ಪೋಷಕಾಂಶಗಳೇ ಅಲ್ಲದ ನಾರು ನೀರಿಗೇಕೆ ಅಷ್ಟು ಪ್ರಾಮುಖ್ಯತೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಆಹಾರದ ಘಟಕಗಳು ಎಂದು ಕರೆಯುವ ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು, ವಿಟಮಿನುಗಳು, ಲಿಪಿಡ್ ಗಳು, ಖನಿಜಗಳನ್ನು ಜೀವಿಯ ಪೋಷಕಾಂಶಗಳು ಎನ್ನುತ್ತೇವೆ. ಏಕೆಂದರೆ ಇವು ಜೀವಿಗಳನ್ನು ಪೋಷಿಸುತ್ತವೆ. ಜೀವಿ ಬೆಳೆಯಲು, ಅದರ ಸರ್ವಾಂಗಗಳು ವೃದ್ದಿಸಲು, ಜೀವಿ ಸದಾ ಚಟುವಟಿಕೆಯಿಂದ ಕೆಲಸಮಾಡುವಂತಾಗಲು, ಜೈವಿಕ ಚಟುವಟಿಕೆ ನಡೆಸಲು ಅವಶ್ಯಕ! ನಾರು, ನೀರು ಇವು ಸಹ ಆಹಾರದ ಘಟಕಗಳೇ ಆದರೂ ಪೋಷಕಾಂಶಗಳೇ ಅಲ್ಲ! ಅವು ದೇಹದ ಬೆಳವಣಿಗೆಗಾಗಲಿ, ಅಂಗಾಗಗಳ ವೃದ್ದಿಗಾಗಲಿ ಪೂರಕಗಳಲ್ಲ! ಆದರೆ ಅವಿಲ್ಲದೆ ಪೋಷಕಾಂಶಗಳು ದೇಹಗತವಾಗುವುದಿಲ್ಲ! ಅಷ್ಟೇ ಅಲ್ಲ ಜೀವಿಯ ಯಾವ ಕ್ರಿಯೆಗಳು  ನಡೆಯುವುದಿಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ಕು ವೇದಗಳೊಂದಿಗೆ ಐದನೇ ನಾಟ್ಯವೇದ: ಕೆ.ಪಿ.ಎಂ. ಗಣೇಶಯ್ಯ

ಎಲ್ಲವನ್ನೂ ತಿಳಿದ ನಾವು ನಮ್ಮ ತನುವನ್ನ ಬಿಟ್ಟು ಕೊಡುವುದಿಲ್ಲವೇಕೆ.? ಅಪ್ಪ ಹಾಕಿದ ಆಲದ ಮರವಿದೆ. ಬೇಕಾದ ರೀತಿಯಲ್ಲಿ, ಬೇಕಾದ ಹಾಗೆ ಬದುಕು ಕಂಡುಕೊಂಡ ಎಷ್ಟೋ ಜೀವಿಗಳು ನಮ್ಮ ಕಣ್ಣ ಮುಂದಿವೆ. ಹಾಗಂತ ಎಲ್ಲರನ್ನೂ ದೂಷಿಸಲು ಬರುವುದಿಲ್ಲ. ಕೆಲವರಾದರೂ ತಮ್ಮ ಕುಟುಂಬದ ಘನತೆಗೆ ತಕ್ಕಂತೆ “ಪರೋಪ ಕಾರ್ಯಾರ್ಥಂ ಮಿದಂ ಶರೀರಂ” ಎನ್ನುವ ಹಾಗೆ ಪರೋಪ ಕಾರ್ಯದಲ್ಲಿ ತೊಡಗಿರುವವರು ಎಷ್ಟೋ ಜನ..? ನಮ್ಮಷ್ಟಕ್ಕೇ ನಾವು ಅಂದುಕೊಂಡು ಇತರರನ್ನೂ ಕಡೆಗಣಿಸಿ ತಮ್ಮಿಷ್ಟದಂತೆ ಬದುಕು ನಡೆಸಿಕೊಂಡು ಹೋದರಾಯ್ತು ಎಂಬುವವರಿಗೆ ನಮ್ಮ ದೇಶದಲ್ಲೇನೂ ಕೊರತೆಯಿಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಭ್ಯಾಗತ 2 ಕನ್ನಡ ಕಿರುಚಿತ್ರ

ಡೈರೆಕ್ಷನ್, ಕಥೆ, ಚಿತ್ರಕಥೆ, ಸಂಭಾಷಣೆ: ಮಂಜು ಎಂ ದೊಡ್ಡಮನಿ ಕ್ಯಾಮರಾ : ಶಶಾಂಕ್ ಮೈಸೂರು ಮತ್ತು ಶಶಿ.ಬಿ.ಈಶ್ವರಗೆರೆ ಸಂಕಲನ & ಗ್ರಾಫಿಕ್ಸ್ : ದರ್ಶನ್ ದೊಡ್ಡಮನಿ ಸಂಗೀತ : ಹರೀಶ್ ಮೈಸೂರು ನಿರ್ಮಾಣ & ನಿರ್ವಹಣೆ : ಶ್ರೀಹರ್ಷ ಹುಣಸೂರ್ ಪತ್ರಿಕ ಪ್ರಚಾರ : ವಸಂತ್ ಬಿ ಈಶ್ವರಗೆರೆ ಕಲಾವಿದರು :  ಟಿ.ಜಿ.ನಂದೀಶ್ ಮೇಘನ ಚತುರೆ ಬೇಬಿ.ರಿಷಿತಾ ಮಂಜು ಎಂ ದೊಡ್ಡಮನಿ ನಾಯ್ಕಲದೊಡ್ಡಿ ಚಂದ್ರಶೇಖರ್ ರಾಘವೇಂದ್ರ ಎಚ್ ಇ ಗಿರೀಶ್ (ಜೆಕೆ) ಶ್ರೀಹರ್ಷ ಹುಣಸೂರು ಸುನೀಲ್ ಶಶಿ.ಬಿ.ಈಶ್ವರಗೆರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನಿಲ್ಲದೆ…..!!: ವೆಂಕಟೇಶ ಚಾಗಿ

ಅಂತೂ ಈ ವರ್ಷದ ಫೆಬ್ರುವರಿ ೧೪ ಮರೆಯಾಯ್ತು. ಪ್ರತಿ ವರ್ಷದ ಹಾಗೆ ನನ್ನ ನಿರೀಕ್ಷೆ ಹುಸಿಯಾಯ್ತು. ಅದೆಷ್ಟೋ ದಿನಗಳಾದವು ನಿನ್ನ ದ್ವನಿ ಕೇಳಿ. ಈ ದಿನ ಬಂದಿತೆಂದರೆ ಸಾಕು ಅದೆಷ್ಟು ಸಂತಸ ನಿನಗೆ. ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಮತ್ತೆ ಮತ್ತೆ ಆ ನಿನ್ನ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದೇಗೋ ನನ್ನ ನಿನ್ನ ನಡುವೆ ಸ್ನೇಹ ಬೆಳೆಯಿತು. ಸ್ನೇಹ ವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಅಂತರ್ವಾಣಿ’ 6ನೆಯ ಆವೃತ್ತಿಗೆ ಸಂಶೋಧನ ಲೇಖನಗಳ ಆಹ್ವಾನ

ಕನ್ನಡ ಸಾಹಿತ್ಯ ಮತ್ತು ಸಮಾಜ ವಿಜ್ಞಾನ (ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವಿಷಯಗಳ ಸಂಶೋಧನ ಲೇಖನಗಳನ್ನು ಪ್ರಕಟಿಸುವ ಸಲುವಾಗಿ ‘ಅಂತರ್ವಾಣಿ’ ಪುಸ್ತಿಕೆಯ 6ನೆಯ ಆವೃತ್ತಿಗೆ ಸಂಶೋಧಕರ ಲೇಖನಗಳಿಗೆ ಆಹ್ವಾನ ನೀಡಲಾಗಿದೆ. ಲೇಖನಗಳನ್ನು ISಃಓ ಸಂಖ್ಯೆಯ ಪುಸ್ತಿಕೆಯಲ್ಲಿ ಪ್ರಕಟಿಸಲಾಗುವುದು. ಈಗಾಗಲೇ ಯಶಸ್ವಿಯಾಗಿ ಅಂತರ್ವಾಣಿ ಪುಸ್ತಿಕೆಯ ಆರು ಆವೃತ್ತಿಗಳು ಪ್ರಕಟವಾಗಿವೆ. ಈ ನಮ್ಮ ಯಶಸ್ಸಿಗೆ ನಾಡಿನ ಸಮಸ್ತ ಯುವ, ಹಿರಿಯ ಸಂಶೋಧಕರು ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲಗಳನ್ನು ನೀಡಿದ್ದಾರೆ. ಅವರ ಉತ್ತಮ ಪ್ರತಿಕ್ರಿಯೆಯನ್ನು ಸ್ಮರಿಸುತ್ತ, ಕೃತಜ್ಞರಾಗಿ 6ನೆಯ ಆವೃತ್ತಿಗೆ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಆರದಿರಲಿ‌ ಬೆಳಕು ಒಲೆ ಉರಿಸುವುದು ಕಲೆಯೇ… ಬಲು ತಾದ್ಯಾತ್ಮಕತೆಯ ಅಲೆ ಮೆಲ್ಲನೆ ಕಡ್ಡಿ ಗೀರಿ ಇನ್ನೂ ಮೆಲ್ಲನೆ ಬೆಂಕಿ ನೀಡಿ ಉಸಿರ ಸಾರ ಹೀರಿ ಚಿಕ್ಕದಾಗಿ ಪೇರಿಸಿಟ್ಟ – ಗರಿ ಗರಿ ಕಾಯಿ ಸಿಪ್ಪೆ ಚಿಕ್ಕ ಚಿಕ್ಕ ಸೌದೆ ಚೂರು ಇದಕ್ಕೆಲ್ಲ ಕಿಚ್ಚು ಹಿಡಿಸಬೇಕೆಂದರೆ ಬೆಂಕಿ ತಲ್ಲೀನತೆಯ ಬೇಡುತ್ತದೆ ತಾಳ್ಮೆ ಪರೀಕ್ಷಿಸುತ್ತದೆ! ಈ ಕಲೆಯ ಅಸ್ಮಿತೆ ಉಳಿಸಲಿಕೋಸ್ಕರ ಏನೇನೆಲ್ಲ ಮಾಡಬೇಕಿದೆ… ಕಣ್ತುಂಬ ನೀರು ತಂದು ಕೊಳವೆ ತುಂಬ ಗಾಳಿ ಊದಿ ಸುರುಳಿ ಸುರುಳಿ ಹೊಗೆಯ ಹೊದೆದು ಬೂದಿಯೊಳಗಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೇಷ್ಮೆ ಸೀರೆ: ಅಶ್ಫಾಕ್ ಪೀರಜಾದೆ

-1- ಅನುದಾನ ರಹಿತ ಖಾಸಗೀ ಶಾಲೆಯೊಂದರ ಸಹ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ 40 ವಯದ ಅನಂತನದು ಸುಂದರ ಸಂಸಾರ. ಮಗ ಅಮೀತ ಓದಿನಲ್ಲಿ ಜಾಣ ಅನ್ನುವ ಕಾರಣಕ್ಕೆ ನಗರದ ಪ್ರತಿಷ್ಠಿತ ಕಾಲೇಜವೊಂದರಲ್ಲಿ ಪಿ ಯು ವಿಜ್ಞಾನ ಓದುತ್ತಿದ್ದಾನೆ. ಮಗಳು ಮಯೂರಿ ಕೂಡ ಜಾಣ ವಿದ್ಯಾರ್ಥಿನಿ, ಎಂಟನೇಯ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಈ ಸಣ್ಣ ವಯಸ್ಸಿನಲ್ಲಿ ಭರತ ನಾಟ್ಯದಲ್ಲಿ ಹೆಸರು ಮಾಡುತ್ತಿರುವ ಅಪರೂಪದ ಉದಯೋನ್ಮುಖ ಪ್ರತಿಭೆಯೂ ಹೌದು. ಇವಳು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಿಯುತ್ತಿರುವ ಶಾಲೆಗೆ, ಹುಟ್ಟಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ: ಡಿ ಜಿ ನಾಗರಾಜ ಹರ್ತಿಕೋಟೆ

ನನ್ನೆಲ್ಲಾ ಕೊರತೆಗಳ ನೀಗಿಸಿಬಿಡು. ನಿನ್ನ ಕಣ್ಣಲ್ಲೊಂದು ಪುಟ್ಟ ಹಣತೆಯಿದೆ ನನ್ನೆಲ್ಲಾ ಕನಸುಗಳ ಬೆಳಗಿಬಿಡು. ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ ನನ್ನೊಳಗೊಳಗೆ ಪ್ರೀತಿಯ ಪದಗಳ ಪಯಣ. ಅದೆಂತಾ ಅಮೃತಘಳಿಗೆಯೊ ನಾ ತಿಳಿಯೆ ! ಸಂಬಂಧಿಯ ಮದುವೆಮನೆಯಲ್ಲಿ ಲಂಗ ದವಣಿ ತೊಟ್ಟು, ಮಲ್ಲಿಗೆ ಮುಡಿದು ಉತ್ಸಾಹದಿಂದ ನಲಿದಾಡುತ್ತಿದ್ದ ನಿನ್ನ ನೋಡಿದಾಕ್ಷಣವಂತೂ ಮನಸ್ಸು ಪ್ಯಾರಾಚ್ಯೂಟನಂತಾಗಿಬಿಟ್ಟಿತ್ತು. ಹಸಿಹಸಿ ಹೃದಯದಲಿ ನೀನಿಟ್ಟ ಮೊದಲ ಹೆಜ್ಜೆಗುರುತದು. ನಿನ್ನ ಕಣ್ಣಂಚಿನ ಕುಡಿನೋಟಕ್ಕಾಗಿ,ಮಂದಹಾಸಕ್ಕಾಗಿ ಅದೆಷ್ಟು ಕಾತರಿಸಿದೆನೊ. ನೀ ಸೂಸಿದ ಮಲ್ಲಿಗೆಯ ಮನಸ್ಸಿನ ಘಮದ ಪರಿಮಳ ಮನದಂಗಳದಲ್ಲೆಲ್ಲಾ ಸೂಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾಣಸುದ್ದಿ 17: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾನವನ ಅಗತ್ಯತೆಗೆ ಅಣುಶಕ್ತಿ: ಎಸ್.ಎಚ್.ಮೊಕಾಶಿ

ಮಾನವನು ತನ್ನ ದೈನಂದಿನ ಅಗತ್ಯತೆಗಳ ಪೂರೈಕೆಗಾಗಿ ಹಲವಾರು ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲವಾಗಿ ಅಣುಶಕ್ತಿಯ ಸಂಶೋಧನೆಯಾಯಿತು. ಇದನ್ನು ಹಲವಾರು ರೂಪಗಳಿಗೆ ಪರಿವರ್ತಿಸಿ ವಿವಿಧ ರೀತಿಯಲ್ಲಿ ಬಳಸಲು ಯೋಜಿಸಲಾಯಿತು. ಮಾನವನ ಕೆಲವು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಣುಶಕ್ತಿಯು ಕಳೆದ ಹಲವು ದಶಕಗಳಿಂದ ಒಂದು ಪರ್ಯಾಯ ಶಕ್ತಿಯಾಗಿ ಉದ್ಭವಿಸಿದೆ. ಇದು ಸೂರ್ಯನಿಂದ ಪಡೆಯದಿರುವ ಏಕಮಾತ್ರ ಶಕ್ತಿಯ ರೂಪವಾಗಿದೆ. ಪರಮಾಣು ಬೀಜಗಳಲ್ಲಿ ಅಡಗಿರುವ ಬೈಜಿಕ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಿರುವುದು ಮಾನವನ ದೊಡ್ಡ ವೈಜ್ಞಾನಿಕ ಸಾಧನೆಗಳಲ್ಲಿ ಒಂದಾಗಿದೆ.  ಅಣುಶಕ್ತಿಯು ಪರಮಾಣುವಿನ ಬೀಜವು ಪ್ರೋಟಾನ್ ಮತ್ತು ನ್ಯುಟ್ರಾನ್‍ಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ. ಮಹೇಂದ್ರ ಎಸ್ ರವರ ಕವನ ಸಂಕಲನ ‘ಬೇವರ್ಸಿಯ ಬಯೋಡೇಟಾ’

ಡಾ.ಮಹೇಂದ್ರ ಎಸ್ ರವರ “ಪ್ರೇಮ-ಪ್ರಣಯ-ಪರಿತಾಪದ” ಪದ್ಯಗಳನ್ನೊಳಗೊಂಡ ಮೊದಲ ಕವನ ಸಂಕಲನ  ‘ಬೇವರ್ಸಿಯ ಬಯೋಡೇಟಾ’ ಕೊಳ್ಳಲು ಲಭ್ಯವಿರುತ್ತದೆ. ಪುಸ್ತಕ ಬೇಕಾಗಿದ್ದಲ್ಲಿ ಕೆಳಗೆ ತಿಳಿಸಿರುವ ಮೊಬೈಲ್ ನಂಬರ್ ಮುಖಾಂತರ ಡಾ. ಮಹೇಂದ್ರ ರವರನ್ನು ಸಂಪರ್ಕಿಸಿ. ಪುಸ್ತಕದ ಬೆಲೆ -80 ರೂ ಅಂಚೆ ವೆಚ್ಚ ಸೇರಿ – 100 ಡಾ.ಮಹೇಂದ್ರ ಎಸ್ 8431110644 7019000940 Mode of payment Phone pe/ google pay (8431110644) Or Mahendra s Acc no: 33592817750 SBI anekal branch IFSC : SBIN0016765 ಕನ್ನಡದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳನ್ನು ಕೇವಲ ಮುದ್ದುಮಾಡಿ ಬೆಳೆಸಬೇಡಿ ಮೌಲ್ಯಗಳನ್ನೂ ಬೆಳೆಸಿ: ಶ್ರೀ ಜಗದೀಶ ಸಂ.ಗೊರೋಬಾಳ

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತು ಸತ್ಯವಾದರೂ ಇಂದಿನ ಮಕ್ಕಳಿಗೆ ನಾವು ಅವರಿಗೆ ಮುಂದೆ ಬೇಕಾಗುವುದನ್ನು ಕೊಡಬೇಕು ಅಲ್ವಾ? ಕೇವಲ ಸಸಿನಟ್ಟು ಅದರ ಫಲಕ್ಕೆ ಆಸೆಪಟ್ಟರೆ ಹೇಗೆ? ಅದನ್ನು ದಿನಂಪ್ರತಿ ನೀರು ಗೊಬ್ಬರ ಹಾಕಿ ಪೋಷಿಸಿದಾಗ ಮುಂದೊಮ್ಮೆ ಅದರಿಂದ ಫಲ ನಿರೀಕ್ಷಿಸಬಹುದು. ಹಾಗೆಯೇ ನಮ್ಮ ಶಾಲಾ ಮಕ್ಕಳನ್ನು ಬೆಳೆಸಬೇಕಿದೆ. ಮಕ್ಕಳ ಬಗ್ಗೆ ಹಲವು ಶಿಕ್ಷಕರ ಅಭಿಪ್ರಾಯಗಳು ಹೀಗಿರಲೂಬಹುದು : “ಇಂದಿನ ಮಕ್ಕಳಿಗೆ ಹಿರಿಯರೆಂದರೆ ಗೌರವವೇ ಇಲ್ಲ”, “ನನ್ನ ಕ್ಲಾಸ್ ಮಕ್ಕಳು ಹಾಳಾಗಿವೆ!”, “ನಾನು ಎಷ್ಟ್ ಅರಚಿದರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತಿಗೂ ಮನಸ್ಸಿಗೂ ಮೌನಯುದ್ಧ ಆರಂಭವಾಗಿದೆ: ಜ ಹಾನ್ ಆರಾ

ವಾರದ ಹಿಂದೆಯಷ್ಟೆ ನನ್ನಲ್ಲಿಯೂ ಅನೇಕ ವಸ್ತುವಿಷಯಗಳು ತಲ್ಲಣಗಳನ್ನು ತಂದು ಮಾತನ್ನು ಮನಸ್ಸನ್ನು ಯುದ್ಧಕ್ಕೆ ನಿಲ್ಲಿಸಿರುವಂತಹ ಕವಿ ಸುರೇಶ ಎಲ್.ರಾಜಮಾನೆಯವರ ‘ಮೌನಯುದ್ಧ’ ಕವನ ಸಂಕಲನ ಕೈಗೆ ಸಿಕ್ಕಿತು. ಕಳೆದ 21ನೇ ಅಕ್ಟೋಬರರಂದು ಲೋಕಾರ್ಪಣೆಯಾದ ಈ ಕೃತಿ ಸುರೇಶನವರ ಎರಡನೇ ಹೆಗ್ಗುರುತು. ಅನುಭವ ಕಲ್ಪನೆ ಆಸೆಗಳ ಹೂರಣವನ್ನು ಸಿಹಿ ಹೊಳಿಗೆಯಾಗಿದರೂ ರುದ್ರ ಭಯಂಕರ ಭಾವನೆಗಳು ಇದ್ದರೂ ಶೀರ್ಷಿಕೆಯೇ ಅನೇಕ ಒಳಾರ್ಥ ಜಾಲವಾಗಿ ಹರಡಿದೆ. ಈ ಜಾಲವನ್ನು ಜಾಲಾಡಿಸಿದಾಗ ಕವಿ ಮನಸ್ಸಿನ ಆಶಯ ಪ್ರೇಮದ ನದಿಯಲ್ಲಿ, ತನ್ನತನದ ನಿಲುವಿನಲ್ಲಿ ತಾನು ಅನುಭವಿಸಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುರುಗಳನ್ನು ಗೌರವಿಸಿ ಗೌರವ ಹೆಚ್ಚಿಸಿಕೊಂಡವರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸೆಪ್ಟಂಬರ್ 5 ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅದನ್ನೇ ಭಾರತದಲ್ಲಿ ಶಿಕ್ಷಕರ ದಿನ ಎಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಕ್ಟೋಬರ್ 5 ನ್ನು ವಿಶ್ವ ಶಿಕ್ಷಕರ ದಿನ ಎಂದು ಆಚರಿಸುವರು. ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಸಮಾಜ ಆಚರಿಸಬೇಕು. ಸಮಾಜದಲ್ಲಿನ ಸಂಘ – ಸಂಸ್ಥೆಗಳು ಆಚರಿಸಿದರೆ ಶಿಕ್ಷಕರಿಗೆ ಗೌರವ. ಅಷ್ಟೇ ಅಲ್ಲ ಆ ಸಂಘ ಸಂಸ್ಥೆಗಳಿಗೂ ಗೌರವ ! ಸಮಾಜ ಶಿಕ್ಷಕರ ದಿನವನ್ನು ಆಚರಿಸದಿರುವುದರಿಂದ ಶಿಕ್ಷಕರೇ ಅವರ ದಿನವನ್ನು ಅವರೇ ಆಚರಿಸಿಕೊಳ್ಳುವಂತಾಗಿರುವುದು ಅವರೇ ಅವರ ಬೆನ್ನನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ.

ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಡಾ. ಮೋಗಳ್ಳಿ ಗಣೇಶ ಅವರ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಫೆ10 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ನಾಗಶಾಂತಿ ಉನ್ನತಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ರಾಣೇಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಹಾಗೂ ಲಡಾಯಿ ಪ್ರಕಾಶನ ಜಂಟಿಯಾಗಿ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಂಡಿದೆ. ಖ್ಯಾತ ವಿಮರ್ಶಕರು ಹಾಗೂ ಬೆಂಗಳೂರು ವಿವಿಯ ಪ್ರಾಧ್ಯಾಪಕ ಜೀವನಪ್ರೇಮ, ಕೊಂಕು ಯಾವುದನ್ನೂ ಬಚ್ಚಿಡದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾಣಸುದ್ದಿ 16: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತೆರೆದಿದೆ ಮನೆಯೋ…: ಅಶ್ಫಾಕ್ ಪೀರಜಾದೆ

ಬದುಕಿನ ಮುಸ್ಸಂಜೆಯಲ್ಲಿ ಕುಳಿತು ನನ್ನ ಜೀವನದ ಮರಳು ಗಾಡಿನಲ್ಲಿ ನನಗಾಗಿ ನನ್ನತ್ತ ನಡೆದು ಬಂದವರ ಹೆಜ್ಜೆಗಳ ಗುರುತು ಹುಡುಕಲು ಪ್ರಯತ್ನಿಸುತ್ತೇನೆ. ಹೃದಯದಲ್ಲಿ ಎದ್ದ ಬಿರುಗಾಳಿಗೆ ಸರಿದು ಹೋದ ಮರಳಿನಲ್ಲಿ ಗುರುತು ಸಿಗದಂತೆ ಅವಶೇಷವಾಗಿ ಅಳಿದುಳಿದ ಗುರತುಗಳೇ!. ಒಂದೇ ಒಂದು ಸ್ಥಿರವಾದ ಹೆಜ್ಜೆ ಅಲ್ಲಿ ಮೂಡಿದ್ದು ಗೋಚರಿಸುವುದೇ ಇಲ್ಲ. ನಾನು ನನ್ನ ಮನೆಯಲ್ಲಿ ಒಂಟಿಯಾಗಿ ಕುಳಿತು ಇವುಗಳನ್ನೆಲ್ಲ ಅವಲೋಕಿಸುತ್ತ ಮತ್ತೇ ನನ್ನತ್ತ ಯಾರಾದರೂ ಬರಬಹುದೇ ಎಂದು ಬರುವವರ ಹೆಜ್ಜೆ ಸಪ್ಪಳ ಆಲಿಸಲು ಮೈಯಲ್ಲ ಕಿವಿಯಾಗಿಸುತ್ತೇನೆ. ಗಾಳಿಗೆ ಹಾರಿ ಹೋದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಣ್ಣದ ನೆರಳು ……: ಸತೀಶ್ ಶೆಟ್ಟಿ, ವಕ್ವಾಡಿ.

ಮುಂಗಾರಿಗೆ ಯಾಕಿಷ್ಟು ಅವಸರವೋ ಗೊತ್ತಿಲ್ಲ. ಊರಲ್ಲಿ ಯಕ್ಷಗಾನ ಮೇಳಗಳು ತಮ್ಮ ತಿರುಗಾಟಕ್ಕೆ ಮಂಗಳ ಹಾಡುವ ಮುನ್ನವೇ ಮಳೆ ತನ್ನ ಒಡ್ಡೋಲಗ ಆರಂಭಿಸಿಬಿಟ್ಟಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರಾವಳಿಗೆ ಕಾಲಿಡುತ್ತಿದ್ದ ಮುಂಗಾರು ಈ ಬಾರಿ ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಮೊದಲೇ ನೆಲೆಯೂರವ ಲಕ್ಷಣ ಹೆಚ್ಚಾದಂತಿದೆ. ನಿನ್ನೆ ರಾತ್ರಿಯಿಂದ ಧೋ ಅಂತ ಬ್ರೇಕ್ ಇಲ್ಲದೆ ಸುರಿಯುತ್ತಿದ್ದ ಮಳೆ ಊರಲ್ಲಿ ನೆರೆಯನ್ನೇ ಸೃಷ್ಟಿಸಿತ್ತು. ಕಡಲ ಶಬ್ದ ಮತ್ತು ಕಪ್ಪುಗಟ್ಟಿದ ಆಕಾಶ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿತ್ತು. “ಥತ್, ಎಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಂದರ ಊರಿನಲ್ಲೀಗ …: ಸ್ಮಿತಾ ಅಮೃತರಾಜ್. ಸಂಪಾಜೆ

ನಿಮ್ಮ ಊರು ಅದೆಷ್ಟು ಚೆಂದ; ನೀವೆಲ್ಲಾ ಪುಣ್ಯವಂತರು ಕಣ್ರೀ, ಸ್ವರ್ಗ ಅಂದರೆ ಇದೇ ನೋಡಿ. ಅಲ್ಲಿಯ ಬೆಟ್ಟ,ಗುಡ್ಡ,ನದಿ ,ಧುಮ್ಮುಕ್ಕಿ ಹರಿಯುವ ಜಲಧಾರೆ, ತುಂತುರು ಜುಮುರು ಮಳೆ..ನೆಮ್ಮದಿಯಿಂದ ಬದುಕೋದಿಕ್ಕೆ ಇನ್ನೇನು ಬೇಕು ಹೇಳಿ?. ನಾವೂ ನಿಮ್ಮೂರಿನಲ್ಲೇ ಬಂದು ಠಿಕಾಣಿ ಹೂಡ್ತೀವಿ, ಕೆಲಸಕ್ಕೆ ಜನ ಇಲ್ಲ ಅಂತೀರಿ ನಾವೇ ಬಂದು ಬಿಡ್ತೀವಿ, ನಮಗೆ ನಿಮ್ಮ ತೋಟಗಳಲ್ಲಿ ಕೆಲಸ ಕೊಟ್ರೆ ಅಷ್ಟೇ ಸಾಕು . ಈ ಬಯಲು ಸೀಮೆಯ ಒಣ ಹವೆ, ರಾಚುವ ಬಿಸಿಲು, ಇವೆಲ್ಲಾ ಅನುಭವಿಸಿ ಸಾಕಾಗಿ ಹೋಗಿದೆ ಅಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮ ದಸರಾ Exhibition ಸವಾರಿ: ವಿಭಾ ಶ್ರೀನಿವಾಸ್

“Exhimition…Exhimition…” ಪದವನ್ನು ಸರಿಯಾಗಿ ಉಚ್ಚರಿಸಲೂ ಬಾರದ ಆ ದಿನಗಳಲ್ಲಿ ವರ್ಷಕ್ಕೊಮ್ಮೆ ಎದುರಾಗುತಿದ್ದ ಸ೦ತಸವೇ ಮೈಸೂರು ದಸರಾ Exhibition (ದಸರಾ ವಸ್ತುಪ್ರದರ್ಶನ). ಎಲ್ಲಾ ವರ್ಗದ, ಎಲ್ಲಾ ಭಾಷೆಗಳನ್ನು ಮಾತನಾಡುವ ಜನ ಕಾಣಸಿಗುತಿದ್ದ mini world !! ಪ್ರವೇಶ ಟಿಕೆಟ್ ನ ದರ ರೂ5 ಇದ್ದ ಕಾಲ. ನಾ ಮುಂದು ತಾ ಮುಂದು ಎ೦ದು ಟಿಕೆಟ್ ಪಡೆದು, ಮುಖ್ಯದ್ವಾರದ ಕನ್ನಡಿಯಲ್ಲಿ ಮುಖವನ್ನೊಮ್ಮೆ ನೋಡಿ ಹಲ್ಲುಕಿರಿದ ನ೦ತರವೇ ಪ್ರವೆಶಿಸಿದೆವೆ೦ಬ ಖುಷಿ. ಮು೦ದಿನ ೨-೩ ಗಂಟೆಗಳ ಕಾಲ ಅಣ್ಣ/ಚಿಕ್ಕಪ್ಪನ ಮಗಳ ಕೈ ಹಿಡಿದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಯಕಲ್ಪವಾಗಿ ಪ್ರವಾಸೋದ್ಯಮ: ಎಂ.ಎಚ್.ಮೊಕಾಶಿ

“ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಗಾದೆ ಮಾತಿದೆ. ಇದು ತನು ಮನದ ಜ್ಞಾನಕ್ಕಾಗಿ ನಮ್ಮ ಹಿರಿಯರು ಹೇಳಿದ ಮಾತಾಗಿದೆ. ಅನುಭವ, ತನ್ಮೂಲಕ ಅನುಭಾವಕ್ಕೆ ಬಾರದ ಜ್ಞಾನವನ್ನು ಪುಸ್ತಕದ ಬದನೇಕಾಯಿ ಎಂದು ಹೇಳುವುದೂ ಇದೆ. ಒಂದೇ ಒಂದು ಸುತ್ತಾಟ ಪುಸ್ತಕ ನೀಡುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ನೀಡುವುದೆಂಬುದು ಅನುಭವದ ಮಾತಾಗಿದೆ. “ವಿಶ್ವ ಒಂದು ಪುಸ್ತಕವಿದ್ದಂತೆ, ಸುತ್ತಾಡಲಾರದವ ಯಾವ ಜ್ಞಾನವನ್ನೂ ಗಳಿಸಲಾರ” ಎಂದು ಸೇಂಟ್ ಆಗಸ್ಟಿನ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯು 1980 ರಿಂದಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಸಹಾಯಕತೆ: ನಾವೆ

ಅದೊಂದು ದಿನ ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ಪ್ರಖರ ಕಿರಣಗಳಿಂದ ಸುಡುತ್ತಿದ್ದ. ಗ್ರಾಮೀಣ ಪ್ರದೇಶವಾದ್ದರಿಂದ ಅದಾಗಲೇ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಹೊರಬಾಗಿಲುಗಳೆಲ್ಲ ಮುಚ್ಚಲ್ಪಟ್ಟಿದ್ದವು. ಅಂಗಡಿ ಮಾಲಿಕರು, ಕಾರ್ಮಿಕರೆಲ್ಲ ಹಸಿವೆಂಬ ರಕ್ಕಸನ ಅಬ್ಬರ ತಣಿಸಲು ಅವರವರ ಮನೆಯತ್ತ ಪಯಣಿಸಿಯಾಗಿತ್ತು. ಹಾಗಾಗಿ ಆ ಸಮಯದಲ್ಲಿ ಮನೆಗೆ ಹೋಗದೇ ಊಟ ಹೊತ್ತು ತರುವ ನನ್ನ ಅಂಗಡಿಯೊಂದೇ ತೆರೆದಿತ್ತು.ಊಟದ ಸಮಯದಲ್ಲಿಯೂ ಅಂಗಡಿಯು ತೆರೆದೇ ಇರುತ್ತಾದ್ದರಿಂದ ಅದರ ಗೋಜಿಗೆ ಹೋಗದೆ ನಾನೂ ಕೂಡ ಊಟದ ತಯಾರಿ ನಡೆಸುತ್ತಿದ್ದೆ. ಹಸಿವೆಂಬ ಬ್ರಹ್ಮರಾಕ್ಷಸನ ತೃಪ್ತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಕ್ತಿಸ್ವರೂಪಿಣಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಸನ್ನಿದಿ: ಶ್ರೀ ಜಗದೀಶ ಸಂ.ಗೊರೋಬಾಳ

ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಗ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನಮಗೆ ನೆನಪಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಹಿಂದೂ ದೇವಳಗಳಲ್ಲಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವು ಬಹಳ ವಿಶಿಷ್ಟವಾದುದು. ಸರ್ವಮುನಿಜನ ಪೂಜಿತೆ, ಸಂಕಷ್ಟ ಕಳೆಯುವ ಅಂಬಿಕೆ ಶಕ್ತಿಸ್ವರೂಪಿಣಿ ಸನ್ನದಿಗೆ ರಾಜ್ಯ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಶ್ರೀಕ್ಷೇತ್ರ ಮಂದಾರ್ತಿಗೆ ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ. ನಮ್ಮ ಕರ್ನಾಟಕದ ರಮ್ಯಮನೋಹರ ತಾಣ ಮಂದಾರ್ತಿಯ ಕಿರು ಪರಿಚಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಯತ್ತಿಗೆ ಮತ್ತೊಂದು ಹೆಸರೇ ಹನುಮಂತಣ್ಣ: ಜೆಪಿ.ಅಡೂರ್

ಎಪ್ಪ ಏನೋ ಇದು ಅಷ್ಟೊಂದು ದೊಡ್ದುದು ಗುಡ್ಡ ಇದ್ದಂಗೆ ಇದೆಯಲ್ಲೋ ಮಾರಾಯ ಅಂದ ನಮ್ಮ ಹನುಮಂತಣ್ಣ ಜೆರೋಸಿಕ್ ಪಾರ್ಕ್ ಸಿನಿಮಾನ ಟಿವಿ ನಲ್ಲಿ ನೋಡುತ. ಹೇ ಹನುಮಂತಣ್ಣ ಅಂತವು ಎರಡು ತರೋನು ನಾವು ಹೊಲ ಹಸನು ಮಾಡೋಕೆ ಬರುತ್ತೆ ಅಂದೆ ಅದಕೆ ಥಟ್ಟಂತ ಉತ್ತರ ಬಂತು ಹನುಮಂತಣ್ಣನಿಂದ “ಬೇಡ ಚಿಕ್ಕ ಧಣಿಯಾರೇ ನಮಗೆ ತಿನ್ನಾಕೆ ಏನು ಸಿಗ್ತಿಲ್ಲಾ ಈ ಮಳೆ ನಂಬಕಂಡು ಇರೋ ಎರಡು ಎತ್ತು ಸಾಕೋದಕ್ಕೆ ಅವರ ಕಾಲು ಇವರ ಕಾಲು ಹಿಡಿದು ಮೇವತಗೊಂಡು ಬರ್ತಾಇದಿವಿ” … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಹಿಳಾ ಸಬಲೀಕರಣದತ್ತ…!: ನಸ್ರೀನ್. ಮೈ. ಕಾಖಂಡಕಿ

ದೇಶದ ಅಭಿವೃದ್ಧಿ ಸಾಧನೆಯಲ್ಲಿ ಮಹಿಳಾ ಸಶಕ್ತೀಕರಣದಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ. ಮಹಿಳೆಯರ ಸಾಮಥ್ರ್ಯವನ್ನು ಇದಕ್ಕಿಂತ ಸರಿಯಾಗಿ ಬಣ್ಣಿಸುವ ಹೇಳಿಕೆ ಬೇರೊಂದಿಲ್ಲ ಎನ್ನಬಹುದು. ಇದು ಸಾಂಪ್ರದಾಯಿಕ ಕ್ಷೇತ್ರವಾಗಿರಲಿ ಅಥವಾ ಆಧುನಿಕ ರಂಗವಿರಲಿ, ಮಹಿಳೆ ತನ್ನ ಛಾಪು ಮೂಡಿಸದ ಕ್ಷೇತ್ರವೇ ಇಲ್ಲ. ಮಕ್ಕಳನ್ನು ಹೆತ್ತು, ಹೊತ್ತು ಭವಿಷ್ಯದ ಭವ್ಯ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಪ್ರಾಥಮಿಕ ಜವಾಬ್ದಾರಿ ಯಾವಾಗಲೂ ಅಮ್ಮನದೇ ಆಗಿದೆ. ನಾರಿ, ಮಗಳು, ಅಕ್ಕ, ತಂಗಿ, ಹೆಂಡತಿಯಾಗಿಯೂ ಪುರುಷರ ಬೆನ್ನೆಲುಬಾಗಿದ್ದಾಳೆ. ಆಧುನಿಕ ರಂಗದಲ್ಲಿ ಪ್ರಶಿಕ್ಷಕರಾಗಿ, ಪ್ರಬಂಧಕರಾಗಿ, ರಾಜಕೀಯ ಧುರೀಣೆಯಾಗಿ ಪ್ರಮುಖ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಲಾಗದ ಬಂಧುಗಳು: ವೆಂಕಟೇಶ ಚಾಗಿ

ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಭಯ. ಆದರೂ ದೈರ್ಯ ತಂದುಕೊಂಡು ಕೈಯಲ್ಲಿ ಟಾರ್ಚ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿಧಾನವಾಗಿ ಬಾಗಿಲನ್ನು ತರೆದು ಹೊರ ಬಂದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ಧೈರ್ಯ ತಂದುಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಕೊನೆಯ ದಿನದೊಳಗೊಂದು’ ಕಥೆ: ಮೊಗೇರಿ ಶೇಖರ ದೇವಾಡಿಗ

ಫಲಿತಾಂಶದ ಪಟ್ಟುಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಸಹಜವಾಗಿ ಸಂತೃಪಿಯ ನಗು ತೇಲಿತು. ನೋಟಿಸ್ ಬೋರ್ಡ್‍ಗೆ ಹಚ್ಚಿದ ಮೇಲಂತೂ ಮನಸ್ಸು ತುಸು ಹಗುರಾಯಿತು. 8ನೇ ತರಗತಿಯ ಮಕ್ಕಳು ಕೆಲದಿನಗಳಿಂದ ‘ಕಥೆ ಹೇಳಿ ಸಾರ್…’ ಎಂದು ಪೀಡಿಸುತ್ತಿದ್ದದ್ದು ನೆನಪಾಗಿ ‘ಕೊನೆಯ ದಿನದೊಳಗೊಂದು’ ಕಥೆ ಹೇಳಬೇಕೆಂದು ಮನ ಮಾಡಿ ಅತ್ತ ಕಾಲಿಟ್ಟಿದ್ದೆ. ತರಗತಿಯ ಲೀಡರ್ ಅಭಿಷೇಕ್ ‘ಅರುಣ್ ಸರ್ ಬಂದ್ರ… ಇವತ್ತು ಕಥೆ ಗ್ಯಾರಂಟಿ…’ ಎಂದ ತುಸು ಜೋರಾಗಿಯೇ ತರಗತಿ ಕ್ಷಣಾರ್ಧದಲ್ಲಿ ಮೌನವಾಗಿ ನನ್ನ ಕಥೆಗೊಂದು ವೇದಿಕೆ ನಿರ್ಮಿಸಿಕೊಟ್ಟಿತ್ತು. “ಮಕ್ಕಳೇ, ಇದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸತ್ಯಮೇವಜಯತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಜೀವನದಲ್ಲಿ ಸತ್ಯ ಬಹು ಅಮೂಲ್ಯವಾದುದು. ಸತ್ಯದ ನಡೆ – ನುಡಿ ಕಠಿಣವಾದರೂ, ಮೌಲ್ಯಯುತವಾದುದು. ಬದುಕನ್ನು ಪಾರದರ್ಶಕಗೊಳಿಸಿ ಸತ್ಯವಂತರನ್ನು ಪ್ರಾಕಾಶಿಸುವಂತೆ ಮಾಡುತ್ತದೆ. ಸತ್ಯಕ್ಕೆ ಪ್ರತ್ಯೇಕ ಅಸ್ಥಿತ್ವವಿಲ್ಲ. ಅದು ಅದನ್ನು ಉಳಿಸಿಕೊಳ್ಳಲು ಹೋರಾಡುವುದಿಲ್ಲ. ಅದು ಮಾನವರ ನಡವಳಿಯನ್ನು ಅವಲಂಭಿಸಿರುತ್ತದೆ. ಮಾನವರು ಸತ್ಯದ ಪರ ನಿಂತಂತೆ ಅವರ ವ್ಯಕ್ತಿತ್ವ ಉನ್ನತಿಗೇರುತ್ತಾ ಹೋಗಿ ಅವರದು ಪರಿಶುದ್ದ ಆತ್ಮ ಆಗುತ್ತಾ ಹೋಗುತ್ತದೆ. ಆದ್ದರಿಂದ ‘ ಸತ್ಯ’ ಜೀವಕ್ಕಿಂತ ಅಮೂಲ್ಯ ಎಂದು ಭಾವಿಸಿ ಅಮರರಾದವರು ನಮ್ಮ ಸುತ್ತ ಇದ್ದಾರೆ! ಸತ್ಯವನ್ನು ಬಹುಕಾಲ ಮುಚ್ಚಿಡಲಾಗದು. ಮುಚ್ಚಿಟ್ಟಷ್ಟೂ ಬಡಬಾಗ್ನಿಯಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ