾವುದಕ್ಕಾಗಿ ಮೂವತ್ತು ವರ್ಷಗಳಿಂದ ಹಿಂಜರಿಯುತ್ತಿದ್ದರೋ ಅದನ್ನಿಂದು ಹತ್ತಿಕ್ಕಿದ್ದರು! ಜೀವನದಲ್ಲಿ ಎಂದೂ ತೆಗೆದುಕೊಳ್ಳದ ಮಹತ್ವದ ನಿರ್ಧಾರವನ್ನು ಸದಾನಂದರು ತೆಗೆದುಕೊಂಡಿದ್ದರು. ಅವರ ನಿರ್ಧಾರ ಯಾವ ಸ್ವರೂಪದ್ದು ಎಂಬುದರ ಕಲ್ಪನೆ ಮನೆಯವರಿಗೆ ಇರಲಿಲ್ಲ; ಶ್ಯಾಮಲೆಗೂ ಇರಲಿಲ್ಲ. ಹಾಗೇನಾದರೂ ಗೊತ್ತಾಗಿಬಿಟ್ಟಿದ್ದರೆ ಅವರ ಕಣ್ಣಿನಲ್ಲಿ ಸದಾನಂದರು ಏಕದಂ ವಿಲನ್ ಅಗಿಬಿಡುತ್ತಿದ್ದರು. ಎಲ್ಲರೂ ಹಿಡಿಹಿಡಿ ಶಾಪ ಹಾಕುತ್ತಿದ್ದುದರಲ್ಲಿ ಸಂದೇಹವೇ ಇರಲಿಲ್ಲ. ಇವೆಲ್ಲಾ ಸದಾನಂದರಿಗೆ ಗೊತ್ತಿತ್ತು. ಅದಕ್ಕೇ ಇಷ್ಟು ವರ್ಷ ಅದನ್ನೆಲ್ಲ ಒಳಗೇ ಹಿಡಿದಿಟ್ಟಿದ್ದರು. ಮೂವತ್ತು ವರ್ಷಗಳಿಂದ ಯಾವುದಕ್ಕೆ ಹಿಂದೇಟು ಹಾಕುತ್ತ … Read more
ಹಾಗೇ ಸುಮ್ಮನೆ ಅವನಿಗೊಂದಷ್ಟು ಅವಳ ಮಾತುಗಳು: ಅನುರಾಧ ಪಿ. ಸಾಮಗ
ಬಿರುಸಾದ ಗಾಳಿ. ಹಿತವೂ ಅಲ್ಲದ ಅಹಿತವೂ ಅಲ್ಲದ ಶೈತ್ಯ. ಬಿಸಿಲ ಸುಳಿವೇ ಇಲ್ಲದೊಂದು ಹಗಲು. ಸುತ್ತಲಿನ ಸಂಬಂಧಗಳ ಸಂತೆಯಲ್ಲಿ ನನ್ನ ಇರುವಿಕೆ ಮತ್ತದರ ಮೌನ, ಆಪ್ತತೆಯೆಡೆ ನನದೊಂದು ವಿಚಿತ್ರ ಉದಾಸೀನ ಇವೆಲ್ಲವೂ ನಿಜವಾಗಲೂ ಜಾಡ್ಯಕ್ಕೋ, ಮಂಪರಿಗೋ ಎಡೆ ಮಾಡಿಕೊಡಬೇಕಾಗಿತ್ತು. ಆದರೆ ಇಂದು ಮನದಲ್ಲಿ ಹುಡುಕಿದರೂ ಅಸಹನೀಯವಾದದ್ದಕ್ಕೆ ಒಂದಿಷ್ಟೂ ಜಾಗವಿಲ್ಲ. ಯಾಕಿರಬಹುದು?! ಕ್ಷಣಕ್ಕೊಂದಷ್ಟರಂತೆ ಹಲವು ವಿಷಯಗಳು ಮನಃಪಟಲದಲ್ಲಿ ಹಾದುಹೋದವು. ಆದರೆ ಮುಚ್ಚಿದ ಕಣ್ಣ ಮುಂದಿದ್ದುದೊಂದೇ ಅಸ್ಪಷ್ಟ ಬಿಂಬ, ಅದು ನಿನ್ನದು. ಸುಂದರಸ್ವಪ್ನವಾಗಬಹುದಾದದ್ದು ಎಷ್ಟು ಹೊತ್ತಿಗೆ ಮುಗಿದೀತೋ ಅನ್ನುವ ಭಯಂಕರ … Read more
ಪೌರಾಣಿಕ ಸ್ತ್ರೀ ಪಾತ್ರಗಳಲ್ಲಿ ಸ್ತ್ರಿ ಶೋಷಣೆಯ ವಿರುದ್ಧ ಕಹಳೆ: ನಾಗರೇಖಾ ಗಾಂವಕರ
ಜಗತ್ತು ಬದಲಾಗುತ್ತಿದೆ. ಬದಲಾಗುತ್ತಿರುವ ವೈವಸ್ಥೆಯಲ್ಲಿ ಕಾಲಚಕ್ರದ ಒಂದು ಸುತ್ತು ಈಗಾಗಲೇ ಸುತ್ತಿಬಂದಂತಾಗಿದೆ. ಆಧುನಿಕ ಮೂರನೇ ಜಗತ್ತಿನ ಸ್ತ್ರೀಯರು ಪುರಾಣ ಪಾತ್ರಗಳ ಆದರ್ಶ ಪ್ರತಿರೂಪಗಳ ಧರಿಸಬಯಸುವುದಿಲ್ಲ. ಹಾಗಿದ್ದು ಇಂದಿನ ಪುರುಷ ವಿರಚಿತ ಸಾಹಿತ್ಯದಲ್ಲಿಯೂ ಸ್ತ್ರೀ ಪಾತ್ರಗಳು ಉನ್ನತ ಮೌಲ್ಯಗಳ ಪ್ರತಿಬಿಂಬಿಸುವ ಪಾತ್ರಗಳಾಗಿ ತನ್ನ ತ್ಯಾಗದಿಂದ ಇತರರ ಉದ್ದರಿಸುವ ಅಪರೂಪದ ದೇವತಾ ಸ್ವರೂಪದ ಪ್ರತಿಮೆಗಳಾಗಿ ಮೂಡಿಬರುತ್ತಲೇ ಇವೆ. ಪ್ರಾಚೀನ ಪರಂಪರೆಯಲ್ಲಿ ಹೆಣ್ಣನ್ನು ದೇವತೆಯಾಗಿಸಿ, ಶಕ್ತಿಯ ಪ್ರತೀಕವಾಗಿಸಿ ಚಿತ್ರಿಸಿದ ಹತ್ತು ಹಲವು ಪಾತ್ರಗಳೂ ಇವೆ. ತನ್ನ ಸಹನೆಗೆ, ಹೆಸರಾದ ಹೆಣ್ಣು ಆತ್ಮಾಭಿಮಾನಕ್ಕೆ … Read more